text
stringlengths
0
61.5k
ವ್ಯಾಖ್ಯಾನಿಸಲಾಗಿದೆ ಸರ್ಕ್ಯೂಟ್ ಮೂಲ ಶಕ್ತಿಯಾಗಿ ಕಾರ್ಯಾಚರಣೆಯ ವರ್ಧಕಗಳನ್ನು ಕಡಿಮೆ ವಿದ್ಯುತ್ ಮೂಲಗಳು ಅನೇಕ ವೋಲ್ಟ್ (12-15) ಬಳಸಲಾಗುತ್ತದೆ ಆಫ್. ಇಲ್ಲಿಯವರೆಗೆ, ಅತ್ಯಂತ ವ್ಯಾಪಕವಾಗಿ ಹರಡಿತು ವೋಲ್ಟ್ ವಿದ್ಯುತ್ ಬಲ ನಿಯಂತ್ರಕ 12 ಮೂರು ಟರ್ಮಿನಲ್ ಸಮಗ್ರ ಘಟಕಗಳನ್ನು ಬಳಸಿ ಕಾನ್ಫಿಗರ್. ಅವರ ಉದ್ದೇಶ ಬೇರೆ ಔಟ್ಪುಟ್ ವೋಲ್ಟೇಜ್ ಮತ್ತು ವಿದ್ಯುತ್ ಪ್ರವಾಹದ ಹರವು ಪಡೆದುಕೊಳ್ಳುವುದು. ಪ...
ಸ್ಥಿರತೆ ದೇಶೀಯ ಮತ್ತು ವಿದೇಶಿ ರೀತಿಯ
ರಷ್ಯಾದ KR142EN8B ಅವಿಭಾಜ್ಯ ಘಟಕ (ಸಂಕ್ಷಿಪ್ತಗೊಳಿಸಿದ ಹೆಸರು KREN8B) ಹನ್ನೆರಡು ವೋಲ್ಟ್ಗಳ ಸಾಮಾನ್ಯ ಔಟ್ಪುಟ್ ವೋಲ್ಟೇಜ್ ಒದಗಿಸುತ್ತದೆ.
- ಧನಾತ್ಮಕ ಔಟ್ಪುಟ್ ಪ್ರಸ್ತುತ ಆರಂಭಿಕ ಸಹ ಸಂಖ್ಯೆ (78) ಉದ್ದೇಶಕ್ಕಾಗಿ ತೋರಿಸುತ್ತದೆ: ಆಮದು ಸ್ಥಿರತೆ ತಿಳಿಸಿದ ಸರಣಿಯ ನಂತರ ಅಂಕಿತಗಳನ್ನು ಹೊಂದಿರುತ್ತವೆ ಬೆಸ ಸಂಖ್ಯೆಯ (79) - ನಕಾರಾತ್ಮಕ ಔಟ್ಪುಟ್ ವೋಲ್ಟೇಜ್. ಕೊನೆಯ ಎರಡು ಅಂಕೆಗಳು (12 ಅಥವಾ 05) ವಿದ್ಯುತ್ ಪ್ರವಾಹದ ಉತ್ಪಾದನೆ ಶಕ್ತಿ ಸೂಚಿಸುತ್ತವೆ. ಉದಾಹರಣೆಗೆ: 7912 - ಐಸಿ - ಚಿಪ್ - - ಅದೇ ಘಟಕ, ಕೇವಲ 5 ವೋಲ್ಟ್ ಮತ್ತು ಧನ...
ಇನ್ಪುಟ್, ಉತ್ಪಾದನೆ ಮತ್ತು ಒಟ್ಟಾರೆ: ಮೂರು ಟರ್ಮಿನಲ್ ನಿಯಂತ್ರಕ ಇದರ ಹೆಸರೇ ಸೂಚಿಸುವಂತೆ, ಬಾಹ್ಯ ವಿದ್ಯುತ್ ಸರ್ಕ್ಯೂಟ್ ಸಂಪರ್ಕ ಕಲ್ಪಿಸುವ ಮೂರು ಉತ್ಪನ್ನಗಳೆಂದರೆ ಹೊಂದಿದೆ. ವಿದ್ಯುತ್ ಆಕರವನ್ನು ( "ಭೂಮಿ") ಗೆ ಸಂಪರ್ಕಿಸಲು ಸಾಮಾನ್ಯ ಔಟ್ಪುಟ್ ಬಳಸುತ್ತದೆ. ಇನ್ಪುಟ್ ಮತ್ತು ಸಾಮಾನ್ಯ ಟರ್ಮಿನಲ್ಗಳು ಇನ್ಪುಟ್ ವೋಲ್ಟೇಜ್ ಮತ್ತು ಔಟ್ಪುಟ್ ನಾವು "ನಿರ್ಗಮನ" ತೀರ್ಮಾನಗಳ ಕೆಲಸ ಮತ್ತು "ಸ...
ವಿದ್ಯುತ್ ಬಲ ನಿಯಂತ್ರಕ 12 ವೋಲ್ಟ್ ಸಾಮಾನ್ಯವಾಗಿ ಇನ್ಪುಟ್ ಪ್ರಸ್ತುತ ಗರಿಷ್ಠ ಅನುಮತಿ ಲೋಡ್ ಔಟ್ಪುಟ್ ಕನಿಷ್ಠ 2.5 ವೋಲ್ಟ್ ಮೀರಿದಾಗ ಕೂಡ, ಸಂದರ್ಭದಲ್ಲಿ ಕೆಲಸ ಮಾಡುತ್ತದೆ. ಗರಿಷ್ಠ ವಿದ್ಯುತ್ ಪೂರಣದ ಮೌಲ್ಯವನ್ನು ಮೂವತ್ತು ವೋಲ್ಟ್ ಮೀರಬಾರದು. ಅಲ್ಲದೆ, ಹೆಚ್ಚಿದ ಇನ್ಪುಟ್ ವೋಲ್ಟೇಜ್, ವಿದ್ಯುತ್ ಗಳಿಕೆ ಒದಗಿಸುವ 12 ಬಿ ಸ್ಟೇಬಿಲೈಸರ್ ಬಿಸಿಯಾಗುವುದರಿಂದ ಪ್ರಾರಂಭವಾಗುತ್ತದೆ ಗಮನಿಸಿ. ...
ಸ್ಟ್ಯಾಂಡರ್ಡ್ ವಿದ್ಯುತ್ ಪೂರೈಕೆ ಎಲೆಕ್ಟ್ರೋಲಿಟಿಕ್ ಜೋಡಿಸಿ ಇದೆ ಕೆಪಾಸಿಟರ್ ಏಕಮುಖ ಮತ್ತು 3A 50 ವೋಲ್ಟ್ ವಿಪರ್ಯಯ ವೋಲ್ಟೇಜ್, ಫ್ಯೂಸ್ (0.5 ಎ) 10,000 microfarads, ಡಯೋಡುಗಳ ಒಂದು ಪೂರ್ಣ ತರಂಗ ಸೇತುವೆ ಸುಧಾರಕ ಗೆ. ವಿದ್ಯುತ್ ಬಲ ನಿಯಂತ್ರಕ ಸ್ವತಃ 12 ವೋಲ್ಟ್ - 7912 ಅಥವಾ 7812 (KREN8B).
ದೊಡ್ಡ - ಇಂತಹ ಯಂತ್ರವನ್ನು ಒಂದುಗೂಡಿಸಿದ ಉಪಕರಣ ಬಳಸಿ ಆರೋಹಿಸುವಾಗ ಸಂಯುಕ್ತಗಳು ನಡುವೆ ಉದ್ದ ಕಡಿಮೆ, ಮತ್ತು ರೇಡಿಯೇಟರ್ ತೆಗೆಯುವುದು ಎಂದು ರೀತಿಯಲ್ಲಿ ವಿದ್ಯುತ್ ಅಂಶಗಳ ಇಡುವುದರ ಅಗತ್ಯವಿದೆ. ಕೂಲಿಂಗ್, ಇದು ಸಾಕಷ್ಟು ಮೇಲ್ಮೈ ಸ್ಥಳವನ್ನು ಅಥವಾ ಲೋಹದ ತಟ್ಟೆಯ ಪ್ರಮಾಣಿತ ಅಡ್ಡಪಟ್ಟಿಯನ್ನು ರೇಡಿಯೇಟರ್ ತೆಗೆದುಕೊಳ್ಳಲು ಉತ್ತಮ.
ಅನ್ವಯಿಸುವ ಮೂಲಗಳು, ವಿದ್ಯುತ್ ಬಲ ನಿಯಂತ್ರಕ 12 ವೋಲ್ಟ್ ಸಂಯೋಜಿಸುತ್ತದೆ ಸ್ವಯಂಚಾಲಿತ ವಾಹನಗಳು ಸಾಧನಗಳು ಸೇರಿದಂತೆ ಟಿಟಿಎಲ್ ಸಮಗ್ರ ಲಾಜಿಕ್ ಮಂಡಲಗಳನ್ನು ಬಳಕೆಯೊಂದಿಗೆ ಮರಣದಂಡನೆ ಸಾಧನಗಳು ಮತ್ತು ಬ್ಲಾಕ್ಗಳನ್ನು ವಿವಿಧ ವಿದ್ಯುತ್ ಸರಬರಾಜು ತಮ್ಮ ಬಳಕೆಯನ್ನು ಅನುಮತಿಸುತ್ತದೆ.
ಮಲ್ಲಿಗೆ ಹೂವಿನ ಪರಿಮಳದಲ್ಲಿ ತಣಿಯುವ ಮಳೆಯ ಹನಿ | How Jasmine and rain how close to one another - Kannada Oneindia
| Published: Friday, September 15, 2017, 12:17 [IST]
ಮೋಡ ನೆಲ ಮುಗಿಲ ಜೀವಫಲ. ಇದು ಮಾಗುವುದು ಆಕಾಶದಲ್ಲಿ. ಮಾಗಿ ಕಳಚುವುದು ಭೂಮಿಗೆ. ಕಳಚುವುದೆಂದರೆ ಹಣ್ಣಿನಂತೆ ಒಂದು ನಿರ್ದಿಷ್ಟ ಜಾಗದಲ್ಲಲ್ಲ. ಅದು ಹೇಗೆ ರಸವಾಗುತ್ತೊ ಹಾಗೆ, ಗಾಳಿ ಯಾವ ವಾಟ ಕೊಡುತ್ತೊ ಆ ವಾಟದಲ್ಲಿ, ಅಷ್ಟು ಅವಧಿಯಲ್ಲಿ ಇಳಿದಷ್ಟು ವಿಸ್ತಾರದಲ್ಲಿ ನೆಲವನ್ನು ರಸಮಯವಾಗಿಸುತ್ತದೆ.
ಇದು ಮಳೆ. ಮಳೆ ಹನಿಯನ್ನು ಜನಪದರು ಮಳೆ ಗುಬ್ಬಿ ಎಂದು ಕರೆದಿದ್ದಾರೆ. ಗಾಳಿಯಲ್ಲಿ ತೇಲಿ ಬರುವ ಮಳೆಹನಿ ನೆಲದ ಮೇಲೆ ಇಳಿಯುವಾಗಿನ ಆಟ ಗುಬ್ಬಿಯನ್ನು ಹೋಲುತ್ತದೆ. ನೆಲಕ್ಕಿಳಿಯುವ ಹನಿಹನಿ ಮಳೆಗೆ ಜನಪದರ ಈ ರೂಪಕ ಅನನ್ಯ ಸೊಗಸಿನದು.
ಮೋಡ ಬೇಸಾಯಗಾರರ, ಬೇಸಾಯದ ಕೂಲಿಕಾರರ ಆಸೆಯ ಬೆಳಸು. ಮಳೆ ಅವರ ಬಯಕೆಯ ಫಸಲು. ಈ ವರ್ಷ ಮಳೆ ಹೇಗಾದೀತು ಎಂದು ಈ ಅನುಭವಿ ಹವಾಮಾನ ತಜ್ಞ ಜನ ಗ್ರೀಷ್ಮ ಮುಗಿವ ಮುನ್ನವೆ ಲೆಕ್ಕ ಹಾಕಬಲ್ಲರು.
ಬೇಸಗೆಯ ನಡು ಪ್ರಾಯ ಇಳಿಯುತ್ತಿರುವಾಗ ಬಾನಂಗಣದಲ್ಲಿ ಕವಿದುಕೊಳ್ಳುವ ಮೇಘ ದಟ್ಟಣೆಯನ್ನು ಹಳ್ಳಿಗರು ಮೋಘ ಗರ್ಭ ಕಟ್ಟುವುದು ಎಂದು ಹೇಳುತ್ತಾರೆ. ಇದರ ಕಪ್ಪಿನ ಸಾಂದ್ರತೆ ಮುಂದಿನ ಮಳೆಯ ಪ್ರಮಾಣದ ಅಂದಾಜಿಕೆ.
ಕರಿ ಮೋಡ ಮದಗಜದಂತೆ ಮಲೆಯಬೇಕು
ಮೋಡ ಮಳೆದೇವಿಯ ಗುಡಿ. ಇವಳು ಗುಡಿಬಿಟ್ಟರೆ ಮಳೆ. ಇವಳು ಗುಡಿಬಿಡಲೆಂದೇ ಜನ ಪ್ರಾರ್ಥಿಸುತ್ತಾರೆ. ಬಿಳಿಮೋಡ ಕಂಡರೆ ಕರಿಯಾಗು ಎಂದು ಹೃದಯದಲ್ಲಿ ಕರೆ ಕೊಡುತ್ತಾರೆ. ಕರಿ ಮೋಡ ಮದಗಜದಂತೆ ಮಲೆಯಬೇಕು. ಹೀಗೆ ಮಲೆತದ್ದೆ ಮಳೆ ಮುಗಿಲು. ಮೋಡ ಮಳೆಯ ಬಿತ್ತಿದ ಮೇಲೆ ರೈತ ನೇಗಿಲು ಹಿಡಿಯುತ್ತಾನೆ. ನೇಗಿಲು ನೆಲವನ್ನು ಹೂ ಮಾಡುವುದರೊಂದಿಗೆ ಆರಂಬ ಆರಂಭವಾಗುತ್ತದೆ.
ಸ್ತ್ರೀ- ಪುರುಷರಿಬ್ಬರ ಬಯಕೆಗಳಿಗೆ ರಾಗ ತುಂಬುವವಳು ಮಲ್ಲಿಗಮ್ಮ
ಪರಿಮಳದ ರಾಣಿ ಮಲ್ಲಿಗಮ್ಮ ಬರುವುದು ಬೇಸಗೆಯಲ್ಲಿ. ಬೇಸಗೆಯಲ್ಲಿ ಮಳೆಯಾದರೆ ಇವಳ ವೈಭವ, ಸಮೃದ್ಧಿ ಇಮ್ಮಡಿ. ಸ್ತ್ರೀ- ಪುರುಷರಿಬ್ಬರ ಬಯಕೆಗಳಿಗೆ ರಾಗ ತುಂಬುವವಳು ಮಲ್ಲಿಗಮ್ಮ. ಇವಳ ಪರಿಮಳ ಮುಡಿದವರತ್ತ ಕಣ್ಮನಗಳನ್ನು ಸೆಳೆಯುತ್ತದೆ. ಮುಡಿದವರಲ್ಲಿ ಆತ್ಮೀಯತೆ ಹುಟ್ಟಿಸುವ ಹುವ್ವೆಂದರೆ ಮಲ್ಲಿಗೆಯೆ.
ಪರಿಮಳದಲ್ಲಿ ತೊಯ್ದು ತಣಿಯುವ ಮಳೆ
ಮಲ್ಲಿಗೆ ಹುವ್ವಿನ ಮೇಲೆ ಬಿದ್ದ ಮಳೆ ಹನಿಯೂ ಈ ಪರಿಮಳದಲ್ಲಿ ತೊಯ್ದು ತಣಿಯುತ್ತದೆ. ಮಲ್ಲಿಗೆ ಪ್ರಕೃತಿ ಕೊಟ್ಟ ಮಧುರ ಪರಿಮಳದ ವರ. ಈ ವರವನ್ನು ಪಡೆಯಲು ಬಡವಿ ಸಿರಿವಂತೆಯರೂ ಹಂಬಲಿಸುತ್ತಾರೆ. ಹಾಗೆಯೆ ಸಂಪ್ರದಾಯ ನಿಷ್ಠ ವಿಧವೆಯರೂ ಇದರ ಆಕರ್ಷಣೆಯನ್ನು ಕಳೆದುಕೊಂಡಿರುವುದಿಲ್ಲ.
ಮುಡಿದಂತೆ ಸಂಭ್ರಮಿಸಿ, ಥಟ್ಟನೆ ತೆಗೆದು ಬಿಡುತ್ತಾರೆ
ಇಂಥವರು ಮಾಲೆ, ದಂಡೆ ಕಟ್ಟುವಾಗ ಮುಡಿಯದಿದ್ದರೂ ಅತ್ತಿತ್ತ ನೋಡಿ ಗಮನಿಸುವವರು ಯಾರೂ ಇಲ್ಲವೆಂದು ಖಾತ್ರಿಯಾಗುತ್ತಲೆ ಅದನ್ನು ಮುಡಿಯವರೆಗೆ ಒಯ್ದು, ಮುಡಿದಂತೆ ಸಂಭ್ರಮಿಸಿ, ಥಟ್ಟನೆ ತೆಗೆದು ಬಿಡುತ್ತಾರೆ. ವಿಧವೆಯರಿಗೂ ಇಂಥ ಮರೆಯ ಸುಖ ಕೊಡುವ ಏಕೈಕ ಹುವ್ವೆಂದರೆ ಮಲ್ಲಿಗೆಯೇ.
ಹೊಂಬಿಸಿಲಿನ ಸಂಜೆ ರಾಗರತಿಯ ಭಾವಗೀತೆ
ಭರಣಿ ಮಳೆಯಾದರೆ ಅರಳುವ ಮಣ್ಣಿನ ವಾಸನೆಯೊಂದಿಗೆ ಇಳಿಯುವ ತಂಪಿಗೆ ಮಲ್ಲಿಗೆ ಕಂಪು ಕೊಡುತ್ತದೆ. ಇಂಥ ಹೊಂಬಿಸಿಲಿನ ಸಂಜೆ ರಾಗರತಿಯ ಭಾವಗೀತೆ. ಈ ಭಾವಗೀತೆಯನ್ನು ಎದೆಯ ಕಿವಿಯಿಂದ ಆಲಿಸಬೇಕು. ಆಲಿಸುವ ಹೃದಯ ಮೋಡ, ಮಳೆ, ಮಲ್ಲಿಗೆ, ಮಣ್ಣುಗಳನ್ನು ಆರಾಧಿಸತೊಡಗುತ್ತದೆ. ಆಗ ಉರಿಬಿಸಿಲ ಬೇಸಗೆ ಹಿತವಾಗುವುದು.
ಬೇಸಗೆ ಮಳೆಯಿಂದ ಬಿಸಿಲ ಹೊಳೆ ತಂಪಾಗುತ್ತದೆ. ಈ ತಂಪಿನಲ್ಲಿ ಬೆಳೆ ಸಮೃದ್ಧಿಯ ಕನಸುಗಳು ಮೂಡುತ್ತವೆ. ಪ್ರೇಮಿಗಳ ಮುನಿಸನ್ನು ಮಲ್ಲಿಗೆ ಪರಿಮಳ ತೊಳೆಯುತ್ತದೆ.
ಸ್ವರ್ಗ ಬಾರೆಂದರೂ ಯಾರೂ ಹೋಗಲಾರರು
ಸಂಜೆ ಅಂಗಳಕ್ಕೆ ನೀರು ಚುಮುಕಿಸಿ, ಅದರ ಹಸಿ ಆರುವ ಮೊದಲೆ ಚಾಪೆ ಹಾಸಿ ಮಲ್ಲಿಗೆ ಮೊಗ್ಗು ಸುರುವಿಕೊಂಡು ಮಾಲೆ ಕಟ್ಟುತ್ತ ಕೂರುವ ಹೆಂಗೆಳೆಯರು, ತಾವೂ ಕಟ್ಟುತ್ತೇವೆಂದು ಬರುವ ಮಕ್ಕಳಿಗೆ ಕಾಯಿ ಮೊಗ್ಗುಗಳನ್ನು ಆರಿಸಿಕೊಟ್ಟು, ತುಂಡು ದಾರವನ್ನು ಕೈಗಿತ್ತು ಅವು ಹಾಕುವ ತಪ್ಪು ಗಂಟುಗಳನ್ನು ನೋಡುತ್ತ, ಅವು ಮಾಡುವ ವ್ಯರ್ಥ ಸಾಹಸಗಳಿಗೆ ಮುದಗೊಳ್ಳುತ್ತ ಹಗಲಿನ ಶ್ರಮವನ್ನು ಮರೆಯುವ ಸಮಯದಲ್ಲಿ ಸ್ವರ್ಗ...
ದ್ವೇಷ, ಹಿಂಸೆಗಳ ಹುಟ್ಟನ್ನಡಗಿಸುತ್ತದೆ
ಮೋಡ, ಮಳೆ, ನೆಲ, ಜನಜೀವನ ಒಂದೊಂದು ಒಂದೊಂದು ಲೋಕವಲ್ಲ. ಒಂದೇ ಬದುಕಿನ ಜಾಲ. ನಿಸರ್ಗ ಇವುಗಳನ್ನು ಸಿಂಗರಿಸಿರುತ್ತದೆ. ಇಲ್ಲಿ ಪ್ರೀತಿ ಘಮಘಮಾಡಿಸುತ್ತಿರುತ್ತದೆ. ಈ ಘಮಲನ್ನು ಅನುಭವಿಸಿ, ಸ್ಮೃತಿಯಲ್ಲಿ ಉಳಿಸಿಕೊಂಡರೆ ಅಕಾರಣ ಪ್ರೀತಿ ಆವಿರ್ಭವಿಸಿ ದ್ವೇಷ, ಹಿಂಸೆಗಳ ಹುಟ್ಟನ್ನಡಗಿಸುತ್ತದೆ.
rain jasmine sa raghunatha literature kannada ಮಳೆ ಸ ರಘುನಾಥ ಸಾಹಿತ್ಯ ಕನ್ನಡ
How Jasmine and rain how close to one another, here is an article by Oneindia Kannada columnist Sa Raghunatha, he narrates the beauty of jasmine flower and rain.
ಜಿಲ್ಲೆಯಲ್ಲಿ ಅನಧಿಕೃತ ಮರಳುಗಾರಿಕೆ ಹಾಗೂ ಕಲ್ಲು: ಮರಳು, ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಿ - cut sand and stone mining | Vijaya Karnataka
cut sand and stone mining
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮರಳು ಗಣಿಗಾರಿಕೆ ಹಾಗೂ ಕಲ್ಲು ಗಣಿಗಾರಿಕೆ ಸಂಬಂಧಿಸಿದಂತೆ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯಲ್ಲಿ ದಾಸ್ತಾನಿರುವ ಮರಳನ್ನು ಸರಕಾರಿ ದರದಂತೆ ಜನತಾ ಮನೆಗಳಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಸರಕಾರದ ಎಸ್‌ಆರ್‌ಪಿ ದರ ಪ್ರತಿ ಟನ್‌ಗೆ 900 ರೂ. ನಿಗದಿಯಾಗಿದೆ. ಈ ದರ ಬಡವರಿಗೆ ದುಬಾರಿಯಾಗಲಿದೆ ಎಂಬ ದೂರುಗಳಿವೆ. ಈ ಕುರಿತಂತೆ ಉಪಮುಖ್ಯಮಂತ್ರಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬುಧವಾರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಚರ್ಚಿಸಿ ಕಡಿಮೆ ಹಾಗೂ ಸರಳವಾಗಿ ಬಡವರಿಗೆ ಮರಳು ವಿತರಣೆಗೆ ನಿರ್ಣಯ ಕೈಗೊಳ್ಳಲಾಗುವುದೆಂದರು.
ಗಣಿ ಇಲಾಖೆಯಿಂದ ಗುರುತಿಸಲಾದ ಅಧಿಕೃತ ಮರಳು ಬ್ಲಾಕ್‌ಗಳ ಹೊರತಾಗಿಯೂ ಜಿಲ್ಲೆಯ ಕೆಲವೆಡೆ ಸಣ್ಣ ಸಣ್ಣ ಮರಳು ಬ್ಲಾಕ್‌ಗಳಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇಂತಹ ಬ್ಲಾಕ್‌ಗಳಿಗೆ ಭೇಟಿ ನೀಡಿ ಇದು ಕಟ್ಟಡ ನಿರ್ಮಾಣಕ್ಕೆ ಯೋಗ್ಯವೇ ಎಂದು ಪರಿಶೀಲಿಸಿ ಯೋಗ್ಯವೆನಿಸಿದರೆ ನಿರ್ದಿಷ್ಟ ದರದಂತೆ ವ್ಯವಸ್ಥಿತವಾಗಿ ಮರಳು ವಿತರಣೆಗೆ ಜಿಲ್ಲಾ ಹಂತದಲ್ಲಿ ಮರಳಿನ ಸಮಸ್ಯ...
ಹಾನಗಲ್ಲ ಶಾಸಕ ಸಿ.ಎಂ.ಉದಾಸಿ ಅವರು ಮಾತನಾಡಿ, ಜನತಾ ಮನೆಗಳು, ಸಣ್ಣ ಸಣ್ಣ ಗುಡಿ ನಿರ್ಮಾಣ ಕೆಲಸಕ್ಕೆ ಮರಳು ಸಿಗದೆ ತೊಂದರೆಯಾಗಿದೆ. ಕೆಲ ಹಳ್ಳ ಹಾಗೂ ನದಿ ಪಾತ್ರದಲ್ಲಿ ಟ್ರ್ಯಾಕ್ಟರ್‌ ಮೂಲಕ ಅನಧಿಕೃತವಾಗಿ ಮರಳು ಸಾಗಾಣಿಕೆ ಮಾಡುತ್ತಿರುವ ದೂರುಗಳು ಬರುತ್ತಿವೆ. ಕೆಲ ಅಧಿಕಾರಿಗಳೇ ಇದಕ್ಕೆ ಸಹಕರಿಸುತ್ತಿರುವ ದೂರುಗಳಿವೆ. ಈ ಕುರಿತಂತೆ ಕಡಿವಾಣ ಹಾಕಬೇಕು. ಎಲ್ಲೆಲ್ಲಿ ಗಣಿ ಮತ್ತು ಭೂ ವಿಜ್ಞಾನ ಇ...
ಈ ಕುರಿತಂತೆ ಸ್ಪಷ್ಟನೆ ನೀಡಿದ ಸಚಿವರು, ಬೆಂಗಳೂರಿನಲ್ಲಿ ಬುಧವಾರ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ರಾಜ್ಯಾದ್ಯಂತ ಮರಳು ವಿತರಣೆಗೆ ಒಂದು ಸ್ಪಷ್ಟವಾದ ನೀತಿ ರೂಪಿಸಲಾಗುವುದು. ಈಗಾಗಲೇ ದೇಶದ ಐದಾರು ರಾಜ್ಯಗಳಿಗೆ ಅಧಿಕಾರಿಗಳ ತಂಡ ಕಳುಹಿಸಿ ಅಧ್ಯಯನ ಮಾಡಲಾಗಿದೆ. ಪ್ರಸ್ತುತ ತೆಲಂಗಾಣ ಮಾದರಿ ಉತ್ತಮ ಎಂದು ಭಾವಿಸಲಾಗಿದೆ. ನಾಳೆ ಕುರಿತಂತೆ ಅಂತಿಮ ತೀರ್ಮಾನ ತೆ...
ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮಾತನಾಡಿ, ಪರ್ಮಿಟ್‌ ಪಡೆದ ಪ್ರಮಾಣಕ್ಕೂ , ಟ್ರಕ್‌ಗಳಲ್ಲಿ ತುಂಬಿ ಪ್ರಯಾಣಿಸುವ ಪ್ರಮಾಣಕ್ಕೂ ವ್ಯತ್ಯಯ ಕಂಡುಬಂದಿರುವುದರಿಂದ ವೇಬ್ರಿಜ್‌ ಮೂಲಕವೇ ಅಳತೆ ಮಾಡುವುದು, ಟ್ರ್ಯಾಕ್ಟರ್‌ ಅಥವಾ ಲಾರಿಗಳಿಗೆ ಜಿ.ಪಿ.ಎಸ್‌. ಟ್ರ್ಯಾಕಿಂಗ್‌ ವ್ಯವಸ್ತೆ ಮಾಡುವುದು, ಜಿ.ಪಿ.ಎಸ್‌. ತೆಗೆದು ಮರಳು ಸಾಗಾಣಿಕೆ ಮಾಡುವ ವಾಹನಗಳನ್ನು ನಿರ್ಬಂಧಿಸುವುದು, ಈ ಕುರಿತಂತೆ ಕೇಂದ್ರಿಕೃ...
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪಲತಾ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಒಟ್ಟು 18 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ ಒಂದು ಬ್ಲಾಕಿನ ಗುತ್ತಿಗೆ ಮಂಜೂರಾಗಿಲ್ಲ. ಉಳಿದಂತೆ 17 ಬ್ಲಾಕಿನಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಕೆಲ ದೂರುಗಳ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಮರಳು ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. 17 ಮರಳು ಬ್ಲಾಕಿನ ಸ್ಟಾಕ್‌ ಯಾರ್ಡ್‌...
ಜಿಲ್ಲೆಯಲ್ಲಿ 39 ಕಲ್ಲುಗಣಿ ಗುತ್ತಿಗೆಗಳು ಕಾರ್ಯನಿರ್ವಹಿಸುತ್ತಿವೆ, 32 ಕಲ್ಲುಗಣಿಗಳ ಗುತ್ತಿಗೆ ಅವಧಿ ಮುಗಿದಿದೆ. ಕಲ್ಲು ಪುಡಿ ಘಟಕಗಳ ಆರಂಭಿಸುವ ಕುರಿತಂತೆ ಜಿಲ್ಲಾ ಸಮಿತಿ 92 ಅರ್ಜಿಗಳನ್ನು ಸ್ವೀಕರಿಸಿದೆ. ಬಿ1 ಅಡಿ 39, ಸಿ ಅಡಿ 29, ಡಿ ಅಡಿ 21 ಅರ್ಜಿ ಸ್ವೀಕರಿಸಿದೆ. ಕ್ಲಾಜ್‌ 7ರಡಿ ಎಂಟು ಅರ್ಜಿಗಳಿಗೆ ಅನುಮತಿ ನೀಡಲಾಗಿದೆ ಎಂದು ವಿವರಿಸಿದರು.
2018 ರಿಂದ ಈವರೆಗೆ 41 ಮೊಕದ್ದಮೆಯನ್ನು ದಾಖಲಿಸಿ ರೂ.77.31 ಲಕ್ಷ ದಂಡ ವಸೂಲಿ ಮಾಡಲಾಗಿದೆ. ವಾರ್ಷಿಕವಾಗಿ 2016ರಿಂದ ಈವರೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ ಸಂಗ್ರಹಿಸಿದ ಮೊತ್ತ ರೂ.3.33 ಕೋಟಿ ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.
ಶಿಗ್ಗಾಂವ, ಸವಣೂರ ಭಾಗದಲ್ಲಿ ಪಾರಂಪರಿಕವಾಗಿ ಸಮುದಾಯವೊಂದು ಕಲ್ಲು ಕೆಲಸದಲ್ಲಿ ತೊಡಗಿಕೊಂಡಿದೆ. ಇವರನ್ನು ಒಕ್ಕಲೆಬ್ಬಿಸುವ ಕುರಿತಂತೆ ಮಾಹಿತಿ ಬಂದಿದೆ. ಈ ಕುರಿತಂತೆ ಅಧಿಕಾರಿಗಳಿಗೆ ಸಚಿವರು ಸ್ಪಷ್ಟನೆ ನೀಡುವಂತೆ ಸೂಚಿಸಿದರು.
ಪಾರಂಪರಿಕವಾಗಿ ಕಲ್ಲು ಕೆಲಸಮಾಡುವ ಕುಟುಂಬಗಳು ಈಗ ಇಲ್ಲವಾಗಿದೆ. ಈ ನೆಪದಲ್ಲಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆಮಾಡುತ್ತಿರುವ ಕುರಿತಂತೆ ಪೋಟೋ, ವಿಡಿಯೋ ಸಹಿತ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದೇವರಾಜ್‌, ಸವಣೂರ ಉಪವಿಭಾಗಾಧಿಕಾರಿ ಹರ್ಷಲ್‌ ನಾರಾಯಣ ಭೋಯಾರ್‌, ವಿವಿಧ ತಾಲೂಕಿನ ತಹಶೀಲ್ದಾರ ಉಪಸ್ಥಿತರಿದ್ದರು.
ಅಧಿಕಾರಿ ತರಾಟೆಗೆ: ಏನ್ರೀ ಅಧಿಕಾರಿಗಳೇ ಜಿಲ್ಲೆಯಲ್ಲಿ ನಿತ್ಯ ನೂರಾರು ಲಾರಿ ಮರಳು ಯಾವುದೇ ಪರ್ಮಿಟ್‌ ಇಲ್ಲದೇ ಸಾಗಣೆಯಾಗುತ್ತಿದೆ. ಇಲ್ಲಿನ ಮರಳು ಮಾಫಿಯಾ ರಾಜ್ಯದ ಗಮನ ಸೆಳೆದಿದೆ ಎಂದು ಮಾಧ್ಯಮದವರೇ ಹೇಳುತ್ತಿದ್ದಾರೆ. ಇದಕ್ಕೆ ನಿಮ್ಮ ಉತ್ತರ ಏನು? ಎಂದು ಸಚಿವರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಸುದ್ದಿಗಾರರ ಸತತ ಪ್ರಶ್ನೆಗೆ ದಂಗಾದ ಸಚಿವ ರಾಜಶೇಖರ ಪಾಟೀಲ, ಅಲ್ರೀ ಮೇಡಂ ನೀವು ಸಭೆಯಲ್ಲಿ ಎಲ್ಲವೂ ಸರಿಯಾಗಿದೆ. ಮರಳಿನ ಸಮಸ್ಯೆ ಇದೆ. ಬ್ಲಾಕ್‌ಯಾರ್ಡ್‌ನಲ್ಲಿರುವ ಮರಳನ್ನು ಅತಿ ಶೀಘ್ರದಲ್ಲೇ ವಿತರಣೆಗೆ ಕ್ರಮ ಕೈಗೊಳ್ಳುವ ಬಗ್ಗೆ ಹೇಳಿದ್ದೀರಿ.
ಮರಳು ಮಾಫಿಯಾ ಬಗ್ಗೆ ಮಾಧ್ಯಮದವರಿಗೆ ಇರುವ ಮಾಹಿತಿ ನಿಮಗೆ ಇಲ್ಲವೇ? ತಿಳಿದಿದೆ ಎಂದಾದರೆ ಏಕೆ ಕ್ರಮ ಕೈಗೊಂಡಿಲ್ಲ? ಎಂದು ತರಾಟೆಗೆ ತೆಗೆದುಕೊಂಡರು. ಮುಂದಿನ ಸಲ ಜಿಲ್ಲೆಗೆ ಭೇಟಿ ನೀಡಿದ ವೇಳೆ ಈ ಪ್ರಶ್ನೆಗಳು ಪುನರಾವರ್ತನೆಗೊಂಡಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಸಭೆಯಲ್ಲಿ ವ್ಯಕ್ತವಾಗಿರುವ ಮಾಫಿಯಾ ಬಗ್ಗೆ ತ್ವರಿತ ಕ್ರಮ ಕೈಗೊಂಡು ವರದಿ ಮಾಡುವಂತೆಯೂ ಸೂಚಿಸಿದರು.
Web Title cut sand and stone mining
Keywords:ಹಾವೇರಿ|ಜಿಲ್ಲೆಯಲ್ಲಿ ಅನಧಿಕೃತ ಮರಳುಗಾರಿಕೆ ಹಾಗೂ ಕಲ್ಲು|ಗಣಿಗಾರಿಕೆಗೆ ಕಡಿವಾಣ ಹಾಕುವ ಮೂಲಕ|ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ|ಇಲಾಖೆ ಸಚಿವ ರಾಜಶೇಖರ ಬಿ.ಪಾಟೀಲ ಸೂಚಿಸಿದರು
ಕೆಎಸ್ಸಾರ್ಟಿಸಿ ರೆಸ್ಟ್‌ರೂಂನಲ್ಲಿ ಸಿಬ್ಬಂದಿ ಮೃತ್ಯು ·
ಬೆಳ್ತಂಗಡಿ: ಕರ್ತವ್ಯ ಮುಗಿಸಿ ಬಂದು ರಾತ್ರಿ ಧರ್ಮಸ್ಥಳ ಕೆಎಸ್ಸಾರ್ಟಿಸಿ ಘಟಕದ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದ ಸಿಬ್ಬಂದಿ ವಿಜಯಪುರದ ಸುರೇಶ್ ಬಾಬು ಬಡಿಗೇರ್(30) ಎಂಬುವರು ಮೃತಪಟ್ಟಿದ್ದಾರೆ.
10 ವರ್ಷಗಳಿಂದ ಕೆಎಸ್ಸಾರ್ಟಿಸಿಯಲ್ಲಿ ಚಾಲಕ ಹಾಗೂ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಬಾಬು ಬಡಿಗೇರ್ ಹೊಸಪೇಟೆಯಿಂದ ಧರ್ಮಸ್ಥಳಕ್ಕೆ ಬರುವ ಬಸ್‌ನಲ್ಲಿ ಕರ್ತವ್ಯ ಮುಗಿಸಿ ಬಂದು ಭಾನುವಾರ ರಾತ್ರಿ 10ಕ್ಕೆ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದರು. ಆದರೆ ಬೆಳಗ್ಗೆ ಏಳದೇ ಇರುವುದನ್ನು ಕಂಡು ಇತರ ಸಿಬ್ಬಂದಿ ಎಬ್ಬಿಸಲೆತ್ನಿಸಿದಾಗ ಅವರು ಮೃತರಾಗಿರುವುದು ಬೆಳಕಿಗೆ ಬಂದಿದೆ.
ಘಟನೆ ಬಗ್ಗೆ ಧರ್ಮಸ್ಥಳ ಘಟಕ ವ್ಯವಸ್ಥಾಪಕ ಶಿವರಾಮ ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಸುರೇಶ್ ಬಾಬು ಬಡಿಗೇರ್ ಅವರಿಗೆ ಈ ಹಿಂದೆ ಹೃದಯದ ಶಸ್ತ್ರಚಿಕಿತ್ಸೆ ನಡೆದಿದ್ದು, ಹೀಗಾಗಿ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಜೆ ನೀಡದ ಆರೋಪ
ಧರ್ಮಸ್ಥಳ ಘಟಕದಲ್ಲಿ ಕಳೆದ 10 ದಿನಗಳ ಹಿಂದೆ ಇದೇ ರೀತಿ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದು, ಸಿಬ್ಬಂದಿಗೆ ಅನಾರೋಗ್ಯವಿದ್ದರೂ ರಜೆ ನೀಡದೆ ದುಡಿಸಲಾಗುತ್ತಿದೆ ಎಂದು ಬೆಳ್ತಂಗಡಿ ಸಿಐಟಿಯು ಆರೋಪಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಘಟಕ ವ್ಯವಸ್ಥಾಪಕರು, ಸಿಬ್ಬಂದಿಗೆ ಅಗತ್ಯ ರಜೆಗಳನ್ನು ನೀಡಲಾಗುತ್ತಿದೆ. ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
KSARTTC
Suresh Babu Badigar
ಸುರೇಶ್ ಬಾಬು ಬಡಿಗೇರ್
ಕೃಷಿ ವಿಶ್ವವಿದ್ಯಾಲಯದಲ್ಲಿ ಯುವಜನೋತ್ಸವ
ವಿಜಯಪುರ: ಇಲ್ಲಿನ ನಗರದ ಹೊರವಲಯದಲ್ಲಿರುವ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಧಾರವಾಡದ ಕೃಷಿ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನ.22ರಿಂದ 24ರವರೆಗೆ 30ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಯುವಜನೋತ್ಸವ ಪ್ರಚಾರ ಸಮಿತಿ...
ಲಡಾಯಿ ಪ್ರಕಾಶನ: August 2012
ಬೊಳುವಾರರಿಗೆ ಒ೦ದು ಪತ್ರ
- ವಿ ಎನ್ ಲಕ್ಷ್ಮಿನಾರಾಯಣ
ಉಗ್ರರಿಗೆ ಶಿಕ್ಷೆ: ದ್ವಂದ್ವ ಬೇಡ
vartabharati editorial
ಬುಧವಾರ ಎರಡು ಮಹತ್ವದ ತೀರ್ಪುಗಳು ಹೊರಬಿದ್ದಿವೆ. ಒಂದು ವಿದೇಶಿ ಉಗ್ರನಿಗೆ ಸಂಬಂಧಿಸಿದ ತೀರ್ಪು. ಇನ್ನೊಂದು ಸ್ವದೇಶಿ ಉಗ್ರರಿಗೆ ಸಂಬಂಧಿಸಿದ ತೀರ್ಪು. ಮುಂಬೈ ದಾಳಿಗೆ ಸಂಬಂಧ ಪಟ್ಟ ಪ್ರಕರಣದಲ್ಲಿ ಉಗ್ರ ಅಜ್ಮಲ್ ಕಸಬ್‌ನಿಗೆ ಸುಪ್ರೀಂಕೋರ್ಟ್ ಮರಣದಂಡನೆಯನ್ನು ಖಾಯಂಗೊಳಿಸಿದೆ. ಇದೇ ಸಂದರ್ಭದಲ್ಲಿ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಪಟ್ಟಂತೆ, ಒಬ್ಬ ಮಾಜಿ ಸಚಿವೆ, ಹಾಗೆಯೇ ಇನ್ನೊಬ್ಬ ಸಂಘಪರಿವಾರದ...
ಸಂಚಿನ ಹಿಂದೆ ಪಾಕಿಸ್ತಾನ ಇದೆಯೆನ್ನುವುದನ್ನು ಭಾರತ ವಾದಿಸುತ್ತಾ ಬಂದಿದೆಯಾದರೂ, ಆ ದೇಶದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವಲ್ಲಿ ಭಾರತ ವಿಫಲವಾಗಿದೆ. ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ದ್ವಂದ್ವ ನೀತಿಯನ್ನು ಅನುಸರಿಸುತ್ತಾ ಬಂದಿದೆ. ಆದುದರಿಂದ ನಾವು ಕಸಬ್ ಎಂಬ ಸೂತ್ರದ ಗೊಂಬೆಯನ್ನು ಗಲ್ಲಿಗೇರಿಸಿ ಸಂತೃಪ್ತಿ ಪಡಬೇಕಾದಂತಹ ಸನ್ನಿವೇಶದಲ್ಲಿ ಬಂದು ನಿಂತಿದ್...
ಅದಕ್ಕೆ ಪೂರಕವಾಗಿ ನ್ಯಾಯಾಲಯದ ತೀರ್ಪು ಹೊರ ಬಿದ್ದಿದೆ. ಆದರೆ ಬರೇ ಕಸಬ್‌ನನ್ನು ಗಲ್ಲಿಗೇರಿಸಿದಾಕ್ಷಣ ಮುಂಬೈಯ ನಾಶ, ನಷ್ಟಕ್ಕೆ ನ್ಯಾಯ ದೊರಕಿದಂತಾಗುತ್ತದೆಯೇ? ಎಂಬ ಪ್ರಶ್ನೆ ಇನ್ನೂ ಉತ್ತರವಿಲ್ಲದೆ ಬಿದ್ದು ಕೊಂಡಿದೆ. ಮುಂಬೈ ದಾಳಿಯ ಕುರಿತಂತೆ ಒಂದು ಗಂಭೀರ ತನಿಖೆ ನಡೆಸಿ, ಅದರ ಹಿನ್ನೆಲೆ ಮುನ್ನೆಲೆಗಳನ್ನು ಹೊರತೆಗೆಯುವ ಅಗತ್ಯವಿದೆ ಯಾದರೂ, ಈ ದೇಶದ ಮುಖಂಡರು ಬರೇ 'ಪಾಕಿಸ್ತಾನ'ದ ಹೆಸರನ್ನು...
ಒಂದು ರೀತಿಯಲ್ಲಿ ಮುಂಬೈ ದಾಳಿ ಪ್ರಕರಣಕ್ಕಿಂತಲೂ ಗಂಭೀರವಾದುದು ಗುಜರಾತ್ ಹತ್ಯಾಕಾಂಡ ಪ್ರಕರಣ. ಮುಂಬೈ ದಾಳಿಯಲ್ಲಿ ಸುಮಾರು 170 ಮಂದಿ ಮೃತಪಟ್ಟಿದ್ದರೆ ಗುಜರಾತ್ ಹತ್ಯಾಕಾಂಡದಲ್ಲಿ 2000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.ಈ ಹತ್ಯಾಕಾಂಡದ ಒಂದು ಪ್ರಮುಖ ಪ್ರಕರಣವಾಗಿರುವ ನರೋಡಾ ಪಾಟಿಯಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬುಧವಾರ ನ್ಯಾಯಾಲಯ ತನ್ನ ತೀರ್ಪನ್ನು ನೀಡಿದೆ. ಮುಂಬೈ ದಾಳಿಯನ್ನು ನಡೆಸ...
ಆದರೆ, ಗುಜರಾತ್ ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಉಗ್ರರು ಪಾಕಿಸ್ತಾನೀಯರಲ್ಲ. ಅವರು ತಮ್ಮನ್ನು ತಾವು ಭಾರತೀಯರೆಂದು ಕರೆಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ನರೋಡಾ ಪಾಟಿಯಾ ಹತ್ಯಾಕಾಂಡದ ನೇತೃತ್ವವನ್ನು ವಹಿಸಿದಾಕೆ ಒಂದು ರಾಜ್ಯದ ಮಾಜಿ ಸಚಿವೆ. ಗುಜರಾತ್‌ನ ಸಚಿವೆಯಾಗಿ ಒಂದು ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದಾರೆ. ಹಾಗೆಯೇ, ವಿಶ್ವ ಹಿಂದೂ ಪರಿಷತ್‌ನ ಮುಖಂಡ ಬಾಬು ಬಜರಂಗಿಯೂ ತನ್ನನ್ನು...
ಅಂದರೆ ಇವರೆಲ್ಲರೂ ಒಂದು ರಾಜ್ಯದ ಸರಕಾರದ ಭಾಗವಾಗಿ, ಅದರ ನೆರಳಲ್ಲಿ ನಿಂತು ಈ ಹತ್ಯಾಕಾಂಡವನ್ನು ನಡೆಸಿದ್ದಾರೆ. ಈ ಕಾರಣಕ್ಕೆ ಮುಂಬೈ ದಾಳಿಗಿಂತಲೂ ಗುಜರಾತ್ ಹತ್ಯಾಕಾಂಡ ದೇಶಕ್ಕೆ ಹೆಚ್ಚು ಅವಘಡವನ್ನು ತರಬಲ್ಲುದು. ಅಥವಾ ತಂದಿದೆ. ಇಂದಿಗೂ ಮುಂಬೈ ದಾಳಿಯಲ್ಲಿ ಕಗ್ಗೊಲೆ ನಡೆಸಿದವರು ತಮ್ಮನ್ನು ತಾವು ಸಮರ್ಥಿಸಿಕೊಂಡಿಲ್ಲ ಮತ್ತು ಜಾಗತಿಕವಾಗಿ ಅವರು ಉಗ್ರರೆಂದೇ ಗುರುತಿಸಲ್ಪಡುತ್ತಿದ್ದಾರೆ. ಆದರೆ...
ಬಿಳಿಗುಲಾಬಿ
ನನ್ನೆಲ್ಲಾ ಕನಸುಗಳಲ್ಲಿ ನಾನರಸುತ್ತಿದ್ದೆ
ಹೋಲಿಕೆಯೇ ಇರದ ಒಂದು ಬಿಳಿಗುಲಾಬಿಯನ್ನು
ಆ ಅದೃಶ್ಯ ಹೂವಿನ ಗಮಲನ್ನು
ಹಿಂಬಾಲಿಸುತ್ತಾ ಹೋದೆ
ಜಾಗರ, ನಿದ್ದೆ, ಸ್ವಪ್ನಗಳಲ್ಲಿ.
ಕೊನೆಗೊಮ್ಮೆ ನಿದ್ದೆಯೊಳಗಿನ ನಿದ್ದೆಯಲ್ಲಿ
ಸ್ಪಪ್ನದೊಳಗಿನ ಸ್ಪಪ್ನದಲ್ಲಿ
ಅದು ದೊರಕಿತು
ಬೇಟೆ ಕಂಡ ಬರ್ಬರ ಹಸಿವಿನ ಆದಿಮ ಬೇಟೆಕಾರನಂತೆ
ಆತುರಾತುರವಾಗಿ ಅದನ್ನು ಕೀಳಹೊರಟಾಗ
ನಾನದನ್ನು ಕೀಳುವ ಮುನ್ನವೇ
ಅದು ನನ್ನ ಪೂರ್ತಿ ನುಂಗಿಬಿಟ್ಟಿತು
ಶಿವಪ್ರಕಾಶ ಈಗಿಲ್ಲ ಮೂಲೋಕದಲ್ಲೆಲ್ಲಿಯೂ
ಅವನೀಗ ಒಂದು ಬಿಳಿ ಗುಲಾಬಿ
ನಿದ್ದೆಯೊಳಗಿನ ನಿದ್ದೆಯೊಳಗಿನ
ಸ್ಪಪ್ನದೊಳಗಿನ ಸ್ಪಪ್ನದಲ್ಲಿ..
- ಎಚ್.ಎಸ್.ಶಿವಪ್ರಕಾಶ್
'ಸ್ವರ್ಗಕ್ಕೆ ಬನ್ನಿ'-ಅಂತ ಡಾ ವೈ ಎಸ್ ಮೋಹನ್ ಕುಮಾರ್ ಕರೆ ಮಾಡಿದಾಗ ನನಗೆ ಆಶ್ಚರ್ಯವಾಗಿತ್ತು. ಕಾಸರಗೋಡಿನ ಪಾತಾಳ ಎನ್ನಬಹುದಾದಊರೊಂದರಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಮೋಹನ್ ಕುಮಾರ್ ನನಗಾದ ಆಶ್ಚರ್ಯವನ್ನುಕಂಡುಕೊಂಡರೇನೋ..?. 'ಸ್ವರ್ಗ' ಎನ್ನುವುದು ನಮ್ಮ ಊರಿನ ಹೆಸರು. ಖಂಡಿತಾ ಬನ್ನಿ ಎಂದರು.ನಾನೂ ಹಾಗೂ ಕ್ಯಾಮೆರಾಮನ್ ಅಬ್ದುಲ್ಹಮೀದ್, ಶ್ರೀಪಡ್ರೆಯವರೊಂದಿಗೆ ಕಾಡುಕಣಿವೆ ಬೆಟ್ಟ ಗುಡ್ಡ ...
ಆಗ ಬಿಚ್ಚಿಕೊಳ್ಳಲುಆರಂಭಿಸಿದ್ದು ನರಕ. ಗೇರು ತೋಟದ ನಡುವೆ ಇದ್ದ ಒಂದೊಂದೇ ಮನೆಯ ಬಾಗಿಲು ಬಡಿಯುತ್ತಾ ಹೋದಂತೆ ಇದು 'ಹಸಿರಿಲ್ಲದ, ಉಸಿರಿಲ್ಲದ, ಹೆಸರಿಲ್ಲದ ನರಕ..' ಎನ್ನುವಂತೆ ಆಯಿತು. ನಡೆಯಲಾಗದ, ತೆವಳಲೂ ಆಗದ ಮಕ್ಕಳು ಶೂನ್ಯ ದೃಷ್ಟಿಯಿಂದ ನಮ್ಮೆಡೆಗೆ ನೋಡುತ್ತಿದ್ದರು. ಇಪ್ಪತ್ತುದಾಟಿದವರೂ ಸಹಾ ಇನ್ನೂ ಹಸುಗೂಸುಗಳಂತೆ ಅಮ್ಮನನ್ನು ಆತುಕೊಂಡಿದ್ದರು. ಮುಖದ ಆಕಾರವೇ ಬದಲಾದಮಕ್ಕಳು ಉಸಿರು ಎಳೆ...
ಅದಾಗಿ 11 ವರ್ಷಗಳುಕಳೆದುಹೋಗಿದೆ. ಈ ಮಧ್ಯೆ ಸುಮಾರು ೧೬೦ ಸತ್ಯಶೋಧಕ ವರದಿಗಳು ಬಂದಿವೆ. ಸಾವಿರಾರು ಪ್ರತಿಭಟನೆಗಳುಜರುಗಿವೆ. ಹಲವರು ಸಾವನ್ನಪ್ಪಿದ್ದಾರೆ.ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಅದರ ಹೊಡೆತದಿಂದ ನರಳುತ್ತಿದ್ದಾರೆ. ಆದರೂ ಎಂಡೋಸಲ್ಫಾನ್ರುದ್ರನರ್ತನ ಮಾತ್ರ ನಿಂತಿಲ್ಲ. ' ನಮಗೆ ಪರಿಹಾರ ನೀಡಿ ಇಲ್ಲವೇ ದಯಾ ಮರಣ ಕೊಟ್ಟುಬಿಡಿ' ಎಂದು ಸಂತ್ರಸ್ತರು ಬರೆದ ಸಾವಿರಾರು ಅಂಚೆಕಾರ್ಡುಗಳು ವಿ...
'ಡರ್ಟಿ ಡಜನ್'ಎಂದು ಜಗತ್ತಿನ ಎಲ್ಲೆಡೆ ಮೂದಲಿಕೆಗೆ ಒಳಗಾದ ವಿಷ ಕುಟುಂಬದ ಸದಸ್ಯ ಈ ಎಂಡೋಸಲ್ಫಾನ್. ನಮಗೆಗೊತ್ತಿರುವುದು ಎಂಡೋಸಲ್ಫಾನ್ ಎಂಬ ಹೆಸರು ಮಾತ್ರ. ಆದರೆ ಈ ಕ್ರಿಮಿನಾಶಕಕ್ಕೆ ನೂರೆಂಟುಹೆಸರಿದೆ. 1950ರ ದಶಕದ ಆರಂಭದಲ್ಲಿ ಅಮೇರಿಕಾ ಹುಟ್ಟುಹಾಕಿದ ಈ ಕ್ರಿಮಿನಾಶಕವನ್ನು 1955ರಲ್ಲಿ ಬೇಯರ್ ಕ್ರಾಪ್ ಸೈನ್ಸ್ ಕಂಪನಿ ಕೈಗೆತ್ತಿಕೊಂಡದ್ದೇ ತಡ ಜಗತ್ತಿನ ಎಲ್ಲೆಡೆ ವ್ಯಾಪಿಸಿತು. ಕೃಷಿಕರುಎಲ್ಲ...
ಇದು ಜನರ ಮೇಲೆಮಾತ್ರವಲ್ಲದೆ ದಟ್ಟ ಅರಣ್ಯದಲ್ಲಿ ವನ್ಯಜೀವಿಗಳ ಮೇಲೆ, ಸಾಗರ ಹೊಕ್ಕು ಅಲ್ಲಿನಜಲರಾಶಿಯ ಮೇಲೆ ಪರಿಣಾಮ ಬೀರಲು ಆರಂಭಿಸಿತು. ಎಂಡೋಸಲ್ಫಾನ್ ಗುಣವೇ ಅಂತಹದ್ದು. ಅದು ಎಲ್ಲೆಂದರಲ್ಲಿ ಮನೆಯ ನೆಂಟನಂತೆಹೊಂದಿಕೊಂಡುಬಿಡುತ್ತದೆ, ಭೂಮಿಯಲ್ಲಿ ಸಲೀಸಾಗಿ ಹಿಂಗುತ್ತದೆ. ನೀರಿನಲ್ಲಿ ಸೇರಿಹೋಗುತ್ತದೆ. ಗಾಳಿಯಲ್ಲಿಆರಾಮವಾಗಿ ತೇಲುತ್ತದೆ. ದೂರದಲ್ಲಿ ಬರುವ ಮಳೆ ಮೋಡಗಳನ್ನು ಹೇಗೆ ರೈತರು ಕಂಡುಹಿ...
ಎಂಡೋಸಲ್ಫಾನ್ ಜಗತ್ತಿನಾದ್ಯಂತ ಬಳಕೆಯಲ್ಲಿದ್ದರೂ, ಭಾರತದಲ್ಲಿಯೂ ಸಾಕಷ್ಟು ವರ್ಷಗಳಿಂದ ಇದ್ದರೂಇದ್ದಕ್ಕಿದ್ದಂತೆ ಅದರ ಪರಿಣಾಮ ಕಾಸರಗೋಡು ಹಾಗೂ ಅಂತಹ ಪ್ರದೇಶಗಳಲ್ಲಿ ತೀವ್ರವಾಗಿ ಕಾಣಿಸಿಕೊಂಡಬಗ್ಗೆಯೂ ಸಾಕಷ್ಟು ಅಧ್ಯಯನಗಳು ಜರುಗಿದೆ. ಬಯಲ ಪ್ರದೇಶದಲ್ಲಿ ಎಂಡೋ ಸಿಂಪಡಿಸುವ ಕಡೆ ಇದು ನಿಧಾನ ವಿಷವಾದರೆ, ಒಂದು ಬಟ್ಟಲಿನಂತೆ ಇರುವ ಪಶ್ಚಿಮ ಘಟ್ಟಗಳ ಪ್ರಾಕೃತಿಕಸ್ವರೂಪವೇ ಎಂಡೋ ತಕ್ಷಣದ ಕೊಲೆಗಾರನಂ...
ಎಂಡೋಸಲ್ಫಾನ್ ದೊಡ್ಡ ಪೆಟ್ಟು ನೀಡಿರುವುದು ಭಾರತಕ್ಕೆ.ವ್ಯಂಗ್ಯವೆಂದರೆ ಎಂಡೋಸಲ್ಫಾನ್ ಗೆ ಜಾಗತಿಕ ನಿಷೇಧ ಹೇರಲು ಸಜ್ಜಾದಾಗ ಅದನ್ನು ವಿರೋಧಿಸಿದ್ದು ಭಾರತವೇ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 90ರ ದಶಕದವೇಳೆಗೆ ಇಡೀ ಜಗತ್ತು ವರ್ಷಕ್ಕೆ 12,800ಮೆಟ್ರಿಕ್ ಟನ್ ನ್ನಷ್ಟುಎಂಡೋಸಲ್ಫಾನ್ ಅನ್ನು ಕಬಳಿಸುತ್ತಿದೆ.ಕೃಷಿ ರಾಸಾಯನಿಕಕ್ಷೇತ್ರದಲ್ಲಿ ಎಂಡೋಸಲ್ಫಾನ್ ಜಗತ್ತಿನ ಏಳನೆಯ ಅತಿ ದೊಡ್ಡ ಕ್ರಿಮಿನಾ...
ಎಂಡೋಸಲ್ಫಾನ್ ಗೆ ಉರುಳುತ್ತಿರುವ ಜೀವಗಳನ್ನು ಶರದ್ ಪವಾರ್ ಅವರು ಕ್ರಿಕೆಟ್ ಅಂಕಣದಲ್ಲಿ ಬೀಳುತ್ತಿರುವ ವಿಕೆಟ್ ಗಳೇನೋ ಎನ್ನುವಸಂಭ್ರಮದಿಂದ ನೋಡುತ್ತಿರುವಾಗಲೇ 'ಹಿರೋಶಿಮಾ ಸಿಂಡ್ರೋಮ್' ತಲೆ ಎತ್ತಿದೆ. ಎಲ್ಲಿ ನಮಗೆ ಹುಟ್ಟುವ ಮಗು ಅಂಗವೈಕಲ್ಯ ಹೊಂದುತ್ತದೋ ಎನ್ನುವ ಕಾರಣಕ್ಕೇಗರ್ಭಪಾತ ಮಾಡಿಸಿಕೊಳ್ಳುವವರ ಸಂಖ್ಯೆ ಇನ್ನಿಲ್ಲದಂತೆ ಹೆಚ್ಚುತ್ತಿದೆ. ಎಂಡೋ ಪೀಡಿತ ಗ್ರಾಮಗಳ ಹೆಣ್ಣು ಮಕ್ಕಳಿಗೆ ಮದು...
ಸರ್ಕಾರ ತಾಯಿಯಂತೆ ಯೋಚಿಸಲಿ