text
stringlengths
0
61.5k
karnataka coalition government speaker congress jds mla notice ಕರ್ನಾಟಕ ಮೈತ್ರಿ ಸರ್ಕಾರ ಸ್ಪೀಕರ್ ಕಾಂಗ್ರೆಸ್ ಜೆಡಿಎಸ್ ಶಾಸಕ ನೋಟಿಸ್ ಸಮ್ಮಿಶ್ರ ಸರ್ಕಾರ
Karnataka political crisis: Rebel MLAs who were served notice by speaker, sent a letter and requested time.
ಬಾಲಿವುಡ್ನ ಖ್ಯಾತ ನಟಿ ಅಲಿಯಾ ಭಟ್ ತಮ್ಮ ಮುಂದಿನ ಪ್ರಾಜೆಕ್ಟ್ ನಲ್ಲಿ ವಿಶಿಷ್ಟ ಪಾತ್ರವೊಂದನ್ನು ಧರಿಸಿ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಬಾಲಿವುಡ್ಗೆ ಪಾದರ್ಪಣೆ ಮಾಡಿದ ನಟಿ ಆಲಿಯಾ ಭಟ್, ತಮ್ಮ ಮೊದಲ ಚಿತ್ರದಲ್ಲೇ ಸೈ ಎನಿಸಿಕೊಂಡು ಸುದ್ದಿಯಾದವರು. ಅವರ ಮೊದಲ ಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್ ಭರ್ಜರಿ ಯಶಸ್ಸು ಕಂಡಿತು. ಅಂದಿನಿಂದ ಇಂದಿನ ವರೆಗೂ ಆಲಿಯಾ ತಮ್ಮ ಸಿನಿಪಯಣದಲ್ಲಿ ಹಿಂತಿರುಗಿ ನೋಡಲೇ ಇಲ್ಲ. ಅವರ ಎಲ್ಲ ಪ್ರಾಜೆಕ್ಟ್ ಗಳು ಸಕ್ಸಸ್ ಕಂಡವು. ಅವರ ವಿಭಿನ್ನ ಪಾತ್ರಗಳನ್ನು ಅವರ ಅಭಿಮಾನಿಗಳು ಮೆಚ್ಚಿಕೊಂಡರು. ಹಲವಾರು ಸ್ಟಾರ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿದ ಇವರು, ತಮಗೆ ಕೊಟ್ಟ ಎಲ್ಲ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದವರು.
ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದಲ್ಲಿ ಕಾಲೇಜು ಹುಡುಗಿಯ ಪಾತ್ರದಲ್ಲಿ ಕಾಣಿಸಿಸಿಕೊಂಡ ಈ ನಟಿ, ಬ್ಯಾಕ್ ಟು ಬ್ಯಾಕ್ ಒಳ್ಳೊಳ್ಳೆ ಪಾತ್ರಗಳನ್ನು ನಿಭಾಯಿಸಿದರು. ಇವರ ಸಿನಿ ಕೇರಿಯರ್ಗೆ ಯುಟರ್ನ್ ಕೊಟ್ಟಂತಹ ಸಿನಿಮಾಗಳೆಂದರೆ ಪ್ರಸಿದ್ಧ ಕಾದಂಬರಿಕಾರ ಚೇತನ್ ಭಗತ್ ಅವರ ಕಾದಂಬರಿ ಆಧಾರಿತ ಹೈವೆ, ಟೂ ಸ್ಟೇಟ್ಸ್ ಚಿತ್ರಗಳು, ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದಂತಹ ಸಿನಿಮಾಗಳು. ಆನಂತರ ಗಲ್ಲಿಬಾಯ್, ಉಡ್ತಾ ಪಂಜಾಬ್, ರಾಝಿ ಚಿತ್ರಗಳಿಗಾಗಿ ಅತ್ಯುತ್ತಮ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೇ ಪೆಟಾ ಇಂಡಿಯಾ ವರ್ಷದ ವ್ಯಕ್ತಿಯಾಗಿ ಅಲಿಯಾ ಭಟ್ ಸೆಲೆಕ್ಟ್ ಆಗಿದ್ದಾರೆ. ಇತ್ತೀಚಿಗೆ ರಾಜಮೌಳಿ ನಿರ್ದೇಶನದ ಥ್ರಿಬಲ್ ಆರ್ ಚಿತ್ರದಲ್ಲಿ ಆಲಿಯಾ ನಟಿಸಿದ್ದು, ಇದು ಹಿಂದಿ ಮಾತ್ರವಲ್ಲದೇ, ಕನ್ನಡ, ತೆಲುಗು, ತಮಿಳು ಹೀಗೆ ಬೇರೆ ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ.
ಥ್ರಿಬಲ್ ಆರ್ ಚಿತ್ರದ ಚಿತ್ರೀಕರಣ ಮುಗಿದಿದ್ದು, ರಿಲೀಸ್ ಆಗುವುದೊಂದೇ ಬಾಕಿ. ಇಷ್ಟೆಲ್ಲ ವಿಭಿನ್ನ ಪಾತ್ರಗಳನ್ನು ನಿಭಾಯಿಸಿದ ಅಲಿಯಾ ಇದೀಗ ಮತ್ತೆ ಹೊಸ ಲುಕ್ ನಲ್ಲಿ ಮಿಂಚಿದ್ದಾರೆ. ಹೌದು ಇತ್ತೀಚಿಗೆ ಅವರ ಹೊಸ ಚಿತ್ರದ ಮೊದಲ ಪೋಸ್ಟರ್ ಒಂದು ಬಿಡುಗಡೆಯಗಿದ್ದು, ಅಲಿಯಾ ಅವರ ಹೊಸ ಚಿತ್ರದ ಫೋಟೋ ನೋಡಿ ಎಲ್ಲರೂ ಕುತೂಹಲ ವ್ಯಕ್ತಪಡಿಸಿದ್ದಾರೆ. ಹೌದು ಹೊಸ ಲುಕ್ ನಲ್ಲಿ ಅಲಿಯಾ ಅವರು ಶ್ವೇತ ಬಣ್ಣದ ಸೀರೆಯುಟ್ಟು, ಹಣೆಗೆ ದೊಡ್ಡದಾಗಿ ಕೆಂಪು ಕುಂಕುಮ ತೊಟ್ಟು, ಗಂಭೀರವಾದ ಲುಕ್ ನೊಂದಿಗೆ ಫೋಟೋಗೆ ಪೋಸ್ ನೀಡಿರುವ ಅಲಿಯಾ ಎಲ್ಲರೂ ಹುಬ್ಬರಿಸುವಂತೆ ಮಾಡಿದ್ದಾರೆ. ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದಲ್ಲಿ ಗಂಗೂಬಾಯಿಯ ಪಾತ್ರ ನಿರ್ವಹಿಸುತ್ತಿರುವ ಅಲಿಯಾ, ಗಂಗೂ ಬರುತ್ತಿದ್ದಾಳೆ ಎಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇದೇ ಫೆಬ್ರವರಿ 25ರಂದು ಸಿನಿಮಾ ತೆರೆಕಾಣಲಿದ್ದು, ಸಿನಿಮಾ ಕುರಿತು ನಿರೀಕ್ಷೆ ಹೆಚ್ಚಾಗಿದೆ.
ನಿವೃತ್ತಿಗೊಂಡ ಪ್ರಭಾರ ಅಬಕಾರಿ ನಿರೀಕ್ಷಕ ಮಹಾಲಿಂಗ ನಾಯ್ಕರವರಿಗೆ ರಾಜ್ಯ ಸರಕಾರಿ ನೌಕರರ ತಾ|ಸಂಘದಿಂದ ಬೀಳ್ಕೊಡುಗೆ ಸನ್ಮಾನ | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506
ನಿವೃತ್ತಿಗೊಂಡ ಪ್ರಭಾರ ಅಬಕಾರಿ ನಿರೀಕ್ಷಕ ಮಹಾಲಿಂಗ ನಾಯ್ಕರವರಿಗೆ ರಾಜ್ಯ ಸರಕಾರಿ ನೌಕರರ ತಾ|ಸಂಘದಿಂದ ಬೀಳ್ಕೊಡುಗೆ ಸನ್ಮಾನ
ಪುತ್ತೂರು: ಪುತ್ತೂರು ಉಪವಿಭಾಗ ಅಬಕಾರಿ ಉಪ ನಿರೀಕ್ಷಕರಾಗಿ, ಸುಳ್ಯ ವಲಯ ಪ್ರಭಾರ ಅಬಕಾರಿ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಗೊಂಡ ಮಹಾಲಿಂಗ ನಾಯ್ಕರವರಿಗೆ ರಾಜ್ಯ ಸರಕಾರಿ ನೌಕರರ ಸಂಘ ಇದರ ತಾಲೂಕು ಶಾಖೆಯಿಂದ ಬಪ್ಪಳಿಗೆ-ಪುತ್ತೂರು ಇಲ್ಲಿನ ಸಂಘದ ಸಮುದಾಯ ಭವನದ ಕಛೇರಿಯಲ್ಲಿ ಜೂ. 20ರಂದು ಸಂಜೆ ಬೀಳ್ಕೊಡುಗೆ ಸಮ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು.
ಸಮುದಾಯ ಭವನದ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ-ಮೌರಿಸ್ ಮಸ್ಕರೇನ್ಹಸ್:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ಅಧ್ಯಕ್ಷರಾದ ಮೌರಿಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಇತ್ತೀಚೆಗೆ ನಿವೃತ್ತರಾದ ಮಹಾಲಿಂಗ ನಾಯ್ಕರವರದ್ದು ಆತ್ಮೀಯತೆಯನ್ನು ಮೈಗೂಡಿಸಿಕೊಂಡ ವ್ಯಕ್ತಿತ್ವವಾಗಿದೆ. ಸರಕಾರಿ ಸಮುದಾಯ ಭವನದ ಶಂಕುಸ್ಥಾಪನೆ ಸಂದರ್ಭದಲ್ಲಿ ಮಹಾಲಿಂಗ ನಾಯ್ಕರವರು ಕರ್ತವ್ಯದ ನಿಮಿತ್ತ ಸುಳ್ಯಕ್ಕೆ ವರ್ಗಾವಣೆಗೊಂಡರು. ಸಂಘದ ಸಮುದಾಯ ಭವನದ ನಿರ್ಮಾಣದಲ್ಲಿ ಮಹಾಲಿಂಗ ನಾಯ್ಕರವರು ಆರ್ಥಿಕ ಕ್ರೋಢೀಕರಣದ ಸಂದರ್ಭದಲ್ಲಿ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಸುದೀರ್ಘ ಅವಧಿಯ ಬಳಿಕ ನಿವೃತ್ತಿಗೊಂಡ ಮಹಾಲಿಂಗ ನಾಯ್ಕರವರು ಸಂಘದೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಸಂಘದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಹೇಳಿ ಅವರ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು.
ಸೇವಾ ಕ್ಷೇತ್ರದಲ್ಲಿ ಕಪ್ಪುಚುಕ್ಕೆ ಬಾರದಂತೆ ಕರ್ತವ್ಯ-ಪುರುಷೋತ್ತಮ್:
ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್‌ರವರು ಮಾತನಾಡಿ, ಅಬಕಾರಿ ಸೇವಾ ಕ್ಷೇತ್ರದಲ್ಲಿ ಯಾವುದೇ ಕಪ್ಪುಚುಕ್ಕೆ ಬಾರದಂತೆ ಕರ್ತವ್ಯ ನಿರ್ವಹಿಸಿದವರು ಮಹಾಲಿಂಗ ನಾಯ್ಕರು. ಉನ್ನತ ಅಧಿಕಾರಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ವಿನಯತೆಯನ್ನು ಶಕ್ತಿಯನ್ನಾಗಿ ಮೈಗೂಡಿಸಿಕೊಂಡು ಸೇವೆ ಸಲ್ಲಿಸುವ ಮೂಲಕ ಮಹಾಲಿಂಗ ನಾಯ್ಕರು ಉತ್ತಮ ಹೆಸರನ್ನು ಗಳಿಸಿಕೊಂಡಿದ್ದಾರೆ ಎಂದು ಹೇಳಿ ಅವರ ನಿವೃತ್ತ ಜೀವನವು ಆಯುರಾರೋಗ್ಯದಿಂದ ಕೂಡಿರಲಿ ಎಂದು ಶುಭಹಾರೈಸಿದರು.
ಸೇವೆಯ ಜೊತೆಗೆ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದರು-ಕೆ.ಕೃಷ್ಣಪ್ಪ:
ರಾಜ್ಯ ಪರಿಷತ್ ಮಾಜಿ ಸದಸ್ಯರಾದ ಕೆ.ಕೃಷ್ಣಪ್ಪರವರು ಮಾತನಾಡಿ, ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಅದೊಂದು ಪಬ್ಲಿಕ್ ಸ್ಕಿಲ್‌ನೊಂದಿಗೆ ಜಂಜಾಟದ ಇಲಾಖೆಯಾಗಿದೆ. ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮುಖೇನ ಸರಕಾರದ ಬೊಕ್ಕಸಕ್ಕೆ ಆದಷ್ಟು ರೆವೆನ್ಯೂ ತಂದುಕೊಡುವ ಇಲಾಖೆಯಲ್ಲಿ ಅಬಕಾರಿ ಇಲಾಖೆಯೂ ಒಂದಾಗಿದೆ. ನಿವೃತ್ತಿಗೊಂಡ ಮಹಾಲಿಂಗ ನಾಯ್ಕರವರು ಕೇವಲ ಅವರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಮರಾಠಿ ಸೇವಾ ಸಂಘದಲ್ಲಿ ಅಧ್ಯಕ್ಷರಾಗಿ ಅಥವಾ ಇತರ ಸಂಘ ಚಟುವಟಿಕೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಮುಂದಿನ ಅವರ ನಿವೃತ್ತ ಜೀವನವು ಸುಖಕರವಾಗಿರಲಿ ಎಂದು ಶುಭಹಾರೈಸಿದರು.
ಕರ್ತವ್ಯಲೋಪ ಎಸಗಿದ್ದಲ್ಲಿ ಮರುನಿಮಿಷದಲ್ಲಿಯೇ ನಿರ್ದೇಶನ ಬರುತ್ತೆ-ರಾಮಚಂದ್ರ ಭಟ್:
ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್‌ರವರು ಮಾತನಾಡಿ, ಇತರ ಯಾವುದೇ ಚಟುವಟಿಕೆಗಳಲ್ಲಿ ಯಾರು ಹೊಂದಿಕೊಳ್ಳುತ್ತಾರೋ ಅವರು ಪ್ರವೃತ್ತಿಯಲ್ಲಿ ನಿವೃತ್ತರಾಗೋದಿಲ್ಲ. ಸರಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸಂದಿಗ್ಧ ಪರಿಸ್ಥಿಯನ್ನು ಎದುರಿಸುವಂತಹ ಸಂದರ್ಭವಿರುತ್ತದೆ. ಸರಕಾರಿ ನೌಕರರು ತಮ್ಮ ಕೆಲಸದಲ್ಲಿ ಏನಾದರೂ ಕರ್ತವ್ಯ ಲೋಪ ಎಸಗಿದರೆ ಮೊದಲು ಟಪ್ಪಾಲುವಿನಲ್ಲಿ ಮೇಲಾಧಿಕಾರಿಯಿಂದ ನಿರ್ದೇಶನ ಬರುತ್ತೆ. ಆದರೆ ಈಗ ಹಾಗಲ್ಲ. ಮರುನಿಮಿಷದಲ್ಲಿಯೇ ಬರುತ್ತೆ. ನಿವೃತ್ತಿಗೊಂಡ ಮಹಾಲಿಂಗ ನಾಯ್ಕರವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಈ ಮೂಲಕ ಹಾರೈಸುತ್ತೇನೆ ಎಂದರು.
ಪತ್ರಿಕೆಯಲ್ಲಿನ ವರದಿಗಳು ಹೇಳುತ್ತೆ, ಮಹಾಲಿಂಗ ನಾಯ್ಕರ ಸೇವೆಗಳು-ರವಿಚಂದ್ರ:
ನರಿಮೊಗರು ವಿಭಾಗದ ಪಿಡಿಒ ರವಿಚಂದ್ರರವರು ಮಾತನಾಡಿ, ನಿವೃತ್ತಿಗೊಂಡ ಮಹಾಲಿಂಗ ನಾಯ್ಕರವರು ತಮ್ಮ ವೃತ್ತಿ ಕ್ಷೇತ್ರದಲ್ಲಿ ಎಷ್ಟು ಹೆಸರು ಗಳಿಸಿದ್ದಾರೆ ಎಂಬುದು ಪತ್ರಿಕೆಯಲ್ಲಿ ಬಂದಂತಹ ವರದಿಗಳು ಹೇಳುತ್ತವೆ. ಕರ್ತವ್ಯದಲ್ಲಿರುವಾಗ ಮಾಡುವ ಸೇವೆ ಹಾಗೂ ಮೌಲ್ಯಗಳು ನಿವೃತ್ತಿ ಬಳಿಕ ಬೆಳಕಿಗೆ ಬರುವಂತಾಗಿದೆ. ವೃತ್ತಿ ಕ್ಷೇತ್ರದಲ್ಲಿ ಜನಾನುರಾಗಿಯಾಗಿ ಸೇವೆಗೈಯುವ ಮೂಲಕ ಮಹಾಲಿಂಗ ನಾಯ್ಕರವರು ಉತ್ತಮ ಹೆಸರನ್ನು ಸಂಪಾದಿಸಿದ್ದು, ಅವರ ಮುಂದಿನ ನಿವೃತ್ತಿ ಜೀವನವು ಸುಖ-ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಸಿದರು.
'ಎಡ್ಡೆ ಜನ ಮಾರ್ರೆ' ಪ್ರಶಂಸೆಯ ಮಾತುಗಳು ಮಹಾಲಿಂಗ ನಾಯ್ಕರಿಗಿದೆ-ಮಾಮಚ್ಚನ್ ಎಂ:
ಪಡ್ನೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಎಂ.ರವರು ಮಾತನಾಡಿ, ನಿವೃತ್ತಿಗೊಂಡ ಮಹಾಲಿಂಗ ನಾಯ್ಕರವರು 'ಎಡ್ಡೆ ಜನ ಮಾರ್ರೆ' ಎಂಬ ಪ್ರಶಂಸೆಯ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದ್ದವು. ವೃತ್ತಿ ಜೀವನದಲ್ಲಿ ನಾವು ಉತ್ತಮ ಹೆಸರನ್ನು ಸಂಪಾದನೆ ಮಾಡಿದಾಗ ನಾವು ಮಾಡುವ ಸೇವೆಯು ತೃಪ್ತಿದಾಯಕವಾಗಿರುತ್ತದೆ. ಮುಂದಿನ ನಿವೃತ್ತಿ ಜೀವನದಲ್ಲಿ ಮಹಾಲಿಂಗ ನಾಯ್ಕರವರು ಸಂಘದಲ್ಲಿ ಕೈಜೋಡಿಸಿ ಸಂಘದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂದು ಹೇಳಿ ಅವರ ನಿವೃತ್ತ ಜೀವನಕ್ಕೆ ಶುಭಹಾರೈಸಿದರು.
ಸಂಘದ ಸದಸ್ಯರಾದ ಸರಕಾರಿ ವಾಹನ ಚಾಲಕರ ಸಂಘದ ತಾಲೂಕು ಶಾಖೆಯ ಅಧ್ಯಕ್ಷ ಸೀತಾರಾಂ, ಶಿಕ್ಷಣ ಇಲಾಖೆಯ ಗಿರಿಧರ್ ಗೌಡ, ಜ್ಯೂಲಿಯಾನ ಮೋರಸ್, ಎಫ್.ಜಿ ಮಂಗನ್‌ಗೌಡ, ಫಾರೆಸ್ಟ್ ಇಲಾಖೆಯ ಶಿವಾನಂದ ಆಚಾರ್ಯ, ಪುತ್ತೂರು ನ್ಯಾಯಾಲದ ವೆಂಕಟೇಶ್, ಪಶುಸಂಗೋಪನಾ ಇಲಾಖೆಯ ಹೊನ್ನಪ್ಪ ಬಿ.ಗೌಡ, ಪಿಡಬ್ಲ್ಯೂಡಿ ಇಂಜಿನಿಯರ್ ಲಿಂಡ್ಸೆ ಕಾಲಿನ್ ಸಿಕ್ವೇರಾರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ ಸ್ವಾಗತಿಸಿ, ಸಂಘದ ಕೋಶಾಧಿಕಾರಿ ನಾಗೇಶ್ ವಂದಿಸಿದರು.
'ಸುದ್ದಿ' ಪತ್ರಿಕೆ ಸಾಧಕರ ಬಗ್ಗೆ ಬೆಳಕು ಚೆಲ್ಲುತ್ತಿದೆ.. ನಿವೃತ್ತಿ ಎಂಬುದು ಸರಕಾರಿ ನೌಕರರಿಗೆ ಕಟ್ಟಿಟ್ಟ ಬುತ್ತಿ. ನಿವೃತ್ತಿಯ ಅವಧಿಯಾಗಿರುವ ೫೮ ಹಾಗೂ ೬೦ ವರ್ಷ ಬಹಳ ಒತ್ತಡದ ಸಮಯವಾಗಿರುತ್ತದೆ. ನಿವೃತ್ತಿಗೆ ಸಕಾಲ ಸಮಯ ವಯಸ್ಸು ೫೫ ಆಗಿರುತ್ತದೆ. ಮೇಲಾಧಿಕಾರಿಯಿಂದ ಒತ್ತಡ ತರದೆ ಕರ್ತವ್ಯ ನಿರ್ವಹಿಸಬೇಕು ಎನ್ನುವ ನಿಯಮ ಪ್ರತೀ ಇಲಾಖೆಯ ನೌಕರರಲ್ಲಿ ಇದ್ದದ್ದೇ. ಮೇಲಾಧಿಕಾರಿಯಿಂದ ಕಿರುಕುಳ ಬಂದಾಗ ನೌಕರರು ಸರಕಾರಿ ನೌಕರರ ಸಂಘದ ಅಧ್ಯಕ್ಷರಿಗೆ ಮನವಿ ಮಾಡಿದ್ದು ಸಾಕಷ್ಟಿದೆ. ಅದನ್ನು ನಮ್ಮ ಅಧ್ಯಕ್ಷರು ನೆರವೇರಿಸಿದ್ದಾರೆ ಕೂಡ. ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕ ಸೇವೆ ಮಾಡಿದ್ದೇನೆ ಎಂಬ ಆತ್ಮವಿಶ್ವಾಸ ನನಗಿದೆ. ವೃತ್ತಿ ಜೀವನದ ನಡುವೆ ನಾನು ಸಾಮಾಜಿಕವಾಗಿ ಗುರುತಿಸಿಕೊಂಡಿರುವುದರ ಬಗ್ಗೆ ನನ್ನ ಮೇಲಾಧಿಕಾರಿಯವರಿಂದ ಪ್ರಶಂಸೆಯ ಮಾತುಗಳು ಕೂಡ ವ್ಯಕ್ತವಾಗಿರುವುದು ನನಗೆ ಖುಶಿ ತಂದಿದೆ. ಸಂಘದ ಹಳೆ ಕಟ್ಟಡ ಕೆಡವಿ, ಆ ಕಟ್ಟಡಕ್ಕೆ ಹೊಸ ರೂಪ ನೀಡಿದ ಈಗಿನ ಅಧ್ಯಕ್ಷರು ಮತ್ತು ಅವರ ಟೀಮ್‌ಗೆ ನನ್ನ ಅಭಿನಂದನೆಗಳು. ಜೊತೆಗೆ ಸಮಾಜಕ್ಕೆ ನೈಜತೆಯನ್ನು ಒದಗಿಸುವ 'ಸುದ್ದಿ' ಪತ್ರಿಕೆಯು ಪ್ರತಿಯೊಬ್ಬ ಸಾಧಕನ ಬಗ್ಗೆ ಬೆಳಕು ಚೆಲ್ಲುತ್ತಿರುವುದು ಉತ್ತಮ ಬೆಳವಣಿಗೆ. -ಮಹಾಲಿಂಗ ನಾಯ್ಕ, ನಿವೃತ್ತ ಪ್ರಭಾರ ಅಬಕಾರಿ ನಿರೀಕ್ಷಕರು, ಸುಳ್ಯ ತಾಲೂಕು
ಪತಿಗೆ ಸ್ವೀಟ್ ಶಾಕ್ ನೀಡಿದ್ರು ಸ್ನೇಹಾ ರೆಡ್ಡಿ
ಇತ್ತೀಚೆಗೆ ನಟ ಸ್ಟೈಲೀಶ್ ಸ್ಟಾರ್ ಅಲ್ಲೂ ಅರ್ಜುನ್ ತಮ್ಮ ಮಗಳೊಂದಿಗೆ ಮಾತನಾಡುವ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಅಲ್ಲೂ ಅರ್ಜುನ್ ತನ್ನ ಮಗಳಿಗೆ ನಾನು ನೋಡಿದ ಹುಡುಗನನ್ನು ನೀನು ಮದುವೆಯಾಗುತ್ತೀಯಾ ಎಂದು ಪ್ರಶ್ನಿಸಿದರೆ. ಆಕೆ ನೆಗೆಟೀವ್ ಉತ್ತರ ನೀಡಿ ನಗುತ್ತಿದ್ದಳು. ತಂದೆ ನೋಡಿದ ಹುಡುಗನನ್ನೇ ನಾನು ಮದುವೆಯಾಗುತ್ತೇನೆ ಎಂದು ಎಷ್ಟು ಸಲ ಹೇಳಿಸಲು ಪ್ರಯತ್ನಿಸಿದರೂ ಆಕೆ ಮಾತ್ರ ಕ್ಯೂಟ್ ಕ್ಯೂಟ್ ಆಗಿ ತಂದೆ ನೋಡಿದ ಹುಡುಗನ್ನು ಮದುವೆಯಾಗುವುದಿಲ್ಲ ಎನ್ನುತ್ತಿದ್ದಳು.
ಮಗಳ ಮಾತಿಗೆ ನಗುತ್ತಲೇ ಆಕೆಯನ್ನು ಮುದ್ದಾಡುತ್ತಿದ್ದ ಅಲ್ಲೂ ಕೂಡ ಎಂಜಾಯ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿ ಸಾಕಷ್ಟು ಪರ ವಿರೋಧಗಳು ವ್ಯಕ್ತವಾದವು. ಮನೋಶಾಸ್ತ್ರಜ್ಞರಂತೂ ಅಲ್ಲೂ ಅರ್ಜುನ್ ಅವರನ್ನು ತರಾಟೆಗೆ ತೆಗೆದುಕೊಂಡು, ಈ ರೀತಿಯಾಗಿ ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದೆಲ್ಲಾ ಹೇಳಲಾರಂಭಿಸಿದರು. ಎಳೆ ಮನಸ್ಸಿನ ಮೇಲೆ ತಂದೆಯ ಮಾತುಗಳು ಪ್ರಭಾವ ಬೀರುತ್ತದೆ . ಹೀಗಾಗಿ ದೊಡ್ಡವರು ಈ ಬಗ್ಗೆ ಗಮನ ಹರಿಸಬೇಕು ಎಂದೆಲ್ಲಾ ಬುದ್ದಿ ಹೇಳಿದರು.
ಈ ವಿಡಿಯೋ ಬಗ್ಗೆಸ್ನೇಹಾ ಏನು ಕಮೆಂಟ್ ಮಾಡಿದ್ರು ಗೊತ್ತೆ..?
ಮಗಳೊಂದಿಗೆ ಕಳೆದ ಸೂಪರ್ ಕ್ಷಣಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಅಲ್ಲೂ ಅರ್ಜುನ್ ವಿಡಿಯೋಗೆ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ ಗಳ ಬಂದಿದ್ದವು. ಅದರಲ್ಲಿ ಹೆಚ್ಚು ಗಮನ ಸೆಳೆದಿರುವುದು , "Abba Chaa… Nuvvu chesukunnava mee naanna cheppina ammayini?" ಎಂಬ ಕಮೆಂಟ್.
ಹೌದು, ನೀವು ಮದುವೆಯಾಗುತ್ತಿರಾ ನಿಮ್ಮ ಅಪ್ಪ ತೋರಿಸುವ ಹುಡುಗಿಯನ್ನ ಎಂದು ಕಮೆಂಟ್ ಮಾಡಿರುವುದು ಬೇರೆ ಯಾರೂ ಅಲ್ಲ ಅಲ್ಲೂ ಅರ್ಜುನ್ ಅವರ ಪತ್ನಿ ಸ್ನೇಹಾರೆಡ್ಡಿ. ಈ ಕಮೆಂಟ್ ಗೆ ಮರುಉತ್ತರಿಸಿರುವ ಅರ್ಜುನ್ ನೀವು ನಿಮ್ಮ ಅಪ್ಪ ತೋರಿಸುವ ಹುಡುಗನನ್ನು ಮದುವೆಯಾಗುತ್ತಿರಾ ಎನ್ನುತ್ತಾ ಕಾಲೆಳೆದರು.ಅಂದಹಾಗೆ ಸ್ನೇಹ ರೆಡ್ಡಿಯವರನ್ನು ಕಾಮನ್ ಫ್ರೆಂಡ್ ಒಬ್ಬರ ಮೂಲಕ ಭೇಟಿ ಮಾಡಿದ ಅಲ್ಲೂ ಅವರನ್ನು ಪ್ರೀತಿಸಲಾರಂಭಿಸಿದರು. ಈ ಪ್ರೀತಿಗೆ ಪೋಷಕರು ಗ್ರೀನ್ ಸಿಗ್ನಲ್ ನೀಡಿದ್ದರಿಂದ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಂಕ್ರಾಂತಿಗಾಗಿ ಪಾಲಾಕೊಲ್ಲು ಜನರಿಗೆ ದೊಡ್ಡ ಉಡುಗೊರೆ ನೀಡಿದ ಸ್ಟೈಲಿಶ್ ಸ್ಟಾರ್
#alluarjun #alluarjunmovies #snehareddy #snehareddyinstagram #alluarjunandsnehareddy #balkaninews
allu arjun allu arjun and sneha reddy allu arjun and sneha reddy instagram allu arjun movies balkaninews sneha reddy instagram
ವೆಂಕಟ್ ಭಾರದ್ವಾಜ್ ನಿರ್ದೇಶನದ "ಶ್ರೀರಂಗ" ಚಿತ್ರದ ಫಸ್ಟ್ ಲುಕ್ ರಿಲೀಸ್ – Cinisuddi
ವೆಂಕಟ್ ಭಾರದ್ವಾಜ್ ನಿರ್ದೇಶನದ "ಶ್ರೀರಂಗ" ಚಿತ್ರದ ಫಸ್ಟ್ ಲುಕ್ ರಿಲೀಸ್
June 22, 2022 Sriranga Movie First Look
ಕನ್ನಡ ಚಿತ್ರರಂಗದಲ್ಲಿ ರಂಗ ಅಂದತಕ್ಷಣ ನೆನಪಾಗುವುದೇ ಹಾಲು ಜೇನು ಚಿತ್ರದ ಡಾ.ರಾಜ್ ಪಾತ್ರ ರಂಗ, ಹಾಗೇಯೇ ಮನೆದೇವ್ರು ಸಿನಿಮಾದಲ್ಲಿ ರವಿಚಂದ್ರನ್ ಶ್ರೀರಂಗ, ಇತ್ತೀಚೆಗೆ ಉಪೇಂದ್ರ ನಟನೆಯ ಸಿನಿಮಾ ಸೂಪರ್ ರಂಗ..ಇದೀಗ ವೆಂಕಟ್ ಭಾರದ್ವಾಜ್ ಶ್ರೀರಂಗ ಟೈಟಲ್ ಮೂಲಕ ಹೊಸದೊಂದು ಕಥೆ ಹೇಳಲು ಬರ್ತಿದ್ದು, ಸದ್ಯ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.
ಶ್ರೀರಂಗ ಕಾಮಿಡಿ ಜೊತೆಗೆ ಕ್ರೈ ಥ್ರಿಲ್ಲರ್ ಸಿನಿಮಾವಾಗಿದ್ದು, ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.
ನಾಯಕನಾಗಿ ಶಿನವ್, ನಾಯಕಿಯರಾಗಿ ರಚನಾ ರಾಯ್, ರೂಪ ರಾಯಪ್ಪ ಹಾಗೂ ವಂದನಾ ಶೆಟ್ಟಿ ನಟಿಸಿದ್ದು, ಉಳಿದಂತೆ ಗುರುರಾಜ್ ಹೊಸಕೋಟೆ, ಯಮುನಾ ಶ್ರೀನಿಧಿ, ಸಾಗರ್ ಜಯರಾಮ್, ಚಿಪ್ಸ್ ಬಾಬು, ಗಿರೀಶ್, ಮಣಿ ಮಾರನ್ ಅಭಿನಯಿಸಿದ್ದಾರೆ. ಇವರ ಜೊತೆಗೆ ಪುಟಾಣಿಗಳ ದಂಡೇ ಇದೆ. ಮಾಸ್ಡರ್ ಚಿರಾಯು ಚಕ್ರವರ್ತಿ, ತ್ರಿಧಾರ ಲಕ್ಷ್ಮಣ್, ಪುಶ್ಕಲ್ ಪ್ರೀತ್, ರಜತ್ ರಿತಿಕ್, ಐಶಾನಿ ನಟಿಸಿದ್ದಾರೆ.
ಮಿಥುನ್ ಛಾಯಾಗ್ರಾಹಣ, ಚಂದನ್ ಸಂಕಲನ, ಶಂಕರ್ ರಾಮನ್ ಸಂಭಾಷಣೆ, ಸಮೀರ್ ಕುಲಕರ್ಣಿ ಸಂಗೀತ, ಕನ್ನಡದ ಟಾಪ್ ರಪೆರ್ ವಿರಾಜಕನ್ನಡಿಗ, ಅವಿನಾಶ್ ಛೆಬ್ಬಿ, ಚೈತ್ರಾ ನಾಣಯ್ಯ ಹಾಡುಗಳಿಗೆ ಧ್ವನಿಯಾಗಿದ್ದಾರೆ. ರುತು ಕ್ರಿಯೇಷನ್ ನಡಿ ಸುಮಾ ಸಿಆರ್ ನಿರ್ಮಾಣ ಮಾಡಿದ್ದು, ಬಿಎಂ ದಿಲೀಪ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸೆನ್ಸಾರ್ ಮುಗಿಸಿರುವ ಸಿನಿಮಾ ಶೀರ್ಘದಲ್ಲಿಯೇ ಥಿಯೇಟರ್ ಗೆ ಲಗ್ಗೆ ಇಡಲಿದೆ.
ನವೆಂಬರ್ 2020 | ಒಂದು ರೈಲು ಉಳಿಸಿ
ತಿಂಗಳು: ನವೆಂಬರ್ 2020
ಮುಖಪುಟ > ನವೆಂಬರ್ 2020
ಓದುವ ಸಮಯ: 5 ನಿಮಿಷಗಳ ಯುರೋಪಿನ ಆಕರ್ಷಕ ಹಳೆಯ ನಗರ ಕೇಂದ್ರಗಳು ಯುರೋಪಿನ ಇತಿಹಾಸದ ಶಕ್ತಿಯ ಅದ್ಭುತ ಉದಾಹರಣೆಯಾಗಿದೆ. ವಿಲಕ್ಷಣವಾದ ಸಣ್ಣ ಮನೆಗಳು, ನಗರದ ಮಧ್ಯಭಾಗದಲ್ಲಿರುವ ಆಕರ್ಷಕ ಕ್ಯಾಥೆಡ್ರಲ್‌ಗಳು, ಚೆನ್ನಾಗಿ ಸಂರಕ್ಷಿಸಲ್ಪಟ್ಟ ಅರಮನೆಗಳು, ಮತ್ತು ಕೇಂದ್ರ ಚೌಕಗಳು ಯುರೋಪಿಯನ್ ನಗರಗಳ ಮಾಯಾಜಾಲವನ್ನು ಹೆಚ್ಚಿಸುತ್ತವೆ. ದಿ 5 ಅತ್ಯಂತ ಆಕರ್ಷಕ ಹಳೆಯ…
ಕಾನೂನು ಮತ್ತು ಸುವ್ಯವಸ್ಥೆಯ ಸಂಭಾವ್ಯ ಉಲ್ಲಂಘನೆಯು ಮುನ್ನೆಚ್ಚರಿಕೆ ಬಂಧನಕ್ಕೆ ಕಾರಣವಲ್ಲ: ಸುಪ್ರೀಂ ಕೋರ್ಟ್ - Varthabharati
ಹೊಸದಿಲ್ಲಿ,ಆ.3: ಕಾನೂನು ಮತ್ತು ಸುವ್ಯವಸ್ಥೆ,ಸಾರ್ವಜನಿಕ ಸುವ್ಯವಸ್ಥೆ ಮತ್ತು ರಾಜ್ಯದ ಭದ್ರತೆ ಎಂಬ ಅಭಿವ್ಯಕ್ತಿಗಳು ವಿಭಿನ್ನ ವಿಷಯಗಳನ್ನು ಅರ್ಥೈಸುತ್ತವೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು,ಕಾನೂನು ಮತ್ತು ಸುವ್ಯವಸ್ಥೆಯ ಸಂಭಾವ್ಯ ಉಲ್ಲಂಘನೆಯು ನಾಗರಿಕರ ಮುನ್ನೆಚ್ಚರಿಕೆ ಬಂಧನಗಳಿಗೆ ಕಾರಣವನ್ನು ಒದಗಿಸುವುದಿಲ್ಲ ಎಂದು ಹೇಳಿದೆ.
ವಂಚನೆ ಅಥವಾ ಅಪರಾಧಿಕ ನಂಬಿಕೆ ದ್ರೋಹದಿಂದ ಕಾನೂನಿನ ಉಲ್ಲಂಘನೆಯು 'ಕಾನೂನು ಮತ್ತು ಸುವ್ಯವಸ್ಥೆ'ಯನ್ನು ಬಾಧಿಸಬಹುದು,ಆದರೆ ಅದು 'ಸಾರ್ವಜನಿಕ ಸುವ್ಯವಸ್ಥೆ'ಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿದೆ ಎಂದು ಹೇಳುವಂತಿಲ್ಲ. ಸಾರ್ವಜನಿಕ ಸುವ್ಯವಸ್ಥೆಯು ಹದಗೆಡಲು ಸಮುದಾಯ ಅಥವಾ ಸಾರ್ವಜನಿರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವ 'ಸಾರ್ವಜನಿಕ ಅವ್ಯವಸ್ಥೆ 'ಯು ಅತ್ಯಗತ್ಯವಾಗಿದೆ ಎಂದು ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಮತ್ತು ಹೃಷಿಕೇಶ ರಾಯ್ ಅವರ ಪೀಠವು ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಐದು ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡಿದ್ದ ಬಾಂಕಾ ರವಿಕಾಂತ ಎಂಬಾತನನ್ನು 2020 ಸೆಪ್ಟೆಂಬರ್ನಲ್ಲಿ ಸೈಬರಾಬಾದ್ ಪೊಲೀಸ್ ಆಯುಕ್ತರ ಆದೇಶದಂತೆ ತೆಲಂಗಾಣ ಅಪಾಯಕಾರಿ ಚಟುವಟಿಕೆಗಳ ತಡೆ ಕಾಯ್ದೆ 1986ರಡಿ ಬಂಧಿಸಿರುವುದನ್ನು ಪ್ರಶ್ನಿಸಿ ಆತನ ಪತ್ನಿ ಬಾಂಕಾ ಸ್ನೇಹಶೀಲಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ರವಿಕಾಂತ ಬಂಧನ ದೋಷಯುಕ್ತವಾಗಿದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು ಆತನ ಬಂಧನದ ಆದೇಶವನ್ನು ಎತ್ತಿಹಿಡಿದಿದ್ದ ತೆಲಂಗಾಣ ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ,ಆತನನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆದೇಶಿಸಿತು. ತೆಲಂಗಾಣ ನಿವಾಸಿ ರವಿಕಾಂತ (34) ಕಳೆದ 10 ತಿಂಗಳುಗಳಿಂದಲೂ ಜೈಲಿನಲ್ಲಿದ್ದಾನೆ. ತನ್ನ ಪತಿ ಆರೋಪಿಯಾಗಿರುವ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡ ಬಳಿ ಸದ್ರಿ ಕಾಯೆಯಡಿ ಆತನ ಬಂಧನಕ್ಕೆ ಆದೇಶಿಸಲಾಗಿತ್ತು ಎಂದು ಸ್ನೇಹಶೀಲಾ ತನ್ನ ಅರ್ಜಿಯಲ್ಲಿ ತಿಳಿಸಿದ್ದರು.
ರವಿಕಾಂತನ ಚಟುವಟಿಕೆಗಳು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿದ್ದರೆ ಅಥವಾ ಅಂತಹ ಸಾಧ್ಯತೆಯಿದ್ದರೆ ಮಾತ್ರ ಮುನ್ನೆಚ್ಚರಿಕೆ ಬಂಧನ ಆದೇಶವನ್ನು ಹೊರಡಿಸಬಹುದು ಎಂದು ಸ್ಪಷ್ಟಪಡಿಸಿದ ಪೀಠವು,ಈ ಸಂಬಂಧ ತೆಲಂಗಾಣ ಪೊಲೀಸರು ಮುಂದಿರಿಸಿದ್ದ ವಾದಗಳನ್ನು ತಿರಸ್ಕರಿಸಿತು.
ಕಾಸು ಪಣಂ ದುಡ್ಡು Money Money – MyLang (Overseas Store)
ಕಾಸು ಪಣಂ ದುಡ್ಡು Money Money
ಶಾಲೆಯಲ್ಲಿ ಎಲ್ಲಾ ಸಮಯದಲ್ಲೂ ನೀವು ಚೆನ್ನಾಗಿ ಓದಿ, ಒಳ್ಳೆ ಕೆಲ್ಸ ಪಡ್ಕೋಬೇಕು ಅಂತ ಹೇಳುತ್ತಾರೆಯೇ ಹೋರತು. ನೀನು ದೊಡ್ಡ ಬಿಸಿನೆಸ್‌ಮನ್‌ ಆಗು ಅಂತ ತಪ್ಪಿಯೂ ಹೇಳುವುದಿಲ್ಲ. ಇನ್‌ವೆಸ್ಟ್-ಮೆಂಟ್‌ ಪ್ಲಾನರ್‌ಗಳು ಇರುವ ಎಲ್ಲಾ ಮ್ಯೂಚುವಲ್‌ ಫಂಡ್‌, ಶೇರ್‌ ಮತ್ತಿತರ ಯೋಜನೆಗಳ ಮಾಹಿತಿ ನೀಡು ಇಂತಿಷ್ಟು ವರ್ಷದಲ್ಲಿ ನೀವು ಇಂತಿಷ್ಟು ಗಳಿಸಬಹುದೆಂದು ನಗುತ್ತಾರೆಯೇ ಹೊರತು ಬಿಸಿನೆಸ್‌ ಮಾಡಿ ಶ್ರೀಮಂತರಾಗುವ ಪ್ಲಾನನ್ನು ಯಾವತ್ತೂ ಹೇಳುವುದಿಲ್ಲ.
ಕ್ರಿಸೊಪ್ರೇಸ್ ಕಲ್ಲಿನ ಅರ್ಥ. ರತ್ನದ ಕಲ್ಲುಗಳನ್ನು ಹೆಚ್ಚಾಗಿ ಆಭರಣಗಳಿಗಾಗಿ ಬಳಸಲಾಗುತ್ತದೆ - ವಿಡಿಯೋ
ಟ್ಯಾಗ್ಗಳು chalcedony, ಹೊನ್ನು ಹಸುರು ಬಣ್ಣದ ರತ್ನವಿಶೇಷ
ಕ್ರೈಸೊಪ್ರೇಸ್ ಕಲ್ಲು ಅರ್ಥ. ಕ್ರೈಸೊಪ್ರೇಸ್ ಕ್ಯಾಬೊಕಾನ್ ರತ್ನದ ಕಲ್ಲುಗಳನ್ನು ಹೆಚ್ಚಾಗಿ ಆಭರಣಗಳಿಗಾಗಿ ಬಳಸಲಾಗುತ್ತದೆ: ಉಂಗುರ, ಹಾರ, ಕಿವಿಯೋಲೆಗಳು, ಮಣಿಗಳು, ಕಂಕಣ, ಪೆಂಡೆಂಟ್.
ಹಸಿರು ಅಗೇಟ್
ಕ್ರಿಸೊಪ್ರೇಸ್ ಅನ್ನು ಹಸಿರು ಅಗೇಟ್ ಎಂದೂ ಕರೆಯುತ್ತಾರೆ, ವ್ಯಾಪಾರದ ಹೆಸರು ರತ್ನದ ವೈವಿಧ್ಯಮಯ ಚಾಲ್ಸೆಡೋನಿ, ಇದು ಸಿಲಿಕಾದ ಕ್ರಿಪ್ಟೋಕ್ರಿಸ್ಟಲಿನ್ ರೂಪವಾಗಿದೆ, ಇದು ಸಣ್ಣ ಪ್ರಮಾಣದ ನಿಕ್ಕಲ್ ಅನ್ನು ಹೊಂದಿರುತ್ತದೆ. ಇದರ ಬಣ್ಣ ಸಾಮಾನ್ಯವಾಗಿ ಸೇಬು ಹಸಿರು, ಆದರೆ ಆಳವಾದ ಹಸಿರು ಬಣ್ಣಕ್ಕೆ ಬದಲಾಗುತ್ತದೆ. ಕ್ರೈಸೊಪ್ರೇಸ್‌ನ ಗಾ er ಪ್ರಭೇದಗಳನ್ನು ಪ್ರೇಸ್ ಎಂದೂ ಕರೆಯಲಾಗುತ್ತದೆ. ಆದಾಗ್ಯೂ, ಕ್ಲೋಸ್ ಅನ್ನು ಒಳಗೊಂಡಿರುವ ಸ್ಫಟಿಕ ಶಿಲೆಗಳನ್ನು ವಿವರಿಸಲು ಪ್ರೆಸ್ ಎಂಬ ಪದವನ್ನು ಬಳಸಲಾಗುತ್ತದೆ, ಮತ್ತು ಒಂದು ನಿರ್ದಿಷ್ಟ ಮಟ್ಟಿಗೆ ಕಟ್ಟುನಿಟ್ಟಾಗಿ ವ್ಯಾಖ್ಯಾನಿಸಲಾದ ಖನಿಜ ವೈವಿಧ್ಯಕ್ಕಿಂತ ಹೆಚ್ಚಾಗಿ ಬಣ್ಣ ವಿವರಣೆಯಾಗಿದೆ.
ಕ್ರಿಪ್ಟೋಕ್ರಿಸ್ಟಲಿನ್ ಸ್ಫಟಿಕ ಶಿಲೆ
ಕ್ರೈಸೊಪ್ರೆಸ್ ಎಂಬುದು ಕ್ರಿಪ್ಟೋಕ್ರಿಸ್ಟಲಿನ್, ಅಂದರೆ ಇದು ಸಾಮಾನ್ಯ ವರ್ಧನದ ಅಡಿಯಲ್ಲಿ ವಿಭಿನ್ನವಾದ ಕಣಗಳಾಗಿ ಕಾಣಿಸದಷ್ಟು ಉತ್ತಮವಾದ ಸ್ಫಟಿಕಗಳಿಂದ ಕೂಡಿದೆ. ಇದು ರಾಕ್ ಸ್ಫಟಿಕ, ಅಮೆಥಿಸ್ಟ್, ಸಿಟ್ರಿನ್ ಮತ್ತು ಸ್ಫಟಿಕದಂತಹ ಸ್ಫಟಿಕ ಶಿಲೆಗಳಿಂದ ಬೇರೆಯಾಗಿರುತ್ತದೆ. ಕ್ರಿಪ್ಟೋಕ್ರಿಸ್ಟಲಿನ್ ಸಿಲಿಕಾ ಕುಟುಂಬದ ಇತರ ಸದಸ್ಯರು ಅಗಾಟೆ, ಕಾರ್ನೆಲಿಯನ್, ಮತ್ತು ಓನಿಕ್ಸ್. ಅನೇಕ ನಾನ್ ಪಾರದರ್ಶಕ ಸಿಲಿಕಾ ಖನಿಜಗಳಿಗಿಂತ ಭಿನ್ನವಾಗಿ, ಕ್ರೈಸೊಪ್ರ್ರೇಸ್ನ ಬಣ್ಣವು, ಗುರುತುಗಳ ಯಾವುದೇ ಮಾದರಿಯಲ್ಲದೆ, ಇದು ಅಪೇಕ್ಷಣೀಯವಾಗಿದೆ.
ಕ್ರೋಮಿಯಂನ ಉಪಸ್ಥಿತಿಗೆ ಹಸಿರು ಬಣ್ಣವನ್ನು ನೀಡಬೇಕಾದ ಪಚ್ಚೆಗಿಂತ ಭಿನ್ನವಾಗಿ, ಬಣ್ಣವು ಸಣ್ಣ ಪ್ರಮಾಣದ ಸೇರ್ಪಡೆಗಳ ರೂಪದಲ್ಲಿ ನಿಕಲ್ ಕಾಂಪೌಂಡ್ಸ್ನ ಪ್ರಮಾಣವನ್ನು ಕಂಡುಹಿಡಿಯುತ್ತದೆ. ನಿಕೆಲ್ ವರದಿಯಂತೆ ವಿವಿಧ ಸಿಲಿಕೇಟ್ಗಳಂತೆ ಸಂಭವಿಸುತ್ತದೆ, ಉದಾಹರಣೆಗೆ ಕಿರೋಲೈಟ್ ಅಥವಾ ಪಿಮ್ಮೆಲೈಟ್, ನಿಯೋ ಖನಿಜವಲ್ಲ, ಬುನ್ಸೆನಿಟ್ ಅಲ್ಲ, ಮೊದಲು ವರದಿಯಾಗಿದೆ. ಇದು ನಿಕಲಿಫೆರಸ್ ಸರ್ಪೆಂಟಿನೈಟ್ಸ್ ಅಥವಾ ಇತರ ಅಲ್ಟ್ರಾಮಾಫಿಕ್ ಒಫಿಯೊಲೈಟ್ ಶಿಲೆಗಳ ಆಳವಾದ ವಾತಾವರಣ ಅಥವಾ ಲ್ಯಾಟೈಟೈಸೇಶನ್ನಿಂದ ಉಂಟಾಗುತ್ತದೆ. ಆಸ್ಟ್ರೇಲಿಯನ್ ಠೇವಣಿಗಳಲ್ಲಿ, ಕಂದು ಗೋಯಿಥೈಟ್ ಮತ್ತು ಕಬ್ಬಿಣ ಮತ್ತು ಸಿಲಿಕಾ ಕ್ಯಾಪ್ನ ಕೆಳಗಿರುವ ಮ್ಯಾಗ್ನೆಸೈಟ್ ಶ್ರೀಮಂತ ಸಪೋರೊಲೈಟ್ನ ಇತರ ಕಬ್ಬಿಣದ ಆಕ್ಸೈಡ್ಗಳೊಂದಿಗೆ ಸಿರೆಗಳು ಮತ್ತು ಗಂಟುಗಳು ಸಂಭವಿಸುತ್ತವೆ.
ಚಾಲ್ಸೆಡೊನಿಯ ಎಲ್ಲಾ ಪ್ರಕಾರಗಳಂತೆ, ಕ್ರಿಸ್ಪ್ರೊರೇಸ್ ಮೊಹ್ಸ್ ಗಡಸುತನದ ಪ್ರಮಾಣದಲ್ಲಿ 6 ನಿಂದ 7 ನ ಕಠಿಣತೆ ಮತ್ತು ಫ್ಲಿಂಟ್ ನಂತಹ ಕಂಕೋಯ್ಡೆಲ್ ಮುರಿತ.
ಕ್ರಿಸೋಪ್ರೆಸ್ನ ಅತ್ಯುತ್ತಮ ಮೂಲಗಳು ಕ್ವೀನ್ಸ್ಲ್ಯಾಂಡ್, ವೆಸ್ಟರ್ನ್ ಆಸ್ಟ್ರೇಲಿಯಾ, ಹನೆಟಿ ಟಾಂಜಾನಿಯಾ, ಜರ್ಮನಿ, ಪೋಲೆಂಡ್, ರಷ್ಯಾ, ಆರಿಜೋನಾ, ಕ್ಯಾಲಿಫೋರ್ನಿಯಾ ಮತ್ತು ಬ್ರೆಜಿಲ್. ಕೇಂದ್ರ ಟಾಂಜಾನಿಯಾದಲ್ಲಿನ ಠೇವಣಿಗಳು 1986 ರಿಂದ ನಿರಂತರ ಉತ್ಪಾದನೆಯಲ್ಲಿವೆ. ಪೋಲೆಂಡ್ನ ಲೋವರ್ ಸಿಲೇಶಿಯದ ಸ್ಜ್ಕ್ಲಾರಿಯಲ್ಲಿ ಕಲ್ಲು ಮತ್ತು ನಿ ಸಿಲಿಕೇಟ್ ಅದಿರಿನ ಠೇವಣಿ, ಪ್ರಾಯಶಃ ದೊಡ್ಡ ಯುರೋಪಿಯನ್ ಕಲ್ಲುಗಳು ಸಂಭವಿಸುವ ಸಾಧ್ಯತೆ ಮತ್ತು ಬಹುಶಃ ವಿಶ್ವದಲ್ಲೇ ಅತೀ ದೊಡ್ಡದಾಗಿದೆ.
ಇದೇ ರೀತಿಯ ಖನಿಜವು ಕ್ರೋಮ್ ಚಾಲ್ಸೆಡೋನಿ ಆಗಿದೆ, ಇದರಲ್ಲಿ ಬಣ್ಣವನ್ನು ನಿಕಲ್ಗಿಂತ ಕ್ರೋಮಿಯಂ ಒದಗಿಸುತ್ತದೆ.
ಆಕ್ಸೈಡ್ ಖನಿಜಗಳು, ಸ್ಫಟಿಕ ಗುಂಪು
ರಸಾಯನಶಾಸ್ತ್ರ: ಸಿಲಿಕಾ (ಸಿಲಿಕಾನ್ ಡೈಆಕ್ಸೈಡ್, ಸಿಯೋಕ್ಸ್ನಮ್ಎಕ್ಸ್)
ರಿಫ್ರಾಕ್ಟಿವ್ ಇಂಡೆಕ್ಸ್: 2.58 - 2.64
ವಿಶೇಷ ಗುರುತ್ವ: 2.58 - 2.64
ಕ್ರಿಸೊಪ್ರೇಸ್ ಗುಣಪಡಿಸುವ ಗುಣಲಕ್ಷಣಗಳು
ಆಶಾವಾದ, ಸಂತೋಷ ಮತ್ತು ಸಂತೃಪ್ತಿಯನ್ನು ಉತ್ತೇಜಿಸಲು ಕ್ರಿಸೊಪ್ರೇಸ್ ಕಲ್ಲುಗಳನ್ನು ಬಳಸಲಾಗುತ್ತದೆ. ಇದು ಹೊಸ ಉದ್ಯಮಗಳು ಮತ್ತು ಸಂಬಂಧಗಳಿಗೆ ಯಶಸ್ಸು ಮತ್ತು ಸಮೃದ್ಧಿಯನ್ನು ತರುತ್ತದೆ.
ಕ್ರಿಸೊಪ್ರೇಸ್ ಸ್ಫಟಿಕವು ನಿಮ್ಮ ಜೀವನದಲ್ಲಿ ದಾರಿಯನ್ನು ಕಂಡುಕೊಂಡಿದ್ದರೆ, ನಿಮಗೆ ಭಾವನಾತ್ಮಕ ಬದಲಾವಣೆ ಅಗತ್ಯವೆಂದು ಸಂಕೇತವಾಗಿ ತೆಗೆದುಕೊಳ್ಳಿ. ಆಶಾವಾದ, ಸಂತೋಷ ಮತ್ತು ಸಂತೋಷವನ್ನು ವ್ಯಕ್ತಪಡಿಸಲು ಹೆಸರುವಾಸಿಯಾದ ಕ್ರಿಸೊಪ್ರೇಸ್ ಸ್ಫಟಿಕ ಕಲ್ಲು ಸ್ಫಟಿಕದ ಗುಣಪಡಿಸುವಿಕೆಯ ವಿಶ್ವದ ಅತ್ಯುತ್ತಮ ಖಿನ್ನತೆ-ಶಮನಕಾರಿಗಳಲ್ಲಿ ಒಂದಾಗಿದೆ. ನೀವು ಖಿನ್ನತೆ, ಆತಂಕ ಮತ್ತು ಒತ್ತಡದಂತಹ ಉದ್ಯಾನ-ವೈವಿಧ್ಯಮಯ ಭಾವನಾತ್ಮಕ ಕಾಯಿಲೆಗಳ ಪರಿಶೀಲನಾಪಟ್ಟಿ ಹೊಂದಿದ್ದರೆ, ಕ್ರಿಸೊಪ್ರೇಸ್ ಸ್ಫಟಿಕ ಗುಣಲಕ್ಷಣಗಳು ಜೀವನದ ಬಗ್ಗೆ ಹೆಚ್ಚು ಸಕಾರಾತ್ಮಕ ದೃಷ್ಟಿಕೋನವನ್ನು ಉತ್ತೇಜಿಸಲು ಪರಿಣಾಮಕಾರಿ ಪ್ರಿಸ್ಕ್ರಿಪ್ಷನ್ ಆಗಿದೆ. ಈ ರತ್ನವನ್ನು ನಿಮ್ಮ ಮೂಲೆಯಲ್ಲಿ ಇರಿಸಿ ಮತ್ತು ಮೋಡ ಕವಿದ ವಾತಾವರಣದಲ್ಲೂ ಯಾವಾಗಲೂ ಪ್ರಕಾಶಮಾನವಾದ ಬದಿಯಲ್ಲಿ ನೋಡಲು ಮರೆಯದಿರಿ.
4 ತಾಸು ರಾಡ್‌ ಹಿಡಿದು ಬದುಕಿದ 16 ಕಾರ್ಮಿಕರು: ಉತ್ತರಾಖಂಡ ದುರಂತದಲ್ಲೊಂದು ವಿಸ್ಮಯ! | All hope was lost Uttarakhand workers recall hours spent trapped in tunnel pod
4 ತಾಸು ರಾಡ್‌ ಹಿಡಿದು ಬದುಕಿದ 16 ಕಾರ್ಮಿಕರು: ಉತ್ತರಾಖಂಡ ದುರಂತದಲ್ಲೊಂದು ವಿಸ್ಮಯ!
Bangalore, First Published Feb 10, 2021, 7:33 AM IST
4 ತಾಸು ರಾಡ್‌ ಹಿಡಿದು ಬದುಕಿದ 16 ಕಾರ್ಮಿಕರು!| ಪವಾಡ ಸದೃಶ| ಉತ್ತರಾಖಂಡ ದುರಂತದಲ್ಲೊಂದು ವಿಸ್ಮಯ| ಸುರಂಗದ ನೀರಲ್ಲಿ ನೇತಾಡಿ ಜೀವ ಉಳಿಸಿಕೊಂಡರು
ಡೆಹ್ರಾಡೂನ್(ಫೆ.10): 'ಎಂದಿನಂತೆ ನಾವೆಲ್ಲಾ ತಪೋವನ ಜಲವಿದ್ಯುದಾಗಾರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆವು. ನಾವು ಕೆಲಸ ಮಾಡುತ್ತಿದ್ದುದು ಸುರಂಗದ 1000 ಅಡಿ ಒಳಭಾಗದಲ್ಲಿ. ಬೆಳಗ್ಗೆ 10 ಗಂಟೆಯ ಸಮಯವಿರಬಹುದು. ಇದ್ದಕ್ಕಿದ್ದಂತೆ ಜೋರಾಗಿ ವಿಷಲ್‌ ಸದ್ದು ಕೇಳಿಸಿತು. ಜನರ ಚೀರಾಟದ ಸದ್ದೂ ಕೇಳಿಬಂತು. ಅಷ್ಟರಲ್ಲೇ ಹೊರಗೆ ಓಡಿಬನ್ನಿ ಎಂದು ಸೂಚನೆ ನೀಡಿದ್ದು ಕೇಳಿಸಿತು. ಬಹುಶಃ ಬೆಂಕಿಯ ಮುನ್ಸೂಚನೆ ಇರಬೇಕೆಂದು ನಾವೆಲ್ಲಾ ಆತಂಕಗೊಂಡು ಸುರಂಗದಿಂದ ಹೊರಗೆ ಓಡುವ ಹೊತ್ತಿಗಾಗಲೇ, ಅತ್ತ ಕಡೆಯಿಂದ ಸಮುದ್ರೋಪಾದಿಯಲ್ಲಿ ನೀರು ಸುರಂಗದೊಳಗೆ ನುಗ್ಗಿ ಬರತೊಡಗಿತ್ತು. ಪಕ್ಕಾ ಹಾಲಿವುಡ್‌ ಸಿನಿಮಾ ರೀತಿಯಲ್ಲಿ...'
- ಇದು ಉತ್ತರಾಖಂಡದ ನೀರ್ಗಲ್ಲು ಸ್ಫೋಟದ ವೇಳೆ ತಪೋವನ-ವಿಷ್ಣುಗಢ ಸುರಂಗದಲ್ಲಿ ಸಿಕ್ಕಿಬಿದ್ದು, ರಕ್ಷಿಸಲ್ಪಟ್ಟರಾಜೇಶ್‌ ಕುಮಾರ್‌ ಎಂಬುವರು ತಮ್ಮ ಅನುಭವ ಹಂಚಿಕೊಂಡ ರೀತಿ. ಈ ಸುರಂಗದಿಂದ ಐಟಿಬಿಪಿ ಸಿಬ್ಬಂದಿ 16 ಜನರನ್ನು ರಕ್ಷಿಸಿದ್ದರು. ಈ ಕುರಿತ ವಿಡಿಯೋ ಭಾನುವಾರ ಸಂಜೆ ವೈರಲ್‌ ಆಗಿತ್ತು. ರಕ್ಷಣೆಗೆ ಒಳಗಾದವರಲ್ಲಿ ಒಬ್ಬರಾದ ಕುಮಾರ್‌ ತಮ್ಮ ಭಯಾನಕ ಅನುಭವಗಳನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಕುತ್ತಿಗೆ ಮಟ್ಟಕ್ಕೂ ಕೆಸರು:
'ನಾವು ಸುರಂಗದಲ್ಲಿದ್ದಾಗ ಪ್ರವಾಹದಲ್ಲಿ ಸಿಲುಕಿದೆವು. ಬರಬರುತ್ತಾ ಸುರಂಗದೊಳಗೆ ನೀರಿನ ಪ್ರಮಾಣ ಹೆಚ್ಚುತ್ತಾ ಹೋಯಿತು. ನಮ್ಮ ಕುತ್ತಿಗೆಯ ಮಟ್ಟದವರೆಗೂ ನೀರು, ಕೆಸರು, ಕಲ್ಲು ತುಂಬಿಕೊಂಡಿದ್ದವು. ನಾವೆಲ್ಲಾ ನಮ್ಮ ಬದುಕು ಮುಗಿಯಿತು ಎಂದೇ ಭಾವಿಸಿದ್ದೆವು. ಆದರೆ ಅಷ್ಟರಲ್ಲೇ ಸುರಂಗದೊಳಗೆ ಹೊಡೆಯಲಾಗಿದ್ದ ಕಬ್ಬಿಣದ ರಾಡ್‌ಗಳು ಕಂಡುಬಂದವು. ನಾವೆಲ್ಲಾ ಅದನ್ನು ಗಟ್ಟಿಯಾಗಿ ಹಿಡಿದು ನೇತಾಡತೊಡಗಿದೆವು. ಬದುಕುವ ಆಸೆ ಕ್ಷೀಣಿಸಿದ್ದರೂ, ಆಸೆಯಂಥೂ ಇದ್ದೇ ಇತ್ತು. ಹೀಗಾಗಿಯೇ ಏನಾದರೂ ಆಗಲಿ ಕಬ್ಬಿಣದ ರಾಡ್‌ಗಳನ್ನು ಯಾರೂ ಬಿಡಬಾರದು. ಗಟ್ಟಿಯಾಗಿಯೇ ಹಿಡಿದುಕೊಂಡಿರಬೇಕೆಂದು ಪರಸ್ಪರ ಮಾತನಾಡಿಕೊಂಡೆವು. ಈ ಮೂಲಕ ಪರಸ್ಪರರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದೆವು. ಹೀಗೆಯೇ 4 ಗಂಟೆ ಕಳೆದು ಹೋಗಿತ್ತು. ಬಹುಷಃ ದೇವರು ನಮ್ಮ ಜೊತೆಗಿದ್ದ. ಜೊತೆಗೆ ನಮ್ಮ ಕೈಗಳೂ ನಮ್ಮ ಕೈಬಿಡಲಿಲ್ಲ. 4 ಗಂಟೆಯವರೆಗೆ ಕಬ್ಬಿಣದ ರಾಡ್‌ ಅನ್ನು ಬಿಡದೇ ಹಿಡಿದುಕೊಂಡಿದ್ದವು.
'ಸುಮಾರು 4 ಗಂಟೆಯ ಬಳಿಕ ಸುರಂಗದಲ್ಲಿ ಬಳಿಕ ನಿಧಾನವಾಗಿ ನೀರಿನ ಮಟ್ಟಇಳಿಯತೊಡಗಿತು. ಬಳಿಕ ಕೆಸರು ಕೂಡಾ ಇಳಿಯಿತು. ಬಳಿಕ ನಾವು ನಿಧಾನವಾಗಿ ಕೆಸರಿನಲ್ಲೇ ಹೆಜ್ಜೆ ಇಟ್ಟುಕೊಂಡು, ಅಲ್ಲಲ್ಲಿ ಇದ್ದ ಕಲ್ಲು ಬಂಡೆ ಏರಿಕೊಂಡು ಸುರಂಗದ ಮುಖಭಾಗದತ್ತ ತೆರಳಲು ಆರಂಭಿಸಿದೆವು. ಅಷ್ಟರಲ್ಲಿ ಅಲ್ಲಿ ಸಣ್ಣದೊಂದು ಬೆಳಕಿನ ಕಿಂಡಿ ಕಾಣಿಸಿತು. ಅದರೆ ಅದು ಎಲ್ಲಿಗೆ ಕರೆದೊಯ್ಯಲಿದೆ ಎಂಬುದು ಗೊತ್ತಿರಲಿಲ್ಲ. ಆದರೆ ಅಲ್ಲಿಂದ ಉಸಿಡಾಡಲು ಸಣ್ಣ ಪ್ರಮಾಣ ಗಾಳಿ ಬರುತ್ತಿರುವುದಂತೂ ಸ್ಪಷ್ಟವಾಗಿತ್ತು. ಅಷ್ಟರಲ್ಲಿ ನಮ್ಮಲ್ಲಿ ಒಬ್ಬರ ಮೊಬೈಲ್‌ಗೆ ಸಿಗ್ನಲ್‌ ಕೂಡಾ ಲಭ್ಯವಾಯಿತು. ನಾವು ಕೂಡಲೇ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಸಹಾಯಕ್ಕೆ ಮನವಿ ಮಾಡಿಕೊಂಡೆವು. ಮುಂದೆ ಕೆಲ ಗಂಟೆಗಳಲ್ಲೇ ರಕ್ಷಣಾ ಸಿಬ್ಬಂದಿ ನಮ್ಮನ್ನು ಅಲ್ಲಿಂದ ಹೊರತೆಗೆದರು' ಎಂದು ಕುಮಾರ್‌ ಹೇಳಿದರು.
ಇನ್ನೂ 175 ಜನ ನಾಪತ್ತೆ
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮಕುಸಿತದಲ್ಲಿ ನಾಪತ್ತೆಯಾಗಿದ್ದ ಇನ್ನೂ 5 ಜನರ ಶವ ಮಂಗಳವಾರ ಪತ್ತೆಯಾಗಿದೆ. ಇದರೊಂದಿಗೆ ದುರ್ಘಟನೆಯಲ್ಲಿ ಬಲಿಯಾದವರ ಸಂಖ್ಯೆ 31ಕ್ಕೆ ಏರಿದೆ. ಮತ್ತೊಂದೆಡೆ 175 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಘಟನಾ ಸ್ಥಳದಲ್ಲಿ ಐಟಿಬಿಪಿ, ಎನ್‌ಡಿಆರ್‌ಎಫ್‌, ಸೇನೆ, ರಾಜ್ಯ ವಿಪತ್ತು ನಿರ್ವಹಣೆ ಪಡೆಯ ಸಾವಿರಾರು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಡೊಂಬಿವಲಿ ಕರ್ನಾಟಕ ಸಂಘದ ನೂತನ ಉಪ ಕಾಯ್ಯಾಧ್ಯಕ್ಷ ದೇವದಾಸ ಕುಲಾಲರಿಗೆ ಸಮಾಜದ ಗೌರವ | Suddi9 |Kannada News | A news portal of Coastal Karnataka | Mangalore News | Bajpe | Suddi Nine
ಡೊಂಬಿವಲಿ ಕರ್ನಾಟಕ ಸಂಘದ ನೂತನ ಉಪ ಕಾಯ್ಯಾಧ್ಯಕ್ಷ ದೇವದಾಸ ಕುಲಾಲರಿಗೆ ಸಮಾಜದ ಗೌರವ
ಮುಂಬಯಿ : ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ್ ಕುಲಾಲ್ ಅವರು ವಾಸ್ತವವಿರುವ ಡೊಂಬಿವಲಿ ಪರಿಸರದ ಪ್ರತಿಷ್ಠಿತ ಸಂಸ್ಥೆ ಡೊಂಬಿವಲಿ ಕರ್ನಾಟಕ ಸಂಘದ ನೂತನ ಉಪ ಕಾಯ್ಯಾಧ್ಯಕ್ಷ ರಾಗಿ ಆಯ್ಕೆಗೊಂಡಿದ್ದು ಅವರನ್ನು ಕುಲಾಲ ಸಂಘ ಮುಂಬಯಿ ಥಾಣಾ – ಕಸಾರ-ಕರ್ಜತ್-ಭಿವಂಡಿ ಸ್ಥಳೀಯ ಸಮಿತಿಯ ವತಿಯಿಂದ ಎ. ೪ ರಂದು ಕಲ್ಯಾಣ್ ಪಶ್ಚಿಮದ ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಲಯದಲ್ಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಡಿ. ಐ ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ವಿಶೇಷವಾಗಿ ಗೌರವಿಸಿ ಅಭಿನಂದಿಸಲಾಯಿತು.
ಗೌರವವನ್ನು ಸ್ವೀಕರಿಸಿ ಕೃತಜ್ನತೆಯನ್ನು ಸಲ್ಲಿಸುತ್ತಾ ದೇವದಾಸ್ ಕುಲಾಲ್ ಅವರು ನಾನು ಬಾಲ್ಯದಿಂದಲೇ ಸಮಾಜ ಸೇವೆಯಲ್ಲಿ ಆಸಕ್ತನಾಗಿದ್ದು ವಿವಿದ ಸಂಘಟನೆಗಳಲ್ಲಿ ಸಕ್ರಿಯನಾಗಿ ಸಮಾಜ ಸೇವೆಯಲ್ಲಿ ನಿರತನಾಗಿರುವೆನು. ನನ್ನಿಂದ ಸಾದ್ಯವಾದಷ್ಟು ಸೇವೆ ಯನ್ನು ನಾನು ಮಾಡುತ್ತಿರುವೆನು. ಕನ್ನಡಾಂಬೆಯ ಸೇವೆಗಾಗಿ ಡೊಂಬಿವಲಿ ಕರ್ನಾಟಕ ಸಂಘದಲ್ಲಿ ವಿವಿಧ ಪದವಿಗಳಿಂದ ಜವಾಬ್ಧಾರಿ ವಹಿಸಿ ಸೇವೆ ಮಾಡುತ್ತಿರುವೆನು. ಇಂದು ಡೊಂಬಿವಲಿ ಕರ್ನಾಟಕ ಸಂಘದ ಪದಾಧಿಕಾರಿಗಳು ನನ್ನನ್ನು ಉಪ ಕಾಯ್ಯಾಧ್ಯಕ್ಷ ಇದು ನಮ್ಮ ಸಮಾಜಕ್ಕೂ ಸಂದ ಗೌರವವಾಗಿದೆ. ಇಂದು ನೀವೆಲ್ಲರೂ ನೀಡಿರುವ ಗೌರವ ಕುಲಾಲ ಸಮಾಜಕ್ಕೆ ಸಂದಿರುತ್ತದೆ. ನಿಮ್ಮೆಲ್ಲರ ಸಹಕಾರ ಮುಂದಿನ ದಿನಗಳಲ್ಲೂ ಅಗತ್ಯವಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಥಾಣಾ – ಕಸಾರ-ಕರ್ಜತ್-ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಡಿ. ಐ ಮೂಲ್ಯ ಅವರು ಮಾತನಾಡುತ್ತಾ ಸಮಾಜದ ಋಣ ಸಂದಾಯದ ಕರ್ತವ್ಯವನ್ನು ಅರಿತು ದೇವದಾಸ ಕುಲಾಲರು ಸಂಘದಲ್ಲಿ ವಿವಿಧ ಪದವಿಗಳನ್ನು ಅಲಂಕರಿಸಿ ಕಳೆದ ೪೦ ವರ್ಷಗಳಿಂದ ಕುಲಾಲ ಸಂಘ ಹಾಗೂ ಜ್ಯೋತಿ ಕ್ರೆಡಿಟ್ ಸೊಸೈಟಿಯಲ್ಲಿ ಜವಾಬ್ಧಾರಿಯುತ ಪದವಿಯನ್ನು ಸ್ವೀಕರಿಸಿ ಸೇವೆ ಸಲ್ಲಿಸಿರುವರು. ಅವರ ಸೇವಾ ಕಾರ್ಯಕಗಳು ಸಮಾಜದಲ್ಲಿ ಗುರುತಿಸಿ ಕೊಂಡಿದೆ. ನಾವೆಲ್ಲರೂ ಸಮಾಜದ ಸೇವೆ ಮಾಡಲು ಕರ್ತವ್ಯ ಎಂಬಂತೆ ಸೇವೆ ಮಾಡ ಬೇಕು ಎಂದರು.
ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಆನಂದ ಬಿ ಮೂಲ್ಯ ಅವರು ದೇವದಾಸ ಕುಲಾಲರ ಬಗ್ಗೆ ಮಾಹಿತಿಯಿತ್ತರು. ಪ್ರಾರಂಭದಲ್ಲಿ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಹರಿಯಪ್ಪ ಮೂಲ್ಯ ಸ್ವಾಗತಿಸಿ ಕೊನೆಗೆ ವಂದನಾರ್ಪಣೆ ಮಾಡಿದರು. ಸಮಾರಂಭದಲ್ಲಿ ಸ್ಥಳೀಯ ಸಮಿತಿಯ ಸಲಹೆಗಾರರಾದ ಆನಂದ ಬಿ. ಮೂಲ್ಯ, ಕರುಣಾಕರ ಜಿ. ಕೆ., ಸದಾಶಿವ ಬಂಗೇರ, ನಂದಕುಮಾರ್ ಠಾಣೆ, ಕೋಶಾಧಿಕಾರಿ ಸದಾನಂದ ಸಾಲ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾವತಿ ಎಸ್ ಸಾಲ್ಯಾನ್, ಸುಚಿತಾ ಡಿ. ಬಂಜನ್, ಕೃಷ್ಣ ಕೆ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆದ #Swara_aunty ! ಕಾರಣವೇನು ಗೊತ್ತಾ ? | Udayavani – ಉದಯವಾಣಿ
Sunday, 31 May 2020 | UPDATED: 11:01 PM IST
Team Udayavani, Nov 6, 2019, 9:18 AM IST
ಮುಂಬೈ : ಆಂಟಿ ಎಂದು ಕರೆದಿದ್ದಕ್ಕೆ 4 ವರ್ಷದ ಮಗುವಿನ ಮೇಲೆ ಅವಾಚ್ಯ ಪದ ಬಳಕೆ ಮಾಡಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಗೆ ಟ್ರೋಲ್ ಗೆ ಒಳಗಾಗಿದ್ದಾರೆ.
ತಾನು ಆಗ ತಾನೆ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಸಮಯ. ಜಾಹೀರಾತೊಂದನ್ನು ಶೂಟಿಂಗ್ ಮಾಡುತ್ತಿದ್ದ ವೇಳೆ ನಾಲ್ಕು ವರ್ಷದ ಬಾಲಕನೊಬ್ಬ ಆಂಟಿ ಎಂದು ಕರೆದಿದ್ದಕ್ಕೆ ನನಗೆ ಮೈ ಉರಿದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ,
ಸ್ವರಾ ಭಾಸ್ಕರ್ ಮಾತನಾಡಿದ್ದ ಸಂದರ್ಶನದ ತುಣುಕು ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದೆ. ಆ ಬಾಲಕನಿಗೆ ಟಾಯ್ಲೆಟ್ ಕರೆದುಕೊಂಡಲು ಹೋಗಲು ಜನರು ಬೇಕು. ಮಕ್ಕಳೆಂದರೆ ಒಂಥರಾ ಇವಿಲ್ ಇದ್ದಂಗೆ ಎನ್ನುತ್ತಾ ತಮ್ಮ ಸಂಭಾಷಣೆ ಮುಂದುವರೆಸಿದ್ದಾರೆ.
ತನ್ನನ್ನು ಆಂಟಿ ಎಂದು ಕರೆದುದಕ್ಕೆ ಆಡಿದ ಮಾತುಗಳು ಈಗ ವ್ಯಾಪಕ ಟೀಕೆಗೊಳಗಾಗಿದ್ದು, ಇದರ ಪರಿಣಾಮವೇ #Swara_aunty ಟ್ರೆಂಡಿಂಗ್​ ಕ್ರಿಯೇಟ್ ಆಗಿದೆ. ಆ ಮೂಲಕ ಟ್ರೋಲ್ ಗೆ ಒಳಗಾಗಿದ್ದಾರೆ.
ಈ ಬಗ್ಗೆ ಸೃಷ್ಠಿಕರಣ ನೀಡಿದ ನಟಿ ಸ್ವರ ಭಾಸ್ಕರ್ ಅಂದು ಚಿತ್ರೀಕರಣದ ಸಂದರ್ಭದಲ್ಲಿ ಆ ಮಗುವನ್ನು ಬೈದಿರಲಿಲ್ಲ. ಆದರೆ, ಈ ಸಂದರ್ಶನದಲ್ಲಿ ನನ್ನ ಮನಸ್ಸಿನೊಳಗೆ ನಡೆದಿದ್ದ ಚಿಂತನೆಗಳನ್ನು ಹಂಚಿಕೊಂಡಿದ್ದೆ ಎಂದು ಹೇಳಿಕೊಂಡಿದ್ದಾರೆ.
This is 'humour'?
Calling a 4 year old child a 'Ch*^%a' 'Kameena'?
Saying with great confidence that children r 'evil'? #PanautiJunior is sounding completely deranged here, & that moron @kunalkamra88 is watching like a drunk dodo at this 'wisdom'@ReallySwara u r bullshit & creep pic.twitter.com/RRUMTRRO62
ಸಿಎಂ ಅಕೌಂಟ್ ಗೆ ಬಿತ್ತು 4ನೇ ಸಿನಿಮಾ: ಯಾವಾಗ ನೋಡ್ತೀರಾ ಸಿದ್ದು ಸರ್? | Chief Minister Siddaramaiah to Watch 2 New Kannada Movie - Kannada Filmibeat
10 min ago ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಏಕವಚನದ ವಾಗ್ದಾಳಿ
32 min ago ಮೊದಲ ಬಾರಿಗೆ 'ಬಿಗ್ ಬಾಸ್' ನಡೆಸಿಕೊಟ್ಟ ಸಮಂತಾಗೆ ಅಭಿಮಾನಿಗಳು ಫಿದಾ