text
stringlengths
0
61.5k
ಆಗಸ್ಟ್ ಒಂದರೊಳಗೆ ಸ್ನಾತಕೋತ್ತರ ತರಗತಿಗಳನ್ನು ಆರಂಭಿಸಬೇಕು ಎಂಬ ಗುರಿ ಇದೆ. ಇದೇ 25ರೊಳಗೆ ಸ್ನಾತಕೋತ್ತರ ಸೇರ್ಪಡೆಗೆ ಅರ್ಜಿ ಆಹ್ವಾನಿಸಲಾಗುವುದು. ಮಾಹಿತಿ ಪುಸ್ತಕ ಬುಧವಾರ ತಯಾರಾಗಿದೆ ಎಂದು ತಿಳಿಸಿದರು.
ಪಾಠ ಹೊರೆ: `ವಿಚಿತ್ರ~ ವಿನಂತಿ
ಪ್ರಾಧ್ಯಾಪಕರು ವಾರಕ್ಕೆ 40 ಗಂಟೆ ಪಠ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದುಯುಜಿಸಿ ತಿಳಿಸಿದೆ. ರಾಜ್ಯ ಸರ್ಕಾರ 14 ಗಂಟೆ ಎಂದು ತಿಳಿಸಿದೆ. ನಮಗೆ ತರಗತಿ ತೆಗೆದುಕೊಳ್ಳುವುದು ಸ್ವಲ್ಪ ಮಟ್ಟಿನ ಹೊರೆಯಾಗುತ್ತದೆ ಎಂದು ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ಯೋಗಾನಂದ `ವಿಚಿತ್ರ~ ವಿನಂತಿ ಮುಂದಿಟ್ಟರು.
ಇದರಿಂದ ಕೋಪಗೊಂಡ ಪ್ರೊ.ಟಿ.ಸಿ. ಶಿವಶಂಕರಮೂರ್ತಿ, `ಇಂತಹ ಭಾವನೆ ಬಿಡಿ. ಕಾನೂನಿನಲ್ಲಿ ತಿಳಿಸಿದಷ್ಟೇ ಕೆಲಸ ಮಾಡುತ್ತೇನೆ ಎಂಬ ಮನೋಭಾವ ಸಲ್ಲ. ಮಕ್ಕಳಿಗೆ ಪಾಠ ಮಾಡುವುದು ದೊಡ್ಡ ಹೊರೆಯ ಕೆಲಸ ಎಂದು ಭಾವಿಸಬಾರದು. ಕೆಲವು ಉಪನ್ಯಾಸಕರು ತಮ್ಮ ಅವಧಿಗಿಂತ ಹೆಚ್ಚಿನ ಅವಧಿಯ ಕೆಲಸ ಮಾಡುತ್ತಾರೆ.
ಉಪನ್ಯಾಸಕರ ಕೊರತೆ ಇದ್ದಾಗ ಜವಾಬ್ದಾರಿ ವಹಿಸಿಕೊಂಡು ಎಲ್ಲಾ ಪಠ್ಯ ಮುಗಿಸುತ್ತಾರೆ. ಅಂತಹ ಮನೋಭಾವ ಬೆಳೆಸಿಕೊಳ್ಳಿ ಎಂದು ಸೂಚಿಸಿದರು.
ಟಿಆರ್‌ಪಿ ಹಗರಣ: ಅರ್ನಬ್ ಗೋಸ್ವಾಮಿ ಮಧ್ಯಂತರ ರಕ್ಷಣೆ ವಿಸ್ತರಣೆ | Bombay High Court Extends Arnab Goswami's Interim Relief Till March 5 In TRP Scam - Kannada Oneindia
23 min ago ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ?
| Published: Friday, February 12, 2021, 17:25 [IST]
ಮುಂಬೈ, ಫೆಬ್ರವರಿ 12: ಟಿಆರ್‌ಪಿ ಹಗರಣದ ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟ್, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಎಆರ್‌ಜಿ ಓಟ್ಲಿಯರ್ ಮೀಡಿಯಾದ ಇತರೆ ಉದ್ಯೋಗಿಗಳಿಗೆ ಬಂಧನದಿಂದ ನೀಡಿರುವ ಮಧ್ಯಂತರ ರಕ್ಷಣೆಯನ್ನು ಮಾರ್ಚ್ 5ರವರೆಗೂ ವಿಸ್ತರಿಸಿದೆ.
ಟಿಆರ್‌ಪಿ ಹಗರಣ ಪ್ರಕರಣದಲ್ಲಿ ಮುಂಬೈ ಪೊಲೀಸರ ತನಿಖೆಯನ್ನು ಪ್ರಶ್ನಿಸಿ ಎಆರ್‌ಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಂದೂಡಿದ ಸಂದರ್ಭದಲ್ಲಿ ಅರ್ನಬ್ ಹಾಗೂ ಇತರೆ ಉದ್ಯೋಗಿಗಳಿಗೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿದ್ದಾರೆ.
ಪೊಲೀಸರ ಆರೋಪಪಟ್ಟಿಗೆ ಪ್ರತಿಯಾಗಿ ಕಳೆದ ವಾರ ಸಲ್ಲಿಸಿದ್ದ ತನ್ನ ಪ್ರತಿವಾದಿ ಅಫಿಡವಿಟ್‌ನಲ್ಲಿ ಎಆರ್‌ಜಿ ಮೀಡಿಯಾ, ತನ್ನ ಅರ್ಜಿಯ ಭಾಗವಾಗಿರದ ಕೆಲವು ಹೊಸ ದಾಖಲೆಗಳನ್ನು ಒದಗಿಸಿತ್ತು ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ತಿಳಿಸಿದ್ದಾರೆ.
ಎಆರ್‌ಜಿ ಸಲ್ಲಿಸಿರುವ ಹೊಸ ದಾಖಲೆಗಳನ್ನು ಪರಿಶೀಲಿಸಲು ತಮಗೆ ಸಮಯಾವಕಾಶದ ಅಗತ್ಯವಿದೆ. ತಮ್ಮ ದಿನದ ವಾದದಲ್ಲಿ ಎಆರ್‌ಜಿ ಪರ ವಕೀಲರಾದ ಹರೀಶ್ ಸಾಳ್ವೆ ಅವರು ಈ ದಾಖಲೆಗಳನ್ನು ಅವಲಂಬಿಸಬಾರದು ಎಂದು ಸಿಬಲ್ ಹೇಳಿದ್ದರು. ಆದರೆ ಈ ದಾಖಲೆಗಳನ್ನೇ ತಾವು ಆಧಾರವಾಗಿಟ್ಟುಕೊಳ್ಳುವುದಾಗಿ ಸಾಳ್ವೆ ವಾದಿಸಿದ್ದರು.
ಸಿಬಲ್ ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಅರ್ನಬ್ ಮತ್ತು ಇತರರಿಗೆ ನೀಡಿದ ಮಧ್ಯಂತರ ನೆಮ್ಮದಿಯನ್ನು ಮುಂದಿನ ದಿನಾಂಕದವರೆಗೂ ವಿಸ್ತರಿಸಿ ಆದೇಶಿಸಿತು.
maharashtra mumbai bombay high court arnab goswami ಮಹಾರಾಷ್ಟ್ರ ಮುಂಬೈ ಬಾಂಬೆ ಹೈಕೋರ್ಟ್ ಅರ್ನಬ್ ಗೋಸ್ವಾಮಿ
Bombay High Court extended interim relief to Arnab Goswami and other employees of ARG Media till March 5 in TRP scam.
ಮೋದಿ ಸರ್ಕಾರಕ್ಕೆ ಹೊಸ ಗರಿ: ನಂಬಿಕಸ್ಥ ಸರ್ಕಾರವೆಂಬ ಬಿರುದು | Narendra Modi government: 3rd most trusted government in the world - Kannada Oneindia
» ಮೋದಿ ಸರ್ಕಾರಕ್ಕೆ ಹೊಸ ಗರಿ: ನಂಬಿಕಸ್ಥ ಸರ್ಕಾರವೆಂಬ ಬಿರುದು
ಮೋದಿ ಸರ್ಕಾರಕ್ಕೆ ಹೊಸ ಗರಿ: ನಂಬಿಕಸ್ಥ ಸರ್ಕಾರವೆಂಬ ಬಿರುದು
Published: Monday, November 20, 2017, 17:28 [IST]
ನವದೆಹಲಿ, ನವೆಂಬರ್ 20: ಇತ್ತೀಚೆಗೆ ತಾನೇ ಮೂಡೀಸ್ ಶ್ರೇಯಾಂಕದಲ್ಲಿ ಏರಿಕೆ ಕಂಡು ಜನಮೆಚ್ಚುಗೆ ಗಳಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇದೀಗ ಹೊಸದೊಂದು ಹೆಮ್ಮೆಯ ಗರಿ ಮೂಡಿದೆ. ವಿಶ್ವದ ನಂಬಿಕಸ್ಥ ಸರ್ಕಾರಗಳ ಪಟ್ಟಿಯಲ್ಲಿ ಮೋದಿ ಸರ್ಕಾರ ಮೂರನೇ ಸ್ಥಾನ ಪಡೆದುಕೊಂಡಿದೆ.
ಮೋದಿ ಸರ್ಕಾರಕ್ಕೆ ಸಿಕ್ತು ಮೂಡಿ ಬೆಂಬಲ, ರೇಟಿಂಗ್ ಏರಿಕೆ
ಆರ್ಗನೈಸೇಶನ್ ಫಾರ್ ಎಕನಾಮಿಕ್ ಕಾರ್ಪರೇಶನ್ ಅಂಡ್ ಡೆವಲಪ್ ಮೆಂಟ್(ಒಇಸಿಡಿ) ಎಂಬ ಸಂಸ್ಥೆ ಜಾಗತಿಕವಾಗಿ ನಡೆಸಿದ ಸಮೀಕ್ಷೆ ಈ ಅಂಶವನ್ನು ಬಯಲಿಗೆಳೆದಿದೆ.
ಮೋದಿ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ತೆರಿಗೆ ನಿಯಮ ಮತ್ತು ಭ್ರಷ್ಟಾಚಾರ ವಿರೋಧಿ ನಡೆಗಳೇ ಜನರಲ್ಲಿ ಸರ್ಕಾರದ ಬಗ್ಗೆ ನಂಬಿಕೆ ಮೂಡುವುದಕ್ಕೆ ಕಾರಣ.
ಮೊದಲೆರಡು ರಾಷ್ಟ್ರಗಳು ಯಾವವು?
ನಂಬಿಕಸ್ಥ ಸರ್ಕಾರಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ ಪಡೆದಿದ್ದರೆ, ಸ್ವಿಟ್ಜರ್ಲೆಂಡ್ ಮತ್ತು ಇಂಡೋನೇಷ್ಯಾ ದೇಶಗಳು ಕ್ರಮವಾಗಿ ಮೊದಲೆರಡು ಸ್ಥಾನವನ್ನು ಗಳಿಸಿವೆ. ಇಲ್ಲೂ ಸಹ ಜನರು ಭ್ರಷ್ಟಾಚಾರ ನಿರ್ಮೂಲನೆಗೆ ಮತ್ತು ಆರ್ಥಿಕ ಅಭಿವೃದ್ಧಿಗೇ ಹೆಚ್ಚು ಮತನೀಡಿದ್ದಾರೆ.
ಯಾವವು ನಂಬಿಕಸ್ಥ ರಾಷ್ಟ್ರಗಳಲ್ಲ?
ಚಿಲಿ, ಫಿನ್ಲೆಂಡ್, ಗ್ರೀಸ್ ಸ್ಲೊವೇನಿಯಾ ಮುಂತಾದ ರಾಷ್ಟ್ರಗಳ ಸರ್ಕಾರಗಳು ಜನರ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿವೆ. ಇಲ್ಲೆಲ್ಲ ಆರೋಗ್ಯ, ಉದ್ಯೋಗ, ಶಿಕ್ಷಣ, ಆರ್ಥಿಕತೆ ಮುಂತಾದ ವಿಷಗಳ ಬಗ್ಗೆ ಸರ್ಕಾರ ಜರೂರಾಗಿ ಯೋಚಿಸುವ ಅಗತ್ಯವಿದೆ ಎಂದು ಇಲ್ಲಿನ ಜನ ಭಾವಿಸಿದ್ದಾರೆ.
ಶೇ.74 ರಷ್ಟು ಜನಬೆಂಬಲ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಭಾರತದ ಶೇ.74 ರಷ್ಟು ಜನ ಉತ್ತಮ ಸರ್ಕಾರವೆಂದೂ, ನಂಬಿಕಸ್ಥ ಸರ್ಕಾರವೆಂದೂ ಒಪ್ಪಿಕೊಂಡಿದ್ದಾರೆ. ಈ ಸರ್ಕಾರ ದೇಶದ ಜನತೆಯ ಹಿತದೃಷ್ಟಿಯನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದು ನಂಬಿದ್ದಾರೆ.
ಎಲ್ಲಕ್ಕೂ ಕಾರಣ ಮೋದಿ ಸರ್ಕಾರದ ಜನಪರ ಯೋಜನೆಗಳು
ಮೋದಿ ಸರ್ಕಾರ ಈ ಹೆಗ್ಗಳಿಕೆ ಗಳಿಸಿದೆ ಎಂಬುದನ್ನು ಕೇಳುತ್ತಿದ್ದಂತೆಯೇ ಈ ಕುರಿತು ಹೆಮ್ಮೆಯಿಂದ ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ ನಡ್ಡಾ, "ಕೆಲ ವರ್ಷಗಳಿಂದ ಜನರು ಸರ್ಕಾರ ಮತ್ತು ರಾಜಕಾರಣಿಗಳ ಬಗ್ಗೆ ವಿಶ್ವಾಸವನ್ನೇ ಕಳೆದುಕೊಂಡಿದ್ದರು. ಆದರೆ ನರೇಂದ್ರ ಮೋದಿಯವರ ಯೋಜನೆಗಳು ಮತ್ತು ಅವರ ನಾಯಕತ್ವ ಜನರು ಮತ್ತೆ ಪ್ರಜಾಪ್ರಭುತ್ವದ ಬಗ್ಗೆ ವಿಶ್ವಾಸಗಳಿಸಿಕೊಳ್ಳುವ ಹಾಗೆ ಮಾಡಿವೆ" ಎಂದಿದ್ದಾರೆ.
narendra modi new delhi government of india ನರೇಂದ್ರ ಮೋದಿ ನವದೆಹಲಿ ಭಾರತ ಸರ್ಕಾರ
Indian Prime minister Narendra Modi led NDA government has become the 3rd most trusted government in the world. A survey made by Organisation for Economic Co-operation and Development (OECD)
ಸಾಹಿತ್ಯ ಓದುವವರೇ ಮತದಾನ ಮಾಡುವುದಿಲ್ಲ:ಎಸ್.ಎಲ್.ಭೈರಪ್ಪ | Literary does not correct societies injustice: S. L. Bhairappa - Kannada Oneindia
| Published: Monday, January 21, 2019, 12:29 [IST]
ಮೈಸೂರು, ಜನವರಿ 21: ಸಾಹಿತ್ಯ ಸಮಾಜದಲ್ಲಿನ ಅನ್ಯಾಯವನ್ನು ಸರಿಪಡಿಸುವುದಿಲ್ಲ. ಓದುಗರು ಆ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು ಎಂದು ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು.
ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದಿಂದ ಕಲಾಮಂದಿರದಲ್ಲಿ ಏರ್ಪಡಿಸಿದ್ದ 2 ದಿನಗಳ ಭೈರಪ್ಪ ಸಾಹಿತ್ಯೋತ್ಸವದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಸಮಾಜದಲ್ಲಿನ ಅನ್ಯಾಯವನ್ನು ತಿಳಿದುಕೊಳ್ಳಲು ಸಾಹಿತ್ಯ ಓದಬೇಕೇ? ಅದನ್ನು ಅನುಭವಿಸುತ್ತಿಲ್ಲವೇ? ಅನ್ಯಾಯ, ಸಮಸ್ಯೆಗಳನ್ನು ಹೋಗಲಾಡಿಸಲು ಕಾದಂಬರಿ ಬರೆಯಬೇಕೆ? ಎಂದು ಪ್ರಶ್ನಿಸಿದರು.
ಸಾಹಿತ್ಯ ಕೃತಿ ಬರೆದ ಮಾತ್ರಕ್ಕೆ ಜೀವನದ ಸಮಸ್ಯೆ ಪರಿಹಾರವಾಗುವುದಿಲ್ಲ. ಸಾಹಿತ್ಯ ಓದುವ ವಿದ್ಯಾವಂತರೇ ಮತದಾನ ಮಾಡುವುದಿಲ್ಲ. ಆದ್ದರಿಂದ ಓದುಗರು ಸಾಹಿತ್ಯದಲ್ಲಿ ರಸವನ್ನು ಮಾತ್ರ ಅನುಭವಿಸಬೇಕು. ಅದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸಬಾರದು. ಆ ಬಗೆಯಾಗಿ ನನಗೂ ಹೆಚ್ಚಿನ ಗುರಿ ಇಲ್ಲ ಎಂದು ಹೇಳಿದರು.
ಚಳವಳಿ ಸಾಹಿತ್ಯ, ಸ್ಲೋಗನ್ ಸಾಹಿತ್ಯದಲ್ಲಿ ನನಗೆ ನಂಬಿಕೆ ಇಲ್ಲ. ಗದ್ದಲದ ನಡುವೆ ಶುದ್ಧ ಸಾಹಿತ್ಯದ ಬಗ್ಗೆ ಬಹಳ ಜನಕ್ಕೆ ತಿಳಿದಿಲ್ಲ. ರಾಜಕೀಯ, ಸಾಮಾಜಿಕ ಚಿಂತನೆಗೆ ಅನುಗುಣವಾಗಿ ಚಳವಳಿ ಸಾಹಿತ್ಯ ಹುಟ್ಟುತ್ತದೆ. ನನಗೆ ನಂಬಿಕೆ ಇರುವುದು ಶುದ್ಧಸಾಹಿತ್ಯದಲ್ಲಿ ಎಂದು ನುಡಿದರು.
ಸಾಹಿತ್ಯದ ಮೂಲ ಲಕ್ಷಣ ಯಾವುದು? ಮೊದಲಿಂದಲೂ ನಾನು ನಂಬಿರುವುದು ರಸ, ಧ್ವನಿ, ಔಚಿತ್ಯ. ಇವು ಸಾಹಿತ್ಯದ ಮೂಲ ನಿಕಾಶ. ಒಂದಕ್ಕೊಂದು ಸೇರಿದ್ದು. ಇವತ್ತು ಮೇಷ್ಟ್ರು ಸಾಹಿತ್ಯದ ಹೆಸರಿನಲ್ಲಿ ಚಳವಳಿ ಬೋಧಿಸುತ್ತಿದ್ದಾರೆ ಎಂದು ವಿಷಾದಿಸಿದರು.
ಚಳವಳಿಗಾರರು ನಿಮ್ಮ ಸಾಮಾಜಿಕ ಬದ್ಧತೆ ಏನು? ಭಾವನೆಯಲ್ಲಿ ಯಾವ ಮೌಲ್ಯವಿದೆ ಎಂದು ಪ್ರಶ್ನಿಸುತ್ತಾರೆ. ಲೇಖಕ ಬರವಣಿಗೆ ಜತೆಗೆ ಸಾಮಾಜಿಕ ಸೇವೆ ಮಾಡಬೇಕು ಎನ್ನುತ್ತಾರೆ. ಅನೇಕ ಸಾಹಿತಿಗಳನ್ನು ಆಕ್ರಮಿಸಿಕೊಂಡಿರುವುದು ಈ ಸಿದ್ಧಾಂತ. ಇದು ಕಮ್ಯುನಿಸ್ಟ್ ಸಿದ್ಧಾಂತದಿಂದ ಬಂದಿದ್ದು, ಒಬ್ಬ ವೈದ್ಯ ಶ್ರದ್ಧೆಯಿಂದ ರೋಗಿಯ ಸೇವೆ ಮಾಡಿದರೆ ಅದಕ್ಕಿಂತ ಹೆಚ್ಚಿನ ಸಮಾಜ ಸೇವೆ ಇನ್ನೇನಿದೆ? ಇವರ ಪ್ರಕಾರ ಕಮ್ಯುನಿಸ್ಟ್ ಸಿದ್ಧಾಂತವನ್ನು ಬಿತ್ತನೆ ಮಾಡುವುದೇ ಸಮಾಜ ಸೇವೆಯಾಗಿದೆ ಎಂದು ತಿಳಿಸಿದರು.
ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಮಾತನಾಡಿ, ಸಣ್ಣ ವಯಸ್ಸಿನಲ್ಲೇ ನನಗೆ ಸಾಹಿತ್ಯದ ಮೇಲೆ ಅಭಿರುಚಿ ಇತ್ತು. ನಾನು ಬೀಚಿ ಅವರ ಸಾಹಿತ್ಯ ಓದುತ್ತಿದ್ದರೆ, ನನ್ನ ತಮ್ಮ ಭೈರಪ್ಪ ಅವರ ಕಾದಂಬರಿಗಳನ್ನು ಓದುತ್ತಿದ್ದ. ನನ್ನನ್ನು ಬ್ಯಾಂಕ್ ಅಧಿಕಾರಿಯನ್ನಾಗಿ ಮಾಡಬೇಕು ಎಂಬುದು ತಂದೆಯ ಕನಸಾಗಿತ್ತು. ಅವರಿಗೆ ಸಾಹಿತ್ಯ, ಕವನ ಇಷ್ಟವಿರಲಿಲ್ಲ." ಭೈರಪ್ಪ, ಬೀಚಿ ನಿಮ್ಮನ್ನು ಹಾಳು ಮಾಡುತ್ತಾ ಇದ್ದಾರೆ ಎಂದು ಬೈಯ್ಯುತ್ತಿದ್ದರು' ಎಂದು ಪ್ರಾಣೇಶ್ ನೆನಪಿಸಿಕೊಂಡರು.
ಭೈರಪ್ಪ, ಕಾರಂತ, ಬೀಚಿ ಅವರ ಸಾಹಿತ್ಯವನ್ನು ಓದಿದವರು ಧಾರಾವಾಹಿಗಳನ್ನು ನೋಡಲು ಸಾಧ್ಯವಿಲ್ಲ. ಅವರಿಗೆ ಧಾರಾವಾಹಿಗಳಲ್ಲಿ ಏನೂ ಇಲ್ಲ ಎನಿಸಿಬಿಡುತ್ತದೆ. ಧಾರಾವಾಹಿಗಳಲ್ಲಿ ಒಂದೇ ಘಟನೆಯನ್ನು ಆರು ತಿಂಗಳ ಕಾಲ ಎಳೆಯುತ್ತಾರೆ ಮೈಸೂರು, ಬೆಂಗಳೂರಿನ ಜನರು ಉದ್ಯೋಗಕ್ಕೆ ಬೇರೆ ಕಡೆ ಹೋಗಲು ಇಷ್ಟಪಡುವುದಿಲ್ಲ. ಆದರೆ ಉತ್ತರ ಕರ್ನಾಟಕದವರು ಎಲ್ಲಾ ಕಡೆ ಹೋಗಲು ಸಿದ್ಧರಿರುತ್ತಾರೆ. ಮೈಸೂರಿನ ಹೋಟೆಲ್‌ಗಳಲ್ಲಿ ಕೆಲಸ ಮಾಡುವವರಲ್ಲಿ ಹೊರಗಿನ ರಾಜ್ಯದವರೇ ತುಂಬಿದ್ದಾರೆ ಎಂದರು.
ಹಾಗಾದರೆ ನೀನು ಸಾಹಿತಿಯಲ್ಲ, ಬಾಣಂತಿ! | A question of Delivery... - ಹಾಗಾದರೆ ನೀನು ಸಾಹಿತಿಯಲ್ಲ, ಬಾಣಂತಿ! - Kannada Oneindia
13 min ago ಸಿದ್ದರಾಮಯ್ಯ ಅವರ ಹೊಗಳಿ, ತೆಗಳಿದ ನಳಿನ್ ಕಟೀಲ್
24 min ago INX ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ವಿರುದ್ಧ ಸಿಬಿಐ ಚಾರ್ಜ್ ಶೀಟ್
ಹಾಗಾದರೆ ನೀನು ಸಾಹಿತಿಯಲ್ಲ, ಬಾಣಂತಿ!
| Updated: Saturday, October 20, 2012, 13:45 [IST]
ಉಲ್ಲೇಖ : 'ಗಂಡನ ಮನೆಯಿಂದ ಹೆರಿಗೆಗಾಗಿ ಹೆಣ್ಣುಮಕ್ಕಳು ತವರಿಗೆ ಬರುತ್ತಾರಲ್ಲಾ..."
ಲೇಖಕಿಯರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು 'ಪುಸ್ತಕ ಪ್ರಸವ " ಕ್ಕೆ ಹೋಲಿಸುವುದೇಕೋ ನನಗೆ ಈವರೆಗೂ ಅರ್ಥವಾಗಿಲ್ಲ. ಈ ಮಧ್ಯೆ ನೀವು ನಳಿನಿ ಮಯ್ಯ, ಸಂಧ್ಯಾ ...ಅವರ ಬಗ್ಗೆ ಬರೆದಾಗಲೂ ಹೀಗೆಯೇ ಬರೆದ ನೆನಪು. ನಾನು ಮುಂದೆ ಎಂದಾದರೂ ಪುಸ್ತಕ ಬಿಡುಗಡೆ ಮಾಡಿ,...ನೀವೇ ಮುನ್ನುಡಿ ಬರೆಯುವ 'ಅನಿವಾರ್ಯ ಕರ್ಮ" ನಿಮಗೆ ಒದಗಿದರೆ ... ಒಂದು ಕಿಮ್ಮತ್ತು. 'ನಾನು ಮೊದಲನೆಯ ಹೆರಿಗೆಗೂ ತವರಿಗೆ ಹೋಗಿರಲಿಲ್ಲ ! "
ಒಂದು ಹನಿಗವನ ನೋಡಿ(ದುಂಡಿರಾಜ್‌?)
ಬರೆಯುವುದೆಂದರೆ ಹೆರಿಗೆಯ ಹಾಗೆ ಏನಂತ್ತಿ?
-ತ್ರಿವೇಣಿ, ಅಮೆರಿಕಾ
ಪುಸ್ತಕ ಪ್ರಸವ ಇತ್ಯಾದಿ ಮಾತುಗಳನ್ನು ಹಿಂದೆಯೂ ಕೇಳಿದ್ದೆ. (ಬಹುಶಃ ಶಾಮ್‌ ಬರೆದದ್ದು ಇರಬಹುದು) ಭಾವನೆಗಳಿಂದ ಅಥವಾ ವಿಚಾರಗಳಿಂದ ತುಂಬಿರುವ ಬರಹಗಾರನ ಮನಸ್ಸು ಬಸಿರಾದ ಹೆಣ್ಣಿನ ಹಾಗೆ. ಹೇಗೆ ಗರ್ಭವತಿ ಹಡೆಯಲೇಬೇಕೋ ಬರಹಗಾರ/ಬರಹಗಾರ್ತಿ ತನ್ನ ಭಾವ / ವಿಚಾರಗಳನ್ನು ಹೊರಹಾಕಲೇಬೇಕು. (ಪುಸ್ತಕ ರೂಪದಲ್ಲಿ)
ಇನ್ನು ತವರಿಗೆ ಹೋಗುವ ವಿಚಾರ : ಅದು ಸ್ವಲ್ಪ ಹಳೆಯ ಚಿಂತನೆ ಅನ್ನಬಹುದು. (ನನ್ನ ಹೆಂಡತಿಯ ಮೂರೂ ಹೆರಿಗೆ ಅಮೆರಿಕಾದಲ್ಲೇ ಆಗಿದೆ) ಈ ಉಪಮೆ ಸ್ವಲ್ಪ ಸವಕಲಾಗಿರಲೂಬಹುದು? ಏನೇ ಇರಲಿ, ಬರಹಗಾರ ಮತ್ತು ಬರಹಗಾರ್ತಿಯರ ಭಾವನೆಗಳು ತವರಿನಲ್ಲಾಗಲಿ, ಗಂಡನಮನೆಯಲ್ಲಾಗಲೀ (ಅತ್ತೆ ಮನೆ ಅನ್ನುವಂತಿಲ್ಲ !) ಪುಸ್ತಕ ರೂಪದಲ್ಲಿ ಪ್ರಕಾಶಗೊಳ್ಳಲೆಂದು ಹಾರೈಸುತ್ತೇನೆ.
- ನಟರಾಜ್‌, ಅಮೆರಿಕ
ಸನ್ಮಾನ್ಯ ಓದುಗರಲ್ಲಿ ನಿವೇದನೆ:
ಪತ್ರಿಕೆಗೆ ಬರೆಯುವ ಭಾಷೆ ಪದಗಳ ಕುಲುಮೆಯಿಂದ ಮತ್ತು ಕ್ಲೀಷೆಗಳ ಅಮಲಿನಿಂದ ಕೂಡಿರುತ್ತದೆ. ಓದುಗ ಮಹಾಶಯರ ಭೋಗೋಳಿಕ, ಸಾಮಾಜಿಕ , ಕೌಟುಂಬಿಕ ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟು ಪದಗಳನ್ನು ಆರಿಸಿ ಬಳಸಬೇಕು ಎಂಬ ಅಂಶವನ್ನು ಕಾಲೇಜಿನಲ್ಲಿ ಹೇಳಿಕೊಡುತ್ತಾರೆ. ಅದು ಒಂದು ವಿಚಾರ. ಅದೇನೇ ಇರಲಿ, ತನಗರಿವಿಲ್ಲದೆ ' ಸವಕಲಾಗಿಬಿಟ್ಟಿದೆ" ಎನ್ನುವ ಪದಗಳಿಗೆ ಕೆಲವು ಪತ್ರಿಕೆಗಳು ಮರುಜೀವ ತುಂಬುವುದುಂಟು (ತವರು : Native Place, ಎಲ್ಲರೂ ತವರು ತೊರೆದವರೇ ಎನ್ನುವ ಸಂಗತಿ ಬೇರೆ) ಬರೆಯುವ ಅವಸರ ಅಥವಾ ಭರಾಟೆಯಲ್ಲಿ ಇತರ ಭಾಷೆಯ ಪದಗಳನ್ನು , ನುಡಿಗಟ್ಟುಗಳನ್ನು ಬಳಸುತ್ತಾ ಸಾಗುವ ಪತ್ರಿಕೆಗಳು ಕನ್ನಡ ಶಬ್ದಕೋಶಕ್ಕೆ ಹೊಸ ಪದಗಳನ್ನು ಕೊಡುವುದುಂಟು. ಇದು ಅಗತ್ಯ ಕೂಡ. (ರಾಜ್ಯದಲ್ಲಿ ಇವತ್ತು Naxalara ಹಾವಳಿ ಹೆಚ್ಚಾಗಿದೆ, ಕಟ್ಟೆಚ್ಚರ = Red Alert in Shivajinagar, ಸುಗ್ರೀವಾಜ್ಞೆ = New Ordinance gets Governers nod, ಮುಂತಾದವು. ಅಂತೆಯೇ ಕೆಲವು ಪದಗಳನ್ನು ಸಂದರ್ಭ, ವ್ಯಕ್ತಿ, ಸನ್ನಿವೇಶಕ್ಕನುಗುಣವಾಗಿ ಓದಿಕೊಂಡು ಹೋಗಬೇಕೆಂದು ಪತ್ರಿಕೆಗಳು ಸೂಚಿಸುತ್ತವೆ. (ಉದಾ : ಉಪ-ಮುಖ್ಯಮಂತ್ರಿ ಒಬ್ಬ ಕುರುಬ, ಆ ಸಂಪಾದಕಿ ಒಬ್ಬ ಬೃಹಸ್ಪತಿ, ಸೀತಾಪತಿ ನಿನಗೆ ಚಾಪೆಯೇ ಗತಿ ಇತ್ಯಾದಿ.
ಚಾಗದಭೋಗದಕ್ಕರದಂತಹ ಪದಗಳು ಇವತ್ತು ಪ್ರೊ. ಅ.ರಾ. ಮಿತ್ರ, ಎಂ. ಎಂ. ಕಲಬುರ್ಗಿ, ವೆಂಕಟಾಚಲ ಶಾಸ್ತ್ರಿ ಅವರ ಸೊತ್ತಾಗಿ ಮಾತ್ರ ಉಳಿದಿದೆ. ನಮ್ಮ ರಾಜ್ಯದ ಕಚೇರಿ -ಕಾಲೇಜು- ಹೋಟೆಲು- ಮತ್ತು ನಡುಮನೆಯಲ್ಲಿ I am amazed, How come yaar ಎಂಬಂತಹ ಪದಗಳು ಜನಜೀವನದಲ್ಲಿ ಹಾಸುಹೊಕ್ಕಾಗಿಬಿಟ್ಟಿವೆ. ಇವತ್ತು ಕರ್ನಾಟಕದಲ್ಲಿ ಕನ್ನಡಿಗರಿಗೆ ಜನಿಸಿದ ಒಬ್ಬ ಪುಣ್ಯಾತ್‌ಗಿತ್ತಿ ಕೂಡ ತಾನು ಬಸುರಿ ಎಂದು ಹೇಳಿಕೊಳ್ಳುವುದಿಲ್ಲ. ಆಕೆ ಆಗುವುದು ಏನಿದ್ದರೂ Pregnant ಅಷ್ಟೆ.
ಇನ್ನು ತವರಿನ ವಿಚಾರ : ಡಾಟ್‌ಕಾಂನಲ್ಲಿ ಕನ್ನಡ ಓದುವವರಲ್ಲಿ ಅನಿವಾಸಿ ಕನ್ನಡಿಗರ ಸಂಖ್ಯೆ ದೊಡ್ಡದು ಎನ್ನುವುದು ಇವತ್ತಿಗಂತೂ ಸತ್ಯ. ಅದರಲ್ಲೂ, ಸಾರಿಗೆ ಒಗ್ಗರಣೆ ಹಾಕಿಯೂ ಅನುಭವವಿಲ್ಲದ ಕೆಲವು ಹೆಣ್ಮಕ್ಕಳು ಮದುವೆಯಾಗಿ ಟಿಂಬೆಕ್ಟುಗೆ ಹೋದನಂತರ, ಬ್ರೆಡ್ಡು ಚೀಪುತ್ತಾ ಮನೆ, ಅಮ್ಮ, ಅಮ್ಮನ ಅಡುಗೆ, ಬಾಣಂತನ, ಆರೈಕೆ, ಉಷ್ಣ-ಸೀತ ನೆನೆಸಿಕೊಂಡು ಕರಳು ಚುರುಕ್ಕೆನಿಸಿಕೊಳ್ಳುವುದೂ ಸಾಮಾನ್ಯ. ಅಂತಹ ಮಾನಿನಿಯರಿಗೆ ಆಗಾಗ ಅಮ್ಮನ ಅಂದರೆ ತವರಿನ ನೆನಪಾಗಲೆನ್ನುವ ಆಶಯದಿಂದ ತವರು, ಅಜ್ಜಿಮನೆ, ಉಂಡಮನೆ, ಹೊಕ್ಕಮನೆ, ಮುಂತಾದ ಪದಗಳನ್ನು ದಟ್ಸ್‌ಕನ್ನಡ ಆಗಾಗ ಬಳಸುವುದುಂಟು. ಉದ್ದೇಶ ಇಷ್ಟೆ : ಕನ್ನಡ ಓದುವಾಗಲಾದರೂ ಮನೆಬಿಟ್ಟ ಮಾನಿನಿಯರಿಗೆ ತವರಿನ ನೆನಪು ಮರುಕಳಿಸಲಿ!! ನಿಜ. ಓದುತ್ತಾ , ಓದುತ್ತಾ ಕೆಲವು ಪದಗಳನ್ನು ಕಂಡರೆ ಸಾಕು ಅಸಹ್ಯ, ಜಿಗುಪ್ಸೆ ಮೂಡುತ್ತದೆ. (ಉದಾ : ಅಭಿವೃದ್ಧಿಯತ್ತ ಭಾರತ ದಾಪುಗಾಲು ; ಜನಸಂಖ್ಯಾ ಹತೋಟಿಗೆ ಲಾಲೂ ಪ್ರಸಾದ್‌ ಕರೆ; ಟೈಮೇ ಸಾಕಾಗ್ತಾಯಿಲ್ಲ; ಬೋರಣ್ಣ ರಾಜೀನಾಮೆ, ಈರಣ್ಣನ ನೇಮಕ ; ಅಮೆರಿಕದಿಂದ ಅಳಿಯ ಮಗಳು Short visitge ಬಂದಿದಾರೆ, ಬೇಗ ಮನೆಗೆ ಹೋಗ್ಬೇಕು ಕಣ್ರೀ....ಇತ್ಯಾದಿ)
ಇವಿಷ್ಟೂ ಭಾಷೆ ಮತ್ತು ಪದಬಳಕೆಯ ಮಾತಾಯಿತು. 'ಪುಸ್ತಕ ಪ್ರಸವ" ಪದಪ್ರಯೋಗವನ್ನು ಕೇವಲ 250 ಪುಟಗಳ ಬುಕ್‌ ರೀಲೀಜ್‌ ಸುದ್ದಿಯ ಹಿನ್ನೆಲೆಯಲ್ಲಿ ಓದಿಕೊಳ್ಳುವುದು ಸೂಕ್ತವಲ್ಲ. ಪುಸ್ತಕ ಬರೆಯುವುದು ಹೇಗೆ ಸುಲಭದ ಮಾತಲ್ಲವೋ, ಹಾಗೆಯೇ ಬರೆದದ್ದನ್ನು ಪ್ರಕಟಿಸಿ ನಾಲ್ಕು ಜನಕ್ಕೆ ತಲುಪಿಸುವ ಕೆಲಸ ಹಲವು ತಾಪತ್ರಯಗಳಿಂದ ಕೂಡಿರುತ್ತದೆ. ಪುಸ್ತಕ ಬರೆದು ಪ್ರಕಟಿಸಿದವರ ಅನುಭವಗಳನ್ನು ಖಾಸಗಿಯಾಗಿ ಕೇಳಿ ನೋಡಿ. ಪುಸ್ತಕವನ್ನು ಹೆರುವ ಆ ತಾಪತ್ರಯ ಒಂಬತ್ತು ತಿಂಗಳು ಹೊತ್ತು ಹೆತ್ತ ತಾಯಿಗೆ ಗೊತ್ತಿರುತ್ತದೆ.
ಈ ಪತ್ರಿಕೆಯ ಸಂಪಾದಕನೆನಿಸಿಕೊಂಡ ನಾನು ಹೆರಿಗೆ ನೋವನ್ನು ಕಂಡವನಲ್ಲ, ಪುಸ್ತಕ ಬರೆದು ಪ್ರಕಟಿಸುವ ಗೋಜಿಗೆ ಹೋದವನಲ್ಲ. ಆದ್ದರಿಂದ ಪ್ರಸವದ ನೋವುಗಳು ನನಗೆ ಪರಿಚಿತವಲ್ಲ. (ಗಾದೆ : ಆರು ಹಡೆದವಳ ಮುಂದೆ ಮೂರು ಹಡೆದವಳು ತಿಣುಕಬಾರದು!)
ಕಡೆಮಾತು : ಅನಿವಾಸಿ ಬಂಧುಗಳಲ್ಲಿ ಅನೇಕ ಬರಹಗಾರರಿದ್ದಾರೆ. ಗಂಡಸರು ಇದ್ದಾರೆ, ಹೆಂಗಸರೂ ಇದ್ದಾರೆ. ಅಲಬಾಮಾದ ವೈ. ಆರ್‌. ಮೋಹನ್‌, ನ್ಯೂಯಾರ್ಕಿನ ಎಚ್‌.ಕೆ. ಚಂದ್ರಶೇಖರ್‌, ಮಿನೆಸೋಟದ ಗುರುಪ್ರಸಾದ್‌ ಕಾಗಿನೆಲೆ, ವಾಷಿಂಗ್‌ಟನ್ನಿನ ಶ್ರೀನಿವಾಸ್‌, ಲಾಸ್‌ಏಂಜಲಿಸ್‌ನ ನಾಗ ಐತಾಳ, ಪೋಟೋಮಿಕ್‌ನ ಮೈಶ್ರೀ ನಟರಾಜ್‌, ಕ್ಯಾಲಿಫೋರ್ನಿಯಾದ ಎಂ. ಆರ್‌. ದತ್ತಾತ್ರಿ, ವಿಶ್ವನಾಥ್‌ ಹುಲಿಕಲ್‌, ಈಗ ಮೈಸೂರು ನಿವಾಸಿಯಾಗಿರುವ ಶಿಕಾರಿಪುರ ಹರಿಹರೇಶ್ವರ, ಮುಂತಾದವರ ಕೃತಿಗಳು ' ಬಿಡುಗಡೆ" ಆಗಿವೆ.
ಕ್ಯಾಲಿಫೋರ್ನಿಯಾದ ಸಂಧ್ಯಾ ರವೀಂದ್ರನಾಥ್‌, ಚಿಕಾಗೋದ ಶಾರದಾ ಬೈಯಣ್ಣ ಮತ್ತು ನಳಿನಿ ಮಯ್ಯ, ವಾಷಿಂಗ್‌ಟನ್‌ ಡಿಸಿಯ ಶಶಿಕಲಾ ಚಂದ್ರಶೇಖರ್‌, ಈಗ ಮಣಿಪಾಲದಲ್ಲಿ ನೆಲೆಸಿರುವ ಜ್ಯೋತಿ ಮಹದೇವ ಮುಂತಾದವರ ಕೃತಿಗಳ ಚೊಚ್ಚಲ ' ಹೆರಿಗೆ" ತವರಿನಲ್ಲಾಗಿದೆ!
-ಇಂತಿ, ಶಾಮ್‌ (ಸಂಪಾದಕ)
ಸಂಪಾದಕರಿಗೆ ಪತ್ರ ತ್ರಿವೇಣಿ ಪುಸ್ತಕ ಪ್ರೀತಿ triveni nalini maiya ಶಿಕಾರಿಪುರ ಹರಿಹರೇಶ್ವರ shikaripura harihareshwara vishvanath hulikal
ಜಂಟಿಸರ್ವೆ: ಕಂದಾಯಭೂಮಿ ಗುರುತಿಸಲು ಜಂಟಿಸರ್ವೆ - the junction is to recognize the revenue zone | Vijaya Karnataka
the junction is to recognize the revenue zone
ಚಿಕ್ಕಮಗಳೂರು : ಕಂದಾಯ ಭೂಮಿ ಗುರುತಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ಕಾರ್ಯ ನಡೆಸಲಾಗುತ್ತಿದೆ ವಿನಾ ಬೇರಾವುದೇ ಉದ್ದೇಶದಿಂದಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಸ್ಪಷ್ಟಪಡಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಂಟಿ ಸರ್ವೆ ಕಾರ್ಯ ನಡೆಸುತ್ತಿರುವ ಬಗ್ಗೆ ಯಾವುದೇ ಗೊಂದಲ ಬೇಡ. ಸರಕಾರಿ ಕಾರ್ಯಕ್ರಮಗಳಿಗೆ ಜಿಲ್ಲೆಯಲ್ಲಿ ಅಗತ್ಯವಿರುವ ಭೂಮಿಯೇ ದೊರೆಯುತ್ತಿಲ್ಲ. ಹೀಗಾಗಿ ಕಳೆದ ಹಲವು ವರ್ಷದಿಂದ ಹಲವಾರು ಯೋಜನೆಗಳು ನನೆÜಗುದಿಗೆ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಕಂದಾಯ ಭೂಮಿ ಗುರುತಿಸಿ ಆ ಭೂಮಿಯನ್ನು ಸರಕಾರಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಂಟಿ ಸರ್ವೆ ನಡೆಸಲಾಗುತ್ತಿದೆ ಎಂದರು.
ಜಂಟಿ ಸರ್ವೆ ನಡೆಸಿ ಕಂದಾಯ ಮತ್ತು ಅರಣ್ಯ ಭೂಮಿಯನ್ನು ಗುರುತಿಸದ ಕಾರಣ 94ಎ, 94ಬಿ, 94ಸಿ, 94ಸಿಸಿ ಗಳಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಮಂಜೂರಾತಿ ನೀಡಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಹಲವೆಡೆ ಅಂಗನವಾಡಿ, ಆಸ್ಪತ್ರೆ, ಶಾಲಾ ಕಟ್ಟಡ ಸೇರಿದಂತೆ ಸರಕಾರಿ ಕಚೇರಿ ಕಟ್ಟಡ ನಿರ್ಮಿಸಲು ಭೂಮಿ ಲಭ್ಯವಿಲ್ಲ. ಭದ್ರಾ ಅಣೆಕಟ್ಟು, ಮಸಗಲಿ, ಸಾರಗೋಡು ಅರಣ್ಯಗಳ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ. ಜಾಗವಿಲ್ಲದಿರುವುದರಿಂದ ಕಳೆದ 15 ವರ್ಷಗಳಿಂದ ಇವರಿಗೆ ಪುನರ್ವಸತಿ ಕಲ್ಪಿಸಲು ಆಗಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಜಂಟಿ ಸರ್ವೆ ಅಗತ್ಯಎಂದು ಹೇಳಿದರು.
ಈಗಾಗಲೆ ಜಂಟಿ ಸರ್ವೆ ಕಾರ್ಯ ಆರಂಭಿಸಲಾಗಿದೆ. 2-3 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕಂದಾಯ ಭೂಮಿಯನ್ನು ಗುರುತಿಸಿ ಅದನ್ನು ಕಂದಾಯ ಇಲಾಖೆಗೆ ವಾಪಸ್‌ ಪಡೆದು ಅಗತ್ಯ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಎಂದರು.
ನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಒದಗಿಸುವ ಅಮೃತ್‌ ಯೋಜನೆ ಹಾಗೂ ಒಳಚರಂಡಿ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗುತ್ತಿಗೆದಾರರಿಗೆ 4.50 ಕೋಟಿ ರೂ. ಬಿಲ್‌ ಪಾವತಿಸಲು ಬಾಕಿ ಇದ್ದು, ಚುನಾವಣಾ ನೀತಿ ಸಂಹಿತೆ ಪೂರ್ಣಗೊಂಡ ನಂತರ ಬಿಲ್‌ ಪಾವತಿಸುವುದಾಗಿ ತಿಳಿಸಲಾಗಿದೆ. ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಬಾಕಿ ಇದ್ದು ಅದಕ್ಕಾಗಿ ವಿವಿಧ ತಂಡಗಳನ್ನು ರಚಿಸಿ ವೇಗವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು. ಒಳಚರಂಡಿ ಯೋಜನೆ ಕಾಮಗಾರಿಯು ಜೂನ್‌ ಅಂತ್ಯದೊಳಗಾಗಿ ಪೂರ್ಣಗೊಳ್ಳಲಿದೆ. ಈಗಾಗಲೆ ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇರುವ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಲು ಗುತ್ತಿಗೆದಾರರಿಗೆ ಹಾಗೂ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ ಎಂದರು.ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌ ಹಾಜರಿದ್ದರು.
ಶೀಘ್ರ ಚಾಲನೆ
ಜಿಲ್ಲೆಯಲ್ಲಿ ಹಲವು ವರ್ಷದಿಂದ ವಿವಿಧ ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ. ಚಿಕ್ಕಮಗಳೂರು-ಸಕಲೇಶಪುರ ರೈಲ್ವೆ ಯೋಜನೆ, ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ, ಮಳಲೂರು ಏತನೀರಾವರಿ, ಕರಗಡ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳು ಹಲವು ವರ್ಷದಿಂದ ನನೆಗುದಿಗೆ ಬಿದ್ದಿವೆ. ಈ ಪೈಕಿ ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಈಗಾಗಲೆ ವೇಗ ನೀಡಲಾಗಿದೆ. ಈಗ 4 ಹಿಟಾಚಿಗಳನ್ನು ಬಳಸಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಕಾಮಗಾರಿ ಬಗ್ಗೆ ತಾವು ಆಗಾಗ್ಗೆ ಸಣ್ಣ ನೀರಾವರಿ ಇಲಾಖೆಯೊಂದಿಗೆ ಮಾಹಿತಿ ಪಡೆದುಕೊಳ್ಳುತ್ತಿದ್ದು, ಈ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಮಳಲೂರು ಏತನೀರಾವರಿ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನಪಡಿಸಿಕೊಳ್ಳುವ ವಿಚಾರದಲ್ಲಿ ರೈತರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಭೂಮಿಗೆ ನಿಗದಿಪಡಿಸಿರುವ ದರದ ವಿಚಾರದಲ್ಲಿ ಸ್ವಲ್ಪ ಗೊಂದಲವಿದೆ. ಶೀಘ್ರದಲ್ಲಿಯೇ ಮತ್ತೊಮ್ಮೆ ರೈತರೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ತಿಳಿಸಿದರು.
ಉಪ್ಪಿನಕಾಯಿ ಹೃದಯದ ಆರೋಗ್ಯಕ್ಕೆ ಕೆಟ್ಟದ್ದೇ? | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Sep 15, 2020, 6:38 PM IST
ಉಪ್ಪಿನಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ....ಉಪ್ಪಿನಕಾಯಿ ಜೊತೆಯಲ್ಲಿದ್ದರೆ ಊಟದ ರುಚಿಯೇ ಬೇರೆ. ಮಾವು,ಲಿಂಬೆ,ಮೆಣಸು,ಬೆಳ್ಳುಳ್ಳಿ,ಶುಂಠಿ ಇವೆಲ್ಲ ಸಾಮಾನ್ಯವಾಗಿ ಜನಪ್ರಿಯವಾಗಿರುವ ಉಪ್ಪಿನಕಾಯಿ ವೈವಿಧ್ಯಗಳಾಗಿವೆ. ಸ್ವಲ್ಪ ಎಣ್ಣೆ,ಉಪ್ಪು,ಅರಿಷಿಣ,ಕೆಂಪು ಮೆಣಸಿನ ಹುಡಿಯಂತಹ ಸಂಬಾರ ಪದಾರ್ಥಗಳು,ಜೀರಿಗೆ,ಕರಿಜೀರಿಗೆ ಮತ್ತು ಬಡೆಸೋಪುಗಳಂತಹ ಬೀಜಗಳನ್ನು ಉಪ್ಪಿನಕಾಯಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆರೋಗ್ಯಯುತ ಕರುಳಿಗೆ ಪೂರಕವಾಗಿರುವ ಉಪ್ಪಿನಕಾಯಿ ವಿಟಾಮಿನ್ ಬಿ 12 ಕೊರತೆಯನ್ನು ನೀಗಿಸುತ್ತದೆ.
ಉಪ್ಪಿನಕಾಯಿ ತಯಾರಿಕೆಗೆ ಬಳಸುವ ಎಣ್ಣೆ,ಉಪ್ಪಿನಿಂದ ಹಿಡಿದು ಸಂಬಾರ ಪದಾರ್ಥಗಳವರೆಗೂ ಅನೇಕ ಆತಂಕಗಳು ಹಲವರಲ್ಲಿದ್ದು. ಇದು ಅವರು ಉಪ್ಪಿನಕಾಯಿಯಿಂದ ದೂರವಿರುವಂತೆ ಮಾಡಿದೆ. ಊಟಕ್ಕೆ ರುಚಿ ನೀಡುವ ಉಪ್ಪಿನಕಾಯಿಯ ಬಗ್ಗೆ ಹಲವು ಮಿಥ್ಯೆಗಳು ಜನರಲ್ಲಿವೆ. ಇಂತಹ ಕೆಲವು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳು ಇಲ್ಲಿವೆ....
* ಉಪ್ಪಿನಕಾಯಿಯಲ್ಲಿ ಎಣ್ಣೆ ಮತ್ತು ಉಪ್ಪು ಹೆಚ್ಚಿರುತ್ತವೆ
-ಉಪ್ಪು ಮತ್ತು ಎಣ್ಣೆ ಉಪ್ಪಿನಕಾಯಿ ತಯಾರಿಕೆಗೆ ಅತ್ಯಗತ್ಯವಾಗಿವೆ. ಆದರೆ ಉಪ್ಪಿನಕಾಯಿಯನ್ನು ಮನೆಯಲ್ಲಿಯೇ ತಯಾರಿಸಿದ್ದರೆ ಈ ಬಗ್ಗೆ ಆತಂಕ ಬೇಕಿಲ್ಲ. ಅದು ಕರುಳಿನ ಆರೋಗ್ಯಕ್ಕೆ ಪೂರಕವಾದ ಬ್ಯಾಕ್ಟೀರಿಯಾಗಳನ್ನು ಒದಗಿಸುತ್ತದೆ. ಕರುಳು ಆರೋಗ್ಯಯುತವಾಗಿದ್ದರೆ ಜೀರ್ಣಕ್ರಿಯೆಯು ಉತ್ತಮವಾಗಿರುತ್ತದೆ,ನಿರೋಧಕ ಶಕ್ತಿಯು ಹೆಚ್ಚುತ್ತದೆ ಮತ್ತು ಒಟ್ಟಾರೆ ಆರೋಗ್ಯವೂ ಚೆನ್ನಾಗಿರುತ್ತದೆ.
* ಉಪ್ಪಿನಕಾಯಿಯಲ್ಲಿರುವ ಉಪ್ಪು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ
-ಅಧಿಕ ಸೋಡಿಯಂ ಹೊಂದಿರುವ ಆಹಾರಗಳು ಮತ್ತು ಉಪ್ಪು ಹೆಚ್ಚಿನ ಪ್ರಮಾಣದಲ್ಲಿರುವ ಸಂಸ್ಕರಿತ ಮತ್ತು ಪ್ಯಾಕೇಜ್ಡ್ ಆಹಾರಗಳು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ. ಇಂತಹವರಿಗೆ ಕಲ್ಲುಪ್ಪು ಅಥವಾ ಕಪ್ಪುಉಪ್ಪು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನಿಯಮಿತ ವ್ಯಾಯಾಮ ಮತ್ತು ಒಳ್ಳೆಯ ನಿದ್ರೆ ಮಾಡಿದರೆ ಉಪ್ಪಿನ ಕಾಯಿ ತಿನ್ನುವುದರಿಂದ ರಕ್ತದೊತ್ತಡ ಹೆಚ್ಚುವ ಸಾಧ್ಯತೆ ಕಡಿಮೆ. ಇದೇ ವೇಳೆ ಸಂಸ್ಕರಿತ ಮತ್ತು ಪ್ಯಾಕೇಜ್ಡ್ ಆಹಾರಗಳ ಸೇವನೆ ಕನಿಷ್ಠವಾಗಿರಬೇಕು.
* ಎಣ್ಣೆ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ
-ಕಡಲೆ ಎಣ್ಣೆ,ಸಾಸಿವೆ ಎಣ್ಣೆ,ಎಳ್ಳೆಣ್ಣೆ ಬಳಸಿ ಮನೆಯಲ್ಲಿಯೇ ಉಪ್ಪಿನಕಾಯಿ ತಯಾರಿಸುವುದು ಎಲ್ಲ ದೃಷ್ಟಿಯಿಂದಲೂ ಒಳ್ಳೆಯದು ಎನ್ನುವುದು ತಜ್ಞರ ಅಭಿಪ್ರಾಯ. ಎಣ್ಣೆಯನ್ನು ನಮ್ಮ ಸಾಂಪ್ರದಾಯಿಕ ಆಹಾರ ಕ್ರಮಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು. ಸೂಕ್ತ ಪ್ರಮಾಣದಲ್ಲಿ ಸೇವಿಸಿದರೆ ಉಪ್ಪಿನಕಾಯಿಯಲ್ಲಿರುವ ಎಣ್ಣೆ ಹೃದಯದ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆಗಳು ತೀರ ಕಡಿಮೆ.
* ಉಪ್ಪಿನಕಾಯಿ ಅನಾರೋಗ್ಯಕಾರಿ
ಉಪ್ಪಿನಕಾಯಿ ಖನಿಜಗಳು,ವಿಟಾಮಿನ್‌ಗಳು ಮತ್ತು ಕರುಳುಸ್ನೇಹಿ ಬ್ಯಾಕ್ಟೆರಿಯಾಗಳ ಕಣಜವಾಗಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಪ್ರತಿದಿನ ಒಂದೆರಡು ಚಮಚಗಳಷ್ಟು ಉಪ್ಪಿನಕಾಯಿ ಸೇವಿಸಿದರೆ ಅದು ಹೊಟ್ಟೆಯುಬ್ಬರ,ವಿಟಾಮಿನ್ ಡಿ ಮತ್ತು ಬಿ12 ಕೊರತೆ,ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ ಮತ್ತು ಕರುಳಿನ ಸುಗಮ ಚಲನವಲನಕ್ಕೂ ನೆರವಾಗುತ್ತದೆ.
ಉಪ್ಪಿನಕಾಯಿ ಎಲ್ಲ ನೈಸರ್ಗಿಕ ಘಟಕಗಳ ಸೂಕ್ತ ಪ್ರಮಾಣದಲ್ಲಿ ಮಿಶ್ರಣದೊಂದಿಗೆ ಮನೆಯಲ್ಲಿಯೇ ತಯಾರಾಗಿದ್ದರೆ ಅದನ್ನು ಆರೋಗ್ಯಕರ ಎಂದೇ ಪರಿಗಣಿಸಬಹುದು.
ದಾರುನ್ನೂರಿನಲ್ಲಿ ಉಚಿತ ವೈದ್ಯಕೀಯ ಶಿಬಿರ | ವಿಶ್ವ ಕನ್ನಡಿಗ ನ್ಯೂಸ್
Home ರಾಜ್ಯ ಸುದ್ದಿಗಳು ದಕ್ಷಿಣ ಕನ್ನಡ ದಾರುನ್ನೂರಿನಲ್ಲಿ ಉಚಿತ ವೈದ್ಯಕೀಯ ಶಿಬಿರ
Posted By: ವಿಕೆ ನ್ಯೂಸ್ ಪ್ರತಿನಿಧಿon: October 04, 2019 In: ದಕ್ಷಿಣ ಕನ್ನಡ
ಕಾಶಿಪಟ್ಣ (ವಿಶ್ವ ಕನ್ನಡಿಗ ನ್ಯೂಸ್) : ದಾರುನ್ನೂರ್ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಸಾಮಾನ್ಯ ವೈದ್ಯಕೀಯ ಹಾಗೂ ನಗುಮುಖ-ದಂತ ಸುಖ ಉಚಿತ ವೈದ್ಯಕೀಯ ಶಿಬಿರವು ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ,ಜಮೀಯ್ಯತುಲ್ ಫಲಾಹ್ ಮೂಡಬಿದ್ರೆ ಹಾಗೂ ಯೇನಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ನಡೆಯಿತು.
ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮೀಯ್ಯತುಲ್ ಫಲಾಹ್ ಮೂಡಬಿದ್ರೆ ಘಟಕದ ಅಧ್ಯಕ್ಷರು,ಜಿಲ್ಲಾ ಕಾರ್ಯದರ್ಶಿಗಳಾದ ಜನಾಬ್ ಸಲೀಂ ಹಂಡೇಲು ವಹಿಸಿದರು.ಸಂಸ್ಥೆಯ ಪ್ರಾಂಶುಪಾಲರಾದ ಅಮೀನ್ ಹುದವಿ ಉದ್ಘಾಟಿಸಿದರು. ಸಂಸ್ಥೆಯ ವಿದ್ಯಾರ್ಥಿ ಉಮರುಲ್ ಫಾರೂಕ್ ಅಜ್ಜಾವರ ಕಿರಾಅತ್ ಪಠಿಸಿದರು. ಮುಖ್ಯಾತಿಥಿಗಳಾಗಿ ಡಾ.ಅಬ್ದುಲ್ ಅಝೀಝ್, ಡಾ.ಲೋಕೇಶ್, ಎಸ್.ಎ ಗಫೂರ್, ಹುಸೈನ್ ರಹ್ಮಾನಿ ಕಾಝಿಯಾರಗಂ ಉಪಸ್ಥಿತರಿದ್ದರು. ಆಗಮಿಸಿದ ಅತಿಥಿಗಳನ್ನು ಉಪಪ್ರಾಂಶುಪಾಲರಾದ ತ್ವಾಹಾ ಹುದವಿ ಸ್ವಾಗತಿಸಿ ವ್ಯವಸ್ಥಾಪಕರಾದ ಅಬ್ದುಲ್ ಹಕೀಂ ವಂದಿಸಿದರು.
ಸಭಾಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅಧ್ಯಯನ ಶಿಬಿರವನ್ನು ನಡೆಸಲಾಯಿತು.ತಂಬಾಕು ಮುಕ್ತ ಜೀವನ, ವಿಶ್ವ ಹೃದಯ ದಿನ ಸಂದೇಶ ಹಾಗೂ ದಂತ ಆರೋಗ್ಯ ರಕ್ಷಣೆ ಎಂಬ ವಿಷಯಗಳಲ್ಲಿ ಡಾ.ಅಮಿತ, ಡಾ.ಲೋಕೇಶ್ ಮತ್ತು ಡಾ.ತ್ವಾಹಾ ಇವರು ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಸ್ತ್ರೀ ರೋಗ, ಎಲುಬು, ಹೃದಯ, ದಂತ ಹಾಗೂ ಸಾಮಾನ್ಯ ವೈದ್ಯಕೀಯ ವಿಭಾಗದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಫಲಾನುಭವಿಗಳಾದರು. ಡಾ.ತ್ವಾಹಾ, ಡಾ.ಲೋಕೇಶ್ ಮತ್ತು ಡಾ.ಅಮಿತ ಇವರ ನೇತೃತ್ವದಲ್ಲಿ ಯೇನಪೋಯ ಆಸ್ಪೆತ್ರೆಯ ವೈದ್ಯರ ತಂಡ ಜೊತೆಗಿದ್ದರು. ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ, ಜಮೀಯ್ಯತುಲ್ ಫಲಾಹ್ ಮೂಡಬಿದ್ರೆ ಹಾಗೂ ಯೇನಪೋಯ ದಂತ ಕಾಲೇಜು ಮತ್ತು ಆಸ್ಪತ್ರೆಯ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಿತು.
ಗೋಡ್ಸೆ ಪರ ಹೇಳಿಕೆ ಪಕ್ಷದ ನಿಲುವಲ್ಲ; ಅಮಿತ್‌ ಶಾ | Udayavani – ಉದಯವಾಣಿ
Friday, 21 Jan 2022 | UPDATED: 01:43 AM IST
ಗೋಡ್ಸೆ ಪರ ಹೇಳಿಕೆ ಪಕ್ಷದ ನಿಲುವಲ್ಲ; ಅಮಿತ್‌ ಶಾ
ಸಚಿವ ಹೆಗಡೆ, ಸಾಧ್ವಿ ಮತ್ತು ನಳೀನ್‌ ವಿರುದ್ಧ ಶಿಸ್ತು ಕ್ರಮ?
Team Udayavani, May 17, 2019, 2:57 PM IST