text
stringlengths
0
61.5k
'); $('#div-gpt-ad-634211-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct...
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-634211').addClass('inartprocessed'); } else $('#in-article-634211').hide(); } else { _taboola.push({article:'auto', url:'https://www.prajavani.net/op-ed/olanota/cricket-and-betting-...
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-634211 .field-name-body .field-items div.field-item > p'); if(x1 != null && x1.length != 0) { $('#node-634211 .field-name-body...
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-634211 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-634211'); }); } else { $('#in-article-mob-634211').hide(); $('#in-article-mob-3rd-634211').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ...
ಕೋಟ್ಯಾಧಿಪತಿ ವೇದಿಕೆಯಲ್ಲಿ ಅಣ್ಣವ್ರ ಮಕ್ಕಳು - Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ್ಯಾಧಿಪತಿ ವೇದಿಕೆಯಲ್ಲಿ ಅಣ್ಣವ್ರ ಮಕ್ಕಳು
Labels: 2.ಸುದ್ದಿಗಳು, ಕನ್ನಡ ಒನ್ ಇಂಡಿಯಾ ಕೃಪೆ
ಕನ್ನಡದ ಕೋಟ್ಯಾಧಿಪತಿಯಲ್ಲಿ ಡಾ. ರಾಜಕುಮಾರ್ ಅವರ ಮೂವರು ಮಕ್ಕಳನ್ನ ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಟಿವಿ ವೀಕ್ಷಕರಿಗೆ ಲಭಿಸಲಿದೆ. ಇದೇ ಜುಲೈ 24-25ರಂದು (ಬುಧವಾರ-ಗುರುವಾರ) ಪ್ರಸಾರವಾಗಲಿರುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರು ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್‍ ಕುಮಾರ್ ಅವರಿಗೆ ಕೋಟಿ ಗೆಲ್ಲುವ ಆಟದ ಪ್ರಶ್ನೆ ಕೇಳಲಿದ್ದಾರೆ. ತುಂಬಾ ವರ್ಷಗಳ ...
ಭಾವುಕರಾದ ಶಿವಣ್ಣ!
ಡಾ.ರಾಜ್‍ಕುಮಾರ್ ಬಗ್ಗೆ ಮಾತನಾಡುತ್ತಾ ಶಿವರಾಜ್ ಕುಮಾರ್ ಭಾವುಕರಾದ ಪ್ರಸಂಗ ನಡೆಯಿತು. ಅವರ ಅವಿರತ ಪ್ರೀತಿಗೆ ಕೋಟಿ ಕೊಟ್ಟರೂ ಸಾಲದು ಎನ್ನುವಾಗ ಶಿವಣ್ಣನ ಕಣ್ಣು ಒದ್ದೆಯಾಗಿತ್ತು. ಅಂತೆಯೇ ಇಡೀ ಸಂಚಿಕೆಯ ಮಧ್ಯೆ ಮಧ್ಯೆ ರಾಜ್ ಸಾಧನೆ, ಶಿವರಾಜ್ ಕುಮಾರ್ ಅವರ ಬಾಲ್ಯ, ಬಾಲ್ಯದ ಗೆಳೆಯರಾದ ಶೇಖರ್ ಮೊದಲಾದವರ ಜೊತೆ ಅತ್ಯಮೂಲ್ಯ ಮಾತುಕತೆ ಹಾಗೂ ಕೌತುಕ ವಿಷಯಗಳನ್ನು ಈ ವಿಶೇಷ ಸಂಚಿಕೆಯಲ್ಲಿ ಶಿವಣ್ಣ...
ಪಂಚ್ ಕೊಡುತ್ತಿದ್ದ ರಾಘಣ್ಣ!
ಮಾತು ಮಾತಿಗೂ ಪಂಚ್ ಕೊಡುತ್ತಿದ್ದ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಅಪ್ಪು ಅವರು ಒಂದು ಪ್ರಶ್ನೆ ಕೇಳುತ್ತಾರೆ. ನಿಮಗೆ ಈ ನಾಲ್ಕು ಉತ್ತರಗಳಲ್ಲಿ ಯಾವುದರ ಮೇಲೆ ಡೌಟ್ ಇದೆ ಎಂದು ಅಪ್ಪು ಅವರು ಕೇಳಿದಾಗ ರಾಘಣ್ಣ "ನನಗೆ ಈ ಕಂಪ್ಯೂಟರ್ ಮೇಲೆಯೇ ಡೌಟ್ ಇದೆ!" ಎಂದರು.
ಕೋಟ್ಯಾಧಿಪತಿ ಫಿನಾಲೆ ರಾಘಣ್ಣ ಮಧ್ಯೆ ಮಧ್ಯೆ ಹಾಸ್ಯದ ಚಟಾಕಿಗಳನ್ನು ಹಾರಿಸುತ್ತಾ ಲೀಲಾಜಾಲವಾಗಿ ಕೋಟಿಗೆಲ್ಲುವ ಆಟ ಆಡುತ್ತಾ ಹೋಗುತ್ತಾರೆ. ಅಲ್ಲಲ್ಲಿ ಮಾತಿನ ಕಚಗುಳಿ ಇಡುತ್ತಾರೆ. ರಾಘಣ್ಣನಿಗೆ ಅಣ್ಣ ಶಿವಣ್ಣ ಹೆಗಲು ಕೊಡುತ್ತಾರೆ. ಇಬ್ಬರೂ ಸೇರಿ ಕೋಟಿ ಆಟಕ್ಕೆ ಇನ್ನಷ್ಟು ಮೆರಗು ನೀಡುತ್ತಾರೆ.
ಶಿವಣ್ಣನ ಫ್ಯಾನ್ಸ್ ಗಳ ಹಬ್ಬ!
ಕಾರ್ಯಕ್ರಮ ಶುರುವಾದಾಗ ಹತ್ತು ನಿಮಿಷ ಅಲ್ಲಿ ಕೇಳಿಬಂದ ಜಯಘೋಷವನ್ನು ಕಂಟ್ರೋಲ್ ಮಾಡುವುದೇ ಕಷ್ಟವಾಯಿತು. ಅಲ್ಲಿ ಶಿವಣ್ಣನ ನೂರಾರು ಅಭಿಮಾನಿಗಳು ಜಮೆಗೊಂಡಿದ್ದರು. ಪ್ರತಿಯೊಬ್ಬರ ಬಾಯಲ್ಲೂ 'ಅಣ್ಣಾವ್ರ ಮಕ್ಕಳಿಗೇ... ಜೈ' ಹರ್ಷೋದ್ಘಾರ!
ಕೋಟ್ಯಾಧಿಪತಿ ಸೀಸನ್ 2 ಮುಕ್ತಾಯ ಈ ನಡುವೆ ಶಿವಣ್ಣ, ರಾಘಣ್ಣ ಹಾಗೂ ಪುನೀತ್ ಸೇರಿ ಆನಂದ್ ಚಿತ್ರದ ಟುವಿ ಟುವೀ ಹಾಡಿಗೆ ಒಟ್ಟಿಗೇ ಹೆಜ್ಜೆ ಹಾಕಿದರು. ಶಿವಣ್ಣ ಇನ್ನೊಂದು ಕಡೆಯಿಂದ ಲಾಂಗ್ ಹಿಡಿದು ನಡೆದುಬರುತ್ತಿದ್ದರೆ ಇಡೀ ಕೋಟ್ಯಾಧಿಪತಿ ಸೆಟ್ಟಿನಲ್ಲಿ ಸಂಭ್ರಮವೋ ಸಂಭ್ರಮ. ಕೋಟ್ಯಾಧಿಪತಿ ಗ್ರ್ಯಾಂಡ್ ಫಿನಾಲೆಯ ಈ ವಿಶೇಷ ಸಂಚಿಕೆಯನ್ನು ಇದೇ ಜುಲೈ 24 -25 ರ ಬುಧುವಾರ - ಗುರುವಾರ ಸಂಜೆ 8-30ಕ್ಕ...
ಮಹಿಳೆಯರಿಗೆ ಸುರಕ್ಷತಾ ಭಾವ ನೀಡಲು #betogetherbangalore ಅಭಿಯಾನ | News13
News13 > ಸುದ್ದಿಗಳು > ರಾಜ್ಯ > ಮಹಿಳೆಯರಿಗೆ ಸುರಕ್ಷತಾ ಭಾವ ನೀಡಲು #betogetherbangalore ಅಭಿಯಾನ
Tuesday, February 25th, 2020 ರಾಜ್ಯ Admin
ಬೆಂಗಳೂರು: ಬೆಂಗಳೂರು ಪೊಲೀಸರು ಭಾರತದ ಟೆಕ್ ರಾಜಧಾನಿಯನ್ನು ಮಹಿಳೆಯರಿಗೆ ಹೆಚ್ಚು ಸುರಕ್ಷಿತವಾದ, ಅಂತರ್ಗತವಾದ ನಗರವನ್ನಾಗಿ ಮಾಡಲು #betogetherbangalore ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ನಗರದ ಮಹಿಳೆಯರಿಗೆ ರಾತ್ರಿಯಲ್ಲಿ ಅನಾನುಕೂಲತೆ ಉಂಟು ಮಾಡುವ, ಅಸುರಕ್ಷತೆಯ ಭಾವನೆಯನ್ನು ನೀಡುವ ಎಂಟು ಬೇರೆ ಬೇರೆ ಸ್ಥಳಗಳನ್ನು ನಮ್ಮ ಪಡೆ ಗುರುತಿಸಿದೆ ಮತ್ತು ಮಹಿಳೆಯರಿಗೆ ಅಲ್ಲಿ ಸಂಪೂರ್ಣ ಸುರಕ್ಷತೆ ನೀಡಲು ನಿರ್ಧರಿಸಿದೆ ಎಂದು ನೈರುತ್ಯ ವಿಭಾಗದ ಬೆಂಗಳೂರು ಪೊಲೀಸ್ ಜಿಲ್ಲಾಧಿಕಾರಿ (ಡಿಸಿಪಿ) ಹೇಳಿದ್ದರು.
ನಗರದಲ್ಲಿ ಮಹಿಳೆಯರು ಸುರಕ್ಷಿತವಾಗಿರಲು ಸಹಾಯ ಮಾಡಲು ಫೆಬ್ರವರಿ 24 ರಿಂದ ಮಾರ್ಚ್ 8 ರವರೆಗೆ (ಅಂತರರಾಷ್ಟ್ರೀಯ ಮಹಿಳಾ ದಿನ) #betogetherbangalore ಅಭಿಯಾನವನ್ನು ಆಯೋಜಿಸಲಾಗುತ್ತಿದೆ. ಮಹಿಳೆಯರು ತಾವು ಅಸುರಕ್ಷತೆಯನ್ನು ಅನುಭವಿಸಿದ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಭಿತಿಯಿಂದ ಓಡಾಡುವಂತೆ ಮಾಡುವುದು ಈ ಅಭಿಯಾನದ ಉದ್ದೇಶವಾಗಿದೆ.
ಡಿಸಿಪಿ ಇಶಾ ಪಂತ್ ಹೇಳುವಂತೆ ಈ ಅಭಿಯಾನವು, ಮಡಿವಾಲಾ ಮಾರುಕಟ್ಟೆ, ಗ್ರೇಪ್ ಗಾರ್ಡನ್ 6 ನೇ ಬ್ಲಾಕ್ ಕೋರಮಂಗಲ, ಬಿಡಿಎ ಕಾಂಪ್ಲೆಕ್ಸ್ ಕೋರಮಂಗಲ, ಕೋರಮಂಗಲ ಪಾಸ್ಪೋರ್ಟ್ ಆಫೀಸ್, ಸಿಲ್ಕ್ ಬೋರ್ಡ್ ಜಂಕ್ಷನ್, ಡೈರಿ ಸರ್ಕಲ್, ಸ್ಪೂರ್ತಿ ಹಾಸ್ಪಿಟಲ್ ರೋಡ್ ತವರೇಕೆರೆ ಮತ್ತು ವೀರ ಯೋಧರ ಪಾರ್ಕ್ 4 ನೇ ಬ್ಲಾಕ್ ಕೋರಗನ್­ಗಳಲ್ಲಿ ನಡೆಯಲಿದೆ.
ಮಹಿಳೆಯರು ತಮಗೆ ಅಸುರಕ್ಷಿತರೆಂದು ಭಾವಿಸಿರುವ ಈ ಸ್ಥಳಗಳಲ್ಲಿ ಸಂಜೆ 7 ರಿಂದ ರಾತ್ರಿ 10 ರವರೆಗೆ ಪ್ರದೇಶಗಳಿಗೆ ಭದ್ರತೆಯನ್ನು ನೀಡಿ ಮಹಿಳೆಯರ ಸುರಕ್ಷತ ಭಾವವನ್ನು ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ.
ರಾಜ್ಯ ಕಾಂಗ್ರೆಸ್ ನಲ್ಲಿ ಭಿನ್ನಮತ, ಜನಾಶೀರ್ವಾದ ರ್ಯಾಲಿ ರದ್ದು!
ಬೆಂಗಳೂರು: ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಆರೇಳು ತಿಂಗಳು ಬಾಕಿ ಇರುವ ಬೆನ್ನಲ್ಲೇ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಕ್ಷೇಪ ಹಾಗೂ ಭಿನ್ನಮತದ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆರಂಭಿಸಲು ನಿರ್ಧಿಸಿದ್ದ ಜನಾಶಿರ್ವಾದ ರ್ಯಾಲಿಯನ್ನು ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ಸನ್ನು ಗೆಲ್ಲಿಸಿ, ತಾವೇ ಮುಖ್ಯಮಂತ್ರಿಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಡಿ.13ರಿಂದ ರಾಜ್ಯಾದ್ಯಂತ ಜನಾಶೀರ್ವಾದ ರ್ಯಾಲಿಗೆ ಸಕಲ ವೇಳಾಪಟ್ಟಿ ತಯಾರಿಸಿದ್ದರು. ಆದರೆ ಪರಮೇಶ್ವರ್ ಊದಿದ ಬಂಡಾಯದ ಕಹಳೆಗೆ ಪೆಚ್ಚಾಗಿರುವ ಮುಖ್ಯಮಂತ್ರಿ ಅವರು ರ್ಯಾಲಿಯನ್ನು ಮಾರ್ಚ್ 1ರಿಂದ ಆರಂಭಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯ ಪರಿವರ್ತನಾ ರ್ಯಾಲಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಜನಾಶೀರ್ವಾದ ರ್ಯಾಲಿ ಆಯೋಜಿಸಿ ಮುಖ್ಯಮಂತ್ರಿ ಕನಸು ಕಂಡಿದ್ದ ಸಿದ್ದರಾಮಯ್ಯ ಅವರಿಗೆ ಇದರಿಂದ ತಾತ್ಕಾಲಿಕ ಬ್ರೇಕ್ ಹಾಗೂ ಹಿನ್ನಡೆಯಾದಂತಿದೆ. ಅದಾಗಲೇ ಬಿಜೆಪಿ ಪರಿವರ್ತನಾ ರ್ಯಾಲಿ ಮೂಲಕ ರಾಜ್ಯಾದ್ಯಂತ ಸಂಚರಿಸುತ್ತಿದೆ.
ಗುರುವಾರ ವಿಷ್ಣುವಿಗೆ ಪೂಜೆ ಮಾಡಿ ಲಕ್ಷ್ಮೀ ದೇವಿಯನ್ನು ಮನೆಗೆ ಬರಮಾಡಿಕೊಳ್ಳಿ | Spiritual Things To Do On Thursday - Kannada BoldSky
ಗರ್ಭನಿರೋಧಕ ಮಾತ್ರೆ ತೆಗೆದುಕೊಂಡಾಗ ಗರ್ಭಧಾರಣೆಯಾಗಲು ಸಾಧ್ಯವೇ?
5 hrs ago ವಾರ ಭವಿಷ್ಯ- ನವೆಂಬರ್ 17ರಿಂದ ನವೆಂಬರ್ 23ರ ತನಕ
6 hrs ago ಭಾನುವಾರದ ದಿನ ಭವಿಷ್ಯ (17-11-2019)
13 hrs ago ಪೋಷಕರೇ ರಿಲ್ಯಾಕ್ಸ್, ಇನ್ನು ಮುಂದೆ ಶಾಲೆಯ ಸಮೀಪ ಜಂಕ್‌ಫುಡ್ಸ್ ಸಿಗಲ್ಲ
19 hrs ago ವೈರಲ್ ಆಯ್ತು ಮುಖದಲ್ಲಿ ಬಾಲವಿರುವ ನಾಯಿಮರಿ
Movies ಚಿತ್ರಗಳು: ವೈವಾಹಿಕ ಬದುಕು ಆರಂಭಿಸಿದ 'ಆ ದಿನಗಳು' ನಟಿ ಅರ್ಚನಾ ಶಾಸ್ತ್ರಿ
News ಲಕ್ಷ್ಮೀ ಮೇಲೆ ರಮೇಶ್‌ ಜಾರಕಿಹೊಳಿಗೆ ಯಾಕಿಷ್ಟು ಕೋಪ: ಕಾರಣ ಇಲ್ಲಿದೆ
Sports ಐಪಿಎಲ್: ಆಟಗಾರರ ಹರಾಜಿಗೂ ಮುನ್ನ ಅರಿಯಬೇಕಾದ ಪ್ರಮುಖಾಂಶಗಳು!
Technology ನಿಮ್ಮ ಸ್ಮಾರ್ಟ್‌ಫೋನ್ ಸ್ಲೋ ಆಗಿದೆಯಾ?.ಈ ಕ್ರಮ ಅನುಸರಿಸಿ ಆಮೇಲೆ ನೋಡಿ!
Automobiles ಅನಾವರಣಗೊಂಡ ಮಾಡಿಫೈ ಆಫ್ ರೋಡ್ ಕಿಯಾ ಸೆಲ್ಟೋಸ್
Finance ರಿಲಯನ್ಸ್ ಕಮ್ಯುನಿಕೇಶನ್ಸ್ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ ಅನಿಲ್ ಅಂಬಾನಿ
ಗುರುವಾರ ವಿಷ್ಣುವಿಗೆ ಪೂಜೆ ಮಾಡಿ ಲಕ್ಷ್ಮೀ ದೇವಿಯನ್ನು ಮನೆಗೆ ಬರಮಾಡಿಕೊಳ್ಳಿ
| Updated: Thursday, August 23, 2018, 15:59 [IST]
ವಾರ ಬಂತಮ್ಮ ಗುರುವಾರ ಬಂತಮ್ಮ ಎಂಬ ರಾಯರ ಕುರಿತಾಗಿ ಹಾಡಿರುವ ಹಾಡನ್ನು ನೀವು ಕೇಳಿರಬಹುದು. ಅದರ ಜೊತೆಗೆ ಗುರುವಾರ ಸಾಯಿಬಾಬಾರನ್ನು ನೆನೆಯುವ ಪುಣ್ಯ ದಿವಸ ಕೂಡ ಹೌದು. ಜೊತೆಗೆ ಈ ದಿನವನ್ನು ಹಿಂದೂ ಭಗವಾನರಾದ ವಿಷ್ಣುವಿಗೆ ಅರ್ಪಿಸಲಾಗಿದೆ ಎಂಬುದು ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ. ವಿಷ್ಣುವಿಗೆ ತ್ರಿದೇವ ಎಂಬ ಹೆಸರೂ ಇದೆ. ಈ ದಿನವನ್ನು ವೃಹಸ್ಪತಿವಾರ ಎಂದು ಕರೆಯಲಾಗಿದ್ದು ವಿಷ್ಣು ಭಗವಾನ...
ಮಾನವ ದೇಹವನ್ನು ಹೊಂದಿರುವ ವಿಷ್ಣುವು ನಾಲ್ಕು ಕೈಗಳನ್ನು ಹೊಂದಿದ್ದಾರೆ. ಕಿರೀಟವನ್ನು ಧರಿಸಿಕೊಂಡು ಒಂದೊಂದು ಕೈಯಲ್ಲಿ ಒಂದೊಂದು ಆಯುಧವನ್ನು ಹಿಡಿದುಕೊಂಡು ವಿಷ್ಣುವು ಸಾಕಾರಗೊಂಡಿದ್ದಾರೆ. ಒಂದು ಕೈಯಲ್ಲಿ ಶಂಖ, ಗಧೆ ಮತ್ತು ಚಕ್ರವನ್ನು ಹೊಂದಿದ್ದಾರೆ. ಹಿಂದೂ ಧರ್ಮದಲ್ಲಿ ಹಳದಿಯನ್ನು ಜ್ಞಾನಕ್ಕೆ ಸಂಕೇತಿಸಲಾಗಿದೆ.
ಈ ದೇವನ ಪತ್ನಿಯು ಲಕ್ಷ್ಮೀಯಾಗಿದ್ದು ಲಕ್ಷ್ಮೀಯನ್ನು ಧನಸಂಪತ್ತಿಗೆ ಅಧಿಪತಿ ಎಂದು ಕರೆಯಲಾಗಿದೆ. ಲಕ್ಷ್ಮೀ ಮಾತೆಯು ಮನೆಗೆ ಸಂಪತ್ತನ್ನು ತರುವವರಾಗಿದ್ದಾಳೆ, ಆದ್ದರಿಂದ ವಿಷ್ಣು ಮತ್ತು ಲಕ್ಷ್ಮೀಯನ್ನು ಗುರುವಾರ ಮತ್ತು ಶುಕ್ರವಾರ ಜೊತೆಯಾಗಿ ಪೂಜಿಸುವುದರಿಂದ ಧನ ಸಂಪತ್ತು ಪ್ರಾಪ್ತವಾಗುತ್ತದೆ ಎಂಬುದು ನಂಬಿಕೆಯಾಗಿದೆ.
ದಕ್ಷಿಣ ಭಾರತದಲ್ಲಿ ಮಹಾವಿಷ್ಣುವಿಗೆ ಪ್ರತಿ ಮನೆಯಲ್ಲೂ ಪೂಜೆಯನ್ನು ನಡೆಸಲಾಗುತ್ತದೆ. ಇದರಿಂದ ಧನ ಕನಕ ಸಂಪತ್ತು ಮನೆಗೆ ಬರುತ್ತದೆ ಎಂಬುದು ನಂಬಿಕೆಯಾಗಿದೆ. ಹಿಂದೂ ಧರ್ಮದಲ್ಲಿ ಗುರುವಾರಕ್ಕೆ ಪೂಜನೀಯ ಪ್ರಾಶಸ್ತ್ಯವನ್ನು ನೀಡಲಾಗಿದೆ. ಹಾಗಿದ್ದರೆ ಈ ದಿನಂದು ನೀವು ಅನುಸರಿಸಬೇಕಾದ ವಿಧಿ ವಿಧಾನಗಳೇನು ಎಂಬುದನ್ನು ಅರಿತುಕೊಳ್ಳಲು ಕೆಳಗಿನ ಹಂತಗಳನ್ನು ನೋಡಿ...
ಹಳದಿ ಧಾರಣೆ
ಹಿಂದೂ ಧರ್ಮದಲ್ಲಿ ಅರಿಶಿನಕ್ಕೆ ಹೆಚ್ಚಿನ ಪ್ರಾಶಸ್ತ್ಯ ಮತ್ತು ಪವಿತ್ರತೆಯನ್ನು ನೀಡಲಾಗಿದೆ. ವಿಷ್ಣು ಪೀತಾಂಬರ ದಿರಿಸುಗಳನ್ನು ಹಳದಿ ಬಣ್ಣದಲ್ಲಿ ಮಾಡಲಾಗಿದೆ. ವಿಷ್ಣು ಭಕ್ತರೂ ಕೂಡ ಗುರುವಾರದಂದು ಹಳದಿ ಬಟ್ಟೆಯನ್ನು ಧರಿಸಬೇಕು. ಇನ್ನು ಹಿಂದೂ ವಿವಾಹ ಪದ್ಧತಿಗಳಲ್ಲಿ ಅರಿಶಿನ ಶಾಸ್ತ್ರ ಇದ್ದೇ ಇರುತ್ತದೆ. ಮದುಮಗಳಿಗೆ ಅರಿಶಿನದ ಮಿಶ್ರಣವನ್ನು ಹಚ್ಚುತ್ತಾರೆ. ವಿವಾಹದಂತಹ ಪರಿಶುದ್ಧ ಶಾಸ್ತ್ರದಲ...
ವಿಷ್ಣುವಿನ ಪೂಜೆ
ಹಿಂದೂ ಭಕ್ತರು ಗುರುವಾರದಂದು ವಿಶೇಷವಾಗಿ ಅನುಸರಿಸುವ ವಿಧಿ ವಿಧಾನವಾಗಿದೆ. ಲಕ್ಷ್ಮೀ ದೇವಿಯನ್ನು ಮನೆಗೆ ಕರೆತರಲು ವಿಷ್ಣು ಮಂತ್ರವನ್ನು ಪಠಿಸುತ್ತಾರೆ. ಅದರಲ್ಲೂ ವಿಷ್ಣುವಿನ ಭಕ್ತರು ಈ ದಿನದಂದು ಹಳದಿ ವಸ್ತ್ರಗಳನ್ನು ಧರಿಸಿ ಹಳದಿ ಹೂವುಗಳನ್ನು ದೇವರಿಗೆ ಸಮರ್ಪಿಸುತ್ತಾರೆ. ಈ ದಿನದಂದು ವ್ರತವನ್ನು ಕೈಗೊಳ್ಳುವವರು ಗಜ್ಜರಿ ಮತ್ತು ತುಪ್ಪವನ್ನು ಬಳಸಿದ ವ್ರತಾಹಾರವನ್ನು ಸೇವಿಸುತ್ತಾರೆ. ಈ ದಿ...
ಬೇಳೆ ಕಾಳುಗಳ ಅರ್ಪಣೆ
ಹಿಂದೂ ಧರ್ಮದಲ್ಲಿ ವಿಷ್ಣು ಭಕ್ತರು ವಿಷ್ಣುವಿಗೆ ಬೇಳೆ ಕಾಳುಗಳನ್ನು ಅರ್ಪಿಸುತ್ತಾರೆ. ಇದರೊಂದಿಗೆ ಬೆಲ್ಲವನ್ನೂ ನೀವು ಮಿಶ್ರ ಮಾಡಿಕೊಳ್ಳಬಹುದು. ಬೇಳೆ ಮತ್ತು ಬೆಲ್ಲವು ಹಳದಿ ಬಣ್ಣದಲ್ಲಿರುವುದರಿಂದ ಗುರುವಾರದಂದು ವಿಷ್ಣುವನ್ನು ಸಂಪ್ರೀತಗೊಳಿಸಲು ನೀವು ಇದನ್ನು ದೇವರಿಗೆ ನೀಡಬಹುದು.
ಬಾಳೆ ಮರಕ್ಕೆ ಪೂಜೆ
ಅತ್ಯಂತ ಪುರಾತನ ಧರ್ಮವೆಂದರೆ ಅದು ಹಿಂದೂ ಧರ್ಮ. ಹಿಂದೂ ಧರ್ಮವನ್ನು ತುಂಬಾ ಪವಿತ್ರ ಧರ್ಮವೆನ್ನಲಾಗುತ್ತದೆ. ಹಿಂದೂ ಧರ್ಮದಲ್ಲಿ ದೇವರ ಮೂರ್ತಿಯನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಸ್ವಲ್ಪ ಆರ್ಯರ ಪ್ರಭಾವವು ಇರುವ ಕಾರಣದಿಂದ ನಾವು ಮರ ಹಾಗೂ ಇತರ ಕೆಲವೊಂದು ವಸ್ತುಗಳನ್ನು ಕೂಡ ಪವಿತ್ರವೆಂದು ನಂಬಿ ಅದನ್ನು ಪೂಜಿಸುತ್ತೇವೆ. ಅಗ್ನಿ, ಸೂರ್ಯ, ನದಿಗಳು, ತುಳಸಿ ಗಿಡ, ಮಣ್ಣು, ಅಶ್ವತ್ಥ ಮ...
ಸತ್ಯನಾರಾಯಣ ಕಥೆ
ಸತ್ಯವೇ ದೇವರು ಎಂಬ ನಂಬಿಕೆಯ ಸಾಕಾರರೂಪವಾಗಿರುವ ಸತ್ಯ ನಾರಾಯಣನಿಗೆ ಸಲ್ಲಿಸುವ ಪೂಜೆಯೇ ಸತ್ಯನಾರಾಯಣ ಪೂಜೆ. ಹಿಂದೂಗಳು ವಿವಿಧ ದೇವರುಗಳಿಗೆ ಸಲ್ಲಿಸುವ ಪೂಜೆಗಳಲ್ಲಿ ಈ ಪೂಜೆ ಹೆಚ್ಚಿನ ಮಹತ್ವದ ಮತ್ತು ಹೆಚ್ಚಾಗಿ ಸಲ್ಲಿಸಲ್ಪಡುವ ಪೂಜೆಯಾಗಿದೆ. ಅನಾದಿಕಾಲದಿಂದಲೂ ಈ ಪೂಜೆಯನ್ನು ಸಲ್ಲಿಸಿದ ಭಕ್ತರಿಗೆ ದೇವರು ಹಲವು ರೀತಿಯ ಸೌಭಾಗ್ಯಗಳನ್ನು ಕರುಣಿಸಿ ಆಶೀರ್ವದಿಸಿದ್ದಾನೆ. ಈ ಪೂಜೆಯನ್ನು ಭಕ್ತಿ ಮತ...
ಪ್ರತಿಯೊಂದು ಧರ್ಮದಲ್ಲಿ ಕೂಡ ದಾನಕ್ಕೆ ವಿಶೇಷ ಸ್ಥಾನವಿದೆ. ಬಡವರಿಗೆ ಮತ್ತು ಅಗತ್ಯವಿದ್ದವರಿಗೆ ಬೇಕಾದ ವಸ್ತುಗಳನ್ನು ದಾನ ಮಾಡಬೇಕು. ಆಹಾರ, ಹಣ ಅಥವಾ ಬಟ್ಟೆಗಳನ್ನು ನೀವು ದಾನ ಮಾಡಬಹುದು. ಇವೇ ಮುಂತಾದ ಕೆಲವೊಂದು ವಿಧಿ ವಿಧಾನಗಳನ್ನು ನೀವು ಗುರುವಾರದಂದು ಆಚರಣೆ ಮಾಡಬೇಕು.
ದೈವ ಶಕ್ತಿಯನ್ನು ಹೊಂದಿರುವ ಗಿಡ-ಮರಗಳನ್ನು ಪೂಜಿಸಿ ನಿಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಿ
ತುಳಸಿ ವಿವಾಹ 2019: ದಿನಾಂಕ, ಪೂಜೆ ವಿಧಾನ ಮತ್ತು ಮಹತ್ವ
ದೀಪಾವಳಿ ಹಬ್ಬದಲ್ಲಿ ಈ ಕಾರ್ಯಗಳನ್ನು ಯಾರು ಮಾಡಲೇಬೇಡಿ
ದೀಪಾವಳಿ ಹಬ್ಬ 2019: ದಿನ, ಶುಭಮುಹೂರ್ತ ಹಾಗೂ ಮಹತ್ವ
ಕಾಳಿ ದೇವಿ ಬಗ್ಗೆ ಈವರೆಗೂ ಕೇಳಿಲ್ಲದ ಅಚ್ಚರಿಯ ರಹಸ್ಯಗಳು
ಶಾಸ್ತ್ರದ ಪ್ರಕಾರ ಇಂತಹ ವಸ್ತುಗಳನ್ನು ದೀಪಾವಳಿಯಲ್ಲಿ ಉಡುಗೊರೆಯಾಗಿ ನೀಡಲೇಬಾರದು!
ಮೀರಾಬಾಯಿ ಬಗ್ಗೆ ಈವರೆಗೂ ತಿಳಿಯದೇ ಇರುವ ಸತ್ಯ ಸಂಗತಿಗಳು!
ಕಾಲಭೈರವನ ರೂಪಗಳು, ಮಂತ್ರದ ಅರ್ಥ ಹಾಗೂ ಅದನ್ನು ಪಠಿಸುವುದರಿಂದಾಗುವ ಪ್ರಯೋಜನಗಳು
ಯುಧಿಷ್ಠಿರನು ತನ್ನ ನಾಯಿಗಾಗಿ ಸ್ವರ್ಗವನ್ನು ಏಕೆ ನಿರಾಕರಿಸಿದನು?
ಮಹಾ ಮೃತ್ಯುಂಜಯ ಮಂತ್ರ ಪಠಿಸುವುದರಿಂದಾಗುವ ಲಾಭಗಳು
ಕುಂಭ ಕರ್ಣನ ಬಗ್ಗೆ ಈವರೆಗೂ ತಿಳಿದಿರದ 10 ಸಂಗತಿಗಳು
ಪಿತೃಪಕ್ಷ 2019: ಇತಿಹಾಸ, ಮಹತ್ವ ಮತ್ತು ಆಚರಣೆಯ ದಿನಗಳು
Spiritual Things To Do On Thursday
In South India, Lord Vishnu is worshiped in almost all the household. To bring prosperity and wealth, people worship Lord Vishnu on Thursday. Even otherwise, Thursday is considered as one of the spiritual days in Hinduism. So what spiritual things you should follow on a Thursday? Take a look.
ಸೇನೆಯಲ್ಲಿರುವ ಸೇವಾ ಮತದಾರರ ಹಕ್ಕು ಚಲಾವಣೆಗೆ ಮಾರ್ಗಸೂಚಿ! | EC issues guidelines for in service voters - Kannada Oneindia
19 min ago 4 ದಿನದಲ್ಲಿ ಜೆಡಿಎಸ್‌ಗೆ ಹೊಸ ಅಧ್ಯಕ್ಷರ ನೇಮಕ : ದೇವೇಗೌಡ
42 min ago ಅಧಿಕೃತವಾಗಿ ಬಿಜೆಪಿ ಸೇರುತ್ತೇನೆ ಎಂದ ಕೇರಳ ಕಾಂಗ್ರೆಸ್ ಮಾಜಿ ಶಾಸಕ
ಸೇನೆಯಲ್ಲಿರುವ ಸೇವಾ ಮತದಾರರ ಹಕ್ಕು ಚಲಾವಣೆಗೆ ಮಾರ್ಗಸೂಚಿ!
| Updated: Friday, May 11, 2018, 11:14 [IST]
ಬೆಂಗಳೂರು, ಮೇ 11: ಚುನಾವಣಾ ಆಯೋಗವು ಜನ ಪ್ರತಿನಿಧಿ ಕಾಯ್ದೆ 1950 ರ ಅನ್ವಯ ಸೇವಾ ಮತದಾನಕ್ಕೆ ಅನುವು ಮಾಡಿಕೊಟ್ಟಿದೆ. ಮೇ 12ರಂದು ರಾಜ್ಯವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕೆಲವು ಸೇವಾ ಮತದಾರರ ಹಕ್ಕುಗಳ ಮಾರ್ಗಸೂಚಿಯನ್ನು ತಿಳಿಸಿದೆ.
ಸೇವಾ ಮತದಾರ ಯಾರು : ಭಾರತ ಸೇನೆ, ನೌಕಾ ಪಡೆ, ವಾಯು ಸೇನೆ, ಸಾಮಾನ್ಯ ಮೀಸಲು ಅಭಿಯಂತರರ ಪಡೆ (ಗಡಿ ರಸ್ತೆ ಸಂಸ್ಥೆ), ಗಡಿ ಭದ್ರತಾ ಪಡೆ, ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್, ಅಸ್ಸಾಂ ರೈಫಲ್ಸ್, ರಾಷ್ಟ್ರೀಯ ಸುರಕ್ಷಾ ಗಾರ್ಡ್, ಕೇಂದ್ರ ಮೀಸಲು ಪೊಲೀಸ್ ಪಡೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಸಶಸ್ತ್ರ ಸೀಮಾ ಬಲ್ನಾ ಸದಸ್ಯರು ಅಥವಾ ಸಿಬ್ಬಂದಿಯಾಗಿದ್ದರೆ, ಕೇಂದ್ರ ಸರ್ಕಾರದ ಅಧಿಕಾರಿಯಾಗಿದ್...
ಸೇನೆಯಲ್ಲಿರುವ ಮತದಾರರಿಗೆ ವಿಶೇಷ ಸವಲತ್ತು ?
ಸಾಮಾನ್ಯ ಮತದಾರರು ಹಾಗೂ ಸೇವಾ ಮತದಾರರಿಗೆ ಇರುವ ವ್ಯತ್ಯಾಸ : ಸಾಮಾನ್ಯ ಮತದಾರರು ತಾವು ವಾಸಿಸುವ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುತ್ತಾರೆ. ಸೇವಾ ಅರ್ಹತೆಯುಳ್ಳ ವ್ಯಕ್ತಿ ಕೆಲಸದ ನಿಮಿತ್ತ ಬೇರೆ ಸ್ಥಳದಲ್ಲಿ ವಾಸಿಸುತ್ತಿದ್ದು (ನೇಮಕದ ಸ್ಥಳ), ತನ್ನ ಮೂಲ ಸ್ಥಳದಲ್ಲಿ ಸೇವಾ ಮತದಾರ ಎಂದು ನೋಂದಣಿ ಮಾಡಿಕೊಳ್ಳಬಹುದು.
ಆದರೆ ಆತನಿಗೆ ತನ್ನ ನೇಮಕವಾದ ಸ್ಥಳದಲ್ಲಿ ಸಾಮಾನ್ಯ ಮತದಾರನಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶವಿರುತ್ತದೆ. ಅಲ್ಲಿ ಆತ ತನ್ನ ಕುಟುಂಬದೊಂದಿಗೆ ಸಾಕಷ್ಟು ಕಾಲ ನೆಲೆಸಿರಬೇಕು.
ವರ್ಗೀಕೃತ ಸೇವಾ ಮತದಾರ : ಸೇನಾಪಡೆ ಅಥವಾ ಸೇನಾ ಕಾಯ್ದೆ ಅನ್ವಯವಾಗುವ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಅವರಿಗೆ ಅಂಚೆ ಮತದಾನ ಅಥವಾ ಅವರಿಂದ ನೇಮಕವಾದ ಬದಲಿ ಪ್ರತಿನಿಧಿ(ಪ್ರಾಕ್ಸಿ) ಮೂಲಕ ಮತದಾನ ಮಾಡುವ ಆಯ್ಕೆಯಿದ್ದು, ಇವರನ್ನು ವರ್ಗೀಕೃತ ಸೇವಾ ಮತದಾರ ಎನ್ನುತ್ತಾರೆ.
ಒಬ್ಬ ವ್ಯಕ್ತಿ ಏಕಕಾಲಕ್ಕೆ ತನ್ನ ಮೂಲಸ್ಥಳದಲ್ಲಿ ಸೇವಾ ಮತದಾರನಾಗಿ ಮತ್ತು ಉದ್ಯೋಗದ ಸ್ಥಳದಲ್ಲಿ ಸಾಮಾನ್ಯ ಮತದಾರನಾಗಿ ನೋಂದಣಿ ಮಾಡಿಕೊಳ್ಳಬಹುದೇ : ಇಲ್ಲ. ಒಬ್ಬ ವ್ಯಕ್ತಿ ಜನ ಪ್ರತಿನಿಧಿಗಳ ಕಾಯ್ದೆ, 1950ರ ಅನುಚ್ಛೇದ 17 ಮತ್ತು 18ರ ನಿಬಂಧನೆಗಳ ಅನ್ವಯ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲ.
ಅದೇ ರೀತಿ ಯಾವುದೇ ವ್ಯಕ್ತಿ ಯಾವುದೇ ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮತದಾರನಾಗಿ ನೋಂದಣಿ ಮಾಡಿಕೊಳ್ಳಬಾರದು. ಮೇಲೆ ಹೇಳಿದಂತೆ ಸೇವಾ ಮತದಾರರಿಗೆ ತಮ್ಮ ಮೂಲಸ್ಥಳದಲ್ಲಿ ಸೇವಾ ಮತದಾರನಾಗಿ ಅಥವಾ ಉದ್ಯೋಗದ ಸ್ಥಳದಲ್ಲಿ ಸಾಮಾನ್ಯ ಮತದಾರನಾಗಿ ನೋಂದಣಿ ಮಾಡಿಕೊಳ್ಳುವ ಅವಕಾಶ ಇರುತ್ತದೆ.
ಸೇವಾ ಮತದಾರ ಫಾರಂ 2/2ಎ ಯಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಿದಾಗ ಆತ ನಿಗದಿತ ಮಾದರಿಯಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಮಾನ್ಯ ಮತದಾರ ಎಂದು ನೋಂದಣಿಯಾಗಿಲ್ಲ ಎಂದು ದೃಢೀಕರಣ ಸಲ್ಲಿಸಬೇಕು.
ಪ್ರಾಕ್ಸಿ' ಯಾರು: ಸೇವಾ ಮತದಾರ ಯಾವುದೇ ವ್ಯಕ್ತಿಯನ್ನು ಆತ, ಆಕೆಯ ಪ್ರಾಕ್ಸಿಯಾಗಿ ಆತ, ಆಕೆಯ ಪರವಾಗಿ ಆತ/ಆಕೆಯ ಹೆಸರಿನಲ್ಲಿ ಮತಗಟ್ಟೆಯಲ್ಲಿ ಮತ ಚಲಾಯಿಸಲು ನೇಮಕ ಮಾಡಬಹುದು. ಪ್ರಾಕ್ಸಿ ಕ್ಷೇತ್ರದ ಸಾಮಾನ್ಯ ಮತದಾರರಾಗಿರಬೇಕು. ಆತ ನೋಂದಾಯಿತ ಮತದಾರನೇ ಆಗಬೇಕೆಂದಿಲ್ಲ ಆದರೆ ಆತ,ಆಕೆ ಮತದಾರನಾಗಿ ಅನರ್ಹತೆ ಹೊಂದಿರಬಾರದು.
ಪ್ರಾಕ್ಸಿ ನೇಮಕ ಮಾಡಿಕೊಳ್ಳಲು ಅನುಸರಿಸಬೇಕಾದ ಪ್ರಕ್ರಿಯೆ: 1) ಸೇವಾ ಮತದಾರ ತನ್ನ ಉದ್ಯೋಗದ ಸ್ಥಳದಲ್ಲಿದ್ದರೆ, ಆತ ತನ್ನ ಸಹಿಯನ್ನು ತನ್ನ ಘಟಕದ ಕಮ್ಯಾಂಡಿಂಗ್ ಆಫೀಸರ್ ಮುಂದೆ ಫಾರಂ-13ಎಫ್ ರಲ್ಲಿ ಹಾಕಬೇಕು ಮತ್ತು ನಂತರ ಅರ್ಜಿಯನ್ನು ಪ್ರಾಕ್ಸಿಗೆ ಆತ, ಆಕೆ ನೋಟರಿ, ಪ್ರಥಮ ದರ್ಜೆಯ ಮ್ಯಾಜಿಸ್ಟ್ರೇಟ್ ಎದುರು ಸಹಿ ಮಾಡಲು ಕಳುಹಿಸಬೇಕು. ನಂತರ ಪ್ರಾಕ್ಸಿ ಸಂಬಂಧಿಸಿದ ಅರ್ಜಿಯನ್ನು ಸಂಬಂಧಪಟ್ಟ ರ...
2) ಸೇವಾ ಮತದಾರ ತನ್ನ ಮೂಲಸ್ಥಳದಲ್ಲಿದ್ದರೆ, ಆತ ಮತ್ತು ಆತನ ಪ್ರಾಕ್ಸಿ ಫಾರಂ-13ಎಫ್ ಅನ್ನು ನೋಟರಿ, ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಎದುರು ಸಹಿ ಮಾಡಬೇಕು ಮತ್ತು ಸಂಬಂಧಪಟ್ಟ ರಿಟರ್ನಿಂಗ್ ಆಫೀಸರ್ ಅವರಿಗೆ ಕಳುಹಿಸಬಹುದು.
ಪ್ರಾಕ್ಸಿ ಎಷ್ಟು ಸಮಯ ಮಾನ್ಯತೆ ಹೊಂದಿರುತ್ತದೆ: ಪ್ರಾಕ್ಸಿಯ ಮೂಲಕ ಮತದಾನ ಸೇವಾ ಮತದಾರರು ನೇಮಕ ಮಾಡಿದ ದಿನದಿಂದಲೂ ಮಾನ್ಯತೆ ಹೊಂದಿರುತ್ತದೆ. ಒಮ್ಮೆ ನೇಮಕ ಮಾಡಿದ ನಂತರ ಪ್ರಾಕ್ಸಿ ಸೇವಾ ಮತದಾರರು ರದ್ದುಪಡಿಸುವವರೆಗೂ ಮಾನ್ಯತೆ ಹೊಂದಿರುತ್ತದೆ.
ಪ್ರಾಕ್ಸಿ ಮತದಾರರ ಸೌಲಭ್ಯವನ್ನು ರದ್ದುಪಡಿಸಬಹುದು ಮತ್ತು ಪ್ರಾಕ್ಸಿಯನ್ನು ಯಾವುದೇ ಸಮಯದಲ್ಲಿ ಎಷ್ಟು ಸಲ ಬೇಕಾದರೂ ವರ್ಗೀಕೃತ ಸೇವಾ ಮತದಾರರು ಬದಲಾಯಿಸಬಹುದು. ಆದ್ದರಿಂದ ವರ್ಗೀಕೃತ ಸೇವಾ ಮತದಾರ ಪ್ರಾಕ್ಸಿ ರದ್ದುಪಡಿಸಬಹುದು ಮತ್ತು ಅಂಚೆ ಮತದಾನದ ಮಾರ್ಗ ಆಯ್ಕೆ ಮಾಡಿಕೊಳ್ಳಬಹುದು.
ಅಥವಾ ರಿಟರ್ನಿಂಗ್ ಆಫೀಸರ್‌ ಗೆ ಚುನಾವಣಾ ನಡವಳಿಕೆಗಳ ನಿಯಮಗಳು 1961ರ ಅನ್ವಯ ಫಾರಂ-13ಜಿ ಯನ್ನು ರಿಟರ್ನಿಂಗ್ ಆಫೀಸರ್ ನೀಡುವ ಮೂಲಕ ಪ್ರಾಕ್ಸಿಯನ್ನು ಬಳಸಬಹುದು (ಅರ್ಜಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ದೊರೆಯುತ್ತದೆ). ರಿಟರ್ನಿಂಗ್ ಆಫೀಸರ್ ಅವರು ಸ್ವೀಕರಿಸಿದ ದಿನದಿಂದ ರದ್ದುಪಡಿಸುವಿಕೆ ಪರಿಣಾಮಕಾರಿಯಾಗುತ್ತದೆ.
ಪ್ರಾಕ್ಸಿ ನೇಮಕಕ್ಕೆ ಅರ್ಜಿಯನ್ನು ಯಾವಾಗ ಸಲ್ಲಿಸಬೇಕು : ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕಕ್ಕೆ ಮೊದಲು ಚುನಾವಣಾಧಿಕಾರಿಗಳಿಗೆ ಪ್ರಾಕ್ಸಿ ನೇಮಕದ ಅರ್ಜಿಯನ್ನು ಸಲ್ಲಿಸಬೇಕು. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕದ ನಂತರ ಸ್ವೀಕರಿಸುವ ಪ್ರಾಕ್ಸಿ ನೇಮಕದ ಅರ್ಜಿಗಳನ್ನು ಪ್ರಗತಿಯಲ್ಲಿರುವ ಚುನಾವಣೆಗೆ ಪರಿಗಣಿಸಲಾಗುವುದಿಲ್ಲ.
karnataka assembly elections 2018 vote military voter ಕರ್ನಾಟಕ ವಿಧಾನಸಭೆ ಚುನಾವಣೆ 2018 ಸೈನಿಕರು ಮತದಾರರು
Election commission has issued guidelines for voters those who are in military service called in service voters. These voters can send their vote through postal ballot or through authorized proxy voter as per public representation act 1950.
ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ನಮ್ಮ ಬೆಂಬಲ: ಅಸಾದುದ್ದಿನ್ ಓವೈಸಿ | Karnataka Elections: AIMIM to support JDS in Karnataka polls - Kannada Oneindia
ಹೈದರಾಬಾದ್, ಏಪ್ರಿಲ್ 16: 'ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನಾವು ಜಾತ್ಯತೀತ ಜನತಾ ದಳ(ಜೆಡಿಎಸ್)ಕ್ಕೆ ಬೆಂಬಲ ನೀಡುತ್ತೇವೆ' ಎಂದು ಎಐಎಂಐಎಂ(All India Majlis-e-Ittehadul Muslimeen) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಓವೈಸಿ 'ಯೂ ಟರ್ನ್', ಚುನಾವಣೆ ಸ್ಪರ್ಧೆಯಿಂದ ದೂರ ಸರಿದ ಎಐಎಂಐಎಂ