text stringlengths 0 61.5k |
|---|
ಐಐಎಚ್ಆರ್ನ ವಿಶಾಲವಾದ ಬಯಲಿನಲ್ಲಿ ಒಂದೆಡೆ ಹೂದೋಟಗಳು, ಮತ್ತೊಂದೆಡೆ ತರಕಾರಿ ಗಿಡಗಳು, ಪ್ರಾತ್ಯಕ್ಷಿಕೆ ತಾಕುಗಳು ತೆರೆದುಕೊಂಡಿವೆ. ರೈತರಿಗೆ ತೋಟಗಾರಿಕೆ ಬೆಳೆಗಳ ತಿಳಿವಳಿಕೆ ಮತ್ತು ಮಾಹಿತಿ ಒದಗಿಸಲು ಸಕಲ ಸಿದ್ಧತೆಗಳನ್ನೂ ಇಲ್ಲಿನ ಆಡಳಿತ ಮಾಡಿಕೊಂಡಿದೆ. |
ಬಸ್ಗಳಲ್ಲಿ ತಂಡೋಪತಂಡವಾಗಿ ಬಂದಿಳಿದ ರೈತರು, ರಣಬಿಸಿಲಿನ ನಡುವೆಯೂ ತಾಕುಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಇಡೀ ಆವರಣ ಸುತ್ತಾಡಿ ಬಂದ ನಂತರ ರೈತರಿಗೆ ಹೊಸ ಹೊಸ ಕೃಷಿ ಸಲಕರಣೆಗಳ ಪರಿಚಯವನ್ನೂ ಮಾಡಿ |
ಕೊಡಲಾಯಿತು. |
ಬಿತ್ತನೆ ಬೀಜ, ರಸಗೊಬ್ಬರ, ಯಂತ್ರೋಪಕರಣ, ಹನಿ ನೀರಾವರಿ ಪದ್ಧತಿಯ ಉಪಕರಗಳ ಸಂತೆಯೇ ಇಲ್ಲಿ ನೆರೆದಿದೆ. ಇವುಗಳ ಮಾಹಿತಿ ಪಡೆದುಕೊಂಡ ನಂತರವೂ ಅನುಮಾನಗಳಿದ್ದರೆ ಕೃಷಿ ತಜ್ಞರೊಂದಿಗೆ ಸಂವಾದ ನಡೆಸಲು ರೈತರಿಗೆ ಅವಕಾಶ ಕಲ್ಪಿಸಲಾಗಿತ್ತು. ತಜ್ಞರು ದಿನವಿಡೀ ಒಬ್ಬೊಬ್ಬರೇ ರೈತರ ಸಮಸ್ಯೆಗಳನ್ನೇ ಪ್ರತ್ಯೇಕವಾಗಿ ಆಲಿಸಿ ಪರಿಹರಿಸುವ ಪ್ರಯತ್ನ ಮಾಡಿದರು. ಗುರುವಾರ 12,500 ಜನ ನೋಂದಣಿ ಮಾಡಿಸಿಕೊಂಡಿದ್ದು... |
ಹಲಸು- ಎರಡೇ ವರ್ಷಕ್ಕೆ ಫಸಲು: ಆಳೆತ್ತರ ಬೆಳೆಯುವಷ್ಟರಲ್ಲೇ ಫಸಲು ಬಿಡುವ ನಿನ್ನಿಕಲ್ಲು ತಳಿಯ ಹಲಸಿನ ಸಸಿಗಳನ್ನು ರೈತರು ಖರೀದಿಸಿದರು. |
ಪುತ್ತೂರಿನ ಅಳಕೆಮಜಲು ಸಮೀಪದ ನಿನ್ನಿಕಲ್ಲು ನರ್ಸರಿಯಲ್ಲಿ ಬೆಳೆದಿರುವ ಈ ತಳಿಯ ಸಸಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಎರಡೇ ವರ್ಷಗಳಲ್ಲಿ ಫಸಲು ಬಿಟ್ಟಿರುವ ಮರಗಳ ಚಿತ್ರಗಳನ್ನು ಕಂಡು ಬೆರಗಾದ ರೈತರು, ಸಸಿಗಳನ್ನು ಖರೀದಿಸಿದರು. |
'ಅತ್ಯಂತ ಬೇಗ ಫಸಲು ನೀಡುವ ತಳಿ ಇದಾಗಿದೆ. ನಮ್ಮದೇ ನರ್ಸರಿಯಲ್ಲಿ ಅಭಿವೃದ್ಧಿಪಡಿಸಿ ರೈತರಿಗೆ ಮಾರಲಾಗುತ್ತಿದೆ' ಎಂದು ಜಾಕ್ ಅನಿಲ್ ತಿಳಿಸಿದರು. |
ಕೆ.ಜಿ ತೂಗುವ ಸೀಬೆ, ಸೀತಾಫಲ: 300 ಗ್ರಾಂನಿಂದ ಒಂದು ಕೆ.ಜಿ ತೂಗುವ ಸೀಬೆ (ಪೇರಲೆ ಹಣ್ಣು) ಮತ್ತು ಸೀತಾಫಲ ಹಣ್ಣುಗಳು ರೈತರನ್ನು ಆಕರ್ಷಿಸಿದವು. ರಾಯಪುರದ ವಿಎನ್ಆರ್ ಕಂಪನಿ ಈ ತಳಿಯನ್ನು ಅಭಿವೃದ್ಧಿಪಡಿಸಿದೆ. ಕಡಿಮೆ ಬೀಜದ ಸೀಬೆ ಹಣ್ಣಿನ ತಳಿಯ ಸಸಿಗಳನ್ನು ತಲಾ ₹170ಕ್ಕೆ ಮಾರಾಟ ಮಾಡಲಾಯಿತು. ಕಡಿಮೆ ನೀರಾವರಿ ಮತ್ತು ಎಲ್ಲಾ ಮಣ್ಣಿನಲ್ಲೂ ಬೆಳೆಬಹುದಾದ ತಳಿ ಇದಾಗಿದೆ. ಶೇ 60ರಿಂದ 65ರಷ್ಟು... |
ಅಡಕೆ ಐಸ್ಕ್ರೀಂ: ಪುತ್ತೂರಿನ ಯುವಕನೊಬ್ಬ ಅಡಕೆಯನ್ನು ವಿವಿಧ ಹಂತದಲ್ಲಿ ಸಂಸ್ಕರಿಸಿ ಐಸ್ಕ್ರೀಂ ತಯಾರಿಸಿದ್ದು, ಮೇಳದಲ್ಲಿ ಜನರನ್ನು ವಿಶೇಷವಾಗಿ ಆಕರ್ಷಿಸಿತು. |
'ಒಂದು ಕೆ.ಜಿ ಅಡಕೆಯಲ್ಲಿ 20 ಲೀಟರ್ ಐಸ್ಕ್ರೀಮ್ ತಯಾರಿಸಬಹುದು. ಹಳದಿ ರೋಗ, ಬೇರು ಹುಳು ರೋಗದಿಂದ ಅಡಕೆ ಬೆಳೆ ಕುಸಿಯತೊಡಗಿದೆ. ಸರ್ಕಾರದ ಸಹಕಾರ ದೊರೆತರೆ ಮಾರುಕಟ್ಟೆ ಹಿಗ್ಗಿಸಬಹುದು' ಎಂದು ಐಸ್ಕ್ರೀಮ್ ತಯಾರಿಸಿರುವ ಸುಹಾಸ್ ಅವರು ಹೇಳಿದರು. |
ಒಂದು ಯಂತ್ರ: 5 ಉಪಯೋಗ |
ರೈತರು ಐದು ರೀತಿಯಲ್ಲಿ ಉಪಯೋಗ ಪಡೆದುಕೊಳ್ಳುವ ಟ್ರೈಲರ್ ಮಾದರಿಯ ನಾಲ್ಕು ಚಕ್ರದ ವಾಹನವು ನೆರೆದಿದ್ದ ರೈತರನ್ನು ಆಕರ್ಷಿಸಿತು. |
ವರ್ಷಾ ಕೃಷಿ ಉಪಕರಣಗಳ ಕಂಪನಿ ತಯಾರಿಸಿರುವ ಈ ವಾಹನದಲ್ಲಿ ಉಳುಮೆ ಮಾಡಲು ಮೂರು ಡಿಸ್ಕ್ಗಳ ಕಲ್ಟಿವೇಟರ್, ಬಿತ್ತನೆಗೆ ಅವಕಾಶ ಆಗವಂತೆ ಪೈಪ್ಗಳ ಅಳವಡಿಕೆ, ಕಳೆ ತೆಗೆಯಲು ರೋಟೋವೇಟರ್, ಔಷಧ ಸಿಂಪರಣೆಗೆ ಪಂಪ್, ಹಳ್ಳ ಅಥವಾ ಸಣ್ಣ ಬಾವಿಯಿಂದ ನೀರು ಮೇಲೆತ್ತುವ ಅವಕಾಶವೂ ಇದರಲ್ಲಿ ಇದೆ. |
₹78 ಸಾವಿರ ಮೊತ್ತದ ಈ ಯಂತ್ರಕ್ಕೆ ಸರ್ಕಾರದಿಂದ ₹33,200 ಸಹಾಯಧನವೂ ಇದೆ. ರೈತರು ₹44,800 ಪಾವತಿಸಿ ಖರೀದಿಸಬಹುದು. ಸಹಾಯಧನ ಪಡೆಯಲು ಬಯಸುವ ಕೃಷಿಕರು ರೈತ ಸಂಪರ್ಕ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಕಂಪನಿ ಸಿಬ್ಬಂದಿ ವಿವರಿಸಿದರು. |
ಎಲ್ಲವೂ ಸೌರಚಾಲಿತ |
ಹೊಲಿಗೆ ಯಂತ್ರ, ಮಡಿಕೆ ಮಾಡುವ ಯಂತ್ರ, ಭತ್ತದ ಮಿಲ್, ಹಾಲು ಕರೆಯುವ ಯಂತ್ರ.. ಎಲ್ಲವೂ ಇಲ್ಲಿ ಸೌರ ಚಾಲಿತ. |
ಸೆಲ್ಕೊ ಸೋಲಾರ್ ಲೈಟ್ ಕಂಪನಿ ಸೌರಶಕ್ತಿಯ ಮೂಲಕವೇ ಎಲ್ಲಾ ಯಂತ್ರಗಳನ್ನು ಚಾಲನೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿ ರೈತರಿಗೆ ಪರಿಚಯಿಸಿತು. ವಿದ್ಯುತ್ ಕೊರತೆ, ಕೆಲಸಗಾರರ ಕೊರತೆ ನಡುವೆಯೂ ಕುಲಕಸುಬು ಮುಂದುವರಿಸಲು ಈ ಸರಳ ತಂತ್ರಜ್ಞಾನ ಅನುಕೂಲವಾಗಲಿದೆ ಎಂದು ಸಂಸ್ಥೆ ಅಧಿಕಾರಿಗಳು ಹೇಳಿದರು. |
ಎಂಜಿನಿಯರ್ ಕೈ ಹಿಡಿದ ಹೈನುಗಾರಿಕೆ |
ಜೀವರಾಜ್ ಸಂಧಾನ– ಧರಣಿ ಅಂತ್ಯ |
ಅಕಾಡೆಮಿಗೆ ಹೆಚ್ಚಿನ ಅನುದಾನಕ್ಕೆ ಮನವಿ |
ಮಹಿಳಾ, ಮಕ್ಕಳ ಆಸ್ಪತ್ರೆಯಲ್ಲಿ ಉಚಿತ ಹೈಟೆಕ್ ಚಿಕಿತ್ಸೆ |
ಕಲಬುರ್ಗಿ ವಲಯ: ಕಡ್ಲೇವಾಡ ಬಣಕ್ಕೆ ಬಹುಮತ |
'ತನಿಖೆಯಲ್ಲಿ ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಬಹಿರಂಗ' |
'); $('#div-gpt-ad-703575-2').append(' |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(funct... |
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-703575').addClass('inartprocessed'); } else $('#in-article-703575').hide(); } else { // Text ad googletag.cmd.push(function() { googletag.display('gpt-text-300x20-ad-703575'); }); g... |
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-703575 .field-name-body .field-items div.field-item > p'); if(x1 != null && x1.length != 0) { $('#node-703575 .field-name-body... |
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-703575 .field-name-body .field-items div.field-item > p:eq(2)').after(' |
'); googletag.cmd.push(function() { googletag.display('in-article-mob-3rd-703575'); }); } else { $('#in-article-mob-703575').hide(); $('#in-article-mob-3rd-703575').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' |
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ ... |
ಮುರಿದು ಬಿದ್ದ ಬಿಜೆಪಿ-ಶಿವಸೇನೆ ಸಂಬಂಧ |
25 ವರ್ಷಗಳ ಮೈತ್ರಿಗೆ ಕೊನೆ ಹಾಡಿದ ಶಿವಸೇನೆ |
23 Jan, 2018 at 05:30 AM |
ಶಿವಸೇನೆಯು 2019ರ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯವಿಲ್ಲ ಎಂದು ತಿಳಿಸಿದೆ. |
ಮಂಗಳವಾರ ಮುಂಬೈನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ. ಉದ್ಧವ್ ಠಾಕ್ರೆಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂಬರಲಿರುವ ಚುನಾವಣೆಗಳಲ್ಲಿ ಬಿಜೆಪಿಯ ಜೊತೆಗೂಡದೆ ಒಂಟಿಯಾಗಿ ಸ್ಫರ್ಧಿಸುವ ನಿರ್ಣಯವನ್ನು ಶಿವಸೇನೆ ಸರ್ವಾನುಮತ ಅಂಗೀಕರಿಸಿದೆ. |
ಶಿವಸೇನೆಯ ಮುಖ್ಯಸ್ಥ ಸಂಜಯ್ ರಾವತ್ರ ಈ ನಿರ್ಧಾರವನ್ನು ಸದಸ್ಯರೆಲ್ಲರೂ ಬೆಂಬಲಿಸಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ 48ರಲ್ಲಿ 25 ಸ್ಥಾನಗಳನ್ನು, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 288ರಲ್ಲಿ 150 ಸ್ಥಾನಗಳನ್ನು ಗೆಲ್ಲುವ ಪ್ರತಿಜ್ಞೆಯನ್ನು ಪಕ್ಷದ ಸದಸ್ಯರು ಕೈಗೊಂಡಿದ್ದಾರೆ. |
"ಬಿಜೆಪಿ ಹಿಂದುತ್ವದ ಹೆಸರಿಡಿದು ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಹಿಂದುತ್ವದ ಕಾರಣಕ್ಕಾಗಿ ಶಿವಸೇನೆ ತಾಳ್ಮೆಯಿಂದಿತ್ತು. ಆದರೆ ಬಿಜೆಪಿ ತನ್ನ ಮೂರು ವರ್ಷದ ಅಧಿಕಾರಾವಧಿಯಲ್ಲಿ ಶಿವಸೇನೆಯ ಎಂದೆಗುಂದಿಸಿದೆ," |
ಸಂಜಯ್ ರಾವತ್, ಶಿವಸೇನೆ ಮುಖ್ಯಸ್ಥ. |
ಈ ಹಿಂದೆಯೇ ಶಿವಸೇನೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಬಿಟ್ಟು ಹೊರಬರುವ ಬಗ್ಗೆ ಮಾತುಗಳಿದ್ದವು. ಕಳೆದ ಡಿಸೆಂಬರ್ನಲ್ಲಿ ಶಿವಸೇನೆಯ ಯೂಥ್ವಿಂಗ್ನ ಮುಖ್ಯಸ್ಥ ಆದಿತ್ಯ ಠಾಕ್ರೆ ಮಹಾರಾಷ್ಟ್ರ ಸರಕಾರದಿಂದ ಹೊರನಡೆಯುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆಯನ್ನು ನಿಯಂತ್ರಿಸ ಕಾರಣಕ್ಕೆ ಅಸಮಾಧಾನಗೊಂಡಿದ್ದ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ, ಬಿಜೆಪಿಯಿಂದ ವಿ... |
ಈಗ ಬಿಜೆಪಿಯಿಂದ ಶಿವಸೇನೆ ಪೂರ್ತಿಯಾಗಿ ಹೊರಬರುವ ನಿರ್ಧಾರವನ್ನು ಪ್ರಕಟಿಸಿದೆ. ಆಡಳಿತ ಪಕ್ಷದ 227 ಸ್ಥಾನಗಳಲ್ಲಿ ಶಿವಸೇನೆ 84 ಸ್ಥಾನಗಳನ್ನು ಹೊಂದಿದ್ದು, ಬಿಜೆಪಿ ತನ್ನ ಸ್ವಂತ ಶಕ್ತಿಯಿಂದ 82 ಸ್ಥಾನಗಳನ್ನು ಗೆಲ್ಲಲಷ್ಟೇ ಸಾಧ್ಯವಾಗಿತ್ತು. |
ಶಿವಸೇನೆ ನಡೆದು ಬಂದ ಹಾದಿ: |
ಶಿವಸೇನೆ ಸ್ಥಾಪಿಸಲ್ಪಟ್ಟಿದು 1966ರಲ್ಲಿ. ಬಾಳಾಸಾಹೇಬ್ ಠಾಕ್ರೆ ಇದರ ಸೃಷ್ಟಿಕರ್ತ. ಮಹಾರಾಷ್ಟ್ರಕ್ಕೆ ವಲಸೆ ಬಂದ ಇತರ ಭಾರತೀಯ ರಾಜ್ಯಗಳ ವಸಲಿಗರಿಗಿಂತ ಮೊದಲು ಮರಾಠಿಗರಿಗೆ ಪ್ರಾಶಸ್ತ್ಯವನ್ನು ಕಲ್ಪಿಸಿಕೊಡುವ ಸಲುವಾಗಿ ಆರಂಭಗೊಂಡ ಶಿವಸೇನೆ, ಅರವತ್ತರ ದಶಕದಲ್ಲಿ ಮರಾಠಿ ಸಮುದಾಯದಲ್ಲಿ ಗಟ್ಟಿ ತಳಹದಿಯನ್ನು ಸ್ಥಾಪಿಸಿಕೊಂಡಿತು. ಈ ಸೇನೆಯ ಸದಸ್ಯರನ್ನು ಶಿವಸೈನಿಕರು ಎಂದು ಕರೆಯಲಾಗುತ್ತದೆ. |
ಮರಾಠಿ ಪರ ಸಿದ್ಧಾಂತ ಹೊಂದಿದ್ದ ಶಿವಸೇನೆ 1970ರ ದಶಕದಲ್ಲಿ ವಿಶಾಲ ಹಿಂದೂ ರಾಷ್ಟ್ರೀಯತಾವಾದಿ ಸಿದ್ದಾಂತವನ್ನು ಒಪ್ಪಿಕೊಂಡು ಬಿಜೆಪಿ ಜೊತೆಗೆ ಮೈತ್ರಿಯಾಗಿತ್ತು. ಎರಡು ಪಕ್ಷಗಳು ಒಟ್ಟಾಗಿ 1989ರಲ್ಲಿ ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. 2014ರ ಚುನಾವಣೆ ವೇಳೆಗೆ ಎರಡರ ನಡುವಿನ ಮೈತ್ರಿಯು ಕುಸಿತ ಕಂಡಿತ್ತು, ಸಂಧಾನ ಮಾತುಕತೆಗಳೆಲ್ಲವೂ ವಿಫಲವಾಗಿದ್ದವು.... |
ಶಿವಸೇನೆಯ ಮೇಲೆ ಹಿಂಸೆಯಲ್ಲಿ ತೊಡಗಿರುವ ಮತ್ತು ವಿರುದ್ಧ ಸಿದ್ದಾಂತಗಳ ಮೇಲೆ ದಾಳಿ ನಡೆಸಿರುವ ಆರೋಪಗಳಿವೆ. ಇದನ್ನು ಉಗ್ರಗಾಮಿ ಬಲಪಂಥೀಯ ಬಣ ಎಂದು ಸಹ ಬಣ್ಣಿಸಲಾಗುತ್ತದೆ.ತೆಲುಗು ದೇಶಂ ಪಕ್ಷ, ಲೋಕ್ ಜನಶಕ್ತಿ ಪಕ್ಷ ಸೇರಿದಂತೆ ಒಟ್ಟು 29 ಪಕ್ಷಗಳನ್ನೊಳಗೊಂಡ ಎನ್ಡಿಎ ಸರಕಾರದ ಬೆಂಬಲಕ್ಕಿದ್ದ ದೊಡ್ಡ ಶಕ್ತಿಯಾಗಿದ್ದ ಶಿವಸೇನೆ ಇಂದು ಜಿಜೆಪಿಯಿಂದ ಸಂಪೂರ್ಣವಾಗಿ ಹೊರಬಂದಿದೆ. |
ಬಿಜೆಪಿBJPಚುನಾವಣೆಮೈತ್ರಿಶಿವಸೇನೆವಿಧಾನಸಭಾಲೋಕಸಭಾ ಮಹಾರಾಷ್ಟ್ರಮರಾಠಿshivasenaAllianceElectionsLoksabhaAssemblyMaharashtramarathi |
ಕೇಪ್ ಟೌನ್ ನಲ್ಲಿ ಭಾರೀ ಜಲಕ್ಷಾಮ, ನೀರಿಗಾಗಿ ಸಾಲುಗಟ್ಟಿ ನಿಂತ ಜನತೆ - Varthabharati |
ಕೇಪ್ ಟೌನ್, ಫೆ.9: ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರದಲ್ಲಿ ಸತತ ಮೂರನೇ ವರ್ಷ ಭಾರೀ ಜಲಕ್ಷಾಮ ಎದುರಾಗಿದೆ. ಅಲ್ಲಿನ ಕೆರೆ ಹಾಗೂ ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಭಾರೀ ಕುಸಿತ ಕಂಡಿದೆ. |
ಅಲ್ಲಿನ ಜಲ ಇಲಾಖೆ ನೀಡಿದ ಮಾಹಿತಿಯಂತೆ ವೆಸ್ಟರ್ನ್ ಕೇಪ್ ಪ್ರಾಂತ್ಯದಲ್ಲಿನ ಜಲಾಶಯದಲ್ಲಿ ಈ ವಾರ ನೀರಿನ ಮಟ್ಟ ಶೇ.23.7ಕ್ಕೆ ಕುಸಿದಿದ್ದು, ಕಳೆದ ವಾರ ನೀರಿನ ಮಟ್ಟ ಶೇ. 24.5 ಆಗಿತ್ತು. ಕಳೆದ ವರ್ಷ ಇದೇ ಸಮಯದಲ್ಲಿ ನೀರಿನ ಮಟ್ಟ ಶೇ 36.5ರಷ್ಟಿತ್ತು. |
ಕೇಪ್ ಟೌನ್ ನಗರದಲ್ಲಿ ಈಗ 'ಡೇ ಝೀರೋ' ಜಾರಿಗೊಳಿಸುವ ಸಾಧ್ಯತೆಯಿದ್ದು, ಆ ದಿನದಂದು ನಗರದ ಶೇ 75ರಷ್ಟು ಮನೆಗಳಿಗೆ, ಅಂದರೆ ಸುಮಾರು 10 ಲಕ್ಷ ಕುಟುಂಬಗಳಿಗೆ ನೀರು ಪೂರೈಕೆಯಾಗುವುದಿಲ್ಲ. ಈ ದಿನ ಕುಟುಂಬಗಳು ಹಾಗೂ ವಾಣಿಜ್ಯ ಬಳಕೆದಾರರು ನಗರದಾದ್ಯಂತವಿರುವ 200 ನೀರು ಸಂಗ್ರಹ ಸ್ಥಳಗಳಿಂದ ತಲಾ 25 ಲೀಟರ್ ನೀರನ್ನು ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಸುಧಾರಣೆ ಕಾಣುವ ತನಕ ಪಡೆಯಬಹುದು. |
ಸದ್ಯ ಜನರಿಗೆ ದಿನವೊಂದಕ್ಕೆ ತಲಾ 50 ಲೀಟರ್ ನೀರು ಉಪಯೋಗಿಸುವಂತೆ ಹೇಳಲಾಗಿದೆ. ಜನರು ಹಗಲು ರಾತ್ರಿಯೆನ್ನದೆ ನಗರದಲ್ಲಿರುವ ನೀರು ಕೇಂದ್ರಗಳಲ್ಲಿ ಹೆಚ್ಚುವರಿ ನೀರಿಗಾಗಿ ಸರತಿ ನಿಲ್ಲುತ್ತಿದಾರೆ. |
ನಗರದ ನೀರಿನ ಸಮಸ್ಯೆಯ ಬಗ್ಗೆ ಪ್ರವಾಸಿಗರನ್ನು ಎಚ್ಚರಿಸುವ ಸೂಚನಾ ಫಲಕಗಳೂ ವಿಮಾನ ನಿಲ್ದಾಣಗಳಲ್ಲಿ ಕಾಣಿಸುತ್ತಿವೆ. ಪ್ರವಾಸಿಗರಿಗೂ ನೀರಿನ ಬಳಕೆಯ ಕುರಿತಾದ ಹಲವು ಮಾರ್ಗಸೂಚಿಗಳಿವೆ. ಭಾರತೀಯ ಕ್ರಿಕೆಟ್ ತಂಡ ಕೂಡ ದಕ್ಷಿಣ ಆಫ್ರಿಕಾ ತಂಡದೆದುರಿನ ಟೆಸ್ಟ್ ಸರಣಿಗಾಗಿ ಕೇಪ್ ಟೌನಿನಲ್ಲಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು. ಎಲ್ಲಾ ವಿಮಾನಗಳೂ ನಿಲ್ದಾಣ ತಲುಪುವ ಮುಂಚಿತವಾಗಿಯೇ ನೀರಿನ ಸಮಸ್ಯೆಯ ಬ... |
ಕೊರೊನಾ ವೈರಸ್: ಖಾಸಗಿ ಆಸ್ಪತ್ರೆಗಳಲ್ಲೂ ಪ್ರತ್ಯೇಕ ವಾರ್ಡ್ - Mysuru Mithra |
Tuesday 7 December 2021 , 2:41 pm |
Home » ಕೊರೊನಾ ವೈರಸ್: ಖಾಸಗಿ ಆಸ್ಪತ್ರೆಗಳಲ್ಲೂ ಪ್ರತ್ಯೇಕ ವಾರ್ಡ್ |
ಕೊರೊನಾ ವೈರಸ್: ಖಾಸಗಿ ಆಸ್ಪತ್ರೆಗಳಲ್ಲೂ ಪ್ರತ್ಯೇಕ ವಾರ್ಡ್ |
ಮೈಸೂರು,ಮಾ.13(ಆರ್ಕೆ)- ಜನರಲ್ಲಿ ಭೀತಿ ಉಂಟು ಮಾಡಿರುವ ಕೋವಿಡ್-19 (ಕೊರೊನಾ ವೈರಸ್) ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆ ಜೊತೆಗೆ ಖಾಸಗಿ ಆಸ್ಪತ್ರೆ ಗಳಲ್ಲೂ ಪ್ರತ್ಯೇಕ ವಾರ್ಡ್ (Isolation Ward) ಸೌಲಭ್ಯ ಕಲ್ಪಿಸುವಂತೆ ಜಿಲ್ಲಾದಿ üಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ. |
ಮೈಸೂರಿನ ತಮ್ಮ ಕಚೇರಿ ಸಭಾಂ ಗಣದಲ್ಲಿ ಖಾಸಗಿ ಆಸ್ಪತ್ರೆಗಳ ಮುಖ್ಯ ಸ್ಥರುಗಳೊಂದಿಗೆ ಸಭೆ ನಡೆಸಿದ ಅವರು, ಎಲ್ಲೆಡೆ ಕೋವಿಡ್-19 ರೋಗದ ವದಂತಿ ಹೆಚ್ಚುತ್ತಿದ್ದು, ಸರ್ಕಾರ ಎಲ್ಲಾ ಅಗತ್ಯ ಮುಂಜಾ ಗ್ರತಾ ಕ್ರಮ ಕೈಗೊಂಡಿದ್ದು, ಮೈಸೂರಿ ನಲ್ಲೂ ಕೆ.ಆರ್. ಆಸ್ಪತ್ರೆ, ಸಾಂಕ್ರಾಮಿಕ ರೋಗ ಗಳ ಆಸ್ಪತ್ರೆ, ಜೆಎಸ್ಎಸ್, ಅಪೊಲೋ ಬಿಜಿಎಸ್ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಐಸೋ ಲೇಷನ್ ವಾರ್ಡ್ಗಳನ್ನು (ವೆಂಟಿಲೇ... |
ಪ್ರತೀದಿನ ಏರ್ಪೋರ್ಟ್, ಬಸ್ ಸ್ಟ್ಯಾಂಡ್, ರೈಲು ನಿಲ್ದಾಣ, ಅರಮನೆ, ಚಾಮುಂಡಿ ಬೆಟ್ಟ ಸೇರಿದಂತೆ ಹೊರಗಿನಿಂದ ಅಧಿಕ ಜನರು ಬರುವ ಸ್ಥಳಗಳಲ್ಲಿ ಆರೋಗ್ಯ ತಪಾ ಸಣೆ ನಡೆಸುತ್ತಿದ್ದು, ಶಂಕಿತ ಕೊರೊನಾ ವೈರಸ್ ಶಂಕೆ ಕಂಡು ಬಂದಲ್ಲಿ ಅಂತಹವ ರನ್ನು ಪ್ರತ್ಯೇಕ ವಾರ್ಡ್ಗಳಲ್ಲಿ ಅಬ್ಸರ್ವೇಷನ್ ನಲ್ಲಿಡಲು ಐಸೋಲೇಷನ್ ವಾರ್ಡ್ಗಳನ್ನು ತೆರೆದು ಮೀಸಲಿರಿಸಿಕೊಳ್ಳುವುದೊಳಿತು ಎಂದು ಜಿಲ್ಲಾಧಿಕಾರಿಗಳು ತಿಳಿಸ... |
ರಾಜ್ಯ ಮುಖ್ಯ ಕಾರ್ಯದರ್ಶಿ ತ.ಮ. ವಿಜಯಭಾಸ್ಕರ್ ಅವರು ಗುರುವಾರ ವಿಡಿಯೋ ಕಾನ್ಫರೆನ್ಸ್ ನಡೆಸಿ ಕೊರೊನಾ ವೈರಸ್ ರೋಗ ತಡೆಗೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಜಾಗೃತಿ ಮೂಡಿಸುವ ಸಂಬಂಧ ನೀಡಿದ್ದ ನಿರ್ದೇಶನಗಳನ್ನು ಪಾಲಿಸಲು ಅಭಿರಾಂ ಜಿ. ಶಂಕರ್ ಇಂದು ವಿಮಾನ ನಿಲ್ದಾಣ, ಅರಮನೆ ಮಂಡಳಿ, ಮುಜರಾಯಿ, ಪಶುಸಂಗೋಪನಾ, ಪ್ರವಾ ಸೋದ್ಯಮ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ನಗ... |
ಜಿಪಂ ಸಿಇಓ ಕೆ.ಜ್ಯೋತಿ, ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಪಿ.ನಂಜರಾಜ್, ಕೆ.ಆರ್. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎನ್. ನಂಜುಂಡಸ್ವಾಮಿ, ಸ್ಥಾನಿಕ ವೈದ್ಯಾಧಿಕಾರಿ ಡಾ. ರಾಜೇಶ್, ಡಿಡಿಪಿಐ ಡಾ. ಪಾಂಡು ರಂಗ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. |
ಕಡಿಮೆ ಅವಧಿಯಲ್ಲಿ ಹಣ ದ್ವಿಗುಣಗೊಳಿಸುವ ಭರವಸೆ ಕೊಟ್ಟು 8 ಸಾವಿರ ಮಂದಿಗೆ ವಂಚನೆ | KANNADIGA WORLD |
Home ಕನ್ನಡ ವಾರ್ತೆಗಳು ಕರ್ನಾಟಕ ಕಡಿಮೆ ಅವಧಿಯಲ್ಲಿ ಹಣ ದ್ವಿಗುಣಗೊಳಿಸುವ ಭರವಸೆ ಕೊಟ್ಟು 8 ಸಾವಿರ ಮಂದಿಗೆ ವಂಚನೆ |
Posted By: Karnataka News BureauPosted date: November 21, 2016 In: ಕರ್ನಾಟಕ |
ಬಳ್ಳಾರಿ: ಕಡಿಮೆ ಅವಧಿಯಲ್ಲಿ ಹಣವನ್ನು ದ್ವಿಗುಣಗೊಳಿಸಿ ಹಿಂದಿರುಗಿಸುವುದಾಗಿ ಪೊಲೀಸರು ಸೇರಿದಂತೆ 8 ಸಾವಿರಕ್ಕೂ ಹೆಚ್ಚು ಸರಕಾರಿ ನೌಕರರಿಂದ ಒಟ್ಟು 14 ಕೋಟಿ ರು. ಗೂ ಅಧಿಕ ಹಣ ಸಂಗ್ರಹಿಸಿ ವಂಚನೆ ಮಾಡಿದವನನ್ನು ಕೌಲ್ ಬಜಾರ್ ಪೊಲೀಸರು ಬಂಧಿಸಿದ್ದಾರೆ. |
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ರಮೇಶ್ ಅಲಿಯಾಸ್ ಸುರೇಂದ್ರನಾಥ್ ಕಳೆದ ಮೇ ತಿಂಗಳಿಂದ ವಿದ್ಯಾನಗರದಲ್ಲಿ 'ಬೆಸ್ಟ್ ಚಾಯ್ಸ್ ಅಡ್ವಟೈಸಿಂಗ್' ಕಂಪನಿ ಆರಂಭಿಸಿದ್ದ. ಹಣ ನೀಡುವ ಜನರಿಗೆ ಒಂದು ವಾರ ಇಲ್ಲ 10 ದಿನದಲ್ಲಿ ದ್ವಿಗುಣ ಮೊತ್ತ ಮರಳಿ ನೀಡುವುದಾಗಿ ಹೇಳಿದ್ದ. ಜನರನ್ನು ನಂಬಿಸಲು ಹಣ ಕೊಟ್ಟವರಿಗೆ ಎರಡು ಪಟ್ಟು ಹಣವನ್ನೂ ನೀಡಿದ್ದ. ಇದಕ್ಕೆ ಸ್ಥಳೀಯ ರೌಡಿಗಳು ಮತ್ತು ರಾಜಕೀಯ ಪಕ್ಷದ ನಾಯಕನ... |
ಇದನ್ನೇ ನಂಬಿ ಯುವ ಜನತೆ ಮತ್ತು ಪೊಲೀಸರು ಸೇರಿದಂತೆ 8 ಸಾವಿರಕ್ಕೂ ಹೆಚ್ಚು ಜನ 14 ಕೋಟಿ ರು. ಗೂ ಹೆಚ್ಚು ಹಣ ನೀಡಿದ್ದರು. ಈ ಬಗ್ಗೆ ವರದಿ ಮಾಡಲು ಹೋಗಿದ್ದ ಮಾಧ್ಯಮ ದವರ ಮೇಲೆ ಹಲ್ಲೆ ಮಾಡಿದ್ದ ವಾಯುಗುಂಡ್ಲ ರಮೇಶ್ ಮತ್ತು ರಾಮಕೃಷ್ಣ ಅಲಿಯಾಸ್ ಚಿಟ್ಟಿಬಾಬು, ಗೋವರ್ಧನ್ ಅಲಿಯಾಸ್ ಸುಬ್ಬರಾವ್ ಹಾಗೂ ಕುಮಾರಿ ಹಾರಿಕ ಅವರ ಮೇಲೆ ಪ್ರಕರಣ ದಾಖಲಾಗಿದೆ. |
ಪೊಲೀಸರು ವಾಯುಗುಂಡ್ಲ ರಮೇಶ್ನನ್ನು ಬಂಧಿಸಿದ್ದು, 5 ಲಕ್ಷ 83 ಸಾವಿರ ರು. ನಗದು ಮತ್ತು 1 ಲಕ್ಷ ರು. ಬೆಲೆ ಬಾಳುವ ಕಂಪ್ಯೂಟರ್ ಮತ್ತು ಪೀಠೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ವಂಚನೆ ಕುರಿತು ಈಗಾಗಲೇ ಹೈದರಾಬಾದ್, ತಿರುಪತಿಯಲ್ಲೂ ರಮೇಶ್ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ. |
ಕುದೂರು ಶಾಲೆಗೆ 10 ಕಂಪ್ಯೂಟರ್ ದೇಣಿಗೆಯಾಗಿ ನೀಡಿದ ಈಸ್ಟರ್ನ್ ಸಂಸ್ಥೆ | Eastern Condiments donates 10 computers to govt school - Kannada Oneindia |
29 min ago ಶ್ರೀನಾಥ್ ಭಲ್ಲೆ ಅಂಕಣ: ಹೇಳಿದ ಮಾತು ಕೇಳೋ ಬುದ್ಧಿ ನಮಗೇಕಿಲ್ಲ |
ರಾಮನಗರ, ಸೆಪ್ಟೆಂಬರ್ 19: ಈಸ್ಟರ್ನ್ ಕ್ಯಾಂಡಿಮೆಂಟ್ ಸಂಸ್ಥೆಯು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ 10 ಕಂಪ್ಯೂಟರ್ಗಳನ್ನು ರಾಮನಗರದ ಕುದೂರು ಪ್ರೌಢಶಾಲೆಗೆ ದೇಣಿಗೆಯಾಗಿ ನೀಡಿದೆ. |
ಈ ಶಾಲೆಯಲ್ಲಿ ಅಳವಡಿಸಲಾಗಿರುವ ನೂತನ ಕಂಪ್ಯೂಟರ್ ಪ್ರಯೋಗಾಲಯವನ್ನು ಈಸ್ಟರ್ನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಫಿರೋಜ್ ಮೀರನ್ ಬುಧವಾರ ಉದ್ಘಾಟಿಸಿದರು. |
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈಸ್ಟರ್ನ್ ಭೂಮಿಕಾ ಮೂಲಕ ಸಂಸ್ಥೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ಕಾರ್ಯ ಮಾಡುತ್ತಿದ್ದೇವೆ.ಸಂಸ್ಥೆಯ ಮೂಲಕ ಹಲವಾರು ವರ್ಷಗಳಿಂದ ಶಾಲೆ ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತದೆ ಬಂದಿದೆ ಎಂದರು. |
ಪ್ರಮುಖವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಈ ವರ್ಷ ಕುದೂರು ಶಾಲೆಗೆ ಕಂಪ್ಯೂಟರ್ ಗಳನ್ನು ನೀಡಲು ತೀರ್ಮಾನಿಸಿ, 10 ಕಂಪ್ಯೂಟರ್ ಒದಗಿಸಿದ್ದೇವೆ. ಈ ಕಂಪ್ಯೂಟರ್ ಗಳ ಮೂಲಕ ಮಕ್ಕಳು ಹೆಚ್ಚಿ ಜ್ಞಾನ ಪಡೆಯುವಂತಾಗಲು ಎಂದರು. |
ಈಗ ಅಳವಡಿಸಿರುವ ಕಂಪ್ಯೂಟರ್ ಗಳಲ್ಲಿ ಮುಂದಿನ ದಿನಗಳಲ್ಲಿ ತಾಂತ್ರಿಕ ತೊಂದರೆಯಾದರೂ ಈಸ್ಟರ್ನ್ ಸಂಸ್ಥೆಯೇ ಸರಿಪಡಿಸುವ ಜವಾಬ್ದಾರಿ ನಿರ್ವಹಿಸಲಿದೆ ಎಂದು ಭರವಸೆ ನೀಡಿದರು. |
ಕುದೂರು ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರ ನಮಗೆ ಹೆಚ್ಚಿನ ಸಾಮಾಜಿಕ ಸೇವೆ ಮಾಡಲು ಪ್ರೋತ್ಸಾಹ ನೀಡಿದೆ ಎಂದು ಹೇಳಿದರು. ಮಾಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ್ ಮಾತನಾಡಿ, ದೇಶದಲ್ಲಿ ಉನ್ನತ ಹುದ್ದೆಗಳನ್ನು ಪಡೆದವರು ಸರ್ಕಾರಿ ಶಾಲೆಯಲ್ಲಿಯೇ ಓದಿದ್ದಾರೆ. |
ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳಿವೆ. ಮಕ್ಕಳು ಕಂಪ್ಯೂಟರ್ ಕಲಿಕೆ ಮೂಲಕ ಹೆಚ್ಷಿನ ಜ್ಞಾನ ಪಡೆದುಕೊಂಡು ಉನ್ನತ ಮಟ್ಟಕ್ಕೇರಬೇಕು ಎಂದು ಹೇಳಿದರು. |
ಈಸ್ಟರ್ನ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕಿ ಕೃತಿಕಾ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಕಂಪ್ಯೂಟರ್ ಅತ್ಯಂತ ಅಗತ್ಯವಿದೆ. ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಮುಖ್ಯವಾಗಿರುವುದರಿಂದ ನಮ್ಮ ಸಂಸ್ಥೆಯ ಮೂಲಕ ಕುದೂರು ಶಾಲೆಗೆ ಕಂಪ್ಯೂಟರ್ ಒದಗಿಸುವ ಕಾರ್ಯ ಮಾಡಿದ್ದೇವೆ ಎಂದು ಹೇಳಿದರು. |
ಕಾರ್ಯಕ್ರಮದಲ್ಲಿ ಈಸ್ಟರ್ನ್ ಸಂಸ್ಥೆ ನಿರ್ದೇಶಕ ಮೋಹನ್ಬಲಾಲ್ ಮೇನನ್, ಕುದೂರು ಶಾಲೆಯ ಹಳೆಯ ವಿದ್ಯಾರ್ಥಿ ಡಾ.ಕೆ. ಮಂಜುನಾಥ ದಂಪತಿ, ತಾಲೂಕು ಪಂಚಾಯತಿ ಸದಸ್ಯೆ ದಿವ್ಯಾನುಭವದ ಚಂದ್ರಶೇಖರ, ಕುದೂರು ಜೂನಿಯರ್ ಕಾಲೇಜ್ ಪ್ರಾಂಶುಪಾಲ ಕಾಂತರಾಜ್ , ಎಸ್ ಡಿ ಎಂ ಸಿ ಅಧ್ಯಕ್ಷ. ಅಶೋಕ್, ಪ್ರೌಢಶಾಲೆ ಮುಖ್ಯೋಧ್ಯಾಪಕ ಎಂ.ಎಸ್. ನಾಗರಾಜ್ ಉಪಸ್ಥಿತರಿದ್ದರು. |
ramanagara school computer ರಾಮನಗರ ಶಾಲೆ ಕಂಪ್ಯೂಟರ್ |
Under corporate social responsibility (CSR) scheme Eastern Condiments of Ramnagar has donated 10 computers to Kudur government high school. |
ನೈಜ ಸಮಯದಲ್ಲಿ ಪ್ರಪಂಚದಾದ್ಯಂತದ ಕೊರೊನಾವೈರಸ್ನ ಪ್ರಗತಿಯನ್ನು ಅನುಸರಿಸಿ | ಗ್ಯಾಜೆಟ್ ಸುದ್ದಿ |
ದುರದೃಷ್ಟವಶಾತ್, ಎಲ್ಲವೂ ಯಾವಾಗಲೂ ಒಳ್ಳೆಯ ಸುದ್ದಿಯಲ್ಲ, ಈ ಬಾರಿ ಕೊರೊನಾವೈರಸ್ನಿಂದಾಗಿ ಏಷ್ಯಾದಿಂದ ಅಪಾಯಕಾರಿ ಸಾಂಕ್ರಾಮಿಕ ರೋಗ ಸಂಭವಿಸುತ್ತಿದೆ. ಹೇಗಾದರೂ, ನಾವು ದೂರಸಂಪರ್ಕ ಯುಗದಲ್ಲಿದ್ದೇವೆ ಎಂಬ ಅಂಶದ ಲಾಭವನ್ನು ನಾವು ಜಗತ್ತಿನಾದ್ಯಂತ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಹರಡಲು ಅನುವು ಮಾಡಿಕೊಡಬೇಕು. ಅಂತರ್ಜಾಲಕ್ಕೆ ಧನ್ಯವಾದಗಳು, ಸಾಂಕ್ರಾಮಿಕ ರೋಗವನ್ನು ತಪ್ಪಿಸಲು ನಾವು ಹೆಚ... |
1 ಕೊರೊನಾವೈರಸ್ ಎಂದರೇನು? |
2 ಕೊರೊನಾವೈರಸ್ ನೈಜ-ಸಮಯದ ನಕ್ಷೆ |
3 ವುಹಾನ್ ಕೊರೊನಾವೈರಸ್ಗೆ ಕಾರಣವೇನು? |
4 ವುಹಾನ್ ಕೊರೊನಾವೈರಸ್ ವಿರುದ್ಧ ನೀವು ಹೇಗೆ ಹೋರಾಡುತ್ತೀರಿ? |
ಸಂಪನ್ಮೂಲಗಳನ್ನು ಉತ್ತಮಗೊಳಿಸಲು ಮತ್ತು ಬದುಕುಳಿಯುವ ಅವಕಾಶವನ್ನು ಹೊಂದಲು ನಾವು ಏನು ಎದುರಿಸುತ್ತಿದ್ದೇವೆ ಎಂದು ತಿಳಿದುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ಕೊರೊನಾವೈರಸ್ ಅದರ ಸರಿಯಾದ ಹೆಸರಲ್ಲ, ಆದಾಗ್ಯೂ, ನಾವು ಹೊಸ ವೈರಸ್ ಅನ್ನು ಎದುರಿಸುತ್ತಿದ್ದೇವೆ, ಅದರಲ್ಲಿ ಯಾವುದೇ ದಾಖಲೆಗಳಿಲ್ಲ, ಮುದ್ರಣಶಾಸ್ತ್ರವನ್ನು ಬಳಸಲಾಗುತ್ತದೆ ಅಥವಾ ವೈದ್ಯಕೀಯ ರೂಪಾಂತರವು ತಿಳಿದಿದೆ. ಮೂಲತಃ ಒಂದು ... |
ಒಮ್ಮೆ, ಅದು ಆ ಆರ್ಎನ್ಎಯನ್ನು ಡಿಎನ್ಎ ಆಗಿ ಪರಿವರ್ತಿಸುತ್ತದೆ ಮತ್ತು ವಾಹಕದ ಜೀನೋಮ್ನೊಂದಿಗೆ ಸಂಯೋಜನೆಗೊಳ್ಳುತ್ತದೆ. ಅದು ಕೊರೊನಾವೈರಸ್ ಆತಿಥೇಯ ಕೋಶದ ಅನಿಯಂತ್ರಿತವಾಗಿ ಪುನರಾವರ್ತಿಸಲು ಮತ್ತು ಹೊಸ ವೈರಲ್ ಕಣಗಳನ್ನು ಸೃಷ್ಟಿಸುತ್ತದೆ, ಅದನ್ನು ಪೋಷಿಸುವ ಕೋಶವನ್ನು ಬಿಟ್ಟು ಅದರ ಕ್ರಿಯೆಯ ವ್ಯಾಪ್ತಿಯನ್ನು ನಿರಂತರವಾಗಿ ಗುಣಿಸುತ್ತದೆ. ಆದ್ದರಿಂದ, ಕೊರೊನಾವೈರಸ್ಗಳು ನಿರಂತರವಾಗಿ ರೂಪ... |
ಕೊರೊನಾವೈರಸ್ ನೈಜ-ಸಮಯದ ನಕ್ಷೆ |
ವಿವಿಧ ಸಂವಾದಾತ್ಮಕ ನಕ್ಷೆಗಳನ್ನು ರಚಿಸಲಾಗಿದೆ ಅದು ಜಗತ್ತಿನಾದ್ಯಂತ ಕರೋನವೈರಸ್ನ ಮುಂದುವರಿದ ಮುನ್ನಡೆಯನ್ನು ತಿಳಿಯಲು ಅನುವು ಮಾಡಿಕೊಡುತ್ತದೆ. ಅದೇನೇ ಇದ್ದರೂ, ಈ ವೈರಸ್ ಪ್ರಸ್ತುತ ಚೀನಾದಲ್ಲಿ ಸಾಕಷ್ಟು ನಿಯಂತ್ರಿಸಲ್ಪಟ್ಟಿದೆ, ಏಕೆಂದರೆ ಅಲ್ಲಿಯೇ 99% ಪ್ರಕರಣಗಳು ಸಂಭವಿಸಿವೆ, ಯುನೈಟೆಡ್ ಸ್ಟೇಟ್ಸ್ ಅಥವಾ ಫ್ರಾನ್ಸ್ನಂತಹ ಇತರ ದೇಶಗಳಲ್ಲಿ ಸೋಂಕಿಗೆ ಒಳಗಾದವರು ಕಡಿಮೆ ಸಂಖ್ಯೆಯಲ್ಲಿದ್ದಾ... |
ನೈಜ ಸಮಯದಲ್ಲಿ ವುಹಾನ್ ಕೊರೊನಾವೈರಸ್ನ ಪ್ರಗತಿಯನ್ನು ಅನುಸರಿಸಲು ನಕ್ಷೆ (LINK) |
ಈ ನಕ್ಷೆಯನ್ನು ನಿರಂತರವಾಗಿ ನವೀಕರಿಸಲಾಗುತ್ತದೆ ಮತ್ತು ಇದು ಆರೋಗ್ಯ ಸಿಬ್ಬಂದಿ ಮತ್ತು ನಾಗರಿಕರ ನಡುವೆ ವ್ಯತ್ಯಾಸವನ್ನು ತೋರಿಸುವುದರಿಂದ ಸೋಂಕಿತರ ಸಂಖ್ಯೆ, ಅವರ ಪ್ರಸ್ತುತ ಪರಿಸ್ಥಿತಿ ಮತ್ತು ಈ ಕೆಲವು ಸೋಂಕಿತರ ವೃತ್ತಿಗಳಂತಹ ನಿಖರವಾದ ಡೇಟಾವನ್ನು ನಮಗೆ ನೀಡುತ್ತದೆ. ಆದಾಗ್ಯೂ, ಇದು ಕೇವಲ ಆವೃತ್ತಿಯಲ್ಲ, ನಮ್ಮಲ್ಲಿ ಮತ್ತೊಂದು ಸಂವಾದಾತ್ಮಕ ನಕ್ಷೆಯೂ ಇದೆ, ಇದನ್ನು ಗೂಗಲ್ ನಕ್ಷೆಗಳೊಂದಿಗ... |
ವುಹಾನ್ ಕೊರೊನಾವೈರಸ್ ಸೋಂಕಿತರ ಸ್ಥಳದೊಂದಿಗೆ ಗೂಗಲ್ ನಕ್ಷೆಗಳು |
ವುಹಾನ್ ಕೊರೊನಾವೈರಸ್ಗೆ ಕಾರಣವೇನು? |
ಈ ಸಮಯದಲ್ಲಿ ಯಾವುದೇ ಅಧಿಕೃತ ಮತ್ತು ನಿರ್ದಿಷ್ಟ ಕಾರಣಗಳಿಲ್ಲ, ಆದಾಗ್ಯೂ, ಅಂತರ್ಜಾಲವು ಮೋಹಕ ಸಿದ್ಧಾಂತಗಳ ತೊಟ್ಟಿಲು ಆಗಿರುವುದರಿಂದ, ಮೊದಲ othes ಹೆಗಳು 11 ದಶಲಕ್ಷ ನಿವಾಸಿಗಳನ್ನು ಹೊಂದಿರುವ ಚೀನಾದ ನಗರವಾದ ವುಹಾನ್ ಏಷ್ಯಾದ ಸರಳ ಪ್ರದೇಶಕ್ಕಿಂತ ಹೆಚ್ಚಿನದಾಗಿದೆ ಎಂದು ಸೂಚಿಸುತ್ತದೆ ದೈತ್ಯ. ವುಹಾನ್ ಒಂದು ಪ್ರಮುಖ ಕೈಗಾರಿಕಾ ಉದ್ಯಾನವನವನ್ನು ಹೊಂದಿದ್ದು, ಅಲ್ಲಿ ದೇಶದ ಪ್ರಮುಖ ce ಷಧೀ... |
ನಾವು ಹೇಳಿದಂತೆ, ಈ othes ಹೆಗಳು ನಿಜವಲ್ಲ ಅಥವಾ ದೃ confirmed ೀಕರಿಸಲ್ಪಟ್ಟಿಲ್ಲ, ಈ ಸಮಯದಲ್ಲಿ ಚೀನಾ ಈ ವಿಷಯದಲ್ಲಿ ಅಧಿಕೃತ ಆವೃತ್ತಿಯನ್ನು ನೀಡಿಲ್ಲ, ಅಥವಾ ನಿರೀಕ್ಷೆಯಿಲ್ಲ, ಏಕೆಂದರೆ ಇಲ್ಲಿಯವರೆಗೆ ಈ ರೀತಿಯ ರೋಗವು ಪ್ರಕೃತಿಯಲ್ಲಿರಲು ಕಾರಣವನ್ನು ಹೊಂದಿದೆ, ಏಕೆಂದರೆ ಅವುಗಳು ರೋಗಲಕ್ಷಣಗಳ ಅಸ್ಥಿರತೆಯ ಹೊರತಾಗಿಯೂ, ಕಾಲೋಚಿತ ಜ್ವರವನ್ನು ಹೊಂದಿರುವುದಕ್ಕಿಂತ ಹೆಚ್ಚಿನ ರಹಸ್ಯವಿಲ್ಲ. ... |
ವುಹಾನ್ ಕೊರೊನಾವೈರಸ್ ವಿರುದ್ಧ ನೀವು ಹೇಗೆ ಹೋರಾಡುತ್ತೀರಿ? |
ಈ ಸಮಯದಲ್ಲಿ ಸರ್ಕಾರ ವುಹಾನ್ ಹುವಾಂಗ್ಗ್ಯಾಂಗ್, ಜಿಜಿಯಾಂಗ್, ಎ zh ೌ, ಕಿಯಾಂಗ್ಜಿಯಾಂಗ್, ಚಿಬಿ ಮತ್ತು ಕ್ಸಿಯಾಂಟಾವೊ ನಗರಗಳಲ್ಲಿ ಮಾನವ ಕಳ್ಳಸಾಗಣೆಯನ್ನು ನಿರ್ಬಂಧಿಸಲು ಚೀನಾ ನಿರ್ಧರಿಸಿದೆ. ತಮ್ಮ ಗಡಿಯಲ್ಲಿ ನೈರ್ಮಲ್ಯ ನಿಯಂತ್ರಣಗಳನ್ನು ಸ್ಥಾಪಿಸುವುದು ಮತ್ತು ಸಾರ್ವಜನಿಕ ಸಾರಿಗೆಯನ್ನು ಸೀಮಿತಗೊಳಿಸುವುದು, ಇದು ಹೆಚ್ಚು ಪರಿಣಾಮ ಬೀರಿದೆ 20.000.000 ಜನರು. ಆದಾಗ್ಯೂ, ಈ ಸಮಯದಲ್ಲಿ ಸ... |
ವಾಚ್: ಕರೋನವೈರಸ್ ಏಕಾಏಕಿ ಕೇಂದ್ರಬಿಂದುದಲ್ಲಿರುವ ಆಸ್ಪತ್ರೆಯಲ್ಲಿ ಪರಿಸ್ಥಿತಿಯನ್ನು ವೀಡಿಯೊ ತೋರಿಸುತ್ತದೆ; ಇದನ್ನು ಈಗ ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆಯಿಂದ ತೆಗೆದುಹಾಕಲಾಗಿದೆ pic.twitter.com/uC5QYY9Z0a |
- BNO ಸುದ್ದಿ (NBNONews) ಜನವರಿ 24, 2020 |
Subsets and Splits
No community queries yet
The top public SQL queries from the community will appear here once available.