text
stringlengths
0
61.5k
ಸ್ವಾತಂತ್ರ್ಯಾ ನಂತರದಲ್ಲಿ ದೇಶದ ಜನಸಾಮಾನ್ಯರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳಲ್ಲಿ ಗಮನಾರ್ಹ ಸುಧಾರಣೆಗಳಾಗಿವೆ. ವೈಜ್ಞಾನಿಕ ಸಂಶೋಧನೆ ಮತ್ತು ಜಾಗತಿಕ ಚಹರೆಯಲ್ಲಿ ಹಲವಾರು ಮೈಲಿಗಲ್ಲುಗಳನ್ನು ನೆಟ್ಟಿದ್ದನ್ನು ಮರೆಯಲಾಗದು. ಆದರೆ, ಇಡೀ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಸ್ವಾರ್ಥ, ಭ್ರಷ್ಟಾಚಾರ, ಅಧಿಕಾರ ದಾಹ, ಜಾತಿ-ಧರ್ಮ ಮೋಹಗಳ ಪಿಡುಗಿನಿಂದ ಅವನತಿಯಂಚಿಗೆ ಸರಿಯುತ್ತಿದ್ದೇವೆಂದೇ ಅರ್ಥ. ಅನೈತಿಕ ಮಾರ್ಗದಲ್ಲಿ ಚುನಾವಣೆಯನ್ನು ಗೆಲ್ಲುವವರು ಮುಂದೆ ಸಂಭಾವಿತರಾಗಿರಬೇಕೆಂದು ಜನರು ನಿರೀಕ್ಷಿಸುವುದಾದರೂ ಹೇಗೆ? ಅದು ಬೇವು ನೆಟ್ಟು ಮಾವು ಬಯಸಿದಂತಾಗುತ್ತದೆ ಅಷ್ಟೆ.
'ಇತ್ತೀಚೆಗಂತೂ ಇಲ್ಲಿ ಎಲ್ಲಾ ಹಂತದ ಜನಪ್ರತಿನಿಧಿಗಳೂ ಬಿಕರಿಗೆ ಸಿಗುತ್ತಾರೆ...' ಎಂಬಂತಹ ಕಳವಳಕಾರಿ ಸನ್ನಿವೇಶ ಸೃಷ್ಟಿಯಾಗುತ್ತಿದೆ! ಎಲ್ಲವೂ ಮಾರಾಟದ ಸರಕಾದ ಮೇಲೆ ಪ್ರಜಾಪ್ರಭುತ್ವದ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ, ಒಕ್ಕೂಟ ವ್ಯವಸ್ಥೆಗಳನ್ನೆಲ್ಲಾ ಹುಡುಕುವುದೆಲ್ಲಿ?
ಜಗತ್ತಿನ ಚರಿತ್ರೆಯಲ್ಲಿ ಬಹುತೇಕ ಚಳವಳಿಯ, ಹೋರಾಟದ, ಕ್ರಾಂತಿಯ ಶಕ್ತಿಯಾಗಿ ಒಳನುಸುಳಿದವರು ಅಲ್ಲಿಯ ಯುವಜನರು. ಆದರಿಲ್ಲಿ ಯುವಕರು ತೋರುತ್ತಿರುವ ಜಾಣ ಕುರುಡು, ಕಿವುಡುಗಳಾಚೆಯ ಅರೆಪ್ರಜ್ಞಾಹೀನ ಮನಃಸ್ಥಿತಿಯು ದೇಶದ ಪ್ರಜಾಪ್ರಭುತ್ವಕ್ಕಿರುವ ಕೊರತೆ ಮತ್ತು ಅಪಾಯವೂ ಹೌದು.
ತಂತ್ರಜ್ಞಾನ ಯುಗದಲ್ಲೂ ಹಸಿವು, ಬಡತನ, ಅಸ್ಪೃಶ್ಯತೆ, ನಿರುದ್ಯೋಗ, ಕೃಷಿಯ ಅನಿಶ್ಚಿತತೆಯಿಂದ ದೇಶವಿನ್ನೂ ಹೊರಬಂದಿಲ್ಲ. ಯುವಜನರ ನಿರೀಕ್ಷೆಗೆ, ಬೇಡಿಕೆಗೆ ಪೂರಕವಾಗಿ ಸಂಪನ್ಮೂಲ ಮತ್ತು ಉದ್ಯೋಗ ಸೃಷ್ಟಿಸಬೇಕಾದ ಸವಾಲು ನಮ್ಮ ಮುಂದಿದೆ. ಜೊತೆಗೆ ನಮ್ಮದು ಜಗತ್ತಿನಲ್ಲೇ ವೇಗವಾಗಿ ಪ್ರಗತಿ ಹೊಂದುತ್ತಿರುವ ದೇಶವೆಂದು ಸಂಭ್ರಮಿಸುವ ಹೊತ್ತಿನಲ್ಲಿ ಆರ್ಥಿಕ ಸ್ಥಿತಿ, ಉದ್ಯೋಗ ಸೃಷ್ಟಿ, ಆಹಾರಭದ್ರತೆ, ಬಡತನ ನಿರ್ಮೂಲನೆ ಮತ್ತು ಪರಿಸರ ಸಂರಕ್ಷಣೆಯ ವಿಷಯಗಳಲ್ಲಿ ಅಭದ್ರತೆಯತ್ತ ಸಾಗುತ್ತಿರುವ ಬಗ್ಗೆ ವಿಶ್ವ ಸಂಘಟನೆಗಳು ನೀಡಿದ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.
'ಪ್ರಜಾಪ್ರಭುತ್ವವೇ ಅತ್ಯಂತ ಶ್ರೇಷ್ಠ ಮಾದರಿಯ ವ್ಯವಸ್ಥೆ ಎಂದೇನಿಲ್ಲ. ಅಲ್ಲಿಯೂ ಇತಿಮಿತಿಗಳಿವೆ. ಆದರೆ ಇನ್ನುಳಿದವು ಅದಕ್ಕಿಂತಲೂ ಕೆಟ್ಟ ಮಾದರಿಯವು!' ಎಂಬ ಚರ್ಚಿಲ್‍ರ ಮಾತಿನ ಮರ್ಮವನ್ನು ಸೂಕ್ಷ್ಮವಾಗಿ ಗ್ರಹಿಸಬೇಕಿದೆ. ಉತ್ತರದಾಯಿತ್ವದ ಆಳ್ವಿಕೆಯನ್ನು ಅಳವಡಿಸಿಕೊಂಡು, ಸಕಾರಾತ್ಮಕ ನಿಲುವುಗಳನ್ನು ಒಳಗೊಳ್ಳುತ್ತಾ ನಡೆದಲ್ಲಿ ಮಾತ್ರ ಪ್ರಜಾಪ್ರಭುತ್ವಕ್ಕೆ ಆಯುಷ್ಯವಿರುತ್ತದೆ.
ಸಂಪಾದಕೀಯ: 'ಕ್ಯಾಪಿಟಲ್‌' ಮೇಲೆ ಆಕ್ರಮಣ ಪ್ರಜಾಪ್ರಭುತ್ವಕ್ಕೆ ಬಿದ್ದ ಹೊಡೆತ
ಪ್ರಜಾಸತ್ತೆ ಉಳಿಸಿದ ಬಸವಣ್ಣ
ಕೇರಳ: ಗ್ರಾಮ ಪಂಚಾಯಿತಿ ಕಸ ಗುಡಿಸುತ್ತಿದ್ದ ಆನಂದವಲ್ಲಿ ಈಗ ಅಲ್ಲೇ ಅಧ್ಯಕ್ಷೆ!
ಸಂಪಾದಕೀಯ | ಪಶ್ಚಿಮ ಬಂಗಾಳ: ಬೀದಿ ಬಡಿದಾಟ ಪ್ರಜಾಪ್ರಭುತ್ವದ ಲಕ್ಷಣವೇ ಅಲ್ಲ
ಹಕ್ಕುಗಳ ರಕ್ಷಣೆಯಿಂದ ಪ್ರಜಾಪ್ರಭುತ್ವ ಭದ್ರ
ಸರ್ಕಾರಕ್ಕೆ ಪ್ರಜಾಪ್ರಭುತ್ವದಿಂದ ಮುಕ್ತಿ ಬೇಕಾಗಿದೆ: ರಾಹುಲ್‌ ಗಾಂಧಿ
'); $('#div-gpt-ad-795280-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-795280'); }); googletag.cmd.push(function() { googletag.display('gpt-text-700x20-ad2-795280'); }); },300); var x1 = $('#node-795280 .field-name-body .field-items div.field-item > p'); if(x1 != null && x1.length != 0) { $('#node-795280 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-795280').addClass('inartprocessed'); } else $('#in-article-795280').hide(); } else { _taboola.push({article:'auto', url:'https://www.prajavani.net/op-ed/opinion/limitations-in-democracy-development-and-democracy-795280.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-795280', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-795280'); }); googletag.cmd.push(function() { googletag.display('gpt-text-300x20-ad2-795280'); }); // Remove current Outbrain //$('#dk-art-outbrain-795280').remove(); //ad before trending $('#mob_rhs1_795280').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-795280 .field-name-body .field-items div.field-item > p'); if(x1 != null && x1.length != 0) { $('#node-795280 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-795280 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-795280'); }); } else { $('#in-article-mob-795280').hide(); $('#in-article-mob-3rd-795280').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-795280','#in-article-796750','#in-article-796444','#in-article-796160','#in-article-795874']; var twids = ['#twblock_795280','#twblock_796750','#twblock_796444','#twblock_796160','#twblock_795874']; var twdataids = ['#twdatablk_795280','#twdatablk_796750','#twdatablk_796444','#twdatablk_796160','#twdatablk_795874']; var obURLs = ['https://www.prajavani.net/op-ed/opinion/limitations-in-democracy-development-and-democracy-795280.html','https://www.prajavani.net/op-ed/opinion/belief-and-fraud-business-796750.html','https://www.prajavani.net/op-ed/opinion/elephant-human-being-and-mobile-796444.html','https://www.prajavani.net/op-ed/opinion/less-attention-over-noise-pollution-796160.html','https://www.prajavani.net/op-ed/opinion/festival-memory-in-school-colleges-795874.html']; var vuukleIds = ['#vuukle-comments-795280','#vuukle-comments-796750','#vuukle-comments-796444','#vuukle-comments-796160','#vuukle-comments-795874']; // var nids = [795280,796750,796444,796160,795874]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
ಇನ್ಫೋಸಿಸ್ ಫೌಂಡೇಶನ್ ಸುಧಾಮೂರ್ತಿ ರವರ ₹30 ಕೋಟಿ ಅನುದಾನದ ಕೊವಿಡ್ ಆಸ್ಪತ್ರೆ ಸಿದ್ದ! | Nodumaga - No1 Kannada Entertainment Portal
HomeCOVID19ಇನ್ಫೋಸಿಸ್ ಫೌಂಡೇಶನ್ ಸುಧಾಮೂರ್ತಿ ರವರ ₹30 ಕೋಟಿ ಅನುದಾನದ ಕೊವಿಡ್ ಆಸ್ಪತ್ರೆ ಸಿದ್ದ!
COVID19SANDALWOOD NEWSVIDEOS
ನ್ಯೂರೋ ಸರ್ಜರಿ ಓಟಿ, ಕಾರ್ಡಿಯೋ ಓಟಿ, ಸಿಟಿ ಸ್ಕ್ಯಾನ್ ಸೌಲಭ್ಯಗಳನ್ನು ಒಳಗೊಂಡಿರುವ ಕೊರೊನಾ ಆಸ್ಪತ್ರೆ ಬ್ರಾಡ್ ವೇ ರಸ್ತೆಯಲ್ಲಿರುವ ಬಿ ಬಿ ಎಂ ಪಿ ಹೊಸ ಕಟ್ಟಡದಲ್ಲಿ ನಿರ್ಮಾಣ ವಾಗಿದೆ.
ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿರುವ ಬಿಬಿಎಂಪಿಗೆ ಸೇರಿದ ಕಟ್ಟಡವನ್ನು ಸುಸಜ್ಜಿತ ಕೋವಿಡ್ ಆಸ್ಪತ್ರೆಯಾಗಿ ಸಜ್ಜುಗೊಳಿಸಲಾಗುತ್ತಿದೆ.
ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಸುಧಾಕರ್ ಅವರು, ಆಸ್ಪತ್ರೆಗೆ ಅಗತ್ಯವಿರುವ 30 ಕೋಟಿ ವೆಚ್ಚದ ಮೂಲಸೌಕರ್ಯವನ್ನು ಪ್ರತಿಷ್ಠಿತ ಇನ್ಫೋಸಿಸ್ ಫೌಂಡೇಷನ್ನಿನಿಂದ ಒದಗಿಸಲಾಗುತ್ತಿದ್ದು ಶೀಘ್ರದಲ್ಲೇ ಪೂರ್ಣ ಪ್ರಮಾಣದ ಕೋವಿಡ್ ಆಸ್ಪತ್ರೆಯಾಗಿ ರೂಪುಗೊಳ್ಳಲಿದೆ ಎಂದು ತಿಳಿಸಿದರು.
ಆಸ್ಪತ್ರೆ ಮುಂದಿನ ವಾರದಲ್ಲಿ ರೋಗಿಗಳ ಸೇವೆಗೆ ಲಭ್ಯವಾಗುವ ಸಾಧ್ಯತೆ ಇದೆ.
ಶ್ರೀಮತಿ ಸುಧಾಮೂರ್ತಿ ಅವರ ಇನ್ಫೋಸಿಸ್ ಫೌಂಡೇಷನ್ ನಿಂದ 30 ಕೋಟಿ ಅನುದಾನ ದೊರಕಿದ್ದು ಆ ಹಣದಲ್ಲಿ ಸುಸಜ್ಜಿತ ಕೊರೊನಾ ಆಸ್ಪತ್ರೆ ನಿರ್ಮಾಣವಾಗಿದೆ .
ಈ ಆಸ್ಪತ್ರೆ ಯಲ್ಲಿ ಹೈ ಫ್ಲೋ ಆಕ್ಸಿಜೆನ್ ಹೊಂದಿರುವ 180 ಹಾಸಿಗೆಗಳ ಸೌಕರ್ಯ, ಅಗತ್ಯವಿದ್ದಲ್ಲಿ 30 ವೆಂಟಿಲೇಟರ್ ಬೆಡ್ ಅಳವಡಿಸುವ ವ್ಯವಸ್ಥೆಗಳು ಇರುತ್ತದೆ.
ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಅವರು ಕರ್ನಾಟಕ ಸರ್ಕಾರವನ್ನು ಉದ್ದೇಶಿಸಿ ಬರೆದಿರುವ ಪತ್ರದಲ್ಲಿ ವೈರಸ್ ಹರಡುವುದನ್ನು ತಡೆಗಟ್ಟಲು ತೆಗೆದುಕೊಳ್ಳಬಹುದಾದ ತಡೆಗಟ್ಟುವ ಕ್ರಮಗಳ ಬಗ್ಗೆ ವಿವರಿಸಿದ್ದಾರೆ. ರಾಜ್ಯ ಸರ್ಕಾರ ರಚಿಸಿದ ಕರ್ನಾಟಕ ಪ್ರವಾಸೋದ್ಯಮ ಕಾರ್ಯಪಡೆಯ ನೇತೃತ್ವ ವಹಿಸಿರುವ ಸುಧಾ ಮೂರ್ತಿ ಅವರು, ಹವಾನಿಯಂತ್ರಿತ ಪ್ರದೇಶಗಳಲ್ಲಿ ಕರೋನವೈರಸ್ ಹೆಚ್ಚಾಗುವುದರಿಂದ ಮಾಲ್‌ಗಳು ಮತ್ತು ಚಿತ್ರಮಂದಿರಗಳನ್ನು ಮುಚ್ಚುವಂತೆ ಕರೆ ನೀಡಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ವರದಿಯ ಪ್ರಕಾರ "ಸಾಂಕ್ರಾಮಿಕ ರೋಗಗಳು" ಬಂದರೆ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ 500-700 ಹಾಸಿಗೆಗಳನ್ನು ಹೊಂದಿರುವ ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕ ರೇಖೆಗಳು ಮತ್ತು ಕೊಳವೆಗಳನ್ನು ಸಿದ್ಧಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಶರಣಪ್ಪ ಕಂಚ್ಯಾಣಿ - ವಿಕಿಪೀಡಿಯ
ವಿಜಯಪುರ ಜಿಲ್ಲೆಯು ಮಕ್ಕಳ ಸಾಹಿತ್ಯದ ತೊಟ್ಟಿಲು. ಸಿಸು ಸಂಗಮೇಶ, ಶಂಗು ಬಿರಾದಾರ, ಈಶ್ವರ ಚಂದ್ರ ಚಿಂತಾಮಣಿ, ಹ.ಮ.ಪೂಜಾರ, ಜಂಬುನಾಥ ಕಂಚ್ಯಾಣಿ, ಹ.ಮ.ಅಂಬಿಗೇರ್, ಬಾ.ಇ.ಕುಮಟೆ ಮುಂತಾದ ಹಲವಾರು ಕವಿಗಳು ಮಕ್ಕಳ ಸಾಹಿತ್ಯದ ಬಗ್ಗೆ ಅಗಾಧವಾದ ಕೆಲಸವನ್ನು ಮಾಡಿದ್ದಾರೆ. ಹೀಗೆ ಸಾಹಿತ್ಯ ಕೃಷಿ ಮಾಡಿದವರಲ್ಲಿ ಪ್ರಮುಖರಲ್ಲೊಬ್ಬರಾದ ಹಿರಿಯ ಕವಿ ಶರಣಪ್ಪ ಕಂಚ್ಯಾಣಿಯವರು.
ಕಂಚ್ಯಾಣಿ ಶರಣಪ್ಪನವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಎಂಬಲ್ಲಿ. ತಂದೆ ಶಿವ ಸಂಗಪ್ಪ, ತಾಯಿ ರುದ್ರಮ್ಮ. ಹುಟ್ಟಿದ್ದು ಕಡುಬಡತನದ ಕುಟುಂಬದಲ್ಲಿ.
ನಾಲ್ಕಾರು ಊರು ಸುತ್ತಾಡಿ ಓದಿದ್ದು ಏಳನೇ ತರಗತಿಯವರೆಗೆ. ಇತರರ ಹಂಗಿಗೆ ಬೀಳದ ಸ್ವಾಭಿಮಾನಿ. ಶಾಲಾ ಶಿಕ್ಷಕರ ತರಬೇತು ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇರಿದ ನಂತರ ಎಂ.ಎ. ಪದವಿ ಪಡೆದ ಛಲಗಾರರು. ೩೯ ವರ್ಷಗಳ ದೀರ್ಘ ಕಾಲದ ಬೋಧನೆಯಲ್ಲಿ ನಿರತರಾಗಿದ್ದು ೧೯೮೮ ರಲ್ಲಿ ನಿವೃತ್ತಿ.
ಮಕ್ಕಳ ಮನೋಧರ್ಮವನ್ನರಿತು, ಅವರ ಮನೋವಿಕಾಸಕ್ಕೆ ತಕ್ಕಂತಹ ರಮ್ಯವಾದ ಪದಗಳನ್ನು ರಚಿಸಿ, ಹಾಡುತ್ತ, ಕುಣಿಯುತ್ತ, ಕಲಿಯುವಂತಾಗುವಂತಹ ಗೀತೆಗಳನ್ನು ರಚಿಸತೊಡಗಿದರು. ಹಳ್ಳಿಗಾಡಿನ ಮಕ್ಕಳಿಗೆ ಪಠ್ಯ ಪುಸ್ತಕಗಳ ವಿನ: ಬೇರೆ ರೀತಿಯ ಪುಸ್ತಕಗಳು ದೊರೆಯುತ್ತಿಲ್ಲವೆಂಬ ಅಂಶವನ್ನು ಮನಗಂಡು ತಾವು ಬರೆದ ಪದ್ಯಗಳನ್ನು ಪ್ರಕಟಿಸಲು ತಮ್ಮದೇ ಆದ 'ಗ್ರಾಮೀಣ ಪ್ರತಿಭಾ ಪ್ರಕಾಶನ' ದ ಮೂಲಕ ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು. ಇವರು ಪ್ರಕಟಿಸಿದ ಮೊದಲ ಮಕ್ಕಳ ಕವಿತಾ ಪುಸ್ತಕ 'ಅಜ್ಜನ ಹಾಡು'. ನಂತರ ಹಲವಾರು ಮಕ್ಕಳ ಕೃತಿಗಳನ್ನು ಹೊರತಂದರು.
ಜಾಗೃತ ಭಾರತ, ಮಕ್ಕಳ ಮನೆ, ಹುಟ್ಟು ಹಬ್ಬ, ತಮ್ಮನ ಶಾಲೆ, ತೋಟದ ಆಟ, ಚೆಲುವಿನ ಚಿಟ್ಟೆ, ಪುಟ್ಟಿಯ ತೋಟ, ಬೆದರು ಬೆಚ್ಚ ಮುಂತಾದವುಗಳ ಜೊತೆಗೆ 'ಗುಡು ಗುಡು ಗುಂಡ' ಎಂಬ ಶಿಶು ಪ್ರಾಸದ ಪುಸ್ತಕವನ್ನು ರಚಿಸಿದ್ದಾರೆ. ಗಿಲ್ ಗಿಲ್ ಗಿಡ್ಡ, ಅಪ್ಪನ ಕಥೆಗಳು, ಅಪ್ಪನ ಮತ್ತಷ್ಟು ಕಥೆಗಳು, ಚತುರ ಚಿಣ್ಣರು ಮುಂತಾದ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವಲ್ಲದೆ ಇವರ ಇತರ ಕೃತಿಗಳೆಂದರೆ ಕನ್ನಡ ಕಣ ಕೀರ್ತಿ (ಗದ್ಯ ಚರಿತ್ರೆ), ಬಸವ ಪ್ರದೀಪ (ಖಂಡ ಕಾವ್ಯ) ಮತ್ತು ಸಮಗ್ರ ಕವಿತೆಗಳ ಸಂಗ್ರಹ. ಆಯ್ದ ನೂರೊಂದು ಕವಿತೆಗಳು. ಕನ್ನಡ ಕವಿಕೀರ್ತಿ, ಬಸವ ಪ್ರದೀಪ, ಅಜ್ಜನ ಹಾಡು ಎಂಬ ಮಕ್ಕಳ ಕವಿತೆಗಳು, ಮಕ್ಕಳ ಮನೆ, ಹುಟ್ಟು ಹಬ್ಬ, ತಮ್ಮನ ಶಾಲೆ, ತೋಟದ ಆಟ, ಗುಡು ಗುಡು ಗುಂಡ, ಆಯ್ದ ನೂರೊಂದು ಕವಿತೆಗಳು, ಚಲುವಿನ ಚಿಟ್ಟೆ, ತೊಟ್ಟಿಲು ಗುಬ್ಬಿ, ರಾಜಯೋಗಿ ಬೀಳೂರ ಅಜ್ಜನವರು, ಗಿಲ್​ಗಿಲ್ ಗಿಡ್ಡ, ಪುಟ್ಟಿಯ ತೋಟ, ತಿಪ್ಪನ ಕಥೆಗಳು, ತಿಪ್ಪನ ಮತ್ತಷ್ಟು ಕಥೆಗಳು, ಬೆದರು ಬೆಚ್ಚ, ಚತುರ ಚಿಣ್ಣರು, ಹಾಡುವ ಹಕ್ಕಿ, ಬೆಕ್ಕಿನ ಕೊರಳಿಗೆ ಗಂಟೆ, ಅಜ್ಜನ ಅಂದದ ಕಥೆಗಳು ಮುಂತಾದ ಪುಸ್ತಕಗಳನ್ನು ರಚಿಸಿ ಪ್ರಕಟಿಸಿದ್ದಾರೆ.
ಮಕ್ಕಳ ಸಾಹಿತಿ ಕಂಚ್ಯಾಣಿಯವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳು ಹಲವಾರು. 'ಜಾಗೃತ ಭಾರತ' ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ (೧೯೮೮), 'ಅಜ್ಜನ ಹಾಡು' ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಳಂ ಪ್ರಶಸ್ತಿ, ಧಾರವಾಡದ ಮಕ್ಕಳ ಮನೆ ಮಕ್ಕಳ ಸಾಹಿತ್ಯ ಪ್ರಶಸ್ತಿ (೧೯೮೯), ರಾಷ್ಟ್ರೀಯ ಬಾಲ ಸಾಹಿತ್ಯ ಪುರಸ್ಕಾರ (೧೯೯೦-೯೧), 'ಗಿಲ್ ಗಿಲ್ ಗಿಡ್ಡ' ಪುಸ್ತಕಕ್ಕೆ ಅತ್ತಿಮಬ್ಬೆ ಪ್ರತಿಷ್ಠಾನದ ರನ್ನ ಸಾಹಿತ್ಯ ಪ್ರಶಸ್ತಿ ಮುಂತಾದವುಗಳಲ್ಲದೆ ಹುಬ್ಬಳ್ಳಿಯ ಮೂರು ಸಾವಿರ ಮಠ ಸಾಹಿತ್ಯ ಪುರಸ್ಕಾರ, ಭಾಲ್ಕಿ ಸಂಸ್ಥಾನ ಮಠದ ಮಕ್ಕಳ ಸಾಹಿತ್ಯ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಮಕ್ಕಳ ಸಾಹಿತ್ಯ ಪ್ರಶಸ್ತಿ, ಬೆಳಗಾವಿ ನಾಗನೂರ ರುದ್ರಾಕ್ಷಿ ಮಠದ ಹರ್ಡೇಕರ್‌ಮಂಜಪ್ಪ ಮಕ್ಕಳ ಸಾಹಿತ್ಯ ಪ್ರಶಸ್ತಿಗಳ ಜೊತೆಗೆ ಬಾಗಲಕೋಟೆಯಲ್ಲಿ ನಡೆದ ಬಿಜಾಪುರ ಜಿಲ್ಲಾ ೫ನೆಯ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಿಜಾಪುರ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದಾರೆ. ಕಂಚ್ಯಾಣಿ ಶರಣಪ್ಪ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2018ರ ಸಾಲಿನ ಬಾಲ ಸಾಹಿತ್ಯ ಪುರಸ್ಕಾರ ನೀಡಲಾಗಿದೆ.[೧]
↑ http://vijayavani.net/%E0%B2%92%E0%B2%A1%E0%B2%A8%E0%B2%BE%E0%B2%9F%E0%B2%A6%E0%B2%BF%E0%B2%82%E0%B2%A6%E0%B2%B2%E0%B3%87-%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF-%E0%B2%B8%E0%B2%BE%E0%B2%A7%E0%B2%A8/
ಪುಣ್ಯಾತ್ಗಿತ್ತೀರ ಹಾಡು ಬಂತು! - Cinibuzz
ಪುಣ್ಯಾತ್ಗಿತ್ತೀರ ಹಾಡು ಬಂತು!
By ARUN KUMAR G March 19, 2019
ಸತ್ಯನಾರಾಯಣ ಮನ್ನೆ ನಿರ್ಮಾಣದ ಪುಣ್ಯಾತ್ ಗಿತ್ತೀರು ಚಿತ್ರದ ಹಾಡುಗಳು ಹೊರ ಬಂದಿವೆ. ರಾಮಾನುಜಂ ಸಂಗೀತ ಸಂಯೋಜನೆ ಮಾಡಿರುವ ಈ ಹಾಡುಗಳೆಲ್ಲವೂ ಈಗಾಗಲೇ ಪುಣ್ಯಾತ್ಗಿತ್ತೀರು ಸೃಷ್ಟಿಸಿರೋ ಸಂಚಲನಕ್ಕೆ ಮತ್ತಷ್ಟು ರಂಗು ತುಂಬುವಂತೆ ಮೂಡಿ ಬಂದಿವೆ. ಕವಿರತ್ನ ವಿ ನಾಗೇಂದ್ರ ಪ್ರಸಾದ್ ಇದರ ಟೈಟಲ್ ಸಾಂಗ್ ಬರೆದಿದ್ದಾರೆ. ಹೆಣ್ಣಿನ ಮಹತ್ವ ಸಾರುವ ಹಾಡೊಂದನ್ನು ನಿರ್ದೇಶಕ ರಾಜು ಅವರೇ ಬರೆದಿದ್ದಾರೆ. ಕಾಶಿ ಮೋಹನ್, ಸ್ವರಾಜ್ ಮುಂತಾದವರೂ ಹಾಡುಗಳನ್ನ ಬರೆದಿದ್ದಾರೆ. ಈ ಎಲ್ಲ ಹಾಡುಗಳೂ ಸಿನಿಮಾ ಕಥೆಗೆ ಪೂರಕವಾಗಿ, ಹೊಸತನದೊಂದಿಗೆ ಪ್ರೇಕ್ಷಕರನ್ನು ಸೆಳೆದುಕೊಳ್ಳುವತ್ತ ಮುನ್ನುಗ್ಗುತ್ತಿವೆ.
ಈ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಭಿನ್ನವಾಗಿಯೇ ನಡೆಸಲು ನಿರ್ಮಾಪಕರು, ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದರು. ಈ ಚಿತ್ರದಲ್ಲಿ ನಾಲ್ವರು ನಾಯಕಿಯರೂ ಅನಾಥರೇ. ಆದ್ದರಿಂದ ಅನಾಥ ಹೆಣ್ಣುಮಗುವೊಂದರಿಂದ ಆಡಿಯೋ ಲಾಂಚ್ ನಡೆಸಲು ತೀರ್ಮಾನಿಸಲಾಗಿತ್ತು. ಅನಾಥಾಶ್ರಮದಲ್ಲಿ ಒಂದು ಹೆಣ್ಣುಮಗುವನ್ನು ದತ್ತು ಪಡೆದುಕೊಂಡು ಅದರ ಶಿಕ್ಷಣದ ಜವಾಬ್ದಾರಿಯನ್ನೂ ಚಿತ್ರತಂಡವೇ ಹೊತ್ತುಕೊಂಡಿತ್ತಂತೆ. ಆದರೆ ಆ ಮಗು ಅನಾರೋಗ್ಯಗೊಂಡಿದ್ದರಿಂದ ಎಣಿಕೆಯಂತೆ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ. ಆದ್ದರಿಂದ ನಾಲ್ವರು ನಾಯಕಿಯರೇ ಆಡಿಯೋ ಬಿಡುಗಡೆ ಮಾಡಿದ್ದಾರೆ.
ನಾಲ್ವರು ಬಿಂದಾಸ್ ಹುಡುಗೀರೇ ಮುಖ್ಯಭೂಮಿಕೆಯಲ್ಲಿರುವ 'ಪುಣ್ಯಾತ್ಗಿತ್ತೀರು ಚಿತ್ರದ ಟೀಸರ್ ಭಾರೀ ಫೇಮಸ್ ಆಗಿದೆ. ಸತ್ಯನಾರಾಯಣ ಮನ್ನೆ ನಿರ್ಮಾಣದ ಈ ಚಿತ್ರದ ಟೀಸರ್ ಬಿಡುಗಡೆಯಾಗಿ ದಿನಗೊಪ್ಪತ್ತಿನಲ್ಲಿಯೇ ಯೂಟ್ಯೂಬ್‌ನಲ್ಲಿ ಐವತ್ತು ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಪಡೆಯುವ ಮೂಲಕ ಟಾಕ್ ಕ್ರಿಯೇಟ್ ಮಾಡಿತ್ತು. ಇದೀಗ ಹಾಡುಗಳೂ ಕೂಡಾ ಅಂಥಾದ್ದೇ ಆವೆಗದಲ್ಲಿ ಮೂಡಿ ಬಂದಿವೆ.
ರಾಜ್ ಕತೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರೋ ಈ ಚಿತ್ರದಲ್ಲಿ ಮಮತಾ ರಾವುತ್, ವಿದ್ಯಾ ಮೂಡಿಗೆರೆ ಮತ್ತು ವಿದ್ಯಾಶ್ರೀ ಬೋಲ್ಡ್ ಹುಡುಗಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕುರಿ ರಂಗ ಮುಂತಾದವರು ಪುಣ್ಯಾತ್‌ಗಿತ್ತೀರಿಗೆ ಸಾಥ್ ನೀಡಿದ್ದಾರೆ. ಇನ್ನುಳಿದಂತೆ ಎ.ರಾಮಾನುಜಂ ಸಂಗೀತ, ಶರತ್ ಕುಮಾರ್ ಜಿ ಛಾಯಾಗ್ರಹಣ, ಶಿವಶಂಕರ್ ಸಂಕಲನ, ಸಂದೀಪ್ ಕನಕಪುರ ಸಂಭಾಷಣೆ, ತ್ರಿಭುವನ್ ನೃತ್ಯ ನಿರ್ದೇಶನವಿದೆ.
ಆಟೊಮೊಬೈಲ್ ಬಿಡಿಭಾಗಗಳ ಕೈಗಾರಿಕೆಗಳಲ್ಲಿ ಕೆಲಸ ಕಳೆದುಕೊಂಡ 1 ಲಕ್ಷ ಉದ್ಯೋಗಿಗಳು | Vartha Bharati- ವಾರ್ತಾ ಭಾರತಿ
ಆಟೊಮೊಬೈಲ್ ಬಿಡಿಭಾಗ ತಯಾರಕರ ಸಂಘದ ಮಾಹಿತಿ
ವಾರ್ತಾ ಭಾರತಿ Dec 07, 2019, 3:23 PM IST
ಹೊಸದಿಲ್ಲಿ: ಆಟೊಮೊಬೈಲ್ ರಂಗದಲ್ಲಿನ ನಿಧಾನಗತಿಯಿಂದಾಗಿ ಆಟೊಮೊಬೈಲ್ ಬಿಡಿಭಾಗಗಳ ಕೈಗಾರಿಕೆಗಳೂ ತೀವ್ರ ಬಾಧಿತವಾಗಿದ್ದು, ಈ ವರ್ಷದ ಜುಲೈ ತನಕ ಸುಮಾರು ಒಂದು ಲಕ್ಷ ತಾತ್ಕಾಲಿಕ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಂಡಿದ್ದಾರೆ.
ಈ ವರ್ಷದ ಎಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಆಟೊಮೊಬೈಲ್ ಬಿಡಿಭಾಗಗಳ ಕೈಗಾರಿಕೆಗಳ ವಹಿವಾಟು ಶೇ 1.79 ಲಕ್ಷ ಕೋಟಿ ರೂ.ಗೆ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ವಹಿವಾಟು 1.99 ಲಕ್ಷ ರೂ. ಕೋಟಿಯಷ್ಟಿದ್ದು ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಶೇ 10.1ರಷ್ಟು ವಹಿವಾಟಿನಲ್ಲಿ ಕುಸಿತ ಉಂಟಾಗಿದೆ ಎಂದು ಆಟೊಮೊಬೈಲ್ ಬಿಡಿಭಾಗ ತಯಾರಕರ ಸಂಘದ ಅಧ್ಯಕ್ಷ ದೀಪಕ್ ಜೈನ್ ಹೇಳಿದ್ದಾರೆ.
ಕಳೆದೊಂದು ವರ್ಷದ ಅವಧಿಯಲ್ಲಿ ಎಲ್ಲಾ ವಿಧದ ವಾಹನಗಳ ಮಾರಾಟ ಕುಸಿದಿದೆ ಎಂದೂ ಅವರು ತಿಳಿಸಿದ್ದಾರೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಿಂದ ಜುಲೈ ತನಕ ಉದ್ಯೋಗಿಗಳನ್ನು ಕೈಬಿಡುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಅವರು ಹೇಳಿದ್ದಾರೆ.
ಎಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಆಟೋಮೊಬೈಲ್ ಬಿಡಿಭಾಗಗಳ ರಫ್ತು ಪ್ರಮಾಣ ಶೇ 2.7ರಷ್ಟು ಏರಿಕೆಯಾಗಿ ರೂ 51,397 ಕೋಟಿ ತಲುಪಿದೆ, ಅದೇ ಸಮಯ ಆಮದು ಶೇ 6.7ರಷ್ಟು ಕುಸಿತಗೊಂಡು ರೂ. 57,574 ಕೋಟಿಯಷ್ಟಿತ್ತು ಎಂದು ಸಂಘದ ಮಹಾನಿರ್ದೇಶಕ ವಿನ್ನೀ ಮೆಹ್ತಾ ಮಾಹಿತಿ ನೀಡಿದ್ದಾರೆ.
ಎಲ್ಲಾ ಆಟೊಮೊಬೈಲ್ ಬಿಡಿಭಾಗಗಳಿಗೂ ಸಮಾನ ಶೇ. 18 ಜಿಎಸ್‍ಟಿ ವಿಧಿಸಬೇಕೆಂಬುದು ಸಂಘದ ಬೇಡಿಕೆಯಾಗಿದೆ,. ಸದ್ಯ ಶೇ. 60ರಷ್ಟು ಆಟೋ ಬಿಡಿಭಾಗಗಳಿಗೆ ಶೇ. 18ರಷ್ಟು ಜಿಎಸ್‍ಟಿ ಇದ್ದರೆ ಉಳಿದ ಶೇ. 40ರಷ್ಟು ಬಿಡಿ ಭಾಗಗಳಿಗೆ ಶೇ. 28ರಷ್ಟು ಜಿಎಸ್‍ಟಿ ವಿಧಿಸಲಾಗುತ್ತಿದೆ.
ಪಿ ಚಂದ್ರಿಕಾ ಅಂಕಣ – ಒಂದು ಸಲ ಮಗು ಅಳುವ ಸದ್ದು ಕೇಳಿ… | ಅವಧಿ । AVADHI
ಪಿ ಚಂದ್ರಿಕಾ ಅಂಕಣ – ಒಂದು ಸಲ ಮಗು ಅಳುವ ಸದ್ದು ಕೇಳಿ…
ಅಲೀಮಮ್ಮನಿಗೆ ಐವತ್ತೈದರ ಆಸುಪಾಸು ಅಥವಾ ಅರವತ್ತೇ ಇರಬಹುದೇನೋ? ಚಿಕ್ಕ ವಯಸ್ಸಿಗೇ ಮದುವೆಯಾಗಿದ್ದರಿಂದ ಜೀವನದ ಕಷ್ಟ ಸುಖಗಳನ್ನೆಲ್ಲಾ ಅನುಭವಿಸಿ ಜೀವ ಬೇಗ ಹಣ್ಣಾಗಿದ್ದರೂ ಇರಬಹುದು. ಆದರೆ ಆ ಕಳೆ ಮುಖದ ಮೇಲಿನ ಸುಕ್ಕಿನ ನಡುವೆಯೂ ಎದ್ದುಕಾಣುತ್ತಿತ್ತು. ಅಕ್ಕಪಕ್ಕದ ಯಾವ ತೆಂಗಿನ ಮರದಿಂದ ಗರಿ ಉದುರಿದರೂ ಮೊದಲು ಸದ್ದು ಕೇಳುತ್ತಿದ್ದುದು ಅಲೀಮಮ್ಮನಿಗೆ. ಶಾಂತವಾದ ಕಣ್ಣುಗಳು ಮತ್ತೆ ಅಷ್ಟೇ ಪ್ರಶಾಂತವಾದ ಮಾತುಗಳು. ಅವರ ಮನೆ ಮಾತ್ರವಲ್ಲ; ಆ ಕೇರಿಗಳಲ್ಲೇ ಜನ ಜೋರಾಗಿ ಮಾತಾಡಿದ್ದನ್ನು ನಾನು ಕೇಳಲಿಲ್ಲ.
ಮನೆಗಳನ್ನು ಹೊಕ್ಕು ಬಳಸುವಾಗ ಕೂಡಾ ಒಂದಿಬ್ಬರನ್ನು ಬಿಟ್ಟರೆ ಬೇರೆಯಾವ ಗಂಟಿಕ್ಕಿದ ಮುಖಗಳನ್ನು ನೋಡಲಿಲ್ಲ. ಜಗಳವೂ ಅಷ್ಟೇ ಸೌಮ್ಯವಾಗಿ ಆಡುತ್ತಾರೆ. ಬಯಲು ಸೀಮೆಯ ನಮ್ಮ ಜಗಳ ಆರಂಭವಾಗುವುದು ಏರು ಧ್ವನಿಯಿಂದ ಕೊನೆಯಾಗುವಾಗ ಯಾವ ರೌದ್ರಸ್ಥಿತಿ ತಲುಪುತ್ತದೋ ತಿಳಿಯದು. ನಮ್ಮ ಜೊತೆ ಸೌಮ್ಯವಾಗಿ ವರ್ತಿಸಲಿಕ್ಕೆ ಉಲ್ಲಾಳದ ದರ್ಗಾದಿಂದ 'ಅವರಿಗೆ ಸಹಕರಿಸಿ' ಎನ್ನುವ ಸಂದೇಶ ಬಂದಿದ್ದೂ ಕಾರಣವಿರಬಹುದು, ಮತ್ತು ಶೂಟಿಂಗ್ ಶುರುವಾದ ಮೂರನೆಯ ದಿನ ಶಾಸಕರಾದ ಯು. ಟಿ. ಖಾದರ್ ಬಂದು ಹೋಗಿದ್ದರಿಂದಲೂ ಇರಬಹುದು. ಅಥವಾ ಸ್ವತಃ ಜನರೇ ಹಾಗಿದ್ದಿರಲೂಬಹುದು.
ಅಲೀಮಮ್ಮನಿಗೆ ಆರೋ ಏಳು ಜನರೋ ಮಕ್ಕಳು-ಸರಿಯಾಗಿ ನೆನಪಿಲ್ಲ. ಮಗಳು ಬಾಣಂತನಕ್ಕೆ ಬಂದಿದ್ದರಿಂದ ಆಕೆಗೆ ತುಸು ಹೆಚ್ಚೇ ಕೆಲಸ ಇರುತ್ತಿತ್ತು. ಒಂದು ಸಲ ಮಗು ಅಳುವ ಸದ್ದು ಕೇಳಿ, ಎಲ್ಲಿ ಎಂದು ಹುಡುಕುವಾಗ, ಗುಂಡಗಿನ ಮಗುವನ್ನು ಪರದೆ ಸರಿಸಿ `ನೋಡಿ' ಎಂದು ತೋರಿಸಿದ್ದರು. ಬಿಳಿ ಬಿಳಿ ಮುದ್ದೆಯ ಹಾಗಿದ್ದ ಮಗುವಿನ ಕೆನ್ನೆಯನ್ನು ಕಿಟಕಿಯಿಂದಲೇ ಸವರಿದ್ದೆ. ಸಣ್ಣ ಕೊಠಡಿ, ಚಿಕ್ಕ ವಯಸ್ಸಿನ ಬಾಣಂತಿ ಮಂಚದ ಮೇಲೆ ಕುಳಿತಿದ್ದಳು. ನಮ್ಮ ಕಡೆಯ ಹಾಗೆ ಬಾಣಂತಿ ಬೆಚ್ಚಗಿನ ಬಟ್ಟೆ ಹಾಕುವಂತೆಯೂ ಇರಲಿಲ್ಲ. ಬಿಸಿಲಿನ ಜಳಕ್ಕೆ ಇರುವ ಬಟ್ಟೆಯೇ ಭಾರವಾಗುವಾಗ ಬಾಣಂತಿಯಾದರೇನು? ಬಸುರಿಯಾದರೇನು?
ಅಕ್ಕಪಕ್ಕದ ಮನೆಗಳಲ್ಲಿ ಎಲ್ಲರ ಮನೆಗಳಲ್ಲೂ ಒಂದು ಕೂಸು ಇದ್ದೇ ಇರುತ್ತಿತ್ತು. ಹೀಗಿದ್ದೂ ನಮ್ಮ ಪಾತ್ರಧಾರಿ ಪಾತುಮ್ಮನ ಮಗಳು ಸಲ್ಮಾ ಹೆರಿಗೆಯಾದಾಗ ಒಂದು ಮಗು ಬೇಕಿತ್ತು. ಹಸೀನಮ್ಮ ಮಗುವನ್ನು ಜೋಲಿಯಲ್ಲಿ ಹಾಕಿ ತೂಗುತ್ತಿದ್ದಳು ಅದನ್ನು ನೋಡಿ `ಹೀಗೆ… ಒಂದು ಮಗು ಪಾತುಮ್ಮನ ಮನೆಯ ಜೋಲಿಯಲ್ಲು ತೂಗಬೇಕು' ಎಂದಿದ್ದರು ಪಂಚಾಕ್ಷರಿ. ಜೋಲಿ ಕಟ್ಟಬಹುದು, ಮಗುವನ್ನೆಲ್ಲಿಂದ ತರುವುದು? ಈ ಸಿನಿಮಾ ಜನಕ್ಕೆ ಮಗುವೂ ಪ್ರಾಪರ್ಟಿಯಾಗುತ್ತಲ್ಲಾ ಎಂದುಕೊಂಡೆ. ಅಷ್ಟಕ್ಕೂ ಅದು ನನ್ನ ಕೆಲಸ ಅಲ್ಲವೂ ಅಲ್ಲ. ಅದು ಪ್ರೊಡಕ್ಷನ್ ಮ್ಯಾನೇಜರ್‌ನ ಕೆಲಸ. ಹುಡುಕಿದರೂ ಯಾರೂ ಕೊಡಲಿಕ್ಕೆ ಸಿದ್ಧವಿರಲಿಲ್ಲ. ಎಲ್ಲರಿಗೂ ಮಗುವಿಗೆ ದೃಷ್ಟಿ ತಾಕುತ್ತದೆ ಎನ್ನುವ ಭಯವೇ. ಸಿಕ್ಕವರೆಲ್ಲಾ `ಇಲ್ಲಿ ಹೋಗಿ ಆ ಮನೆಯಲ್ಲಿ ಒಂದು ಮಗುವಿದೆ' ಎಂದು ಹೇಳುತ್ತಿದ್ದರಾದರೂ, ಅಲ್ಲಿ ಹೋಗಿ ಕೇಳಿದರೆ ಮತ್ತದೇ ಕಥೆ. ನಾನು ಪುಟ್ಟಣ್ಣ ಅವರಿವರನ್ನು ಕೇಳಿ ಕೊನೆಗೆ, ಆಟೋ ಮಾಡಿಕೊಂಡು ಮುಕ್ಕಚೇರಿ, ಸುಬಾಷ್‌ನಗರ, ಉಲ್ಲಾಳದವರೆಗೂ ಹೋಗಿ ಬಂದಿದ್ದೆವು. ಹುಡುಕಿ ಹೈರಾಣಾದ ನಮ್ಮ ಮೇಲೆ ಕರುಣೆ ಇಟ್ಟು ಯಾರೋ `ಬನ್ನಿ ತೋರಿಸುತ್ತೇನೆ, ಅವರು ಕೊಟ್ಟರೂ ಕೊಡಬಹುದು' ಎಂದು ಕರಕೊಂಡು ಹೊರಟರು. ಅವರು ಬಂದದ್ದು ಸೀದಾ ನಮ್ಮ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೇ.
ಜಕ್ಕು ಮಹಮದರ ಮನೆಯಿಂದ ಮೂರು ಮನೆಗಳನ್ನು ದಾಟಿ ಓಣಿ ಶುರುವಾಗುತ್ತಿದ್ದ ಜಾಗದಲ್ಲಿ, ಹೆಂಗಸರೆಲ್ಲಾ ಬೀಡಿ ಕಟ್ಟಲು ಅಂಗಳದಲ್ಲಿ ಸೇರುತ್ತಿದ್ದರಲ್ಲ, ಆ ಮನೆಯಲ್ಲಿ ಒಂದು ಮಗು ಇತ್ತು. ಅವರೂ ಕೊಡಲಿಕ್ಕೆ ಸಿದ್ಧರಿರಲಿಲ್ಲ. `ನಿಮ್ಮ ಮಗುವಿನ ಮುಖ ತೋರಿಸುವುದಿಲ್ಲ' ಎಂದು ಕಾಡಿ ಬೇಡಿ, ಕಡೆಗೆ ಅವರು ಕೇಳದಿದ್ದರೂ ನಾನೇ ಅದಕ್ಕಾಗಿ ಸ್ವಲ್ಪ ಹಣವನ್ನು ಕೊಡುತ್ತೇನೆ ಎಂದೆಲ್ಲಾ ಹೇಳಿದ ಮೇಲೆ ಅವರು ಒಪ್ಪಿದ್ದರು. ಇಷ್ಟೆಲ್ಲಾ ಆದಮೇಲೆ ಮಗುವನ್ನು ತಾಯಿಯೇ ಕರದುಕೊಂಡು ಬಂದು ಜೋಲಿಗೆ ಹಾಕಿದರೆ, ಮಗು ಅಳಲಿಕ್ಕೆ ಶುರು ಮಾಡಿಬಿಟ್ಟಿತು. ತೂಗಿದರೂ ಇಲ್ಲ, ಲಾಲಿ ಹಾಡಿದರೂ ಇಲ್ಲ. ಅಳು ನಿಲ್ಲಿಸದೆ ಕಲಾವಿದರು ಆಡುವ ಮಾತು ಸರಿಯಾಗಿ ಕೇಳುವುದಿಲ್ಲ ಸುಮ್ಮನೆ ಅಳುವ ಷಾಟ್ ತೆಗೆದುಕೊಂಡು ಮಗುವನ್ನು ತಾಯಿಯ ಕಡೆಗೆ ಕೊಟ್ಟೆವು. ಕೊನೆಗೆ ತೊಟ್ಟಿಲಲ್ಲಿ ದಿಂಬೊಂದನ್ನು ಮಗುವಿನಂತೆ ಮಲಗಿಸಿ ಆ ಸೀನ್ ಚಿತ್ರೀಕರಿಸಲಾಯಿತು. ಅಯ್ಯೋ ಇಷ್ಟಕ್ಕಾಗಿ ಅಷ್ಟೆಲ್ಲಾ ಸುತ್ತಬೇಕಾಯಿತಾ? ಎಂದು ನಿರಾಸೆಯೂ ಆಯಿತು. ಇಷ್ಟಾಗಿಯೂ ಹಣದ ವಿಷಯವನ್ನು ತಕ್ಷಣಕ್ಕೆ ನಿರ್ದೇಶಕರಿಗೆ ಹೇಳಿರಲಿಲ್ಲ. ನಮ್ಮ ಅಗತ್ಯಕ್ಕಾಗಿ ಮಗು ಬೇಕು ಎಂದಮೇಲೆ ಕೊಡುವವರಿಗೂ ಏನಾದರೂ ಕೊಡಲೇಬೇಕಲ್ಲವೇ? ಕಡೆಗೆ `ನನಗೆ ಹೇಳದೆ ಯಾಕೆ ಕಮಿಟ್ ಆದಿರಿ?' ಎಂದು ಒಂದು ಮಾತು ಅವರ ಕಡೆಯಿಂದ ಬಂತು.
ಅಲೀಮಮ್ಮ ಹಂಚಿನ ತೊಲೆಗೆ ತೂಗುತ್ತಿದ್ದ ಬಟ್ಟೆಯ ಜೋಲಿ ಅಳುವ ಕಂದನಿಗೆ ಹಾಡುತ್ತಿದ್ದರು. ಧ್ವನಿಯೇನೂ ಅಂತಾ ಚಂದ ಇರಲಿಲ್ಲ. ಜೊತೆಗೆ ಭಾಷೆಯೂ ಗೊತ್ತಾಗುತ್ತಿರಲಿಲ್ಲ. ಭಾಷೆ ಯಾವುದಾದರೇನು ಭಾವ ಎದೆಯನ್ನು ಮುಟ್ಟುತ್ತದೆ ಅಲ್ಲವೇ? ಎದುರು ಸಿಕ್ಕಾಗ ಒಂದಿಷ್ಟು ನಗು ಎಂಥವರನ್ನು ಬೇಕಾದರೂ ಹತ್ತಿರ ಮಾಡುತ್ತದೆ. ಮತ್ತೆ ದರ್ಗಾಕ್ಕೆ ಅಲೀಮಮ್ಮನ ಹರಕೆಯನ್ನು ಒಪ್ಪಿಸಿದ ಮೇಲೆ ಆಕೆಗೆ ಒಂದಿಷ್ಟು ಉತ್ತುತ್ತಿ, ಒಣದ್ರಾಕ್ಷಿ ಗೋಡಂಬಿ ಬಾದಾಮಿ, ಕಲ್ಲುಸಕ್ಕರೆಗಳನ್ನು ಕೊಟ್ಟು `ನಿಮ್ಮ ಹರಕೆ ಒಪ್ಪಿಸಿದ್ದೇನೆ' ಎಂದು ತಿಳಿಸಿದ್ದೆ. ಆ ವಿಶ್ವಾಸ ಅಲೀಮಮ್ಮ ಮತ್ತು ನನ್ನ ನಡುವೆ ಇತ್ತು. `ನನ್ನ ಹರಕೆಯನ್ನು ನಿಮ್ಮ ಮೂಲಕ ಖುದಾ ಈಡೇರಿಸಿಕೊಂಡ ಎಂದರೆ, ನೀವು ಖುದಾಗೆ ಹತ್ತಿರದವರು' ಎಂದಿದ್ದರು. ಧಾರ್ಮಿಕ ಶ್ರದ್ಧೆ ಎಷ್ಟು ದೊಡ್ಡದು ಅಲ್ಲವಾ!
ಎದುರು ಸಿಕ್ಕಾಗ ಒಂದೆರಡು ಮಾತು ಬಿಟ್ಟರೆ ನನ್ನ ಅಲೀಮಮ್ಮನ ನಡುವೆ ಅಂತಾದ್ದೇನೂ ನಡೆದಿರಲಿಲ್ಲ. ಒಂದು ದಿನ ಸಂಜೆ ಶೂಟ್ ಮಾಡುವಾಗ ತಂತಿಗೆ ಒಣಹಾಕಿದ್ದ ಸೀರೆ ಸೀನ್‌ನಲ್ಲಿ ಕಮಿಟ್ ಆಗಿಬಿಟ್ಟಿತ್ತು. ಅದೂ ಕಣ್ಣಿಗೆ ಡಾಳಾಗಿ ಕಾಣುವಂತೆ. ಗಾಢ ಹಸಿರು ಪ್ರಿಂಟ್‌ಗಳಿರುವ ಬಿಳಿಯ ಸೀರೆ. ಅದನ್ನು ಡೈರೆಕ್ಷನ್ ಡಿಪಾರ್ಟೆ್ಮಂಟಿನವರು ಗುರುತು ಮಾಡಿಕೊಂಡಿದ್ದರು. ಸಾಮಾನ್ಯವಾಗಿ ಸೀನ್‌ಗಾಗಿ ನಾವೇ ಬಟ್ಟೆಗಳನ್ನು ಒಣಗಿ ಹಾಕಿ ತೆಗೆದಿಟ್ಟಿಕೊಳ್ಳುತ್ತಿದ್ದೆವು. ಅದಕ್ಕಾಗಿ ಪ್ರತ್ಯೇಕವಾದ ಬಟ್ಟೆಯ ಗಂಟೊಂದು ಇರುತ್ತಿತ್ತು. ಅವತ್ತು ಯಾರೋ ಒಣಹಾಕಿದ್ದಾರೆ ಎಂದು ಸುಮ್ಮನಾಗಿಬಿಟ್ಟಿದ್ದೆ.
ಸಾಮಾನ್ಯವಾಗಿ ಯಾವುದಾದರೂ ಒಂದು ದೃಶ್ಯವನ್ನು ಶುರು ಮಾಡಿದರೆ ಅದು ಅವತ್ತೇ ಮುಗಿದು ಹೋಗುತ್ತೆ. ಆದರೆ ಆ ದೃಶ್ಯ ಸಮಯಾಭಾವದಿಂದ ಅವತ್ತು ಪೂರ್ತಿಯಾಗಲಿಲ್ಲ. ಮಾರನೆಯ ದಿನ ಇದೇ ಹೊತ್ತಿಗೆ ಮಾಡುವ ಎನ್ನುವ ನಿರ್ಧಾರಕ್ಕೆ ಬಂದೆವು. ಮಾರನೆಯ ದಿನ ಮಧ್ಯಾಹ್ನದ ಹೊತ್ತಿಗೆ ಸೀರೆಯ ವಿಷಯ ನನಗೆ ತಿಳಿಯಿತು. `ಇದನ್ನ್ನು ನಿನ್ನೆಯೇ ಹೇಳಬಾರದಿತ್ತೇ?' ಎಂದೆ. `ಅದೆಲ್ಲಾ ನೋಡಿಕೊಳ್ಳುವುದು ನಿಮ್ಮ ಕೆಲಸ ಅಲ್ಲವಾ?' ಎಂದುಬಿಟ್ಟಿದ್ದರು. ಆ ಸೀರೆ ಆ ದೃಶ್ಯಕ್ಕೆ ಬೇಕೇ ಬೇಕಿತ್ತು. ಇಲ್ಲಾಂದ್ರೆ ಕಂಟಿನ್ಯುಟಿ ಮಿಸ್ ಆಗುತ್ತಲ್ಲಾ. ಸರಿ ನಿನ್ನೆ ಇಲ್ಲಿ ಒಣ ಹಾಕಿದ್ದ ಸೀರೆ ಯಾರದ್ದು? ಎಂದು ಹುಡುಕತೊಡಗಿದೆ. ಯಾರನ್ನ ಕೇಳಿದರೂ, `ಯಾವ ಸೀರೆ?' ಎನ್ನುತ್ತಿದ್ದರು. ನನಗೆ ಗೊತ್ತಿರುವ ಎಲ್ಲಾ ಮಾತುಗಳಲ್ಲಿ ವಿವರಿಸಿ ಹೇಳತೊಡಗಿದೆ. ನಾನು ಹೇಳಿದ್ದು ಅರ್ಥವಾಗಲಿಲ್ಲವೋ, ಹೇಳಿದ್ದೇ ಆ ಸೀರೆಗಿಂತ ಜಾಸ್ತಿಯಾಯ್ತೊ? ಗೊತ್ತಾಗಲಿಲ್ಲ.
ನಾಲ್ಕಾರು ಮನೆಯವರು ಅಲ್ಲಿ ಬಟ್ಟೆಗಳನ್ನು ಒಣ ಹಾಕುತ್ತಿದ್ದರು. ಎಲ್ಲರ ಮನೆಗೂ ಹೋಗಿ ಕೇಳಿದೆ, ಹಸೀನಮ್ಮ, `ನನ್ನ ಹತ್ತಿರ ಆ ಥರಾ ಸೀರೆಯೇ ಇಲ್ಲ' ಎಂದರೆ, ಆ ಕಡೆಯ ಮನೆಯ ಜಮೀಲಾ, `ನಿನ್ನೆ ನಾನು ಬಟ್ಟೆಯೇ ಒಗೆದಿಲ್ಲ' ಎಂದುಬಿಟ್ಟಳು. ಅಲೀಮಮ್ಮನ ಮನೆಗೆ ಹೋದಾಗ ಆಕೆ ಮಗಳಿಗೆ ಏನನ್ನೋ ತರಲಿಕ್ಕೆ ಪೇಟೆಗೆ ಹೋಗಿದ್ದರು. ಮತ್ತೆ ಅವಳ ಮಗಳು, `ಇಲ್ಲಿ ಆಚೆ ಬೀದಿಯವರೂ ತಂದು ಒಣ ಹಾಕ್ತಾರೆ, ನನಗಂತೂ ಏನೂ ಗೊತ್ತಾಗ್ತಾ ಇಲ್ಲ' ಎಂದಳು. ನನಗೆ ಅಳು ಬರುವ ಹಾಗಾಗಿಬಿಟ್ಟಿತ್ತು. ನಾನು ಪ್ರೊಫೆಷನಲ್ ಅಲ್ಲವಾದ್ದರಿಂದ, ಹೀಗೆಲ್ಲಾ ಆಗುತ್ತೆ ಅಂತ ಗೊತ್ತೇ ಇರಲಿಲ್ಲ.
ಸುಮ್ಮನೆ ಬರೆದುಕೊಂಡು ಇರುವುದನ್ನು ಬಿಟ್ಟು ಇದ್ಯಾವ ಸಂಕಷ್ಟಕ್ಕೆ ಸಿಕ್ಕಿಕೊಂಡೆನಪ್ಪಾ? ಎಂದು ಒದ್ದಾಡತೊಡಗಿದೆ. ಚಂದ್ರಹಾಸರು `ಏನಾಯಿತು?' ಎಂದರು ನಾನು ಸಪ್ಪಗಿದ್ದುದನ್ನು ನೋಡಿ. `ಏನಿಲ್ಲ' ಎಂದರೂ ಒಳಗೇ ತಳಮಳ. ನಾಳೆ ಕಂಟಿನ್ಯುಟಿ ಇಲ್ಲಾಂದ್ರೆ, ಎಡಿಟಿಂಗ್ ಟೇಬಲ್‌ನಲ್ಲೆ ನನ್ನ ಬಗ್ಗೆ ಯಾರಾದರೂ ಕೆಟ್ಟ ಮಾತನ್ನು ಆಡಿಬಿಟ್ಟರೆ ಎನ್ನುವ ಭಯ ಕಾಡತೊಡಗಿತು. ನಾನೇನು ಅಲ್ಲಿರಲ್ಲವಲ್ಲ ಏನಾದರೂ ಅಂದುಕೊಳ್ಳಲಿ ಎನ್ನಲಿಕ್ಕೆ ಆಗಲೇ ಇಲ್ಲ. ಯಾಕಂದ್ರೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ನಾಕುತಂತಿ' ಸೀರಿಯಲ್‌ನಲ್ಲಿ ಪ್ರಿವ್ಯೂ ಮಾಡುವಂತೆ ಅಪರೂಪಕ್ಕೆ ಹಿರಿಯ ನಿರ್ದೇಶಕರಾದ ಬಿ. ಸುರೇಶ್ ನನಗೆ ಹೇಳುತ್ತಿದ್ದರು. ಆಗ `ಇಂಥಾದ್ದೆಲ್ಲಾ ನೋಡಿ ನೋಟ್ ಮಾಡಿಕೊಂಡು ಏನು ಮಾಡ್ತಾರೆ, ಕಂಟಿನ್ಯುಟಿ ನೋಡಿಕೊಳ್ಳಲಿಕ್ಕೆ ಆಗಲ್ಲ ಎಂದ ಮೇಲೆ ಯಾಕೆ ಕೆಲ್ಸಕ್ಕೆ ಬರ್ತಾರೆ' ಎಂದೆಲ್ಲಾ ನಾನೇ ಬೈಯ್ಯುತ್ತಿದ್ದೆ. ನನಗಿರುವ ಟೆನ್ಷನ್ ತಡೆಯಲಿಕ್ಕಾಗದೆ, `ಈ ಅಲೀಮಮ್ಮನಿಗೆ ಈಗಲೇ ಅರ್ಜೆಂಟ್ ಇತ್ತಾ ಪೇಟೆಗೆ ಹೋಗಲಿಕ್ಕೆ?' ಎಂದು ಬೈದುಕೊಂಡು ಕೂತೆ. ಪುಟ್ಟಣ್ಣ, ಪುನೀತ ಇಬ್ಬರೂ, `ಸಿಗುತ್ತೆ ಇರಿ ಮೇಡಂ' ಎಂದು ಸಮಾಧಾನ ಹೇಳಿದರೂ ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ.
ಪೇಟೆಯಿಂದ ಮನೆಗೆ ಬಂದ ಅಲೀಮಮ್ಮನಿಗೆ ಮಗಳು ಹೀಗೆ ಎಂದು ವಿಷಯ ಹೇಳಿದ್ದಾಳೆ. ಬುರ್ಕಾವನ್ನು ಬಿಚ್ಚಿ ಎತ್ತಿಟ್ಟವರೆ, ನಾನಿರುವಲ್ಲಿಗೆ ಬಂದು `ನಿನ್ನೆ ನಾನು ಒಗೆದ ಬಟ್ಟೆಗಳನ್ನು ಇನ್ನೂ ಮಡಚಿಟ್ಟಿಲ್ಲ. ಅದರಲ್ಲಿ ನಿಮಗೆ ಬೇಕಾದ ಸೀರೆ ಇದೆಯಾ ನೋಡಿ?' ಎಂದು ಕರೆದರು. ಸೀರೆ ಸಿಕ್ಕರೆ ಸಾಕು ಎಂದು ಅವಳ ಜೊತೆ ಹೋದೆ. ಎರಡು ಬಟ್ಟೆಯನ್ನು ಸರಿಸಿದಾಗ ನಿನ್ನೆ ಸ್ವತಂತ್ರವಾಗಿ ಬಿಸಿಲು ಗಾಳಿಗೆ ಆಡುತ್ತಾ ಇದ್ದ ಸೀರೆ ಮುದುಡಿ ಬಿದ್ದಿದ್ದು ನನ್ನ ಕಣ್ಣಲ್ಲಿ ಅರಳಿ, ಗೆಲುವು ಮೂಡಿತು. `ಇದೇ ಸೀರೆ' ಎಂದು ಜೋರಾಗಿ ಕೂಗಿದೆ- ಆರ್ಕಿಮಿಡೀಸ್ ಯುರೇಕಾ ಎಂದು ಕೂಗಿದ ಹಾಗೆ. ಅಲೀಮಮ್ಮ `ಸ್ವಲ್ಪ ಷರಬತ್ತ್ ಮಾಡ್ತೀನಿ' ಎಂದರೂ ಬೇಡ ಬೇಡ ಎಂದು ಸೀರೆ ಹಿಡಿದು ಓಡಿದೆ. ದೊಡ್ಡ ನಿರಾಳತೆ ನನ್ನನ್ನೂ ಅನುಸರಿಸಿತ್ತು.
ತೂಕ ಕಡಿಮೆ ಮಾಡಲು ಉಪವಾಸ ಮಾಡುತ್ತಿದ್ದರೆ ಎಚ್ಚರ! | This Is What Happens to your body when you starve to lose weight - Kannada BoldSky
ತೂಕ ಕಡಿಮೆ ಮಾಡಲು ಉಪವಾಸ ಮಾಡುತ್ತಿದ್ದರೆ ಎಚ್ಚರ!
| Published: Saturday, July 23, 2016, 23:12 [IST]
ಫಾಸ್ಟ್ ಫುಡ್ ಜೀವನಶೈಲಿಯಲ್ಲಿ ದೇಹವನ್ನು ಬಲೂನಿನಂತೆ ಊದಿಸಿಕೊಂಡ ಬಳಿಕ ಛೇ! ಹೀಗೆ ಹೇಗಾಯಿತು? ನನ್ನ ದೇಹವು ಬೊಜ್ಜು ಬೆಳೆಸಿಕೊಂಡಿದೆ, ಅಲ್ಲದೆ ತೂಕವು ಹೆಚ್ಚಾಗುತ್ತಿದೆ, ಹಾಗಾಗಿ ತಕ್ಷಣ ಬೊಜ್ಜನ್ನು ಕರಗಿಸಿ, ಸ್ಲಿಮ್ ಆಗಿ ಕಾಣಲು ಬಯಸುತ್ತೇವೆ... ಅತೀ ಕಡಿಮೆ ಅವಧಿಯಲ್ಲಿ ತೆಳ್ಳಗಾಗುವ ಪ್ರಯತ್ನ ಬೇಡ!
ಆದರೆ ಕರಗಿಸಲು ಜಿಮ್‌ಗೆ ಹೋಗಬೇಕು, ಯೋಗ ಮಾಡಬೇಕು ಎನ್ನುವ ಸಲಹೆ ಬರುತ್ತದೆ. ಈ ಸಲಹೆಗಳನ್ನು ಪಾಲಿಸಲು ನಮ್ಮಲ್ಲಿ ಸಮಯವೂ ಇಲ್ಲ, ತಾಳ್ಮೆಯೂ ಇಲ್ಲ. ದೇಹವನ್ನು ಕರಗಿಸಲು ಇನ್ನಿಲ್ಲದಂತೆ ಕಸರತ್ತು ನಡೆಸುತ್ತೇವೆ. ತೂಕ ಇಳಿಸಿಕೊಳ್ಳುವ ನೆಪದಲ್ಲಿ, ಊಟ ಮಾತ್ರ ಬಿಡಬೇಡಿ
ಬೊಜ್ಜನ್ನು ಕರಗಿಸಬೇಕಾದರೆ ಊಟ ಮಾಡದೆ ಇರಲು ಪ್ರಾರಂಭಿಸುತ್ತೇವೆ. ದಿನದಲ್ಲಿ ಎರಡು ಹೊತ್ತು ಊಟ ಮಾಡುವ ಬದಲು ಒಂದೇ ಸಲ ಊಟ ಮಾಡುತ್ತೇವೆ. ಆದರೆ ಬೊಜ್ಜು ಕರಗಿಸಲು ಊಟ ಮಾಡದೆ ಇರುವುದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಇದೆ! ಅಚ್ಚರಿಯಾಯಿತೇ? ಮುಂದೆ ಓದಿ...
ಚಯಾಪಚಾಯ ನಿಧಾನವಾಗಿಸುತ್ತದೆ
ದೇಹವು ಯಾವುದೇ ಪೋಷಕಾಂಶಗಳನ್ನು ಪಡೆಯದಿರುವಾಗ ಶಕ್ತಿಯನ್ನು ಉಳಿಸಿಕೊಳ್ಳಲು ನಿಮ್ಮ ಚಯಾಪಚಾಯ ಕ್ರಿಯೆಯು ತುಂಬಾ ನಿಧಾನವಾಗುತ್ತದೆ.
ಉಸಿರು ವಾಸನೆ
ಶಕ್ತಿಯನ್ನು ಉತ್ಪಾದಿಸಲು ದೇಹಕ್ಕೆ ಸರಿಯಾಗಿ ಕಾರ್ಬೋಹೈಡ್ರೇಟ್ಸ್ ಗಳು ಸಿಗದೆ ಇರುವಾಗ ಕೆಟೊಸಿಸ್ ಎನ್ನುವ ಹಂತಕ್ಕೆ ದೇಹವು ತಲುಪುವುದು. ಈ ವೇಳೆ ಉತ್ಪತ್ತಿಯಾಗುವ ಕೆಟೊನೆ ಅಂಶದಿಂದ ದುರ್ವಾಸನೆ ಉಸಿರು ಬರುವುದು. ಬೆಳಗ್ಗೆ ಉಪಾಹಾರವನ್ನು ತ್ಯಜಿಸಿದರೆ ಮಧ್ಯಾಹ್ನದ ಊಟದ ವೇಳೆ ಇದರ ಪರಿಣಾಮವಾಗುವುದು.
ಉಪವಾಸವಿದ್ದಾಗ ಕಂಡುಬರುವ ಸಾಮಾನ್ಯ ಲಕ್ಷಣವೆಂದರೆ ಅದು ನಿಶ್ಯಕ್ತಿ. ಉಪವಾಸವಿದ್ದಾಗ ದೇಹದಲ್ಲಿ ವಿಟಮಿನ್ ಗಳ ಅಸಮತೋಲನಿಂದಾಗಿ ದೈಹಿಕ ಚಟುವಟಿಕೆ ಕಡಿಮೆಯಾಗಿ ನಿಶ್ಯಕ್ತಿ ಕಾಣಿಸುವುದು. ಶಕ್ತಿ ಇಲ್ಲದೆ ಇರುವಾಗ ಯಾವುದೇ ದೈಹಿಕ ಚಟುವಟಿಕೆ, ವ್ಯಾಯಾಮ ಮಾಡಲು ಸಾಧ್ಯವಿಲ್ಲ.
ಆಹಾರ ತೆಗೆದುಕೊಳ್ಳದೆ ಬೊಜ್ಜು ಕರಗಿಸಲು ಹೋಗುವವರಲ್ಲಿ ಇದು ಕಾಣಸಿಕೊಳ್ಳುತ್ತದೆ. ಉಪವಾಸ ಮಾಡುವುದರಿಂದ ದೇಹದಲ್ಲಿನ ನೀರಿನಾಂಶವು ಕಡಿಮೆಯಾಗಿ ನಿರ್ಜಲೀಕರಣ ಉಂಟಾಗುವುದು.
ಸ್ನಾಯುಗಳ ಬೆಳವಣಿಗೆ ಕುಂಠಿತ
ದೇಹವು ಯಾವಾಗಲೂ ಉಪವಾಸ ಮಾಡುತ್ತಲಿದ್ದರೆ ಆಗ ಅದಕ್ಕೆ ಬೇಕಾಗಿರುವಂತಹ ಅತ್ಯಗತ್ಯ ಪೋಷಕಾಂಶಗಳು ಲಭ್ಯವಾಗದೆ ಇರುವುದರಿಂದ ಸ್ನಾಯುಗಳ ಬೆಳವಣಿಗೆ ಕುಂಠಿತವಾಗಬಹುದು. ಇದರಿಂದ ಮಾಂಸಖಂಡವನ್ನು ಕಳಕೊಳ್ಳಬಹುದು.
ಉಪವಾಸ ಮಾಡಿ ದೇಹದ ತೂಕವನ್ನು ಕರಗಿಸಲು ಪ್ರಯತ್ನಿಸವವರ ಚರ್ಮವು ಒಣಗುವುದು. ಉಪವಾಸದಿಂದ ಚರ್ಮವು ಒಣಗಿ ಜೋತು ಬಿದ್ದಂತೆ ಆಗಬಹುದು.
ಕೂದಲು ತೆಳುವಾಗುವುದು
ಉಪವಾಸದಿಂದಾಗಿ ನಿಮ್ಮ ಕೂದಲಿನ ಮೇಲೆ ಪರಿಣಾಮವಾಗಬಹುದು. ಕೂದಲಿನ ಬೆಳವಣಿಗೆಗೆ ಬೇಕಾದ ಅಗತ್ಯ ಪೋಷಕಾಂಶಗಳು ಸಿಗದೆ ಇರಬಹುದು. ಇದರಿಂದ ಕೂದಲು ತೆಳ್ಳಗೆ ಆಗಬಹುದು.
This Is What Happens to your body when you starve to lose weight
You only had a bowl of soup for dinner, and you are now heading to bed. But your brain and belly signal you to go to the kitchen first as you are already hungry. You are trying to slim down so you think it is better to go with a little something in your belly. But did you know that starving to lose weight can have many side effects? have a look
ಟಿಕ್​ಟಾಕ್​ ಸ್ಟಾರ್​ಗೆ ಸಿಕ್ತು ಬಿಜೆಪಿ ಟಿಕೆಟ್! – ಅರಳಿ ಕಟ್ಟೆ
ಹರಿಯಾಣದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಇಲ್ಲಿನ ಅದಂಪುರ್ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಹರಿಯಾಣ-ರಾಜಸ್ಥಾನ ಗಡಿಭಾಗದಲ್ಲಿರುವ ಅದಂಪುರ್​ನಲ್ಲಿ ಟಿಕ್​ಟಾಕ್ ಸ್ಟಾರ್​ ಸೊನಾಲಿ ಪೋಗಟ್​ಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ.
ಬಿಜೆಪಿ ಈಗಾಗಲೇ 12 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಿಜೆಪಿ ನಾಯಕಿ, ಕಿರುತೆರೆ ನಟಿ ಸೋನಾಲಿ ಫೋಗಟ್ ಅವರಿಗೂ ಟಿಕೆಟ್ ನೀಡಿದೆ. ಅದಂಪುರ ಕ್ಷೇತ್ರದಿಂದ ಕಾಂಗ್ರೆಸ್ ನ ಕುಲದೀಪ್ ಬಿಷ್ಣೊಯ್ ವಿರುದ್ಧ ಸೋನಾಲಿ ಫೋಗಟ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಸದೃಢ ಕಾರ್ಯಕ್ಕಾಗಿ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಲಾಗಿದೆ. ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದಾಗಿ ಸೊನಾಲಿ ಪೊಗಾಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋನಾಲಿ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ, ವಿಡಿಯೋವನ್ನು ಟಿಕ್-ಟಾಕ್‍ನಲ್ಲಿ ಪೋಸ್ಟ್ ಮಾಡುತ್ತಾ ಬಂದಿದ್ದಾರೆ. ಈ ಮೂಲಕ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಸೋನಾಲಿ ಅವರು ಇತ್ತೀಚೆಗೆ ಪೋಸ್ಟ್ ಮಾಡಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಕರ್ನಾಟಕದ ಜಿಮ್​ಗಳಿಗೆ ಮಾರ್ಗಸೂಚಿ: ಸಚಿವ ಸುಧಾಕರ್ ಸ್ಪಷ್ಟನೆ | Karnataka Minister Sudhakar Talks about gym rules rbj
ಕರ್ನಾಟಕದ ಜಿಮ್​ಗಳಿಗೆ ಮಾರ್ಗಸೂಚಿ: ಸಚಿವ ಸುಧಾಕರ್ ಸ್ಪಷ್ಟನೆ
* ಪುನೀತ್ ರಾಜ್‌ಕುಮಾರ್ ಹೃದಯಘಾತದಿಂದ ಸಾವು
* ಕರ್ನಾಟಕದ ಜಿಮ್​ಗಳಿಗೆ ಮಾರ್ಗಸೂಚಿ
* ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ
Bengaluru, First Published Oct 31, 2021, 6:36 PM IST
ಚಿಕ್ಕಬಳ್ಳಾಪುರ, (ಅ.31): ಫಿಟ್‌ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಎನ್ನುವುದು ಅಚ್ಚರಿ ಮೂಡಿಸಿದೆ.
ಪುನೀತ್ ನಿಧನದ (Puneeth Rajkumar Death) ಬಳಿಕ ಜಿಮ್ ಮಾಡುವ ಬಗ್ಗೆ ಹಲವು ಪ್ರಶ್ನೆಗಳು ಕೇಳಿಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಜಿಮ್ ಬಗ್ಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿತ್ತು.
ಇನ್ನು ಈ ಬಗ್ಗೆ ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ (Dr K Sudhakar) ಪ್ರತಿಕ್ರಿಯಿಸಿದ್ದು, ಜಿಮ್​ ಮಾಡುವ ಯುವಕರಿಗೆ ಕಿವಿಮಾತು ಹೇಳಿದ್ದಾರೆ. ಪುನೀತ್​ ರಾಜ್​ಕುಮಾರ್ ನಿಧನದ ಬಳಿಕ ಕೆಲವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ಒಂದೆರಡು ಘಟನೆಗಳಿಂದ ಆತಂಕಕ್ಕೊಳಗಾಗುವುದು ಬೇಡ. ಜಿಮ್​​ ಮಾಡುವುದು ಸರಿ, ತಪ್ಪು ಎಂಬ ಆತಂಕಗಳು ಬೇಡ. ಹೃದಯರೋಗ ತಜ್ಞರಿಂದ ಅಭಿಪ್ರಾಯ ಪಡೆದು ಗೈಡ್​ಲೈನ್ಸ್ ಬಿಡುಗಡೆ ಮಾಡಲಾಗುವುದು. ಸಂಪೂರ್ಣ ಮಾಹಿತಿಯೊಂದಿಗೆ ಗೈಡ್​ಲೈನ್ಸ್ ಸಿದ್ಧಪಡಿಸ್ತೇವೆ ಎಂದು ಸ್ಪಷ್ಟಪಡಿಸಿದರು.
ಪರಿಣಿತ ತರಬೇತಿದಾರರು, ಸಾಮಗ್ರಿಗಳ ಬಗ್ಗೆ ಗೈಡ್​​ಲೈನ್ಸ್​ ಬಿಡುಗಡೆ ಮಾಡಲಾಗುವುದು. ದೇಶ ವಿದೇಶದ ಖ್ಯಾತ ವೈದ್ಯರ ಬಳಿ ಮಾಹಿತಿ ಪಡೆಯುತ್ತೇವೆ ಎಂದರು.
ಪುನೀತ್​ ನನ್ನ ಜಿಮ್​ ಮೇಟ್​ ಆಗಿದ್ದರು
ಪುನೀತ್ ರಾಜ್​ಕುಮಾರ್​ ಸಾವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಪುನೀತ್​ ರಾಜ್​ಕುಮಾರ್ ನನ್ನ ಜಿಮ್​ ಮೇಟ್​ ಆಗಿದ್ದರು. ಪುನೀತ್​ ಅವರ ವರ್ಕೌಟ್​ ನೋಡ್ತಿದ್ರೆ ಆಶ್ಚರ್ಯವಾಗ್ತಿತ್ತು. ನಟ ಪುನೀತ್​​ ಅವರ ಜೀವನ ಶೈಲಿ ಎಲ್ಲವೂ ಚೆನ್ನಾಗಿತ್ತು. ಪುನೀತ್ ಅವರಿಗೆ ಯಾವುದೆ ದುರಭ್ಯಾಸಗಳು ಇರಲಿಲ್ಲ. ಕುಟಂಬಸ್ಥರಿಗೆ ಆ ಭಗವಂತನೇ ಆತ್ಮಸ್ಥೈರ್ಯ ನೀಡಬೇಕು ಎಂದು ಸುಧಾಕರ್ ಹೇಳಿದರು.
ಅಪ್ಪು ಸಾವಿನ ಬೆನ್ನಲ್ಲೇ ಎಚ್ಚೆತ್ತ ಕೇರಳ