text
stringlengths
0
61.5k
ಎಂದು ಮಡಿಕೇರಿ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಭಾನುವಾರ ತಿಳಿಸಿದರು.
ಪ್ರತಿ ವರ್ಷವೂ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಹಕ್ಕಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸ್ಥಳದ ಆಯ್ಕೆ ಸಂದರ್ಭ ವಿಭಿನ್ನ ಭೌಗೋಳಿಕ ಪ್ರದೇಶ, ಜೈವಿಕ ವೈವಿಧ್ಯತೆ, ಬಗೆ ಬಗೆಯ ಪಕ್ಷಿಗಳು ಇರುವ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ . ಮಡಿಕೇರಿ ಪಕ್ಷಿ ಹಬ್ಬದಲ್ಲಿ ಪ್ರತಿ ಗುಂಪಿನವರು 60 ಕ್ಕೂ ಹೆಚ್ಚಿನ ವಿವಿಧ ಬಗೆಯ ಪಕ್ಷಿಗಳನ್ನು ಗುರುತಿಸಿ ವೀಕ್ಷಿಸಿದ್ದಾರೆ.
ಪ್ರತಿ ವರ್ಷ ಪಕ್ಷಿ ಹಬ್ಬದಲ್ಲಿ
ವಿಶೇಷ ಪಕ್ಷಿಯೊಂದರ ಮೇಲೆ
ಗಮನ ಕೇಂದ್ರೀಕರಿಸಲಾಗುತ್ತದೆ. ಈ ಬಾರಿ ಬಾಜಾ ಪಕ್ಷಿಯನ್ನು ಗುರುತಿಸಲಾಗಿತ್ತು ಎಂದು ಪೂವಯ್ಯ ತಿಳಿಸಿದರು.
ಮೂರು ದಿನಗಳ ಕಾಲ ನಡೆದ ಹಕ್ಕಿ ಹಬ್ಬದಲ್ಲಿ ನಾಡಿನ ವಿವಿಧ ಕಡೆಗಳಿಂದ ಪಕ್ಷಿ ತಜ್ಞರು, ಪಕ್ಷಿ ವೀಕ್ಷಕರು ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸುವ ಮೂಲಕ ಪಕ್ಷಿಗಳ ಜೀವನ ಕ್ರಮವನ್ನು ಅಧ್ಯಯನ ನಡೆಸಿದರು. ಈ ಹಕ್ಕಿ ಹಬ್ಬವು ಪಶ್ಚಿಮ ಘಟ್ಟದ ವನ್ಯಜೀವಿಗಳ ಅಧ್ಯಯನಕ್ಕೆ ಉತ್ತಮ ಅವಕಾಶ ಕಲ್ಪಿಸಿದೆ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವರಾಮ್ ಬಾಬು ತಿಳಿಸಿದರು.
ಹಕ್ಕಿ ಹಬ್ಬದ ಸಂದರ್ಭದಲ್ಲಿ ಶನಿವಾರ ಮತ್ತು ಭಾನುವಾರ ಈ ಎರಡು ದಿನಗಳಂದು ಏಳು ತಂಡಗಳಲ್ಲಿ ಪ್ರತಿದಿನ ಮುಂಜಾನೆ 6 ರಿಂದ 11 ಗಂಟೆ ತನಕ ಮಡಿಕೇರಿ ನಗರದ ಸುತ್ತಮುತ್ತಲಿನ ವಿವಿಧ ಸ್ಥಳಗಳಿಗೆ 12 ರಿಂದ 15 ಮಂದಿಯನ್ನು ಒಳಗೊಂಡ ಏಳು ತಂಡಗಳಲ್ಲಿ ಪಕ್ಷಿಗಳ ಚಿಲಿಪಿಲಿ, ಅವುಗಳ ಚಲನವಲನ ಹಾಗೂಜೀವನ ಕ್ರಮಗಳನ್ನು ಪಕ್ಷಿ ಪ್ರಿಯರು ಪಕ್ಷಿತಜ್ಞರಿಂದ ಪಡೆದುಕೊಂಡರು.
ನಿಸರ್ಗ ತಜ್ಞರಾದ ಪ್ರವಾಸೋದ್ಯಮ ಇಲಾಖೆಯ ರಾಹುಲ್ ಆರಾಧ್ಯ, ನಾಗರಾಜ್, ವಿಜಯ್ ಇತರರು ಪಕ್ಷಿಪ್ರಿಯರಿಗೆ ಪಕ್ಷಿಗಳ ಚಲನವನ ಹಾಗೂ ಅವುಗಳ ಆವಾಸಸ್ಥಾನದ ಬಗ್ಗೆ ಪೂರಕ ಮಾಹಿತಿ ನೀಡಿದರು.
ಹಕ್ಕಿ ಹಬ್ಬ ಕಾರ್ಯಕ್ರಮದಲ್ಲಿ
ಪಕ್ಷಿಗಳ ಜೀವನ ಕ್ರಮ ಹಾಗೂ ಜೀವ ಪರಿಸರ ಸಂರಕ್ಷಣೆ ಕುರಿತು ಪಕ್ಷಿ ತಜ್ಞ ಡಾ ಎಸ್.ವಿ.ನರಸಿಂಹನ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ ಸಿ.ಜಿ.ಕುಶಾಲಪ್ಪ ಸೇರಿದಂತೆ ವಿವಿಧ
ತಜ್ಞರಿಂದ ಉಪನ್ಯಾಸದೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಡಲಾಯಿತು.
ಹಕ್ಕಿ ಹಬ್ಬದಲ್ಲಿ ಹಕ್ಕಿಗಳ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಇದರಲ್ಲಿ ದೇಶದ ವಿವಿಧ ಭಾಗಗಳಿಂದ ಸಂಶೋಧಕರು, ವನ್ಯಜೀವಿ ಛಾಯಾಗ್ರಾಹಕರು , ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಶಿಕ್ಷಣಾರ್ಥಿಗಳು ಸೇರಿದಂತೆ ಪಕ್ಷಿ ವೀಕ್ಷಕರು, ಪಕ್ಷಿ ಪ್ರಿಯರು, ಅರಣ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಭಾಗವಹಿಸಿದ್ದರು.
ಮಾರ್ಚ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಯಾವ ರೀತಿಯ ಯೋಗ ಫಲಗಳಲಿವೆ ಗೊತ್ತಾ? ತಿಳಿಯಿರಿ ಮಾಸ ಭವಿಷ್ಯ – Sri Tv Karnataka
March 3, 2022 March 3, 2022 Web DeskLeave a Comment on ಮಾರ್ಚ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಯಾವ ರೀತಿಯ ಯೋಗ ಫಲಗಳಲಿವೆ ಗೊತ್ತಾ? ತಿಳಿಯಿರಿ ಮಾಸ ಭವಿಷ್ಯ
ನಾವಿಂದು ಎರಡು ಸಾವಿರದ ಇಪ್ಪತ್ತೆರಡರ ಮಾರ್ಚ್ ತಿಂಗಳಿನಲ್ಲಿ ಕುಂಭ ರಾಶಿಯವರ ರಾಶಿ ಫಲ ಯಾವ ರೀತಿಯಾಗಿದೆ ಎಂಬುದರ ಕುರಿತಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಅದಕ್ಕಿಂತ ಮೊದಲು ಮಾರ್ಚ್ ತಿಂಗಳಲ್ಲಿ ಯಾವ ಗ್ರಹಗಳ ಬದಲಾವಣೆ ಆಗಲಿದೆ ಎಂಬುದನ್ನು ನೋಡುವುದಾದರೆ ಮಾರ್ಚ್ ಏಳನೇ ತಾರೀಖಿನಂದು ಬುಧನು ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ ಅದೇ ರೀತಿ ಮಾರ್ಚ್ ಹದಿನೈದನೇ ತಾರೀಖಿನಂದು ರವಿಯು ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ ಮತ್ತೊಮ್ಮೆ ಬುಧನು ಮಾರ್ಚ್ ಇಪ್ಪತ್ತೈದನೇ ತಾರೀಕಿನಂದು ನೀಚಕ್ಷೇತ್ರವಾದ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಮೂರು ಬದಲಾವಣೆಗಳು ದ್ವಾದಶ ರಾಶಿಗಳ ಮೇಲೆ ಸಾಕಷ್ಟು ಪರಿಣಾಮವನ್ನುಂಟುಮಾಡುತ್ತದೆ. ಈಗ ನಾವು ಕುಂಭ ರಾಶಿಯ ಮೇಲೆ ಯಾವ ರೀತಿ ಆದಂತಹ ಪರಿಣಾಮ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಕುಂಭ ರಾಶಿಯವರಿಗೆ ಸಾಡೆಸಾತಿ ನಡೆಯುತ್ತಿದೆ ಜೊತೆಗೆ ರಾಶಿಯ ಅಧಿಪತಿ ಆಗಿರುವಂತಹ ಶನಿಮಹಾತ್ಮ ವ್ಯಯ ಭಾವದಲ್ಲಿ ಇದ್ದಾನೆ. ವಿಶ್ವ ಜಾತಕ ಮೇ ತಿಂಗಳವರೆಗೆ ಕಾಲಸರ್ಪ ಎನ್ನುವ ಯೋಗದಲ್ಲಿ ಸಿಕ್ಕಿ ಹಾಕಿಕೊಂಡಿರುತ್ತದೆ ಆದ್ದರಿಂದ ಕಾಲಸರ್ಪದ ಭೀತಿ ಇರುತ್ತದೆ. ಕಾಳಹಸ್ತಿಯಂತಹ ಕ್ಷೇತ್ರ ದರ್ಶನವನ್ನೂ ಮಾಡುವುದು ತುಂಬಾ ಒಳ್ಳೆಯದು ಇಲ್ಲದಿದ್ದರೆ ಒಳ್ಳೊಳ್ಳೆ ರಾಜಯೋಗ ಇದ್ದರೂ ಕೂಡ ಅದು ದಕ್ಕುವುದಿಲ್ಲ. ಇನ್ನು ಆರೋಗ್ಯದ ಕುರಿತು ತುಂಬಾ ಎಚ್ಚರಿಕೆಯನ್ನು ವಹಿಸಬೇಕು ನಿಮ್ಮ ಜನ್ಮ ರಾಶಿಯಲ್ಲಿ ರವಿ ಗುರುಗಳು ಇರುತ್ತಾರೆ ಸಣ್ಣಪುಟ್ಟ ಉಷ್ಣಕಾರಕ ವ್ಯಾಧಿಗಳು ಕಾಣಿಸಿಕೊಳ್ಳಬಹುದು ಕೆಲವರಿಗೆ ಹೊಸ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಇಂತಹ ಸಮಸ್ಯೆಗಳು ಇರುವುದರಿಂದ ಆರೋಗ್ಯದ ಕುರಿತು ಎಚ್ಚರಿಕೆಯನ್ನು ವಹಿಸುವುದು ಒಳ್ಳೆಯದು.
ಯೋಗ ಕಾರಕನಾದಂತಹ ಶುಕ್ರನು ಕೂಡ ವ್ಯಯದಲ್ಲಿ ಇರುವುದರಿಂದ ಆರೋಗ್ಯದ ಕುರಿತು ಎಚ್ಚರಿಕೆಯನ್ನು ವಹಿಸುವುದು ಉತ್ತಮ. ವಿದ್ಯಾಧೀಶ ನಾದ ಗುರುವು ಜನ್ಮದಲ್ಲಿಯೇ ಸ್ಥಿತನಾಗಿದ್ದಾನೆ ಅವನು ಜನ್ಮದಲ್ಲಿ ಇರುವಷ್ಟು ಕಾಲ ನಿಮಗೆ ಅಷ್ಟು ಶುಭ ವಾಗುವುದಿಲ್ಲ. ವ್ಯಯದಲ್ಲಿರುವ ಶನಿಯು ಕೂಡ ಮೂರನೇ ದೃಷ್ಟಿಯಿಂದ ದ್ವಿತೀಯವನ್ನು ನೋಡುತ್ತಿದ್ದಾಗ ಸ್ವಲ್ಪ ಮಾತು ಕಡಿಮೆಯಾಗಿ ಹೋಗುತ್ತದೆ
ಯಾರ ಜೊತೆಯು ಮಾತನಾಡುವುದಕ್ಕೆ ಮನಸ್ಸಾಗುವುದಿಲ್ಲ ಈ ಸಮಯದಲ್ಲಿ ಮೌನವಾಗಿರುವುದು ಲೇಸು ಇಲ್ಲದಿದ್ದರೆ ನಿಷ್ಟುರಕ್ಕೆ ಕಾರಣವಾಗಬಹುದು. ಹಾಗಾಗಿ ಏಪ್ರಿಲ್ 17ರವರೆಗೆ ಕಾದರೆ ನಿಮಗೆ ಪೂರ್ಣಪ್ರಮಾಣದ ಗುರುಬಲ ದೊರೆಯುತ್ತದೆ. ಈ ಮಾಸದಲ್ಲಿ ಸಂಪತ್ತಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಬಹುದು. ದಾಂಪತ್ಯ ಜೀವನದಲ್ಲೂ ಕೂಡ ಅಷ್ಟೊಂದು ಉಲ್ಲಾಸ ಕಾಣಿಸುವುದಿಲ್ಲ ಚಿಕ್ಕಪುಟ್ಟ ಮನಸ್ತಾಪಗಳು ಕಾಣಿಸಿಕೊಳ್ಳಬಹುದು.
ಸಹೋದರ ಮತ್ತು ಸಹೋದರಿಯರಲ್ಲಿ ಕೂಡ ಮನಸ್ತಾಪಗಳು ಉಂಟಾಗಬಹುದು ನಾಲ್ಕನೇ ಮನೆಯಲ್ಲಿ ರಾಹು ಇರುವುದರಿಂದ ವಿದ್ಯಾರ್ಥಿಗಳು ಕೂಡ ಅಭ್ಯಾಸದ ಕಡೆ ಸಾಕಷ್ಟು ಗಮನ ಕೊಡಬೇಕಾಗುತ್ತದೆ. ಜೊತೆಗೆ ವಾಹನ ಖರೀದಿಸುವವರಿಗೆ ಚಿಕ್ಕಪುಟ್ಟ ಅಪಘಾತಗಳು ಸಂಭವಿಸಬಹುದು ಹಾಗಾಗಿ ಈ ಸಮಯದಲ್ಲಿ ಖರೀದಿಸದೆ ಇರುವುದು ಒಳ್ಳೆಯದು. ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಹಣ ವ್ಯಯ ಮಾಡಬೇಕಾಗುತ್ತದೆ.
ನೀವೇ ಕಷ್ಟದಲ್ಲಿ ಇರುವಂತಹ ಸಂದರ್ಭದಲ್ಲಿ ನಿಮಗೆ ಹಣ ಕೊಡುವಂತೆ ಯಾರಾದರೂ ಪಿಡಿಸಬಹುದು ಸ್ನೇಹ ಭಾವ ಒಡೆದು ಹೋಗಬಹುದು. ಸಪ್ತಮಾಧಿಕಾರಿಯಾಗಿ ರುವಂತಹ ಸೂರ್ಯನು ನಿಮ್ಮ ರಾಶಿಯಲ್ಲಿ ಇದ್ದಾನೆ ಅಲ್ಲಿ ಗುರು ಅಸ್ತಂಗತನಾಗಿಯು ಇದ್ದಾನೆ. ಈ ಮಾಸದಲ್ಲಿ ಹೆಚ್ಚಿನ ಗ್ರಹಗಳು ವ್ಯಯದಲ್ಲಿ ಇದೆ ವ್ಯಯ ಎಂದರೆ ಹಣಕಾಸಿನ ಖರ್ಚು ಎಂದಲ್ಲ ವ್ಯಯದಲ್ಲಿ ಗ್ರಹಗಳು ಬಂದಾಗ ಉದ್ವಿಗ್ನತೆ ಧನಹಾನಿ ಮಾನಕ್ಕೆ ಕುತ್ತು ಮನಸ್ತಾಪಗಳು ಉಂಟಾಗುವುದು.
ನೀವು ಕೆಲಸ ಮಾಡುವಂತಹ ಜಾಗದಲ್ಲಿ ಎಚ್ಚರಿಕೆಯಿಂದ ಇರಬೇಕು ಆದಷ್ಟು ಶಿಸ್ತುಬದ್ಧವಾಗಿ ಮೌನವಾಗಿ ಕೆಲಸವನ್ನ ಮಾಡುವುದು ಒಳ್ಳೆಯದು.ಪ್ರತಿನಿತ್ಯ ನೀವು ನವಗ್ರಹ ಸ್ತೋತ್ರ ಗಳನ್ನು ಮಾಡಿ ನಿಮ್ಮ ಕೆಲಸವನ್ನು ಮುಂದುವರಿಸಬೇಕು ಸಾಧ್ಯವಾದರೆ ನವಗ್ರಹ ಸ್ತೋತ್ರವನ್ನು 19 ಸಾರಿ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ. ಬೆಳಿಗ್ಗೆ ಸ್ನಾನದ ನಂತರ ಉತ್ತರ ಅಭಿಮುಖವಾಗಿ ನಿಂತು ನವಗ್ರಹ ಸ್ತೋತ್ರವನ್ನು ಪಠಿಸಬೇಕು ಇದರಿಂದ ನಿಮಗೆ ಇರುವಂತಹ ಚಿಕ್ಕಪುಟ್ಟ ಅಶುಭಗಳು ಹೊರಟುಹೋಗುತ್ತವೆ ಶನಿ ಮತ್ತು ಸುಬ್ರಹ್ಮಣ್ಯ ಸ್ವಾಮಿ ಹಾಗು ಲಕ್ಷ್ಮಿ ನರಸಿಂಹನ ಆರಾಧನೆಯನ್ನು ಮಾಡಬೇಕು.
ಕುಂಭ ರಾಶಿಯವರು ಮಾರ್ಚ್ ತಿಂಗಳಿನಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು. ಇದಿಷ್ಟು ಕುಂಭರಾಶಿಯವರ ಮಾರ್ಚ್ ತಿಂಗಳ ರಾಶಿಫಲವಾಗಿದ್ದು ಒಳ್ಳೆಯ ಫಲಗಳನ್ನು ಪಡೆಯುವುದಕ್ಕೆ ನಾವು ಮೇಲೆ ಹೇಳಿರುವ ಪರಿಹಾರ ಕ್ರಮಗಳನ್ನು ಮಾಡಿಕೊಳ್ಳಬೇಕು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಎನ್ಸಿಎಫ್-2005, ಆರ್ಟಿಇ-2009, ಸಿಸಿಇ ತರಬೇತಿ ಕಾರ್ಯಾಗಾರ | Kannadamma
Home ಬಾಗಲಕೋಟೆ ಎನ್ಸಿಎಫ್-2005, ಆರ್ಟಿಇ-2009, ಸಿಸಿಇ ತರಬೇತಿ ಕಾರ್ಯಾಗಾರ
ಎನ್ಸಿಎಫ್-2005, ಆರ್ಟಿಇ-2009, ಸಿಸಿಇ ತರಬೇತಿ ಕಾರ್ಯಾಗಾರ
ಜಿಲ್ಲಾ ಪಂಚಾಯತ ಬಾಗಲಕೋಟ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರಸಮನ್ವಯಾಧಿಕಾರಿಗಳ ಕಾರ್ಯಾಲಯ ಜಮಖಂಡಿಯವರ ಆಶ್ರಯದಲ್ಲಿ ಎನ್ಸಿಎಫ್-2005, ಆರ್ಟಿಇ-2009, ಸಿಸಿಇ ತರಬೇತಿ ಕಾರ್ಯಾಗಾರವು ರಬಕವಿಯ ಶ್ರೀಚನ್ನ ವೀರೇಶ್ವರ ಪ್ರಾಥಮಿಕ ಪ್ರೌಢಶಾಲಾ ಸಭಾಭವನದಲ್ಲಿ ಐದು ದಿನಗಳವರೆಗೆ ಯಶಸ್ವಿಯಾಗಿ ನಡೆಯಿತು. ತರಬೇತಿಯ ಮೊದಲನೇ ದಿನ ನೋಂದಣಿ, ತಂಡಗಳ ರಚನೆ, ಕ್ಷೇತ್ರನಯಮಗಳು, ವೇಳಾಪತ್ರಿಕೆಯನ್ನು ನಡಲಾಯಿತು. ಸನವಾಸ ತರಬೇತಿಯಾದ್ದರಿಂದ ಎಲ್ಲಶಿಕ್ಷಕ ಶಿಕ್ಷಕಿಯರು ಕಡ್ಡಾಯವಾಗಿ ತರಬೇತಿಯಲ್ಲಿ ಐದು ದಿನಗಳವರೆಗೆ ಇರಲೇಬೇಕು. ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ಬೇಕೆಂದು ಆರಂಭದಲ್ಲಿ ತರಬೇತಿ ನೊಡಲ್ ಅಧಿಕಾರಿಗಳು, ಕ್ಷೇತ್ರಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆರ್.ಎಮ್. ಸಂಪಗಾಂವಿ ಹಾಗೂ ಸಂಪನ್ಮೂಲವ್ಯಕ್ತಿಗಳು ಸೂಚನೆ ನೀಡಿದರು. ಪ್ರತಿದಿನ ಬೆಳಿಗ್ಗೆ ಉತ್ತಮ ಉಪಹಾರ, ಮಧ್ಯಾನ್ಹ ಮತ್ತು ರಾತ್ರಿ ರುಚಿಕಟ್ಟಾದ ಊಟ, ಬೆಳಿಗ್ಗೆ, ಸಂಜೆ ಚಹಾ ವ್ಯವಸ್ಥೆ ಕೂಡಾ ಮಾಡಲಾಗಿತ್ತು.
ರಾಷ್ಟ್ತ್ರೀಯ ಪಠ್ಯಕ್ರಮ ಚೌಕಟ್ಟು.
ಪಾಸ್ತಾವಿಕ ಅಂಶಗಳು: 1)ಪಠ್ಯಕ್ರಮ ಕರಡನ್ನು ರಾಜ್ಯ ಮತ್ತು ಜಿಲ್ಲೆಗಳ ಮಟ್ಟದಲ್ಲಿ ಸುಮಾರು 30 ಕಾರ್ಯಾಗಾರಗಳನ್ನು ಕೈಗೊಂಡು ಚರ್ಚಿಸಿ ತನ್ನ ದೃಷ್ಡಿಕೋನಗಳನ್ನು ಸಲ್ಲಿಸಿದೆ. 2) ರಾಷ್ಡ್ತ್ರೀಯ ಚಳುವಳಿ, ಸಂವಿಧಾನಾತ್ಮಕ ಹೊಣೆಗಾರಿಕೆ, ಮೌಲ್ಯಗಳು, ರಾಷ್ಟ್ತ್ರೀಯ ಭಾವೈಕ್ಯತೆ, ರಾಷ್ಟ್ತ್ರೀಯ ಪರಂಪರೆ, ಸಮಾನತೆ, ಪ್ರಜಾಪ್ರಭುತ್ವ, ಧರ್ಮನಿರಪೇಕ್ಷತೆ, ಲಿಂಗ ಸಮಾನತೆ, ಪರಿಸರ ಸಂರಕ್ಷಣೆ, ಸಾಮಾಜಿಕ ಅಂತರಗಳ ನಿರ್ಮೂಲನೆ ಈ 10 ಮೂಲ ತತ್ವಗಳನ್ನು ಅಳವಡಿಸಿ ಪಠ್ಯ ಪುಸ್ತಕ ಪರೀಶೀಲನೆ ಮಾಡಲಾಗಿದೆ. 3) ಕಲಿಕೆಯು ಮಗುವಿಗೆ ಸಂತೋಷ ತರುವ ತತ್ವದ ಮೇಲೆ ಪಠ್ಯ ಪುಸ್ತಕ ಪರಿಷ್ಕ್ತ್ರತಗೊಂಡಿದೆ. 4) ಯುವಜನಾಂಗದ ಬದಲಾವಣೆ ವೇಗಕ್ಕೆ ಪಠ್ಯಕ್ರಮ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ.
ಎನ್ ಸಿ ಎಪ್ ಮಾರ್ಗದರ್ಶಿ ತತ್ವಗಳು: 2005
ರಾಷ್ಟ್ತ್ರೀಯ ಪಠ್ಯಕ್ರಮ ಚೌಕಟ್ಟು ಕೆಲವು ತತ್ವಗಳನ್ನು ಒಳಗೊಂಡಿದೆ.
1) ಜ್ಞಾನವು ಶಾಲೆಯ ಹೊರಗಿನ ಜೀವನಕ್ಕೆ ಸಂಬಂಧಿಸಿದೆ. ಉದಾ; ಗಿಳಿಪಾಠ
2) ಬಾಯಿಪಾಠ ಮಾಡುವುದನ್ನು ಕಡಿಮೆ ಮಾಡಿ ಕಲಿಕಾಪ್ರಕ್ರಿಯೆಯನ್ನು ಬೇರೆಯಾಗಿ ಪರಿಗಣಿಸಿದೆ. 3) ಪಠ್ಯಕ್ರಮವು ಪಠ್ಯಪುಸ್ತಕಗಳನ್ನು ಮೀರಿ ನಿಲ್ಲುವಂತೆ ಶ್ರೀಮಂತಗೊಳಿಸುವುದು. 4) ಪರೀಕ್ಷೆಗಳನ್ನು ಹೆಚ್ಚು ನಮ್ಯ (ಕಡಿಮೆ) ಮಾಡುವುದು, ತರಗತಿಯ ಆಗುಹೋಗುಗಳೊಂದಿಗೆ ಸಮ್ಮಿಳಿತಗೊಳಿಸುವುದು. 5) ಪ್ರಜಾಸತ್ತಾತ್ಮಕ ರಾಜ್ಯವ್ಯವಸ್ಥೆಯಲ್ಲಿ ಪರಸ್ಪರ ಸ್ಪರ್ಧೆ ಹಾಗೂ ಪ್ರೀತಿಗಳುಳ್ಳ ಕಾಳಜಿಗಳನ್ನು ಬೆಳೆಸುವುದು ಉದಾ: ತಾಳ್ಮೆಯಿಂದ ಕೇಳುವುದು, ಇನ್ನೊಬ್ಬರ ವಿಚಾರ ಗೌರವಿಸುವುದು.
ಕೆ ಸಿ ಎಪ್ = ಕರ್ನಾಟಕಾ ಪಠ್ಯಕ್ರಮ ಚೌಕಟ್ಟು
ರಾಜ್ಯ ಪಟ್ಯಕ್ರಮ ಮಾರ್ಗದರ್ಶಿ ತತ್ವಗಳ ಮುಖ್ಯಾಂಶಗಳು
1) ಕಲಿಯುವವರು ಮತ್ತು ಅವರ ಅಗತ್ಯಗಳು 2) ಮಕ್ಕಳ ಮೌಲ್ಯ ಮಾಪನ 3) ಕಲಿಕೆಯ ಶಿಸ್ತು 4) ಪಠ್ಯಕ್ರಮದ ನಿರ್ವಹಣೆ 5) ಓದ್ಯೌಗಿಕ ಶಿಕ್ಷಣ 6) ಶಿಕ್ಷಣದ ಗುಣಮಟ್ಟ 7) ಶಿಕ್ಷಕ -ಶಿಕ್ಷಣ
ಪಠ್ಯವಸ್ತು ರಚನೆಗೆ ಮಾರ್ಗದರ್ಶನಗಳು:
1) ನಿರ್ದಿಷ್ಟ ವಿಷಯ ಶಿಕ್ಷಣದ ಗುರಿಗಳು ಮತ್ತು ಮುಖ್ಯ ಉಧ್ದೇಶಗಳನ್ನು ಎದ್ದು ಕಾಣುವಂತೆ, ಮೇಲ್ಪಂಕ್ತಿಯಲ್ಲಿ ವಿಶೇಷ ಕಾಳಜಿ ವಹಿಸಿ ಪಠ್ಯವಸ್ತುವಿನಲ್ಲಿ ಅಳವಡಿಸಬೇಕು. 2) ಕಲಿಕೆಯ ನೀರೀಕ್ಷೆಗಳನ್ನು ತರಗತಿಯ ಹಂತಕ್ಕೆ ತಕ್ಕ ಹಾಗೆ ನಿರ್ದರಿಸಬೇಕು. ಪಠ್ಯ ವಸ್ತು ಪರಿವಿಡಿಗಳನ್ನು ನಿರ್ದಿಷ್ಟವಾದ ಮತ್ತು ಉಪವಿಭಾಗಗಳಾಗಿ ವಿಂಗಡಿಸಿ ಒದಗಿಸಬೇಕು. 3) ಪ್ರತಿ ಭಾಗ ಉಪಭಾಗವನ್ನು ನಿರ್ವಹಿಸಲು ಎಷ್ಟು ಗಂಟೆಗಳು ಅವಶ್ಯ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿರಬೇಕು. ಇದರಿಂದ ಆಯಾ ಪಾಠಕ್ಕಿರುವ ನೀರೀಕ್ಷೆಗಳು ಮತ್ತು ಆಳ, ಪಠ್ಯಪುಸ್ತಕ ಲೇಖಕರು ಮತ್ತು ಶಾಲಾ ಶಿಕ್ಷಕರಿಗೆ ಮನವರಿ ಕೆಯಾಗುತ್ತದೆ.
ಎನ್ ಸಿ ಎಪ್ 2005 ಪಠ್ಯಕ್ರಮದ ಸಾಮಾನ್ಯ ಅಂಶಗಳು
1)ಭಾರತೀಯ ಸಂವಿದಾನದಲ್ಲಿ ಅಡಕವಾಗಿರುವ ಮೌಲ್ಯಗಳನ್ನು ಎತ್ತಹಿಡಿಯ ಲಾಗಿದೆ. 2) ಪಠ್ಯ ಕ್ರಮದ ಹೊರ ಇಳಿಕೆ. 3)ಎಲ್ಲರಿಗೂ ಗುನಮಟ್ಟದ ಶಿಕ್ಷಣ. 4) ಶಾಲೆಯ ಹೊರಗಿನ ವಾತಾವರನಕ್ಕೆ ಮತ್ತು ಬದುಕಿಗೆ ಮಗುವಿನ ಜ್ಞಾನದ ಸಂಯೋಜನೆ ಮಾಡುವುದು. 5) ಕಂಠಪಾಠ ವಿಧಾನದಿಂದ ಕಲಿಕೆಯನ್ನು ಬೇರ್ಪಡಿಸುವದು.
2ನೇ ದಿನ ತರಬೇತಿ ಯಲ್ಲಿ ಸಾಮೂಹಿಕ ಓಂಕಾರಪಠಣ, ಗುರುಸ್ತ್ತ್ರೌತ್ರ, ಶಾಂತಿ ಮಂತ್ರಪಠಿಸಿದ ಬಳಿಕ ಶ್ರೀ ಕೆ.ಸಿ. ಕೋತಂಬರಿಯ ವರಿಂದ ಪ್ರಾರ್ಥನೆ ನಡೆಯಿತು. ಚಿಂತನ, ವರದಿ, ಚಾರ್ಟ್ಸ್ ನಕಲು ಪಡೆಯುವುದು.
ನೋಡಲ್ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು, ಹಿರಿಯ ಶಿಕ್ಷಕರು, ತರಬೇತಿದಾರರು ಪಾಲ್ಗೊಂಡಿದ್ದರು.
ಆರ್ ಟಿ ಇ– ಶಿಕ್ಷಣ ಹಕ್ಕು ಕಾಯ್ದೆ
1) ಆರ್ಟಿಇ ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರಿಯಾಶೀಲ ಆಡಳಿತವೆಂದು ತಿಳಿಯುತ್ತದೆ. 2) ಶಿಕ್ಷಣದ ಹಕ್ಕು ಕಾಯ್ದೆ 2009 ಪ್ರಾಥಮಿಕ ಶಿಕ್ಷಣ ಇತಿಹಾಸದಲ್ಲಿ ಒಂದು ಮಹತ್ವದ ಹೆಜ್ಜೆಯೆಂದು ತಿಳಿಸುತ್ತದೆ. 3) 6ರಿಂದ14 ವಯೋಮಾನದ ಎಲ್ಲ ಮಕ್ಕಳಿಗೂ ಉಚಿತ ಕಡ್ಡಾಯ ಶಿಕ್ಷಣ ಕೊಡಬೇಕು. 4)ಮುಖ್ಯಶಿಕ್ಷಕರು/ಸಹಶಿಕ್ಷಕರು/ಶಾಲೆ/ಸಮುದಾಯ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪಣತೊಡಬೇಕು.
5) ಸರ್ವರೂ ಶಿಕ್ಷಣ ಇಲಾಖೆಯ ನಿಯಮಗಳನ್ನು ಪಾಲಿಸಬೇಕು.
ಮಾನವ ಸಂಪನ್ಮೂಲ ಅಧ್ಯಯನ ಒಂದು ರಾಷ್ಟ್ತ್ರದ ದೃಷ್ಟಿಯಿಂದ ಮಾನವ ಸಂಪನ್ಮೂಲಗಳೆಂದರೆ ಕಾರ್ಯನಿರತ ಜನರಲ್ಲಿ ಕಂಡು ಬರುವ ಜ್ಞಾನ, ನೈಪುಣ್ಯತೆ, ಕಾರ್ಯಸಾಮರ್ಥ್ಯ, ಮೇಧಾಶಕ್ತಿ, ಪ್ರವೃತ್ತಿಗಳ ಸಮೂಹವಾಗಿದೆ.
ದೇಶದ ಅಭಿವೃದ್ದಿ ಹೇಗೆ?
ಒಂದು ಸುಸಂಘಟಿತ ಮಾನವ ಸಂಪನ್ಮೂಲ ದೃಷ್ಟಿ ಸಮಾಜದಲ್ಲಿ ವ್ಯಕ್ತಿಗಳ ಜ್ಞಾನ, ಕಾಯ್ದಕ್ಷತೆ, ವೃತ್ತಿನೈಪುಣ್ಯತೆ, ಸಮಾಜಿಕ ಹೊಂದಾಣಿಕೆ ಮುಂತಾದ ಸಕಾರಾತ್ಮಕ ಬಲವನ್ನು ಮೂಡಿಸಬಲ್ಲದ್ದರಾಗಿದ್ದರಿಂದ ಮೂಲಭೂತವಾಗಿ ಶಿಕ್ಷಣದಿಂದ ಮಾತ್ರ ಇಂತಹ ವ್ಯಕ್ತಿತ್ವದ ನಿರ್ಮಾಣ ಸಾಧ್ಯ.
ಆರ್ಟಿಇ-2009 ಪಾರಿಭಾಷಿಕ ಪದಗಳು
1) ಸಮೂಚಿತ ಸರಕಾರ (ಕೇಂದ್ರ ಅಥವಾ ರಾಜ್ಯ ಸರಕಾರ) 2) ಮಗು : 6ರಿಂದ 14ವರ್ಷದೊಳಗಿನ ಮಕ್ಕಳು 3) ಶಾಲೆ : 1 ರಿಂದ 8ನೇ ತರಗತಿ ನಡೆಸುವ ಸ್ಥಳೀಯ ಸರಕಾರದಿಂದ ಮಾನ್ಯತೆ ಪಡೆದ ಕೇಂದ್ರ 4) ಸ್ಥಳೀಯ ಸರಕಾರ : ಜಿಲ್ಲಾ ಪಂಚಾಯತ/ತಾ.ಪಂ/ಗ್ರಾ.ಪಂ.ಪುರಸಭೆ/ಪ.ಪಂ.5) ಕ್ಯಾಪಿಟೇಷನ್ ಶುಲ್ಕ : ಶಾಲೆಯು ಅಧಿಸೂಚಿಸಿದ ಶುಲ್ಕವಲ್ಲದ ಯಾವುದೇ ರೀತಿಯ ದೇಣಿಗೆ ಅಥವಾ ಕಾಣಿಕೆ 6)ಪ್ರಾಥಮಿಕ ಶಿಕ್ಷಣ, ದುರ್ಬಲ ವರ್ಗಕ್ಕೆ ಸೇರಿದ ಮಗು, ಅಧಿಸೂಚನೆ, ತಂದೆ-ತಾಯಿ, ಪೋಷಕರು, ಶೋಧನಾ ಕಾರ್ಯ ವಿಧಾನ, ನಿರ್ಧಿಷ್ಟ ಪ್ರ ವರ್ಗದ ಶಾಲೆಗಳು, ಪರಂತು ಸರಕಾರಿ ಶಾಲೆಗಳು, ಅನುದಾನಿತ ಶಾಲೆ, ಖಾಸಗಿ ಅನುದಾನ ರಹಿತ ಶಾಲೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಅನುಕೂಲರಸ್ಥರಲ್ಲದ ಗುಂಪಿಗೆ ಸೇರಿದ ಮಗು, ಶಾಲೆಯ ವ್ಯಸ್ಥಾಪನಾ ಸಮಿತಿ
ಆರ್ಟಿಇ ಪ್ರಕಾರ ಶಿಕ್ಷಕರ ಕರ್ತವ್ಯಗಳು :
1)ಸೇವೆಯಲ್ಲಿ ಕ್ರಮಬದ್ಧತೆ ಮತ್ತು ಸಮಯಪಾಲನೆ 2) ನಿಗದಿಪಡಿಸಿದ ಅವಧಿಯಲ್ಲಿ ಪಠ್ಯ ಬೋಧನೆ 3) ಮಗುವಿನ ಅಗತ್ಯ ಅರಿತು ಬೋಧನೆ 4) ತಂದೆ-ತಾಯಿಯೊಂದಿಗೆ ಸುಮಧುರ ವರ್ತನೆ 5) ಮಗುವಿನ ನಿಂದನೆ ಮಾಡದಿರುವದು. 3ನೇ ದಿನ ಶಿಕ್ಷಕರು ಗುಣಮಟ್ಟದ ಶಿಕ್ಷಣ ಕೊಡಬೇಕು. ಪ್ರತಿ ಹಂತದ ಶಿಕ್ಷಕ ಮಗುವಿನ ಶಿಕ್ಷಣ ದೃಡಿಢಪಡಿಸಬೇಕು.
ವೃತ್ತಪರ ಶಿಕ್ಷಕರಾಗಲು ಮನಸ್ಸು ಮಾಡಬೇಕು. ರಾಷ್ಟ್ತ್ರೀಯ ಪಠ್ಯಕ್ರಮ ಚೌಕಟ್ಟು-2005 ಕಲಿಸುವ ವಿಧಾನ ಹೇಳುತ್ತದೆ. ಎನ್ಸಿಎಫ್-2005 ಶಿಕ್ಷಕರಿಗೆ ಅತ್ಯುಪಯುಕ್ತ ಮಾರ್ಗದರ್ಶಿಯಾಗಿದೆ. ಇದನ್ನು ಓದಿದರೆ ಹೊಸ ವಿಚಾರಗಳು ಬರುತ್ತವೆಂದು ಎರೆಡು ಗಂಟೆಗಳ ಕಾಲ ನಿರರ್ಗಳವಾಗಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎ.ಸಿ. ಗಂಗಾಧರ ಪಾಠವನ್ನು ನೀಡಿದರು. 4ನೇ ದಿನ ನಿಂದನೆ ಮತ್ತು ದಂಡನೆ ಕುರಿತು ಉಪನ್ಯಾಸ ನಡೆಯಿತು. ಲೈಂಗಿಕ ನಂದನೆ ಸೇರಿದಂತೆ ಒಂದಿಲ್ಲೊಂದು ನಿಂದನೆಗೆ ಮಗು ಒಳಗಾಗಿರುತ್ತದೆ. ಮಾನಸಿಕ ಕಿರುಕುಳದಿಂದ ಮಕ್ಕಳು ನೊಂದುಕೊಳ್ಳುತ್ತಾರೆ. ದಂಡನೆಗಳ ಕುರಿತಾಗಿ ವಿವರಿಸಲಾಯಿತು.
1) ಮಗುವಿನ ನಿಂದನೆ ಪ್ರಕರಣಕ್ಕೆ ಶಿಕ್ಷಕರಿಗೆ ಸೇವಾನಿಯಮದ ಮೇರೆಗೆ ಶಿಸ್ತು ಕ್ರಮ. 2)ಟಿ.ಸಿ. ವಿಳಂಬ ಮಾಡಿದರೆ ನಿಯಮದ ಮ,ಏರೆಗೆ ಶಿಸ್ತುಕ್ರಮ.,
ಸಿಸಿಇ ನಿರಂತರ ವ್ಯಾಪಕ ಮೌಲ್ಯಮಾಪನ :
ಮೌಲ್ಯವೆಂದರೆ ಬೆಲೆ, ಮಾಪನ ಎಂದರೆ ಅಳತೆ. ಮಗುವಿನ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಮೌಲ್ಯಮಾಪನವು ನಿರಂತರ ಹಾಗೂ ವ್ಯಾಪಕವಾಗಿ ಅಳೆಯುವ ಸಾಧನೆಯೇ ಶೈಕ್ಷಣಿಕ ಮೌಲ್ಯಮಾಪನ. 5ನೇ ದಿನ ತರಬೇತಿಯಲ್ಲಿ ಸಾಮೂಹಿಕ ಓಂಕಾರಪಠಣ, ಗುರುಸ್ತ್ತ್ರೌತ್ರ, ಶಾಂತಿಮಂತ್ರಪಠಿಸಿದ ಬಳಿಕ ಶ್ರೀ ಕೆ.ಸಿ. ಕೋತಂಬರಿಯವರಿಂದ ಪ್ರಾರ್ಥನೆ ನಡೆಯಿತು. ಚಿಂತನ, ವರದಿ, ಚಾರ್ಟ್ಸ್ನಕಲು ನಂತರ ಭಾರತದ ಪ್ರಥಮ ಪ್ರಧಾನಮಂತ್ರಿಗಳಾದ ಪಂಡಿತ ಜವಾಹರಲಾಲ ನೆಹರು, ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಹಿರಿಯಶಿಕ್ಷಕರಾದ ಶ್ರೀ ಎಚ್.ಡಿ. ಬಾಲಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮ.ಕೃ. ಮೇಗಾಡಿ, ಶ್ರೀ ಆರ್.ಎಸ್. ರೋಣದ, ಶ್ರೀಮತಿ ಎಲ್.ಎಸ್. ಅರುಣಾಕ್ಷಿ ಮಾತನಾಡಿದರು.
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ವಿಧಗಳು: 1)ರೂಪನಾತ್ಮಕ ಮೌಲ್ಯಮಾಪನ 2) ಸಂಕಲನಾತ್ಮಕ ಮೌಲ್ಯಮಾಪನ.
ಈ ಮೌಲ್ಯಮಾಪನಗಳ ಉದ್ದೇಶಗಳ ಕುರಿತು ಚರ್ಚಿಸಲಾಯಿತು. ಸಾಧನ ಹಾಗೂ ತಂತ್ರಗಳು : ಮಕ್ಕಳ ಪ್ರಗತಿ ತಿಳಿಯಲು ಹಮ್ಮಿಕೊಳ್ಳಬಹುದಾದ ಮುಖ್ಯ ಮೌಲ್ಯಮಾಪನಗಳು 1) ಇಡೀ ಗುಂಪಿಗೆ ನಡೆಸಬಹುದಾದ ಚಟುವಟಿಕೆಗಳು 2) ಗಮನಿಸುವದು 3)ಸಂದರ್ಶನ 4) ದಾಖಲಾತಿ ಪರೀಶೀಲನೆ ಈ ಐದು ದಿನಗಳ ತರಬೇತಿಯಲ್ಲಿ ಪ್ರತಿದಿನ ಬೆಳಿಗ್ಗೆ 7ಗಂಟೆಗೆ ಯೋಗಾಸನ, ವ್ಯಾಯಾಮ ನಡೆಯುತ್ತಿತ್ತು. ಯೋಗದ ಕುರಿತು ಶ್ರೀ ಬಿ.ಬಿ. ಕುದರಿಮನಿ, ಶ್ರೀಆರ್.ಎಮ್.ಸಂಪಗಾಂವಿ, ಶ್ರೀ ಸಿ.ಬಿ. ತೆಗ್ಗಿ ಪ್ರಮುಖಾಂಶಗಳನ್ನು ವಿವರಿಸಿ ಬರೆಸುತ್ತಿದ್ದರು.
ಸಂಜೆ ಶಿಕ್ಷಕ/ಕಿಯರಿಂದ ಮನರಂಜನಾ ಕಾರ್ಯಕ್ರಮಗಳು ನಗೆಗಡಲ್ಲಿ ತೇಲಿಸುತ್ತಿದ್ದವು. ಭಾವಗೀತೆ, ಭಕ್ತಿಗೀತೆ, ಜನಪದಗೀತೆಗಳು, ಚುಟುಕುಗಳು, ಹಾಸ್ಯಚಟಾಕಿಗಳು ಕೇಳುಗರ ಮನತಣಿಸುತ್ತಿದ್ದವು. ಒಟ್ಟಾರೆ, ಐದು ದಿನಗಳ ತರಬೇತಿ ಬೇಸರವಾಗದಂತೆ, ಎಲ್ಲ ರೀತಿಯ ಸೌಲಭ್ಯಗಳೊಂದಿಗೆ ಯಶಸ್ವಿಯಾಗಿ ನಡೆಯಿತು.
ಜಾತಿ ಜನಗಣತಿಯಲ್ಲಿ ಭೋವಿ-ವಡ್ಡರ್ ಎಂದು ನಮೂದಿಸಿ-ಸಿದ್ಧರಾಮೇಶ್ವರ ಶ್ರೀಗಳು » Kannadanet.com
Home > Koppal News > ಜಾತಿ ಜನಗಣತಿಯಲ್ಲಿ ಭೋವಿ-ವಡ್ಡರ್ ಎಂದು ನಮೂದಿಸಿ-ಸಿದ್ಧರಾಮೇಶ್ವರ ಶ್ರೀಗಳು
ಜಾತಿ ಜನಗಣತಿಯಲ್ಲಿ ಭೋವಿ-ವಡ್ಡರ್ ಎಂದು ನಮೂದಿಸಿ-ಸಿದ್ಧರಾಮೇಶ್ವರ ಶ್ರೀಗಳು
ಕೊಪ್ಪಳ: ಇದೇ ಎಪ್ರೀಲ್ ೧೧ ರಿಂದ ಆರಂಭವಾಗುವ ಜಾತಿ ಜನಗಣತಿಯಲ್ಲಿ ಭೋವಿ, ವಡ್ಡರ್ ಎಂದು ನಮೂದಿಸಿ ಬೇರೆ ಯಾವುದೇ ಪದ ಚಿಹ್ನೆಗಳನ್ನು ತುಂಬಿಸಬೇಡಿ ಎಂದು ಬಾಗಲಕೋಟೆ-ಚಿತ್ರದುರ್ಗದ ಭೋವಿಗುರುಪೀಠದ ಅಧ್ಯಕ್ಷರಾದ ಶ್ರೀಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳು ಕೋರಿದ್ದಾರೆ.
ಅವರು ಕೊಪ್ಪಳ ಜಿಲ್ಲೆಯಲ್ಲಿ ಜಾತಿ ಜನಗಣತಿಯ ಜಾಗೃತಿಯಾತ್ರೆ ಕೈಗೊಂಡು ಭಾರತ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಕರ್ನಾಟಕ ಸರ್ಕಾರವು ದಿನಾಂಕ: ೧೧ ಏಪ್ರಿಲ್ ೨೦೧೫ ರಿಂದ ೩೦ ಏಪ್ರಿಲ್ ೨೦೧೫ ರವರೆಗೆ ಜಾತಿ ಜನಗಣತಿ ನಡೆಸುತ್ತಿರುವುದು ಶ್ಲಾಘನೀಯ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳಿಗೆ ಮುಖ್ಯವಾಗಿ ಜಾತಿಯನ್ನು ಆಧಾರವಾಗಿ ಪರಿಗಣಿಸುತ್ತಿರುವುದು ನಮಗೆ ತಿಳಿದಿರುವ ವಿಷಯವಾಗಿದೆ. ಭಾರತದಲ್ಲಿ ಮೀಸಲಾತಿ ಜಾರಿಯಾದ ದಿನದಿಂದ ಇಂದಿಗೆ ಸುಮಾರು ೨೫% ರಷ್ಟು ಭೋವಿ ಸಮುದಾಯ ಅಭಿವೃದ್ದಿ ಹೊಂದಬೇಕಾಗಿತ್ತು ಆದರೆ ಇದುವರೆಗೂ ಆಗಿರುವ ಪ್ರಯೋಜನ ಕೇವಲ ಶೇ೪% ಮಾತ್ರ ಎಂಬುವುದು ಶೋಚನೀಯ ಸಂಗತಿಯಾಗಿದೆ. ಜಾತಿಗೆ ಅನುಗುಣವಾಗಿ ಮೀಸಲಾತಿ ಮತ್ತು ಇತರೆ ಸರ್ಕಾರಿ ಸೌಲಭ್ಯಗಳು ಸಿಗುವಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತಯಂತ್ರ ನೋಡಿಕೊಳ್ಳಬೇಕಾಗಿರುತ್ತದೆ. ಅನುಸೂಚಿತ ಜಾತಿಯಲ್ಲಿ ಸುಮಾರು ಶೇ೧೧% ರಷ್ಟು ಇರುವ ಭೋವಿ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳಲ್ಲಿ ಅತ್ಯಂತ ಕಡಿಮೆಯಾಗಿದ್ದು ಅದನ್ನು ಮುಂದಿನ ದಿನಗಳಲ್ಲಿ ಪಡೆಯುವಂತಹ ಕೆಲಸವಾಗಬೇಕಾಗಿದೆ. ಅದನ್ನು ಆಳುವಂತಹ ಸರ್ಕಾರಗಳು ಕಲ್ಪಿಸಿಕೊಡಬೇಕಾಗಿದೆ.ಭೋವಿ ಸಮಾಜದ ವಲಸೆ ಹೋಗಿರುವಂತಹ ಕುಟುಂಬಗಳನ್ನು ಆಯಾ ಗ್ರಾಮದ ಮುಖಂಡರು ಜನಗಣತಿ ಸಂದರ್ಭದಲ್ಲಿ ಕರೆಯಿಸಿಕೊಂಡು ತಪ್ಪದೇ ಗಣತಿಯಲ್ಲಿ ಭಾಗವಹಿಸಿ ಕುಟುಂಬದ ಸ್ಥಿತಿಗತಿಯನ್ನು ಗಣತಿದಾರರ ಮುಂದೆ ವಿವರಿಸಲು ಸಹಕಾರಿಯಾಗಬೇಕಾಗಿದೆ.
ಈ ನಿಟ್ಟಿನಲ್ಲಿ ಭೋವಿ ಸಮಾಜವನ್ನು ಸರ್ಕಾರವು ಗುರುತಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿ ಕೈಪಿಡಿಯ ಪ್ರಕಾರ ಭೋವಿ ಮತ್ತು ವಡ್ಡರ್, ಎಂಬುದರ ಸಂಕೇತವಾಗಿ ಸಮಾಜದ ಬಾಂಧವರು ಜಾತಿ ಜನಗಣತಿಯಲ್ಲಿ ಎಂದು ನಮೂದಿಸಬೇಕಾಗಿದೆ. ವೃತ್ತಿಸೂಚಕವಾದ ಬಂಡಿ ವಡ್ಡರ್, ಗಿರಣಿ ವಡ್ಡರ್, ಪಾತ್ರೋಟಿ, ಕಲ್ಲು ವಡ್ಡರ್, ಮಣ್ಣು ವಡ್ಡರ್, ಭಾವಿ ವಡ್ಡರ್, ಉಪ್ಪು ವಡ್ಡರ್ ಮತ್ತು ತಾನಕಗಳು ಹಾಗೂ ಬೆಡಗುಗಳನ್ನು ನಮೂದಿಸಬಾರದೆಂದು ಎಂದು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಸತ್ಯಪ್ಪ ಭೋವಿ ಗೌರಿಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೋವಿ, ಹನುಮಂತಪ್ಪ ಗಂಗಾವತಿ, ಯಮನೂರಪ್ಪ ಭೋವಿ, ಸೂಚಪ್ಪ ಭೋವಿ, ನಾಗಪ್ಪ ಚಿಕ್ಕೋಪ, ರಮೇಶ ಯರಡೋಣಿ, ಮಾಸ್ತಿ ಭೋವಿ,ಸುರೇಶ ಕಿನ್ನಾಳ, ಗಾಳೆಪ್ಪ ಗಂಗಾವತಿ, ಭೀಮಜ್ಜ ಭೈರನಾಯಕನಹಳ್ಳಿ,
ಫೇಸ್‌ವಾಶ್‌ News: Latest ಫೇಸ್‌ವಾಶ್‌ News & Updates on ಫೇಸ್‌ವಾಶ್‌ | Vijaya Karnataka
January,23,2020, 11:20:25
ಫೇಸ್‌ವಾಶ್‌ »
LAST UPDATED: Nov 25, 2019, 02.59 PM IST
Nov 25, 2019, 02.59 PM
ಬೇಸಿಗೆ ಟ್ಯಾನ್‌ನಿಂದ ಬಚಾವಾಗಿ ಎಂದ ಕೈರಾ
Apr 07, 2019, 02.36 PM
ಕೈರಾ ಅಡ್ವಾನಿ ಸಮ್ಮರ್‌ನಲ್ಲೂ ಕೂಲಾಗಿರುತ್ತಾರೆ.
ನ್ಯೂ ಯಿಯರ್‌ ನವೋಲ್ಲಾಸ
ಹೊಸ ವರ್ಷ ಇನ್ನೇನೂ ಸಮೀಪಿಸುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಹೊಸ ಆಕಾಂಕ್ಷೆಯೊಂದಿಗೆ ಆರಂಭಿಸುವುದು ಬೆಸ್ಟ್‌ ಎನ್ನುತ್ತಾರೆ ನಟ, ಮಾಡೆಲ್‌ ಸಂತೋಷ್‌ ರೆಡ್ಡಿ.
ಮುಖದ ತ್ವಚೆ ರಕ್ಷಣೆಗೆ ಫೇಸ್‌ವಾಶ್ ಮಾಡುವ ಕ್ರಮ ಹೀಗಿರಲಿ
Jul 18, 2018, 02.29 PM
​ಫೇಸ್‌ವಾಶ್‌ ಎಲ್ಲರೂ ಮಾಡುತ್ತೇವೆ. ಆದರೆ ಕೆಲವರಷ್ಟೇ ಫೇಸ್‌ವಾಶ್‌ ಅನ್ನು ಸರಿಯಾದ ಕ್ರಮದಲ್ಲಿ ಮಾಡುತ್ತಾರೆ. ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಯಸುವವರು ಫೇಸ್‌ವಾಶ್‌ ಕಡೆ ಗಮನಕೊಡುವುದು ಒಳ್ಳೆಯದು.
ಅಲಿಯಾ ಫ್ಯಾಷನ್‌ ಕಾಳಜಿ
Apr 09, 2018, 03.04 PM
ಬಾಲಿವುಡ್‌ ತಾರೆ ಅಲಿಯಾ ಭಟ್‌ ತಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ನಲ್ಲಿ ಆಗಾಗಗ್ಗೆ ಸಾಕಷ್ಟು ಬದಲಾವಣೆ ತರುತ್ತಿರುತ್ತಾರೆ.
ದಂಧೆ ಆರೋಪ ಒಡನಾಡಿ ಷಡ್ಯಂತ್ರ
ತಮ್ಮ ಸಲೂನ್‌ನಲ್ಲಿ ಕೇವಲ 15 ದಿನ ಕೆಲಸ ಮಾಡಿರುವ ಯುವತಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಅದು ಸಿಗದಿದ್ದಾಗ ತಮ್ಮ ಪತಿ ವಿರುದ್ಧ ಅತ್ಯಾಚಾರದ ದೂರು ಹೊರಿಸಿದ್ದಾಳೆ ಎಂದು ವೇಶ್ಯಾವಾಟಿಕೆ ಆರೋಪ ಎದುರಿಸುತ್ತಿರುವ ಬೋಗಾದಿಯ ಸ್ಪಾ ಮಾಲೀಕರ ಪತ್ನಿ ಭಾರತಿ ಪ್ರತ್ಯಾರೋಪ ಮಾಡಿದ್ದಾರೆ.
ನಿಮ್ಮ ರಾಶಿಗೆ ಅನುಗುಣವಾಗಿ ಬ್ಯೂಟಿ ಟಿಪ್ಸ್
Nov 25, 2017, 11.04 AM
ಕುತೂಹಲಕ್ಕಾದರೂ ಹೇರ್‌ಡೈ, ಫೇಶಿಯಲ್‌ ವಾಶ್‌, ಹಸ್ತಾಲಂಕಾರ ಮಾಡ್ಕೊಳ್ಳೋಕೆ ಯಾವ ಟೈಂ ಬೆಸ್ಟ್‌ ಅನ್ನೋ ಬ್ಯೂಟಿ ಟಿಫ್ಸ್‌, ಮೇಕಪ್‌ ಟಿಫ್ಸ್‌ ಸಹ ಕೊಡುತ್ತದೆ.
ಹೆಣ್ಮಕ್ಕಳ ಮೊದಲ ಆಯ್ಕೆ ಸ್ಲಿಂಗ್‌ ಬ್ಯಾಗ್‌
Oct 25, 2017, 04.53 PM
ಸರಕ್ಕನೇ ಬ್ಯಾಗಿನ ಝಿಪ್‌ ತೆರೆದು ಅದರೊಳಗೆ ಕೈ ಹಾಕಿದ ಆಕೆಯ ಸುಕೋಮಲವಾದ ಬೆರಳುಗಳಿಗೆ ಏನೋ ಚುಚ್ಚಿದ ಅನುಭವ.
ಮಾನ್ಸೂನ್‌ ಬಂತು, ತ್ವಚೆ ಆರೈಕೆ ಹೀಗಿರಲಿ
Jun 05, 2017, 02.24 PM
ಬೇಸಿಗೆ, ಮಳೆ, ಚಳಿ ಈ ಮೂರು ಕಾಲಕ್ಕೆ ಒಂದೇ ರೀತಿಯ ತ್ವಚೆ ಆರೈಕೆಯ ವಿಧಾನ ಪಾಲಿಸಲು ಸಾಧ್ಯವಿಲ್ಲ.
ಹೂವಲ್ಲ, ಗಿಡವನ್ನೇ ಕೊಳ್ಳುವವರು ಬಂದಿದ್ದಾರೆ
Oct 13, 2016, 10.32 AM
ಚೆಂಡು ಹೂವು ಕೊಳ್ಳುವವರಿಲ್ಲ, ಬೆಲೆ ಬಿದ್ದು ಹೋಗಿದೆ ಎಂಬ ಚಿಂತೆ ಇನ್ನು ಬೇಡ. ಬರೀ ಹೂವಲ್ಲ ಗಿಡದ ಸಮೇತ ಕೊಂಡುಕೊಳ್ಳುವುದಕ್ಕೆ ಖರೀದಿದಾರರು ಬಂದಿದ್ದಾರೆ.
ಲವ್‌ ಯುವರ್‌ ಸೆಲ್ಫ್
ಮಿಸೆಸ್‌ ಇಂಡಿಯಾ ಪ್ಲಾನೆಟ್‌ ಕೀರಿಟ ಮುಡಿಗೇರಿಸಿಕೊಂಡಿರುವ ಕರ್ನಾಟಕದ ಆಶಾ ಜೋಯಿಸ್‌, ಮುಂಬರುವ ಇಂಟರ್‌ನ್ಯಾಷನಲ್‌ ಪೆಜೆಂಟ್‌ಗೆ ಈಗಾಗಲೇ ಸಿದ್ಧತೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಲವಲವಿಕೆಯೊಂದಿಗೆ ಮಾತನಾಡಿದರು. ಅವರ 10 ಪ್ರಶ್ನೋತ್ತರಗಳ ಸಾರಾಂಶ ಇಲ್ಲಿದೆ.
smart ಹುಡುಗರಿಗಾಗಿ...