text stringlengths 0 61.5k |
|---|
ಮಗುವಿನ ಪಾಲನೆ ಅಥವಾ ವಿಚ್ಛೇದನಗಳಂತಹ ಕುಟುಂಬ ವಿವಾದಗಳು |
ವ್ಯವಹಾರದ ವಿವಾದಗಳು |
ಪ್ರೊಬೇಟ್ ಸಮಸ್ಯೆಗಳು |
ನೌಕರರು ಮತ್ತು ಉದ್ಯೋಗದಾತರು |
ವ್ಯಾಪಾರಿಗಳು ಮತ್ತು ಗ್ರಾಹಕರು |
5. ಮಧ್ಯಸ್ಥಿಕೆ |
ಮಧ್ಯಸ್ಥಿಕೆಯ ಮುಂದಿನ ಹಂತ. ಮಧ್ಯಸ್ಥಿಕೆಯಲ್ಲಿ, ನಿಯಂತ್ರಣವು ಎರಡೂ ಪಕ್ಷಗಳ ಕೈಯಲ್ಲಿದೆ, ಆದರೆ ಮಧ್ಯಸ್ಥಿಕೆಯಲ್ಲಿ, ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಷ್ಪಕ್ಷಪಾತವಾಗಿ ಅಧಿಕಾರವು ಮೂರನೇ ವ್ಯಕ್ತಿಗೆ ಹೋಗುತ್ತದೆ. |
ಮಧ್ಯಸ್ಥಿಕೆ, ಸಮಾಲೋಚನೆ ಮತ್ತು ಮಧ್ಯಸ್ಥಿಕೆಯೊಂದಿಗೆ, ಪರ್ಯಾಯ ವಿವಾದ ಪರಿಹಾರ (ಎಡಿಆರ್) ಪ್ರಕ್ರಿಯೆಯ ಭಾಗಗಳಾಗಿವೆ. ಪಕ್ಷಗಳು ಮಾತುಕತೆ ನಡೆಸುವ ಸಾಮರ್ಥ್ಯವು ಖಾಲಿಯಾದಂತಹ ಸಂದರ್ಭಗಳಲ್ಲಿ ಈ ಹಂತವು ಸಾಮಾನ್ಯವಾಗಿ ಒಳಗೊಂಡಿರುತ್ತದೆ. |
ಸಾಮಾನ್ಯವಾಗಿ ಒಪ್ಪಂದಗಳಲ್ಲಿ ಮಧ್ಯಸ್ಥಿಕೆ ಷರತ್ತುಗಳು ಸೇರಿವೆ, ವಿಶೇಷವಾಗಿ ಸ್ಟಾಕ್-ಬ್ರೋಕರ್ ಖಾತೆ, ನಿವೃತ್ತಿ ಖಾತೆ ಅಥವಾ ಕ್ರೆಡಿಟ್ ಕಾರ್ಡ್ನ ಅರ್ಜಿಗಳಲ್ಲಿ. ಈ ಹಂತದಲ್ಲಿ, ಎರಡೂ ಪಕ್ಷಗಳನ್ನು ವಕೀಲರು ಪ್ರತಿನಿಧಿಸುತ್ತಾರೆ. ಮಧ್ಯಸ್ಥನು ಎರಡೂ ಕಡೆ ಆಲಿಸುತ್ತಾನೆ, ಅವರ ದಾಖಲೆಗಳು, ಸಾಕ್ಷ್ಯಗಳು, ಪುರಾವೆಗಳನ್ನು ಅಧ್ಯಯನ ಮಾಡುತ್ತಾನೆ ಮತ್ತು ನಂತರ ನಿರ್ಧರಿಸುತ್ತಾನೆ. ಪ್ರಕ್ರಿಯೆಯು ಪ್ರಯೋಗದಂತೆಯೇ ಇರುತ್ತದೆ, ಆದರೆ ಸೀಮಿತ ಆಕರ್ಷಣೀಯ ಹಕ್ಕುಗಳೊಂದಿಗೆ ಮಾತ್ರ. |
ಈ ಪ್ರಕ್ರಿಯೆಯು ಬಂಧಿಸದಂತಿದೆ, ಆದರೆ ಎರಡೂ ಕಡೆಯವರು ಒಪ್ಪಿದರೆ, ಅದು ಬಂಧಿಸುವ ಪ್ರಕ್ರಿಯೆಯಾಗಬಹುದು. ಹೆಚ್ಚಿನ ಸ್ಥಳಗಳಲ್ಲಿನ ಮೊಕದ್ದಮೆಗೆ ಪೂರ್ವಾಪೇಕ್ಷಿತವಾಗಿ ಇದು ನಿರ್ಣಾಯಕ ಹಂತವೆಂದು ಪರಿಗಣಿಸಲಾಗಿದೆ. ಒಬ್ಬ ವ್ಯಕ್ತಿಯು ಪ್ರಕ್ರಿಯೆಯನ್ನು ಅಥವಾ ಮೂವರ ಫಲಕವನ್ನು ನಿರ್ವಹಿಸಬಹುದು ಮತ್ತು ಸಭೆ ಕೊಠಡಿಗಳಲ್ಲಿ ಅಥವಾ ಶ್ರವಣ ಕಚೇರಿಗಳಲ್ಲಿ ನಡೆಸಲಾಗುತ್ತದೆ. |
6. ದಾವೆ |
ವ್ಯವಹಾರದ ಮೊಕದ್ದಮೆಯೊಂದಿಗೆ ಇತ್ಯರ್ಥಪಡಿಸುವ ಸಾಮಾನ್ಯ ಪ್ರಕರಣಗಳಲ್ಲಿ ಒಂದು ಒಪ್ಪಂದದ ಉಲ್ಲಂಘನೆಯಾಗಿದೆ. ಈ ಹಂತದಲ್ಲಿ, ವಕೀಲರು ಬಹಳ ಮುಖ್ಯ. ಕಾನೂನು ವಿವಾದಗಳನ್ನು ಪರಿಹರಿಸಲು ಈ ಹಂತದಲ್ಲಿ ನಾಗರಿಕ ನ್ಯಾಯ ಮತ್ತು ವ್ಯವಸ್ಥೆ ಮತ್ತು ನ್ಯಾಯಾಲಯಗಳನ್ನು ಬಳಸಲಾಗುತ್ತದೆ. ಈ ಹಂತವು ಪರಿಹಾರದಲ್ಲಿ ಭಾಗವಹಿಸಲು ಎದುರು ಭಾಗವನ್ನು ಒತ್ತಾಯಿಸುತ್ತದೆ. |
ಕಾನೂನಿನ ಪ್ರಕಾರ ಮತ್ತು ಪ್ರಸ್ತುತಪಡಿಸಿದ ಸಂಗತಿಗಳನ್ನು ಅನ್ವಯಿಸುವ ಮೂಲಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅಂತಿಮ ತೀರ್ಪು ದಾವೆ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುತ್ತದೆ, ಮತ್ತು ನಿರ್ಧಾರವನ್ನು ಜಾರಿಗೊಳಿಸಲಾಗುತ್ತದೆ. ಆದರೆ, ಸೋತ ಪಕ್ಷವು ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು. |
ಸಂಘರ್ಷವನ್ನು ಪರಿಹರಿಸುವುದು ಆರಂಭಿಕ ಹಂತದಲ್ಲಿ ತುಂಬಾ ಸರಳವಾಗಿದೆ, ಇದು ಮಾತನಾಡುವ ಸರಳವಾಗಿದೆ. ಆದರೆ ಪ್ರಕ್ರಿಯೆಯು ತೀವ್ರವಾಗಿರುವುದರಿಂದ, ನೀವು ಎಲ್ಲವನ್ನೂ ಕಾನೂನುಬದ್ಧವಾಗಿ ಮಾಡಬೇಕಾಗಿದೆ. |
'ಸಿಂಹಾಸನ ತ್ಯಜಿಸಿ ಮಹಾರಾಜರಾದ ಒಡೆಯರ್' | Prajavani |
ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಾಬ್ದಿ ಸಮಾರೋಪ |
Published: 04 ಆಗಸ್ಟ್ 2019, 01:09 IST |
Updated: 04 ಆಗಸ್ಟ್ 2019, 01:09 IST |
ಬೆಂಗಳೂರು: 'ಭಾರತ ಒಕ್ಕೂಟಕ್ಕೆ ಸೇರಲು ಮೊದಲು ಒಪ್ಪಿದ್ದು ಮೈಸೂರು ಸಂಸ್ಥಾನ. ಆಗ, ಜಯಚಾಮರಾಜೇಂದ್ರ ಒಡೆಯರ್ ರಾಜರಾಗಿದ್ದರು. ಈ ಕಾರಣಕ್ಕಾಗಿಯೇ, ಒಡೆಯರ್ ಅವರನ್ನು ಸಿಂಹಾಸನ ತ್ಯಜಿಸಿ ಮಹಾರಾಜರಾದವರು ಎಂದು ಕುವೆಂಪು ಬಣ್ಣಿಸಿದ್ದರು' ಎಂಬುದಾಗಿ ಹಿರಿಯ ವಿದ್ವಾಂಸ ಡಾ. ಪ್ರಧಾನ ಗುರುದತ್ತ ಸ್ಮರಿಸಿದರು. |
ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಾಬ್ದಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 'ಜನ ತಮ್ಮನ್ನು ತಾವೇ ಆಳಿಕೊಳ್ಳುವಂತೆ ಮಾಡುವ ಉದ್ದೇಶವನ್ನು ಮಹಾರಾಜರು ಈಡೇರಿಸಿದ್ದರು' ಎಂದರು. |
'ಯಾವುದನ್ನು ತ್ಯಾಗ ಎಂದು ಎಲ್ಲರೂ ಪರಿಗಣಿಸಿದ್ದರೋ ಅದನ್ನು ನಾನು ಮಾಡಿಲ್ಲ. ಸೂಕ್ತರನ್ನು ಆಯ್ಕೆ ಮಾಡುವ ಮೂಲಕ ಜವಾಬ್ದಾರಿ ಸರ್ಕಾರವನ್ನು ಪ್ರಜೆಗಳು ರಚಿಸಿಕೊಳ್ಳಬೇಕು ಎಂಬುದಾಗಿ ಒಡೆಯರ್ ಹೇಳಿದ್ದರು' ಎಂದರು. |
'ಪರಿಶಿಷ್ಟರನ್ನೂ ಪೊರೆದವರು ಒಡೆಯರ್. ದಲಿತರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡುವಂತೆ ಅವರು ಆದೇಶಿಸಿದ್ದರು. ಭಿಕ್ಷಾಟನೆಯನ್ನು ನಿಷೇಧಿಸಿದ್ದ ಅವರು, ಭಿಕ್ಷುಕರಿಗಾಗಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವ ದೂರದೃಷ್ಟಿಯನ್ನೂ ಹೊಂದಿದ್ದರು' ಎಂದು ಗುರುದತ್ತ ಸ್ಮರಿಸಿದರು. |
'ನುಸಿರೋಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಂಡ್ಯ ಬಳಿ ನುಸಿರೋಗ ಪರಾವಲಂಬಿ ಪ್ರಯೋಗಾಲಯ ಸ್ಥಾಪಿಸಿದ್ದರು. ಈ ಮಾದರಿಯ ಪ್ರಯೋಗಾಲಯ ದೇಶದಲ್ಲೇ ಮೊದಲು. ಇಂಥ ಜನಪರ ಯೋಜನೆಗಳನ್ನು ರೂಪಿಸಿದ ಕಾರಣದಿಂದಲೇ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಜನಸಾಮಾನ್ಯರ ಮಹಾರಾಜರು ಎಂದೇ ಕರೆಯಲಾಗುತ್ತಿತ್ತು' ಎಂದು ನೆನಪಿಸಿಕೊಂಡರು. |
'ಒಡೆಯರ್ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರು. ಒಡೆಯರ್ ಅವರ ಜೀವಿತಾವಧಿಯ ಸಾಧನೆಗಳನ್ನು ಮೆಲುಕು ಹಾಕಲು ಮೈಸೂರಿನಲ್ಲಿ ಪರಿಷತ್ ವತಿಯಿಂದ ಜನ್ಮಶತಮಾನೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಅದರ ಸಮಾರೋಪ ಇಲ್ಲಿ ನಡೆಯುತ್ತಿದೆ' ಎಂದು ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಹೇಳಿದರು. |
ಜನವರಿ 04ರಿಂದ ಸುಪ್ರೀಂಕೋರ್ಟಿನಲ್ಲಿ ಅಯೋಧ್ಯ ವಿವಾದ ವಿಚಾರಣೆ | Ayodhya case to be heard by Supreme Court on Jan 4 - Kannada Oneindia |
ಜನವರಿ 04ರಿಂದ ಸುಪ್ರೀಂಕೋರ್ಟಿನಲ್ಲಿ ಅಯೋಧ್ಯ ವಿವಾದ ವಿಚಾರಣೆ |
| Published: Monday, December 24, 2018, 22:01 [IST] |
ನವದೆಹಲಿ, ಡಿಸೆಂಬರ್ 24: ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ಹಾಗೂ ಜಸ್ಟೀಸ್ ಎಸ್ ಕೆ ಕೌಲ್ ಅವರಿರುವ ನ್ಯಾಯಪೀಠವು ಜನವರಿ 04ರಿಂದ ಆಯೋಧ್ಯೆ ವಿವಾದ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ. |
ಆಯೋಧ್ಯೆ ವಿವಾದದ ನ್ಯಾಯದಾನದಲ್ಲಿ ವಿಳಂಬವಾಗುತ್ತಿದೆ ಮತ್ತು ತ್ವರಿತಗತಿಯಲ್ಲಿ ವಿಚಾರಣೆ ನಡೆಸುವಂತೆ ಕೋರಿ ಉತ್ತರಪ್ರದೇಶ ಸರ್ಕಾರವು ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಅಕ್ಟೋಬರ್ನಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, " ಯಾವ ವಿಚಾರಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದು ನ್ಯಾಯಾಲಯಕ್ಕೆ ತಿಳಿದಿದೆ," ಎಂದು ಹೇಳಿತ್ತು. |
ಕೇವಲ ನಾಲ್ಕೇ ನಿಮಿಷಗಳಲ್ಲಿ ತನ್ನ ಅಭಿಪ್ರಾಯ ತಿಳಿಸಿ, ಜನವರಿಯಿಂದ ವಿವಾದದ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. |
ರಾಮ ಮಂದಿರ ನಿರ್ಮಾಣದ ದಿನಾಂಕವನ್ನು ಕೇಂದ್ರ ಸರ್ಕಾರ ಪ್ರಕಟಿಸಬೇಕು ಎಂಬ ನಿರ್ಣಯವನ್ನೂ ಇತ್ತೀಚೆಗೆ ನಡೆದಿದ್ದ ಧರ್ಮ ಸಂಸತ್ನಲ್ಲಿ ಕೈಗೊಳ್ಳಲಾಗಿತ್ತು. |
2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ. ಈ ಪ್ರಕರಣ ವಿಚಾರಣೆಯನ್ನು ಪ್ರತಿದಿನ ನಡೆಸಿದರೆ ಒಳ್ಳೆಯದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅಭಿಪ್ರಾಯಪಟ್ಟಿದ್ದಾರೆ. |
ಆಲೂರು : ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಬೈಕ್ ಸವಾರ ಪಾರು - Kannada Muhimmath News Portal |
ಆಲೂರು: ಒಂಟಿ ಸಲಗವನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿರುವಾಗಲೇ ಬೈಕ್ ಸವಾರನೊಬ್ಬ ಕೂದಲೆಳೆ ಅಂತರ ದಲ್ಲಿ ಕಾಡಾನೆಯಿಂದ ಪಾರಾದ ಘಟನೆ ತಾಲೂಕಿನ ಕೆ.ಹೊಸ ಕೋಟೆ ಹೋಬಳಿ ಮಠದಕೊಪ್ಪಲು ಗ್ರಾಮದಲ್ಲಿ ನಡೆದಿದೆ. |
ಕಾಫಿ ತೋಟದಿಂದ ಒಂಟಿ ಸಲಗವೊಂದು ದಿಢೀರ್ ರಸ್ತೆಗೆ ಬಂದಿದೆ. ಈ ವೇಳೆ ಬೈಕ್ ಸವಾರ ಆನೆಗೆ ಅಡ್ಡಲಾಗಿ ಬಂದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು ಬೈಕ್ ಸವಾರನಿಗೆ ಹಿಂತಿರುಗಿ ಹೋಗುವಂತೆ ಕೂಗಾಡಿದ್ದಾರೆ. ಆದರೂ, ಯುವಕ ನುಗ್ಗಿ ಬಂದಿದ್ದು, ಆಶ್ಚರ್ಯ ರೀತಿಯಲ್ಲಿ ಪಾರಾಗಿದ್ದಾನೆ. ಒಂದು ವೇಳೆ ಆನೆ ಸೊಂಡಿಲನ್ನು ಎತ್ತಿದ್ದರೂ ಸಾಕಿತ್ತು, ಬೈಕ್ ಬಿದ್ದು ಆನೆಯ ಪಾದ ಸೇರುತ್ತಿದ್ದ ಎಂದು ಸ್ಥಳದಲ್ಲಿ ಕೆಲವರು ಹೇಳಿದ್ದಾರೆ. ಹಾರೋಹಳ್ಳಿ ಗ್ರಾಮದ ಸಂತೋಷ್ ಆನೆ ದಾಳಿಯಿಂದ ಪಾರಾದ ಯುವಕ. ಈತ ಸ್ವಗ್ರಾಮದಿಂದ ಮಗ್ಗೆ ಗ್ರಾಮಕ್ಕೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಇದ್ದವರು ಕಾಡಾನೆಯಿಂದ |
ಪಾರಾಗಿ ಬಂದ ಬೈಕ್ ಸವಾರನಿಗೆ ಸರಿಯಾಗಿಯೇ ಬುದ್ಧಿ ಹೇಳಿದ್ದಾರೆ. ಆಲೂರು- ಸಕಲೇಶಪುರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜನರು ಜೀವಭಯದಿಂದ ಬದುಕು ನಡೆಸುವಂತಾಗಿದೆ. |
ಕಳೆದ ಹಲವು ದಿನಗಳಿಂದ ಆಲೂರು ತಾಲೂಕಿನ ಕುಂದೂರು, ಕೆ.ಹೊಸಕೋಟೆ ಹೋಬಳಿಗಳಲ್ಲಿ ಭೀಮ ಎಂದು ಕರೆಯಲ್ಪಡುವ ಒಂಟಿ ಸಲಗವೊಂದು ಹಲವು ದಿನಗಳಿಂದ ಗ್ರಾಮಗಳ ಮುಖ್ಯ ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿದೆ. |
ಈವರೆಗೆ ಯಾವ ಪ್ರಾಣ ಹಾನಿಯಾಗದಿದ್ದರೂ ಜನ ಸಾಮಾನ್ಯರು ಭಯ ಭೀತರಾಗಿದ್ದಾರೆ. ಈ ಕಾಡಾನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕೆನ್ನುವುದು ಜನಸಾಮಾನ್ಯರ ಒತ್ತಾಯವಾಗಿದೆ. ಸೌಮ್ಯ ಸ್ವಭಾವದ ಆನೆ: ಮಠದ ಕೊಪ್ಪಲು ಗ್ರಾಮದ ಕಾಫಿ ತೋಟದಲ್ಲಿ ಶನಿವಾರ ದಿಢೀರ್ ಪ್ರತ್ಯಕ್ಷವಾದ ಒಂಟಿ ಸಲಗ(ಭೀಮ) ಸೌಮ್ಯ ಸ್ವಭಾವದ್ದಾಗಿದೆ. ಹಲವು ಗ್ರಾಮಗಳಲ್ಲಿ ಗಂಭೀರ್ಯದೊಂದಿಗೆ ಓಡಾಟ ನಡೆಸಿದ್ದ ಭೀಮ, ಬೆಳೆಗಳನ್ನು ಬಿಟ್ಟರೆ ಮನುಷ್ಯರಿಗೆ ಯಾವುದೇ ತೊಂದರೆ ಮಾಡಿಲ್ಲ. |
ತಾಲೂಕಿನ ನಿಡನೂರು, ಮೆಣಸಮಕ್ಕಿ, ಬಾಳ್ಳುಪೇಟೆ, ಮಲ್ಲೇನಹಳ್ಳಿ, ಹಾಚ್ಗೋಡ್ನಹಳ್ಳಿ, ಚಿಗಳೂರು, ಅರಹಳ್ಳ ಕೊಪ್ಪಲು, ಅಬ್ಬನ, ಚಿನ್ನಳ್ಳಿ ಹಾಗೂ ಪಾಳ್ಯ ಸುತ್ತಮುತ್ತಲ ಗ್ರಾಮಗಳಲ್ಲಿ ಓಡಾಟ ನಡೆಸಿದ್ದ ಭೀಮ, ಯಾರಿಗೂ ತೊಂದರೆ ಮಾಡಿಲ್ಲ. ಇತ್ತ ಪುಂಡಾನೆ ಸೆರೆ ಹಿಡಿಯಲು, ಮೂರು ಹೆಣ್ಣಾನೆಗೆ ರೆಡಿಯೋ ಕಾಲರ್ ಅಳವಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಒಂದೆಡೆ ಕಾರ್ಯಾಚರಣೆ ನಡೆಸುತ್ತಿದ್ದರೆ, ಇತ್ತ ಮತ್ತೂಂದು ಒಂಟಿ ಸಲಗ ಊರೂರು ತಿರುಗುತ್ತಾ, ಭೀತಿ ಹುಟ್ಟಿಸುತ್ತಿದೆ. |
ಮತ್ತೊಂದು ರಿಮೇಕ್ ಸಿನಿಮಾ ಒಪ್ಪಿಕೊಂಡ ಶಿವರಾಜ್ ಕುಮಾರ್? – ಅರಳಿ ಕಟ್ಟೆ |
ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿಮಾನದಾಚೆಗೂ ಆದರಕ್ಕೆ ಪಾತ್ರರಾಗಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್. ಹೆಚ್ಚು ಸ್ವಮೇಕ್ ಚಿತ್ರಗಳನ್ನೇ ಮಾಡುತ್ತಿದ್ದ ಶಿವಣ್ಣ ತಾವು ರೀಮೇಕ್ ಚಿತ್ರಗಳನ್ನು ಮಾಡುವುದಿಲ್ಲ ಎಂದು ಈ ಹಿಂದೆ ಹೇಳಿಕೊಂಡಿದ್ದರು. ಆದರೆ ಮಲೆಯಾಳಂನ ಸೂಪರ್ ಹಿಟ್ 'ಒಪ್ಪಮ್' ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಆದ 'ಕವಚ' ಸಿನಿಮಾದಲ್ಲಿ ನಟಿಸಿದ್ದರು. |
ಇದೀಗ ಶಿವರಾಜ್ ಕುಮಾರ್ ಅವರು ಮತ್ತೊಂದು ರಿಮೇಕ್ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸಮಾಚಾರ ಕೇಳಿಬರುತ್ತಿದೆ. ಇತ್ತೀಚಿಗೆ ತೆರೆಕಂಡು ಸೂಪರ್ ಹಿಟ್ ಆಗಿರುವ ತಮಿಳಿನ ಕಾರ್ತಿ ಅಭಿನಯಿಸಿದ್ದ 'ಕೈದಿ'ಯಲ್ಲಿ ಶಿವಣ್ಣ ನಟಿಸುತ್ತಾರೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬಂದಿದೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಈ ಸಿನಿಮಾಗೆ ದೊಡ್ಡ ಪ್ರೇಕ್ಷಕ ವಲಯದಲ್ಲಿ ಭಾರಿ ಮೆಚ್ಚುಗೆ ಗಳಿಸಿಕೊಂಡಿತ್ತು. |
ಶಿವರಾಜ್ಕುಮಾರ್ 'ಕೈದಿ' ಸಿನಿಮಾ ವೀಕ್ಷಿಸಿದ್ದು, ತುಂಬಾನೇ ಇಷ್ಟಪಟ್ಟಿದ್ದಾರಂತೆ. ಈ ಸಿನಿಮಾ ಕನ್ನಡದಲ್ಲಿ ರಿಮೇಕ್ ಮಾಡಿ, ಅದರಲ್ಲಿ ನಟಿಸಬೇಕು ಎನ್ನುವ ಆಲೋಚನೆ ಅವರದ್ದು. ಇಂತಹ ಸಿನಿಮಾದಲ್ಲಿ ತಾನು ಅಭಿನಯಿಸಬೇಕು ಎನ್ನುವುದು ಅವರ ಆಸೆಯಾಗಿದೆ. ಆ ಕಥೆಯೂ ಅವರಿಗೆ ಹೋಲಿಕೆ ಆಗುತ್ತದೆ. ಆಗಾಗ ಪ್ರಯೋಗಗಳಿಗೆ ಕೈ ಹಾಕುವ ಶಿವಣ್ಣ ಈ ಸಿನಿಮಾ ಮಾಡುವ ಸಾಧ್ಯತೆ ಇದೆ. |
ಅಂದಹಾಗೆ ಕೈದಿ' ಸಿನಿಮಾ ಒಂದು ಪ್ರಯೋಗಾತ್ಮಕ ಮನರಂಜನಾ ಸಿನಿಮಾ. ಇಡೀ ಸಿನಿಮಾ ಒಂದು ರಾತ್ರಿಯಲ್ಲಿ ನಡೆಯುತ್ತದೆ. ಸಂಜೆಯಿಂದ ಬೆಳಗಿನವರೆಗೆ ಈ ಚಿತ್ರದ ಕಥೆ ಸಾಗುವುದು ಒಂದು ವಿಶೇಷವಾದರೆ, ಈ ಚಿತ್ರದಲ್ಲಿ ಹೀರೋಯಿನ್ ಇಲ್ಲ ಎನ್ನುವುದು ಮತ್ತೊಂದು ವಿಶೇಷ. ಒಂದೊಮ್ಮೆ 'ಕೈದಿ' ಸಿನಿಮಾ ಕನ್ನಡಕ್ಕೆ ಬಂದರೆ ಭಿನ್ನ ಚಿತ್ರ ಎನಿಸಿಕೊಳ್ಳಲಿದೆ. |
ಡೆಲ್ಟಾ ಪ್ಲಸ್ ತಡೆಗೆ ರಾಜ್ಯದಲ್ಲಿ ಗಡಿ ಕಟ್ಟೆಚ್ಚರ! | Karnataka CM warns border districts to be alert for Delta Plus coronavirus variant pod |
ಡೆಲ್ಟಾ ಪ್ಲಸ್ ತಡೆಗೆ ರಾಜ್ಯದಲ್ಲಿ ಗಡಿ ಕಟ್ಟೆಚ್ಚರ! |
* ಕೇರಳ, ಮಹಾರಾಷ್ಟ್ರದಿಂದ ಸೋಂಕು ಹರಡದಂತೆ ಬಿಗಿ ಕ್ರಮ: ಬಿಎಸ್ವೈ |
* ಡೆಲ್ಟಾ+ ತಡೆಗೆ ಗಡಿ ಕಟ್ಟೆಚ್ಚರ! |
* ರಾಜ್ಯಕ್ಕೆ ಬರುವವರಿಗೆ ರಾರಯಂಡಮ್ ಟೆಸ್ಟ್ |
* ಗಡಿ ಬಂದ್ ಇಲ್ಲ: ಸುಧಾಕರ್ |
Bangalore, First Published Jun 26, 2021, 7:25 AM IST |
ಬೆಂಗಳೂರು(ಜೂ.26): ಕೊರೋನಾ ವೈರಸ್ನ ರೂಪಾಂತರಿ ವೈರಸ್ ಡೆಲ್ಟಾಪ್ಲಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಹಾಗೂ ಕೇರಳದ ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕು. ಗಡಿ ಭಾಗದಲ್ಲಿ ಸೋಂಕು ಪತ್ತೆ ಪರೀಕ್ಷೆ ಹೆಚ್ಚಿಸಬೇಕು ಹಾಗೂ ಈ ರಾಜ್ಯಗಳಿಂದ ಬರುವವರನ್ನು ರಾರಯಂಡಮ್ ಟೆಸ್ಟ್ಗೆ ಒಳಪಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಗಳಿಗೆ ನಿರ್ದೇಶಿಸಿದ್ದಾರೆ. |
ರಾಜ್ಯದಲ್ಲಿ ಡೆಲ್ಟಾಪ್ಲಸ್ ವೈರಸ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಅವರು ತುರ್ತು ಸಭೆ ನಡೆಸಿ ಈ ಸೂಚನೆ ನೀಡಿದರು. |
ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಲ್ಟಾಪ್ಲಸ್ ವೈರಸ್ ಕಂಡುಬರುತ್ತಿದೆ. ಹೀಗಾಗಿ ಗಡಿ ಭಾಗದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಬೇಕು. ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರ ಬಗ್ಗೆಯೂ ಸಹ ತೀವ್ರ ನಿಗಾ ಇಟ್ಟು ಅವರನ್ನು ರಾರಯಂಡಮ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದರು. |
ರಾಜ್ಯದಲ್ಲೂ ಎಚ್ಚರದಿಂದ ಇರಬೇಕು: |
ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಎರಡನೇ ಅಲೆ ತೀವ್ರತೆ ಕಡಿಮೆಯಾಗಿಲ್ಲ. ಹೀಗಾಗಿ ರಾಜ್ಯದಲ್ಲಿ ಕೊರೋನಾ ನಿರ್ಬಂಧಗಳನ್ನು ಸಡಿಲಗೊಳಿಸಿದರೂ ಎಚ್ಚರಿಕೆಯಿಂದ ಇರಬೇಕು. ಸಾರ್ವಜನಿಕರು ಮೈಮರೆಯಬಾರದು ಎಂದು ಸಭೆಯಲ್ಲಿ ಯಡಿಯೂರಪ್ಪ ಮನವಿ ಮಾಡಿದರು. |
ಲಾಕ್ಡೌನ್ನಿಂದಾಗಿ ಮಕ್ಕಳು ಅಪೌಷ್ಟಿಕತೆಗೆ ಗುರಿಯಾಗುವ ಸಾಧ್ಯತೆ ಇದೆ. ಅಲ್ಲದೆ ಮೂರನೇ ಅಲೆ ಮಕ್ಕಳಿಗೆ ಸಮಸ್ಯೆ ಉಂಟುಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಅಪೌಷ್ಟಿಕತೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಪೌಷ್ಟಿಕ ಆಹಾರ ಒದಗಿಸಿ ವೈದ್ಯಕೀಯ ನಿಗಾ ವಹಿಸಬೇಕು ಎಂದು ಹೇಳಿದರು. |
6 ವರ್ಷದವರೆಗಿನ ಅಂಗನವಾಡಿ ಮಕ್ಕಳಿಗೆ ಹಾಲಿನ ಜತೆಗೆ ನ್ಯೂಟ್ರಿಷನ್ ಪೌಡರ್ ನೀಡಬೇಕು. ಅಂಗನವಾಡಿಯಲ್ಲಿ ಮಕ್ಕಳಿಗೆ ನೀಡುತ್ತಿದ್ದ ಪೌಷ್ಟಿಕ ಆಹಾರವನ್ನು ಮುಂದುವರೆಸಬೇಕು. ಮಕ್ಕಳು ಅಂಗನವಾಡಿಗೆ ಬಾರದಿದ್ದರೆ ನ್ಯೂಟ್ರಿಷನ್ ಬಾರ್, ನ್ಯೂಟ್ರಿಷನ್ ಕಿಟ್, ಲಡ್ಡುಗಳನ್ನು ಮನೆಗೆ ನೀಡಬಹುದು ಎಂಬ ಸಲಹೆ ಸರ್ಕಾರಕ್ಕೆ ಬಂದಿತ್ತು. |
ರಾಜ್ಯ ಗಡಿ ಬಂದ್ ಇಲ್ಲ: |
ಸಭೆಗೂ ಮೊದಲು ಮಾತಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಕೇರಳದಲ್ಲಿ ಶೇ.10ರಷ್ಟುಪಾಸಿಟಿವಿಟಿ ದರ ಇದೆ. ಮಹಾರಾಷ್ಟ್ರದಲ್ಲೂ ಸೋಂಕು ಹೆಚ್ಚಿದೆ. ಹೀಗಾಗಿ ಮಹಾರಾಷ್ಟ್ರದಿಂದ ಆಗಮಿಸುವವರಿಗೆ ರಾರಯಂಡಮ್ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಿದ್ದೇವೆ. ಆದರೆ, ಅಂತರ್ ರಾಜ್ಯ ಗಡಿ ಬಂದ್ ಮಾಡುವ ಚಿಂತನೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು. |
ಇನ್ನು ರೂಪಾಂತರಿ ವೈರಸ್ ಪತ್ತೆಗೆ ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ವೈದ್ಯಕೀಯ ಕಾಲೇಜುಗಳಲ್ಲಿ ಜಿನೋಮ್ ಪ್ರಯೋಗಾಲಯ ಪ್ರಾರಂಭಿಸುತ್ತಿದ್ದೇವೆ. ಡೆಲ್ಟಾಪ್ಲಸ್ ಪರೀಕ್ಷೆ ನಡೆಸಿ ಸೀಕ್ವೆನ್ಸ್ ಪತ್ತೆ ಮಾಡುತ್ತೇವೆ. ಈ ಮೂಲಕ ರೂಪಾಂತರಿ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು. |
ವರ್ಷವಿಡೀ ಸಂಚರಿಸುವ ಕನ್ನಡ 'ತೇರು' | Prajavani |
ವರ್ಷವಿಡೀ ಸಂಚರಿಸುವ ಕನ್ನಡ 'ತೇರು' |
ಬಸ್ ಚಾಲಕ ಹಾಗೂ ನಿರ್ವಾಹಕನ ಕನ್ನಡ ಪ್ರೀತಿ; ಪ್ರಯಾಣಿಕರಿಗೂ ಅಚ್ಚುಮೆಚ್ಚು |
ಗಂಗೇಶ್.ಬಿ.ಪಿ |
Published: 04 ನವೆಂಬರ್ 2019, 17:17 IST |
Updated: 04 ನವೆಂಬರ್ 2019, 17:17 IST |
ಕೊಣನೂರು (ಹಾಸನ) : ಹಾಸನ, ಮೈಸೂರು ಜಿಲ್ಲೆಯಲ್ಲಿ ನಿತ್ಯ ಸಂಚರಿಸುವ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಜನರಲ್ಲಿ ಕನ್ನಡ ಪ್ರೇಮ ಜಾಗೃತಿಗೊಳಿಸುತ್ತಿದೆ. |
ರಾಮನಾಥಪುರ ಘಟಕದ ಬಸ್ ಕೆ.ಎ.13 ಎಫ್ 2164 ನೋಂದಣಿ ಸಂಖ್ಯೆಯ ಬಸ್ ಕನ್ನಡದ ಮಾಹಿತಿ ಕಣಜವಾಗಿದ್ದು, ನವೆಂಬರ್ 1ರಂದು ಮೈತುಂಬ ಕನ್ನಡ ಧ್ವಜವನ್ನು ಹೊದ್ದು ಅರಿಸಿನ ಹಾಗೂ ಕುಂಕುಮ ಬಣ್ಣಗಳಿಂದ ಕಂಗೊಳಿಸುತ್ತಾ ಸಾಗುವ ಮೂಲಕ ಕನ್ನಡ ಪ್ರೇಮಿಗಳ ಮನಸೂರೆಗೊಂಡಿತು. |
ಚಾಲಕ ಬಾಬು ಮತ್ತು ನಿರ್ವಾಹಕ ನಟನಾಯ್ಕ ಅವರ ಪರಿಶ್ರಮದಿಂದ ಕನ್ನಡದ ಎನ್ಸೈಕ್ಲೋಪಿಡಿಯಾದಂತೆ ಸಜ್ಜುಗೊಂಡಿರುವ ಬಸ್ ರಾಮನಾಥಪುರದಿಂದ ಹೊರಟು ಪಿರಿಯಾಪಟ್ಟಣ, ಬೆಟ್ಟದಪುರ, ಹಳ್ಳಿಮೈಸೂರು, ಹೊಳೆನರಸೀಪುರ, ಹಾಸನ, ಮೈಸೂರು ರಾಮನಾಥಪುರ ಮಾರ್ಗದಲ್ಲಿ ಚಲಿಸಿ ಕನ್ನಡಿಗರನ್ನು ರೋಮಾಂಚನಗೊಳಿಸಿತು. |
ಮಾಹಿತಿಯ ಕಣಜ: ಬಸ್ನ ಎಲ್ಲೆಡೆ ಕನ್ನಡದ ಪ್ರಸಿದ್ಧ ಘೋಷವಾಕ್ಯಗಳು, ಕನ್ನಡನಾಡು ನುಡಿಗಾಗಿ ದುಡಿದ ಕವಿಗಳು, ಮಹನೀಯರು, ನಾಡಿನ ವೀರವನಿತೆಯರು, ಜ್ಞಾನಪೀಠ ಪ್ರಶಸ್ತಿ ವಿಜೇತರ, ಸಮಾಜ ಸುಧಾರಕರ, ರಾಜ್ಯದ ಪ್ರಸಿದ್ಧ ಸ್ಥಳಗಳ, ಪ್ರಸಿದ್ಧ ಗ್ರಂಥಗಳ ಮತ್ತು ಕನ್ನಡದ ಮೊದಲುಗಳ ಚಿತ್ರಗಳನ್ನು ಬಸ್ನ ಒಳಗೆ ಹೊರಗೆ ಅಂಟಿಸಲಾಗಿದೆ. |
ದೇಶದ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳ ಚಿತ್ರಗಳನ್ನು ಕಾಲಾನುಕ್ರಮವಾಗಿ ಬಿಂಬಿಸಿದ್ದು, ಕವಿಗಳ ಉದ್ಘೋಷಗಳು, ರಾಜ್ಯವನ್ನಾಳಿದ ರಾಜಮನೆತನಗಳ ಹೆಸರುಗಳು 84 ಕನ್ನಡಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರು ಮತ್ತು ಜರುಗಿದ ಸ್ಥಳಗಳ ಕುರಿತಾದ ಚಿತ್ರ ಮತ್ತು ಅಕ್ಷರರೂಪದ ಮಾಹಿತಿಯನ್ನು ನಿಡುವ ಚಿತ್ರಗಳನ್ನು ಪ್ರತಿ ಕಿಟಕಿಯ ಮೇಲೆ ಪ್ರದರ್ಶಿಸಲಾಗಿದೆ. |
ಜಿಲ್ಲಾದರ್ಶನ: ಹಾಸನ ಜಿಲ್ಲೆಯಲ್ಲಿ ಪ್ರಸಿದ್ದಿ ಪಡೆದಿರುವ ರುದ್ರಪಟ್ಟಣದ ಸಪ್ತಸ್ವರ ಮಂದಿರ, ರಾಮನಾಥಪುರದ ಲಕ್ಷ್ಮಣೇಶ್ವರ, ಪ್ರಸನ್ನ ಸುಬ್ರಮಣ್ಯ, ಪಟ್ಟಾಭಿರಾಮ, ರಾಮೇಶ್ವರ, ಬೇಲೂರು ಹಳೆಬೀಡು ದೇವಾಲಯ, ಗೊರೂರು ಅಣೆಕಟ್ಟೆ, ಕಟ್ಟೇಪುರ ಕೃಷ್ಣರಾಜ ಅಣೆಕಟ್ಟುಗಳ ಚಿತ್ರಗಳನ್ನೂ ಪ್ರದರ್ಶಿಸಲಾಗಿದೆ. |
ಪ್ರಯಾಣಿಕರಿಗೆ ನೀರು ಮತ್ತು ಪತ್ರಿಕೆ ಸೇವೆ: ತಮ್ಮ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರೊದಗಿಸುವ ಉದೇಶದಿಂದ ಬಾಬು ಮತ್ತು ನಟನಾಯ್ಕ ಬಸ್ಸಿನಲ್ಲಿ ಶುದ್ಧ ನೀರನ್ನು ಇಟ್ಟಿರುತ್ತಾರೆ. ಅಲ್ಲದೇ, ಕನ್ನಡ ದಿನಪತ್ರಿಕೆಯೊಂದನ್ನು ಬಸ್ಸಿನಲ್ಲಿಡುವ ಮೂಲಕ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಯಲೂ ಕಾರಣಕರ್ತರಾಗಿದ್ದಾರೆ. ಜೊತೆಗೆ ಪ್ರಯಾಣಿಕರಿಗೆ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ಕನ್ನಡದ ಗೀತೆಗಳನ್ನೂ ಹಾಕುತ್ತಾರೆ. |
ಪರಿಸರಪ್ರೇಮ: ಭಾಷಾಪ್ರೇಮ ದೊಂದಿಗೆ ಪರಿಸರ ಪ್ರಜ್ಞೆಯನ್ನು ಹುಟ್ಟುಹಾಕುವ ದೃಷ್ಟಿಯಿಂದ ಕನ್ನಡ ರಾಜ್ಯೋತ್ಸವದಂದು ತಮ್ಮ ಬಸ್ ಸಂಚರಿಸದ ಮಾರ್ಗದ ಅಲ್ಲಲ್ಲಿ ಜನರಿಗೆ 150ಕ್ಕೂ ಹೆಚ್ಚು ಗಿಡಗಳನ್ನು ಉಚಿತವಾಗಿ ವಿತರಿಸಿದರು. ಅಲ್ಲದೇ, ಅವುಗಳನ್ನು ಬಟ್ಟೆ ಬ್ಯಾಗಿನಲ್ಲಿಟ್ಟು ಕೊಡುವ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಿದ್ದೂ ಪ್ರಶಂಸೆಗೆ ಪಾತ್ರವಾಯಿತು. |
'ವರ್ಷಪೂರ್ತಿ ಹೀಗೇ ಇರುತ್ತದೆ. ಆದರೆ, ಬಸ್ನ ಹೊರಗೆ ಇರುವ ಅಲಂಕಾರವನ್ನು ಮಾತ್ರ ತೆಗೆಯುತ್ತೇವೆ.ನಮ್ಮ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿರುವುದು ಸಂತಸ ತಂದಿದೆ. ನಾವು ಹುಟ್ಟಿದ ಹಾಗೂ ಬದಕು ಕೊಟ್ಟಿರುವ ಕನ್ನಡಕ್ಕಾಗಿ ಒಂದಷ್ಟು ಸೇವೆ ಮಾಡುವುದು ಹೆಮ್ಮೆಯ ವಿಷಯವಾಗಿದೆ. ಸಂಸ್ಥೆಯ ನೌಕರರೂ ನಮ್ಮ ಕನ್ನಡಸೇವೆಗೆ ನೀಡುತ್ತಿರುವ ಸಹಕಾರವನ್ನು ಮರೆಯಲಾಗದು' ಎಂದು ನೆನೆಯುತ್ತಾರೆ ಚಾಲಕ ಬಾಬು ಮತ್ತು ನಿರ್ವಾಹಕ ನಟನಾಯ್ಕ. |
ಕೇಂದ್ರ ಸರಕಾರದ ಆಗ್ರಹ ನಿರಾಕರಿಸಿದ ವ್ಯಾಟ್ಸ್ ಆ್ಯಪ್ | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ Aug 24, 2018, 10:12 PM IST |
ಹೊಸದಿಲ್ಲಿ, ಆ. 24: ಸುಳ್ಳು ಸುದ್ದಿ ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ನಿಯಂತ್ರಿಸಲು ಅವುಗಳ ಮೂಲ ಪತ್ತೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕು ಎಂಬ ಕೇಂದ್ರ ಸರಕಾರದ ಸೂಚನೆ ಅನುಸರಿಸಲು ಸಾಧ್ಯವಿಲ್ಲ ಎಂದು ವ್ಯಾಟ್ಸ್ಆ್ಯಪ್ ಹೇಳಿದೆ. |
ಎಲ್ಲ ರೀತಿಯ ಅತಿ ಸೂಕ್ಷ್ಮ ಸಂಭಾಷಣೆಗಳಿಗೆ ಜನರು ವ್ಯಾಟ್ಸ್ ಆ್ಯಪ್ ಬಳಸುತ್ತಿದ್ದಾರೆ ಎಂದು ಒತ್ತಿ ಹೇಳಿರುವ ವ್ಯಾಟ್ಸ್ಆ್ಯಪ್, ಸುಳ್ಳು ಮಾಹಿತಿ ಬಗ್ಗೆ ಜನರಲ್ಲಿ ಜಾಗೃತ ಮೂಡಿಸುವಲ್ಲಿ ಗಮನ ಕೇಂದ್ರೀಕರಿಸಲಾಗಿದೆ ಎಂದಿದೆ. ಸುಳ್ಳು ಸುದ್ದಿಗಳಿಂದ ಹೆಚ್ಚುತ್ತಿರುವ ಗುಂಪು ಹತ್ಯೆಯಂತಹ ಬರ್ಬರ ಅಪರಾಧಗಳಿಗೆ ಕಡಿವಾಣ ಹಾಕಲು ಮೂಲ ಸಂದೇಶವನ್ನು ಪತ್ತೆ ಹಚ್ಚುವ ತಂತ್ರಜ್ಞಾನ ರೂಪಿಸುವಂತೆ ಕೇಂದ್ರ ಸರಕಾರ ವ್ಯಾಟ್ಸ್ಆ್ಯಪ್ಗೆ ಸೂಚಿಸಿತ್ತು. ಸಂದೇಶ ಮೂಲ ಪತ್ತೆ ಹಚ್ಚುವ ತಂತ್ರಜ್ಞಾನ ರೂಪಿಸುವುದರಿಂದ ವ್ಯಾಟ್ಸ್ ಆ್ಯಪ್ನ ಖಾಸಗಿತನ ಹಾಗೂ ಆರಂಭದಿಂದ ಅಂತ್ಯ ದವರೆಗೆ ಗೌಪ್ಯತೆ ದುರ್ಬಲವಾಗುತ್ತದೆ. ಇದರಿಂದ ವ್ಯಾಟ್ಸ್ ಆ್ಯಪ್ ದುರ್ಬಳಕೆ ಆಗುವ ಸಾಧ್ಯತೆ ಇದೆ. ಗೌಪ್ಯತೆಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ವ್ಯಾಟ್ಸ್ ಆ್ಯಪ್ ವಕ್ತಾರರು ಹೇಳಿದ್ದಾರೆ. |
ಹಿಂಸಾಚಾರ ಹಾಗೂ ಅಪರಾಧ ಉತ್ತೇಜನಕ್ಕೆ ಕಾರಣವಾಗುವ ಕೆಟ್ಟ ಸಂದೇಶಗಳನ್ನು ಸಾಮೂಹಿಕವಾಗಿ ಹರಡುವ ಸಂದರ್ಭ ಸಂದೇಶದ ಮೂಲ ಪತ್ತೆ ಹಚ್ಚುವ ಹಿನ್ನೆಲೆಯಲ್ಲಿ ವ್ಯಾಟ್ಸ್ ಆ್ಯಪ್ ತಾಂತ್ರಿಕ ಆವಿಷ್ಕಾರ ಶೋಧಿಸುವುದನ್ನು ಮುಂದುವರಿಸಬೇಕು ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ತಿಳಿಸಿದೆ. ವ್ಯಾಟ್ಸ್ ಆ್ಯಪ್ ಭಾರತೀಯ ಕಾನೂನಿನ ಅನುಸರಿಸುವುದಾಗಿ ದೃಢ ಭರವಸೆ ನೀಡಬೇಕು. ಅಲ್ಲದೆ ವ್ಯಾಪಕ ಜಾಲ ಹೊಂದಿರುವ ಸಮಸ್ಯೆ ಪರಿಹಾರ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. |
ಸಪ್ನಾ 'ಅವಧಿ' ಟಾಪ್ ಟೆನ್ |
Pic by Vijay Bellary |
Pic by Azad Jadhav |
by ರಾಧಿಕ ವಿಟ್ಲ | Mar 7, 2021 | ಅಂಕಣ, ಈ ದಿನ, ತಿರುಗಾಡಿಯ ಕಥೆಗಳು | 0 ಪ್ರತಿಕ್ರಿಯೆಗಳು |
by Avadhi | Mar 6, 2021 | ಈ ದಿನ, ನೆನಪು | 1 ಪ್ರತಿಕ್ರಿಯೆ |
by Avadhi | Mar 6, 2021 | ಈ ದಿನ, ಹೇಳತೇವ ಕೇಳ | 0 ಪ್ರತಿಕ್ರಿಯೆಗಳು |
ಗಂಗಾಧರ ಮೂರ್ತಿ ಮೊನ್ನೆ ಕಥೆಗಾರ, ನಿವೃತ್ತ ಕೆಎಎಸ್ ಅಧಿಕಾರಿ ಕೇಶವರೆಡ್ಡಿ ಹಂದ್ರಾಳರ ಇಪ್ಪತ್ತೈದು ಎಕರೆಯ ಧೀರ್ಘಾವಧಿ ಫಸಲಿನ ಸಾವಿರಾರು ಮರಗಳ ತೋಟ ಸಂಪೂರ್ಣ ಸುಟ್ಟು ಹೋದ ಬಗ್ಗೆ ಪತ್ರಿಕೆಗಳಲ್ಲಿ ಓದಿ ತೀವ್ರ ಸಂಕಟವಾಯಿತು. ಹಂದ್ರಾಳರಿಗೆ ಈ ಬಗ್ಗೆ ನನ್ನ ತೀವ್ರ ವಿಶಾದಗಳು. ಕಾಡನ್ನು ಕೃಶಗೊಳಿಸಿದ ನಂತರ ಈಗೀಗ ಕಾಡ್ಗಿಚ್ಚಿನ... |
by ರೇಣುಕಾ ರಮಾನಂದ | Mar 5, 2021 | ಅಂಕಣ, ಈ ದಿನ, ನನ್ನ ಶಾಲ್ಮಲಾ/ರೇಣುಕಾ ರಮಾನಂದ | 1 ಪ್ರತಿಕ್ರಿಯೆ |
by ಓಂಶಿವಪ್ರಕಾಶ್ | Mar 5, 2021 | ಅಂಕಣ, ಈ ದಿನ, ಮುಕ್ತ ಕಣ | 0 ಪ್ರತಿಕ್ರಿಯೆಗಳು |
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ 'ಓಂ' ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ... |
ಹೊಸತಲೆಮಾರಿಗೆ ಲಂಕೇಶ್ 'ಕಥಾ ಕಮ್ಮಟ' |
by Avadhi | Mar 7, 2021 | Invite |
ಗಂಗೂಬಾಯಿ ಹಾನಗಲ್ ನೆನಪಿಗೆ… |
by Avadhi | Mar 6, 2021 | Invite |
Mar 7, 2021 | ಬಾ ಕವಿತಾ | 0 ಪ್ರತಿಕ್ರಿಯೆಗಳು |
ಸುನೀತಾ ಬೆಟ್ಕೇರೂರ ಬರುತ್ತಿದ್ದೇನೆ ನಾನುಬೇಡುವುದಿಲ್ಲಹೂವ ಬೆಳೆಸಿ ನಾನುಬರುವದಾರಿಗೆಂದು, ನೀವುಮುಳ್ಳನ್ಹರಡಿದರೂಮುನ್ನಡೆಯುತ್ತೇನೆ ಕತ್ತಬಗ್ಗಿಸದೆ.... |
Mar 6, 2021 | ಬಾ ಕವಿತಾ | 1 ಪ್ರತಿಕ್ರಿಯೆ |
ಸರೋಜಿನಿ ಪಡಸಲಗಿ ತಲೆ ತುಂಬ ಗೋಜಲು ಗೊಂದಲಎದೆ ತುಂಬ ನೆನಪುಗಳ ನೆರವಿ||ಕಣ್ಣಂಚಲಿ ಕಂಡೂ ಕಾಣದ ತೇವುತುಟಿಯಂಚಲೊಂದು ಹೂ ನಗು||ಮನದಿ ಮೌನ ರಾಗದ ಆಲಾಪನೆನಪೇ ನೀನದೆಷ್ಟು ಸುಂದರ||... |
Mar 7, 2021 | ಬುಕ್ ಬಝಾರ್ | 0 ಪ್ರತಿಕ್ರಿಯೆಗಳು |
Subsets and Splits
No community queries yet
The top public SQL queries from the community will appear here once available.