text
stringlengths
0
61.5k
ಆನ್ಲೈನ್ ಸ್ಲಾಟ್ಗಳು ಬಳಕೆದಾರರಿಗೆ ಒಂದು ವರವನ್ನು ಸಮಯ ಕೊಂದು ಆನ್ಲೈನ್ ಪ್ರತಿಫಲಗಳು ಗೆಲ್ಲುವ ಮೂಲಕ ತಮ್ಮ ಬೇಸರ ಅತ್ಯಂತ ಮಾಡಲು ಮುಂದೆ ಹುಡುಕುತ್ತಿರುವ. ಪ್ರಮುಖ ಕಾರಣಗಳಲ್ಲಿ ಒಂದು ಮೋಜು ಆನ್ಲೈನ್ ಸ್ಲಾಟ್ಗಳು ಪರಿಶೀಲಿಸಿ- ನಿಮ್ಮ ಮನೆ ಸೌಕರ್ಯಗಳಿಗೆ ಮನರಂಜನೆ ಪ್ಯಾಕ್ ಸಮಯ ತುಂಬಿದ. ನಲ್ಲಿ ಸ್ಲಾಟ್ಗಳು ಲಿಮಿಟೆಡ್ ಆನ್ಲೈನ್ ನಿಮ್ಮ £ 200 ನಗದು ಪಂದ್ಯದಲ್ಲಿ ಸ್ವಾಗತ ಬೋನಸ್ ಪ್ರಾರಂಭಿಸಿ ...
ಬಗ್ಗೆ ಆನ್ಲೈನ್ ಕ್ಯೂರಿಯಸ್ ಸ್ಲಾಟ್ಗಳು ಫೋನ್ ಬಿಲ್ ಎಸ್ಎಂಎಸ್ ಕ್ಯಾಸಿನೊ ಪೇ & ಏನು ಪ್ರಯೋಜನಗಳು?
ಫೋನ್ ಬಿಲ್ ಆನ್ಲೈನ್ ಸ್ಲಾಟ್ಗಳು ಪೇ ನಿಮ್ಮ ಗೇಮಿಂಗ್ ಖಾತೆಗೆ ಹಣವನ್ನು ಠೇವಣಿ ಹೊಸ ಮತ್ತು ತ್ವರಿತ ಮಾರ್ಗವಾಗಿದೆ. ನೀವು ಯಾವುದೇ ವೈಯಕ್ತಿಕ ಹಣಕಾಸು ಮಾಹಿತಿಯನ್ನು divulge ಇಲ್ಲ ಆನ್ಲೈನ್. ನೀವು ಮಾಡಬೇಕಾದ್ದು ಎಲ್ಲಾ ನಿಮ್ಮ ಫೋನ್ ಸಂಖ್ಯೆಯನ್ನು ನೋಂದಾಯಿಸಲು ಮತ್ತು ದೂರವಾಣಿ ಬಿಲ್ ಪಾವತಿ ಮೂಲಕ ಪೇ ಆಯ್ಕೆ ಇದೆ ಮೊಬೈಲ್ ಕ್ರೆಡಿಟ್ ಬಳಸಲು ಆಯ್ಕೆಯನ್ನು ರೊಕ್ಕ ಸ್ಲಾಟ್ಗಳು ಮತ್ತು ಮೊಬೈಲ್ ...
ನಿಮ್ಮ ಖಾತೆಗೆ ಹಣವನ್ನು ಇರಿಸುವುದರೊಂದಿಗೆ ಆಯ್ಕೆ ಮಾಡಬಹುದು ವಿವಿಧ ಬ್ಯಾಂಕಿಂಗ್ ವಿಧಾನಗಳಿವೆ. ಕೆಳಗಿನಂತೆ ಆನ್ಲೈನ್ ಸ್ಲಾಟ್ಗಳು ಪಾವತಿ ಉದ್ದೇಶ ಕೆಲವು ನಮೂದಿಸಲಾಗಿದೆ ಮಾಡಬಹುದು:
ವೀಸಾ ಕಾರ್ಡ್
ಮಾಸ್ಟರ್ ಕಾರ್ಡ್
ಸ್ಲಾಟ್ಗಳು ಕೇವಲ £ 10 ರಿಂದ Coinfalls ಕ್ಯಾಸಿನೋದಲ್ಲಿ ಫೋನ್ ಬಿಲ್ ಕ್ರೆಡಿಟ್ ಆಟಗಳು ಪೇ ಕನಿಷ್ಠ ಠೇವಣಿ
SlotJar ವಿವಿಧ ಒಪ್ಪಿತ ವಾಪಸಾತಿ ವಿಧಾನಗಳು ಅನುಸರಿಸಿ ನಿಮ್ಮ ಗೆಲುವಿನ ಹಿಂದಕ್ಕೆ ತೆಗೆದುಕೊಳ್ಳಬಹುದು ಎಷ್ಟು ದಿನಗಳ ತೋರಿಸುವ ಒಂದು ತಿಳಿವಳಿಕೆ ವಾಪಸಾತಿ ಪುಟ ಆಯೋಜಿಸುತ್ತದೆ. ಗೇಮಿಂಗ್ ಖಾತೆಯಿಂದ ಆನ್ಲೈನ್ ಸ್ಲಾಟ್ಗಳು ಮೂಲಕ ಕೆಲವು ನಿಗದಿತ ನಿಯಮಗಳಿಗೆ ಬೈಠಕ್ ಗೆಲುವಿನ ಮೇಲೆ ಇವೆ. ನಿಮ್ಮ ಖಾತೆಯನ್ನು ಮನ್ನಣೆ ಮಾಡಲಾಗುತ್ತಿದೆ ಬೈಠಕ್ ಗೆಲುವಿನ ಮತ್ತು ಗೆಲುವಿನ ಸಾಮಾನ್ಯವಾಗಿ ನಡುವೆ ತೆ...
ಬಳಕೆದಾರ ಕ್ಯಾಸಿನೊ ತನ್ನ ಗೇಮಿಂಗ್ ಖಾತೆಯಲ್ಲಿ ಬ್ಯಾಂಕ್ ಖಾತೆ ವಿವರಗಳು ಜೊತೆಗೆ ಮೂಲಭೂತ ವಿವರಗಳು ತುಂಬಲು ಅಗತ್ಯವಿದೆ. ಒಮ್ಮೆ ಆಯ್ಕೆ ಪಾವತಿ ಮತ್ತು ನಿವರ್ತನ ಆಯ್ಕೆಯನ್ನು ಅಪ್ಲಿಕೇಶನ್ ಬದಲಾಯಿಸಬಹುದು. ಅತ್ಯಂತ ಜನಪ್ರಿಯ ಆಟಗಳು ಅತ್ಯುತ್ತಮ ಮೊಬೈಲ್ ಕ್ಯಾಸಿನೊ ಬಗ್ಗೆ ಹೆಚ್ಚು ಯಾವುದೇ ಠೇವಣಿ ಸೈಟ್ಗಳು ಹಾಗೂ ತಿಳಿಯಿರಿ ದೊಡ್ಡ ಗೆಲ್ಲುವ ಇವೆ. £ 5 ಉಚಿತ ಬೋನಸ್ SlotJar ಸೇರಿ ಮತ್ತು ನಿಜ...
ತಲೆಮರೆಸಿಕೊಂಡಿದ್ದವನ ಬಂಧನ | Prajavani
ತಲೆಮರೆಸಿಕೊಂಡಿದ್ದವನ ಬಂಧನ
Published: 01 ಆಗಸ್ಟ್ 2019, 17:03 IST
Updated: 01 ಆಗಸ್ಟ್ 2019, 17:03 IST
ಮಂಗಳೂರು: ಕಸಾ ಬೆಂಗರೆಯಲ್ಲಿ ಪೊಲೀಸರ ಮೇಲೆ ಕಾರು ಚಲಾಯಿಸಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಸಬ ಬೆಂಗರೆ ನಿವಾಸಿ ಮೊಯಿದ್ದೀನ್ ಆದಿಲ್ (22) ಎಂಬಾತನನ್ನು ಪಣಂಬೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
2017ರ ಜುಲೈ ತಿಂಗಳಿನಲ್ಲಿ ಕಸಬಾ ಬೆಂಗರೆಯಲ್ಲಿ ಆದಿಲ್‌ ಪೊಲೀಸರ ಮೇಲೆ ಕಾರು ಚಲಾಯಿಸಿ ಕೊಲೆ ಮಾಡಲು ಯತ್ನಿಸಿದ್ದ. ನ್ಯಾಯಾಲಯ ಈತನ ಬಂಧನಕ್ಕೆ ವಾರೆಂಟ್‌ ಹೊರಡಿಸಿತ್ತು. ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ. ಬುಧವಾರ ಕಸಬಾ ಬೆಂಗರೆಯಲ್ಲಿ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಂಗಳೂರು ಉತ್ತರ ವಿಭಾಗದ ಸಹಾಯಕ ಎಸಿಪಿ ಶ್ರೀನಿವಾಸ ಗೌಡ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಠಾಣೆ ಇನ್‌ಸ್ಪೆಕ್ಟರ್‌ ಅಜ್ಮತ್ ಆಲಿ, ಸಬ್‌ ಇನ್‌ಸ್ಪೆಕ್ಟರ್‌ ಉಮೇಶ್ ಕುಮಾರ್ ಎಂ.ಎನ್., ಕಾನ್‌ಸ್ಟೆಬಲ್‌ಗಳಾದ ಶೈಲೇಂದ್ರ ಕೆ. ಮತ್ತು ಭರತ್ ಪಾಲ್ಗೊಂಡಿದ್ದರು.
"ಮಲೆನಾಡಿನ ತಿರುಪತಿ' ಅರುಣಗಿರಿ | Udayavani – ಉದಯವಾಣಿ
Monday, 25 Oct 2021 | UPDATED: 03:56 PM IST
"ಮಲೆನಾಡಿನ ತಿರುಪತಿ' ಅರುಣಗಿರಿ
ಪ್ರದಕ್ಷಿಣೆ - ಅರುಣಗಿರಿ, ತೀರ್ಥಹಳ್ಳಿ ತಾ.
Team Udayavani, Sep 7, 2019, 2:53 PM IST
ಸುತ್ತಲೂ ಹಸಿರಿನ ಗದ್ದೆ, ದಟ್ಟ ಕಾಡು, ಜುಳು ಜುಳು ಹರಿಯುವ ಹೊಳೆ, ಅದರ ನಡುವೆಯೊಂದು ಬೆಟ್ಟ. ಆ ಬೆಟ್ಟದ ಮೇಲೆ ಶ್ರೀ ಲಕ್ಷ್ಮಿವೆಂಕಟೇಶ್ವರನ ಸನ್ನಿಧಾನ. ತೀರ್ಥಹಳ್ಳಿ ತಾಲೂಕಿನ ಆರಗದ ಅರುಣಗಿರಿಯ ಈ ದೇಗುಲ "ಮಲೆನಾಡಿನ ತಿರುಪತಿ' ಅಂತಲೇ ಪ್ರಸಿದ್ಧಿ. ವಿಜಯನಗರದ ಅರಸರು ಮತ್ತು ನಂತರ ಆಳ್ವಿಕೆ ಮಾಡಿದ, ಕೆಳದಿ ಅರಸರ ದೈವಿಕ ಶಕ್ತಿಕೇಂದ್ರ ಅಂತಲೇ ಇದು ಬಿಂಬಿತವಾಗಿತ್ತು.
ಅರುಣ ಮಹರ್ಷಿಗಳು ಇಲ್ಲಿನ ಗುಡ್ಡದಲ್ಲಿ ಬಹುಕಾಲ ತಪಸ್ಸನ್ನಾಚರಿಸಿ, ಶ್ರೀಮನ್ನಾರಾಯಣನ ದರ್ಶನ ಪಡೆದಿದ್ದರು ಎಂಬ ಪ್ರತೀತಿ ಇದೆ. ಅರುಣ ಮಹರ್ಷಿಗಳ ತಪೋ ಭೂಮಿಯಾದ ಕಾರಣ ಈ ಕ್ಷೇತ್ರ "ಅರುಣಗಿರಿ' ಅಂತಲೇ ಪ್ರಸಿದ್ಧಿ ಪಡೆಯಿತು. "ಅಣ್ಣಿಗಿರಿ', "ಹಣ್ಣಿಗಿರಿ', "ಅಣ್ಣಯ್ಯನಗಿರಿ' ಅಂತಲೂ ಈ ಬೆಟ್ಟಕ್ಕೆ ಕರೆಯುತ್ತಾರೆ.
ವಿಜಯನಗರದ ಅರಸರು ಇಲ್ಲಿ ವಿಶೇಷ ಪೂಜೆ ನಡೆಸಿ, ದಾನ ದತ್ತಿ ನೀಡಿದ ಉಲ್ಲೇಖಗಳಿವೆ. ಕೆಳದಿ ಅರಸರು, ಬಿದನೂರು ಮತ್ತು ಕವಲೇದುರ್ಗವನ್ನು ಆಳುವಾಗ, ದಿಗ್ವಿಜಯ ಪ್ರಾಪ್ತಿಯ ನಂತರ ಇಲ್ಲಿಗೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸುತ್ತಿದ್ದರಂತೆ. ದೇವರ ಸೇವೆ ಭೂದಾನ, ಗೋದಾನ, ಅರ್ಚಕರ ನಿವಾಸ ನಿರ್ಮಾಣ, ಧ್ವಜಸ್ತಂಭ ಸ್ಥಾಪನೆ ಇತ್ಯಾದಿ ಹರಕೆ ಸೇವೆ ಸಲ್ಲಿಸಿದ್ದರು ಎಂಬ ಪ್ರತೀತಿ ಇದೆ.
ದೇಗುಲದ ಬಲಭಾಗದ ಬಂಡೆಯಲ್ಲಿ ಪಾದಗಳ ಗುರುತಿದ್ದು, ಇದನ್ನು "ದೇವರು ದಂಡ ಊರಿದ ಸ್ಥಳ' ಎಂದು ನಂಬಿ, ಭಕ್ತರು ಪೂಜಿಸುತ್ತಾರೆ. ದೇಗುಲ ತಲುಪಲು ತಿರುಪತಿಯಂತೆ ಇಲ್ಲಿಯೂ 960 ಮೆಟ್ಟಿಲುಗಳಿವೆ. ಈ ಬೆಟ್ಟದ ಕೆಳಭಾಗದಲ್ಲಿ ಸಿದ್ಧರ ಗುಹೆಯಿದೆ. ಇಲ್ಲಿ ಹಲವಾರು ಋಷಿ- ಮುನಿಗಳು ತಪಸ್ಸುಗೈದಿದ್ದಾರೆ ಎನ್ನಲಾಗುತ್ತದೆ. ಬಂಡೆಗಳ ಮೇಲಿರುವ ಋಷಿ-ಮುನಿಗಳ, ದೇವತೆಗಳ ಮತ್ತು ಶಾಸನದ ಕುರುಹುಗಳು ಶಿಥಿಲಾವಸ್ಥೆ ...
ಶ್ರಾವಣ, ಇಲ್ಲಿ ವಿಶೇಷ ಮಾಸ. ಪ್ರತಿ ಶನಿವಾರ ದೇವರಿಗೆ ಸರ್ವಾಲಂಕಾರ ಪೂಜೆ ನಡೆಯುತ್ತದೆ. ದಸರಾ, ದೀಪಾವಳಿ, ಯುಗಾದಿಗಳಂದು ವಿಶೇಷ ಅಭಿಷೇಕ, ಪೂಜೆ ಮತ್ತು ಮಹಾ ನೈವೇದ್ಯ ಸಮರ್ಪಣೆ ನಡೆಯುತ್ತದೆ. ವಿವಾಹ, ಪುತ್ರ ಸಂತಾನ, ವಿದ್ಯೆ, ಉದ್ಯೋಗ, ಸರ್ವದುರಿತ ನಿವಾರಣೆ- ಇತ್ಯಾದಿಗಳ ಸಂಬಂಧ ಇಲ್ಲಿ ಪ್ರಾರ್ಥಿಸಲು, ಬಹಳ ದೂರದಿಂದ ಭಕ್ತರು ಆಗಮಿಸುತ್ತಾರೆ. ಪ್ರತಿವರ್ಷ ಅಕ್ಷಯ ತದಿಗೆಯಂದು ಮಹಾ ರಥೋತ್ಸವ ವ...
ಅವರ ಬಳಿ ಹಣ, ಅಧಿಕಾರವಿದೆ : ಸರ್ಜಾಗೆ ಸೆಡ್ಡು ಹೊಡೆದ ಸಂಯುಕ್ತ ಹೆಗ್ಡೆ! | actress samyuktha hegde reaction about sruthi hariharan's allegation against arjun sarja - Kannada Filmibeat
| Updated: Monday, October 22, 2018, 14:31 [IST]
#metoo: ಶ್ರುತಿ ಹರಿಹರನ್ ಬೆಂಬಲಕ್ಕೆ ನಿಂತ ಸಂಯುಕ್ತಾ ಹೆಗಡೆ | FILMIBEAT KANNADA
ಸ್ಯಾಂಡಲ್ ವುಡ್ ನಲ್ಲಿ ಈಗ ಎರಡು ಗ್ಯಾಂಗ್ ಸೃಷ್ಟಿಯಾಗಿವೆ. ಒಂದು ಗುಂಪು ನಟ ಅರ್ಜುನ್ ಸರ್ಜಾ ಅವರಿಗೆ ಬೆಂಬಲ ಸೂಚಿಸುತ್ತಿದೆ. ಇನ್ನೊಂದು ತಂಡ ನಟಿ ಶ್ರುತಿ ಹರಿಹರನ್ ಅವರಿಗೆ ಸಾಥ್ ನೀಡುತ್ತಿದ್ದಾರೆ.
ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮಾಡಿರುವ ಆರೋಪ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕನ್ನಡದ ನಟಿಯರು ಈ ಬಗ್ಗೆ ಮುಂದೆ ಬಂದು ಮಾತನಾಡುತ್ತಿದ್ದಾರೆ. ಈಗಾಗಲೇ ಸಂಗೀತ ಭಟ್, ನೀತೂ, ಸೋನು ಗೌಡ, ನಿಧಿ ಸುಬ್ಬಯ್ಯ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಇದೀಗ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಈ ಘಟನೆಯ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಶ್ರುತಿ ಹರಿಹರನ್ ಪರ ನಿಂತ ಅವರು ಅರ್ಜುನ್ ಸರ್ಜಾ ವಿರುದ್ಧ ಮಾತನಾಡಿದ್ದಾರೆ.
ನಮ್ಮನ್ನು ಟೀಕಿಸುತ್ತಾರೆ, ಟ್ರೋಲ್ ಮಾಡುತ್ತಾರೆ
''ನಮ್ಮ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ಹೆದರುವ ಸಂಧರ್ಭದಲ್ಲಿ ಶ್ರುತಿ ಹರಿಹರನ್ ಅವರು ಧೈರ್ಯ ಮಾಡಿ ಇಂತಹ ವಿಷಯದ ಬಗ್ಗೆ ಮಾತನಾಡಿದ್ದಾರೆ. ಆದರೆ, ನಾವು ''ನಟಿ''ಯರಾದ ಕಾರಣ ನಮ್ಮನ್ನು ಟೀಕಿಸುತ್ತಾರೆ, ಟ್ರೋಲ್ ಮಾಡುತ್ತಾರೆ.'' - ಸಂಯುಕ್ತ ಹೆಗ್ಡೆ, ನಟಿ
ಹಣ, ಅಧಿಕಾರ, ಚಿತ್ರರಂಗದ ಬೆಂಬಲ
''ಶ್ರುತಿಯ ಮೇಲೆ ಎಲ್ಲರೂ ಸಿಟ್ಟಾಗಿದ್ದಾರೆ. ಅದು ಸಹಜ. ಏಕೆಂದರೆ, ಸರ್ಜಾ ಕುಟುಂಬಕ್ಕೆ ಒಂದು ಇತಿಹಾಸವಿದೆ. ಅವರಲ್ಲಿ ಹಣ, ಅಧಿಕಾರ, ಚಿತ್ರರಂಗದ ಬೆಂಬಲ ಎಲ್ಲವೂ ಇದೆ. ನಾವು ಯಾವುದೇ ಹಿನ್ನಲೆ ಇಲ್ಲದ ಮಹಿಳೆಯರು. ಆದ್ದರಿಂದ ನಾವು ಸೋಲುತ್ತಿದ್ದೇವೆ.'' - ಸಂಯುಕ್ತ ಹೆಗ್ಡೆ, ನಟಿ
ಗೌರವವನ್ನಾದರೂ ನೀಡಿರಿ
''ಸಿನಿಮಾದಲ್ಲಿ ನಟಿಯರಿಗೆ ನಾಯಕರಿಗೆ ಸಮಾನವಾದ ಸಂಭಾವನೆ ಸಿಗುವುದಿಲ್ಲ, ಗೌರವವನ್ನಾದರೂ ನೀಡಿರಿ. ನಾವು ಗೌರವವನ್ನು ಬಿಟ್ಟು ಬೇರೆ ಏನ್ನನ್ನೂ ನಿರೀಕ್ಷಿಸುವುದಿಲ್ಲ. ನಿಮಗೆ ಒಬ್ಬ ನಟಿಯನ್ನು ಬ್ಯಾನ್ ಮಾಡಿ ಹೊಸ ನಟಿಯನ್ನು ತರುವುದು ಸುಲಭ.'' - ಸಂಯುಕ್ತ ಹೆಗ್ಡೆ, ನಟಿ
ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಬೇಕು
''ಅವರ (ಶ್ರುತಿ) ಬಗ್ಗೆ ಮಾತನಾಡುತ್ತಿರುವ ಎಲ್ಲರೂ ಅವರ ಸ್ಥಾನದಲ್ಲಿ ನಿಮ್ಮ ಮನೆಯ ಹೆಣ್ಣು ಮಕ್ಕಳು ಇದ್ದಿದ್ದರೆ ಏನು ಮಾಡುತ್ತಿದ್ರಿ ಯೋಚಿಸಿ. ಇದೇ ರೀತಿ ಮಾಡುತ್ತಿದ್ರಾ, ಖಂಡಿತ ಇಲ್ಲ. ಇದು ನಾವೆಲ್ಲ ಒಗ್ಗಟ್ಟಾಗಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತು ಹೊರಾಡುವ ಸಮಯ. ಹಾಗೆ ಮಾಡದೆ ಹೋದರೆ ಈ ಇಡೀ ಅಭಿಯಾನವೇ ಸೋತಂತೆ.
ಶ್ರುತಿಗೆ ನಟಿಯರ ಬೆಂಬಲ
ಸಂಯುಕ್ತ ಹೆಗ್ಡೆ ಜೊತೆಗೆಯಲ್ಲಿ ನಟಿ ಶ್ರುತಿ ಹರಿಹರನ್ ಅವರಿಗೆ ಕನ್ನಡದ ಅನೇಕ ನಟಿಯರ ಬೆಂಬಲ ಸಿಕ್ಕಿದೆ. ಸಂಗೀತ ಭಟ್, ನೀತೂ, ಸೋನು ಗೌಡ, ನಿಧಿ ಸುಬ್ಬಯ್ಯ, ಅವಂತಿಕಾ ಶೆಟ್ಟಿ ಸೇರಿದಂತೆ ಸಾಕಷ್ಟು ಜನರು ಶ್ರುತಿ ಪರ ಮಾತನಾಡಿದ್ದಾರೆ.
Read more about: me too samyuktha hegde sruthi hariharan arjun sarja sandalwood ಸಂಯುಕ್ತ ಹೆಗ್ಡೆ ಅರ್ಜುನ್ ಸರ್ಜಾ ಶೃತಿ ಹರಿಹರನ್ ಮೀ ಟೂ ಸ್ಯಾಂಡಲ್ ವುಡ್
Kannada actress Samyuktha Hegde reaction about Sruthi Hariharan's allegation. Kannada actress Sruthi Hariharan has accused actor Arjun Sarja.
ಭಾರತೀಯನ ಮೊಬೈಲ್ ಖರೀದಿಯ ಸರಾಸರಿ ಸಾಮರ್ಥ್ಯ ಎಷ್ಟು ಗೊತ್ತಾ? | Average selling price of a smartphone in India now decreased
ಈ ತ್ರೈಮಾಸಿಕದಲ್ಲಿ ಒಟ್ಟಾರೆ ಮಾರುಕಟ್ಟೆಯಲ್ಲಿ ಶೇ.4ರಷ್ಟು ಕುಸಿತವಾಗಿದೆ. ಕಾರೊನಾ ಸೋಂಕು, ಲಾಕ್‌ಡೌನ್ ಹೇರಿಕೆಯ ಪರಿಣಾಮವಿದು. ಆದರೆ ಮುಂಬರುವ ತ್ರೈಮಾಸಿಕಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎನ್ನುತ್ತದೆ ವರದಿ.
Bengaluru, First Published Nov 10, 2020, 4:55 PM IST
ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಗಮನದಲ್ಲಿಟ್ಟಕೊಂಡು ಹೇಳುವುದಾದರೆ, ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆ ತುಂಬ ದೊಡ್ಡದಾದದ್ದು. ಹಾಗಾಗಿಯೇ ಅನೇಕ ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾಡಲು ಮುಂದಾಗುತ್ತಿವೆ. ಭಾರತೀಯ ಮಾರುಕಟ್ಟೆಯಲ್ಲಿ ಒಂದು ಫೋನ್‌ನಿ ಸರಾಸರಿ ಮಾರಾಟ ಬೆಲೆ ಇದೀಗ ಶೇ.2ರಷ್ಟು ಕುಸಿತವಾಗಿದ್ದು, 11,500 ರೂಪಾಯಿಗೆ ಬಂದು ನಿಂತಿದೆ.
ಐಡಿಸಿ ರಿಪೋರ್ಟ್‌ ಈ ಮಾಹಿಯನ್ನು ಹೊರ ಹಾಕಿದೆ. ಜೊತೆಗೆ ಶೇ.84ರಷ್ಟು ಇದೀಗ 15,000 ರೂ. ಶ್ರೇಣಿಯಲ್ಲಿದ್ದು, ಶೇ.29ರಷ್ಟು ರೂಪಾಯಿ 7000ಗಿಂತಲೂ ಕಡಿಮೆಯಾಗಿವೆ ಎನ್ನುತ್ತದೆ ವರದಿ. ನಾವೇನು ಮಿಡ್ ರೇಂಜ್ ಅಂತಾ ಹೇಳ್ತವಿ, ಅಂದರೆ, 15000ರಿಂದ 37000 ರೂ.ವರೆಗಿನ ಫೋನ್‌ಗಳು ಮಾರಾಟದಲ್ಲಿ ಕುಸಿತವನ್ನು ಕಾಣುತ್ತಿದ್ದೇವೆ. ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಬಹುತೇಕರ ಆದಾಯಕ್ಕೆಕತ್ತರಿ ಬಿದ್...
ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಿದೆ ವರದಿ.
ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ (37000 ಡಾಲರ್ ಮತ್ತು ಅದಕ್ಕಿಂತ ಮೇಲ್ಪಟ್ಟು) ಆಪಲ್ ಅತ್ಯುತ್ತಮ ಬೆಳವಣಿಗೆ ಕಂಡಿದೆ. ಅಂದರೆ ಶೇ. 91ರಷ್ಟು ಅದು ಬೆಳವಣಿಗೆಯನ್ನು ದಾಖಲಿಸಿದೆ ಎನ್ನುತ್ತದೆ ವರದಿ. ಇದರ ಜೊತೆಗೆ ಇದೇ ಪ್ರಮಾಣದಲ್ಲಿ ಸ್ಯಾಮ್ಸಂಗ್, ಒನ್‌ಪ್ಲಸ್‌ನಂಥ ಬ್ರ್ಯಾಂಡುಗಳು ಕೂಡ ತಮ್ಮ ಪಾಲು ಹೊಂದಿವೆ. ಈ ವಿಭಾಗದಲ್ಲಿ ಈ ಮೂರು ಬ್ರ್ಯಾಂಡು ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಿವೆ. ಆಪಲ್ ಕೂಡ ...
ಐಡಿಸಿಯು ಕನಿಷ್ಠ ಮತ್ತು ಮಿಡ್ ರೇಂಜ್ ಸ್ಮಾರ್ಟ್‌ಫೋನ್‌ಗಳ ಮಾರಾಟವು ಹೆಚ್ಚಿನ ಪ್ರಮಾಣದಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯುವುದನ್ನು ಮುಂದುವರಿಸಬಹುದು. ಮಂದಿನ ಕೆಲವು ತ್ರೈಮಾಸಿಕದಲ್ಲಿ ಬಳಕೆದಾರರ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಸ್ಮಾರ್ಟ್‌ಫೋನ್‌ಗಳ ಅಪ್‌ಗ್ರೇಡ್ ಸಾಧ್ಯವಾಗಬಹುದು. ಜೊತೆಗೆ 5ಜಿ ಆಧರಿತ ಸಾಧನಗಳು ಮಾರಾಟವು ಹೆಚ್ಚಬಹುದು. 5ಜಿ ಫೋನ್‌ಗಳ ಆಫರ್ ಮತ್ತು 200-500 ಡಾಲರ್ ಬೆಲೆ...
ಮೂರನೇ ತ್ರೈಮಾಸಿಕದಲ್ಲಿ ಆನ್‌ಲೈನ್ ಚಾನೆಲ್ ಪಾಲು ಸಾರ್ವಕಾಲಿಕ ಗರಿಷ್ಠ ಶೇಕಡಾ 48 ಕ್ಕೆ ತಲುಪಲು ಇಟೈಲರ್‌ಗಳು ಕಾರಣವಾಗಿದ್ದು, ಉತ್ತಮ ರೀತಿಯಲ್ಲಿ ಶೇಕಡಾ 24 ರಷ್ಟು ಬೆಳೆಯುತ್ತಿದೆ. ಇ-ಟೈಲರ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಪ್ರಚಾರಗಳು ಮತ್ತು ಮಾರಾಟದ ಘಟನೆಗಳಿಂದ ಪ್ರೇರೇಪಿಸಲ್ಪಟ್ಟಿದ್ದರಿಂದ ಹಕರು ಆನ್‌ಲೈನ್ ಖರೀದಿಗೆ ಆದ್ಯತೆ ನೀಡಿದರು. ಇದರ ಪರಿಣಾಮವಾಗಿ ಇಷ್ಟೊಂದು ಬೆಳವಣಿಗೆ ಸಾಧ್ಯವಾಗುತ್...
ವರ್ಷದ ಮೊದಲ ಅರ್ಧ ಅವಧಿಯಲ್ಲಿ ಎದುರಾದ ಸವಾಲುಗಳ ಮಧ್ಯೆಯೂ ಆಫ್‌ಲೈನ್ ಚಾನೆಗಳು ಶೇ.11ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ. ಆಫ್‌ಲೈನ್ ಚಾನೆಲ್‌ಗಳಲ್ಲಿ ಹೊಸ ಸ್ಮಾರ್ಟಫೋನ್ ಬಿಡುಗಡೆಯು ಈ ಅವಧಿಯಲ್ಲಿ ತಡೆಯೊಡ್ಡಿದ್ದರಿಂದ ಅಂದುಕೊಂಡು ಬೆಳವಣಿಗೆ ಸಾಧ್ಯವಾಗಿಲ್ಲ ಎಂದು ಐಡಿಸಿ ತನ್ನ ವರದಿಯಲ್ಲಿ ತಿಳಿಸಿದೆ.
ಒರಿಜನಲ್ ಇಕ್ವಿಪ್‌ಮೆಂಟ್ ಮ್ಯಾನುಫ್ಯಾಕ್ಚುರ್ಸ್(ಒಇಎಂಎಸ್) ಅವರು ಕಡಿಮೆ ಬೆಲೆ ಸ್ಮಾರ್ಟ್ ಫೋನ್‌ಗಳನ್ನು ಲಾಂಚ್ ಮಾಡಿದ್ದು, ಕ್ವಾಡಕಾಮ್ ಕ್ಯಾಮರಾ, ಹೈ ಮೆಗಾಪಿಕ್ಸೆಲ್ ಕ್ಯಾಮೆರಾ(48 ಮೆಗಾಪಿಕ್ಸೆಲ್ ಮತ್ತು ಅದಕ್ಕಿಂತ ಮೇಲ್ಪಟ್ಟು), ಹೆಚ್ಚು ಸ್ಟೋರೇಜ್(64 ಜಿಬಿ ಮತ್ತು ಅದಕ್ಕಿಂತ ಮೇಲ್ಪಟ್ಟು), ದೊಡ್ಡದಾರ ಬ್ಯಾಟರಿಗಳು(5000 ಎಂಎಎಚ್ ಮತ್ತು ಅದಕ್ಕಿಂತ ಮೇಲ್ಪಟ್ಟು) ಇತ್ಯಾದಿ ಫೀಚರ್‌ಗಳು ಹೆಚ...
ಒಟ್ಟಾರೆ ಮೂರನೇ ತ್ರೈಮಾಸಿಕ ಅವಧಿಯಲ್ಲಿ 2.5 ಕೋಟಿ ಫೀಚರ್ ಮೊಬೈಲ್ ಫೋನ್‌ಗಳನ್ನು ಉತ್ಪಾದಿಸಲಾಗಿದ್ದು, ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಇದರಲ್ಲಿ ಶೇ.30ರಷ್ಟು ಕೊರತೆಯಾಗಿದೆ. ಇದರ ಪರಿಣಾಮವಾಗಿ ಒಟ್ಟಾರೆ ಮೊಬೈಲ್ ಮಾರುಕಟ್ಟೆ ಶೇ.4ರಷ್ಟು ಕುಸಿತವಾಗಿದೆ. ಇನ್ನು ಫೀಚರ್‌ ಫೋನ್‌ಗಳ ಪಾಲು ಶೇ.31ರಷ್ಟಿದೆ ಎಂದು ಹೇಳಬಹುದು.
ಕೊರೊನಾ ಸೋಂಕು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಕಷ್ಟು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಗ್ರೇಡ್ ಮಾಡಲು ಹೋಗುತ್ತಿಲ್ಲ. ಇರುವ ಫೋನ್‌ಗಳಲ್ಲಿ ಸಂತೃಪ್ತಿ ಪಡುತ್ತಿದ್ದಾರೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಫೋನ್‌ಗಳು ಮಾರಾಟ ಕಂಡಿಲ್ಲ. ಮುಂದಿನ ತ್ರೈಮಾಸಿಕಗಳಲ್ಲಿ ಈ ಪರಿಸ್ಥಿತಿ ಸುಧಾರಿಸಬಹುದು.
ಚಿತ್ರೋದ್ಯಮದಲ್ಲಿ ಕಾಲೆಳೆಯುವವರೇ ಜಾಸ್ತಿ: ಚಂದ್ರು | Film Prem Kahani | R Chandru | Film Maley | Actor Ajay | Actress Sheela | ಚಿತ್ರೋದ್ಯಮದಲ್ಲಿ ಕಾಲೆಳೆಯುವವರೇ ಜಾಸ್ತಿ: ಚಂದ್ರು - Kannada Filmibeat
| Published: Friday, September 25, 2009, 15:39 [IST]
ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಪ್ರೇಮ್ ಕಹಾನಿ'. ಬಿಡುಗಡೆಯಾಗಿ ಕೆಲವು ದಿನಳಷ್ಟೇ ಆಗಿದೆ. ಆದರೆ ಪ್ರೇಮ್ ಕಹಾನಿ ನಿರೀಕ್ಷಿಸಿದ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತ್ತಿಲ್ಲ ಎಂಬ ಮಾತು ಚಿತ್ರೋದ್ಯಮದಲ್ಲಿ ಕೇಳಿಬರುತ್ತಿದೆ. ಆದರೆ ಈ ಮಾತುಗಳನ್ನು ಚಿತ್ರದ ನಿರ್ದೇಶಕ ಆರ್ ಚಂದ್ರು ಸಾರಾಸಗಟಾಗಿ ತಳ್ಳಿ ಹಾಕುತ್ತಾರೆ.
''ಚಿತ್ರೋದ್ಯಮ ಪ್ರೇಮ್ ಕಹಾನಿಯನ್ನು ಪ್ಲಾಪ್ ಚಿತ್ರ ಎಂದು ತೀರ್ಮಾನಿಸಿದೆ. ನಾನು ಈ ಹಿಂದೆ ತಮ್ಮ ಚಿತ್ರ 25 ವಾರ ಪೂರೈಸುತ್ತೆ ಎಂದು ಹೇಳಿದ್ದೆ. ಈ ಮಾತಿಗೆ ನಾನು ಈಗಲೂ ಬದ್ಧ. ತಮ್ಮ ಚಿತ್ರ ಖಂಡಿತ ಈಗುರಿಯನ್ನು ತಲುಪುತ್ತದೆ. ಚಿತ್ರವನ್ನು ಯಶಸ್ವಿಯತ್ತ ಕೊಂಡೊಯ್ಯುತ್ತೇನೆ'' ಎಂದು ಚಂದ್ರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫ್ಲಾಪ್ ಚಿತ್ರ ಮಾಡುತ್ತೇನೆ ಎಂದು ಯಾವ ನಿರ್ದೇಶಕನೂ ಹೇಳುವುದಿಲ್ಲ. ಸಂದೇಶಾತ್ಮಕ ಚಿತ್ರವೊಂದನ್ನುನೀಡಿದ್ದೇನೆ. ಪ್ರೇಕ್ಷಕರಿಗೆ ಅಸಲಿ ಪ್ರೇಮ ಕಥೆಯನ್ನು ಕೊಟ್ಟಿದ್ದೇನೆ. ಚಿತ್ರದ ಉತ್ತಮ ಅಂಶಗಳ ಬಗ್ಗೆ ನಾನೇ ಮಾತನಾಡದಿದ್ದರೆ ಪ್ರೇಕ್ಷಕ ಚಿತ್ರಮಂದಿರಕ್ಕೆ ಹೇಗೆ ಬರುತ್ತಾನೆ? ಚಿತ್ರೋದ್ಯಮದಲ್ಲಿ ಕಾಲೆಳೆಯುವವರೇ ಹೆಚ್ಚಾಗಿದ್ದಾರೆ ಎಂದು ಚಂದ್ರು ಪ್ರತಿಕ್ರಿಯಿಸಿದ್ದಾರೆ.
ನನ್ನ ಚಿತ್ರ ಬಿಡುಗಡೆಯಾದ ದಿನವೇ ಫ್ಲಾಪ್ ಚಿತ್ರ ಎಂದು ಹಣೆಪಟ್ಟಿ ಕಟ್ಟಿದ್ದರು. ನನಗೆ ಇದರಿಂದ ನಿಜಕ್ಕೂ ನೋವುಂಟಾಯಿತು. ತಮ್ಮ ಮುಂದಿನ ಚಿತ್ರ 'ಮಳೆ'ಗೆ ಯಾವುದೇ ಪ್ರಚಾರ ಕೊಡಬಾರದು ಎಂದು ತೀರ್ಮಾನಿಸಿದ್ದೇನೆ. ಚಿತ್ರ ಮುಗಿಯುವವರೆಗೂ ನಾನು ಏನೂ ಮಾತನಾಡುವುದಿಲ್ಲ ಎಂದು ಚಂದ್ರು ಗಂಭೀರವಾಗಿ ಉತ್ತರಿಸಿದ್ದಾರೆ.
Read more about: ajay ಅಜಯ್ ಇಳಯರಾಜ ilayaraja ಮಳೆ ರಂಗಾಯಣ ರಘು rangayana raghu ಪ್ರೇಮ್ ಕಹಾನಿ ಶೀಲಾ prem kahani sheela r chandru ಆರ್ ಚಂದ್ರು maley
ಮೌಲಾನಾ ಅಬುಲ್ ಕಲಾಂ ಆಜಾದ್ ಜನ್ಮದಿನವಾದ ಇಂದು ರಾಷ್ಟ್ರೀಯ ಶಿಕ್ಷಣ ದಿನಾಚರಣೆ | News13
News13 > ಅಂಕಣಗಳು > ಯುವಧ್ವನಿ > ಮೌಲಾನಾ ಅಬುಲ್ ಕಲಾಂ ಆಜಾದ್ ಜನ್ಮದಿನವಾದ ಇಂದು ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಮೌಲಾನಾ ಅಬುಲ್ ಕಲಾಂ ಆಜಾದ್ ಜನ್ಮದಿನವಾದ ಇಂದು ರಾಷ್ಟ್ರೀಯ ಶಿಕ್ಷಣ ದಿನಾಚರಣೆ
Monday, November 11th, 2019 ಯುವಧ್ವನಿ Admin
ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ, ಸ್ವಾತಂತ್ರ್ಯ ಹೋರಾಟಗಾರ, ವಿದ್ವಾಂಸ ಮತ್ತು ಖ್ಯಾತ ಶಿಕ್ಷಣ ತಜ್ಞ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆಯನ್ನು ಪ್ರತಿವರ್ಷ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ. ಮೌಲಾನಾ ಆಜಾದ್ ಸ್ವತಂತ್ರ ಭಾರತದ ಶಿಕ್ಷಣ ವ್ಯವಸ್ಥೆಯ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು. ರಾಷ್ಟ್ರೀಯ ಶಿಕ್ಷಣ ದಿನವಾದ ಇಂದು, ರಾಷ್ಟ್ರ ನಿರ್ಮಾಣ, ...
"ಶಾಲೆಗಳು ದೇಶದ ಭವಿಷ್ಯದ ನಾಗರಿಕರನ್ನು ಉತ್ಪಾದಿಸುವ ಪ್ರಯೋಗಾಲಯಗಳಾಗಿವೆ" ಎಂದು ಮೌಲಾನಾ ಆಜಾದ್ ಹೇಳಿದ್ದರು.
ಇತಿಹಾಸಕಾರರ ಪ್ರಕಾರ, ಮೌಲಾನಾ ಆಜಾದ್ ಅವರು ಕೈಗಾರಿಕೀಕರಣಕ್ಕೆ ಅತ್ಯಗತ್ಯವಾದ ಮತ್ತು ಜ್ಞಾನ ಆಧಾರಿತ ಕೈಗಾರಿಕೆಗಳ ಇತ್ತೀಚಿನ ಹೊರಹೊಮ್ಮುವಿಕೆಗೆ ಆಧಾರವಾಗಿರುವ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಮತ್ತು ವೈಜ್ಞಾನಿಕ ಸಂಶೋಧನೆಗೆ ಅಡಿಪಾಯವನ್ನು ಹಾಕಿದ್ದಾರೆ.
ಶಿಕ್ಷಣದ ಪ್ರಾಥಮಿಕ ಉದ್ದೇಶದ ಬಗ್ಗೆ ಅವರಿಗೆ ಸ್ಪಷ್ಟತೆ ಇತ್ತು. ಕೇಂದ್ರ ಸಲಹಾ ಮಂಡಳಿಯ (ಸಿಬಿಎಸ್‌ಇ) ಮೊದಲ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಅವರು, "ದಾರಿ ತಪ್ಪದಂತೆ ಸಮತೋಲಿತ ಮನಸ್ಸುಗಳನ್ನು ಸೃಷ್ಟಿಸುವುದು ಯಾವುದೇ ವ್ಯವಸ್ಥೆಯ ಪ್ರಾಥಮಿಕ ಗುರಿಯಾಗುತ್ತದೆ" ಎಂದು ಅವರು ಹೇಳಿದ್ದರು.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನುದ್ದೇಶಿಸಿ ಮಾತನಾಡುತ್ತಾ ಒಮ್ಮೆ ಹೀಗೆ ಹೇಳಿದ್ದರು,"ಶಿಕ್ಷಣ ಮಂತ್ರಿಯಾಗಿ ಮೌಲಾನ ಅವರು, ವಸಾಹತುಶಾಹಿ ವ್ಯವಸ್ಥೆಯಿಂದ ಕಾಣೆಯಾದ ಒಂದು ಅಂಶವಾದ ರಾಷ್ಟ್ರೀಯ ಮನೋಭಾವವನ್ನು ಬೆಳೆಸಲು ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವ ಸವಾಲಿನ ಕಾರ್ಯವನ್ನು ಹೊಂದಿದ್ದರು. ಶಿಕ್ಷಣ ಪಠ್ಯಕ್ರಮದಲ್ಲಿ ತರ್ಕಬದ್ಧ ವಿಧಾನ ಮತ್ತು ವಿಚಾರ...
ಅಲ್ಲದೇ ಪ್ರಣಬ್ ಅವರು ಮೌಲಾನಾ ಆಜಾದ್ ಅವರನ್ನು ಶೈಕ್ಷಣಿಕ ನಿರ್ಮಾತೃ ಎಂದು ಬಣ್ಣಿಸಿದ್ದಾರೆ ಮತ್ತು ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇತರ ಸಂಸ್ಥೆಗಳು ಅವರ ದಣಿವರಿಯದ ಪ್ರಯತ್ನಗಳ ಮೂಲವನ್ನು ಹೊಂದಿವೆ ಎಂದು ಹೇಳಿದ್ದಾರೆ.
ಭಾರತದ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ ಅಥವಾ ಐಐಟಿಯಾದ ಐಐಟಿ ಖರಗ್ಪುರವನ್ನು ಸ್ಥಾಪಿಸಿದ್ದು ಮೌಲಾನಾ ಆಜಾದ್.
"ಭಾರತದಲ್ಲಿ ಸಾಮಾಜಿಕ-ಧಾರ್ಮಿಕ ಮತ್ತು ಸಾಂಸ್ಕೃತಿಕ ಅಂತರ್-ಸಂಪರ್ಕವನ್ನು ಸೃಷ್ಟಿಸಲು ಅವರು ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಲಲಿತ ಕಲಾ ಅಕಾಡೆಮಿ, ಸಂಗೀತ ನಾಟಕ ಅಕಾಡೆಮಿ ಮತ್ತು ಸಾಹಿತ್ಯ ಅಕಾಡೆಮಿಗಳನ್ನೂ ಅವರೇ ಸ್ಥಾಪನೆ ಮಾಡಿದ್ದರು. ಅವರು ಸ್ಥಾಪಿಸಿದ ಸಂಸ್ಥೆಗಳು ಅವರ ದೃಷ್ಟಿಗೆ ಮತ್ತು ಅವರ ದೂರದೃಷ್ಟಿಗೆ ಸಾಕ್ಷಿಯಾಗಿವೆ.
ಅವರು ಸ್ಥಾಪನೆ ಮಾಡಿದ ಇತರ ಸಂಸ್ಥೆಗಳೆಂದರೆ, ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್), ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‌ಐಆರ್).
1888 ರ ನವೆಂಬರ್ 11 ರಂದು ಮೌಲಾನಾ ಅಬುಲ್ ಕಲಾಂ ಅವರ ಜನ್ಮದಿನ. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಸಲುವಾಗಿ ಮೊದಲ ರಾಷ್ಟ್ರೀಯ ಶಿಕ್ಷಣ ದಿನವನ್ನು ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ನವೆಂಬರ್ 11, 2008 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಮೌಲಾನಾ ಆಜಾದ್ ಅವರ ಸ್ಮರಣಾರ್ಥ ಉದ್ಘಾಟಿಸಿದರು.
ಮೌಲಾನಾ ಆಜಾದ್‌ಗೆ ಮರಣೋತ್ತರವಾಗಿ 1992 ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು ನೀಡಲಾಯಿತು.
ರಾಷ್ಟ್ರೀಯ ಶಿಕ್ಷಣ ದಿನದಂದು, ಆರು ದಶಕಗಳ ಹಿಂದೆ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದು ಶಿಕ್ಷಣ ಕ್ಷೇತ್ರದ ಮೇಲೆ ಪರಿಣಾಮ ಬೀರಿದ ಮೌಲಾನಾ ಆಜಾದ್ ಅವರ ಪರಂಪರೆಯನ್ನು ಮುಂದುವರೆಸಲು ಭಾರತೀಯರಾದ ನಾವೆಲ್ಲರೂ ಪಣತೊಡಬೇಕಾಗಿದೆ.
ಅಡ್ಡ ಮತ: ಕಾಂಗ್ರೆಸ್ ತನಿಖೆ | Prajavani
ಅಡ್ಡ ಮತ: ಕಾಂಗ್ರೆಸ್ ತನಿಖೆ
ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಡ್ಡಮತದಾನ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಪಕ್ಷದ ನಿರ್ದೇಶನ ಉಲ್ಲಂಘಿಸಿದ ಶಾಸಕರನ್ನು ಪತ್ತೆಹಚ್ಚಲು ಪರಿಷತ್ ಸದಸ್ಯ ವಿ.ಆರ್.ಸುದರ್ಶನ್ ನೇತೃತ್ವದಲ್ಲಿ ಸಮಿತಿ ರಚಿಸಿದೆ.
-ತಮ್ಮ ಸೋಲಿಗೆ ಸಿದ್ದರಾಮಯ್ಯ ಹೊಣೆ: ಸರಡಗಿ ನೇರ ದೂಷಣೆ
-ಪಕ್ಷದಿಂದ ಉಚ್ಚಾಟನೆ ಇಲ್ಲವೇ ಟಿಕೆಟ್ ನಿರಾಕರಣೆ
-ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದ ಅಲ್ಪಸಂಖ್ಯಾತ ಮುಖಂಡರು
-ಅಡ್ಡ ಮತದಾನ ಪರಿಣಾಮ: ಬಹುಮತಕ್ಕೆ ಎರವಾದ ಸರ್ಕಾರ?
ಅಡ್ಡಮತದಾನದ ಪರಿಣಾಮವಾಗಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹ್ಮದ್ ಸರಡಗಿ ಸೋಲು ಅನುಭವಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಲ್ಪಸಂಖ್ಯಾತ ಸಮುದಾಯದ 30ಕ್ಕೂ ಹೆಚ್ಚು ಮುಖಂಡರು ಮಂಗಳವಾರ ಪಕ್ಷದ ಕಚೇರಿಯಲ್ಲಿ ಸಭೆ ಸೇರಿ ಚರ್ಚಿಸಿದರು. ಪಕ್ಷದ ವಿವಿಧ ಪದಾಧಿಕಾರಿಗಳ ಹುದ್ದೆಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡುವ ಬೆದರಿಕೆಯನ್ನೂ ಹಾಕಿದರು.
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೂಡಲೇ ಮಧ್ಯ ಪ್ರವೇಶಿಸಿ ಅಲ್ಪಸಂಖ್ಯಾತ ಮುಖಂಡರಿಗೆ ಸಮಾಧಾನ ಹೇಳಿದ್ದಾರೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಆಗಿರುವ ನಷ್ಟವನ್ನು ಬೇರೆ ರೂಪದಲ್ಲಿ ತುಂಬಿಕೊಡಲಾಗುವುದು ಎಂದರು.
ಸುದರ್ಶನ್ ನೇತೃತ್ವದ ಸಮಿತಿಗೆ ಮುಖಂಡರಾದ ಅಲ್ಲಂ ವೀರಭದ್ರಪ್ಪ, ಎಚ್.ಕೆ.ಪಾಟೀಲ್, ಬಿ.ಎಲ್.ಶಂಕರ್, ನಜೀರ್ ಅಹಮದ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಶೀಘ್ರ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ. ವರದಿಯ ಆಧಾರದ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಅಡ್ಡಮತದಾನ ಮಾಡಿದವರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಇಲ್ಲವೇ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗುವುದು ...
`ನನ್ನ ಸೋಲಿನ ಪೂರ್ಣ ಹೊಣೆಯನ್ನು ಸಿದ್ದರಾಮಯ್ಯ ಅವರೇ ಹೊರಬೇಕು. ಐವರು ಪಕ್ಷೇತರ ಸದಸ್ಯರ ಮತ ಹಾಕಿಸುವ ಜವಾಬ್ದಾರಿ ಅವರದೇ ಆಗಿತ್ತು~ ಎಂದು ಅನಿರೀಕ್ಷಿತ ಸೋಲಿನಿಂದ ಬೇಸತ್ತ ಸರಡಗಿ ಸಭೆಯಲ್ಲಿ ನೇರವಾಗಿ ಸಿದ್ದರಾಮಯ್ಯ ಅವರನ್ನು ದೂಷಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಸಿದ್ದರಾಮಯ್ಯ, `ಸೋಲಿಗೆ ನಾನೊಬ್ಬನೇ ಹೇಗೆ ಹೊಣೆ ಆಗುತ್ತೇನೆ. ಅದು ಎಲ್ಲರ ಜವಾಬ್ದಾರಿ. ಈ ವಿಷಯದಲ್ಲಿ ನನ್ನ ಮೇಲೆ ಅನುಮಾನ ಪಡುವುದರಲ್ಲಿ ಅರ್ಥ ಇಲ್ಲ. ಬಿ.ಎಸ್.ಸುರೇಶ್ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ನಮ್ಮ ಮನೆಗೆ ಬಂದು ಬೆಂಬಲ ಕೋರಿದ್ದು ನಿಜ. ಆದರೆ, ಎಂ.ಆರ್.ಸೀತಾರಾಂ ಅವರನ್ನು ನಾಲ್ಕನೇ ಅಭ್ಯರ್ಥಿಯಾಗಿ ಪಕ್ಷ ಕಣಕ್ಕೆ ಇಳಿಸಿದ ನಂತರ ನಾನು ಕೂಡ ಅವರನ್ನೇ ಬೆ...
ಸುರೇಶ್ ಅವರಿಗೆ ಬೆಂಬಲವಾಗಿ ನಿಂತಿದ್ದೆ ಎಂದು ಇಲ್ಲಸಲ್ಲದ ಸುದ್ದಿ ಹಬ್ಬಿಸಿದ್ದಾರೆ. ಇದರಲ್ಲಿ ಹುರುಳಿಲ್ಲ. ಬೇಕಿದ್ದರೆ ತನಿಖೆ ನಡೆಸಲಿ~ ಎಂದು ಸವಾಲು ಹಾಕಿದರು ಎನ್ನಲಾಗಿದೆ. `ಸರಡಗಿ ಸೋಲು ಅವರ ವೈಯಕ್ತಿಕ ಸೋಲಲ್ಲ. ಕಾಂಗ್ರೆಸ್ ಪಕ್ಷಕ್ಕೆ ಆಗಿರುವ ನೈತಿಕ ಸೋಲು. ಅಧಿಕೃತ ಅಭ್ಯರ್ಥಿಗಳ ಪಟ್ಟಿಯಲ್ಲಿ ಇವರದೇ ಮೊದಲ ಹೆಸರು. ಇವರು ಗೆಲ್ಲಬೇಕಿತ್ತು. ನಾಲ್ಕನೇ ಅಭ್ಯರ್ಥಿ ಪರಾಭಾವಗೊಂಡಿದ್ದರೆ ಇಷ್...
ಸರಡಗಿ ಅವರ ಸೋಲಿನಿಂದ ಅಲ್ಪಸಂಖ್ಯಾತರಿಗೆ ತಪ್ಪು ಸಂದೇಶ ರವಾನೆ ಆಗುತ್ತದೆ. ಇದನ್ನು ಕೆಲವರು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಾರೆ. ಅದಕ್ಕೆ ಅವಕಾಶ ನೀಡಬಾರದು. ರಾಷ್ಟ್ರೀಯ ಪಕ್ಷದಲ್ಲಿ ಅಡ್ಡಮತದಾನ ಆಗಬಾರದಿತ್ತು. ಅಧಿಕೃತ ಅಭ್ಯರ್ಥಿಯ ಸೋಲಿನಿಂದ ಪಕ್ಷಕ್ಕೆ ಹಾಗೂ ನಾಯಕತ್ವಕ್ಕೆ ಪೆಟ್ಟು ಬಿದ್ದಿದೆ~ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.
ಸಭೆಯಲ್ಲಿ ಅಲ್ಪಸಂಖ್ಯಾತ ಮುಖಂಡರಾದ ಬಿ.ಎ.ಮೊಹಿದ್ದೀನ್, ಆರ್.ರೋಷನ್ ಬೇಗ್, ತನ್ವೀರ್ ಸೇಠ್, ಖಮರುಲ್ ಇಸ್ಲಾಂ, ನಜೀರ್ ಅಹಮದ್, ರಹೀಂ ಖಾನ್, ಎನ್.ಎ.ಹ್ಯಾರಿಸ್, ಅಬ್ದುಲ್ ಜಬ್ಬಾರ್, ಬಿ.ಎ.ಹಸನಬ್ಬ, ಸೈಯದ್ ಯಾಸಿನ್, ಎನ್.ಎಂ.ನಬಿ, ಜಿ.ಎ.ಬಾವ, ನಹೀಮಾ ಬೇಗಂ ಮತ್ತಿತರರು ಭಾಗವಹಿಸಿದ್ದರು.
ಬಿಜೆಪಿ: ಟಿಕೆಟ್‌ಗೆ ಕತ್ತರಿ
ಬೆಂಗಳೂರು: ಆಡಳಿತಾರೂಢ ಬಿಜೆಪಿಗೂ ಅಡ್ಡಮತದಾನದ ಬಿಸಿ ತಟ್ಟಿದೆ. ಪಕ್ಷದ 12 ಶಾಸಕರು ಅಡ್ಡಮತ ಹಾಕಿದ್ದಾರೆ. ಇದು ಪಕ್ಷದ ಪಾಳೆಯದಲ್ಲಿ ತೀರ್ವ ಚರ್ಚೆಗೆ ಗ್ರಾಸ ಒದಗಿಸಿದೆ.
ಅಡ್ಡಮತ ಹಾಕಿದವರ ವಿವರ ಗೊತ್ತಾಗಿದೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ಪಕ್ಷ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಅಡ್ಡಮತ ಹಾಕಿದವರ ವಿರುದ್ಧ ತಕ್ಷಣ ಕ್ರಮ ಕೈಗೊಂಡರೆ ಸರ್ಕಾರಕ್ಕೆ ಕಂಟಕ ಎದುರಾಗಬಹುದು ಎಂಬ ಭೀತಿ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಗೊತ್ತಾಗಿದೆ. ಅಡ್ಡಮತ ಪರಿಣಾಮವಾಗಿ ಸರ್ಕಾರ ಒಂದು ಅರ್ಥದಲ್ಲಿ ಬಹುಮತ ಕಳೆದುಕೊಂಡಂತಾಗಿದೆ ಎಂಬ ಮಾತು...
ಈ ಹಿಂದೆ ವಿಜಯ್ ಮಲ್ಯ ಅವರು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗಲೂ ಇದೇ ರೀತಿ ಅಡ್ಡಮತದಾನ ನಡೆದಿತ್ತು. ಆ ಸಂದರ್ಭದಲ್ಲಿ ಪಕ್ಷದ ನಿರ್ದೇಶನದ ವಿರುದ್ಧ ನಡೆದುಕೊಂಡವರಿಗೆ ಸರಿಯಾದ ಪಾಠ (ಟಿಕೆಟ್ ನಿರಾಕರಣೆ) ಕಲಿಸಲಾಗಿದೆ. ಅದೇ ಸೂತ್ರವನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಲು ಪಕ್ಷ ನಿರ್ಧರಿಸಿದೆ ಎಂದು ಮುಖಂಡರೊಬ್ಬರು ತಿಳಿಸಿದರು.
'); $('#div-gpt-ad-97285-2').append('