text
stringlengths
0
61.5k
2004ರವರೆಗೂ ಪ್ರಧಾನ ಮಂತ್ರಿ‌ ಆಗಿದ್ದ ವಾಜಪೇಯಿ ಅತಿಯಾದ ಆತ್ಮವಿಶ್ವಾಸದಿಂದ ಅವಧಿಗೂ ಮುನ್ನವೇ 'ಇಂಡಿಯಾ ಶೈನಿಂಗ್' ಹೆಸರಿನಲ್ಲಿ ಚುನಾವಣೆಗೆ ಹೋಗಿ ಪೆಟ್ಟುತಿಂದರು. 2004ರಲ್ಲಿ ಬಿಜೆಪಿ ಗಳಿಸಿದ್ದು ಕೇವಲ 138 ಸೀಟು.
Aug 6, 2020, 4:00 PM
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಾಲಕೃಷ್ಣ ಅಡ್ವಾಣಿ ಅವರಿಗೆ ಅವಕಾಶ ನೀಡಿಲ್ಲ ಎನ್ನುವ ವಿಷಯ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಅಡ್ವಾಣಿ ಅವರನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ ಎಂದು ಮಾತನಾಡಲಾಗುತ್ತಿದೆ.‌ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್ 'ಅಡ್ವಾಣಿ ಅವರನ್ನು ಕೇಳಿಯೇ ಆಹ್ವಾನಿತರ ಪಟ್...
ಸ್ವತಂತ್ರ್ಯ ಪೂರ್ವದಿಂದಲೂ ಆರ್ ಎಸ್ ಎಸ್ ತನ್ನ ಬಲಪಂಥದ ಪ್ರತಿಷ್ಠಾಪನೆಗೆ ಪರಿತಪಿಸುತ್ತಿತ್ತು. ಅದಕ್ಕಾಗಿ ರಾಜಕೀಯ ಅಧಿಕಾರವೂ ಬೇಕೆಂದು ನಂಬಿತ್ತು.‌ ಇದೇ ಹಿನ್ನಲೆಯಲ್ಲಿ 1980ರಲ್ಲಿ ಭಾರತೀಯ ಜನತಾ ಪಕ್ಷವನ್ನು ಹುಟ್ಟುಹಾಕಿತು. ಆದರೆ ಅಟಲ್ ಬಿಹಾರಿ‌ ವಾಜಪೇಯಿ ಅಧ್ಯಕ್ಷತೆಯಲ್ಲಿ 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ್ದು ಕೇವಲ ಎರಡು ಸಂಸತ್ ಸ್ಥಾನಗಳನ್ನು. ಆಗ ಆರ್ ಎಸ್ ...
1986ರಲ್ಲಿ ಸೌಮ್ಯವಾದಿ ಅಟಲ್ ಬಿಹಾರಿ ವಾಜಪೇಯಿಯನ್ನು ಪಕ್ಕಕ್ಕೆ ಸರಿಸಿ ಉಗ್ರಸ್ವರೂಪಿ ಲಾಲಕೃಷ್ಣ ಅಡ್ವಾಣಿ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ನೀಡಲಾಯಿತು. ಅಡ್ವಾಣಿ ರಾಮಜನ್ಮಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ದೇಶವ್ಯಾಪ್ತಿ ಸಂಚರಿಸಿ ಉಗ್ರ ಭಾಷಣ ಮಾಡಿ ಹಿಂದುತ್ವವನ್ನು ಉದ್ದೀಪನಗೊಳಿಸಿದ ಪರಿಣಾಮ 1989ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 85 ಸಂಸತ್ ಸದಸ್ಯರನ್ನು ಹೊಂದುವಂತಾಯಿತು. 2...
ಇದಾದ ಮೇಲೆ 1991ರಿಂದ 93ರವರೆಗೆ ಬಿಜೆಪಿ ಅಧ್ಯಕ್ಷರಾಗಿದ್ದ ಮುರಳಿ ಮನೋಹರ ಜೋಷಿ ಅವರನ್ನು ಬದಲಾಯಿಸಿ 1996ರ ಲೋಕಸಭಾ ಚುನಾವಣೆಯನ್ನು ಅಡ್ವಾಣಿ ನಾಯಕತ್ವದಲ್ಲಿ ಎದುರಿಸಲಾಯಿತು. ಇದು ಕೂಡ ಫಲ ನೀಡಿತು. 1996ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 161 ಸ್ಥಾನಗಳನ್ನು ಗೆದ್ದಿತ್ತು. ಇದಾದ ಎರಡೇ ವರ್ಷಕ್ಕೆ ಅಂದರೆ 1998ಕ್ಕೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿ 18...
ಆಗ ವಾಸ್ತವವಾಗಿ 2 ಸೀಟುಗಳಿಂದ 182 ಸೀಟುಗಳವರೆಗೆ ಬಿಜೆಪಿಯನ್ನು ಕೈಹಿಡಿದು ಕರೆತಂದಿದ್ದ ಅಡ್ವಾಣಿ ಪ್ರಧಾನ ಮಂತ್ರಿ ಆಗಬೇಕಿತ್ತು. ಆದರೆ ಎನ್‌ಡಿಎ ಮಿತ್ರ ಪಕ್ಷಗಳು ಸೌಮ್ಯವಾದಿ ಅಟಲ್ ಬಿಹಾರಿ ವಾಜಪೇಯಿ ಕಡೆಗೆ ಒಲವು ತೋರಿದವು. ದೇಶದಲ್ಲಿ ಮೊದಲ ಬಾರಿಗೆ 1998ರ ಮಾರ್ಚ್ 19ರಂದು ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ದೇಶದ ಚುಕ್ಕಾಣಿ ಹಿಡಿಯಿತು. ಲಾಲಕೃಷ್ಣ ಅಡ್ವಾಣಿ ಉಪ ಪ್ರಧಾನಿ ಪಟ್ಟಕ್ಕೆ ತೃಪ್ತ...
ಭಾಗ- 1: ಬಾಬ್ರಿ ಮಸೀದಿ- ರಾಮ ಜನ್ಮಭೂಮಿ ರಾಜಕೀಯ ವಿವಾದದಲ್ಲಿ ಎದ್ದವರು- ಬಿದ್ದವರು.
ಉಗ್ರವಾದಿ ಅಡ್ವಾಣಿ ನೇತೃತ್ವದಲ್ಲಿ 1998ರಲ್ಲಿ ಚುನಾವಣೆ ಎದುರಿಸಿ ಬಿಜೆಪಿ 182 ಸೀಟು ಗೆದ್ದಿತ್ತು. ಪಕ್ಷ ಅಧಿಕಾರದಲ್ಲಿದ್ದರೂ ತನ್ನ ನೆಲೆ ವಿಸ್ತರಿಸಿಕೊಳ್ಳಲಾಗಲಿಲ್ಲ. 1998ರಿಂದ 2004ರವರೆಗೆ ನಾಲ್ವರು (ಕೇಶುಭಾವ್ ಠಾಕ್ರೆ, ಬಂಗಾರು ಲಕ್ಷ್ಮಣ್, ಜ್ಞಾನ ಕೃಷ್ಣಮೂರ್ತಿ ಮತ್ತು ವೆಂಕಯ್ಯ ನಾಯ್ಡು) ಅಧ್ಯಕ್ಷರನ್ನು ಬದಲಿಸಿತು. ಬಂಡಾರು ಲಕ್ಷ್ಮಣ್ ಭ್ರಷ್ಟಾಚಾರದ ಆರೋಪದ ಮೇಲೆ ರಾಜೀನಾಮೆ ನೀಡಬೇಕ...
ಭಾಗ- 2: ಬಾಬರಿ ಮಸೀದಿ- ರಾಮ ಜನ್ಮಭೂಮಿ ರಾಜಕೀಯ ವಿವಾದದಲ್ಲಿ ಎದ್ದವರು- ಬಿದ್ದವರು
ಆಗ ಬಿಜೆಪಿ ಮತ್ತೆ ಮೊರೆ ಹೋಗಿದ್ದು ಲಾಲಕೃಷ್ಣ ಅಡ್ವಾಣಿ ಅವರ ಬಳಿ. 2004ರಲ್ಲಿ ಅಡ್ವಾಣಿ ಮತ್ತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದರು. ಆದರೆ ಪಾಕಿಸ್ತಾನದ ಮೊಹಮ್ಮದ್ ಆಲಿ ಜಿನ್ನಾ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿದರು ಎನ್ನುವ ಕಾರಣಕ್ಕೆ ಏಕಾಏಕಿ ಒಂದೇ ವರ್ಷದಲ್ಲಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ‌ಕಿತ್ತುಹಾಕಲಾಯಿತು. 2005ರಲ್ಲಿ ರಾಜನಾಥ್ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿ...
ಆದರೆ ಅಡ್ವಾಣಿ ಬಗ್ಗೆ ಎಳ್ಳಷ್ಟು ಕನಿಕರ ತೋರದ ಆರ್ ಎಸ್ ಎಸ್ 2014ರ ಲೋಕಸಭಾ ಚುನಾವಣೆಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿತು. 282 ಸೀಟು ಗೆದ್ದು ಅಧಿಕಾರವನ್ನೂ ಹಿಡಿಯಿತು. ಅಲ್ಲಿಗೆ ಒಂದು ಕಾಲದ ಉಗ್ರ ನಾಯಕ, ಅಗ್ರನಾಯಕ ಲಾಲಕೃಷ್ಣ ಅಡ್ವಾಣಿ ದುರಂತನಾಯಕರಾದರು.
ಸೌಹಾರ್ದ ಟ್ರೋಫಿ ಕ್ರಿಕೆಟ್‌ ಪಂದ್ಯಾಟ - ಮಹಾಲಿಂಗೇಶ್ವರ ಕಾರ್ಕಳ ತಂಡ ಪ್ರಥಮ - News Karkala
Homeಸುದ್ದಿಸೌಹಾರ್ದ ಟ್ರೋಫಿ ಕ್ರಿಕೆಟ್‌ ಪಂದ್ಯಾಟ - ಮಹಾಲಿಂಗೇಶ್ವರ ಕಾರ್ಕಳ ತಂಡ ಪ್ರಥಮ
ಸೌಹಾರ್ದ ಟ್ರೋಫಿ ಕ್ರಿಕೆಟ್‌ ಪಂದ್ಯಾಟ – ಮಹಾಲಿಂಗೇಶ್ವರ ಕಾರ್ಕಳ ತಂಡ ಪ್ರಥಮ
ಕಾರ್ಕಳ : ನಿರಂತರವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡಲ್ಲಿ ದೈಹಿಕ ಸಾಮರ್ಥ ವೃದ್ಧಿಯೊಂದಿಗೆ ಆರೋಗ್ಯ ಕಾಪಾಡಲು ಸಾಧ್ಯ. ಯುವ ಸಮುದಾಯ ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕು. ಯುವಕರಲ್ಲಿ ಕ್ರೀಡೆ ಕುರಿತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಗಾಂಧಿ ಮೈದಾನವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.
ಅವರು ಫೆ. 28ರಂದು ಸೌಹಾರ್ದ ಫ್ರೆಂಡ್ಸ್ ಕಾರ್ಕಳ ವತಿಯಿಂದ ಗಾಂಧಿ ಮೈದಾನದಲ್ಲಿ ನಡೆದ ಸೌಹಾರ್ದ ಟ್ರೋಫಿ-2022 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರ ಸುರೇಂದ್ರ ಶೆಟ್ಟಿ ಮಾತನಾಡಿ, ಕ್ರೀಡೆಯಿಂದ ಸಂಘಟನೆ ಸಾಧ್ಯ. ಸಂಘಟನೆ ಮೂಲಕ ಯುವಕರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್‌ ಶೆಟ್ಟಿ ಮಾತನಾಡಿ, ಸೌಹಾರ್ದ ಫ್ರೆಂಡ್ಸ್‌ ಕಾರ್ಕಳ ತಂಡವು ಪ್ರತಿ ವರ್ಷ ಅತ್ಯಂತ ಅದ್ಧೂರಿಯಾಗಿ ಕ್ರಿಕೆಟ್‌ ಪಂದ್ಯಾಟ ನಡೆಸುವುದರೊಂದಿಗೆ ಸಾಧಕರನ್ನು ಗುರುತಿ...
ವೇದಿಕೆಯಲ್ಲಿ ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ಪತ್ರಕರ್ತ ರಾಮಚಂದ್ರ ಬರೆಪ್ಪಾಡಿ, ಪುರಸಭಾ ಸದಸ್ಯರಾದ ಪ್ರತೀಮಾ ರಾಣೆ, ಪ್ರದೀಪ್‌, ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಂದ್ರ, ಬಂಟ್ಸ್ ಯುವ ಸಂಘದ ಅಧ್ಯಕ್ಷ ಅವಿನಾಶ್ ಜಿ. ಶೆಟ್ಟಿ, ಕರಾವಳಿ ಟೂರ್ಸ್ ಮತ್ತು ಟ್ರಾವೆಲ್ಸ್ ಮಾಲಕ ಪ್ರಶಾಂತ್ ಶೆಟ್ಟಿ, ಅಶೋಕ್ ಮಡಿವಾಳ, ಸೌಹಾರ್ದ ಫ್ರೆಂಡ್ಸ್‌ ನ ತೌಸಿಫ್‌ ಹಾಗೂ ವಿಜಿತ್‌...
ಅಸಹಾಯಕರ ಬಾಳಿಗೆ ಬೆಳಕಾಗಿರುವ ಸುರಕ್ಷಾ ಸೇವಾಶ್ರಮದ ಆಯಿಷಾ ಅವರನ್ನು ಸನ್ಮಾನಿಸಲಾಯಿತು.
ಮಹಾಲಿಂಗೇಶ್ವರ ಕಾರ್ಕಳ ತಂಡ ಪ್ರಥಮ
ಫೆ. 25 ರಿಂದ 27ರವರೆಗೆ ನಡೆದ ಕ್ರಿಕೆಟ್‌ ಪಂದ್ಯಾಟದಲ್ಲಿ 20 ತಂಡಗಳು ಭಾಗವಹಿಸಿದ್ದು, ಮಹಾಲಿಂಗೇಶ್ವರ ಕಾರ್ಕಳ ತಂಡ ಪ್ರಥಮ ಸ್ಥಾನ ಪಡೆಯಿತು. ಇಲೆವೆನ್‌ ಸ್ಟಾರ್‌ ಕಾರ್ಕಳ ತಂಡ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿತು. ಇಲೆವೆನ್‌ ಸ್ಟಾರ್‌ ತಂಡದ ಪ್ರಫುಲ್‌ ಸರಣಿ ಶ್ರೇಷ್ಠ ಹಾಗೂ ಮಹಾಲಿಂಗೇಶ್ವರ ತಂಡದ ಇಲಿಯಾಸ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ದೇವಿರಮ್ಮಣ್ಣಿ ಆರಾಧ್ಯ ದೈವ ಕೆಂಕೇರಮ್ಮ | Prajavani
ಬೆಲೆ ಇಳಿಸದಿದ್ದರೆ ಹೋರಾಟ ತೀವ್ರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿ ಉದ್ಯಮಿಗಳ ದಲ್ಲಾಳಿಯೇ ಹೊರತು, ಜನಸಾಮಾನ್ಯರ ಪರವಲ್ಲ: ಕಾಂಗ್ರೆಸ್‌ ಟೀಕೆ ಪಂಜಾಬ್‌ ನೂತನ ಸಿಎಂ ಚನ್ನಿ ವಿರುದ್ಧ ಮೀಟೂ ಆರೋಪ: 'ವೆಲ್ ಡನ್ ರಾಹುಲ್'ಎಂದ ಬಿಜೆಪಿ 17 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್: ವಿಡಿಯೊ ಹರಿಬಿಟ್ಟ ದುಷ್ಕರ್ಮಿಗಳು ಪಂಜಾಬ್‌ನ 16ನೇ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಚನ್ನಿ ಪ್...
Deveerammanni
ಮಾದಾಪುರದಲ್ಲಿವೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಲವು ದೇವಾಲಯಗಳು
ದೇವಿರಮ್ಮಣ್ಣಿ ಆರಾಧ್ಯ ದೈವ ಕೆಂಕೇರಮ್ಮ
ಕಿಕ್ಕೇರಿ ಗೋವಿಂದರಾಜ Updated: 12 ಮೇ 2019, 11:54 IST
ಕಿಕ್ಕೇರಿ: ಮಂಡ್ಯ ಜಿಲ್ಲೆಯ ಗಡಿ ಕಿಕ್ಕೇರಿ ಹೋಬಳಿ ತುದಿಯ ಮಾದಾಪುರ ಗ್ರಾಮ ಹಲವು ವೈಶಿಷ್ಟ್ಯಗಳ ತವರೂರು. ಅಗ್ರಹಾರವಾಗಿದ್ದ ಗ್ರಾಮದಲ್ಲಿ ಹಲವು ದೇವಾಲಯಗಳಿದ್ದು, ಐತಿಹಾಸಿಕ ಹಿನ್ನೆಲೆ ಹೊಂದಿವೆ.
ಗ್ರಾಮದಲ್ಲಿ ಸದಾ ಪೂಜಾರಾಧನೆ ನಡೆಯುವ ಪ್ರತೀಕವಾಗಿ ಕೆಂಕೇರಮ್ಮ, ತ್ರಯಂಭಕೇಶ್ವರ, ಮಹಾಲಿಂಗೇಶ್ವರ, ಚನ್ನಕೇಶವ, ವೀರಭದ್ರೇಶ್ವರ, ಆಂಜನೇಯ ದೇಗುಲ, ಸನ್ಯಾಸಿ ಮಂಟಪ, ಈಶ್ವರ ದೇವಾಲಯ, ಮಾರಮ್ಮ ದೇವಾಲಯ, ಸಿಂಗಮ್ಮ ದೇವಾಲಯ, ರಾಮೇಶ್ವರ ದೇವಾಲಯ ಸೇರಿದಂತೆ ಹಲವು ದೇಗುಲಗಳಿದ್ದು, ಪಶ್ಚಿಮವಾಹಿನಿಯಾಗಿ ಹೇಮಾವತಿ ನದಿ ಪ್ರಕೃತಿದತ್ತವಾಗಿ ಹರಿಯುತ್ತಿರುವುದು ವಿಶೇಷವಾಗಿದೆ.
350 ವರ್ಷಗಳ ಇತಿಹಾಸವಿರುವ ಕೆಂಕೇರಮ್ಮ ದೇಗುಲಕ್ಕೆ ಭಕ್ತಿ ಶಕ್ತಿಯ ಮಹಿಮೆ ಇದೆ. ಇಲ್ಲಿ ಬಲು ಹಿಂದೆ ಕೆಂಕೆರೆ ಎಂಬ ಕೆರೆ ಇತ್ತು. ಕೆರೆಯ ನೀರು ಕೆಂಪು ಬಣ್ಣದಿಂದ ಕೂಡಿದ್ದು, ನೋಡುಗರ ಗಮನ ಸೆಳೆಯುತ್ತಿತ್ತು. ವಿಪ್ರ ಸಾತ್ವಿಕರು ಅಗ್ರಹಾರದಲ್ಲಿ ಸಂಧ್ಯಾವಂದನೆ ಮಾಡುತ್ತಿದ್ದರು. ಒಬ್ಬರು ಕೆರೆಯ ದಂಡೆಯ ಕಲ್ಲಿನ ಮೇಲೆ ಕುಳಿತು ಸಂಧ್ಯಾ ವಂದನೆ ಮಾಡುತ್ತಿದ್ದರು. ದೇವಿಯ ಅಶರೀರವಾಣಿ ಕನಸಿನಲ್ಲಿ ಬಂ...
ತತ್ಪರಿಣಾಮ ಗ್ರಾಮದಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ಮೂಡುವಂತಾ ಯಿತು. ಗ್ರಾಮದ ಮಗಳು, ಮೈಸೂರು ಸಾಮ್ರಾಜ್ಯದ ಮಹಾರಾಣಿ ದೇವಿರಮ್ಮಣ್ಣಿ ಗ್ರಾಮದ ದೇವಿಯ ಮಹಿಮೆಯನ್ನು ಅರಿತು ಪೂಜಾ ಕೈಂಕರ್ಯವನ್ನು ಸದಾ ಮಾಡುತ್ತಿದ್ದರು. ಮಹಾರಾಜರ ಪರ್ಯಟನೆ ಸಮಯದಲ್ಲಿ ಗ್ರಾಮಕ್ಕೆ ಬಂದು ದೇವಿರಮ್ಮಣ್ಣಿಯನ್ನು ವರಿಸಿದರು. ದೇವಿರಮ್ಮಣ್ಣಿಯವರು ದೇವಿಯ ದೇಗುಲ ಪೂಜಾರಾಧನೆಗೆ ಸಾಕಷ್ಟು ದತ್ತಿಯಾಗಿ ನೂರಾರು ಎಕರೆ ಭೂ...
ಗುಡಿಯ ಮುಂಭಾಗದಲ್ಲಿ ಅಶ್ವತ್ಥವೃಕ್ಷ ಕಟ್ಟೆ ಇದ್ದು ನಂಬುಗೆಯಿಂದ ಪೂಜಿಸಿದ್ದಲ್ಲಿ ಇಷ್ಟಾರ್ಥ ಸಿದ್ಧಿ, ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ದೀಪಾವಳಿಯ ಅಮಾವ್ಯಾಸೆಯಂದು ದೇವಿಯ ಜಾತ್ರೆ ನಡೆಯುತ್ತದೆ. ಹೋಮ, ಹವನ, ಅಭಿಷೇಕಾದಿಗಳು, ದೇವಿಯ ಮೆರವಣಿಗೆ ನಡೆಯಲಿದೆ ಏಳು ಗ್ರಾಮಗಳಿಂದ ಬರುವ ಸಿಡಿ ರಥದ ಜಾತ್ರೆ ಕಣ್ಮನ ಸೆಳೆಯುತ್ತದೆ.
ಹೊರ ರಾಜ್ಯಗಳಿಂದಲೂ ದೇವಿಗೆ ಭಕ್ತರಿದ್ದಾರೆ. ಜೊತೆಗೆ ಅಮೆರಿಕ, ಸಿಂಗಾಪುರ, ಲಂಡನ್, ಮಸ್ಕತ್‌, ಆಸ್ಟ್ರೇಲಿಯಾ, ಸೌದಿಯಲ್ಲಿ ನೆಲೆಸಿರುವ ದೇವರ ಒಕ್ಕಲಿನವರು ಇಲ್ಲಿಗೆ ಬರುತ್ತಾರೆ.
ಈ ಮಾರ್ಗದಲ್ಲಿ ಬನ್ನಿ
ಕಿಕ್ಕೇರಿಯಿಂದ ಗೋವಿಂದ ನಹಳ್ಳಿಯ ಪಂಚಲಿಂಗೇಶ್ವರ ದೇಗುಲದ ಮಾರ್ಗವಾಗಿ 13 ಕಿ.ಮೀ. ಅಂತರವಿದ್ದು, ಬಸ್ ಸೌಕರ್ಯವಿದೆ. ಚನ್ನರಾಯ ಪಟ್ಟಣ ಮಾರ್ಗವಾಗಿ 15 ಕಿ.ಮೀ ದೂರದಲ್ಲಿದ್ದು, ಶ್ರೀನಿವಾಸಪುರ ಮಾರ್ಗವಾಗಿ ಬರಬಹುದಾಗಿದೆ. ಹೊಳೆನರಸೀಪುರದಿಂದ 15 ಕಿ.ಮೀ. ಇದ್ದು, ಹಿಪ್ಪೇವು ಗ್ರಾಮದ ಮಾರ್ಗವಾಗಿ ಬರಬಹುದು. ಮಂದಗೆರೆ ರೈಲು ನಿಲ್ದಾಣದಿಂದ 10 ಕಿ.ಮೀ. ಅಂತರವಿದ್ದು, ಕೋಟಹಳ್ಳಿ ಮಾರ್ಗವಾಗಿ ಬರಬಹುದು...
‌ದೇವಾಲಯ ಜೀರ್ಣೋದ್ಧಾರಗೊಳಿಸಿ
ಗ್ರಾಮದ ಹೊರವಲಯದಲ್ಲಿ ಹೇಮಾವತಿ ನದಿಯ ದಂಡೆಯಲ್ಲಿ ಅಪರಕರ್ಮ ಕ್ರಿಯೆಗೆ ಪ್ರಶಸ್ತವಾದ ಸುಂದರ ಕಲ್ಲಿನ ಸನ್ಯಾಸಿ ಮಂಟಪವಿದೆ. ಅದು ಜೀರ್ಣೋದ್ಧಾರಗೊಳ್ಳಬೇಕಾಗಿದೆ. ಗ್ರಾಮದ ಉತ್ತರ ಭಾಗದ ಪಶ್ಚಿಮವಾಹಿನಿಯ ಬಳಿ ಇರುವ ರಾಮೇಶ್ವರ ದೇಗುಲ, ಗೋವಿನಕಲ್ಲು ಪ್ರಕೃತಿಯ ಸುಂದರ ಮಡಿಲಿನಲ್ಲಿದ್ದು, ಪ್ರವಾಸಿ ತಾಣದಂತಿದೆ. ಪ್ರವಾಸೋದ್ಯಮ ಇಲಾಖೆ ಈ ತಾಣವನ್ನು ಅಭಿವೃದ್ಧಿಗೊಳಿಸಬೇಕು ಎಂದು ಕೆಂಕೇರಮ್ಮ ಚಾರಿಟಬಲ್...
ಗಣಿ ನಿಷೇಧ ರದ್ದು: ಕಾನೂನು ವಿಭಾಗದ ವೈಫಲ್ಯ
ಒಳ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ 20ಕ್ಕೆ
ಸಚಿವ ಮುರುಗೇಶ ನಿರಾಣಿ ರಾಜೀನಾಮೆಗೆ ಒತ್ತಾಯ
11 ಮರಗಳ ಹನನ: ಎಸ್ಪಿ ವಿರುದ್ಧ ಆಕ್ರೋಶ
19 ವಿದ್ಯಾರ್ಥಿ ಪುರಸ್ಕಾರ, 21ಕ್ಕೆ ಕೃತಿ ಬಿಡುಗಡೆ
ಮೈಷುಗರ್‌: ಅನಿರ್ಧಿಷ್ಟಾವಧಿ ಧರಣಿ ಆರಂಭ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಿರಿದಾಗುತ್ತಿರುವ ಸೂಳೆಕೆರೆ
ರಂಗಭೂಮಿಯಿಂದ ಸಂಬಂಧ ಬೆಳೆಸುವ ಕಾರ್ಯ
ಜೆಡಿಎಸ್ ಸಂಘಟನಾ ಶಕ್ತಿಗೆ 'ಅಪ್ಪಾಜಿ' ನಾಮಬಲ
ಹಾಸನ: ಫಸಲ್ ಬಿಮಾ ಯೋಜನೆ ನೋಂದಣಿಗೆ ರೈತರ ನಿರಾಸಕ್ತಿ
'); $('#div-gpt-ad-635930-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-635930').addClass('inartprocessed'); } else $('#in-article-635930').hide(); } else { _taboola.push({article:'auto', url:'https://www.prajavani.net/district/mandya/deveerammanni-6359...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-635930 .field-name-body .field-items div.field-item > p'); if(x1 != null && x1.length != 0) { $('#node-635930 .field-name-body...
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-635930 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-635930'); }); } else { $('#in-article-mob-635930').hide(); $('#in-article-mob-3rd-635930').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ದ.ಕನ್ನಡ ಜಿಲ್ಲೆಯ ಯತಿನ್, ಯತೀಶ್, ಮೋಹನ್, ಕುಮುದಾಕ್ಷ ಎಂಬುವವರನ್ನು ಗೌರಿ ಲಂಕೇಶ್ ಹತ್ಯೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಈ ನಾಲ್ವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ ಸೂಚಿಸಿದ್ದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಇದೇ 27ರಂದು ತನಿಖೆಗೆ ಹಾಜರಾಗಬೇಕು ಎಂದು ಎಸ್ ಐ ಟಿ ಸೂಚಿಸಿತ್ತು. ಆದರೆ, ಬಂಧನ ಭೀತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಯತಿನ್, ಯತೀಶ್, ಮೋಹನ್, ಕುಮುದಾಕ್ಷ ಎಂಬುವವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ಸಂಬಂಧ ಮೂರು ಬಾರಿ ವಿಚಾರಣೆ ನಡೆದಿದ್ದು, ಪಬ್ಲಿಕ್ ಪ್ರಾಸಿಕ್ಯೂಟರ್ ರಾಜು ಪೂಜಾರಿ, "ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದರಿಂದ ನಿರೀಕ್ಷಣಾ ಜಾಮೀನು ನೀಡುವ...
ಇದನ್ನೂ ಓದಿ : ಎಟಿಎಸ್ ಬಂಧಿತ ಆರೋಪಿಗಳ ಬಳಿ ಪಿಸ್ತೂಲುಗಳು ಪತ್ತೆ; ಗೌರಿ ಹತ್ಯೆಯಲ್ಲಿ ಕೈವಾಡ ಶಂಕೆ
ಅರ್ಜಿದಾರರ ಪರ ವಾದ ಮಂಡಿಸುತ್ತಿರುವ ವಕೀಲ ಎಸ್ ಪಿ ಚಂಗಪ್ಪ, "ಅರ್ಜಿದಾರರು ಯಾವ ಪ್ರದೇಶದಲ್ಲಿ ಬಂಧನಕ್ಕೆ ಒಳಗಾಗುತ್ತಾರೆ ಎಂಬ ಭೀತಿ ಇರುತ್ತದೆಯೋ ಅಲ್ಲಿ ಅರ್ಜಿ ಹಾಕಲು ಅವಕಾಶವಿದೆ. ಅಲ್ಲದೆ, ಕೋಕಾ ಕಾಯ್ದೆ ಅರ್ಜಿದಾರರಿಗೆ ಅನ್ವಯಿಸಲು ಸಾಧ್ಯವಿಲ್ಲ. ಹಳೆಯ ಸೆಕ್ಷನ್ ಪ್ರಕಾರ ಎಸ್ ಐ ಟಿ ಪೊಲೀಸರು ನೋಟಿಸ್ ನೀಡಿದ್ದಾರೆ. ಆರೋಪಿಗಳ ವಿರುದ್ಧವಷ್ಟೇ ಕೋಕಾ ಕಾಯ್ದೆ ಹಾಕಲಾಗಿದೆ. ಅರ್ಜಿದಾರರ ಆರೋಪ ...
ಮಂಗಳೂರು ದಕ್ಷಿಣ ಕನ್ನಡ ಗೌರಿ ಲಂಕೇಶ್ Mangalore Dakshina Kannada Gowri Lankesh Special Investigation Team Anticipatory Bail ವಿಶೇಷ ತನಿಖಾ ತಂಡ ನಿರೀಕ್ಷಣಾ ಜಾಮೀನು
85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಗಮ | kalaburgi 85th akhila bharata kannada sahitya sammelana logo released
Bengaluru, First Published 5, Jan 2020, 4:24 PM
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೊಗರಿ ಕಣಜ ಕಲಬುರಗಿ ಸಿದ್ಧವಾಗುತ್ತಿದ್ದು, ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಗಮ ಒಳಗೊಂಡಿದೆ. ಹಾಗಾದ್ರೆ ವಿಶೇಷತೆ ಏನೇನಿದೆ..? ಈ ಕೆಳಗಿನಂತಿದೆ ಸಂಪೂರ್ಣ ಮಾಹಿತಿ.
ಕಲಬುರಗಿ, (ಜ.05): ಕಲಬುಗಿಯಲ್ಲಿ ಇದೇ ಫೆಬ್ರುವರಿ 5,6 ಹಾಗೂ 7 ರಂದು ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛ ಬಿಡುಗಡೆಯಾಗಿದೆ.
ಇಂದು (ಭಾನುವಾರ) ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು. ಜಿಲ್ಲಾಧಿಕಾರಿ ಬಿ. ಶರತ್ ಲಾಂಛನವನ್ನು ಬಿಡುಗಡೆ ಮಾಡಿದರು. ಹಾಗೂ ಇದೇ ವೇಳೆ ಸಮ್ಮೇಳನದ ಸಿದ್ಧತೆಗೆ ಮಾಹಿತಿ ನೀಡಿದರು.
ಈ ವೇಳೆ ಸಮ್ಮೇಳನ ಹಿನ್ನೆಲೆ ರಚಿಸಲಾಗಿರುವ 16 ಸಮಿತಿಗಳ ಸದಸ್ಯರು ವಿವಿಧ ಇಲಾಖೆಗಳ ಅಧಿಕಾರಿಗಳು , ಶಾಸಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕರಿಗಳು ಉಪಸ್ಥಿತರಿದ್ದರು.
ಸಾಹಿತ್ಯ ಸಮ್ಮೇಳನದ ತೂಗುಮಂಚದಲ್ಲಿ ಕೃಷ್ಣಕವಿ
ಲಾಂಛನದಲ್ಲಿ ವಿಶೇಷತೆ ಏನಿದೆ..?
ಕಲಬುರಗಿಯ ಐತಿಹಾಸಿಕ ತಾಣ ಹಾಗೂ ಕವಿರಾಜ ಮಾರ್ಗ ಕೃತಿಯ ಚಿತ್ರಣವನ್ನು ಲಾಂಛನ ಒಳಗೊಂಡಿದೆ. ಕಲ್ಯಾಣ ಕರ್ನಾಟಕದ ಸೊಗಡು, ಸಂಸ್ಕೃತಿ ಸಾರುವ ಚಿತ್ರಗಳು ಒಳಗೊಂಡಿದ್ದು, ಈ ಲಾಂಛನವನ್ನು ಸ್ಥಳೀಯ ಕಲಾವಿದ ಡಾ.ಪಿ. ಪರಶುರಾಮ ವಿನ್ಯಾಸಗೊಳಿಸಿರುವವುದು ವಿಶೇಷ.
ಕನ್ನಡಾಂಬೆಯ ಭಾವಚಿತ್ರದೊಂದಿಗೆ ಸ್ಥಳೀಯ ಪ್ರಸಿದ್ಧ ಸೂಫಿ ಸಂತ ಹಜರತ್ ಖಾಜಾ ಬಂದೇನವಾಜ್ ದರ್ಗಾ, ಶರಣಬಸವೇಶ್ವರ ದೇವಸ್ಥಾನ, ಕಲಬುರಗಿಯ ಕೋಟೆ, ಚರ್ಚ್, ಬೌದ್ಧ ವಿಹಾರ ಹಾಗೂ ತೊಗರಿ ಬೆಳೆ ಚಿತ್ರಗಳನ್ನು ಲಾಂಛನದಲ್ಲಿ ಬಳಸಲಾಗಿದೆ.
ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿ ಬಿಡುಗಡೆ; ಅಗ್ರಸ್ಥಾನದಲ್ಲಿ 'ಕೆಜಿಎಫ್-2' ಮತ್ತು 'ಪುಷ್ಪ': ಟಾಪ್ 5 ಚಿತ್ರಗಳು ಯಾವುವು? - News Belgaum
ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿ ಬಿಡುಗಡೆ; ಅಗ್ರಸ್ಥಾನದಲ್ಲಿ 'ಕೆಜಿಎಫ್-2' ಮತ್ತು 'ಪುಷ್ಪ': ಟಾಪ್ 5 ಚಿತ್ರಗಳು ಯಾವುವು?
ಹೊಸದಿಲ್ಲಿ: ಭಾರತದ ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡ ಕೆಜಿಎಫ್-2 ಮತ್ತು ತೆಲುಗಿನ ಪುಷ್ಪ ಸಿನಿಮಾಗಳು ಸ್ಥಾನ ಪಡೆದಿವೆ.
IMDb (Internet Movie Database) ಬಿಡುಗಡೆ ಮಾಡಿರುವ ಭಾರತದ ಹೆಚ್ಚು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ 'ಕೆಜಿಎಫ್-2' ಸಿನಿಮಾ ಅಗ್ರಸ್ಥಾನದಲ್ಲಿದೆ.
ವಿಶೇಷ ಎಂದರೆ ಟಾಪ್ 3ನಲ್ಲಿ ಯಾವುದೇ ಬಾಲಿವುಡ್ ಸಿನಿಮಾವಿಲ್ಲ. ಇನ್ನು ವಿಶೇಷ ಎಂದರೆ 2ನೇ ಸ್ಥಾನದಲ್ಲಿ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರವಿದೆ.
27.5%ರೊಂದಿಗೆ ಕೆಜಿಎಫ್-2 ಮೊದಲ ಸ್ಥಾನದಲ್ಲಿದೆ. 24.3% ರೊಂದಿಗೆ ಪುಷ್ಪ ಸಿನಿಮಾ 2ನೇ ಸ್ಥಾನದಲ್ಲಿದೆ. ಕುತೂಹಲಕಾರಿ ವಿಚಾರವೆಂದರೆ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಕೊನೆಯ ಕ್ಷಣದ ವರೆಗೂ ಮೊದಲ ಸ್ಥಾನದಲ್ಲಿತ್ತು. ಬಳಿಕ ಕೆಜಿಎಫ್-2 ಸಿನಿಮಾ ಹೆಚ್ಚು ಮತಗಳಿಸುವ ಮೂಲಕ ಮೊದಲ ಸ್ಥಾನಕ್ಕೆ ಏರಿದೆ.
ಟಾಪ್ 5 ಚಿತ್ರಗಳು:
ಇನ್ನು ಮೂರನೆ ಸ್ಥಾನದಲ್ಲಿ ಮೋಹನ್ ಲಾಲ್ ನಟನೆಯ 'ಮರಕ್ಕರ್: ಅರೇಬಿಯನ್ ಸಿ ಲಯನ್' ಸಿನಿಮಾವಿದೆ. ಈ ಸಿನಿಮಾ 8.7% ರಷ್ಟು ಮತ ಪಡೆದಿದೆ. 4ನೇ ಸ್ಥಾನದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟನೆಯ ರಾಧೆ ಶ್ಯಾಮ್ ಸಿನಿಮಾವಿದೆ. 5ನೇ ಸ್ಥಾನದಲ್ಲಿ ತಾಪ್ಸಿ ಪನ್ನು ನಟನೆಯ ಹಸೀನ್ ದಿಲ್ ರುಬಾ ಸಿನಿಮಾವಿದೆ. ಇದು ಟಾಪ್ 5 ನಲ್ಲಿರುವ ಏಕೈಕ ಬಾಲಿವುಡ್ ಸಿನಿಮಾ ಆಗಿದೆ.
ಪುರಸಭೆಯ ನಿರ್ಲಕ್ಷಕ್ಕೆÃ ಒಳಗಾದ ನೀಲಮ್ಮನ ಕೆರೆ.. | Kannadamma
Home ಧಾರವಾಡ ಪುರಸಭೆಯ ನಿರ್ಲಕ್ಷಕ್ಕೆÃ ಒಳಗಾದ ನೀಲಮ್ಮನ ಕೆರೆ..
ಪುರಸಭೆಯ ನಿರ್ಲಕ್ಷಕ್ಕೆÃ ಒಳಗಾದ ನೀಲಮ್ಮನ ಕೆರೆ..
ಮಾಬುಸಾಬ ಯರಗುಪ್ಪಿ
ನವಲಗುಂದ: ಮಹಾತ್ಮರ ಮನೆತನವೆಂದೇ ಪ್ರಸಿದ್ದಿಯಾಗಿರುವಂತಹ ಶಿರಸಂಗಿ ವಂಶಸ್ಥರಾದ ನೀಲಮ್ಮ ತಾಯಿ ನಗರದ ಜನರಿಗೆ ಕುಡಿಯುವ ನೀರಿಗಾಗಿ ಭೂಮಿಯನ್ನು ಕೊಟ್ಟು ಕೆರೆಯನ್ನು ತೆಗೆಸಿ ಊರ ಜನರಿಗೆ ಉಪಕಾರವನ್ನು ಮಾಡಿ ಹೋಗಿದ್ದಾರೆ. ಅಂತಹ ಕೆರೆಯ ನೀರನ್ನು ನಗರದ ಜನರು ಸುಮಾರು ವರ್ಷಗಳ ಕಾಲ ಕುಡಿಯಲು ಉಪಯೋಗಿಸುತ್ತಿದ್ದರು ಮತ್ತು ಈಗಲೂ ಉಪಯೋಗಿಸುತ್ತಿದ್ದಾರೆ. ಪುರಾತನ ಇತಿಹಾಸವನ್ನು ಹೊಂದಿರುವಂತಹ ಕೆರೆಯು...
ನಿರ್ಲಕ್ಷಕ್ಕೆÃ ಕೆರೆಯಲ್ಲಿ ತುಂಬಿದೆ ಕಸ: ಈ ಊರಿನ ಜನರಿಗೆ ಈ ಮೂದಲು ಕುಡಿಯಲು ನೀರು ಕೂಡುತ್ತಿದ್ದಂತಹ ನೀಲಮ್ಮ ತಾಯಿಯ ಕೆರೆಯು ನೆನಪಾಗುವುದು ಚನ್ನಮ್ಮನ ಜಲಾಶಯದಲ್ಲಿ ನೀರು ಖಾಲಿಯಾದ ನಂತರ ಅಥವಾ ಆ ಕೆರೆಯಲ್ಲಿರುವಂತಹ ಯಂತ್ರಗಳು ಕೆಟ್ಟು ಹೋದಾಗ. ಮೂದಲು ನೀಲಮ್ಮನ ಕೆರೆಯಿಂದ ಒತ್ತುವ ಗಾಡಿಯಲ್ಲಿ ಕೊಡಗಳನ್ನು ಇಟ್ಟುಕೊಂಡು ಮನೆಗೆ ನೀರು ತರುತ್ತಿದ್ದರು. ಬೆಳಗಾಯಾಯಿತೆಂದರೆ ಸಾಕು ಪ್ರತಿಯೂಬ್ಬರ...
ಈ ನೀಲಮ್ಮನ ಕೆರೆಯು ಕೂಡಾ ನಮಗೆ ಮೊದಲಿನಷ್ಟೆÃ ಮಹತ್ವವನ್ನು ಪಡೆದಿದೆ. ಯಾಕೆಂದರೆ ಈ ಕೆರೆಯ ನೀರನ್ನು ಮದುವೆ ಮುಂಜಿಗಾಗಿ ಟ್ಯಾಂಕರಗಳ ಮೂಲಕ ಬಳಕೆಯಾಗುತ್ತಿದೆ. ಆದರೆ ಈ ಕೆರೆಯಲ್ಲಿ ಸ್ವಚ್ಛತೆ ಎನ್ನುವುದು ಮರಿಚಿಕೆಯಾಗಿ ಹೋಗಿದೆ. ಈ ಕೆರೆಯು ಇಂದು ಕಸದ ಅಡ್ಡೆಯಾಗಿ ಪರಿಣಮಿಸಿದೆ. ಕುಡುಕರು ತಾವು ಕುಡಿದಂತಹ ಸರಾಯಿಯ ಬಾಟಲಿಯನ್ನು ಕೆರೆಯಲ್ಲಿ ಚಲ್ಲಿ ಹೋಗುತ್ತಿದ್ದಾರೆ. ಅನೈತಿಕ ಚಟುವಟಿಕೆಗಳ ಜೋತ...
ಕೆರೆಯ ನೀರು ಸದ್ಯ ಹಚ್ಚ ಹಸರಾಗಿದೆ. ಎಲ್ಲಿ ನೋಡಿದರಲ್ಲಿ ಪಾಚಿ ಬೆಳೆದು ನಿಂತಿದೆ. ಕೆರೆಯ ಸುತ್ತಲು ಜಾಡು ಕಟ್ಟಿದ್ದು ಈ ಕೆರೆಯನ್ನು ಪುರಸಭೆಯವರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಹಿಂದಿನ ಕಾಲದಲ್ಲಿ ಆ ಮಹಾತಾಯಿ ಈ ಊರಿನ ಜನರಿಗಾಗಿ ಹೊಲವನ್ನು ಕೊಟ್ಟು ಕೆರೆಯನ್ನು ತೆಗೆಸಿ ಅನುಕೂಲವನ್ನು ಮಾಡಿ ಹೋಗಿದ್ದರೆ ಅದನ್ನು ಸ್ವಚ್ಛತೆಯಿಂದ ಇಡಬೇಕೆಂಬ ವಿಚಾರ ಪುರಸಭೆಯವರಿಗೆ ಇಲ್ಲದಿರುವುದು ದುರಂತ...
ನೀಲಮ್ಮ ಕೆರೆ ಹಿಂದಿನಷ್ಟೆÃ ಅವಶ್ಯ. ಇವತ್ತು ಪ್ರತಿಯೂಬ್ಬರಿಗೂ ಅವಶ್ಯವಾಗಿರುವಂತಹದು ಕುಡಿಯುವ ನೀರು. ಅಂತಹ ಜಲವನ್ನು ಶೇಖರಿಸಲು ಹಿಂದಿನವರು ಬಿಟ್ಟುಹೋಗಿರುವಂತಹ ನೀಲಮ್ಮನ ಕೆರೆಯನ್ನು ಕಾಪಾಡುವುದು ನಗರದ ಪ್ರತಿಯೂಬ್ಬರ ಆದ್ಯ ಕರ್ತವ್ಯವಾಗಿದೆ. ಇವತ್ತು ಸಮಯಕ್ಕೆÃ ಸರಿಯಾಗಿ ಮಳೆಯಾಗುತ್ತಿಲ್ಲಾ, ಇದರಿಂದಾಗಿ ಕೆರೆಗಳಲ್ಲಿ ಸರಿಯಾಗಿ ನೀರು ಶೇಖರಣೆಯಾಗುತ್ತಿಲ್ಲಾ. ಇಂತಹ ಸಂದರ್ಭದಲ್ಲಿ ಮಲಪ್ರಭಾ ...
ಈ ನೀಲಮ್ಮನ ಕೆರೆಯು ಬಹಳ ಹಿಂದಿನಿಂದ ಬಂದಿರುವಂತಹದು ಇದಕ್ಕೆÃ ತನ್ನದೆಯಾದಂತಹ ಇತಿಹಾಸವಿದೆ. ಚನ್ನಮ್ಮನ ಕೆರೆಯು ನಿರ್ಮಾಣವಾದ ನಂತರ ಆ ಕೆರೆಯ ನೀರಿನ ಬಳಕೆ ಕಡಿಮೆಯಾಯಿತು. ಇಂದು ಚನ್ನಮ್ಮನ ಕೆರೆಯಲ್ಲಿನ ನೀರು ಖಾಲಿಯಾದರೆ ಈ ನೀಲಮ್ಮನ ಕೆರೆಯ ನೀರೆ ನಮಗೆ ಗತಿಯಾಗುತ್ತದೆ. ನಾವು ಮೂದಲು ಈ ರೀತಿಯಾಗಿ ಬರಗಾಲ ಬಿದ್ದರೆ ಕುಡಿಯುವ ನೀರನ್ನು ಬೆಣ್ಣೆ ಹಳ್ಳದಲ್ಲಿ ವರ್ತಿಯನ್ನು ತೆಗೆದು ಚರಗಿಯಿಂದ ತುಂ...
ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ - Saaksha TV
ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ, (ಜನವರಿ 2, 2022) ಉತ್ತರ ಪ್ರದೇಶದ ಮೀರತ್‌ನಲ್ಲಿ ಸುಮಾರು 700 ಕೋಟಿ ರೂ ವೆಚ್ಚದಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ಮಾಡಿದರು.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ದೇಶಕ್ಕಾಗಿ ಜೀವ ನೀಡುವ ಮೂಲಕ ಅಥವಾ ಕ್ರೀಡೆಯ ಮೂಲಕ ದೇಶಕ್ಕೆ ಗೌರವವನ್ನು ಗಳಿಸುವ ಮೂಲಕ ಮೀರತ್ ಜಗತ್ತಿಗೆ ತೋರಿಸಿದೆ, ಮೀರತ್ ಯಾವಾಗಲೂ ರಾಷ್ಟ್ರವನ್ನು ಪ್ರೇರೇಪಿಸಲು ಮತ್ತು ಮುನ್ನಡೆಸುತ್ತದೆ. ಎಂದು ಹೇಳಿದರು.
ಹೊಸ ವಿಶ್ವವಿದ್ಯಾನಿಲಯವು ಎಲ್ಲಾ ಆಧುನಿಕ ಮತ್ತು ಅತ್ಯಾಧುನಿಕ ಕ್ರೀಡಾ ಸೌಕರ್ಯಗಳು ಮತ್ತು ಮೂಲಸೌಕರ್ಯಗಳನ್ನು ಹೊಂದಿರುತ್ತದೆ. ಸಿಂಥೆಟಿಕ್ ಹಾಕಿ ಮೈದಾನ, ಫುಟ್‌ಬಾಲ್ ಮೈದಾನ, ಬಾಸ್ಕೆಟ್‌ಬಾಲ್ / ವಾಲಿಬಾಲ್ / ಹ್ಯಾಂಡ್‌ಬಾಲ್ / ಕಬಡ್ಡಿ ಮೈದಾನ, ಲಾನ್ ಟೆನ್ನಿಸ್ ಕೋರ್ಟ್, ಜಿಮ್ನಾಷಿಯಂ ಹಾಲ್, ಸಿಂಥೆಟಿಕ್ ರನ್ನಿಂಗ್ ಸ್ಟೇಡಿಯಂ, ಈಜುಕೊಳ, ವಿವಿಧೋದ್ದೇಶ ಹಾಲ್ ಮತ್ತು ಸೈಕ್ಲಿಂಗ್ ವೆಲೋಡ್ರೋಮ್ ...
ಶೂಟಿಂಗ್, ಸ್ಕ್ವಾಷ್, ಜಿಮ್ನಾಸ್ಟಿಕ್ಸ್, ವೇಟ್‌ಲಿಫ್ಟಿಂಗ್, ಆರ್ಚರಿ, ಕೆನೋಯಿಂಗ್ ಮತ್ತು ಕಯಾಕಿಂಗ್‌ನಂತಹ ಆಟಗಳು ವಿಶ್ವವಿದ್ಯಾಲಯದಲ್ಲಿ ಲಭ್ಯವಿರುತ್ತವೆ.
ವಿಶ್ವವಿದ್ಯಾನಿಲಯವು 540 ಮಹಿಳೆಯರು ಮತ್ತು 540 ಪುರುಷ ಕ್ರೀಡಾಪಟುಗಳು ಸೇರಿದಂತೆ 1080 ಕ್ರೀಡಾಪಟುಗಳು ಇಲ್ಲಿ ತರಬೇತಿ ಪಡೆಯಬಹುದು.
ಕೊರೋನಾ ಸೋಂಕಿತೆಗೆ ಆರೋಗ್ಯಯುತವಾಗಿ ಹೆರಿಗೆ ಮಾಡಿಸಿದ ಬ್ಯಾಡಗಿ ತಾಲೂಕು ಆಸ್ಪತ್ರೆಯ ವೈದ್ಯರು..! | Sudditaranga
ಕೊರೋನಾ ಸೋಂಕಿತೆಗೆ ಆರೋಗ್ಯಯುತವಾಗಿ ಹೆರಿಗೆ ಮಾಡಿಸಿದ ಬ್ಯಾಡಗಿ ತಾಲೂಕು ಆಸ್ಪತ್ರೆಯ ವೈದ್ಯರು..!
Puttu Kallihal May 6, 2021 1 min read
ಹಾವೇರಿ – ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ರಣಕೇಕೆ ಹಾಕುತ್ತಿದೆ. ಕೊರೋನಾಕ್ಕೆ ಮಹಿಳೆಯರು ಮಕ್ಕಳು ಸೇರಿದಂತೆ ಎಲ್ಲರೂ ಸೋಂಕಿತರಾಗುತ್ತಿದ್ದಾರೆ. ಇದರ ನಡುವೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನಲ್ಲಿ 26 ವರ್ಷದ ಸೋಂಕಿತ ಗರ್ಭಿಣಿ ಮಹಿಳೆಗೆ ಹೆರಿಗೆಯಾಗಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ..