text
stringlengths
0
61.5k
ಕೊಲ್ಲಂ ನಗರವು ಈ ಅಷ್ಟಮುಡಿ ಕೆರೆಗೆ ಪ್ರವೇಶ ಸ್ಥಳವಾಗಿದೆ. ಇಲ್ಲಿಂದ ಈ ಕೆರೆಯಲ್ಲಿ ಸುತ್ತಾಡಲು ಸಾಕಷ್ಟು ದೋಣಿಗಳು ಬಾಡಿಗೆಗೆಂದು ಪ್ರವಾಸಿಗರಿಗೆ ದೊರೆಯುತ್ತವೆ. ಕೊಲ್ಲಂ ಬೋಟ ಕ್ಲಬ್ ಸಾಕಷ್ಟು ಸಂಚಾರಿ ದೋಣಿಗಳ ಸೇವೆಯನ್ನೂ ಸಹ ನೀಡುತ್ತದೆ.
ಹೌಸ್‌ಬೋಟ್‌ ಯಾನ ಅಷ್ಟಮುಡಿ ಕೆರೆಯ ಪ್ರಮುಖ ಹಾಗೂ ಮುಖ್ಯ ಆಕರ್ಷಣೆ. ಇದನ್ನು ಯಾವೊಬ್ಬ ಪ್ರವಾಸಿಗನೂ ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಕೊಲ್ಲಂ ಜಿಲ್ಲಾ ಪ್ರವಾಸೋದ್ಯಮ ಉತ್ತೇಜನ ಸಮೀತಿ ಇಲ್ಲಿ ಸಾಕಷ್ಟು ವಿಧದ ಬೋಟಿಂಗ್‌ ಸೌಲಭ್ಯವನ್ನು ನೀಡುತ್ತಿದೆ. ಹಗಲು ಟ್ರಿಪ್‌, ರಾತ್ರಿ ಯಾನ ಸೇರಿದಂತೆ ಹಲವು ವಿಧದ ಅವಕಾಶ ಪ್ರವಾಸಿಗರಿಗೆ ಸಿಗುತ್ತವೆ.
ಹಿನ್ನೀರು ಪ್ರವಾಸ ಜನಪ್ರೀಯತೆಯ ಹಿಂದಿರುವ ರಹಸ್ಯ!
ಪ್ರತ್ಯೇಕ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪ್ರವಾಸಿಗರು ತಮಗೆ ಬೇಕಾದ ಪ್ಯಾಕೇಜ್‌ ಆರಿಸಿಕೊಂಡು ಬಳಸಬಹುದು. ಸಮಯ, ಆರ್ಥಿಕ ಸ್ಥಿತಿ ಹಾಗೂ ಇತರೆ ಆಯ್ಕೆಯನ್ನು ಪರಿಗಣಿಸಿ ತಮಗೆ ಬೇಕಾದ್ದನ್ನು ಪಡೆಯಬಹುದು. ಇಲ್ಲಿರುವ ಹೌಸ್‌ಬೋಟ್‌ಗಳು ಅತ್ಯಂತ ಸುಸಜ್ಜಿತ, ಆಧುನಿಕ ಸೌಲಭ್ಯ ಹೊಂದಿವೆ. ವಿಶೇಷತೆಗಳೆಂದರೆ ಸರ್ವಸಿದ್ಧ ಬೆಡ್‌ ರೂಂಗಳು, ಕಿಚನ್‌, ಬಾಲ್ಕನಿ, ಇತರೆ ಮನರಂಜನಾ ಸಾಮಗ್ರಿ...
ಫುಟ್ಬಾಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಕಾರು ಅಪಘಾತ!!! - Hosakananda
Leave a Comment / International, latest, News, Sports / By ಹೊಸ ಕನ್ನಡ / June 22, 2022 June 22, 2022 / 1 minute of reading
ಪಂದ್ಯಗಳಿಂದ ಬಿಡುವು ಮಾಡಿಕೊಂಡು ವಿಶ್ರಾಂತಿಗೆ ಜಾರಿದ್ದ ಪೋರ್ಚುಗಲ್ ಹಾಗೂ ಮ್ಯಾಂಚೆಸ್ಟರ್ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊಗೆ ದೊಡ್ಡದೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ರೆಸ್ಟ್‌ನಲ್ಲಿದ್ದ ರೋನಾಲ್ಡೊಗೆ ಬರೋಬ್ಬರಿ 17 ಕೋಟಿ ರೂಪಾಯಿ ಲಾಸ್ ಆಗಿದೆ.
ಇದಕ್ಕೆ ಕಾರಣ ರೊನಾಲ್ಡೊ ಅವರ 17 ಕೋಟಿ ರೂಪಾಯಿ ಮೌಲ್ಯದ ಬುಗಾಟ್ಟಿ ವೆಯ್ತಾನ್ ಕಾರು ತಮ್ಮದೇ ಮನೆಯ ಕೌಂಪೌಂಡ್‌ಗೆ ಡಿಕ್ಕಿ ಹೊಡೆದು ಜಖಂ ಆಗಿದೆ.
ಯುಕೆನಿಂದ ಸ್ಪೇನ್‌ಗೆ ಹಿಂತಿರುಗಿದ ರೊನಾಲ್ಡೊ ಸ್ಪೇನ್ ಮಾಲೋರ್ಕಾದಲ್ಲಿರುವ ಮನೆಯಲ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದರು. ಈ ವೇಳೆ ರೊನಾಲ್ಡೊ ಉದ್ಯೋಗಿ ಸೂಪರ್ ಕಾರಾದ ಬುಗಾಟ್ಟಿ ವೆಯಾನ್ ಕಾರನ್ನು ಮನೆಯಿಂದ ಹೊರಗಡೆ ತೆಗೆದಿದ್ದಾರೆ. ರೊನಾಲ್ಡೊ ಸೂಚನೆ ಮೇರೆಗೆ ವೆಝಾನ್ ಕಾರಿನಲ್ಲಿ ಹೊರಗಡೆ ತೆರಳಿದ್ದಾರೆ. ಮರಳಿ ಮನೆಗೆ ಬಂದ ಉದ್ಯೋಗಿ ಕಾರನ್ನು ಪಾರ್ಕ್ ಮಾಡುವ ಬದಲು ನೇರವಾಗಿ ಬಂದು ಮನೆಯ ...
ಬುಗಾಟಿ ವೆಝಾನ್ ಸೂಪರ್ ಕಾರಿನ ಗರಿಷ್ಠ ವೇಗ 410 ಕಿ.ಮೀ ಪ್ರತಿ ಗಂಟೆಗೆ. ಇನ್ನು ಕೇವಲ 2 ಸೆಕೆಂಡ್‌ನಲ್ಲಿ ಈ ಕಾರು 100 ಕಿ.ಮೀ ವೇಗ ತಲುಪಲಿದೆ. ಹೀಗಾಗಿ ಈ ಕಾರು ಚಲಾಯಿಸಲು ಅಭ್ಯಾಸ ಬೇಕೆ ಬೇಕು. ಕಾರಣ ಇದರ ವೇಗ ಹಾಗೂ ಅದನ್ನು ನಿಯಂತ್ರಿಸಬಲ್ಲ ಕೌಶಲ್ಯವೂ ಗೊತ್ತಿರಬೇಕು. ಪ್ರತಿ ಬಾರಿ ಈ ಕಾರನ್ನು ನಿರ್ವಹಣೆ ಮಾಡಲು ಕೊಂಡೊಯ್ಯುತ್ತಿದ್ದ ಉದ್ಯೋಗಿಯಿಂದ ಈ ಬಾರಿ ಎಡವಟ್ಟವಾಗಿದೆ. ಕಾರು ವೇಗವಾಗಿ ...
ಡಿಕ್ಕಿ ಹೊಡೆದ ರಭಸಕ್ಕೆ ಕಾರು ಬಹುತೇಕ ಜಖಂಗೊಂಡಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ಆದರೆ ಕಾರು ಚಲಾಯಿಸುತ್ತಿದ್ದ ಉದ್ಯೋಗಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಇಷ್ಟೇ ಅಲ್ಲ ರೊನಾಲ್ಡೊ ಮನೆಯ ಕೌಂಪೌಂಡ್‌ಗೂ ಹಾನಿಯಾಗಿದೆ.
ತಂತ್ರಜ್ಞಾನ ಕಲಿಕೆಯ ಮಹಾವೇದಿಕೆ ಇನ್‌ಸಿಗ್ನಿಯಾ..! - HosadiganthaWeb
ತಂತ್ರಜ್ಞಾನ ಕಲಿಕೆಯ ಮಹಾವೇದಿಕೆ ಇನ್‌ಸಿಗ್ನಿಯಾ..!
– ನಿತೀಶ ಡಂಬಳ
ಭಾರತ ಬದಲಾಗುತ್ತಿದೆ. ನಿತ್ಯವೂ ನೂತನ ತಂತ್ರಜ್ಞಾನ, ಆವಿಷ್ಕಾರಗಳಿಂದ ಅನೇಕ ಅಭಿವೃದ್ಧಿ ಕಾರ್ಯಗಳ ಯಶಸ್ಸನ್ನು ಕಣ್ತುಂಬಿಕೊಳ್ಳುತ್ತಿದ್ದೇವೆ. ಒಂದು ಗಮನಾರ್ಹ ಸಂಗಿತಿಯೆಂದರೆ ಈ ಎಲ್ಲ ನೂತನ ಆವಿಷ್ಕಾರ, ವೈಜ್ಞಾನಿಕ ಪ್ರಯೋಗಗಳು, ತಾಂತ್ರಿಕತೆಯ ಹಿಂದಿರುವುದು ನಮ್ಮ ದೇಶದ ಯುವಪಡೆ.
ಇಂದಿನ ಯುವಪೀಳಿಗೆಗೆ ಶಿಕ್ಷಣ, ತರಬೇತಿ ನೀಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅವರ ಪ್ರತಿಭೆಗೆ ಪ್ರೋತ್ಸಾಹ ಹಾಗೂ ಉತ್ತಮ ವೇದಿಕೆ ಒದಗಿಸುವುದು. ಅಂತಹ ಒಂದು ವಿಶಿಷ್ಟ ಕಾರ್ಯವನ್ನು ಧಾರವಾಡದ ಎಸ್‌ಡಿಎಮ್ ಎಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ಮಹಾವಿದ್ಯಾಲಯ ಕಳೆದ ೧೦ ವರ್ಷಗಳಿಂದ ಇನ್‌ಸಿಗ್ನಿಯಾ ಎಂಬ ಹೆಸರಿನಲ್ಲಿ ಮಾಡುತ್ತಿದೆ. 2012ರಲ್ಲಿ ಆರಂಭವಾದ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್...
ಇನ್‌ಸಿಗ್ನಿಯಾ ತಾಂತ್ರಿಕ ಹಾಗೂ ಸಾಂಸ್ಕೃತಿಕತೆಯ ಸಂಗಮ. ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪಠ್ಯಾಧಾರಿತ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಎಸ್‌ಡಿಎಮ್ ಕಾಲೇಜು ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ವೇದಿಕೆ ದೊರಕಿಸಿಕೊಡುತ್ತಿದೆ.
ಸರ್ವತೋಮುಖ ಬೆಳವಣಿಗೆಗೆ ಆದ್ಯತೆ: ಎಂಜಿನಿಯರ್ ವಿದ್ಯಾರ್ಥಿಗಳು ಕೇವಲ ತಮ್ಮ ವಿಷಯದಲ್ಲಷ್ಟೇ ನಿಪುಣರಾದರೆ ಸಾಲದು. ಬದಲಾಗಿ ಉತ್ತಮ ಸಂವಹನ, ನಾಯಕತ್ವ ಗುಣ, ಕೌಶಲ್ಯ ನಿರ್ಮಾಣ, ಪಠ್ಯೇತರ ಕಾರ್ಯಗಳಲ್ಲಿ ಸಾಧನೆ ಮಾಡಲು ಇನ್‌ಸಿಗ್ನಿಯಾ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸುತ್ತದೆ.
ಎಂಜಿನಿಯರಿಂಗ್‌ನ ವಿವಿಧ ವಿಭಾಗಗಳಲ್ಲಿ ಕೋಡಿಂಗ್, ಟೆಕ್ನಿಕಲ್ ಕ್ವಿಜ್, ಟೆಜರ್ ಹಂಟ್, ಮಾಡಲಿಂಗ್ ಚಾಲೆಂಜ್, ಮ್ಯಾಥ್ ಹಂಟ್, ಬ್ರೇನ್ ಸ್ಟಾರ್ಮ್, ರೈಡರ್ ಮೆನಿಯಾ, ಕೆಮ್ ಕಾಸ್ಟ್, ಟೆಕ್ ಪೈರೆಟ್ಸ್ ಮುಂತಾದ ಪಠ್ಯಾಧಾರಿತ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಯನ್ನು ಸರಳಗೊಳಿಸಿ, ಪ್ರಾಯೋಗಕ ಕಲಿಕೆಗೆ ಮಹತ್ವ ನೀಡಲಾಗುತ್ತಿದೆ. ಪೆಪರ್ ಪ್ರೆಸೆಂಟೆಷನ್, ಚರ್ಚೆ, ಅಣಕು ಸಂಸತ್ತು,...
ನೃತ್ಯ, ಸಂಗೀತ, ವಾದ್ಯ ಸಂಗೀತ, ಕಿರು ನಾಟಕ, ಬೀದಿ ನಾಟಕ, ಚಿತ್ರಕಲೆ, ಕೊಲ್ಯಾಜ್, ಫೇಸ್ ಪೆಂಟಿಂಗ್‌ನಂತಹ ಸಾಂಸ್ಕೃತಿಕ ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆ ಅನವಾರಣಗೊಳಿಸುವಲ್ಲಿ ಸಹಕಾರಿಯಾಗಿದೆ. ಒಟ್ಟಾರೆ ಇನ್‌ಸಿಗ್ನಿಯಾ ವಾತಾವರಣ ಪ್ರತಿವರ್ಷ ಪಠ್ಯ ಹಾಗೂ ಪಠ್ಯೇತರ ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತಿದ್ದು, ವಿದ್ಯಾರ್ಥಿಗಳೂ ಸಹ ಸಿಕ್ಕ ಅವಕಾಶ ಸದ್ವಿನ...
ಸಿಸೇರಿಯನ್ ಆಗಿದೆಯೇ? ಹಾಗಾದರೆ ನೀವು ಇದನ್ನ ಓದಲೇಬೇಕು ! - Tinystep
ಸಿಸೇರಿಯನ್ ಆಗಿದೆಯೇ? ಹಾಗಾದರೆ ನೀವು ಇದನ್ನ ಓದಲೇಬೇಕು !
ಬಹಳಷ್ಟು ತಾಯಂದಿರಲ್ಲಿ ಸಿಸೇರಿಯನ್ ಅಥವಾ C - ಸೆಕ್ಷನ್ ಬಗ್ಗೆ ಗೊಂದಲ, ಭಯ ಇರುತ್ತದೆ. ಏಕೆಂದರೆ ಇದು ತುಂಬಾ ಸಾಮಾನ್ಯ ಆಗಿದ್ದರು, ಇದು ಒಂದು ಗಂಭೀರ ಸರ್ಜರಿ ಆಗಿರುತ್ತದೆ. ನಿಮ್ಮ ಉದರ ಮತ್ತು ನಿಮ್ಮ ಗರ್ಭಕೋಶದ ಸರ್ಜರಿಯ ಗಾಯಗಳು ಮಾಸುವವರೆಗು ನಿಮಗೆ ಕಷ್ಟ ಆಗಬಹುದು. ಆದರೆ ನೀವು ನೈಸರ್ಗಿಕವಾಗಿ ಹಾಗು ವೇಗವಾಗಿ ಚೇತರಿಸಿಕೊಂಡು ಗುಣಮುಖರಾಗಲು ನಾವು ಇಲ್ಲಿ ನೀಡುತ್ತಿರುವ ಸಲಹೆಗಳನ್ನ ಓದಿ :
೧. ಮುನ್ನೆಡೆಯುತ್ತಿರಿ
ಇದು ಕೇಳುವುದಕ್ಕೆ ವಿಚಿತ್ರ ಅನಿಸಬಹುದು, ಆದರೆ ನೀವು ನಡೆಯುತ್ತಲೇ ಇರಬೇಕು. ನಿಮ್ಮ ದೇಹದ ಬಗ್ಗೆ ಸೂಕ್ಷ್ಮವಾಗಿರಿ, ಆದರೆ ಬಹಳ ಹೊತ್ತು ಕೂತಲ್ಲೇ ಕೂರದೆ ಓಡಾಟ ಮಾಡಿ ನಿಮ್ಮ ಸ್ನಾಯುಗಳಿಗೆ ಕೆಲಸ ಕೊಡುತ್ತಿರಿ. ಓಡಾಡುವುದರಿಂದ ನಿಮ್ಮ ದೇಹದಲ್ಲಿನ ರಕ್ತ ಸಂಚಾರ ವೃದ್ಧಿಸುತ್ತದೆ ಹಾಗು ನೀವು ಬೇಗನೆ ಚೇತರಿಸಿಕೊಳ್ಳುವಂತೆ ಮಾಡುತ್ತದೆ.
೨. ಎದೆಹಾಲು ಉಣಿಸುವ ಭಂಗಿಯನ್ನ ಬದಲಾಯಿಸುತ್ತಿರಿ
ನಿಮಗೆ ಹಾಕಿದ ಹೊಲಿಗೆಗಳು ನೀವು ಎದೆಹಾಲು ಉನಿಸುವುದಕ್ಕೆ ಅಡ್ಡಿ ಮಾಡಬಹುದು ಹಾಗು ಒಂದೇ ಸ್ತನದಿಂದ ಹಾಲು ಉಣಿಸುವುದು ನಿಮ್ಮ ಸುಧಾರಣೆಗೆ ಅಡ್ಡಿ ಆಗಬಹುದು. ನಿಮ್ಮ ಹೊಲಿಗೆಗಳು ನೀವು ಎದೆಹಾಲು ಉಣಿಸುವುದಕ್ಕೆ ಅಡ್ಡಿ ಮಾಡಬಾರದೆಂದು ನೀವು ಹಾಲುಣಿಸುವ ಭಂಗಿಯನ್ನ ಆಗಾಗ್ಗೆ ಬದಲಾಯಿಸುತ್ತಿರಬೇಕೆಂದು ನಾವು ಸಲಹೆ ನೀಡುತ್ತೇವೆ.
೩. ನಿಮ್ಮ ಗಾಯವನ್ನ ಶುಚಿಗೊಳಿಸಿ ಒಣಗಿಸಿ
ಇದು ತುಂಬಾನೇ ಮುಖ್ಯ ! ನಿಮ್ಮ ಗಾಯದ ಮೇಲಿನ ಡ್ರೆಸ್ಸಿಂಗ್ ಅನ್ನು ವೈದ್ಯರು ತೆಗೆದ ಮೇಲೆ ನೀವು ಆ ಭಾಗವನ್ನು ನೀರಿನಿಂದ ತೊಳೆದು ಶುಚಿಯಾಗಿ ಇಡಬೇಕು. ನೀವು ಸರಿಯಾಗಿ ಎಲ್ಲವನ್ನೂ ಒರೆಸಿಕೊಳ್ಳುತ್ತೀರ ಎಂದರೆ ಮಾತ್ರ ಆ ಭಾಗಕ್ಕೆ ಸೋಪ್ ಹಚ್ಚಿ. ಈ ಭಾಗವನ್ನ ಒರೆಸಿಕೊಳ್ಳಲು ನೀವು ಬೇರೇ ಭಾಗಳಿಗೆ ಉಜ್ಜುವಂತೆ ಮಾಡದೆ, ಆ ಭಾಗದ ಮೇಲೆ ಮೆಲ್ಲನೆ ಬಟ್ಟೆ ಇಂದ ತಟ್ಟುತ್ತಾ ಒರೆಸಿ. ಇಂತಹ ಗಾಯಗಳು ತುಂಬಾ ...
೪. ಅಗತ್ಯ ಬಿದ್ದರೆ ನೋವು ನಿವಾರಕ (painkiller) ಔಷಧಿಗಳನ್ನ ಸೇವಿಸಿ
ನಿಮ್ಮ ಹೇರಿಗೆಯಾದ ಎರಡು ವಾರಗಳವರೆಗೆ ನಿಮಗೆ ಸ್ವಲ್ಪ ನೋವಿನಿಂದ ಹಿಡಿದು ತೀವ್ರ ನೋವು ಕೂಡ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ನೋವಿನ ಶಮನಕ್ಕಾಗಿ ನಿಮ್ಮ ವೈದ್ಯರೊಡನೆ ಮಾತಾಡಿ ನೋವು ನಿವಾರಕ ಔಷಧಿಗಳನ್ನ ಸೇವಿಸಬಹುದು.
೫. ಸರಿಯಾಗಿ ತಿನ್ನಿ
ಹೌದು, ನೀವು ಬೇಗ ಚೇತರಿಸಿಕೊಳ್ಳಲು ಸರಿಯಾಗಿ, ಸರಿಯಾದುದನ್ನ ತಿನ್ನಬೇಕು. ನಿಮ್ಮ ದೇಹವು ಪೋಷಕಾಂಶಗಳ ಕೊರತೆಯನ್ನು ಎದುರಿಸುತ್ತಿದ್ದು, ನೀವು ಅವುಗಳು ಸರಿಯಾದ ಪ್ರಮಾಣದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ವಿಟಮಿನ್ C ಉಳ್ಳ ಆಹಾರಗಳನ್ನ ಹೆಚ್ಚು ಸೇವಿಸಿ, ಏಕೆಂದರೆ ಇದರಲ್ಲಿ ನಿಮಗೆ ಬೇಕಾಗಿರುವ ಒಮೇಗಾ-3 ಕೊಬ್ಬಿನಾಮ್ಲ ಇರುತ್ತದೆ. ಕೆಂಪು ಮಾಂಸವನ್ನ ತ್ಯಜಿಸಿ ಹಾಗು ಕೇವಲ ಚಿಕೆನ್, ಸಾಲ್ಮನ...
೬. ಭಾರ ಎತ್ತಬೇಡಿ
ಹೆರಿಗೆಯ ನಂತರ ಕೆಲವು ವಾರಗಳವರೆಗೆ ನೀವು ಭಾರವನ್ನ ಯಾವುದೇ ಕಾರಣಕ್ಕೂ ಎತ್ತಬಾರದು. ಸಾಧ್ಯವಾದರೆ ನಿಮ್ಮ ಮಗುವನ್ನು ಮೇಲೆತ್ತಿಕೊಂಡು ಕೆಳಗೆ ಒಂದು ದಿಂಬು ಇಟ್ಟುಕೊಂಡು ಎದೆಹಾಲು ನೀಡಿ.
೭. ಲೈಂಗಿಕ ಕ್ರಿಯೆ ಬಗ್ಗೆ ಎಚ್ಚರವಿರಲಿ
C - ಸೆಕ್ಷನ್ ಗೆ ಒಳಗಾದ ಹೆಣ್ಣುಮಕ್ಕಳು ಸಂಭೋಗದ ಸಮಯದಲ್ಲಿ ಹೆಚ್ಚು ನೋವನ್ನು ಅನುಭವಿಸಿದಾಗಿ ಹೇಳಿಕೊಂಡಿದ್ದಾರೆ. ನಿಮ್ಮ ಶ್ರೋಣಿ(pelvic)ಯ ಸ್ನಾಯುಗಳು ಹೆರಿಗೆ ನಂತರ ಬಹಳ ಒತ್ತಡದಲ್ಲಿ ಇರುತ್ತವೆ ಹಾಗು ಇದರಿಂದ ಸ್ನಾಯು ಸೆಳೆತ ಹಾಗು ನೋವು ಉಂಟಾಗುತ್ತವೆ.
ಶಿಡ್ಲಘಟ್ಟದಲ್ಲಿ ಶಿಳ್ಳೆಹಾಕಿದ ರೈಲು ! | Prajavani
ಒಂದೇ ದಿನ 70 ಲಕ್ಷ ಡೋಸ್ ಕೋವಿಡ್ ಲಸಿಕೆ ಉಚಿತ ವಿತರಣೆ: ಕೇಂದ್ರ ಜಮ್ಮು–ಕಾಶ್ಮೀರ: ಬಾರಾಮುಲ್ಲಾ ಎನ್‌ಕೌಂಟರ್‌ನಲ್ಲಿ ಮೂವರು ಎಲ್‌ಇಟಿ ಉಗ್ರರ ಹತ್ಯೆ ಕೋವಿಡ್–19: ಈ ವರ್ಷವೂ ಅಮರನಾಥ ಯಾತ್ರೆ ರದ್ದು ಒಲಿಂಪಿಕ್ಸ್ 2021: ಭಾರತ ಮಹಿಳಾ ಹಾಕಿ ತಂಡಕ್ಕೆ ರಾಣಿ ರಾಂಪಾಲ್ ನಾಯಕಿ ಮೋದಿ ಸಭೆಯಲ್ಲಿ ಭಾಗವಹಿಸುವ ಬಗ್ಗೆ ಜಮ್ಮು–ಕಾಶ್ಮೀರ ಪಕ್ಷಗಳಿಂದ ನಾಳೆ ನಿರ್ಧಾರ IND vs NZ WTC Final: ನಾಲ್ಕನೇ ...
IND vs NZ WTC Final: ನಾಲ್ಕನೇ ದಿನವೂ ಮಳೆ ಕಾಟ; ಆಟ ವಿಳಂಬ
ನಾನು ಪ್ರದರ್ಶನ ಬೊಂಬೆಯಲ್ಲ: ಪಂಜಾಬ್‌ ಸಿಎಂ ವಿರುದ್ಧ ನವಜೋತ್ ಸಿಂಗ್ ಸಿಧು ಕಿಡಿ
ಶಿಡ್ಲಘಟ್ಟದಲ್ಲಿ ಶಿಳ್ಳೆಹಾಕಿದ ರೈಲು !
ಪ್ರಜಾವಾಣಿ ವಾರ್ತೆ Updated: 22 ಮಾರ್ಚ್ 2012, 09:20 IST
ಶಿಡ್ಲಘಟ್ಟ: ಹಿರಿಯರು, ಕಿರಿಯರು ಎಲ್ಲರೂ ಕುತೂಹಲ ಕಣ್ಣಿ ನಿಂದ ನೋಡುತ್ತಿದ್ದರು. `ಅಬ್ಬಾ ಇಪ್ಪತ್ತು ವರ್ಷಗಳ ನಂತರ ನಮ್ಮೂರಿಗೂ ರೈಲು ಬಂತು~ ಎಂದು ಕೆಲವರು ಮಾತ ನಾಡು ತ್ತಿದ್ದರೆ, ಇದು ಎಲ್ಲೆಲ್ಲಿಗೆ ಹೋಗುತ್ತೆ? ಬೆಂಗಳೂರಿಗೆ ಎಷ್ಟು ಹೊತ್ತಿಗೆ ತಲುಪುತ್ತೆ? ಎಂಬ ಪ್ರಶ್ನೆಗಳು ಕೆಲವರದ್ದು.
ಪಟ್ಟಣದ ನೂತನ ರೈಲ್ವೆ ನಿಲ್ದಾಣಕ್ಕೆ ಪ್ರಾಯೋಗಿಕವಾಗಿ ರೈಲ್ವೆ ಎಂಜಿನ್ ಚಿಕ್ಕಬಳ್ಳಾಪುರದಿಂದ ಬುಧವಾರ ಆಗಮಿಸಿ ದಾಗ ಅದನ್ನು ನೋಡಲು ಜನರು ಕುತೂಹಲದಿಂದ ವೀಕ್ಷಿ ಸುತ್ತಿದ್ದರು. ಯುವಕರು ರೈಲ್ವೆ ಎಂಜಿನನ್ನು ಹತ್ತಿ ನೋಡಲು ತವಕಿಸಿದರೆ, ಮಕ್ಕಳು ಹೊಸ ಆಟಿಕೆ ಎಂಬಂತೆ ಆಸೆ ಕಂಗಳಿಂದ ನೋಡುತ್ತಿದ್ದರು.
ಕೆಲವೆಡೆ ಊರ ಹೊರಗೆ ರೈಲ್ವೆ ನಿಲ್ದಾಣವಿದ್ದರೆ ಶಿಡ್ಲ ಘಟ್ಟದಲ್ಲಿ ಮಾತ್ರ ಊರ ಮಧ್ಯದಲ್ಲಿ ಹೃದಯದಂತಿದೆ ರೈಲ್ವೆ ನಿಲ್ದಾಣ. ಹಾಗಾಗಿ ರೈಲ್ವೆ ಇಂಜನ್ನಿನ `ಕೂ...~ ಎಂಬ ಶಬ್ದ ಪ್ರತಿ ಮನೆಗೂ ಕೇಳಿಸುತ್ತದೆ. ರೈಲ್ವೆ ಹಮಾಲಿ ಕಾರ್ಮಿಕರು ರೈಲ್ವೆ ಟ್ರ್ಯಾಲಿ ತಳ್ಳುತ್ತಾ ಎಂಜಿನ್ ಅನ್ನು ಮುಟ್ಟಿ ಸಂಭ್ರಮಿಸಿ ದರೆ, ಕೆಲವರು ಮೊಬೈಲ್‌ಗಳಲ್ಲಿ ಪಟ್ಟಣಕ್ಕೆ ಆಗಮಿಸಿದ ಮೊದಲ ರೈಲ್ವೆ ಎಂಜಿನ್ ಅನ್ನು ಸೆರೆಹಿ...
ವಿದ್ಯಾರ್ಥಿಗಳು ಮನೆಗೆ ಹೋಗುವುದನ್ನು ಮರೆತು ರೈಲ್ವೆ ಎಂಜಿನ್ ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರೈಲ್ವೆ ಇಲಾಖೆ ಎಂಜಿನಿಯರರಾದ ಆನಂದ್, ಚಂದ್ರಾಯಪ್ಪ, ಕಿಸಾನ್ ಸಂಘದ ದಕ್ಷಿಣ ಪ್ರಾಂತೀಯ ಕಾರ್ಯದರ್ಶಿ ಶಿವಮೂರ್ತಿ ಇತರರಿದ್ದರು.
ಅವಳಿ ಮಕ್ಕಳಿಗೆ ತಂದೆಯಾದ ಉಸೇನ್ ಬೋಲ್ಟ್‌; ಗುಡುಗು, ಮಿಂಚು ಎಂದು ಹೆಸರು!
ಕೇಸರಿ ಪಡೆಯ ಶಕ್ತಿ ಕೇಂದ್ರ 'ಉತ್ತರ ಬಂಗಾಳ'ದ ಬಿಜೆಪಿ ನಾಯಕ ಟಿಎಂಸಿ ಸೇರ್ಪಡೆ
ತೆಲಂಗಾಣ ಸಿಎಂ ಕಾಲಿಗೆರಗಿದ ಸಿದ್ದಿಪೇಟ್‌ ಜಿಲ್ಲಾಧಿಕಾರಿ; ವಿರೋಧ ಪಕ್ಷಗಳ ಟೀಕೆ
ಆನ್‌ಲೈನ್ ತರಗತಿ: ಸ್ಮಾರ್ಟ್‌ಫೋನ್ ಖರೀದಿಸಲಾಗದೇ ಬಾಲಕಿ ಆತ್ಮಹತ್ಯೆ
ಪ್ರಸಕ್ತ ವರ್ಷದಲ್ಲಿ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ: ಸಿಎಂ ಯಡಿಯೂರಪ್ಪ
ರಂಗೋಲಿ ಚಂಡೇಲ್‌– ಸಿನಿಮಾ ಅಲ್ಲ ನೈಜ ಕಥೆ
ಕೇಂದ್ರ ಸಚಿವೆಯಾಗುವ ಆಕಾಂಕ್ಷೆ ಇಲ್ಲ: ಶೋಭಾ ಕರಂದ್ಲಾಜೆ
ಅನ್‌ಲಾಕ್‌: ರಸ್ತೆಗಿಳಿದ ಸಾರಿಗೆ ಬಸ್‌
ದಾಖಲೆ ಬರೆದ ತಜಿಂದರ್‌ಗೆ ಒಲಿಂಪಿಕ್ಸ್‌ ಟಿಕೆಟ್‌
ನಿಯಮ ಸಡಿಲಿಕೆ: ಮೊದಲ ದಿನ ಜನಸಂದಣಿ
ಮಾವು: ಬೆಂಬಲ ಬೆಲೆಗೆ ಮನವಿ
ಕಪ್ಪು ಶಿಲೀಂಧ್ರ: 26 ದಿನಗಳಲ್ಲಿ 100 ಶಸ್ತ್ರಚಿಕಿತ್ಸೆ
ಎಸ್ಸೆಸ್ಸೆಲ್ಸಿ: ಪರೀಕ್ಷೆ ಬರೆಯಲು ಅವಕಾಶ
ಹಾಲ್‌ಮಾರ್ಕ್‌ನಿಂದ ಗ್ರಾಹಕರ ಹಕ್ಕು ರಕ್ಷಣೆ: ಜೋಯಾಲುಕ್ಕಾಸ್
ಬಿದ್ದು ಎದ್ದ ಷೇರುಪೇಟೆ ಸೂಚ್ಯಂಕ
'ಪ‍ರ್ಯಾಯ ಕಲಿಕಾ ಚಟುವಟಿಕೆ ರೂಪಿಸಿ': ಮಮತಾ ನಾಯಕ
'); $('#div-gpt-ad-82926-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-82926').addClass('inartprocessed'); } else $('#in-article-82926').hide(); } else { _taboola.push({article:'auto', url:'https://www.prajavani.net/article/ಶಿಡ್ಲಘಟ್ಟದಲ್ಲಿ-ಶಿಳ್ಳೆಹಾಕಿದ-ರ...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-82926 .field-name-body .field-items div.field-item > p'); if(x1 != null && x1.length != 0) { $('#node-82926 .field-name-body ....
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-82926 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-82926'); }); } else { $('#in-article-mob-82926').hide(); $('#in-article-mob-3rd-82926').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಮನೆಯಲ್ಲಿ ವ್ಯಾಯಾಮ
ಪ್ರತಿ ಮಹಿಳೆ ಸಾಮರಸ್ಯ, ಸೌಂದರ್ಯ ಮತ್ತು ಆಕೆಯ ಚಿತ್ರಣದ ಆಕರ್ಷಣೆಗಾಗಿ ಶ್ರಮಿಸುತ್ತದೆ. ಇದಕ್ಕಾಗಿ ನಾವು ಆಹಾರ ಮತ್ತು ಭೌತಿಕ ವ್ಯಾಯಾಮದಿಂದ ನಮ್ಮನ್ನು ಕಳೆದುಕೊಳ್ಳುತ್ತೇವೆ. ತೂಕ ಕಳೆದುಕೊಳ್ಳುವ ಮತ್ತು ಆಕಾರದಲ್ಲಿ ನಿಮ್ಮನ್ನು ಕಾಪಾಡಿಕೊಳ್ಳಲು ಅತ್ಯಂತ ಸೂಕ್ತ ಆಯ್ಕೆಯಾಗಿದೆ ಫಿಟ್ನೆಸ್ ಕ್ಲಬ್ಗೆ ನಿಯಮಿತವಾದ ಭೇಟಿಯಾಗಿದೆ ಎಂದು ನಂಬಲಾಗಿದೆ. ಆದರೆ ಪ್ರಾಯೋಗಿಕವಾಗಿ, ಪ್ರತಿ ಮಹಿಳೆಯು ವಿಶೇಷ...
ಪಂಪ್ ಸ್ನಾಯುಗಳು, ಫಿಗರ್ ಅನ್ನು ಎಳೆಯಿರಿ, ಹೆಚ್ಚುವರಿ ಕೊಬ್ಬಿನ ಕೋಶಗಳನ್ನು ತೊಡೆದುಹಾಕಲು - ಈ ಕೆಳಗಿನ ಕಟ್ಟುನಿಟ್ಟಾದ ನಿಯಮಗಳಿಗೆ ನೀವು ಪಾಲಿಸಿದರೆ, ಮನೆಯಲ್ಲಿ ಎಲ್ಲವನ್ನೂ ಸಾಧಿಸಬಹುದು:
ಮೊದಲನೆಯದಾಗಿ, ಪ್ರತಿದಿನ ತರಬೇತಿ ನೀಡಲು ಇದು ಅಗತ್ಯವಾಗಿರುತ್ತದೆ. ತರಬೇತಿಯ ಅತ್ಯುತ್ತಮ ಸಮಯ ಬೆಳಿಗ್ಗೆ. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ತರಗತಿಗಳನ್ನು ಬಿಟ್ಟುಬಿಡುವುದಕ್ಕೆ ಅನುಮತಿ ಇದೆ. ಮನೆಯಲ್ಲಿ ತರಬೇತಿ ವೇಳಾಪಟ್ಟಿಯನ್ನು ರಚಿಸಲು ಮತ್ತು ಅದನ್ನು ಕಟ್ಟುನಿಟ್ಟಾಗಿ ಅಂಟಿಕೊಳ್ಳುವುದು ಸೂಕ್ತವಾಗಿದೆ. ಇಲ್ಲದಿದ್ದರೆ, ಅನಿಯಮಿತ ತರಬೇತಿ ನಿರೀಕ್ಷಿತ ಪರಿಣಾಮವನ್ನು ನೀಡುವುದಿಲ್ಲ ಮ...
ಎರಡನೆಯದಾಗಿ, ಮನೆಯಲ್ಲಿ ತರಬೇತಿ ಸಮಯದಲ್ಲಿ, ಸುರಕ್ಷತೆಯ ನಿಯಮಗಳಿಗೆ ಅನುಸಾರವಾಗಿರುವುದು ಅವಶ್ಯಕವಾಗಿದೆ. ತರಬೇತಿಗಾಗಿ, ಮನೆಯಲ್ಲಿ ವಿಶೇಷ ಸ್ಥಳವನ್ನು ನಿಯೋಜಿಸಲು ಮತ್ತು ಹತ್ತಿರವಿರುವ ಎಲ್ಲಾ ವಸ್ತುಗಳನ್ನು ತೆಗೆದುಹಾಕುವುದು ಅಥವಾ ಮುರಿಯಲು ಅದು ಅಗತ್ಯವಾಗಿರುತ್ತದೆ. ಮನೆಯಲ್ಲಿ ಸ್ನಾಯುಗಳ ತರಬೇತಿ ಸಮಯದಲ್ಲಿ, ವ್ಯಾಯಾಮದ ನಿಯಮಗಳನ್ನು ನೀವು ಅನುಸರಿಸಬೇಕು. ಇದು ವಿಸ್ತರಿಸುವುದು, ಗಾಯ ಮತ...
ಮೂರನೇ, ತರಬೇತಿ ಕಾಲುಗಳು, ಪತ್ರಿಕಾ ಮತ್ತು ಮನೆಯಲ್ಲಿ ದೇಹದ ಇತರ ಭಾಗಗಳು, ನೀವು ವಿಶೇಷ ಆರಾಮದಾಯಕ ಉಡುಪುಗಳನ್ನು ಮತ್ತು ಕ್ರೀಡೋಪಕರಣಗಳು ಪಡೆಯಬೇಕು. ಬಟ್ಟೆ ನೈಸರ್ಗಿಕ ವಸ್ತುಗಳಿಂದ, ಆದರ್ಶ ಆಯ್ಕೆಯಾಗಿರಬೇಕು - ಹತ್ತಿ. ಕ್ರೀಡಾ ಮೊಕದ್ದಮೆ ಚಳುವಳಿಯನ್ನು ನಿರ್ಬಂಧಿಸಬಾರದು ಮತ್ತು ಅಸ್ವಸ್ಥತೆ ಉಂಟುಮಾಡುವುದಿಲ್ಲ. ಒಂದು ತಪಶೀಲುಪಟ್ಟಿಯಂತೆ, ನೀವು ನಿಮಗಾಗಿ ಯಾವ ಗುರಿಗಳನ್ನು ಹೊಂದಿದ್ದೀರಿ ...
ನಾಲ್ಕನೆಯದಾಗಿ, ಮನೆಯಲ್ಲಿ ತರಬೇತಿ ಸಮಗ್ರವಾಗಿರಬೇಕು. ನೀವು ಮಾತ್ರ ಪತ್ರಿಕಾಗೋಷ್ಠಿಯಲ್ಲಿ ಪಫ್ ಮಾಡಲು ಬಯಸಿದರೆ ಅಥವಾ ಸೊಂಟದಲ್ಲಿ ಹೆಚ್ಚುವರಿ ಪೌಂಡ್ಗಳನ್ನು ತೊಡೆದುಹಾಕಲು ಸಹ ನೀವು ದೇಹದ ಇತರ ಭಾಗಗಳಿಗೆ ಗಮನ ಕೊಡಬೇಕು. ಇಡೀ ದೇಹವನ್ನು ಸಂಕೀರ್ಣದಲ್ಲಿ ತರಬೇತಿ ನೀಡುವ ಮೂಲಕ, ನೀವು ತ್ವರಿತ ಮತ್ತು ಸ್ಪಷ್ಟವಾದ ಫಲಿತಾಂಶಗಳನ್ನು ಸಾಧಿಸಬಹುದು.
ಆರಂಭಿಕರಿಗಾಗಿ, ಮೇಲೆ ಪಟ್ಟಿ ಮಾಡಲಾದ ಎಲ್ಲದರ ಜೊತೆಗೆ, ಸ್ಪಷ್ಟ ಶಿಫಾರಸುಗಳು ಮತ್ತು ವಿವರವಾದ ವ್ಯಾಯಾಮಗಳು ಅಗತ್ಯವಾಗಿವೆ. ಮನೆಯಲ್ಲಿ ಒಂದು ತರಬೇತಿ ಕಾರ್ಯಕ್ರಮದೊಂದಿಗೆ ಡಿಸ್ಕ್ ಅನ್ನು ಖರೀದಿಸುವುದು ಉತ್ತಮ ಆಯ್ಕೆಯಾಗಿದೆ. ವೀಡಿಯೊ ಪಾಠಗಳು ವ್ಯಾಯಾಮದ ಸಮಯದಲ್ಲಿ ತಪ್ಪುಗಳನ್ನು ತಪ್ಪಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ ಮತ್ತು ವ್ಯಾಯಾಮಗಳನ್ನು ಯಾವ ಕ್ರಮದಲ್ಲಿ ನಿರ್ವಹಿಸಬೇಕು ಎಂಬುದರ ಬಗ...
ಮನೆಯಲ್ಲಿ ತರಬೇತಿ ನೀಡುವುದು ಪ್ರತಿದಿನ ತಾಜಾ, ತಾಜಾ ಮತ್ತು ಆಕರ್ಷಕವಾಗಿ ನಿಮ್ಮನ್ನು ಅನುಭವಿಸಲು ಒಂದು ಉತ್ತಮ ಅವಕಾಶ. ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸವನ್ನು ನೀವೇ ತೆಗೆದುಕೊಳ್ಳಿ, ಮತ್ತು ನೀವು ಯಾವಾಗಲೂ ದೊಡ್ಡ ಆಕಾರದಲ್ಲಿರುತ್ತೀರಿ.
ಕೋತಿಗಳ ಶ್ಯೂಟೌಟ್: ಆರೋಪಿ ಟೆಕ್ಕಿಗಾಗಿ ಶೋಧ | Vijaya Karnataka
ramesh eranna | ವಿಕ ಸುದ್ದಿಲೋಕ | Updated: Jan 20, 2014, 4:35 AM
ಕೋತಿಗಳ ಕಾಟ ತಾಳಲಾರದೆ ಗುಂಡಿಟ್ಟು ಕೊಂದು ತಲೆಮರೆಸಿಕೊಂಡಿರುವ ಸಾಫ್ಟ್‌ವೇರ್ ಎಂಜಿನಿಯರ್‌ಗಾಗಿ ಅರಣ್ಯ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ.
ಬೆಂಗಳೂರು: ಕೋತಿಗಳ ಕಾಟ ತಾಳಲಾರದೆ ಗುಂಡಿಟ್ಟು ಕೊಂದು ತಲೆಮರೆಸಿಕೊಂಡಿರುವ ಸಾಫ್ಟ್‌ವೇರ್ ಎಂಜಿನಿಯರ್‌ಗಾಗಿ ಅರಣ್ಯ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ.
ಎರಡು ಕೋತಿಗಳನ್ನು ಗುಂಟಿಟ್ಟು ಕೊಂದ ಕೇರಳ ಮೂಲದ ರೂಪೇಶ್ ವಿರುದ್ಧ ಕೆ.ಅರ್.ಪುರಂ ವಲಯ ಅರಣ್ಯ ಅಧಿಕಾರಿಗಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ರೂಪೇಶ್ ಪರಾರಿಯಾಗಿದ್ದ. ಭಾನುವಾರ ರಹೇಜಾ ಅಪಾರ್ಟ್‌ಮೆಂಟ್‌ನ ಮ್ಯಾನೇಜರ್‌ನ್ನು ವಿಚಾರಣೆಗೆ ಒಳಪಡಿಸಿ ಮನೆ ಬಾಡಿಗೆಗೆ ಪಡೆದ ದಾಖಲೆಗಳ ಮಾಹಿತಿ ಆಧರಿಸಿ ರೂಪೇಶ್‌ಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಕೋರಮಂಗಲದ ರಹೇಜಾ ರೆಸಿಡೆನ್ಸಿಯಲ್ ಅಪಾರ್ಟ್‌ಮೆಂಟ್‌ನ 2ನೇ ಮಹಡಿಯಲ್ಲಿರುವ ರೂಪೇಶ್ ಕುಮಾರ್, ಕೋತಿಗಳ ಕಾಟದಿಂದ ಬೇಸತ್ತಿದ್ದ. ಶನಿವಾರ ಬೆಳಗ್ಗೆ 10 ಗಂಟೆ ಎರಡನೇ ಮಹಡಿಯಿಂದ ಏರ್‌ಗನ್‌ನಿಂದ ಶೂಟ್ ಮಾಡಿದ್ದು, ಎರಡು ಕೋತಿಗಳು ನೆಲಕ್ಕುರುಳಿವೆ. ಅಕ್ಕಪಕ್ಕದವರು ವನ್ಯ ಜೀವಿ ಸಂರಕ್ಷಕರಿಗೆ ವಿಷಯ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಪ್ರಾಜೆಕ್ಟ್ ಪ್ರೊಟೆಕ್ಟ್ ವೈಲ್ಡ್ ಲೈಫ್ ಸ್ವಯಂ ಸೇವಾ ಸಂಸ್ಥೆಯ ಸ್ವಯಂ ಸೇವಕರು ಮತ್ತು ಕೆ.ಆರ್. ಪುರಂ ವಲಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಗಂಡು ಕೋತಿ ಸ್ಥಳದಲ್ಲೇ ಮೃತಪಟ್ಟಿತ್ತು. ಗರ್ಭ ಧರಿಸಿದ್ದ ಹೆಣ್ಣು ಕೋತಿ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದೆ.
ಮೃತ ಕೋತಿಗಳನ್ನು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಕೋತಿಗಳಿಗೆ ಗುಂಡೇಟು ಬಿದ್ದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಗುಂಡೇಟಿನಿಂದ ಸತ್ತಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಆರೋಪಿ ವಿರುದ್ಧ ವನ್ಯಜೀವಿ ಸಂಕರಕ್ಷಣೆ ಕಾಯ್ದೆ ಅಡಿ ಜಾಮೀನುರಹಿತ ಬಂಧನ ಕ್ರಿಮಿನಲ್ ಕೇಸು ದಾಖಲಿಸಿದ್ದೇವೆ. ಮೃತ ಕೋತಿಗಳ ಮರಣೋತ್ತರ ಪರೀಕ್ಷೆ ವರದಿ ಬಳಿ...
ಕೋತಿಗಳನ್ನು ಕಾನೂನು ಬಾಹಿರವಾಗಿ ಹತ್ಯೆ ಮಾಡಿದ ರೂಪೇಶ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 9 (ಕಾನೂನು ಬಾಹಿರವಾಗಿ ಬೇಟೆ), ಸೆಕ್ಷನ್ 39 ( ಸರಕಾರಿ ಸ್ವತ್ತು, ಪರವಾನಗಿ ರಹಿತ ವನ್ಯ ಜೀವಿಗಳನ್ನು ಬಳಸುವುದು, ಸೆ. 44, 51, 55ರ ಅಡಿ ಕ್ರಿಮಿನಲ್ ಕೇಸು ದಾಖಲಿಸಲಾಗಿದೆ. ಗುಂಡೇಟಿನಿಂದ ಕೋತಿಗಳು ಮೃತಪಟ್ಟಿರುವುದು ವೈದ್ಯಕೀಯ ಪರೀಕ್ಷೆ ವರದಿಯಿಂದ ಕಂಡು ಬಂದರೆ, ಪೊಲೀಸರ ಮೂಲಕ ಅಕ್...
ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್, ಚಿದಾನಂದ್, ಅರಣ್ಯ ವೀಕ್ಷಕ ಬೈಲಾಂಜನಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಪರಿಶೀಲನೆ ನಡೆಸಿದರು.
ಅಮ್ಮನನ್ನು ಕಳೆದುಕೊಂಡ ಮರಿ ಕೋತಿಗಳು
''ರಹೇಜಾ ಅಪಾರ್ಟ್‌ಮೆಂಟ್ ಸಮೀಪ ಐದು ಕೋತಿಗಳ ಸಂಸಾರ ನೆಲೆಸಿತ್ತು. ಗರ್ಭ ಧರಿಸಿದ್ದ ಹೆಣ್ಣು ಕೋತಿ ಗುಂಡೇಟಿನಿಂದ ನೆಲಕ್ಕೆ ಬೀಳುತ್ತಿದ್ದಂತೆ ಅದರ ಎರಡು ಮರಿಗಳು ಕಿರುಚಾಡತೊಡಗಿದವು. ರಕ್ತ ಸೋರಿ ನಿತ್ರಾಣ ಸ್ಥಿತಿಯಲ್ಲಿದ್ದ ಅಮ್ಮನನ್ನು ಎಬ್ಬಿಸಲು ಮರಿ ಕೋತಿಗಳು ಪ್ರಯತ್ನಿಸುತ್ತಿದ್ದವು. ಸತ್ತ ಕೋತಿಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ತೆಗೆದುಕೊಳ್ಳಲು ಹೋದಾಗಲೂ ಮರಿ ಕೋತಿಗಳು ಕಿರಿಚಾಡುತ್ತಿ...
- ಕಿರಣ್, ವನ್ಯ ಜೀವಿ ಸಂರಕ್ಷಕ
ಗುಂಡು ಹಾರಿಸಿ ಕೋತಿಗಳನ್ನು ಹತ್ಯೆ ಮಾಡಿ ಕ್ರಿಮಿನಲ್ ಕೇಸು ದಾಖಲಿಸಿರುವುದು ಬೆಂಗಳೂರಿನ ಮಟ್ಟಿಗೆ ಇದೇ ಮೊದಲು. ಕೋತಿಗಳನ್ನು ಕಾನೂನುಬಾಹಿರವಾಗಿ ಸಾಗಿಸಿದ ಬಗ್ಗೆ ಕೇಸುಗಳು ದಾಖಲಾಗಿವೆ. ಗುಂಡು ಹೊಡೆದು ಸಾಯಿಸಿರುವುದು ಇದೇ ಮೊದಲು.
ನಗರದಲ್ಲಿ ಎ, ಎಬಿ ಗುಂಪಿನ ರಕ್ತದ ತೀವ್ರ ಕೊರತೆ ! | Udayavani – ಉದಯವಾಣಿ
Monday, 17 Jan 2022 | UPDATED: 03:27 AM IST
ನಗರದಲ್ಲಿ ಎ, ಎಬಿ ಗುಂಪಿನ ರಕ್ತದ ತೀವ್ರ ಕೊರತೆ !
ವೆನ್ಲಾಕ್‌, ಲೇಡಿಗೋಶನ್‌ನಂಥ ಆಸ್ಪತ್ರೆಗಳಲ್ಲಿ ರೋಗಿಗಳ ಪರದಾಟ
ವಿಶೇಷ ವರದಿ- ಮಹಾನಗರ: ನಗರದ ಕೆಲವು ಆಸ್ಪತ್ರೆಗಳಲ್ಲಿ ಕೆಲವು ದಿನಗಳಿಂದ ರಕ್ತದ ಕೊರತೆ ತೀವ್ರವಾಗಿದೆ. ಅದರಲ್ಲೂ ಎ ಮತ್ತು ಎಬಿ ರಕ್ತದ ಗುಂಪುಗಳ ಸಂಗ್ರಹ ಶೂನ್ಯವಾಗಿದ್ದು, ಈ ಗುಂಪಿನ ರಕ್ತ ಅವಶ್ಯವಿರುವವರು ಪರದಾಡುವಂತಾಗಿದೆ.
ಕೆಂಪು ರಕ್ತ ಕಣದ ಆವಶ್ಯಕತೆ ತೀರಾ ಹೆಚ್ಚಿದ್ದು, ಅದರ ಕೊರತೆಯೂ ಎದುರಾಗಿದೆ. ವೆನ್ಲಾಕ್‌ ಪ್ರಾದೇಶಿಕ ರಕ್ತ ಮರುಪೂರಣ ಕೇಂದ್ರದಲ್ಲಿ ಸದ್ಯ 677 ಬ್ಯಾಗ್‌ ಪ್ಲಾಸ್ಮಾ, 249 ಬ್ಯಾಗ್‌ ಕೆಂಪು ರಕ್ತ ಕಣ, 23 ಬ್ಯಾಗ್‌ ಪ್ಲೇಟ್‌ಲೆಟ್‌ನ್ನು ಪ್ರತ್ಯೇಕಿಸಿಡಲಾಗಿದೆ. ಒ ಪಾಸಿಟಿವ್‌ ಗುಂಪಿನ 200 ಯುನಿಟ್‌, ಬಿ ಪಾಸಿಟಿವ್‌ ಗುಂಪಿನ 100 ಯುನಿಟ್‌ ಕೆಂಪು ರಕ್ತಕಣಗಳನ್ನು ಪ್ರತ್ಯೇಕಿಸಿದ್ದರೆ. ಎ ಮತ್ತು ...
ಪ್ರಸ್ತುತ ಬಿ ಪಾಸಿಟಿವ್‌, ಒ ಪಾಸಿಟಿವ್‌, ಎ ಪಾಸಿಟಿವ್‌ ಮತ್ತು ಎಬಿ ಪಾಸಿಟಿವ್‌ ರಕ್ತದ ಗುಂಪುಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಎ ಪಾಸಿಟಿವ್‌ ಮತ್ತು ಎಬಿ ಪಾಸಿಟಿವ್‌ ಸಂಗ್ರಹ ಇಲ್ಲದೆ ರಕ್ತ ಪೂರೈಕೆ ಸಾಧ್ಯವಾಗುತ್ತಿಲ್ಲ. ಅಲ್ಲದೆ, ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಗಳು ಕಡಿಮೆ ಯಾಗಿರುವುದರಿಂದ ಪ್ಲೇಟ್‌ಲೆಟ್‌ ಅಂಶಕ್ಕೆ ಬೇಡಿಕೆ ಕಡಿಮೆ. ಪ್ಲಾಸ್ಮಾಕ್ಕೂ ಅಷ್ಟೇನು ಬೇಡಿಕೆ ಇಲ್...