text
stringlengths
0
61.5k
ದಿನಪೂರ್ತಿ ನಾವು ಚಾಕುವನ್ನು ಉಪಯೋಗಿಸುತ್ತೇವೆ. ಅಡುಗೆಮನೆಯಲ್ಲಿ ವಿವಿಧ ಬಗೆಯ ಚಾಕುಗಳನ್ನು ನಾವು ಬಳಸುತ್ತೇವೆ. ಚಾಕುವನ್ನು ಹೆಚ್ಚಾಗಿ ಬಳಸುವುದರಿಂದ ಅದರ ಮೇಲೆ ಬ್ಯಾಕ್ಟೀರಿಯಾ ಮತ್ತಿತರ ಕೀಟಾಣುಗಳ ಹಾವಳಿಯನ್ನು ಕಾಣಬಹುದು. ತುಕ್ಕು ಹಿಡಿಯುವುದು ಕೂಡ ಸಾಮಾನ್ಯವಾದ ಸಮಸ್ಯೆ.
ಚಾಕು ಬಳಸದೆ ತುಂಬ ಕಾಲ ಇಟ್ಟುಬಿಟ್ಟರೆ ಕೂಡ ತುಕ್ಕು ಹಿಡಿಯುವ ಸಂಭವವಿರುತ್ತದೆ. ಆದ್ದರಿಂದ ಚಾಕುವನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಇದರೊಂದಿಗೆ ಚಾಕುವಿನ ಹರಿತ ತುಕ್ಕು ಹಿಡಿದು ಹಾಳಾಗದಂತೆ ಕಾಪಾಡಿಕೊಳ್ಳಬೇಕಾದದ್ದು ಸಹ ಮುಖ್ಯ. ಪ್ರತಿ ಸಾರಿ ಚಾಕು ಬಳಸಿದ ನಂತರ ನಾವದನ್ನು ಸ್ವಚ್ಛ ಮಾಡುತ್ತೇವೆ. ಆದರೆ ಚಾಕುವಿನ ಹಿಡಿಗಳ ಸಮೀಪ ತುದಿಗಳಲ್ಲಿ ಬ್ಯಾಕ್ಟೀರಿಯಾ ಮತ್ತಿತರ ಕೀಟಾಣುಗಳು ಶೇಖರವಾಗುವುದರ ಬಗ್ಗೆ ನಮ್ಮಲ್ಲಿ ಹಲವರಿಗೆ ತಿಳಿದಿರುವುದಿಲ್ಲ. ಆದ್ದರಿಂದ ಚಾಕು ಸ್ವಚ್ಛತೆಗೆ ನಾವಿಲ್ಲಿ ಕೆಲ ಟಿಪ್ಸ್ ಗಳನ್ನು ನೀಡಿದ್ದೇವೆ
ಚಾಕುವನ್ನು ಹೀಗೆ ಸ್ವಚ್ಛ ಮಾಡಿ:
ಸೋಪು: ಪಾತ್ರೆ ತೊಳೆಯಲು ಬಳಸುವ ಸೋಪಿನಲ್ಲಿ ಚಾಕುವನ್ನು ಚೆನ್ನಾಗಿ ಉಜ್ಜಿ ಬಿಸಿ ನೀರಿನಲ್ಲಿ ತೊಳೆಯಿರಿ. ಬಿಸಿ ನೀರು ಬ್ಯಾಕ್ಟೀರಿಯಾ ಕೊಲ್ಲಲು ಹೆಚ್ಚು ಪರಿಣಾಮಕಾರಿ. ತಣ್ಣಗಿನ ನೀರು ಬ್ಯಾಕ್ಟೀರಿಯಾವನ್ನು ತೊಲಗಿಸದೆ ಇರಬಹುದು.
ಕುದಿಸುವಿಕೆ: ಒಂದು ವೇಳೆ ಚಾಕುವಿಗೆ ಪ್ಲಾಸ್ಟಿಕ್ ನ ಹಿಡಿ ಇಲ್ಲದಿದ್ದರೆ ಚಾಕುವನ್ನು ಕೆಲ ಕಾಲ ಬಿಸಿನೀರಿನಲ್ಲಿ ಕುದಿಸಬಹುದು. ಇದು ಕೀಟಾಣುಗಳನ್ನು ಕೊಲ್ಲುವುದಲ್ಲದೆ ಕಲೆಗಳನ್ನು ಕೂಡ ತೊಲಗಿಸುತ್ತದೆ. ಬಿಸಿ ನೀರು ಚಾಕುವಿಗೆ ಅಂಟಿರಬಹುದಾದ ಜಿಡ್ಡು, ಎಣ್ಣೆ ಇದನ್ನು ಕೂಡ ನಿವಾರಿಸುತ್ತದೆ. ಈರುಳ್ಳಿ ಅಥವ ಬೆಳ್ಳುಳ್ಳಿಯಂತಹ ವಾಸನೆ ಹೆಚ್ಚಿರುವ ತರಕಾರಿಗಳನ್ನು ಕತ್ತರಿಸಿದ್ದರೆ ಬಿಸಿ ನೀರಿನಿಂದ ತೊಳೆದಾಗ ವಾಸನೆ ಹೊರಟು ಹೋಗುತ್ತದೆ. ಆದರೆ ಬಿಸಿ ನೀರಿನಲ್ಲಿ ತೊಳೆದ ತಕ್ಷಣ ತಣ್ಣೀರಿನಲ್ಲಿ ಚಾಕುವನ್ನು ತೊಳೆಯಬೇಡಿ ಇದರಿಂದ ಚಾಕು ಹಾಳಾಗುವ ಸಾಧ್ಯತೆ ಇರುತ್ತದೆ.
ನಿಂಬೆ ಹಣ್ಣು: ತುಂಬಾ ಗಲೀಜಾಗಿರುವ ಚಾಕುವನ್ನು ನೀವು ನಿಂಬೆ ರಸದಿಂದ ಸ್ವಚ್ಛಗೊಳಿಸಬಹುದು. ನಿಂಬೆ ರಸದಲ್ಲಿ ಸಿಟ್ರಸ್ ಅಂಶವಿರುತ್ತದೆಯಾದ್ದರಿಂದ ಅದು ಸ್ವಚ್ಛತೆಗೆ ನೆರವಾಗುತ್ತದೆ. ಆದರೆ ಹೆಚ್ಚು ಸಮಯದವರೆಗೆ ನಿಂಬೆ ರಸದಲ್ಲೇ ಸ್ವಚ್ಛಗೊಳಿಸುವುದು ಒಳ್ಳೆಯದಲ್ಲ. ತಣ್ಣೀರಿನಲ್ಲಿ ತೊಳೆಯಿರಿ. ಬಿಸಿ ನೀರಿಗೆ ಕೆಲವು ಹನಿ ನಿಂಬೆರಸ ಹಾಕಿ ಕೂಡ ಚಾಕು ಸ್ವಚ್ಛಗೊಳಿಸಬಹುದು.
ವಿನಿಗರ್: ಕುದಿಯುವ ನೀರಿಗೆ ಒಂದೆರಡು ಹನಿ ವಿನಿಗರ್ ಹಾಕಿ ಚಾಕುವನ್ನು ತೊಳೆಯಬಹುದು. ಒಂದು ನಿಮಿಷ ಈ ನೀರಿನಲ್ಲಿ ಕುದಿಸಿದ ನಂತರ ಹಳೆಯ ಟೂತ್ ಬ್ರಷ್ ಬಳಸಿ ಮೆದುಗೊಂಡ ಕೊಳೆಯನ್ನು ಉಜ್ಜಿ ತೆಗೆಯಿರಿ. ಮತ್ತೆ ನೀರಿನಲ್ಲಿ ತೊಳೆದು ಒಣಗಿಸಿಡಿ.
ಇವು ಅಡುಗೆಮನೆಯಲ್ಲಿ ಬಳಸುವ ಚಾಕುವನ್ನು ಸ್ವಚ್ಛಗೊಳಿಸುವ ಕೆಲ ಉಪಾಯಗಳು. ಆದರೆ ಹೇಗೆ ಸ್ವಚ್ಛ ಮಾಡಿದರೂ ಚಾಕುವನ್ನು ಒಣಗಿಸಿಡುವುದನ್ನು ಮರೆಯದಿರಿ. ನಂತರ ಸ್ವಲ್ಪ ಎಣ್ಣೆಯನ್ನು ಅದಕ್ಕೆ ಹಚ್ಚಿಡಿ. ಹೆಚ್ಚಾದ ಎಣ್ಣೆಯನ್ನು ಪೇಪರ್ ಬಳಸಿ ಒರೆಸಿಬಿಡಿ.
Read more about: cleaning improvement ಸ್ವಚ್ಛತೆ ಅಡುಗೆಮನೆ
Knife is used throughout the day. There are different types of knives that are used in the kitchen. As knife is used extensively, it becomes prone to bacteria an germs. Even rust is one of the common problems seen in old knives.
ನ್ಯಾಯಾಲಯದಲ್ಲಿ ಪರಿಕ್ಕರ್ ಆರೋಗ್ಯ ಸ್ಥಿತಿ ಬಹಿರಂಗಕ್ಕೆ ಗೋವಾ ಸರ್ಕಾರ ನಕಾರ - Kannada Today - ಕನ್ನಡ ಟುಡೇ - Digital News
"ಸಾರ್ವಜನಿಕ ಕಛೇರಿಗೆ ಸಂಬಂಧಿಸಿರದ ಯಾವುದೇ ವ್ಯಕ್ತಿ ತನ್ನ ಆರೋಗ್ಯ ಸಮಸ್ಯೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದೆ ಇರುವ ಹಕ್ಕನ್ನು ಹೊಂದಿದ್ದಾನೆ.ಇನ್ನು ಮುಖ್ಯಮಂತ್ರಿಯಾಗಿರುವ ಓರ್ವ ವ್ಯಕ್ತಿಯ ಆರೋಗ್ಯ ಸಮಸ್ಯೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಸಹ ಆರ್ಟಿಕಲ್ 21ರ ಅಡಿಯಲ್ಲಿ ಗೌಪ್ಯತೆ ಹಕ್ಕಿನ ಉಲ್ಲಂಘನೆಯಾಗಲಿದೆ.
ಬುಧವಾರ, 8 ಸೆಪ್ಟಂಬರ್ 2021 (10:05 IST)
ಬೆಂಗಳೂರು: ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಮೇಲೆ ಮಂಗಳಮುಖಿಯರು ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಹೆಬ್ಬಾಳ ಫ್ಲೈ ಓವರ್ ಬಳಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಮಂಗಳಮುಖಿಯರು ದಾಳಿ ಮಾಡಿದ್ದಾರೆ. ಮಂಗಳಮುಖಿಯರು ರಕ್ಷಕ್ ಬಳಿಯಿದ್ದ ಬ್ಯಾಗ್ ಎಳೆದಾಡಿದ್ದಾರೆ. ಈ ವೇಳೆ ಕೆಳಗೆ ಬಿದ್ದ ರಕ್ಷಕ್ ಕಾಲಿಗೆ ತರಚಿದ ಗಾಯಗಳಾಗಿವೆ ಎನ್ನಲಾಗಿದೆ.
ರಕ್ಷಕ್ ಇತ್ತೀಚೆಗೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದರು. ಅಪ್ಪನಂತೇ ಚಿತ್ರರಂಗದಲ್ಲಿ ಹೆಸರು ಮಾಡಬೇಕು ಎಂದಿದ್ದ ರಕ್ಷಕ್ ಗೆ ನಟ ದರ್ಶನ್ ಬೆಂಬಲವಾಗಿದ್ದಾರೆ.
ಖ್ಯಾತ ಕನ್ನಡ ಕಿರುತೆರೆ ನಿರೂಪಕ ಗಜಾನನ ಹೆಗಡೆ ನಿಧನ! – ಅರಳಿ ಕಟ್ಟೆ
ಖ್ಯಾತ ಕನ್ನಡ ನಿರೂಪಕ ಗಜಾನನ ಹೆಗಡೆ ನಿಧನರಾಗಿದ್ದಾರೆ. ಇತ್ತೀಚೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಆಯ ತಪ್ಪಿ ಬಿದ್ದು ತಲೆಗೆ ಪೆಟ್ಟಾಗಿದ್ದ ಗಜಾನನ ಹೆಗಡೆ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರರು ಸೇರಿ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಈ ಟಿವಿ ನ್ಯೂಸ್ ಮೂಲಕ ಮಾಧ್ಯಮ ರಂಗಕ್ಕೆ ಕಾಲಿಟ್ಟವರು ಕಸ್ತೂರಿ ಮತ್ತು ಪ್ರಜಾ ಟಿವಿಯಲ್ಲಿ ಕೆಲಸ ಮಾಡಿದ್ದರು. ಬಹುಮುಖ ಪ್ರತಿಭೆ ಗಜಾನನ ಹೆಗಡೆ ಅನೇಕ ಜನರನ್ನು ತಮ್ಮ ಗರಡಿಯಲ್ಲಿ ಬೆಳೆಸಿದ್ದರು. ಕಳೆದ ಒಂದು ವರ್ಷದಿಂದ ಮಾಧ್ಯಮ ಕ್ಷೇತ್ರದಿಂದ ದೂರವಾಗಿ ಸಂಗೀತ ಮತ್ತು ನಾಟಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಉತ್ತರಕನ್ನಡ ಜಿಲ್ಲೆಯ ಗಜಾನನ ಅವರು ನಗರದ ಕುಮಾರಸ್ವಾಮಿ ಲೇಔಟ್‌ನಲ್ಲಿ ವಾಸವಿದ್ದರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. 'ಫೆ. 23ರಂದು ರಾತ್ರಿ ಪರಿಚಯಸ್ಥರ ಜೊತೆ ಹೊರಟಿದ್ದ ಗಜಾನನ ಏಕಾಏಕಿ ಕುಸಿದು ಬಿದ್ದಿದ್ದರು. ಅವರನ್ನು ಟಿ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು' ಎಂದು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಹೇಳಿದರು.
ಮೈಸೂರಿನಿಂದ ಕೊನೆಗೂ ಫಿಲ್ಮ್‌ ಸಿಟಿ ಶಿಫ್ಟ್: ಎಲ್ಲಿಗೆ? ಕಾರಣ ಸಹಿತ ಉತ್ತರಿಸಿದ ಡಿಸಿಎಂ | Film City shift To Bengaluru from Mysuru Says Dycm ashwath narayan
ಮೈಸೂರಿನಿಂದ ಕೊನೆಗೂ ಫಿಲ್ಮ್‌ ಸಿಟಿ ಶಿಫ್ಟ್: ಎಲ್ಲಿಗೆ? ಕಾರಣ ಸಹಿತ ಉತ್ತರಿಸಿದ ಡಿಸಿಎಂ
Bengaluru, First Published 8, Jan 2020, 7:43 PM
ಮೈಸೂರಿನಲ್ಲಿ ಫಿಲ್ಮ್ ಸಿಟಿ ಆಗುತ್ತೆ ಎಂದು ಕನಸು ಕಾಣುತ್ತಿದ್ದ ಸಾಂಸ್ಕೃತಿಕನಗರಿ ಜನರಿಗೆ ಬಿಎಸ್‌ವೈ ಸರ್ಕಾರ ಬಿಗ್ ಶಾಕ್ ನೀಡಿದೆ. ಸಾಂಸ್ಕೃತಿಕ ನಗರಿಯಿಂದ ಫಿಲ್ಮ್ ಸಿಟಿ ಬೇರೆ ಜಿಲ್ಲೆಗೆ ಶಿಫ್ಟ್ ಆಗುತ್ತೆ ಎನ್ನುವ ಮಾತುಗಳು ಹಲವು ದಿನಗಳಿಂದ ಕೇಳಿಬಂದಿದ್ದವು. ಹರಿದಾಡುತ್ತಿದ್ದ ಮಾತುಗಳಂತೆಯೇ ಫಿಲ್ಮ್ ಸಿಟಿ ಬೇರೆ ಜಿಲ್ಲೆಗೆ ಸ್ಥಳಾಂತರವಾಗುವುದು ಪಕ್ಕಾ ಆಗಿದೆ. ಯಾವ ಜಿಲ್ಲೆಗೆ..? ಏಕೆ ಶಿಫ್ಟ್ ಮಾಡಲಾಗುತ್ತಿದೆ..? ಇದಕ್ಕೆ ಕಾರಣ ಸಹಿತ ಉತ್ತರ ಈ ಕೆಳಗಿನಂತಿದೆ ನೋಡಿ..
ಬೆಂಗಳೂರು, (ಜ.08): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರ್ಮಿಸಲುದ್ದೇಶಿಸಿದ್ದ ಮಹತ್ವಾಕಾಂಕ್ಷೆಯ ಚಿತ್ರನಗರಿ (ಫಿಲ್ಮ್‌ ಸಿಟಿ) ಯೋಜನೆ ಬೆಂಗಳೂರಿಗೆ ಶಿಫ್ಟ್ ಆಗುವುದು ಪಕ್ಕಾ ಆಗಿದೆ.
ಈ ಹಿಂದಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಮೈಸೂರಿನ ಫಿಲ್ಮ್ ಸಿಟಿಯನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸುವ ಮಾತುಗಳು ಹರಿದಾಡುತ್ತಿದ್ದವು.
ಆದ್ರೆ, ಇದೀಗ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಮೈಸೂರಿಗೆ ಮಂಜೂರಾಗಿದ್ದ ಫಿಲ್ಮ್‌ ಸಿಟಿಯನ್ನು ಬೆಂಗಳೂರಿನಲ್ಲಿಯೇ ನಿರ್ಮಾಣ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಇಂದು (ಬುಧವಾರ) ಡಿಸಿಎಂ ಡಾ. ಸಿ.ಎನ್‌ ಅಶ್ವಥ್‌ ನಾರಾಯಣ ಅವರು ಅಧಿಕೃತ ಹೇಳಿಕೆ ನೀಡಿದ್ದಾರೆ.
ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ, ಫಿಲ್ಮ್‌ ಸಿಟಿ, ರೋರಿಚ್‌ ಆರ್ಟ್‌ ಅಂಡ್‌ ಕ್ರಾಫ್ಟ್‌ ಮ್ಯೂಸಿಯಂ ಸ್ಥಾಪನೆ ಕುರಿತ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಲು ಜಾಗ ಗುರುತು ಮಾಡಲಾಗಿದೆ. ಮುಖ್ಯಮಂತ್ರಿಗಳ ಜತೆ ಈ ವಿಷಯ ಚರ್ಚಿಸಿ ಅವರ ಅನುಮೋದನೆ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ದೇಶ, ವಿದೇಶಗಳ ಹಲವು ಪ್ರಮುಖ ಫಿಲ್ಮ್‌ ಸಿಟಿಗಳನ್ನು ನೋಡಿದ್ದು, ಅವೆಲ್ಲಕ್ಕಿಂತ ವಿಭಿನ್ನ ಹಾಗೂ ವಿಶಿಷ್ಟವಾದ ಫಿಲ್ಮ್‌ ಸಿಟಿ ಸ್ಥಾಪಿಸುವುದು ನಮ್ಮ ಸರ್ಕಾರದ ಕನಸಾಗಿದೆ. ಅನಿಮೇಷನ್‌ ಕೇಂದ್ರ, ಚಿತ್ರ ನಿರ್ಮಾಣ ಹಾಗೂ ನಿರ್ಮಾಣ ನಂತರದ ಚಟುವಟಿಕೆಗಳಿಗೆ ಅನುಕೂಲವಾಗುವಂತಹ ಫಿಲ್ಮ್‌ ಸಿಟಿ ಸ್ಥಾಪಿಸಬೇಕು ಎಂದು ಹೇಳಿದರು.
ಪ್ರವಾಸೋದ್ಯಮಕ್ಕೂ ಪೂರಕವಾಗಿರುವ ಈ ಫಿಲ್ಮ್‌ ಸಿಟಿ ಹೇಗಿರಬೇಕು? ಅದರ ವಿಸ್ತೀರ್ಣ ಎಷ್ಟಿರಬೇಕು? ಎಂಬ ಬಗ್ಗೆ ಚರ್ಚೆ ನಡೆದಿದ್ದು, ಶೀಘ್ರದಲ್ಲೇ ಈ ಬಗ್ಗೆ ಪೂರ್ಣ ಮಾಹಿತಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.
ಮೈಸೂರಿನಿಂದ ಎತ್ತಂಗಡಿಗೆ ಕಾರಣ..?
ಮೈಸೂರಿನಲ್ಲಿ ಫಿಲ್ಮ್‌ ಸಿಟಿ ಏಕಿಲ್ಲ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಉಪಮುಖ್ಯಮಂತ್ರಿಗಳು, ಬೆಂಗಳೂರು ನಗರ ವಿಶ್ವಕ್ಕೆ ಅನಿಮೇಷನ್ ಕೊಟ್ಟಿದೆ. 'ಲಯನ್‌ ಕಿಂಗ್‌', 'ಅವತಾರ್‌' ನಂತಹ ಚಿತ್ರಗಳ ಅನಿಮೇಷನ್‌ ಬೆಂಗಳೂರಿನಲ್ಲೇ ಆಗಿವೆ. ಯಾವುದೋ ಒಂದೆರೆಡು ವಿಷಯಕ್ಕೆ ಸೀಮಿತವಾಗಿರದೇ ಎಲ್ಲವನ್ನು ಒಳಗೊಂಡ ಅತ್ಯುತ್ತಮ ಫಿಲ್ಮ್‌ ಸಿಟಿ ನಿರ್ಮಾಣ ಆಗಬೇಕು ಎಂಬುದಷ್ಟೇ ನಮ್ಮ ಗುರಿ ಎಂದು ಸ್ಪಷ್ಟನೆ ನೀಡಿದರು.
ಈ ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಘೋಷಣೆ ಮಾಡಿತ್ತು. ಬಳಿಕ ನಂತರದ ಮೈತ್ರಿ ಸರ್ಕಾರ ಈ ಫಿಲ್ಮ್ ಸಿಟಿಯನ್ನು ರಾಮನಗರಕ್ಕೆ ಅಥವಾ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರ ಮಾಡುವ ಬಗ್ಗೆ ಚಿಂತನೆಗಳು ನಡೆದಿದ್ದವು.
ಮೈಸೂರಿನಲ್ಲಿ ಜಾಗವೂ ಫಿಕ್ಸ್ ಆಗಿತ್ತು..!
ಕನ್ನಡ ಚಿತ್ರರಂಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಮೈಸೂರಿನ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಫಿಲ್ಮ್ ಸಿಟಿಗಾಗಿ ಒಪ್ಪಿಗೆ ಪಡೆದುಕೊಂಡಿತ್ತು. ಅಷ್ಟೇ ಅಲ್ಲದೇ ಅಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಸೇರಿದಂತೆ ಕನ್ನಡದ ಕೆಲ ನಟರು ಹಾಗೂ ಅಧಿಕಾರಿಗಳು ಅಲ್ಲಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದರು.
133 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕವಾಗಿ ನೋಯ್ಡಾದಲ್ಲಿರುವಂತೆ ಚಿತ್ರನಗರಿ ಮಾಡುವುದಾಗಿ ಮಾತುಕತೆಗಳು ಹರಿದಾಡಿದ್ದವು. ನಂತರ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಹಾಗೂ ಕನ್ನಡ ಚಿತ್ರರಂಗವಾಗಲಿ ಅತ್ತ ಮತ್ತೆ ಸುಳಿಯಲಿಲ್ಲ.
ವಿಜಯ ಬ್ಯಾಂಕ್ ವಿಲೀನ ತಪ್ಪಿಸದಿದ್ದರೆ ನಳಿನ್ ಬಟ್ಟೆ ಹರಿಯುತ್ತೇವೆಂದ ಐವನ್! ·
ಮುಂಬೈ: ಮಹರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾದರೂ ಸರ್ಕಾರ ರಚನೆಯ ಕಸರತ್ತು ನಿಂತಿರಲಿಲ್ಲ. ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಗಟ್ಟಿಗೊಂಡಿದ್ದು, ಮಹಾರಾಷ್ಟ್ರದ ಹಿತಕ್ಕೆ...
ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ತಂದು ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ಸ್ಥಗಿತಗೊಳಿಸದಿದ್ದರೆ ಸಂಸದ ನಳಿನ್‌ಕುಮಾರ್ ಕಟೀಲ್ ಅವರ ಬಟ್ಟೆ ಹರಿಯುತ್ತೇವೆ, ಕೈಕಾಲು ಎಳೆಯುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜ ಎಚ್ಚರಿಕೆ ನೀಡಿದ್ದಾರೆ.
ಬ್ಯಾಂಕ್ ಆಫ್ ಬರೋಡ ಜತೆಗೆ ವಿಜಯಾ ಬ್ಯಾಂಕ್ ವಿಲೀನ ವಿರೋಧಿಸಿ ಮಂಗಳೂರು ಪುರಭವನ ಮುಂಭಾಗದ ಗಾಂಧಿ ಪಾರ್ಕ್‌ನಲ್ಲಿ ಮಂಗಳವಾರ ಬೆಳಗ್ಗೆಯಿಂದ ಸಾಯಂಕಾಲವರೆಗೆ ಉಪವಾಸ ಸತ್ಯಾಗ್ರಹ ನಡೆಸಿ ಅವರು ಮಾತನಾಡಿದರು.
ವಿಜಯ ಬ್ಯಾಂಕ್ ನಮ್ಮದು, ವಿಲೀನ ಸಹಿಸಲಾಗದು, ನಮ್ಮ ಬ್ಯಾಂಕ್‌ಗೆ ಅನ್ಯಾಯವಾಗುವಾಗ ಕರಾವಳಿಯವರೇ ಆಗಿರುವ ಸಚಿವ ಡಿ.ವಿ.ಸದಾನಂದ ಗೌಡ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಈ ಭಾಗದ ಶಾಸಕರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ವಿಲೀನ ವಿರುದ್ಧ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ, ಆದರೆ ಸಂಸದರು ಏನು ಮಾಡುತ್ತಿದ್ದಾರೆ? ಅವರು ಲೋಕಸಭೆಯಲ್ಲಿ ಮಾತನಾಡದಿದ್ದರೆ ನಾಲಾಯಕ್, ಅವರ ಕೈಕಾಲು ಎಳೆಯುತ್ತೇವೆ, ಬಟ್ಟೆ ಹರಿಯುತ್ತೇವೆ ಎಂದರು.
ಇದೇ ಸಂದರ್ಭ ಅಖಿಲ ಭಾರತ ವಿಜಯ ಬ್ಯಾಂಕ್ ಅಧಿಕಾರಿಗಳ ಸಂಘದ ಮಂಗಳೂರು ವಿಭಾಗದ ಅಧ್ಯಕ್ಷ ಸುರೇಂದ್ರ ಸತ್ಯಾಗ್ರಹ ನಿರತ ಐವನ್‌ರನ್ನು ಅಭಿನಂದಿಸಿದರು.
ಮಂಗಳೂರು ಉಪಮೇಯರ್ ಕೆ.ಮಹಮ್ಮದ್, ಕಾರ್ಪೊರೇಟರ್‌ಗಳಾದ ಅಶೋಕ್ ಕುಮಾರ್ ಡಿ.ಕೆ, ಎಂ.ಶಶಿಧರ ಹೆಗ್ಡೆ ಮುಂತಾದವರು ಭಾಗವಹಿಸಿದ್ದರು.
ಹರಿಕೃಷ್ಣ ಬಂಟ್ವಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ: ಸೇಂಟ್ ಅಲೋಶಿಯಸ್ ಕಾಲೇಜು ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರಿಡುವ ಬಗ್ಗೆ ಸರ್ಕಾರದ ಆದೇಶವಾಗಿದ್ದರೂ ನಾನು ತಡೆಯಾಜ್ಞೆ ತಂದಿದ್ದೆ ಎಂಬ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಹೇಳಿಕೆ ಸುಳ್ಳು. ಇದಕ್ಕಾಗಿ ಅವರು ಕ್ಷಮೆ ಕೇಳಬೇಕು ಇಲ್ಲವಾದಲ್ಲಿ, ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಐವನ್ ಡಿಸೋಜ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಡಿಗ್ರೀಸ್: ವಿಧಗಳು, ಶಿಕ್ಷಣ ಮತ್ತು ವೃತ್ತಿ ಆಯ್ಕೆಗಳು
ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಪದವಿ ಆಯ್ಕೆಗಳು
ಸಾಮಾಜಿಕ ಮಾಧ್ಯಮ ಶಿಕ್ಷಣದ ಬಗ್ಗೆ ನೀವು ತಿಳಿಯಬೇಕಾದದ್ದು
ಸಾಮಾಜಿಕ ಮಾಧ್ಯಮ ಪದವಿ ಎಂದರೇನು?
ಶತಮಾನದ ತಿರುವಿನಲ್ಲಿ, ಸಾಮಾಜಿಕ ಮಾಧ್ಯಮ ಪದವಿಯೇನೂ ಇಲ್ಲ, ಆದರೆ ಸಮಯ ಬದಲಾಗಿದೆ. ಸೋಶಿಯಲ್ ಮಾಧ್ಯಮವನ್ನು ತಮ್ಮ ಕಾರ್ಯತಂತ್ರದ ಮಾರುಕಟ್ಟೆ ಯೋಜನೆಯ ಭಾಗವಾಗಿ ಬಳಸುತ್ತಿರುವ ಉದ್ಯಮಗಳ ಸಂಖ್ಯೆಯಿಂದಾಗಿ ಸಾಮಾಜಿಕ ಮಾಧ್ಯಮದ ಕೌಶಲಗಳೊಂದಿಗೆ ನೌಕರರಿಗೆ ಬೇಡಿಕೆ ಹೆಚ್ಚಿದೆ.
ಅನೇಕ ಸಾಮಾಜಿಕ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಸಾಮಾಜಿಕ ಮಾಧ್ಯಮ ಪದವಿ ಕಾರ್ಯಕ್ರಮಗಳನ್ನು ರಚಿಸುವ ಮೂಲಕ ಈ ಬೇಡಿಕೆಯನ್ನು ಉತ್ತರಿಸಿದ್ದಾರೆ. ಇದು ಸಾಮಾಜಿಕ ಮತ್ತು ಸಾಮಾಜಿಕ ಮಾಧ್ಯಮದ ವಿವಿಧ ರೀತಿಯ ಬಳಕೆಯಲ್ಲಿ ವಿದ್ಯಾರ್ಥಿಗಳಿಗೆ ಸೂಚಿಸಲು ವಿನ್ಯಾಸಗೊಳಿಸಲಾಗಿದೆ - ಫೇಸ್ಬುಕ್ ಮತ್ತು ಟ್ವಿಟರ್ನಿಂದ Instagram ಮತ್ತು Pinterest ಗೆ.
ಈ ಕಾರ್ಯಕ್ರಮಗಳು ಸಾಮಾಜಿಕ ಮಾಧ್ಯಮ ಸೈಟ್ಗಳ ಮೂಲಕ ಸಂವಹನ, ಜಾಲ ಮತ್ತು ಮಾರುಕಟ್ಟೆಗೆ ಹೇಗೆ ಸಂಪರ್ಕಿಸಬೇಕು ಎಂಬುದರ ಬಗ್ಗೆ ಗಮನ ಹರಿಸುತ್ತದೆ.
ಸಾಮಾಜಿಕ ಮಾಧ್ಯಮ ಡಿಗ್ರೀಸ್ ವಿಧಗಳು
ಔಪಚಾರಿಕ ಸಾಮಾಜಿಕ ಮಾಧ್ಯಮ ಶಿಕ್ಷಣ ಅನೇಕ ರೂಪಗಳನ್ನು ತೆಗೆದುಕೊಳ್ಳುತ್ತದೆ - ಪರಿಚಯಾತ್ಮಕ ಪ್ರಮಾಣಪತ್ರ ಕಾರ್ಯಕ್ರಮಗಳಿಂದ ಸುಧಾರಿತ ಪದವಿ ಕಾರ್ಯಕ್ರಮಗಳು ಮತ್ತು ಎಲ್ಲದರ ನಡುವೆ. ಸಾಮಾನ್ಯ ಪದವಿಗಳು:
ಸೋಷಿಯಲ್ ಮೀಡಿಯಾದಲ್ಲಿ ಬ್ಯಾಚಲರ್ ಪದವಿ - ಇದು ಸಾಮಾನ್ಯವಾಗಿ ನಾಲ್ಕು ವರ್ಷಗಳ ಪದವಿಯಾಗಿದೆ, ಆದರೂ ಕೆಲವು ವರ್ಷಗಳಲ್ಲಿ ಮೂರು ವರ್ಷಗಳ ಕಾರ್ಯಕ್ರಮಗಳು ಲಭ್ಯವಿರಬಹುದು. ಈ ಅಧ್ಯಯನದ ಕ್ಷೇತ್ರದಲ್ಲಿ ಹೆಚ್ಚಿನ ಸ್ನಾತಕೋತ್ತರ ಪದವಿಗಳು ಗಣಿತ, ಇಂಗ್ಲಿಷ್ ಮತ್ತು ಸಾಮಾಜಿಕ ಮಾಧ್ಯಮ, ಡಿಜಿಟಲ್ ತಂತ್ರ ಮತ್ತು ಅಂತರ್ಜಾಲ ಮಾರ್ಕೆಟಿಂಗ್ನಲ್ಲಿ ವಿಶೇಷ ಶಿಕ್ಷಣ ಹೊಂದಿರುವ ಕೋರ್ ಕೋರ್ಸುಗಳನ್ನು ಒಳಗೊಂಡಿರುತ್ತವೆ.
ಸಾಮಾಜಿಕ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ - ಸಾಮಾಜಿಕ ಮಾಧ್ಯಮದಲ್ಲಿ ವಿಶೇಷ ಸ್ನಾತಕೋತ್ತರ ಪದವಿಯನ್ನು ಸಾಮಾನ್ಯವಾಗಿ ಪದವಿ ಅಥವಾ ಸಮಾನ ಪದವಿಯನ್ನು ಪಡೆದ ನಂತರ ಎರಡು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಗಳಿಸಬಹುದು. ಈ ಕಾರ್ಯಕ್ರಮಗಳು ಕೆಲವು ಸಾಮಾನ್ಯ ವ್ಯವಹಾರ ಅಥವಾ ಮಾರುಕಟ್ಟೆ ಶಿಕ್ಷಣಗಳನ್ನು ಹೊಂದಿದ್ದರೂ ಸಹ, ಪಠ್ಯಕ್ರಮವು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಕಾರ್ಯತಂತ್ರದ ಮುಂದುವರಿದ ಅಧ್ಯಯನದಲ್ಲಿ ಹೆಚ್ಚು ಗಮನಹರಿಸುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ MBA - ಸಾಮಾಜಿಕ ಮಾಧ್ಯಮದಲ್ಲಿ MBA ಈ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹೋಲುತ್ತದೆ. ಮುಖ್ಯ ವ್ಯತ್ಯಾಸವೆಂದರೆ MBA ಶಿಕ್ಷಣವು ಹೆಚ್ಚು ದುಬಾರಿಯಾಗಿದ್ದು, ಸ್ವಲ್ಪ ಹೆಚ್ಚು ಕಠಿಣವಾಗಿದೆ, ಮತ್ತು ಕೆಲವು ಕೈಗಾರಿಕೆಗಳಲ್ಲಿ, ಸಾಮಾನ್ಯ ಸ್ನಾತಕೋತ್ತರ ಪದವಿಗಿಂತ ಹೆಚ್ಚು ಗೌರವಾನ್ವಿತವಾಗಿದೆ.
ನೀವು ಸಾಮಾಜಿಕ ಮಾಧ್ಯಮ ಪದವಿ ಏಕೆ ಪಡೆಯಬೇಕು
ಉನ್ನತ ಗುಣಮಟ್ಟದ ಸಾಮಾಜಿಕ ಮಾಧ್ಯಮ ಪದವಿ ಪ್ರೋಗ್ರಾಂ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ಮೂಲಭೂತ ಬಗ್ಗೆ ಮಾತ್ರ ನಿಮಗೆ ಬೋಧಿಸುವುದಿಲ್ಲ, ಆದರೆ ಡಿಜಿಟಲ್ ತಂತ್ರವನ್ನು ಅರ್ಥಮಾಡಿಕೊಳ್ಳುವುದು ಮತ್ತು ವ್ಯಕ್ತಿಯು, ಉತ್ಪನ್ನ, ಸೇವೆ ಅಥವಾ ಕಂಪನಿಯ ಬ್ರ್ಯಾಂಡಿಂಗ್ಗೆ ಅದು ಹೇಗೆ ಅನ್ವಯಿಸುತ್ತದೆ ಎಂಬುದನ್ನು ಸಹ ನಿಮಗೆ ತಿಳಿಸುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಪಾಲ್ಗೊಳ್ಳುವವರು ತಮಾಷೆಯ ಬೆಕ್ಕು ವೀಡಿಯೊವನ್ನು ಹಂಚಿಕೊಳ್ಳುವುದಕ್ಕಿಂತ ಹೆಚ್ಚಾಗಿರುವುದನ್ನು ನೀವು ತಿಳಿಯುವಿರಿ. ಪೋಸ್ಟ್ಗಳು ವೈರಲ್ಗೆ ಹೇಗೆ ಹೋಗುತ್ತದೆ, ವ್ಯವಹಾರ ಗ್ರಾಹಕರೊಂದಿಗೆ ಹೇಗೆ ಸಂವಹನ ಮಾಡುವುದು ಮತ್ತು ಯಾವುದನ್ನಾದರೂ ಪೋಸ್ಟ್ ಮಾಡುವುದಕ್ಕಿಂತ ಮೊದಲು ಎರಡು ಬಾರಿ ಆಲೋಚಿಸುವುದಕ್ಕಿಂತ ಹೆಚ್ಚು ಮುಖ್ಯವಾದದ್ದು ಏಕೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳುವಿರಿ. ನೀವು ಮಾರ್ಕೆಟಿಂಗ್, ನಿರ್ದಿಷ್ಟ ಇಂಟರ್ನೆಟ್ ಮಾರ್ಕೆಟಿಂಗ್ನಲ್ಲಿ ಆಸಕ್ತಿ ಹೊಂದಿದ್ದರೆ, ಸಾಮಾಜಿಕ ಮಾರುಕಟ್ಟೆಯ ಪದವಿ ನಿಮಗೆ ಉದ್ಯೋಗ ಮಾರುಕಟ್ಟೆಯಲ್ಲಿನ ಇತರ ಸ್ಪರ್ಧಿಗಳ ಮೇಲೆ ಅಗತ್ಯವಿರುವ ಅಂಚನ್ನು ನೀಡುತ್ತದೆ.
ನೀವು ಸಾಮಾಜಿಕ ಮಾಧ್ಯಮ ಪದವಿ ಪಡೆದುಕೊಳ್ಳಬಾರದು ಏಕೆ
ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸುವುದು ಅಥವಾ ಸಾಮಾಜಿಕ ಮಾಧ್ಯಮ ಅಥವಾ ಡಿಜಿಟಲ್ ಮಾರ್ಕೆಟಿಂಗ್ನಲ್ಲಿ ವೃತ್ತಿಜೀವನವನ್ನು ಹೇಗೆ ಪಡೆಯುವುದು ಎಂದು ತಿಳಿಯಲು ಸಾಮಾಜಿಕ ಮಾಧ್ಯಮ ಪದವಿಯನ್ನು ನೀವು ಸಂಪಾದಿಸಬೇಕಾಗಿಲ್ಲ. ವಾಸ್ತವವಾಗಿ, ಕ್ಷೇತ್ರದಲ್ಲಿ ಹಲವು ತಜ್ಞರು ಔಪಚಾರಿಕ ಪದವಿ ಕಾರ್ಯಕ್ರಮಗಳನ್ನು ತಪ್ಪಿಸಲು ಶಿಫಾರಸು ಮಾಡುತ್ತಾರೆ. ಕಾರಣಗಳು ಬದಲಾಗುತ್ತವೆ, ಆದರೆ ಒಂದು ಸಾಮಾನ್ಯ ವಾದವೆಂದರೆ ಸಾಮಾಜಿಕ ಮಾಧ್ಯಮ ನಿರಂತರವಾಗಿ ವಿಕಸನಗೊಳ್ಳುತ್ತಿದೆ. ನೀವು ಒಂದು ಪದವಿ ಕಾರ್ಯಕ್ರಮವನ್ನು ಪೂರ್ಣಗೊಳಿಸುವ ಹೊತ್ತಿಗೆ, ಪ್ರವೃತ್ತಿಗಳು ಬದಲಾಗುತ್ತವೆ ಮತ್ತು ಹೊಸ ಸಾಮಾಜಿಕ ಮಾಧ್ಯಮಗಳು ಭೂದೃಶ್ಯವನ್ನು ಮೇಲುಗೈ ಮಾಡಬಹುದು.
ಕೆಲವು ಶಾಲೆಗಳು ಈ ವಾದವನ್ನು ತಮ್ಮ ಡಿಗ್ರಿ ಕಾರ್ಯಕ್ರಮಗಳು ಸ್ಥಿರವಾದ ಸ್ಥಿತಿಯಲ್ಲಿವೆ ಮತ್ತು ಸಾಮಾಜಿಕ ಮಾಧ್ಯಮ ಪ್ರವೃತ್ತಿಯೊಂದಿಗೆ ನೈಜ ಸಮಯದಲ್ಲಿ ವಿಕಸನಗೊಳ್ಳುತ್ತವೆ ಎಂಬ ಭರವಸೆಯೊಂದಿಗೆ ವಜಾ ಮಾಡಿದೆ. ನೀವು ದೀರ್ಘಾವಧಿಯ ಸಾಮಾಜಿಕ ಮಾಧ್ಯಮ ಪದವಿ ಅಥವಾ ಪ್ರಮಾಣಪತ್ರ ಪ್ರೋಗ್ರಾಂನಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದಲ್ಲಿ, ಡಿಜಿಟಲ್ ಸಂವಹನ ಮತ್ತು ಮಾರ್ಕೆಟಿಂಗ್ನಲ್ಲಿ ಬದಲಾವಣೆಗಳೊಂದಿಗೆ ಮುಂದುವರಿಯಲು ಪ್ರೋಗ್ರಾಂ ವಿನ್ಯಾಸಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
ಇತರೆ ಸಾಮಾಜಿಕ ಮಾಧ್ಯಮ ಶಿಕ್ಷಣ ಆಯ್ಕೆಗಳು
ದೀರ್ಘಕಾಲದ ಪದವಿ ಪ್ರೋಗ್ರಾಂ ನಿಮ್ಮ ಏಕೈಕ ಸಾಮಾಜಿಕ ಮಾಧ್ಯಮ ಶಿಕ್ಷಣ ಆಯ್ಕೆಯಾಗಿಲ್ಲ. ಪ್ರತಿಯೊಂದು ಪ್ರಮುಖ ನಗರದಲ್ಲಿ ನೀವು ಒಂದು ದಿನ ಮತ್ತು ಎರಡು ದಿನ ಸಾಮಾಜಿಕ ಮಾಧ್ಯಮ ವಿಚಾರಗೋಷ್ಠಿಯನ್ನು ಕಾಣಬಹುದು. ಕೆಲವರು ಗಮನದಲ್ಲಿ ವಿಶಾಲವಾಗಿರುತ್ತಾರೆ, ಆದರೆ ಇತರರು ಹೆಚ್ಚು ಗುರಿಯಾಗುತ್ತಾರೆ, ಸಾಮಾಜಿಕ ಮಾಧ್ಯಮ ವಿಶ್ಲೇಷಣೆ ಅಥವಾ ಸಮಾಜ ಮಾಧ್ಯಮವನ್ನು ಚಾಲನೆ ಮಾಡುವ ಮಾನಸಿಕ ಅಂಶಗಳಂತಹ ವಿಷಯಗಳನ್ನು ಕೇಂದ್ರೀಕರಿಸುತ್ತಾರೆ.
ಸಾಮಾಜಿಕ ಮಾಧ್ಯಮ ತಜ್ಞರು ಮತ್ತು ಉತ್ಸಾಹಿಗಳನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಲು ಹಲವಾರು ಪ್ರಸಿದ್ಧ ಸಮಾವೇಶಗಳು ಇವೆ. ವರ್ಷಗಳವರೆಗೆ, ಅತಿ ದೊಡ್ಡ ಮತ್ತು ಅತ್ಯಂತ ಪಾಲ್ಗೊಂಡ ಸಮಾವೇಶವು ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ವರ್ಲ್ಡ್ ಆಗಿದೆ, ಇದು ಕಾರ್ಯಾಗಾರಗಳು ಮತ್ತು ನೆಟ್ವರ್ಕಿಂಗ್ ಅವಕಾಶಗಳನ್ನು ಒದಗಿಸುತ್ತದೆ.
ಯಾವುದೇ ಹಣವನ್ನು ಖರ್ಚು ಮಾಡದೆಯೇ ನೀವು ಸಾಮಾಜಿಕ ಮಾಧ್ಯಮ ಗುರುವಾಗಲು ಬಯಸಿದರೆ, ಆ ಆಯ್ಕೆಯೂ ನಿಮಗೆ ಲಭ್ಯವಿರುತ್ತದೆ. ಏನು ನಿಮ್ಮ ಸಾಮರ್ಥ್ಯದೊಂದಿಗೆ ಪರಿಪೂರ್ಣತೆಯನ್ನು ಸಾಧಿಸುವ ಅತ್ಯುತ್ತಮ ಮಾರ್ಗವೆಂದರೆ ಅಭ್ಯಾಸದೊಂದಿಗೆ. ನಿಮ್ಮ ಸ್ವಂತ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಅಧ್ಯಯನ ಮಾಡುವ ಸಮಯವನ್ನು ಮತ್ತು ಹೆಚ್ಚು ಮುಖ್ಯವಾಗಿ ನಿಮ್ಮ ಮನೆಯ ಕಂಪ್ಯೂಟರ್ನಿಂದ ನಿಮ್ಮ ವೃತ್ತಿಗೆ ವರ್ಗಾವಣೆ ಮಾಡುವಂತಹ ಅನ್ವಯವಾಗುವ ಕೌಶಲಗಳನ್ನು ನೀಡುತ್ತದೆ.
ಪ್ರವೃತ್ತಿಗಳು ಮತ್ತು ಉದಯೋನ್ಮುಖ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ಪಕ್ಕದಲ್ಲಿ ಉಳಿಯಲು ಈ ವಿಧದ ತಲ್ಲೀನಗೊಳಿಸುವ ಪರಿಸರವು ನಿಮಗೆ ಸಹಾಯ ಮಾಡುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಉದ್ಯೋಗಾವಕಾಶಗಳು
ಸಾಮಾಜಿಕ ಮಾಧ್ಯಮ ಪದವಿ, ಪ್ರಮಾಣಪತ್ರ, ಅಥವಾ ವಿಶೇಷ ಕೌಶಲಗಳನ್ನು ಹೊಂದಿರುವ ಜನರು ಮಾರ್ಕೆಟಿಂಗ್, ಸಾರ್ವಜನಿಕ ಸಂಬಂಧಗಳು, ಡಿಜಿಟಲ್ ಸಂವಹನ, ಡಿಜಿಟಲ್ ತಂತ್ರ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ. ಜಾಬ್ ಶೀರ್ಷಿಕೆಗಳು ಕಂಪನಿ, ಶಿಕ್ಷಣದ ಮಟ್ಟ ಮತ್ತು ಅನುಭವದ ಮಟ್ಟದಿಂದ ಬದಲಾಗಬಹುದು. ಕೆಲವು ಸಾಮಾನ್ಯ ಕೆಲಸದ ಶೀರ್ಷಿಕೆಗಳು ಸೇರಿವೆ:
ಕಾಶ್ಮೀರ ಸಮಸ್ಯೆ ನಿವಾರಣೆಗಾಗಿ ಮಧ್ಯಸ್ಥಿಕೆ ವಹಿಸಲು ಸಿದ್ಧ: ಟ್ರಂಪ್‌ | Udayavani – ಉದಯವಾಣಿ
Sunday, 16 May 2021 | UPDATED: 03:19 PM IST
ಕಾಶ್ಮೀರ ಸಮಸ್ಯೆ ನಿವಾರಣೆಗಾಗಿ ಮಧ್ಯಸ್ಥಿಕೆ ವಹಿಸಲು ಸಿದ್ಧ: ಟ್ರಂಪ್‌
ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನದ ನಡುವಿನ ದಶಕಗಳಷ್ಟು ಹಳೆಯದಾದ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವಲ್ಲಿ, ಎರಡೂ ದೇಶಗಳು ಒಪ್ಪಿದರೆ ತಾವು ಮಧ್ಯಸ್ಥಿಕೆಗೆ ವಹಿಸಲು ಸಿದ್ಧ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ಗೆ ತಿಳಿಸಿದ್ದಾರೆ.
ಸದ್ಯಕ್ಕೆ ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು 'ಶ್ವೇತಭವನ'ದಲ್ಲಿ ಭೇಟಿಯಾದ ವೇಳೆ ಟ್ರಂಪ್‌, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ತಮ್ಮನ್ನು ಭೇಟಿ ಮಾಡಿದ್ದಾಗ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಕೋರಿದ್ದಾಗಿ ಟ್ರಂಪ್‌, ಖಾನ್‌ ಅವರಿಗೆ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಖಾನ್‌, ನೀವು ಮಧ್ಯಸ್ಥಿಕೆ ವಹಿಸಿದಲ್ಲಿ ಕಣಿವೆ ರಾಜ್ಯದ ಲಕ್ಷಾಂತರ ಮಂದಿಯ ಹಾರೈಕೆ ನಿಮ್ಮ ಬೆನ್ನಿಗಿರಲಿದೆ ಎಂದು ಹೇಳಿದ್ದಾರೆ.
ವಿವಾದಕ್ಕೀಡಾದ ಹೇಳಿಕೆ: ಮೋದಿಯವರ ಬಗ್ಗೆ ಟ್ರಂಪ್‌ ನೀಡಿರುವ ಹೇಳಿಕೆ ಭಾರತದಲ್ಲಿ ವಿವಾದಕ್ಕೀಡಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲ, ಮೋದಿಯವರು ನಿಜಕ್ಕೂ ಹೀಗೊಂದು ಆಮಂತ್ರಣ ನೀಡಿದ್ದರೆ, ಅದು ಭಾರತದ ಹಿತಾಸಕ್ತಿಗೆ ಮಾರಕವಾಗಲಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್‌ ನಾಯಕ ಒಮರ್‌ ಅಬ್ದುಲ್ಲಾ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಈ ಕುರಿತಂತೆ ಸರ್ಕಾರದ ಸ್ಪಷ್ಟನೆ ಕೋರಿದ್ದಾರೆ.
ಸ್ಪಷ್ಟನೆ ನೀಡಿದ ರವೀಶ್‌: ಟ್ರಂಪ್‌ ಹೇಳಿಕೆ ವಿವಾದವಾಗಿ ಮಾರ್ಪಡುತ್ತಲೇ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌, 'ಕಾಶ್ಮೀರ ಸಮಸ್ಯೆಯನ್ನು ಭಾರತವು ದ್ವಿಪಕ್ಷೀಯ ನೆಲೆಯಲ್ಲೇ ಬಗೆಹರಿಸಲು ಇಚ್ಛಿಸುತ್ತದೆ. ತನ್ನ ನಿಲುವಿಗೆ ಭಾರತ ಎಂದಿಗೂ ಬದ್ಧವಾಗಿರಲಿದೆ. ಪ್ರಧಾನಿ ಮೋದಿಯವರು ಈ ಹಿಂದೆ ಎಲ್ಲೂ ಟ್ರಂಪ್‌ ಅವರ ಮಧ್ಯಸ್ಥಿಕೆಗಾಗಿ ಕೋರಿಲ್ಲ. ಭಯೋತ್ಪಾದನೆ ನಿಲ್ಲಿಸಿದರಷ್ಟೇ ಪಾಕಿಸ್ತಾನದ ಜತೆಗೆ ಭಾರತ ಮಾತುಕತೆಗೆ ಸಿದ್ಧ' ಎಂದು ಹೇಳಿದ್ದಾರೆ.
ಏಪ್ರಿಲ್ 1ರಂದು ಪುನೀತ್ ಅಭಿನಯದ 'ಯುವರತ್ನ' ಚಿತ್ರ ರಿಲೀಸ್ – Public TV
ಬೆಂಗಳೂರು: ಹಾಡುಗಳಿಂದ ಭಾರೀ ಸದ್ದು ಮಾಡಿರುವ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಯುವರತ್ನ ಚಿತ್ರ ತೆರೆ ಮೇಲೆ ಬರಲು ಸಿದ್ಧವಾಗಿದೆ.
ಹೌದು. ಏಪ್ರಿಲ್ ಒಂದರಂದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಕೊರೊನಾ ಲಾಕ್‍ಡೌನ್ ನಿಂದಾಗಿ ಲಾಕ್ ಆಗಿದ್ದ ಯುವರತ್ನ ಚಿತ್ರಕ್ಕೆ ಇದೀಗ ಬಿಡುಗಡೆ ಭಾಗ್ಯ ಬಂದಿರುವುದು ಪುನೀತ್ ಅಭಿಮಾನಿಗಳಲ್ಲಿ ಸಂತಸ ತಂದಿದೆ. 2018ರಲ್ಲಿ ಚಿತ್ರ ಸೆಟ್ಟೇರಿತ್ತು. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ 2019ರ ಏಪ್ರಿಲ್ 24 ರಾಜ್‍ಕುಮಾರ್ ಹುಟ್ಟುಹಬ್ಬದಂದು ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿತ್ತು. ಆದರೆ ಮಹಾಮಾರಿ ಕೊರೊನಾದಿಂದಾಗಿ ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು.
Here we Go….A Big Dream of Mine with @PuneethRajkumar @VKiragandur @hombalefilms @MusicThaman @Karthik1423 & Team #Yuvarathnaa Hitting the Big screens with A Bang🔥🔥🔥 You will be Entertained in a Big way❤️ Thank you for the trust in Us 🙏#Yuvarathnaa will be A Feast😍 pic.twitter.com/y5nnt3hdyo
— Santhosh Ananddram (@SanthoshAnand15) January 1, 2021
ಇದೀಗ ಚಿತ್ರತಂಡ ಬಾಕಿ ಉಳಿದಿದ್ದ 2 ಹಾಡುಗಳನ್ನು ಮುಗಿಸಿಕೊಂಡು ಪೋಸ್ಟ್ ಪ್ರೊಡೆಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ಇದು ಮುಗಿದ ತಕ್ಷಣ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಪ್ರಚಾರವನ್ನು ಮುಗಿಸಿಕೊಂಡು ಏಪ್ರಿಲ್‍ನಲ್ಲಿ ಬಿಗ್‍ಸ್ಕ್ರೀನ್‍ನಲ್ಲಿ ತೋರಿಸಲು ಚಿತ್ರತಂಡ ತಯಾರಿ ಮಾಡುತ್ತಿದೆ.
#Yuvarathnaa in theatres from 01-04-2021#YuvarathnaaReleaseDate@VKiragandur @SanthoshAnand15 @hombalefilms @MusicThaman @Karthik1423 @sayyeshaa @Dhananjayaka @diganthmanchale @KRG_Connects @divomovies @SMTollywood pic.twitter.com/B1UEBFAczz
ಈ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿರುವ ಸಂತೋಷ್ ಆನಂದರಾಮ್ ಕುತೂಹಲ ಮೂಡಿಸಿದ್ದಾರೆ. ಪುನೀತ್ ರಾಜ್‍ಕುಮಾರ್, ಧನಂಜಯ್, ಸಹೇಷಾ ಸೆಹ್ಗಲ್, ದಿಂಗತ್, ಸೋನು ಗೌಡ, ಮುಂತಾದ ಬಹು ತಾರಾ ಬಳಗವನ್ನು ಒಳಗೊಂಡಿದ್ದು, ಹೊಂಬಾಳೆ ಫೀಲ್ಮಂಸ್‍ ನಡಿ ನಿರ್ಮಾಣಗೊಂಡಿರುವುದು ಇನ್ನೊಂದು ವಿಶೇಷ.
Let's Celebrate #Yuvarathnaa on the Big screen only!!!
We are excited to announce the release date on April 1st, 2021.
#YuvarathnaaReleaseDate@Vkiragandur @PuneethRajkumar @SanthoshAnand15 @hombalefilms @MusicThaman @Karthik1423@Sayyeshaa @Dhananjayaka @diganthmanchale pic.twitter.com/JfCfCByeuT
— Hombale Films (@hombalefilms) January 1, 2021
Related Topics:bengaluruhombalePublic TVPuneeth Rajkumaryuvaratnaಪಬ್ಲಿಕ್ ಟಿವಿಪುನೀತ್ ರಾಜ್‍ಕುಮಾರ್ಬೆಂಗಳೂರುಯುವರತ್ನಹೊಂಬಾಳೆ
ಬೆನ್ ಸ್ಟೋಕ್ಸ್ ಆಟಕ್ಕೆ ಮುಂಬೈ ನಿರುತ್ತರ - Vishwavani Kannada Daily
Vishwavani Kannada Daily > ಕ್ರೀಡೆ > ಬೆನ್ ಸ್ಟೋಕ್ಸ್ ಆಟಕ್ಕೆ ಮುಂಬೈ ನಿರುತ್ತರ
ಅಬುದಾಬಿ: ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರೋಚಕ ಗೆಲು ವನ್ನು ಸಾಧಿಸಿದೆ. ಮುಂಬೈ ಇಂಡಿಯನ್ಸ್ ನಿಡಿದ್ದ 196 ರನ್‌ಗಳ ಬೃಹತ್ ಟಾರ್ಗೆಟನ್ನು ರಾಜಸ್ಥಾನ್ ಇನ್ನೂ 10 ಎಸೆತಗಳು ಬಾಕಿ ಯಿರುವಂತೆಯೇ ಗೆದ್ದು ಬೀಗಿದೆ. ಈ ಮೂಲಕ ಟೂರ್ನಿಯಲ್ಲಿ ತನ್ನ ಅಸ್ತಿತ್ವವನ್ನು ರಾಜಸ್ಥಾನ್ ಮತ್ತೆ ತೋರಿಸಿದೆ.
ಆಲ್ ರೌಂಡರ್ ಬೆನ್ ಸ್ಟೋಕ್ಸ್ (ಅಜೇಯ 107) ಹಾಗೂ ಸಂಜು ಸ್ಯಾಮ್ಸನ್ (ಅಜೇಯ 54) ಜೊತೆಯಾಟದ ನೆರವಿನಿಂದ ರಾಜಸ್ಥಾನ ರಾಯಲ್ಸ್ ಈ ಪಂದ್ಯವನ್ನು ಗೆದ್ದುಕೊಂಡಿತು.
ಮುಂಬೈ ನೀಡಿದ್ದ ಗುರಿ ಬೆನ್ನತ್ತಿದ ರಾಜಸ್ಥಾನ 18.2 ಓವರ್'ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 196 ರನ್ ಗುರಿ ತಲುಪಿದೆ. ರಾಜಸ್ಥಾನ ಪರ ಉತ್ತಪ್ಪ 13, ಬೆನ್ ಸ್ಟ್ರೋಕ್ಸ್ 107, ಸ್ಮಿತ್ 11 ಹಾಗೂ ಸಂಜು ಸ್ಯಾಮ್ನ್ಸನ್ ಅಜೇಯ 54 ರನ್ ಗಳಿಸಿದ್ದರು. ಮುಂಬೈ ಪರ ಜೇಮ್ಸ್ ಎರಡು ವಿಕೆಟ್ ಪಡೆದು ಮಿಂಚಿದ್ದಾರೆ.
ಇದಕ್ಕೆ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್'ಗೆ 195 ರನ್ ಗಳಿಸಿತ್ತು. ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಕ್ವಿಂಟನ್ ಡಿ'ಕಾಕ್ (6) ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮಂಕಾದರು. ಎರಡನೇ ವಿಕೆಟ್'ಗೆ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ ತಂಡಕ್ಕೆ 83 ರನ್ ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾದರು.
ಆಲ್'ರೌಂಡರ್ ಹಾರ್ದಿಕ್ ಪಾಂಡ್ಯ (60 ಅಜೇಯ) ಇವರ ಸ್ಫೋಟಕ ಬ್ಯಾಟಿಂಗ್ ನೆರವಿನ ಕಾರಣ ಮುಂಬೈ ಈ ಸವಾಲಿನ ಮೊತ್ತ ಪೇರಿಸುವಂತಾಗಿತ್ತು.
|2ಜಿ: ಸರಕಾರ, ಕಂಪನಿಗಳಿಗೆ ಸುಪ್ರೀಂ ಆದೇಶ - india - News in kannada, vijaykarnataka