text stringlengths 0 61.5k |
|---|
ಬೆಂಗಳೂರು: ಜೀವನಹಳ್ಳಿ ತಂಡದವವರು ಬುಧವಾರ ಇಲ್ಲಿ ಕೊನೆಗೊಂಡ ಕೆ.ಎಚ್.ಲಕ್ಷ್ಮಿನಾರಾಯಣ ಸ್ಮಾರಕ 14 ವರ್ಷದೊಳಗಿನವರ ಫುಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆದರು. |
ಫೈನಲ್ನಲ್ಲಿ ಜೀವನಹಳ್ಳಿ ತಂಡ ಪೆನಾಲ್ಟಿ ಶೂಟ್ಔಟ್ನಲ್ಲಿ 4-3 ಗೋಲುಗಳಿಂದ ಗೌತಮಪುರ ತಂಡವನ್ನು ಸೋಲಿಸಿತು. |
ಟೈಟಾನ್ಸ್ ತಂಡಕ್ಕೆ ಸುಲಭ ಗೆಲುವು |
ಡರ್ಬನ್ (ಪಿಟಿಐ): ಜಾಕ್ ರುಡಾಲ್ಫ್ (63, 56 ಎಸೆತ, 7 ಬೌಂ) ಮತ್ತು ಫರ್ಹಾನ್ ಬೆಹರ್ದೀನ್ (ಅಜೇಯ 48, 23 ಎಸೆತ, 1 ಬೌಂ, 3 ಸಿಕ್ಸರ್) ಅವರ ಆಕರ್ಷಕ ಆಟದ ನೆರವಿನಿಂದ ಟೈಟಾನ್ಸ್ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 59 ರನ್ಗಳಿಂದ ಆಕ್ಲೆಂಡ್ ತಂಡವನ್ನು ಮಣಿಸಿತು. |
ಬುಧವಾರ ಮೊದಲು ಬ್ಯಾಟ್ ಮಾಡಿದ ಟೈಟಾನ್ಸ್ 20 ಓವರ್ಗಳಲ್ಲಿ 4 ವಿಕೆಟ್ಗೆ 172 ರನ್ ಪೇರಿಸಿದರೆ, ಆಕ್ಲೆಂಡ್ 18.1 ಓವರ್ಗಳಲ್ಲಿ 113 ರನ್ಗಳಿಗೆ ಆಲೌಟಾಯಿತು. |
ಸಂಕ್ಷಿಪ್ತ ಸ್ಕೋರ್: ಟೈಟಾನ್ಸ್: 20 ಓವರ್ಗಳಲ್ಲಿ 4 ವಿಕೆಟ್ಗೆ 172 (ಹೆನ್ರಿ ಡೇವಿಡ್ಸ್ 36, ಜಾಕ್ ರುಡಾಲ್ಫ್ 63, ಫರ್ಹಾನ್ ಬೆಹರ್ದೀನ್ ಔಟಾಗದೆ 48, ಮೈಕಲ್ ಬೇಟ್ಸ್ 21ಕ್ಕೆ 1, ಅಜರ್ ಮಹಮೂದ್ 32ಕ್ಕೆ 1). ಆಕ್ಲೆಂಡ್: 18.1 ಓವರ್ಗಳಲ್ಲಿ 113 (ಆಂಡ್ರೆ ಆ್ಯಡಮ್ಸ 30, ಎತಿ ಮಬಲಾಟಿ 26ಕ್ಕೆ 3, ಅಲ್ಫೋನ್ಸೊ ಥಾಮಸ್ 18ಕ್ಕೆ 3). ಪಂದ್ಯಶ್ರೇಷ್ಠ: ಫರ್ಹಾನ್ ಬೆಹರ್ದೀನ್. |
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಕು|| ಸೌಜನ್ಯ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿ ಮೂರು ವರ್ಷವಾಗುತ್ತಿದ್ದು ಆಕೆಯನ್ನು ಸ್ಪರಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೆಣದ ಬತ್ತಿ ಮೆರವಣಿಗೆ ನಡೆಸಿತು. |
Previous ArticlesConsider Pakistan's proliferation record before any deal: India |
Next ArticlesMumbai: Kannadiga Patrakarthara Sangha Maharashtra Donates for Ditiya Balanja's Medical Treatment |
ಯುದ್ಧ ವಿಧಾನಗಳಲ್ಲಿ ಅಪಾಯಕಾರಿ ಮಾರ್ಪಾಡು | Prajavani |
MAJOR CHANGE IN WAR FARE- IAF CHIEF EXPRESS CONCERN |
ವಿವಿಧ ದೇಶಗಳ ವಾಯುಸೇನೆ ಮುಖ್ಯಸ್ಥರ ಸಮ್ಮೇಳನದಲ್ಲಿ ಭದೌರಿಯಾ ಕಳವಳ |
ಪ್ರಜಾವಾಣಿ ವಾರ್ತೆ Updated: 04 ಫೆಬ್ರವರಿ 2021, 01:10 IST |
ಬೆಂಗಳೂರು: ಯುದ್ಧ ಕಾರ್ಯತಂತ್ರಗಳ ದೃಷ್ಟಿಯಲ್ಲಿ ಭಾರತೀಯ ವಾಯುಪಡೆಯು ಹಿಂದೂ ಮಹಾಸಾಗರ ಪ್ರದೇಶದ ಮಹತ್ವದ ಆಸ್ತಿ ಎಂಬುದಾಗಿ ರಕ್ಷಣಾ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೂ, ಯುದ್ಧ ವಿಧಾನಗಳಲ್ಲಿ ಆಗಿರುವ ಅಪಾಯಕಾರಿ ಮಾರ್ಪಾಡುಗಳಿಂದಾಗಿ ಅಂತರರಾಷ್ಟ್ರೀಯ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾದ ಅಗತ್ಯವಿದೆ ಎಂದೂ ಅವರು ಅಭಿಪ್ರಾಯಪಡುತ್ತಾರೆ. |
ಏರೊಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಬುಧವಾರ ಏರ್ಪಡಿಸಿದ್ದ ವಿವಿಧ ದೇಶಗಳ ವಾಯುಸೇನೆಯ ಮುಖ್ಯಸ್ಥರ ಸಮ್ಮೇಳನದಲ್ಲಿ ಮಾತನಾಡಿದ ಭಾರತೀಯ ವಾಯು ಸೇನೆಯ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ, 'ಇತ್ತೀಚಿನ ವರ್ಷಗಳಲ್ಲಿ ಭೌಗೋಳಿಕ–ರಾಜಕೀಯ ವಿಚಾರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹತ್ತರ ಮಾರ್ಪಾಡುಗಳಾಗುತ್ತಿರುವುದನ್ನು ನೋಡುತ್ತಿದ್ದೇವೆ' ಎಂದು ಕಳವಳ ವ್ಯಕ್ತಪಡಿಸಿದರು. |
'ಭೌತಿಕ, ಡಿಜಿಟಲ್ ರೂಪದ ಹಾಗೂ ಅರಿವಿಗೆ ಬರುವ ರಂಗಗಳಲ್ಲಿ ಆಗಿರುವ ಹೊಸ ತಂತ್ರಜ್ಞಾನಗಳ ಆವಿಷ್ಕಾರವು ಯುದ್ಧ ಮಾಡುವ ಕಲೆಯನ್ನು ಗಮನಾರ್ಹವಾಗಿ ಸಂಕೀರ್ಣಗೊಳಿಸಿದೆ. ಜಾಗತಿಕವಾಗಿ ನಾವು ಹಿಂದೆಂದೂ ಕಂಡರಿಯದಷ್ಟು ಅನಿಶ್ಚಿತತೆ, ಚಂಚಲತೆ ಮತ್ತು ಪರಸ್ಪರ ಸಂಬಂಧ ಹೊಂದಿರುವ ಬೆದರಿಕೆಗಳನ್ನು ಎದುರಿಸುತ್ತಿದ್ದೇವೆ. ಭಾರತದ ಮಟ್ಟಿಗೆ ಹೇಳುವುದಾದರೆ ನಮಗಿರುವ ಬೆದರಿಕೆಗಳು ಕೂಡಾ ನಮ್ಮ ಭೌಗೋಳಿಕ ಅಂಶಗಳಷ... |
'ದೇಶದ ಮೇರೆಗಳು ಬದಲಾಗಿದ್ದು, ಅವು ವೈಮಾನಿಕ ಪ್ರದೇಶದ ವ್ಯಾಪ್ತಿ, ಭೌತಿಕ ಗಡಿಗಳು ಹಾಗೂ ಕರಾವಳಿ ತೀರಗಳಾಚೆಗೂ ಚಾಚಿವೆ. ಹಲವು ಸಲ ಎಚ್ಚರಿಕೆಗಳನ್ನು ನೀಡುವ ಪರಿಪಾಠಗಳಿಲ್ಲದೆಯೇ ದಾಳಿಗಳು ಉಂಟಾಗಬಲ್ಲವು. ಅವುಗಳ ಪರಿಣಾಮವೂ ಕ್ಷಿಪ್ರವಾಗಿ ಹಲವಾರು ಕ್ಷೇತ್ರಗಳಿಗೆ ಹಬ್ಬಬಹುದು' ಎಂದು ಆತಂಕಕಾರಿ ಬೆಳವಣಿಗೆಗಳನ್ನು ಬಿಚ್ಚಿಟ್ಟರು. |
ದೇಶದ ರಕ್ಷಣಾ ಸಚಿವ ರಾಜನಾಥ ಸಿಂಗ್ ಕೂಡಾ, 'ಅಂತರರಾಷ್ಟ್ರೀಯ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸುವ ಅಗತ್ಯವಿದೆ' ಎಂದು ಅಭಿಪ್ರಾಯಪಟ್ಟರು. |
'ಹಣಕಾಸಿಗೆ ಸಂಬಂಧಿಸಿದ ನಿರ್ಬಂಧಗಳು ಸಶಸ್ತ್ರ ಬಲವನ್ನು ಕಟ್ಟುವ ನಮ್ಮ ಗುರಿ ಸಾಧನೆ ವಿಚಾರದಲ್ಲಿ ನಮ್ಮ ಕೈಗಳನ್ನು ಕಟ್ಟಿಹಾಕುತ್ತಿವೆ. ಅದರ ಹೊರತಾಗಿಯೂ ನಾವು ತಂತ್ರಜ್ಞಾನವನ್ನು ರೂಪಿಸುವ ಹಾಗೂ ಉತ್ತಮ ವಿಚಾರಗಳನ್ನು ಅಳವಡಿಸಿಕೊಳ್ಳುವ ದೃಢವಾದ ಕಾರ್ಯತಂತ್ರವನ್ನು ರೂಪಿಸಬೇಕಾದ ಅವಶ್ಯಕತೆ ಇದೆ' ಎಂದು ಒತ್ತಿ ಹೇಳಿದರು. |
'ಭೌಗೋಳಿಕ– ರಾಜಕೀಯದ ವಿಚಾರದಲ್ಲಿ ಭಾರತ ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಂಬಿಕಾರ್ಹ ಸ್ನೇಹಿತ. ಪರಸ್ಪರ ಭದ್ರತೆ ಒದಗಿಸುವ ಪಾತ್ರವನ್ನೂ ನಿಭಾಯಿಸಲು ಭಾರತ ಸಿದ್ಧ. ಈ ವಿಚಾರದಲ್ಲಿ ವಾಯುಪಡೆಯ ಸಾಮರ್ಥ್ಯವೂ ಮಹತ್ತರ ಪಾತ್ರ ನಿರ್ವಹಿಸುತ್ತದೆ' ಎಂದರು. |
'ವಾಯುಪಡೆಯ ಬಲವರ್ಧನೆ ಕೇವಲ ರಕ್ಷಣಾ ಉದ್ದೇಶಗಳನ್ನು ಮಾತ್ರ ಹೊಂದಿಲ್ಲ. ನೈಸರ್ಗಿಕ ವಿಕೋಪಗಳು ಸಂಭವಿಸಿದಾಗಲೂ ವಾಯು ಪಡೆ ಮಹತ್ತರ ಪಾತ್ರ ನಿರ್ವಹಿಸಬಲ್ಲುದು. ಐದು ವರ್ಷಗಳಲ್ಲಿ ಇಂತಹ 100 ಕ್ಕೂ ಹೆಚ್ಚು ಅನಿಶ್ಚಿತ ಸನ್ನಿವೇಶಗಳನ್ನು ನಿಭಾಯಿಸಲಾಗಿದೆ. 6000ಕ್ಕೂ ಅಧಿಕ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. 44ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿದೆ' ಎಂದು ಸಿಂಗ್ ಮಾಹಿತಿ ನೀಡಿದರು. |
26 ದೇಶಗಳ ಉನ್ನತ ಅಧಿಕಾರಿಗಳು, ಹಿರಿಯ ಪ್ರತಿನಿಧಿಗಳು ಖುದ್ದಾಗಿ ಈ ಸಮ್ಮೇಳನದಲ್ಲಿ ಭಾಗವಹಿಸಿದರು. ಅಲ್ಲದೇ 14 ರಾಷ್ಟ್ರಗಳ ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳು ವರ್ಚುವಲ್ ರೂಪದಲ್ಲಿ ಈ ಸಮಾಲೋಚನೆಯಲ್ಲಿ ಭಾಗಿಯಾದರು. |
ಅಮೆರಿಕ, ಇಸ್ವಟಿನಿ,ಇಟಲಿ, ಬ್ರೆಜಿಲ್, ಜರ್ಮನಿ, ಜಪಾನ್, ರಷ್ಯಾ, ಫ್ರಾನ್ಸ್, ಅಫ್ಘಾನಿಸ್ತಾನ್, ಝಾಂಬಿಯಾ, ಮಾಲ್ಡೀವ್ಸ್, ತಜಕಿಸ್ತಾನ್, ಬಾಂಗ್ಲಾದೇಶ, ಕೆನ್ಯ, ಬ್ರಿಟನ್, ಸೂಡಾನ್ ಹಾಗೂ ಟಾಂಝಾನಿಯಾ ದೇಶಗಳ ರಕ್ಷಣಾ ಇಲಾಖೆ ಪ್ರಮುಖರು ಪಾಲ್ಗೊಂಡರು. |
'ಡ್ರೋನ್ಗಳಿಂದ ಆತಂಕ– ಐಎಎಫ್ ಪ್ರತಿತಂತ್ರ' |
'ಕಡಿಮೆ ಖರ್ಚಿನಲ್ಲಿ ಲಭ್ಯವಿರುವ ಡ್ರೋನ್ನಂತಹ ಆಘಾತಕಾರಿ ತಂತ್ರಜ್ಞಾನ ಸರ್ಕಾರಿ ಹಾಗೂ ಸರ್ಕಾರೇತರ ಸಂಘಟನೆಗಳು ಮನಬಂದಂತೆ ಎಲ್ಲೆಂದರಲ್ಲಿ ಬಳಸಬಹುದಾದ ಮಾರಕ ಆಸ್ತಿಯಾಗಿಬಿಟ್ಟಿದೆ. ಇವುಗಳು ಊಹಿಸಲಾಗದಷ್ಟು ದುಷ್ಪರಿಣಾಮವನ್ನು ಉಂಟು ಮಾಡಬಲ್ಲವು. ಭಾರತೀಯ ವಾಯುಪಡೆಯು ಈ ಬೆಳವಣಿಗೆಯನ್ನು ಕೂಲಂಕಷವಾಗಿ ಅವಲೋಕಿಸುತ್ತಿದೆ. ಇದಕ್ಕೆ ಉತ್ತರವಾಗಿ ಮಾನವರಹಿತ, ಅಥವಾ ಅಗತ್ಯಬಿದ್ದಾಗ ಮಾತ್ರ ಮಾನವರಹಿತ... |
'); $('#div-gpt-ad-802142-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct... |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-802142').addClass('inartprocessed'); } else $('#in-article-802142').hide(); } else { _taboola.push({article:'auto', url:'https://www.prajavani.net/district/bengaluru-city/major-chan... |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-802142 .field-name-body .field-items div.field-item > p'); if(x1 != null && x1.length != 0) { $('#node-802142 .field-name-body... |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-802142 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-802142'); }); } else { $('#in-article-mob-802142').hide(); $('#in-article-mob-3rd-802142').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ... |
ಮಸೀದಿಯಲ್ಲಿ ಅಗಡಿಕೊಂಡಿದ್ದ ಪ್ರೊಫೆಸರ್ ಸೇರಿದಂತೆ 30 ಮಂದಿ ತಬ್ಲಿಘಿಗಳು ಅರೆಸ್ಟ್…. – Laxmi News |
Home / new delhi / ಮಸೀದಿಯಲ್ಲಿ ಅಗಡಿಕೊಂಡಿದ್ದ ಪ್ರೊಫೆಸರ್ ಸೇರಿದಂತೆ 30 ಮಂದಿ ತಬ್ಲಿಘಿಗಳು ಅರೆಸ್ಟ್…. |
ಮಸೀದಿಯಲ್ಲಿ ಅಗಡಿಕೊಂಡಿದ್ದ ಪ್ರೊಫೆಸರ್ ಸೇರಿದಂತೆ 30 ಮಂದಿ ತಬ್ಲಿಘಿಗಳು ಅರೆಸ್ಟ್…. |
Laxminews 24x7 ಏಪ್ರಿಲ್ 21, 2020 new delhi, ಜಿಲ್ಲೆ, ರಾಜ್ಯ, ರಾಷ್ಟ್ರೀಯ Leave a comment 73 Views |
ಲಕ್ನೋ: ದೆಹಲಿಯಲ್ಲಿ ಕಳೆದ ತಿಂಗಳು ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿ ಮಸೀದಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಅಲಹಾಬಾದ್ ವಿಶ್ವವಿದ್ಯಾಲಯದ ಪ್ರೊಫೆಸರ್, 16 ವಿದೇಶಿಯರನ್ನು ಸೇರಿದಂತೆ ಒಟ್ಟು 30 ಮಂದಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. |
ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರೊಫೆಸರ್ ಮೊಹಮ್ಮದ್ ಶಾಹಿದ್, ಲಾಕ್ಡೌನ್ ಘೋಷಿಸಿದ ನಂತರವೂ ಪ್ರಯಾಗರಾಜ್ನ ಮಸೀದಿಯಲ್ಲಿ ತಮ್ಮ `ಅಕ್ರಮ' ವಾಸ್ತವ್ಯವನ್ನು ಏರ್ಪಡಿಸಿದ್ದರು. ಈ ಮೂಲಕ ವಿದೇಶಿಗರಿಗೆ ಉದ್ದೇಶಪೂರ್ವಕವಾಗಿ ಸಹಾಯ ಮಾಡಿದ್ದರು. ಹೀಗಾಗಿ ಅವರನ್ನು ಪ್ರಯಾಗರಾಜ್ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. |
ತಬ್ಲಿಘಿ ಕಾರ್ಯಕ್ರಮಕ್ಕೆ ಹಾಜರಾದ ಜಮಾತಿಗಳ ಉಪಸ್ಥಿತಿಯನ್ನು ಜಿಲ್ಲಾಡಳಿತಕ್ಕೆ ತಿಳಿಸಿಲ್ಲ ಎಂಬ ಆರೋಪ ಪ್ರೊ. ಮೊಹಮ್ಮದ್ ಶಾಹಿದ್ ಮೇಲಿದೆ. ಬಂಧಿತ 16 ವಿದೇಶಿ ಪ್ರಜೆಗಳಲ್ಲಿ ಒಂಬತ್ತು ಮಂದಿ ಥೈಲ್ಯಾಂಡ್ ಮೂಲದವರು ಮತ್ತು ಆರು ಜನರು ಇಂಡೋನೇಷ್ಯಾದವರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಅಷ್ಟೇ ಅಲ್ಲದೆ ಬಂಧಿತ ಆರೋಪಿಗಳಲ್ಲಿ ಕೇರಳ ಮತ್ತು ಪಶ್ಚಿಮ ಬಂಗಾಳದ ತಲಾ ಒಬ್ಬರಿದ್ದಾರೆ. |
ಪೊಲೀಸ್ ಮೂಲಗಳ ಪ್ರಕಾರ, ಎಲ್ಲಾ ಜಮಾತಿಗಳು ಶಹಗಂಜ್ನ ಅಬ್ದುಲ್ಲಾ ಮಸೀದಿ ಮತ್ತು ಪ್ರಯಾಗರಾಜ್ನ ಕರೇಲಿ ಪ್ರದೇಶದ ಹೇರಾ ಮಸೀದಿಯೊಳಗೆ ಅಡಗಿಕೊಂಡಿದ್ದರು. ಹೆಚ್ಚಿನ ತನಿಖೆಯಲ್ಲಿ ಎಲ್ಲಾ ವಿದೇಶಿಯರು, ವಿಶೇಷವಾಗಿ ಇಂಡೋನೇಷಿಯನ್ನರು ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಭೇಟಿ ನೀಡಿದ್ದರೂ ಧಾರ್ಮಿಕ ಉಪದೇಶದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. |
ಆರೋಪಿಗಳಿಗೆ ಪ್ರಯಾಗರಾಜ್ಗೆ ಭೇಟಿ ನೀಡಲು ಅನುಮತಿ ಇರಲಿಲ್ಲ. ಆದರೂ ಅವರು ನಗರಕ್ಕೆ ಭೇಟಿ ನೀಡಿದ್ದಷ್ಟೇ ಅಲ್ಲದೆ ಮಸೀದಿಯಲ್ಲಿ ಅಡಗಿಕೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. |
ಈ ಸಂಬಂಧ ಶಹಗಂಜ್ ಪೊಲೀಸ್ ಠಾಣೆಯಲ್ಲಿ ಎಲ್ಲಾ ವಿದೇಶಿಯರು ಮತ್ತು ಪ್ರೊಫೆಸರ್ ಶಾಹಿದ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈವರೆಗೆ ಪ್ರಯಾಗರಾಜ್ನಲ್ಲಿ ಕೇವಲ ಒಂದು ಕೋವಿಡ್-19 ಸೋಂಕಿತರಿದ್ದು, ಚಿಕಿತ್ಸೆಯ ನಂತರ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಶೇಕಡಾ 79ರಷ್ಟು ಕೊರೊನಾ ವೈರಸ್ ರೋಗಿಗಳು ತಬ್ಲಿಘಿ ಜಮಾತ್ಗೆ ಸಂಬಂಧಿಸಿದವರೇ ಆಗಿದ್ದಾರೆ. |
30ಅಡಿ ಎತ್ತರದಿಂದ ಮಕ್ಕಳನ್ನು ಕೆಳಗೆ ಬಿಸಾಡಿದ್ರೆ ಏನಾಗುತ್ತೆ ಇಲ್ಲಿ, ವಿಚಿತ್ರ ಆದ್ರೂ ಸತ್ಯ | Children Thrown From Top Of Temple Ritual In Karnataka, History And How To reach - Kannada Nativeplanet |
» 30ಅಡಿ ಎತ್ತರದಿಂದ ಮಕ್ಕಳನ್ನು ಕೆಳಗೆ ಬಿಸಾಡಿದ್ರೆ ಏನಾಗುತ್ತೆ ಇಲ್ಲಿ, ವಿಚಿತ್ರ ಆದ್ರೂ ಸತ್ಯ |
Published: Wednesday, September 12, 2018, 12:00 [IST] |
ಭಾರತ ದೇಶದಲ್ಲಿ ಜನರು ಅನೇಕ ನಂಬಿಕೆಯನ್ನು ಅನೇಕ ಸಂಪ್ರದಾಯಗಳನ್ನು, ಆಚರಣೆಗಳನ್ನು ಅನುಸರಿಸುತ್ತಾ ಬರುತ್ತಿದ್ದಾರೆ. ಈ ಆಚರಣೆಗಳನ್ನು ಮೂಢನಂಬಿಕೆಗಳು ಎನ್ನಬೇಕೋ ಅಥವಾ ಜನರ ಭಕ್ತಿ ಎನ್ನಬೇಕೋ ತಿಳಿಯುತ್ತಿಲ್ಲ. ಆ ಆಚರಣೆಗಳನ್ನು ಯಾರು ಪ್ರಾರಂಭಿಸಿದರು , ಯಾವಾಗ ಪ್ರಾರಂಭಿಸಿದರು ಎನ್ನುವುದು ಯಾರಿಗೂ ತಿಳಿದಿರೋದಿಲ್ಲ. ಒಟ್ಟಾರೆಯಾಗಿ ತಲತಲಾಂತರದಿಂದ ನಡೆದುಕೊಂಡು ಬಂದಿರುತ್ತದೆ. |
ವಿಚಿತ್ರ ಆಚರಣೆ |
ಅಂತಹ ವಿಚಿತ್ರ ಆಚರಣೆಗಳಲ್ಲಿ ಕರ್ನಾಕಟದ ಒಂದು ಆಚರಣೆಯೂ ಸೇರಿದೆ. ಕರ್ನಾಟಕದ ಬಾಗಲಕೋಟೆಯಲ್ಲಿ ಒಂದು ವಿಚಿತ್ರ ಆಚರಣೆಯನ್ನು ಜನರು ಅನುಸರಿಸುತ್ತಾ ಬಂದಿದ್ದಾರೆ. ಅದರ ಬಗ್ಗೆ ಕೇಳಿದರೆ ಆಶ್ಚರ್ಯವಾಗುವದಂತೂ ಖಂಡಿತ. |
ಇಲ್ಲಿ ಮಗುವಿನ ಆರೋಗ್ಯಕ್ಕಾಗಿ ಹಾಗೂ ಒಳಿತಿಗಾಗಿ ಮಗುವನ್ನು 30ಫೀಟ್ ಎತ್ತರದಿಂದ ಕೆಳಕ್ಕೆ ಎಸೆಯಲಾಗುತ್ತದೆ. ಪೂಜಾರಿ ಮಗುವನ್ನು ಕೆಳಕ್ಕೆ ಎಸೆಯುತ್ತಾರೆ. ಕೆಳಗೆ ನಿಂತವರು ಬೆಡ್ಶೀಟ್ ಬಿಡಿಸಿಟ್ಟುಕೊಂಡು ಮೇಲಿನಿಂದ ಕೆಳಕ್ಕೆ ಬೀಳುವ ಮಗುವನ್ನು ಹಿಡಿಯುತ್ತಾರೆ. |
ಎಲ್ಲಿ ನಡೆಯುತ್ತಿದೆ ಈ ಆಚರಣೆ |
ಇಂತಹ ವಿಚಿತ್ರ ಆಚರಣೆ ನಡೆಯುತ್ತಿರುವುದು ಬಾಗಲಕೋಟೆ ಜಿಲ್ಲೆಯಲ್ಲಿ. ಬಾಗಲಕೋಟೆ ಜಿಲ್ಲೆಯಿಂದ 30 ಕಿ.ಮೀ ದೂರದಲ್ಲಿರುವ ನಗರಾಲ ಹಳ್ಳಿಯಲ್ಲಿರುವ ದಿಂಗಂಬೇಶ್ವರ ದೇವಾಲಯದಲ್ಲಿ . |
ಜನರ ಪ್ರಕಾರ ಹೀಗೆ ಮಾಡುವುದರಿಂದ ಮಗುವಿಗೆ ಒಳಿತಾಗುತ್ತದೆ. ಹಾಗಾಗಿ ಪ್ರತಿವರ್ಷ ನೂರಾರು ಸಂಖ್ಯೆಯಲ್ಲಿ ಜನರು ತಮ್ಮ ಮಗುವಿನೊಂದಿಗೆ ಇಲ್ಲಿಗೆ ಆಗಮಿಸುತ್ತಾರೆ. |
ಮಕ್ಕಳು ಹೆದರುತ್ತವೆ |
ಎತ್ತರದಿಂದ ಕೆಳಕ್ಕೆ ಎಸೆಯುವಾಗ ಯಾರಿಗಾದರೂ ಭಯವಾಗಿಯೇ ಆಗುತ್ತೆ. ಇನ್ನು ಪುಟ್ಟ ಮಕ್ಕಳನ್ನು ಎತ್ತರದಿಂದ ಎಸೆಯುವಾಗ ಭಯಭೀತರಾಗದೇ ಇರಲಾರರು. ಹೆದರಿದ ಮಕ್ಕಳು ಕಿರುಚಾಡಲು ಪ್ರಾರಂಭಿಸುತ್ತವೆ. |
ಆಚರಣೆ ನಿಲ್ಲಿಸಲು ಪ್ರಯತ್ನ |
ಈ ಆಚರಣೆಯನ್ನು ನಿಲ್ಲಿಸಲು ಬಹಳಷ್ಟು ಪ್ರಯತ್ನಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನರು ತಮ್ಮ ನಂಬಿಕೆಯನ್ನು ಅಲ್ಲಗಳೆಯಲು ಸಿದ್ಧರಿಲ್ಲ. ಮಕ್ಕಳ ಹಕ್ಕು ಕಲ್ಯಾಣ ಇಲಾಖೆಯು ಈ ಆಚರಣೆಯನ್ನು ತಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದೆ. |
ಸಾಕಷ್ಟು ಮಂದಿ ಆಗನಿಸುತ್ತಾರೆ |
ಇಷ್ಟಕ್ಕೂ ಅಲ್ಲಿ ನಡೆಯುವ ಈ ವಿಚಿತ್ರ ಆಚರಣೆಯನ್ನು ನೋಡಲು ಸಾಕಷ್ಟು ಮಂದಿ ಅಲ್ಲಿ ನೆರೆದಿರುತ್ತಾರೆ. ಇಲ್ಲಿನ ಈ ಆಚರಣೆಯನ್ನು ನೋಡುವಾಗ ಒಮ್ಮೆಲೆ ಎದೆ ಝಲ್ ಎನ್ನುವುದಂತೂ ಸತ್ಯ. |
ಕಲಬುರಗಿ| ಸೆ. 17ರಂದು ಗೋ ಶಾಲಾ ಲೋಕಾರ್ಪಣೆ - HosadiganthaWeb |
ಕಲಬುರಗಿ| ಸೆ. 17ರಂದು ಗೋ ಶಾಲಾ ಲೋಕಾರ್ಪಣೆ |
ಕಲ್ಯಾಣ ಕರ್ಣಾಟಕ ಪ್ರಾಣಿ ದಯಾ ಹಾಗೂ ಗೋ ಸೇವಾ ಸಂಸ್ಥೆ ಆಶ್ರಯದಲ್ಲಿ ಸೆ.17ರಂದು ಮಧ್ಯಾಹ್ನ 2ಕ್ಕೆ ಅವರಾದ(ಬಿ) ಗ್ರಾಮದ ಗೋ ಶಾಲಾ ಆವರಣದಲ್ಲಿ ಕಲ್ಯಾಣ ಕರ್ನಾಟಕ ಗೋ ಶಾಲಾ ಲೋಕಾರ್ಪಣೆ ಸಮಾರಂಭ ಜರುಗಲಿದೆ ಎಂದು ಕಲ್ಯಾಣ ಕರ್ನಾಟಕ ಪ್ರಾಣಿ ದಯಾ ಹಾಗೂ ಗೋ ಸೇವಾ ಸಂಸ್ಥೆಯ ಅಧ್ಯಕ್ಷ ಸಾದಿಕ್ ಅಲಿ ದೇಶಮುಖ ಹಾಗೂ ಕಾರ್ಯದರ್ಶಿ ಮಂಜುನಾಥ ನಾಲವಾರಕರ್ ತಿಳಿಸಿದರು. |
ಶ್ರೀನಿವಾಸ ಸರಡಗಿಯ ಚಿಕ್ಕವೀರೇಶ್ವರ ಸಂಸ್ಥಾನದ ರೇವಣಸಿದ್ದ ಶಿವಾಚಾರ್ಯರು, ಕಂಬಳೇಶ್ವರ ಮಠದ ಸೋಮಶೇಖರ್ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಉದ್ಘಾಟಕರಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು. |
ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ, ಶಾಸಕ ಅಜಯಸಿಂಗ್, ಸಂಸದ ಡಾ.ಉಮೇಶ ಜಾಧವ, ಶಾಸಕ ಬಸವರಾಜ ಮತ್ತಿಮೂಡ್, ದತ್ತಾತ್ರೇಯ ಸಿ.ಪಾಟೀಲ್ ರೇವೂರ, ಎಂಎಲ್ಸಿ ಬಿ.ಜಿ.ಪಾಟೀಲ್, ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ್, ಮಾಜಿ ಎಂಎಲ್ಸಿ ಶಶೀಲ್... |
ಸಾಂಸ್ಕೃತಿಕ ಅನನ್ಯತೆ ಮತ್ತು ಹಲಗಲಿ ಬಂಡಾಯ : ೨೯. ಆಧುನಿಕ ಜಗತ್ತು ಮತ್ತು ತಳಸಮುದಾಯಗಳು – ಕಣಜ |
ಸಾಂಸ್ಕೃತಿಕ ಅನನ್ಯತೆ ಮತ್ತು ಹಲಗಲಿ ಬಂಡಾಯ : ೨೯. ಆಧುನಿಕ ಜಗತ್ತು ಮತ್ತು ತಳಸಮುದಾಯಗಳು |
Home/ಕನ್ನಡ/ಸಂಸ್ಕೃತಿ/ಇತಿಹಾಸ/ಸಾಂಸ್ಕೃತಿಕ ಅನನ್ಯತೆ ಮತ್ತು ಹಲಗಲಿ ಬಂಡಾಯ : ೨೯. ಆಧುನಿಕ ಜಗತ್ತು ಮತ್ತು ತಳಸಮುದಾಯಗಳು |
ಭಾರತಕ್ಕೆ ಸಂಬಂಧಿಸಿದಂತೆ ಆಧುನೀಕರಣ ಪರಿಕಲ್ಪನೆಯು ವಿಶಿಷ್ಟವಾದುದಾಗಿದೆ. ಸಾಮಾನ್ಯ ಅರ್ಥದಲ್ಲಿ 'ಆಧುನಿಕತೆ'ಯನ್ನು ಹೀಗೆ ಪರಿಭಾವಿಸಬಹುದು. ಹೊಸದರ ಕ್ಷಿಪ್ರ ಬದಲಾವಣೆ. ಇದು ಭೌತಿಕವಾಗಿ ಹಾಗೂ ಬೌದ್ದಿಕ ಎರಡು ಮಾದರಿಯ ಸ್ವರೂಪವನ್ನು ಒಳಗೊಂಡಿರುತ್ತದೆ. ಭೌತಿಕವು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ ಸ್ವರೂಪವನ್ನು ಹೊಂದಿ ದ್ದರೆ, ಬೌದ್ದಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ವರೂಪವನ್ನು ಪಡೆದಿರುತ... |
ಈ ಹಿನ್ನೆಲೆಯಲ್ಲಿ ಆಧುನಿಕತೆಯ ಪ್ರವೇಶವನ್ನು ಭಾರತದ ಸಂದರ್ಭಕ್ಕೆ ಅನ್ವಯಿಸಿ ಹೇಳಬಹುದಾದರೆ, ಈ ಮಾದರಿಗಳು ಎರಡು ಬಾರಿ ನಮ್ಮ ದೇಶವನ್ನು ಪ್ರವೇಶಿಸಿರುವುದನ್ನು ಗಮನಿಸಬಹುದು. ಮೊದಲನೆಯದು ವಸಾಹತು ಸಂದರ್ಭದ ಬ್ರಿಟೀಷರ ಆಳ್ವಿಕೆಯ ಮೂಲಕ. ಬ್ರಿಟಿಷರು ತಮ್ಮ ಆರ್ಥಿಕಾಭಿವೃದ್ದಿಗಾಗಿ ನಮ್ಮನ್ನು ಕೊಳ್ಳೆಹೊಡೆಯಲು ಪ್ರಯೋಗಿಸಿದ ಪ್ರಮುಖಾಸ್ತ್ರಗಳಲ್ಲಿ ಇದು ಒಂದಾಗಿತ್ತು. ನಂತರದಲ್ಲಿ ೧೯೯೨ರಲ್ಲಿ ಅನಿವ... |
೧೬-೧೭ನೇ ಶತಮಾನದಲ್ಲಿ ಯುರೋಪಿನಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿಯು, ಅದರ ಹಿಂದಿನ ದಿನಗಳಲ್ಲಿ ಆದ ವೈಜ್ಞಾನಿಕ ಸಂಶೋಧನೆಯ ಪ್ರತಿಫಲಿತವಾದ ಆಧುನಿಕತೆಯು ಪ್ರಪಂಚಕ್ಕೆ ಹೊಸದೊಂದು ಆಯಾಮವನ್ನು ತಂದುಕೊಟ್ಟವು. ಹೀಗೆ ಆರಂಭವಾದ ಕೈಗಾರಿಕಾ ಕ್ರಾಂತಿಯು ಯಥೇಚ್ಚವಾಗಿ ವಸ್ತುಗಳನ್ನು ಉತ್ಪಾದಿಸಿತೊಡಗಿದವು. ಈ ಉತ್ಪಾದನಾ ವಸ್ತುಗಳಿಗೆ ಮಾರುಕಟ್ಟೆಯ ಅವಶ್ಯಕತೆಯಿತ್ತು, ಹಾಗಾಗಿ ಮಾರುಕಟ್ಟೆಯಾಗಿಯೂ, ಬ್ರಿ... |
ಇನ್ನು ಎರಡನೇ ಹಂತದ ಆಧುನಿಕತೆಯ ರೂಪವಾದ 'ಜಾಗತೀಕರಣ'ವಂತೂ ಭಾರತ ದೇಶವನ್ನು ಅದರಲ್ಲೂ ತಳಸಮುದಾಯಗಳಲ್ಲಿ ಬಹು ಅಂತರವನ್ನೇ ಸೃಷ್ಟಿ ಮಾಡಿತು. ತಳಸಮುದಾಯಗಳು ಹಾಗೂ ಹೀಗೋ ಪಾರಂಪರಿಕವಾಗಿ ಉಳಿಸಿಕೊಂಡು ಬಂದಿರುವಂತಹ ಬುಟ್ಟಿಹೆಣೆಯುವಿಕೆ, ಕುಂಬಾರಿಕೆ, ನೇಕಾರಿಕೆ ಇತ್ಯಾದಿ ಉತ್ಪಾದನಾ ವಸ್ತುಗಳಿಗೆ ಪರ್ಯಾಯ ಉತ್ಪಾದನಾ ವಸ್ತುಗಳ (ಪ್ಲಾಸ್ಟಿಕ್)ನ್ನು ತಯಾರಿಸಲಾರಂಭಿಸಿತು. ಈ ಸಮುದಾಯಗಳಿಗೆ ಈ ಸಂದರ್ಭದ... |
ಆದರೆ ಆಧುನಿಕತೆಯಿಂದಾಗಿ ಭಾರತದಲ್ಲಿನ ತಳಸಮುದಾಯಗಳಿಗೆ ಪ್ರಯೋಜನವಾಗಿಲ್ಲ ವೆಂತಲ್ಲ. ಬೌದ್ದಿಕವಾದ ಅನೇಕ ಪ್ರಯೋಜನಗಳು ಆಗಿವೆ. ಮೊದಲನೆಯದಾಗಿ ಜಾತಿಪದ್ಧತಿ ಯಂತಹ ಕ್ರೂರ ಅಮಾನುಷ ಪದ್ಧತಿಯ ಪರಿಹಾರ ಕ್ರಮಗಳು. ಎರಡನೆಯದಾಗಿ ಬ್ರಿಟೀಷರ ಆಳ್ವಿಕೆಯಿಂದಾಗಿ 'ಶಿಕ್ಷಣ' ಪಡೆಯುವಂತಾದದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸಮಾನತೆ ಕಾಯ್ದುಕೊಂಡಿರುವುದು ಇತ್ಯಾದಿಗಳು. ಇವು ನಿಜವಾಗಿಯೂ ತಳಸಮುದಾಯಗಳಿಗೆ ಓರ್ವ ... |
ಇನ್ನು ಜಾಗತೀಕರಣದ ಪ್ರತಿಫಲಗಳಾದ ಸಿನಿಮಾ, ಟಿ.ವಿ.ಯಂತಹ ಮಾದ್ಯಮಗಳಿಗೆ ಪ್ರಚೋದಿತವಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ತಳಸಮುದಾಯಗಳೆ ಕಾರಣ. ಈಗಾಗಲೇ ಪಾಶ್ಚಾತ್ಯ ಸಂಸ್ಕೃತಿಯನ್ನು ಸಾಮಾನ್ಯವಾಗಿ ಅನುಕರಿಸಿ, ಅದರ ಒಳಿತು ಕೆಡುಗಳನ್ನು ಸಾಧಾರಣವಾಗಿ ಅರ್ಥಮಾಡಿಕೊಂಡಿರುವ ಮೇಲ್ವರ್ಗ ಒಂದು ಅಂತರವನ್ನು ಕಾಯ್ದುಕೊಂಡಿದೆ. ಆದರೆ ತಳಸಮುದಾಯಗಳು ಇಂತಹ ಅತಿಯಾದ Fashion ನಿಂದಾಗಿ ದುಶ್ಚಟ ಮ... |
ಸೋಮವಾರ, 30 ಆಗಸ್ಟ್ 2021 (20:34 IST) |
ಮಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶ ಅಭಿವೃದ್ಧಿಗೆ ಪೂರಕವಾಗಿದ್ದರೂ ಇದರ ಬಗ್ಗೆ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಕಿವಿಗೊಡುವ ಅಗತ್ಯ. ಸರ್ಕಾರಿ ಕಲಿಕೆಯಲ್ಲಿ ಸುಧಾರಣೆ ತರುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. |
ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಹೇಳಿದರು. |
ಇದೇ ಸಂದರ್ಭದಲ್ಲಿ ಮೂಡಬಿದರೆಯ ಬನ್ನಡಕ್ಕೆ ಸ್ಥಾಪಿಸಿದ ವಿಶ್ವವಿದ್ಯಾನಿಲಯದ ಪ್ರಥಮ ದರ್ಜೆ ಘಟಕ ಕಾಲೇಜನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. |
ವರ್ತಮಾನ ಭಾರತದ ಅಗತ್ಯವೇನು? ನಿರಂತರವಾಗಿ ದೇಶ ಎದುರಿಸುತ್ತಿರುವ ಸವಾಲುಗಳೇನು? ಪಡೆಯಲು ಅರಿತು ಸಮಾಜ ಮತ್ತು ರಾಷ್ಟ್ರೀಯ ಸುಧಾರಣೆಯ ಈ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಆದರೆ ನಂತರದ ಇದರೊಂದಿಗೆ ರಾಜಕೀಯ ನಡೆಸುವವರು ಸಚಿವರು ದೂರಿದರು. |
ಹೊಸ ಶಿಕ್ಷಣ ನೀತಿ ವಿದ್ಯಾರ್ಥಿ ಸ್ನೇಹಿ ಹಾಗೂ ವಿದ್ಯಾರ್ಥಿ ಕೇಂದ್ರಿತವಾಗಿದೆ. ಒಂದು ಮಾತಿನಲ್ಲಿ ಹೇಳುವುದಾದರೆ ಭವಿಷ್ಯದ ಭಾರತದ ಎಲ್ಲ ಅಗತ್ಯಗಳನ್ನು ಪೂರೈಸುವ ಪರಿಣಾಮಕಾರಿ ಅಂಶಗಳೆಲ್ಲವೂ ಇದರಲ್ಲೇ ಅಡಕವಾಗಿದೆ ಎಂದು ಅವರು ನುಡಿದರು. |
ಕಳೆದ ಅಗಸ್ಟ್ ೧೫ ರಂದು ನಾವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ದೇಶದ ಶತಮಾನೋತ್ಸವದ ಸಂದರ್ಭದಲ್ಲಿ ವಿಶ್ವಕ್ಕೆ ವಿಶ್ವ ಗುರುವಾಗಬೇಕಾದರೆ ಈ ನೀತಿಯನ್ನು ಆಮೂಲಾಗ್ರವಾಗಿ ಜಾರಿಗೊಳಿಸಬೇಕು ಎಂದು ಹೇಳಲಾಗಿದೆ. |
ಪಠ್ಯದಲ್ಲಿ ಪಠ್ಯೇತರ ವಿಷಯ: |
ಮೊದಲು ಪಠ್ಯೇತರ ಚಟುವಟಿಕೆ ಇತ್ತು. ಆದರೆ ಈಗ ಅದು ಕೂಡ ಪಠ್ಯದ ಒಂದು ಭಾಗ. ಅಲ್ಲದೆ, ಈವರೆಗೆ ಸಮಾಜದ ಅನೇಕ ಸಮಸ್ಯೆಗಳು ಕಲಿಕೆಯ ಒಂದು ಭಾಗ ಆಗಿರಲಿಲ್ಲ. ಪುಸ್ತಕದಲ್ಲಿ ಇರುವುದನ್ನು ಮಾತ್ರ ಓದುವ ಕೆಲಸ ಆಗುತ್ತಿತ್ತು. ಅದರ ಬದಲಿಗೆ ಕುಶಲತೆ ಕಲಿಸುವ ಕೆಲಸವೂ ಈಗ ಆಗಲಿದೆ. ವಿದ್ಯಾರ್ಥಿ ತನಗೆ ಇಷ್ಟವಾಗುವ ವಿಷಯವನ್ನು ಮುಕ್ತವಾಗಿ ಕಲಿಯುವ ಅವಕಾಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ ಎಂದು ಸಚಿವರು ... |
ಈವರಗೂ ಇರುವ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಫ್ಲೆಕ್ಸಿಬಿಲಿಟಿ ಇರಲಿಲ್ಲ. ಈಗ ಬಹು ಆಯ್ಕೆಯ ಹಾಗೂ ಬಹು ಶಿಸ್ತೀಯ ಕಲಿಕೆಗೆ ಮುಕ್ತ ಅವಕಾಶ ಇದೆ. ತಂತ್ರಜ್ಞಾನ ಮೂಲಕ ಎಲ್ಲಿಂದ ಬೇಕಾದರೂ ಕಲಿಯಬಹುದು. ಮಾಹಿತಿಯನ್ನು ಜ್ಞಾನ ವಾಗಿ ರೂಪಿಸುವ ಕೆಲಸ ಆಗಬೇಕು, ಅದು ಈಗ ಆಗುತ್ತಿದೆ ಎಂದು ಅವರು ಹೇಳಿದರು. |
ಹೊಸ ಶಿಕ್ಷಣ ನೀತಿ ಅನುಸಾರ ವಾರ್ಷಿಕ ಮೌಲ್ಯ ಮಾಪನದ ಬದಲಿಗೆ ನಿತ್ಯದ ಕಲಿಕೆ-ಬೋಧನೆಯ ಬಳಿಕ ಮೌಲ್ಯ ಮಾಪನವೂ ಇರುತ್ತದೆ. ಈ ಮೂಲಕ ಕಲಿಕೆಯ ಗುಣಮಟ್ಟ ವೃದ್ಧಿಯಾಗುವುದರ ಜತೆಗೆ ಪ್ರತಿ ವಿದ್ಯಾರ್ಥಿಯ ಸಾಮರ್ಥವೂ ಹೆಚ್ಚಾಗಲಿದೆ. ಇದರಿಂದ ಜಾಗತಿಕವಾಗಿ ನಮ್ಮ ವಿದ್ಯಾರ್ಥಿಗಳು ಸ್ಪರ್ಧೆ ನಡೆಸಲು ಸುಲಭ ಸಾಧ್ಯವಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ನುಡಿದರು. |
ಇದೇ ವೇಳೆ ಶೈಕ್ಷಣಿಕ ಸಂಸ್ಥೆಗಳಿಗೂ ಶಕ್ತಿ ತುಂಬಲಾಗುವುದು. ಆಡಳಿತದಲ್ಲೂ ಸ್ವಾಯತ್ತತೆ ನೀಡಲಾಗುವುದು ಹಾಗೂ ಪ್ರತಿ ಸಂಸ್ಥೆಯೂ ಪದವಿ ಕೊಡುವ ಸಂಸ್ಥೆಗಳಾಗುತ್ತವೆ. ಅದರಲ್ಲಿ ಪ್ರತ್ಯೇಕ ಮಂಡಳಿ ಇರುತ್ತದೆ. ಉದಾಹರಣೆಗೆ ನಿಟ್ಟೆ ಸಂಸ್ಥೆ ಸ್ವಾಯತ್ತತೆ ಸಿಕ್ಕ ನಂತರ ಎಷ್ಟು ಎತ್ತರಕ್ಕೆ ಬೆಳೆದಿದೆ ಎಂಬ ಉದಾಹರಣೆ ನಮ್ಮ ಮುಂದೆಯೇ ಇದೆ ಎಂದು ಅವರು ವಿವರಿಸಿದರು. |
ಮುಂಚೂಣಿಯಲ್ಲಿರಲಿ ದಕ್ಷಿಣ ಕನ್ನಡ: |
ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಕಲಿಕೆಗೆ ಒತ್ತು ಕೊಟ್ಟ ಜಿಲ್ಲೆ ಇದು. ಹೀಗಾಗಿ ಎಲ್ಲರಿಗೂ ಮಾದರಿಯಾಗಿ ಇರಬೇಕು ಎನ್ನುವುದು ನಮ್ಮೆಲ್ಲರ ಅಪೇಕ್ಷೆ ಎಂದ ಸಚಿವರು, ಶಿಕ್ಷಣ ನೀತಿಯ ಜಾರಿ ಜಾರಿಯಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಕರೆ ನೀಡಿದರು. |
ಮೊದಲು ಏನು ಬದಲಾಗಬೇಕು ಎಂಬ ಬಗ್ಗೆ ಮೊದಲಿನಿಂದಲೂ ಚರ್ಚೆ ಆಗುತ್ತಿರುತ್ತದೆ. ಶಿಕ್ಷಣದಿಂದಲೇ ಬದಲಾವಣೆ ಎಂಬುದು ಸರ್ವರೂ ಒಪ್ಪುವ ಸತ್ಯ. ಕಾಲಕಾಲಕ್ಕೆ ಬದಲಾವಣೆ ಆಗಿರಲಿಲ್ಲ. ಈಗ ಸಮಯ ಬಂದಿದೆ. ನಮ್ಮ ಸ್ಪರ್ಧೆ ಏನಿದ್ದರೂ ಅಕ್ಕಪಕ್ಕದ ರಾಜ್ಯಗಳ ಜತೆ ಅಲ್ಲ. ಬದಲಿಗೆ ವಿಶ್ವ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕಾಗಿದೆ ಎಂದರಲ್ಲದೆ, ಶಿಕ್ಷಣ ನೀತಿ ಬದಲಾಗದ ಕಾರಣ ಭಾರತ ಭಾರೀ ನಷ್ಟ ಅನುಭವಿಸಿದೆ ಎಂದರು ಅವರ... |
ಹಳ್ಳಿಯಿಂದ ದೇಹಕ್ಕೆ ಮೂರುವರೆ ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಹೊಸ ನೀತಿ ಜಾರಿಗೊಳಿಸಲಾಗಿದೆ. ಇದನ್ಜು ಜಾರಿ ಮಾಡಲು 15 ವರ್ಷ ಸಮಯವಿದೆ. ಇದನ್ಜು ಜಾರಿ ಮಾಡಲು ಸಂಪುಟ ಸಭೆ ಕೂಡ ಒಪ್ಪಿಗೆ ಸಿಕ್ಕಿದೆ. ಇದನ್ನು ಹತ್ತು ವರ್ಷದಲ್ಲಿ ಈ ಎಲ್ಲ ಸಲಹೆಗಳನ್ನು ಅನುಷ್ಠಾನ ಮಾಡುವ ಉದ್ದೇಶವಿದೆ. ಅನುಷ್ಠಾನಕ್ಕೆ ಪೂರಕವಾಗಿ ಶೈಕ್ಷಣಿಕ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇದಕ್ಕೆ ಬೇಕಾಗುವ ಜಾಗೃತಿ ಮತ... |
ಸಚಿವರಿಂದ ಲೋಕಾರ್ಪಣೆಗೊಂಡಿದ್ದು ಮಂಗಳೂರು ವಿವಿಯ ಆರನೇ ಘಟಕ ಕಾಲೇಜು ಆಗಿದೆ. ಇದೇ ವೇಳೆ ಪ್ರಾಣಿಶಾಸ್ತ್ರ ವಿಭಾಗ ತಂತ್ರಜ್ಞಾನವನ್ನು ಆರಂಭಿಸಲಾಗಿದೆ |
ಗೊಣಗೋದು ಬಿಟ್ಟು ನಾವೂ ಏನಾದರೂ ಮಾಡಬಹುದು! – ಓ ನನ್ನ ಚೇತನಾ |
ಗೊಣಗೋದು ಬಿಟ್ಟು ನಾವೂ ಏನಾದರೂ ಮಾಡಬಹುದು! |
ಇದು ಬಹಳ ತಿಂಗಳುಗಳ ಹಿಂದಿನ ಕಥೆ. ಒಂದಷ್ಟು ಜನ 'ಐ ಯಾಮ್ ಲೀವಿಂಗ್ ಬ್ಯಾಂಗಲೋರ್' ಅಂತ ಕಮ್ಯುನಿಟಿಗಳನ್ನ ಮಾಡಿಕೊಂಡು ನಮ್ಮೂರಿನ (!?) ಬಗ್ಗೆ ಕಂಪ್ಲೇಂಟುಗಳನ್ನು ಹೇಳುತ್ತ, ಇಲ್ಲಿನ ಜನಗಳನ್ನು ಹೀಯಾಳಿಸುತ್ತ ದೊಡ್ಡ ದೊಡ್ಡ ಪೋಸ್ಟರುಗಳನ್ನು ಹಾಕಿಕೊಂಡು ಗುಲ್ಲು ಮಾಡಿದ್ದರು. |
ಹಾಗೆ ಬೆನ್ನು ತಿರುಗಿಸಿ ನಿಂತವರ ಕಡೆ ಕ್ಯಾರೇ ಅನ್ನದೆ ಜನ ಜೀವನ ನಡೆದುಕೊಂಡು ಹೋಯ್ತು ನೋಡಿ, ಎಲ್ಲವೂ ತಣ್ಣಗಾಯ್ತು. ಬೆಂಗಳೂರಂಥಾ ಬೆಂಗಳೂರಲ್ಲೇ ಇವರಿಷ್ಟು ಕ್ಯಾತೆ ತೆಗೀತಾರೆನ್ನುವುದಾದರ ಜಗತ್ತಿನ ಯಾವ ಭಾಗದಲ್ಲಿ ಜೀವನ ಮಾಡಬಲ್ಲರು ಹೇಳಿ!? |
ಮ್… ನಾವೂ(ನೂ) ಆಗೀಗ ಬೆಂಗಳೂರಿನ ಕೆಲವು ಕಲ್ಯಾಣಗುಣಗಳ ಬಗ್ಗೆ ಮುನಿದು ಗೊಣಗಾಡೋದಿದೆ. ಆದರೆ ಅದು ಯಾವತ್ತೂ ಬೆಂಗಳೂರಿನೆಡೆಗಿನ ದ್ವೇಷವಾಗಿದ್ದಿಲ್ಲ. ನನ್ನೂರು ಅಂದರೆ ಹುಚ್ಚು ವ್ಯಾಮೋಹ ನಿಜ. ಹಾಗಂತ ಬದುಕು ಕಟ್ಟಿಕೊಟ್ಟ ಊರಿನೆಡೆಗೆ ತಾತ್ಸಾರವೇನೂ ಇಲ್ಲ. ಇನ್ನೂ ಕೆಲವು ಸಾರ್ತಿ, ಶುದ್ಧ ಬೆಂಗಳೂರಿಗರ ಪಾಲಿಗೆ ನಾವು ಏನೂ ಉಳಿಸುತ್ತಿಲ್ಲವಲ್ಲ ಅನ್ನೂ ಗಿಲ್ಟು ಕಾಡೊದೂ ಇದೆ. |
ಸಧ್ಯಕ್ಕೆ ನನಗೆ ಬೆಂಗಳೂರಿನ ಸಮಸ್ಯೆ ಅಂತ ಕಾಣ್ತಿರೋದು ಇಲ್ಲಿನ ಟ್ರಾಫಿಕ್ಕು. ಅರ್ಧ ಆಯುಷ್ಯವೇ ರಸ್ತೆಗಳಲ್ಲಿ ಕಳೆದು ಹೋಗುತ್ತೇನೋ ಅನುವಷ್ಟು ಕಿಕ್ಕಿರಿದ ವಾಹನ ದಟ್ಟಣೆ. ಬರಬರುತ್ತ ವಾಹನ ಮತ್ತು ಹೊಗೆಯಿಂದಲೇ ಬೆಂಗಳೂರು ಸ್ಫೋಟಗೊಳ್ಳುತ್ತದೆ ಅನ್ನುವ ಆತಂಕ ಕೆಲವರದಾದರೆ, ಇದಕ್ಕೆ ಪರಿಹಾರವೇ ಇಲ್ಲ ಅನ್ನುವ ಹತಾಶೆ ಕೆಲವರದು. |
ಹಾಗಂತ, ಕೈಲಾಗದು ಅಂದುಕೊಂಡು ಕುಳಿತರೆ ಕೆಲಸ ನಡೆಯುತ್ತದೆಯೇ? |
ಟ್ರಾಫಿಕ್ ನಿಯಂತ್ರಣಕ್ಕೆ ಸರ್ಕಾರಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲವೆ? ಕೈಗೊಂಡಿದ್ದರೂ ಅವು ಎಷ್ಟರ ಮಟ್ಟಿಗೆ ಸಾಕಾರವಾಗುವಂಥವು? ಇದರಲ್ಲಿ ನಾವು ಹೇಗೆ ಸಹಭಾಗಿಗಳಾಗಬಹುದು? ಇವೆಲ್ಲ ತಿಳಿಯದೆ ಹೋದರೆ ನಮಗೆ ಗೊಣಗಾಡುವ ಅಧಿಕಾರವೂ ಇರುವುದಿಲ್ಲ. |
ಅದಕ್ಕೆಂದೇ ಸಮಾಜಮುಖಿ ಆಸಕ್ತಿಯ ಗೆಳೆಯ ರಮೇಶ್ ಬಿ.ವಿ. ಒಂದು ಮೇಲ್ ಕಳಿಸಿಕೊಟ್ಟಿದ್ದರು. ಅದನ್ನು ಹಾಹಾಗೇ ನಿಮ್ಮೆದುರು ಇಡುತ್ತಿದ್ದೇನೆ. ನಾವೆಲ್ಲರೂ ಜೊತೆಯಾಗಿ ನಡೆದಾಗ ಮಾತ್ರ ಪ್ರಗತಿ ಸಾಧ್ಯ ಅಲ್ಲವೆ? ನಿಮ್ಮೆಲ್ಲರ ಸಹಕಾರ ಕೋರುತ್ತಾ… |
ಓವರ್ ಟು ಆರ್.ಕೆ.ಮಿಶ್ರಾ… |
(ಟಿ.ಓ.ಐ. ಲೀಡ್ ಇಂಡಿಯಾ ವಿಜೇತರು) |
Subsets and Splits
No community queries yet
The top public SQL queries from the community will appear here once available.