text
stringlengths
0
61.5k
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-88110'); }); googletag.cmd.push(function() { googletag.display('gpt-text-700x20-ad2-88110'); }); },300); var x1 = $('#node-88110 .field-name-body .field-items div.field-item > p'); if(x1 != null && x1.length != 0) { $('#node-88110 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-88110').addClass('inartprocessed'); } else $('#in-article-88110').hide(); } else { _taboola.push({article:'auto', url:'https://www.prajavani.net/article/ಮಡಿಕೆಗಿಲ್ಲ-ಬೇಡಿಕೆ-ಸಂಕಷ್ಟದಲ್ಲಿ-ಕುಂಬಾರ'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-88110', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-88110'); }); googletag.cmd.push(function() { googletag.display('gpt-text-300x20-ad2-88110'); }); // Remove current Outbrain //$('#dk-art-outbrain-88110').remove(); //ad before trending $('#mob_rhs1_88110').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-88110 .field-name-body .field-items div.field-item > p'); if(x1 != null && x1.length != 0) { $('#node-88110 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-88110 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-88110'); }); } else { $('#in-article-mob-88110').hide(); $('#in-article-mob-3rd-88110').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-88110','#in-article-829867','#in-article-829841','#in-article-829834','#in-article-829831']; var twids = ['#twblock_88110','#twblock_829867','#twblock_829841','#twblock_829834','#twblock_829831']; var twdataids = ['#twdatablk_88110','#twdatablk_829867','#twdatablk_829841','#twdatablk_829834','#twdatablk_829831']; var obURLs = ['https://www.prajavani.net/article/ಮಡಿಕೆಗಿಲ್ಲ-ಬೇಡಿಕೆ-ಸಂಕಷ್ಟದಲ್ಲಿ-ಕುಂಬಾರ','https://www.prajavani.net/district/gadaga/badavane-829867.html','https://www.prajavani.net/district/gadaga/mango-829841.html','https://www.prajavani.net/district/gadaga/cc-patil-829834.html','https://www.prajavani.net/district/gadaga/cc-patil-829831.html']; var vuukleIds = ['#vuukle-comments-88110','#vuukle-comments-829867','#vuukle-comments-829841','#vuukle-comments-829834','#vuukle-comments-829831']; // var nids = [88110,829867,829841,829834,829831]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
10 ಆಸ್ಪತ್ರೆ ಸುತ್ತಿದ್ರು ಸಿಗ್ಲಿಲ್ಲ ಬೆಡ್ – ಅಂಬುಲೆನ್ಸ್‌ನಲ್ಲೇ ಒದ್ದಾಡಿ ಪ್ರಾಣ ಬಿಟ್ಟ ಮಹಿಳೆ – Public Tv
10 ಆಸ್ಪತ್ರೆ ಸುತ್ತಿದ್ರು ಸಿಗ್ಲಿಲ್ಲ ಬೆಡ್ – ಅಂಬುಲೆನ್ಸ್‌ನಲ್ಲೇ ಒದ್ದಾಡಿ ಪ್ರಾಣ ಬಿಟ್ಟ ಮಹಿಳೆ
10 ಆಸ್ಪತ್ರೆ ಸುತ್ತಿದ್ರು ಸಿಗ್ಲಿಲ್ಲ ಬೆಡ್ - ಅಂಬುಲೆನ್ಸ್‌ನಲ್ಲೇ ಒದ್ದಾಡಿ ಪ್ರಾಣ ಬಿಟ್ಟ ಮಹಿಳೆ
– ಮಗನ ಮುಂದಯೇ ಜೀವಬಿಟ್ಟ ತಾಯಿ
ಬೆಂಗಳೂರು: ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲದೇ ಸಾವನ್ನಪ್ಪುವವರು ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅಂತೆಯೇ ಇಂದು ರಾತ್ರಿಕೂಡ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಸಾವನ್ನಪ್ಪಿದ್ದಾರೆ.
ಸರ್ಕಾರ ಬೆಂಗಳೂರಿನಲ್ಲಿ ಸಾವಿರ ಬೆಡ್‍ಗಳು ಖಾಲಿ ಇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಇದೇ ಬೆಂಗಳೂರಿನಲ್ಲಿ ಒಂದು ಕಡೆ ಬೆಡ್ ಇಲ್ಲದೇ ಚಿಕಿತ್ಸೆ ಸಿಗದೆ ಜನರು ಸಾಯುತ್ತಿದ್ದಾರೆ. ಈಗ ಬೆಡ್ ಇಲ್ಲದೇ ಮಹಿಳೆಯೊಬ್ಬರು ಮಗನ ಮುಂದೆಯೇ ವಿಲವಿಲ ಒದ್ದಾಡಿ ಜೀವಬಿಟ್ಟಿದ್ದಾರೆ.
ವಾರದ ಹಿಂದೆಯೇ ಚೆನ್ನಾಗಿದ್ದ 42 ವರ್ಷದ ಮಹಿಳೆ, ಇತ್ತೀಚೆಗಷ್ಟೇ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆದರೆ ಮಹಿಳೆಯಲ್ಲಿ ದಿಢೀರ್ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ಮಗ ಹರಸಾಹಸಪಟ್ಟಿದ್ದಾನೆ. ನಂತರ ಕೆಸಿ ಜನೆರಲ್ ಆಸ್ಪತ್ರೆಗೆ ಸೇರಿಸಿದ್ದಾನೆ. ಆದರೆ ಅಲ್ಲಿ ಐಸಿಯೂ ವಾರ್ಡ್ ಖಾಲಿ ಇಲ್ಲದ ಕಾರಣ ಬೇರೆ ಆಸ್ಪತ್ರೆಗೆ ಹೋಗಬೇಕಾದ ಸಂದರ್ಭ ಬಂದಿದೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಮಹಿಳೆ ಮಗ, ನಮ್ಮ ಅಮ್ಮನಿಗೆ ಮುಂಚೆಯೇ ಶುಗರ್ ಇತ್ತು. ನಂತರ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಆಗ ಅವರನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದವು. ಅಲ್ಲಿ ಐಸಿಯೂ ಇಲ್ಲ. ನಿಮ್ಮ ತಾಯಿಗೆ ಆಕ್ಸಿಜನ್ ಅವಶ್ಯಕತೆ ಇದೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರು. ಆದರೆ ಅಂಬುಲೆನ್ಸ್‌ನಲ್ಲೇ ಇಡೀ ಬೆಂಗಳೂರಿನ ಎಲ್ಲ ಆಸ್ಪತ್ರೆಗೂ ಹೋದರು ಬೆಡ್ ಸಿಗದೇ, ಅಮ್ಮ ಅಂಬುಲೆನ್ಸ್‌ನಲ್ಲೇ ಸಾವನ್ನಪ್ಪಿದರು ಎಂದು ಹೇಳಿದ್ದಾರೆ.
Related Topics:ambulancebedbengaluruhospitalmotherPublic TVsonಅಂಬುಲೆನ್ಸ್ಆಸ್ಪತ್ರೆತಾಯಿಪಬ್ಲಿಕ್ ಟಿವಿಬೆಂಗಳೂರುಬೆಡ್ಮಂಗ
ಸೌದಿ ಅರೇಬಿಯಾ: ಶಾಂತಿಭಂಗಕ್ಕೆ ಯತ್ನಿಸಿದ್ದ 11 ರಾಜಕುಮಾರರ ಬಂಧನವನ್ನು ಖಚಿತಪಡಿಸಿದ ಅಟಾರ್ನಿ ಜನರಲ್ | Saudi Arabia confirms 11 princes arrested over protesting the kingdom's austerity measures | Kannadaprabha.com
ಸೌದಿ ಅರೇಬಿಯಾ: ಶಾಂತಿಭಂಗಕ್ಕೆ ಯತ್ನಿಸಿದ್ದ 11 ರಾಜಕುಮಾರರ ಬಂಧನವನ್ನು ಖಚಿತಪಡಿಸಿದ ಅಟಾರ್ನಿ ಜನರಲ್
Published: 07 Jan 2018 02:27 PM IST
ಸೌದಿ ರಾಜ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್
ರಿಯಾದ್: ಸೌದಿ ಅರೇಬಿಯಾ ಸರ್ಕಾರಾದ ಮಿತವ್ಯಯ ಕ್ರಮಗಳನ್ನು ಖಂಡಿಸಿ ಪ್ರತಿಭಟನೆ ನಡೆಸಲುರಿಯಾದ್ ನಲ್ಲಿನ ಅರಮನೆಯಲ್ಲಿ ಸೇರಿದ್ದ 11ರಾಜಕುಮಾರರನ್ನು ಬಂಧಿಸಿರುವ ವಿಚಾರವನ್ನು ಸೌದಿ ಅರೇಬಿಯಾದ ಅಟಾರ್ನಿ ಜನರಲ್ ಇಂದು ಸ್ಪಷ್ಟಪಡಿಸಿದ್ದಾರೆ.
ಸೌದಿ ರಾಜಕುಮಾರರ ಬಂಧನದ ವರದಿ ನಿನ್ನೆಯಷ್ಟೇ ಸೌದಿ ಮಾದ್ಯಮಗಳಲ್ಲಿ ಬಿತ್ತರವಾಗಿದ್ದು ಇಂದು ಸ್ವತಃ ಅಲ್ಲಿನ ಅಧಿಕಾರಿಗಳೇ ಖಚಿತಪಡಿಸಿದ್ದಾರೆ.
ಜಗತ್ತಿನ ಅತ್ಯಂತ ದೊಡ್ಡ ತೈಲ ರಫ್ತು ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಕಳೆದ ಕೆಲ ವರ್ಷಗಳಿಂದ ಜಾಗತಿಕ ತೈಲ ಬೆಲೆಯಲ್ಲಿನ ಕುಸಿತದಿಂದ ಎದುರಾಗುವ ಆರ್ಥಿಕ ಸಂಕಷ್ಟಗಳನ್ನು ತಪ್ಪಿಸಲು ಕೆಲವು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುತ್ತಲಿದೆ. ರಾಜಕುಟುಂಬ, ಪರಿವಾರದ ನೀರು ಹಾಗೂ ವಿದ್ಯುತ್ ಬಿಲ್ ಗಳನ್ನು ಸರ್ಕಾರ ಪಾವತಿಸುವುದನ್ನು ನಿಲ್ಲಿಸುವ ಕ್ರಮವೂ ಇದರಲ್ಲಿ ಸೇರಿದೆ. ಸರ್ಕಾರದ ಈ ಕ್ರಮ ವಿರೋಧಿಸಿ ರಾಜಕುಮಾರರು ಪ್ರತಿಭಟನೆಗೆ ಸಜ್ಜಾಗಿದ್ದರು. ಆಗ ಅವರುಗಳನ್ನು ಬಂಧಿಸಲಾಗಿದೆ ಎಂದು ಮಾದ್ಯಮವೊಂದು ವರದಿ ಮಾಡಿತ್ತು.
"ತಮ್ಮ ಬೇಡಿಕೆಗಳು ಕಾನೂನುಬದ್ದವಾಗಿಲ್ಲ ಎಂದ್ರೂ ಕೇಳದೆ ಅವರು ಪ್ರತಿಭಟನೆಯನ್ನು ಮುಂದುವರಿಸಿದ್ದರು. ಸಾರ್ವಜನಿಕ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತರಂದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಅವರ ಮೇಲೆ ಕಾನೂನಿನ ನಾನಾ ವಿಭಾಗಗಳಡಿಯಲ್ಲಿ ಪ್ರಕರಣ ದಾಖಲಾಗಿದೆ" ಅಟಾರ್ನಿ ಜನರಲ್ ಸೌದ್ ಅಲ್-ಮೊಜೆಬ್.
Topics : Saudi Arabia, princes arrest, attorney general Saud al-Mojeb, protest, ಸೌದಿ ಅರೇಬಿಯಾ, ರಾಜಕುಮಾರರ ಬಂಧನ, ಅಟಾರ್ನಿ ಜನರಲ್ ಸೌದ್ ಅಲ್-ಮೊಜೆಬ್, ಪ್ರತಿಭಟನೆ
ಮೃತ ಪತ್ನಿಯನ್ನ ಬದುಕಿಸ್ತೀನೆಂದು ನಾಯಿಮರಿ, ಹಾವುಗಳನ್ನ ತಿನ್ನುತ್ತಿದ್ದ ವೃದ್ಧ - Public TV
ಮೃತ ಪತ್ನಿಯನ್ನ ಬದುಕಿಸ್ತೀನೆಂದು ನಾಯಿಮರಿ, ಹಾವುಗಳನ್ನ ತಿನ್ನುತ್ತಿದ್ದ ವೃದ್ಧ
ಲಕ್ನೋ: ವೃದ್ಧ ವ್ಯಕ್ತಿಯೊಬ್ಬ ತನ್ನ ಮೃತ ಹೆಂಡತಿಯನ್ನ ಬುದುಕಿಸುತ್ತೀನಿ ಅಂತ ನಾಯಿಮರಿ ಹಾಗೂ ಹಾವುಗಳನ್ನ ತಿನ್ನುತ್ತಿದ್ದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ನಾಯಿ ಮತ್ತು ಹಾವನ್ನು ತಿನ್ನುತ್ತೇನೆಂದು ಹೇಳಿದ ವೃದ್ಧನಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಉತ್ತರಪ್ರದೇಶದ ಜಗದೀಶ್‍ಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿಕಾಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ನೌರಂಗಿ ಲಾಲ್ ಎಂಬ ಹೆಸರಿನ ಬಾಬಾ ಕೆಲ ಸಮಯದಿಂದ ಇಲ್ಲಿನ ಬೀದಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದ. ನಾಯಿಗಳನ್ನ ಬಲಿ ಕೊಟ್ಟು ಅದರ ಮಾಂಸವನ್ನ ತಿನ್ನುತ್ತಿದ್ದ. ಈ ರೀತಿ ಮಾಡೋದ್ರಿಂದ ನನಗೆ ಶಕ್ತಿ ಬರುತ್ತದೆ. ನಾನು ಹಾವುಗಳನ್ನೂ ಕೂಡ ತಿಂದಿದ್ದೇನೆ ಎಂದು ಆ ವ್ಯಕ್ತಿ ಹೇಳಿದ್ದಾನೆ. ಈವರೆಗೆ ಈತ ನಾಲ್ಕು ನಾಯಿಮರಿಗಳನ್ನ ತಿಂದಿದ್ದಾನೆ. ಗುಡಿಸಲಿನಲ್ಲಿ ನಾಯಿಮರಿಗಳನ್ನ ಸುಟ್ಟಿರುವುದು ಪತ್ತೆಯಾಗಿದೆ.
ವ್ಯಕ್ತಿಯ ಬಾಯಿಯಿಂದ ಈ ಮಾತುಗಳು ಹೊರಬರುತ್ತಿದ್ದಂತೆ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾರ್ವಜನಿಕರು ಬಾಬಾ ನ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ.
ಆರೋಪಿ ವ್ಯಕ್ತಿಯ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ. ಸದ್ಯ ಆತನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. ಪ್ರಕರಣದ ಸಂಬಂಧ ತಜ್ಞ ವೈದ್ಯರನ್ನ ಸಂಪರ್ಕಿಸಿದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಭವಿಷ್ಯನಿಧಿಯ ಮೇಲೆ ವರ್ತಮಾನದ ಕಣ್ಣೇಕೆ? | ನಿಲುಮೆ
ಏಪ್ರಿಲ್ 20, 2016
ಭವಿಷ್ಯನಿಧಿಯ ಮೇಲೆ ವರ್ತಮಾನದ ಕಣ್ಣೇಕೆ?
ನಿನ್ನೆ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ನೂತನ ಭವಿಷ್ಯ ನಿಧಿ ನೀತಿ ವಿರೋಧಿಸಿ ನಡೆದ ಪ್ರತಿಭಟನೆ ಮತ್ತದರ ಪರಿಣಾಮಗಳು ಇನ್ನೂ ನಮ್ಮಮುಂದೆಯೇ ಹೊಗೆಸೂಸುತ್ತ ನಿಂತಿವೆ. ಪ್ರತಿಭಟನೆಗೆ ಇಳಿದವರಲ್ಲಿ ಎಷ್ಟು ಜನಕ್ಕೆ ನೂತನ ಭವಿಷ್ಯ ನಿಧಿ(ಪಿಎಫ್) ನೀತಿ ಅಂದರೇನು, ಏನು ಬದಲಾವಣೆ ಆಗಿದೆ? ಅನ್ನೋದು ಹೋಗ್ಲಿ ಪಿಎಫ್ ಅಂದರೆ ಏನು ಅಂತಲೂ ಮಾಹಿತಿಯಿತ್ತೋ ಇಲ್ಲವೋ ಅನ್ನುವಷ್ಟು ಗೊಂದಲ ಶುರುವಾಗಿದೆ. ಪಿಎಫ್ ಯಾಕೆ ಬೇಕು? ಸರ್ಕಾರದ ನೀತಿಯೇನು ಮತ್ತದು ಹೇಗೆ ಬದಲಾಗ್ತಿದೆ ಅಂತಾ ನೋಡುವ ಪ್ರಯತ್ನವೇ ಈ ಲೇಖನ. ಇಲ್ಲಿರುವ ಎಲ್ಲಾ ಅಭಿಪ್ರಾಯ ನನ್ನದು ಮತ್ತು ನನ್ನದು ಮಾತ್ರ. ನಿಲುಮೆ ಇದನ್ನು ಬೆಂಬಲಿಸುತ್ತಿದೆಯೇ ಎಂಬುದು ಪ್ರಶ್ನೆಯೇ ಆಗಬಾರದು.
ಏನಿದು ಪಿಎಫ್?
ದೇಶ ಸ್ವತ್ರಂತ್ರವಾದ ದಿನಗಳಲ್ಲಿ, ಶ್ರಮಿಕ ಕಾರ್ಮಿಕರೇ ಹೆಚ್ಚಾಗಿದ ಭಾರತದ ಉದ್ಯೋಗೀ ಜನಸಂಖ್ಯೆಗೆ, ಉದ್ಯೋಗ ನಿಂತು ಹೋದಮೇಲೆ ಏನು? ಎಂಬ ಪ್ರಶ್ನೆಗೆ ಉತ್ತರಿಸಲು 1952ರಲ್ಲಿ ಸರ್ಕಾರ ಪಿಎಫ್ ಆಕ್ಟ್ ಅನ್ನು ಜಾರಿಗೆ ತಂದು, ಫ್ಯಾಕ್ಟರೀಸ್ ಆಕ್ಟ್ ಹಾಗೂ ಶಾಪ್ಸ್ ಅಂಡ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ ಅಡಿಯಲ್ಲಿ ನೋಂದಾಯಿತ ಎಲ್ಲಾ ಕಂಪನಿಗಳಿಗೆ ಅನ್ವಯವಾಗುವಂತೆ ಸೂಚಿಸಿತು. ಈ ಭವಿಷ್ಯ ನಿಧಿಯಲ್ಲಿ ಮೂಲಸಂಬಳದ (Basic Salary) ಶೇ.12 ರಷ್ಟು ಹಣವನ್ನು ಕಂಪೆನಿ ದೇಣಿಗೆ ನೀಡಿದರೆ, ಶೇ. 12 ರಷ್ಟು ಹಣವನ್ನು ಉದ್ಯೋಗಿ ದೇಣಿಗೆಯಾಗಿ ನೀಡುತ್ತಾನೆ. ಕಂಪೆನಿ ಹಾಕುವ ಶೇ.12ರಷ್ಟು ಹಣದಲ್ಲಿ ಶೇ.8.33ರಷ್ಟು ಹಣ ಪಿಂಚಣಿ ನಿಧಿಗೆ (Pension Fund) ಸೇರಿದರೆ ಶೇ. 3.67ರಷ್ಟು ಹಣ ಭವಿಷ್ಯ ನಿಧಿಗೆ (Superannuation) ಹೋಗುತ್ತದೆ. ಇವೆರಡು ನಿಧಿಗಳ ಒಟ್ಟು ಮೊತ್ತವೇ ಪ್ರಾವಿಡೆಂಡ್ ಫಂಡ್. ಇದರ ಮೇಲೆ ಸರ್ಕಾರ ಬಡ್ಡಿಗಳಿಸಿ, ಉದ್ಯೋಗಿಯ ನಿವೃತ್ತಿಯಂಚಿನಲ್ಲಿ ಬಡ್ಡಿ ಸಮೇತ ಹಿಂದಿರುಗಿಸುತ್ತದೆ. ಆನಂತರ ಖಾಸಗೀ ಉದ್ಯೋಗಗಳು ಹೆಚ್ಚಾದ ಮೇಲೆ, ಜನ ಒಂದೇ ಕಂಪನಿಗೆ ಜೀವನಪೂರ್ತಿ ಅಂಟಿಕೊಳ್ಳೋದನ್ನು ಬಿಟ್ಟರು. ಕೆಲಸ ಬದಲಾಯಿಸಿದಾಗಲೆಲ್ಲಾ ಪಿಎಫ್ ಅನ್ನು ಹಿಂಪಡೆಯುವುದು, ಅಥವಾ ಪಿಎಫ್ ಅನ್ನು ಅಲ್ಲೇ ಆ ಕಂಪನಿಯಲ್ಲೇ ಬಿಡುವುದು, ಅಥವಾ ಹೊಸಕಂಪನಿಯಲ್ಲಿ ತೆರೆದ ಹೊಸಾ ಪಿಎಫ್ ಅಕೌಂಟಿಗೆ ವರ್ಗಾಯಿಸುವ ನಿರ್ಧಾರ ಉದ್ಯೋಗಿಗೆ ಬಿಟ್ಟದ್ದು. ಹಿಂಪಡೆಯುವುದಾದರೆ ಸ್ವಲ್ಪ ತೆರಿಗೆ ಕಟ್ಟಬೇಕಾಗುತ್ತದೆ. Provident ಅಂದರೆ ದೂರದೃಷ್ಟಿಯುಳ್ಳ/ವಿವೇಕಿ ಅನ್ನೋ ಅರ್ಥವಿದೆ. ಅಲ್ಲಿಗೆ ಸರ್ಕಾರ ಇಂತದೊಂದು ನಿಧಿಯ ಮೂಲ ಉದ್ಧೇಶ ನಿಮಗೆ ಮನವರಿಕೆಯಾಗಿರಬೇಕು.
ಉದ್ಯೋಗಿಗೆ 60 ದಿನಗಳವರೆಗೆ ಕೆಲಸ ಇಲ್ಲದಿದ್ದರೆ ಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಪಡೆಯಲು ಈ ಹಿಂದೆ ಅವಕಾಶ ಇತ್ತು. ಹೊಸ ನಿಯಮಗಳ ಪ್ರಕಾರ ಇಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ಉದ್ಯೋಗಿಗೆ 58 ವರ್ಷ ವಯಸ್ಸಾಗುವವರೆಗೆ ತೆಗೆಯಲು ಅವಕಾಶ ಇಲ್ಲ. ಆದರೆ ಉದ್ಯೋಗಿಯು ತಾನು ನೀಡಿದ ದೇಣಿಗೆ ಮತ್ತು ಅದರ ಮೇಲಿನ ಬಡ್ಡಿಯನ್ನು 58 ವರ್ಷದ ಒಳಗಡೆ ತೆಗೆಯಲು ಅವಕಾಶ ನೀಡಲಾಗಿದೆ. ಕಂಪನಿಯ ದೇಣಿಗೆ ಹಾಗೂ ಅದರ ಮೇಲಿನ ಬಡ್ಡಿ ಖಾತೆಯಲ್ಲಿಯೇ ಉಳಿಯುತ್ತದೆ. ಅಂದರೆ 50% ತೆಗೆಯಲು ಅವಕಾಶ ಸದಾ ಇತ್ತು, ಈಗಲೂ ಇದೆ.
ಸರ್ಕಾರದ ಹೇಳುತ್ತಿರುವುದೇನೆಂದರೆ, ಪಿಂಚಣಿ ನಿಧಿ ಇರುವುದೇ ಉದ್ಯೋಗಿ ನಿವೃತ್ತಿಯ ನಂತರ ಪಿಂಚಣಿ ಪಡೆಯಲು. ಹೀಗಾಗಿ ಕಂಪೆನಿ ನೀಡುವ ದೇಣಿಗೆ ಹಣವನ್ನು ನಿವೃತ್ತಿಯ ನಂತರವೇ ಪಡೆದುಕೊಳ್ಳಬೇಕು. ನನ್ನ ಪ್ರಕಾರ ಈ ವಾದ ಸರಿ ಕೂಡಾ. ನಾವೆಷ್ಟೇ "ನನ್ನ ದುಡ್ಡನ್ನು ಹೆಂಗೆ ಸಂಭಾಳಿಸಬೇಕು ಅಂತಾ ನಮಗ್ಗೊತ್ತಿದೆ" ಅಂತಾ ಕೂಗಾಡಿದರೂ, ಸರ್ಕಾರ ಪ್ರಜೆಗಳ ಬಗ್ಗೆ ಆ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಪ್ರಜೆಗಳಿಗೆ ದಿನನಿತ್ಯದ ಜೀವನದಲ್ಲಿ ಹೇಗೆ ಸಾಧನಗಳನ್ನು ಒದಗಿಸುತ್ತದೆಯೋ, ನಿವೃತ್ತಿಯ ನಂತರವೂ ಎಲ್ಲಾ ಪ್ರಜೆಗಳು (ಕೆಲವೇ ವಾಣಿಜ್ಯ ಪಂಡಿತ ಪ್ರಜೆಗಳು ಮಾತ್ರವಲ್ಲ) ಕನಿಷ್ಟ ಗುಣಮಟ್ಟದ ಜೀವನವನ್ನು ಸಾಗಿಸಲು ಸಹಾಯ ಮಾಡುವುದು, ಅದಕ್ಕೆ ತಕ್ಕಂತೆ ನೀತಿನಿಯಮಗಳನ್ನ ರೂಪಿಸುವುದು ಸಹಾ ಸರ್ಕಾರದ ಕೆಲಸ. ಹದಿನೇಳು ವರ್ಷಗಳ ಕೆಳಗೆ ಮನೆಸಾಲ ನಿಯಮಗಳನ್ನು ಮರುರೂಪಿಸಿದ್ದರಿಂದಲೇ, ಇವತ್ತು ಭಾರತದ 53% ಜನ ತಮ್ಮ ಹೆಸರಲ್ಲಿ ಒಂದು ಸೂರುಕಟ್ಟಿಕೊಳ್ಳಲಿಕ್ಕಾಗಿದ್ದು. ಇಲ್ಲವಾದಲ್ಲಿ ಮನೆಮಾಲೀಕರ ಅಟ್ಟಹಾಸ ಎಂದಿಗೂ ಕೊನೆಗೊಳ್ಳುತ್ತಿರಲಿಲ್ಲ. ಎಲ್ಲಾ ನೀತಿನಿಯಮಗಳಲ್ಲಿ ನುಣುಚಿಕೊಳ್ಳುವ ದಾರಿ ಇದ್ದೇ ಇರುತ್ತದೆ. ಕೆಲವರು ನಾಲ್ಕು ಮನೆ ಕಟ್ಟಿದ್ದಾರೆ, ಇಂದಿಗೂ ಕೆಲವರು ಬಾಡಿಗೆ ಮನೆಯಲ್ಲೇ ಇದ್ದಾರೆ. ಆದರೆ ಸ್ವಂತದ್ದೊಂದು ಮನೆಕೊಳ್ಳಲು 1990ರಷ್ಟು ಇದ್ದ ರೆಡ್-ಟೇಪಿಸಂ ಈಗಿಲ್ಲ. ನಾವೆಲ್ಲರೂ ಆ ಸರ್ಕಾರಗಳಿಗೆ ಧನ್ಯವಾದ ಹೇಳಬೇಕು. ಇಲ್ಲಿ ಪಿಎಫ್ ವಿಚಾರದಲ್ಲಿಯೂ ಸರ್ಕಾರದ ನಿಯಮಗಳು ಸರಿಯಾಗಿಯೇ ಇವೆ ಎಂದು ನನ್ನ ಅಭಿಪ್ರಾಯ.
ಬರೇ ಭಾರತ ಮಾತ್ರವಲ್ಲ ಯೂರೋಪಿಯನ್ ದೇಶಗಳಲ್ಲಿಯೂ ಸಹ, ನಿಮ್ಮ ಸಂಬಳದ ಒಂದು ಭಾಗ ಸರ್ಕಾರ ನಿಮ್ಮ ನಿವೃತ್ತಿಯವರೆಗೂ ಜೋಪಾನವಾಗಿ ತೆಗೆದಿಟ್ಟು, ನಿವೃತ್ತಿಗೆ ಇನ್ನೇನು ಒಂದೆರಡು ವರ್ಷಗಳಿವೆ ಎಂದಾಗ ಕೊಡುತ್ತದೆ. ಆಸ್ಟ್ರೇಲಿಯದಲ್ಲಂತೂ ನಿವೃತ್ತಿಯಾದಮೇಲೂ ನಿಮಗೆ ಪೂರ್ತಿ ಇಡುಗಂಟನ್ನು ಕೊಡುವುದಿಲ್ಲ. ತಿಂಗಳಿಗೆ ಇಂತಿಷ್ಟು ಅಂತಾ ಸರ್ಕಾರವೇ ನಿಮ್ಮ ಅಕೌಟಿಗೆ ಹಾಕುತ್ತದೆ. ಅಮೇರಿಕಾದ 401K ನಿಯಮ ಕೂಡಾ ಹೀಗೆಯೇ ಇದೆ. ಆಯಾ ಸರ್ಕಾರಗಳು, ಪ್ರಜೆಗಳು ಸಾವಿರರೀತಿಯಲ್ಲಿ ದುಡ್ಡನ್ನು ಪೋಲು ಮಾಡದೇ ಮುಂದಿನ ದಿನಗಳಿಗೆ ಸಹಾಯವಾಗಲೀ ಎಂದು ಈ ನಿಯಮಗಳನ್ನು ಮಾಡಿವೆಯೇ ಹೊರತು, ತನ್ನ ಪ್ರಜೆಗಳು ಅವಿವೇಕಿಗಳು ಎಂಬ ಕಾರಣಕ್ಕಲ್ಲ.
ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಈ ನೀತಿ ಘೋಷಿಸಿದ ಕೆಲವೇದಿನಗಳಲ್ಲಿ ಅದನ್ನು ಸಡಿಲಿಸಿ, ಕಂಪೆನಿ ದೇಣಿಗೆ ನೀಡುವ ಶೇ.3.67ರಷ್ಟು ಹಣವನ್ನು ಮನೆ ನಿರ್ಮಾಣ, ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ಶಿಕ್ಷಣ, ಮದುವೆ ಕಾರ್ಯಕ್ರಮಗಳಿಗೆ ತೆಗೆಯಲು ಅನುಮತಿ ನೀಡಿದೆ.ಹಾಗೂ ಪಿಎಫ್ ಹಣ ಪಡೆಯಲು ಮಹಿಳೆಯರು ಕೆಲಸ ಬಿಟ್ಟು ಎರಡು ತಿಂಗಳು ಕಾಯುವ ಅಗತ್ಯ ಇಲ್ಲ. ಮದುವೆ, ಗರ್ಭಧಾರಣೆ ಅಥವಾ ಮಗು ಜನನದ ಕಾರಣಕ್ಕೆ ಮಹಿಳೆ ಕೆಲಸ ಬಿಟ್ಟಾಗ ತಕ್ಷಣವೇ ಪಿಎಫ್‍ನಲ್ಲಿರುವ ತಮ್ಮ ದೇಣಿಗೆ ಮತ್ತು ಅದರ ಮೇಲಿನ ಬಡ್ಡಿಯನ್ನು ಪಡೆದುಕೊಳ್ಳಬಹುದು. ಆದರೆ ಈ ನಿಯಮಗಳು ಅಗಸ್ಟ್ 1ಕ್ಕೆ ಜಾರಿಗೆ ಬರಲಿವೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಇಪಿಎಫ್ ಹಿಂಪಡೆಯುವ ವೇಳೆ ಶೇ.40ಕ್ಕೆ ತೆರಿಗೆ ವಿನಾಯಿತಿ. ಇನ್ನುಳಿದ ಶೇ.60ಕ್ಕೆ ತೆರಿಗೆ ನೀಡುವುದಾಗಿ ಪ್ರಕಟಿಸಿದ್ದರು.ಇದಕ್ಕೆ ಪ್ರತಿಪಕ್ಷಗಳಿಂದ ಮತ್ತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಸ್ತಾಪದಿಂದಲೂ ಹಿಂದಕ್ಕೆ ಸರಿದಿದೆ. ಇಷ್ಟೆಲ್ಲಾ ಆದ ನಂತರವೂ ನಿನ್ನೆ ನಡೆದ ಗಲಭೆ ಯಾವ ಕಾರಣಕ್ಕೆ, ನಡೆಸಿದ್ದು ಯಾರು ಎಂಬುದೊಂದೂ ತಿಳಿಯದೇ, ಸಿದ್ರಾಮಯ್ಯನವರ ಸಡಿಲ ಸರ್ಕಾರೀ ಆಡಳಿತದ ಮುಖಕ್ಕೆ ಕನ್ನಡಿ ಹಿಡಿದಂತೆ ಯಥಾಪ್ರಕಾರ ಬಸ್ಸು ಜೀಪುಗಳು ಆಹುತಿಯಾದವು. ಲಾಠಿ ಪ್ರಹಾರವೂ ನಡೆಯಿತು.
ಪಿಎಫ್ ಅನ್ನೋದು ದೂರದೃಷ್ಟಿಯ ನಿಧಿ ಅನ್ನೋದು ಸರ್ಕಾರದ ನೀತಿ. ಜನತೆ ಅದನ್ನ ಹೇಗೆ ಸ್ವೀಕರಿಸಿದ್ದಾರೆ ಅನ್ನೋದು ಇನ್ನೂ ಚರ್ಚೆಯ ವಿಷಯ. ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಇನ್ಸ್ಟಂಟ್ ಫಲ ಬೇಕು. ಯಾರಿಗೂ ಕಾಯುವ ತಾಳ್ಮೆಯಿಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ಬೋರ್ವೆಲ್ ಕೊರೆದು, ಈಗ ಹನಿನೀರಿಗೂ ತತ್ವಾರವಾಗಿವುದನ್ನು ನೆನೆಸಿಕೊಂಡಾದರೂ ಜನ ವಯಸ್ಸು ಐವತ್ತಂಟಾಗುವವರೆಗೆ ಆ ಹಣದ ಬಗ್ಗೆ ಮರೆಯಲು ತಯಾರಿಲ್ಲ. ಮಾತೆತ್ತಿದರೆ, ಈಗ ಯಾರೂ ಅರವತ್ತರವರೆಗೆ ಬದುಕೊಲ್ಲ ಅಂತಾ ಹೇಳ್ತಾ ತಮ್ಮೆಲ್ಲಾ ಅರವತ್ತರ ಅಪ್ಪಂದರು ಸತ್ತೇ ಹೋಗಿದ್ದಾರೇನೋ, ಯಾರೂ ಅರವತ್ತರ ವಯೋಮಿನಿತಿನ್ನು ಮೀರಿ ಬದುಕುವುದೇ ಇಲ್ಲವೇನೋ ಎನ್ನುವಂತೆ ಹತಾಷೆಯ ಮಾತನ್ನಾಡುತ್ತಿದ್ದಾರೆ. ನಿಮ್ಮ ದುಡ್ಡ ನಿಮ್ಮ ನಿಯಂತ್ರಣ ಎಲ್ಲಾ ಸರಿ ಸ್ವಾಮಿ. ಸರ್ಕಾರೀ ಪಾಲಿಸಿಗಳು ಬರೀ "ನನ್ನ ಅಥವಾ ನಿಮಗಾಗಿ" ಮಾಡಿದ್ದಲ್ಲ. ಹಣಹೂಡಿಕೆಯೆಂದರೇನು ಅಂತಾ ಗೊತ್ತಿಲ್ಲದ ನಿರಕ್ಷರಕುಕ್ಷಿಗೂ ಸಹ ನಿವೃತ್ತಿ ನಂತರ ಬಿಕ್ಷೆಬೇಡದೆ ಬದುಕುವ ಹಕ್ಕಿದೆ ಹಾಗೂ ಆ ಹಕ್ಕಿಗಾಗಿಯೇ ಈ ನಿಧಿ ಮಾಡಿಟ್ಟಿರುವುದು. ಸರ್ಕಾರೀ ಪಾಲಿಸಿಗಳು ಒಬ್ಬಿಬ್ಬರಿಗಲ್ಲದೇ ಎಲ್ಲಾ ನೂರುಕೋಟೀ ಜನರಿಗೂ ಸೇರಿ ಮಾಡಿರುವುದಾಗಿರುತ್ತವೆ. ನಾವು ಕಷ್ಟದಲ್ಲಿದ್ದಾಗ ಸಣ್ಣ ತೊಂದರೆಗಳು ದೊಡ್ಡದಾಗಿ ಕಾಣುವುದಾದ್ದರಿಂದ, ಜನ ಕ್ಷುಲ್ಲಕ ವಿಚಾರಗಳಿಗೂ ಪಿಎಫ್ ಹಣವನ್ನು ಹೊರತೆಗೆದು ಖರ್ಚುಮಾಡುವ ಸಾಧ್ಯತೆಗಳಿರುತ್ತವೆ. ದೊಡ್ಡಮಟ್ಟದಲ್ಲಿ ಹಾಗೂ ದೂರದೃಷ್ಟಿಯಲ್ಲಿ ಯೋಚಿಸಬೇಕಾಗಿದೆ.
ನಾನು ನಿವೃತ್ತಿಯ ನಂತರದ ಜೀವನಕ್ಕೆ ಏನು ಮಾಡ್ಬೇಕೆಂದು ನನಗೆ ಗೊತ್ತಿದೆ ಅದಕ್ಕೆ ಬೇರೆ ಏನಾದ್ರೂ ಮಾಡುತೇನೆ, ಈಗ ನನ್ನದೊಂದು ಅಂಗಡಿ ಪ್ರಾರಂಭಿಸಲು, ಮಗಳನ್ನು ಯು.ಎಸ್ಸಿಗೆ ಕಳಿಸಲು ಪಿಎಪ್ ಹಣ ನನಗೆ ಬೇಕು ಎನ್ನುವ ಜನರನ್ನು Penni-wise pound-follishಗಳೆನ್ನಬಹುದು ಅಷ್ಟೇ. ಹೇಗಿದ್ದರೂ ನಿಮಗೆ ನಿವೃತ್ತಿಯ ನಂತರಕ್ಕೆ ಏನು ಮಾಡಬೇಕೆಂದು ಗೊತ್ತು ತಾನೇ! ಅದನ್ನೇ ಈ ವರ್ತಮಾನದ ತೊಂದರೆಗಳಿಗೆ ಅನ್ವಯಿಸಿ. ಅದಕ್ಕೂ ಸಾವಿರ ದಾರಿಗಳಿವೆ ಅಲ್ಲವೇ? ಭವಿಷ್ಯವನ್ನು ಅದರಷ್ಟಕ್ಕೇ ಬಿಡಿ. ಕರುಣಾಜನಕವಾದ ನಾಲ್ಕು ಕಾರಣಗಳನ್ನು ಕೊಟ್ತಕೂಡಲೇ ಒಂದು ನಿಯಮ ತಪ್ಪು ಅಂತಾ ನಿರ್ಧಾರವಾಗುವುದಿಲ್ಲ. ಈ ಕರುಣೆ ಕಣ್ಣಿರಿನಿಂದ ಹೊರನಿಂತು, ಉದ್ಯೋಗದ ವೃತ್ತಿಜೀವನ ಮುಗಿದ ಮೇಲೆ, ಪ್ರವೃತ್ತಿಯ ಹಿಂದೆ ನಡೆದು ಇನ್ನೊಂದು ಹೊಸಾ ಜೀವನವನ್ನು ಕಟ್ಟಿಕೊಳ್ಳಲು ಸಹಾಯ ಮಾಡುವ ಈ ನಿಧಿಯನ್ನು, ಕ್ಷಣಿಕನಿರ್ಧಾರದಿಂದ ಜನರು ಹಾಳುಮಾಡಿಕೊಳ್ಳದಿರಲಿ ಎಂಬ ಆಶಯದ ಸದುದ್ದೇಶ ಎಲ್ಲರಿಗೂ ಅರ್ಥವಾಗಲೀ ಎಂಬುದೇ ನನ್ನ ಹಾರೈಕೆ.
Read more from ತೆರಿಗೆ,ಹಣಕಾಸು,ಹೂಡಿಕೆ, ಲೇಖನಗಳು, ವಾಣಿಜ್ಯ
ಕಾರ್ಮಿಕ ಭವಿಷ್ಯ ನಿಧಿ, PF, Provident Fund
← ಮೆಲ್ಲುಸಿರೆ ಸವಿಗಾನ….!
'ಹೊಸ ತಲೆಮಾರಿನ ತಲ್ಲಣ' ಕೃತಿ ಪರಿಚಯ →
ಏಪ್ರಿಲ್ 20 2016
PF duddu 10 varsha melpattare adu pensionge serkolluthalla… Ee pension annodu maha mosa swami… Pensionge meesalidalada duddu konege vapas sikkare, adannu bank nalli fixed deposit iduvaga thingalu thingalu siguva motha sarakara koduva pensionginthanu eshto jasthi aguthade… Idu anyaya alwa…
Shriganesh Damle
ವಾದ ಚೆನ್ನಾಗಿದೆ. ಆದರೆ ನಿವೃತ್ತಿಗೆ ೫೮ ವರ್ಷ ಏಕೆ? ಸ್ವಯಂ ನಿವೃತ್ತಿ ಪಡೆಯಲು ೫೮ ವರ್ಷ ಬೇಕಾಗಿಲ್ಲವಲ್ಲ. ಯಾವಾಗ ಬೇಕಾದರೂ ನಿವೃತ್ತಿ ಹೊಂದಬಹುದಲ್ಲವೇ?
ಏಪ್ರಿಲ್ 21 2016
ಪಿ ಎಫ್ ನಲ್ಲಿ ಒಬ್ಬ ವ್ಯಕ್ತಿ ಹೂಡಿದ ಹಣ ಬಹುತೇಕ ಮ್ಯುಚುವಲ್ ಫಂಡ್ ನಲ್ಲಿ ಹಣ ಹೂಡಿದಂತೆಯೆ ಆದರೂ ನಿಗದಿತ ಬಡ್ಡಿಖಚಿತ. ಹೀಗಾಗಿ ಹಣ ಹೂಡಿದ ವ್ಯಕ್ತಿ ಕೊಂಚಕಾಲವಾದರೂ – ಎಂದರೆ ಹತ್ತರಿಂದ ಹದಿನೈದು ವರ್ಷಗಳಾದರೂ – ತನ್ನ ಹಣವನ್ನು ಪಿ ಎಫ್ ನಿಧಿಯಲ್ಲಿ ಉಳಿಸಿದ್ದರೆ, ಆತನಿಗೆ/ ಆಕೆಗೆ ಬಡ್ಡಿ ಸಮೇತ ಹೆಚ್ಚು ಹಣ ಬರುತ್ತದೆ. ಭಾರತದಲ್ಲಿ ಸರಾಸರಿ ಆಯುರ್ಮಾನ ೬೬ ವರ್ಷಗಳು. ಹೀಗಾಗಿ ಹಣದುಬ್ಬರ (ಇನ್ಫ್ಲೇಷನ್) ಗೆ ಸಮನಾಗಿ ನಿವೃತ್ತಿಯ ಸಮಯದಲ್ಲಿ ಯಾವುದೇ ವ್ಯಕ್ತಿಗೆ ಇರಬಹುದಾದ ಜೀವನಶೈಲಿಗೆ ಹೊಂದಿಕೊಳ್ಳುವಂತೆ ಕನಿಷ್ಠ ಎಂಟರಿಂದ ಹತ್ತು ವರ್ಷಗಳ ಕಾಲ ನಿಗದಿತ ವರಮಾನದ ಸಮವಾಗುವಷ್ಟು ಹಣ ದೊರೆಯಬೇಕೆಂದರೆ, ಐವತ್ತೆಂಟು ವರ್ಷಗಳ ನಿವೃತ್ತಿಯ ವಯಸ್ಸು ಸಮಂಜಸವೆನ್ನಿಸುತ್ತದೆ. ಸರಾಸರಿ ಆಯುರ್ಮಾನ ಜಾಸ್ತಿ ಇರುವ ದೇಶಗಳಲ್ಲಿ, ಇಂತಹ (ಪಿ ಎಫ್ ನಂತಹ) ನಿಧಿಯಿಂದ ಹಣ ತೆಗೆಯಬಹುದಾದ ವಯಸ್ಸೂ ಕೂಡ ಜಾಸ್ತಿ ಇರುತ್ತದೆ. ಉದಾ. ಯು ಎಸ್ ಎ – ಇಲ್ಲಿ 401 (k) ಪಿ ಎಫ್ ಗೆ ಸರಿ ಸಮನಾದ ನಿಧಿಯೊಂದರಿಂದ ಯಾವ ವಯಸ್ಸಿಗೇ ನಿವೃತ್ತರಾದರೂ, ೬೨ ವರ್ಷಗಳಿಗಿಂತ ಮೊದಲು ಹಣ ತೆಗೆಯುವಂತಿಲ್ಲ. ಹಣ ತೆಗೆಯಲೇ ಬೇಕಾದ ಪರಿಸ್ಥಿತಿ ಬಂದರೆ, ನಿಗದಿತ ಸಮಯದೊಳಗೆ ಬಡ್ಡಿ ಸಮೇತ ಅದನ್ನು ಕಟ್ಟಿದರೆ ಮಾತ್ರ ನಷ್ಟವಾಗುವುದನ್ನು ತಪ್ಪಿಸಬಹುದು.
ಇಂಥ ಲೇಖನಗಳಿಗೆ ಪ್ರತಿಕ್ರಿಯೆ ಬರೆಯಲು ನಾಗ'ಷಿಟ್ ಟಿ' ಅಥವಾ "ಹರಾಮ್" ಬಾವಾನಿಗೆ ಹೇಳಿ, ಮಿಡ್ಲ್ ಸ್ಕೂಲ್ ಮಕ್ಕಳು ಹಸುವಿನ ಬಗ್ಗೆ ಪ್ರಬಂಧ ಬರೆದಂತೆ "ಭಡವ" ಧರ್ಮ, ಅಥವಾ "ವಾಂತಿ" ಧರ್ಮ ವನ್ನು ಎಳೆ ತರುತ್ತಾರೆ.
ಜೀವ ಉಳಿಸಲು ಕೋವಿಡ್‌ ಲಸಿಕೆ ಅತ್ಯಗತ್ಯ - ಪಿಎಂ ಮೋದಿ | COVID-19 vaccine absolutely important to defeat pandemic says PM Narendra Modi - Kannada Oneindia
ನವದೆಹಲಿ, ಮೇ 26: ಕೋವಿಡ್‌19 ಅನೇಕ ಮಂದಿಯ ಮನೆ ಬಾಗಿಲಿಗೆ ಸಂಕಟವನ್ನು ತಂದೊಡ್ಡಿದೆ. ಭಾರಿ ಆರ್ಥಿಕ ಪರಿಣಾಮವನ್ನು ಉಂಟುಮಾಡಿದೆ ಎಂದು ಹೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೋವಿಡ್‌ನಿಂದ ಜೀವ ಉಳಿಸಲು ಲಸಿಕೆ ಪಡೆಯವುದು ಅತ್ಯಗತ್ಯ ಎಂದು ಹೇಳಿದ್ದಾರೆ.
ಬುದ್ಧ ಪೂರ್ಣಿಮಾ ಹಿನ್ನೆಲೆ ನಡೆದ ವರ್ಚುವಲ್‌ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ, ಸಾಂಕ್ರಾಮಿಕ ರೋಗವು ಎಲ್ಲಾ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದೆ. ಆದರೆ ಅದರ ವಿರುದ್ಧ ಹೋರಾಡುವ ನಮ್ಮ ಕಾರ್ಯತಂತ್ರವನ್ನು ಬಲಪಡಿಸುವ ಅನೇಕ ಗಮನಾರ್ಹ ಬೆಳವಣಿಗೆಗಳು ನಮ್ಮ ದೇಶದಲ್ಲಿ ನಡೆದಿವೆ. ಬಹು ಮುಖ್ಯವಾಗಿ, ನಮ್ಮಲ್ಲಿ ಲಸಿಕೆ ಇದೆ, ಇದು ಜೀವಗಳನ್ನು ಉಳಿಸಲು ಮತ್ತು ಸಾಂಕ್ರಾಮಿಕ ರೋಗವನ್ನು ಸೋಲಿಸಲು ಅತೀ ಮುಖ್ಯ ಎಂದು ಹೇಳಿದರು.
ಲಸಿಕೆ ಕೊರತೆ: ದೇಶದಲ್ಲಿ ವ್ಯಾಕ್ಸಿನೇಷನ್‌ ವೇಗ ಶೇ 35 ಕ್ಕೆ ಕುಸಿತ
ಕೋವಿಡ್‌ ಪತ್ತೆಯಾದ ಒಂದು ವರ್ಷದೊಳಗೆ ಕೋವಿಡ್‌ ಲಸಿಕೆಯನ್ನು ಉತ್ಪಾದಿಸಿರುವುದು ಮಾನವನ ದೃಢತೆಯ ಶಕ್ತಿಯನ್ನು ತೋರಿಸುತ್ತದೆ. ಲಸಿಕೆಗಳನ್ನು ಅಭಿವೃದ್ಧಿಪಡಿಸಿದ ನಮ್ಮ ಭಾರತದ ವಿಜ್ಞಾನಿಗಳ ಬಗ್ಗೆ ದೇಶವೇ ಹೆಮ್ಮೆಪಡುತ್ತದೆ. ಇತರರನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಕ್ಕಾಗಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನಾನು ನಮಸ್ಕರಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಸಾಂಕ್ರಾಮಿಕ ರೋಗದಲ್ಲಿ ಬಳಲುತ್ತಿರುವ ಮತ್ತು ಮೃತಪಟ್ಟವರ ಬಗ್ಗೆ ಸಂತಾಪ ಸೂಚಿಸುತ್ತಾ, ಮೃತ ಕುಟುಂಬದ ದುಃಖದೊಂದಿಗೆ ನಾನೂ ಭಾಗಿಯಾಗುತ್ತೇನೆ ಎಂದು ಕೂಡಾ ಹೇಳಿದ್ದಾರೆ.
ಇನ್ನು ಹವಾಮಾನ ಬದಲಾವಣೆ ಮತ್ತು ಭಯೋತ್ಪಾದನೆಯ ವಿಷಯಗಳ ಬಗ್ಗೆಯೂ ಮಾತನಾಡಿದ ಮೋದಿ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಾಗ ನಾವು ಇತರ ಸವಾಲುಗಳ ಬಗ್ಗೆ ಮರೆಯಬಾರದು. ಆ ಕಡೆಯೂ ಗಮನ ಹರಿಸಬೇಕು ಎಂದು ಹೇಳಿದರು.
ವರ್ಚುವಲ್ ಕಾರ್ಯಕ್ರಮದಲ್ಲಿ ನೇಪಾಳ ಮತ್ತು ಶ್ರೀಲಂಕಾದ ಪ್ರಧಾನ ಮಂತ್ರಿಗಳು ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಜರಾಗಿದ್ದರು. ಪ್ರಧಾನಿ ಮೋದಿ, ನಾವು ಮಾನವೀಯತೆಯನ್ನು ನಂಬುವವವರು, ನಾವೆಲ್ಲರೂ ಒಗ್ಗೂಡಿ ಭಯೋತ್ಪಾದನೆಯನ್ನು ಸೋಲಿಸಬೇಕು ಎಂದು ಕರೆ ನೀಡಿದರು.
ಗೌತಮ ಬುದ್ಧನ ಜೀವನವು ಶಾಂತಿ, ಸಾಮರಸ್ಯ ಮತ್ತು ಸಹಬಾಳ್ವೆಯ ಕುರಿತಾಗಿದೆ. ವಿಶ್ವದಾದ್ಯಂತ ದ್ವೇಷ, ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುವುವ ಶಕ್ತಿಗಳು ಇನ್ನೂ ಇದೆ. ಇಂತಹ ಶಕ್ತಿಗಳು ಪ್ರಜಾಪ್ರಭುತ್ವ ತತ್ವಗಳನ್ನು ನಂಬುವುದಿಲ್ಲ ಎಂದರು.
ಇನ್ನು ಈ ವೇಳೆ ಹವಾಮಾನ ಬದಲಾವಣೆಯ ವಿಷಯವನ್ನು ಉಲ್ಲೇಖಿಸಿದ ಮೋದಿ, ಪ್ರಸ್ತುತ ಪೀಳಿಗೆಯ ಅಜಾಗರೂಕ ಜೀವನಶೈಲಿ ಭವಿಷ್ಯದ ಪೀಳಿಗೆಗೆ ಅಪಾಯವನ್ನುಂಟುಮಾಡುತ್ತಿದೆ. ಬುದ್ಧ ಅತ್ಯುನ್ನತವಾದ ಜೀವನ ವಿಧಾನಕ್ಕೆ ಒತ್ತು ನೀಡಿದ್ದಾರೆ ಎಂದು ಹೇಳಿದರು.
ಚಿತ್ರ: ದೇಶದ ವಿವಿಧೆಡೆ ಬುದ್ಧ ಪೂರ್ಣಿಮಾ ಆಚರಣೆ
ಪೆರುವಾಜೆಯಲ್ಲಿ ಅಪರೂಪದ ಬುದ್ಧನ ವಿಗ್ರಹ ಪತ್ತೆ
buddha coronavirus narendra modi prime minister central government newdelhi ನರೇಂದ್ರ ಮೋದಿ ನವದೆಹಲಿ ಕೇಂದ್ರ ಸರ್ಕಾರ ಮಹಾರಾಷ್ಟ್ರ ಬುದ್ಧ
Prime minister Narendra Modi greeted the nation on the occasion of Buddha Purnima says COVID-19 vaccine absolutely important to defeat pandemic.
ಹಿಂದಿ ಹೇರಿಕೆ: ಹುಸಿಪ್ರಚಾರವೇ ಅಥವಾ ವಾಸ್ತವವೇ? – ಋತುಮಾನ
ಹಿಂದಿ ಹೇರಿಕೆ: ಹುಸಿಪ್ರಚಾರವೇ ಅಥವಾ ವಾಸ್ತವವೇ?
Author ಗುರುಪ್ರಸಾದ್ Date July 26, 2017
"ಹಿಂದಿ ಹೇರಿಕೆ" ಅಥವಾ "ಹಿಂದಿ ಸಾರ್ವಭೌಮತ್ವ" ಕೇವಲ ವಿರೋಧ ಪಕ್ಷಗಳು ಸೃಷ್ಟಿಸಿದ ವದಂತಿಯೇ ಅಥವಾ ಕನ್ನಡಿಗರು ವ್ಯಕ್ತ ಪಡಿಸುತ್ತಿರುವ ಹುಸಿ ಕಳಕಳಿಯೇ? ಅಥವಾ ಇದು ದಿನದಿಂದ ದಿನಕ್ಕೆ ಹೆಚ್ಚು ಗಂಭೀರವಾಗುತ್ತಿರುವ, ಐದು ಕೋಟಿ ಕನ್ನಡಿಗರು ತಮ್ಮ ರಾಜ್ಯದಲ್ಲಿಯೇ ಪರಕೀಯರೆನಿಸದ ಹಾಗೆ ಕೇಂದ್ರ ಸರ್ಕಾರವು ತಕ್ಷಣ ತಿದ್ದುಪಡಿಸಿಕೊಳ್ಳುವಂತೆ ಸಾರುತ್ತಿರುವ ವಾಸ್ತವವೇ?
ಬಹಳ ಸಮಯಗಳಿಂದ "ಹಿಂದಿ ಹೇರಿಕೆ" ಎಂಬ ವಿಷಯದ ಕುರಿತಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಚರ್ಚೆಗಳಾಗಿವೆ . ಅಷ್ಟೇ ಅಲ್ಲದೆ ಕೆಲವು ಜನಪ್ರಿಯ ಸುದ್ದಿ ವಾಹಿನಿಗಳು ಮತ್ತು ಮಿಂದಾಣಗಳು ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ವ್ಯಾಪಕವಾದ ವಾಗ್ವಾದಗಳು ಕೂಡಾ ನಡೆದಿವೆ .
ನಾನೂ ಕೂಡ ಈ ಕುರಿತಾಗಿ ಬಹಳ ಮುಂಚೆಯೇ ಬರೆಯಬೇಕೆಂದುಕೊಂಡಿದ್ದೆ. ಆದರೆ ಈ ಸ್ಥಿತಿ ಸ್ವಲ್ಪ ತಿಳಿಯಾಗುವವರೆಗೆ ಮತ್ತು ನನಗೆ ಇನ್ನಷ್ಟು ಸಾಕ್ಷ್ಯಗಳು ದೊರೆಯುವವರೆಗೆ ಕಾಯಬೇಕೆಂದು ನಿರ್ಧರಿಸಿದೆ. ಏಕೆಂದರೆ ತಟಸ್ಥರಾಗಿ ಹಾಗೂ ಹೊಸತಾಗಿ ನೋಡುವುದರಿಂದ ಮಾತ್ರ ಇಲ್ಲಿ ಸಮಸ್ಯೆಗಳು ಇರುವವೇ ಎಂದು ಅರ್ಥವಾಗುವುದು ಮತ್ತು ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಬೇರಿನಿಂದ ಪರಿಶೀಲಿಸಿ ಈ ಕುರಿತ ತೊಂದರೆಗಳನ್ನೆಲ್ಲ ನಿವಾರಿಸಲು ಸಾಧ್ಯವಾಗುವುದು. ಮತ್ತು ಮನಃಶಾಸ್ತ್ರದ ವಿದ್ಯಾರ್ಥಿಯಾಗಿ ನನಗೆ ಈ ವಿ‍ಚಾರವನ್ನು ವಿವಿಧ ದೃಷ್ಟಿಕೋನಗಳಿಂದ ವಿಶ್ಲೇಷಣೆ ಮಾಡಬೇಕಿತ್ತು. ಅದರಲ್ಲೂ ವಿಶೇಷವಾಗಿ ಜನ ಸಾಮಾನ್ಯರ, ನ್ಯಾಯಯುತ ಪ್ರಜೆಗಳ ಹಾಗೂ ತೆರಿಗೆದಾರರ ದೃಷ್ಟಿಕೋನದಿಂದ ನೋಡಿ ಈ ಸಮಸ್ಯೆಯ ತೀವ್ರತೆಯನ್ನು ಅಳೆಯಬೇಕಿತ್ತು.
ಮುಂದುವರೆಯುವುದಕ್ಕೂ ಮುನ್ನ, ಕೆಲವು ಸಾಮನ್ಯ ಸ್ಪಷ್ಟನೆಗಳನ್ನು ನೀಡಿಬಿಡುತ್ತೇನೆ. ನಾನು ಹೆಮ್ಮೆಯಿಂದ ಮರಾಠಿ ಮಾತನಾಡುವ ಒಬ್ಬ ಭಾರತೀಯ ಪ್ರಜೆ. ಎಲ್ಲ ಭಾಷೆಗಳ ಕುರಿತು ಗೌರವ ಹಾಗೂ ಪ್ರೀತಿಯಿದ್ದು, ಈಗ ಕರ್ನಾಟಕದಲ್ಲಿ ನೆಲಿಸಿದ್ದೇನೆ. ಮನೆಯಲ್ಲಿ ಮರಾಠಿ ಮಾತನಾಡುವ ನಾನು, ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೊಂದಿಗೆ ಹಿಂದಿಯನ್ನೂ ಒಂದು ಭಾಷಾವಿಷಯವಾಗಿ ಕಲಿತಿದ್ದೇನೆ. ಮತ್ತೆ ಮರಾಠಿ ಹಿಂದಿಗೆ ಬಹಳ ಹತ್ತಿರವಾಗಿದ್ದು ಒಂದೇ ಲಿಪಿಯನ್ನು (ದೇವನಾಗರಿ) ಬಳಸುತ್ತದೆ. ಹೀಗಾಗಿ ಯಾವುದೇ ರೀತಿಯ ಹಿಂದಿ ಹೇರಿಕೆ ನನಗೆ ವೈಯಕ್ತಿವಾಗಿ ಬೀರುವ ಪರಿಣಾಮ ಕ್ಷುಲ್ಲಕ.
ನಾನು ಹಿಂದಿ ಚಲನಚಿತ್ರ, ದಾರವಾಹಿ ಹಾಗೂ ಪುಸ್ತಕಗಳ ವಿಮರ್ಶೆ ಮತ್ತು ಶಿಫಾರಸು ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇನೆ. ಹಿಂದಿ ಚಿತ್ರ "ಕಿಸ್ಸಾ ಕುರ್ಸಿ ಕಾ"ದ ವಿಮರ್ಶೆ ಇಲ್ಲಿದೆ.
ಹಿಂದಿ ದಾರವಾಹಿ "ಫ್ಲಾಪ್ ಶೋ"ದ ವಿಮರ್ಶೆ ಮತ್ತು ಶಿಫಾರಸು:
ಹಿಂದಿ ದಾರವಾಹಿ "ಸಂವಿಧಾನ್"ದ ವಿಮರ್ಶೆ ಮತ್ತು ಶಿಫಾರಸು:
ಹಿಂದಿ ಪುಸ್ತಕ "ಡರ್ ಡರ್ ಗಂಗೆ"ಯ ಪ್ರಚಾರ:
ಈ ಸ್ಪಷ್ಟನೆಗಳನ್ನು ನೀಡಲು ಕಾರಣವೆಂದರೆ ನಾನು ಹಿಂದಿಯ ಕುರಿತಾಗಿ ಸ್ವಲ್ಪ ಪಕ್ಷಪಾತಿಯಾಗಿದ್ದಲ್ಲಿ ಅದಕ್ಕೆ ಕಾರಣ ಈ ಮೇಲೆ ಹೇಳಿದ ಅಂಶಗಳು (ಹಿಂದಿ ನನ್ನ ಮಾತೃಭಾಷೆಗೆ ಹತ್ತಿರವಾದದ್ದು). ಇದನ್ನು ಹೇಳಿಯೂ ಈ ವಿಶ್ಲೇಷಣೆಯಲ್ಲಿ ನನ್ನ ಎಲ್ಲ ಪೂರ್ವಗ್ರಹಗಳನ್ನು ಬದಿಗಿಟ್ಟು ಸಾಧ್ಯವಾದಷ್ಟು ತಟಸ್ಥವಾಗಿರಲು ಪ್ರಯತ್ನಿಸಿದ್ದೇನೆ.
ಈಗ ಒಂದಿಷ್ಟು ಅಂಕಿ ಅಂಶಗಳು ಮತ್ತು ವಾಸ್ತವಾಂಶಗಳನ್ನು ನೋಡೋಣ.
೧೯೫೬ರ ರಾಜ್ಯ ಮರುವಿಂಗಡನಾ ಕಾಯ್ದೆ (States Reorganization Act) ಯ ಅನುಸಾರವಾಗಿ ಕರ್ನಾಟಕ ರಾಜ್ಯ ಭಾಷೆಯನ್ನೇ ಆಧರಿಸಿ ರೂಪಿಸಿರುವ ರಾಜ್ಯವಾಗಿದೆ.
ನಾನು ಈ ಮುಂಚೆ ಭಾಷೆಯನ್ನಾಧರಿಸಿ ರಾಜ್ಯಗಳನ್ನು ರೂಪಿಸಿದ ಕುರಿತಾಗಿ ನನ್ನ ಕೆಲವು ಲೇಖನಗಳಲ್ಲಿ ವಿವರಿಸಿದ್ದೇನೆ.
ಆಂಧ್ರಪ್ರದೇಶ ರಾಜ್ಯಕ್ಕಾಗಿ ಪೊಟ್ಟಿ ಶ್ರೀರಾಮುಲು ಅವರ ಉಪವಾಸ:
ಭಾಷೆಯ ಆಧಾರದ ಮೇಲೆ ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳ ಹುಟ್ಟು:
ಹೀಗೆ, ಕರ್ನಾಟಕ ರಾಜ್ಯವನ್ನು ಎಲ್ಲ ಕನ್ನಡ ಮಾತನಾಡುವ ಜಿಲ್ಲೆಗಳನ್ನು ಒಂದು ರಾಜ್ಯವನ್ನಾಗಿಸುವುದರೊಂದಿಗೆ ರೂಪುಗೊಳಿಸಿ, ಕನ್ನಡವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ರೂಪಿಸಲಾಯಿತು. ಸರಳವಾಗಿ ಹೇಳುವುದಾದರೆ, ಕರ್ನಾಟಕ ಎಂದು ಕರೆಲ್ಪಡುವ ಈ ರಾಜ್ಯದ ಪರಿಧಿಯೊಳಗೆ ಒಬ್ಬ ವ್ಯಕ್ತಿ ಕೇವಲ ಕನ್ನಡವನ್ನು ಅರಿತಿದ್ದು ಯಾವುದೇ ವ್ಯಾಪಾರ, ವಹಿವಾಟು, ಸರಕಾರೀ ಅಧಿಕಾರಿಗಳೊಂದಿಗೆ ಸಂಪರ್ಕ ನಡೆಸಲು ಸಾಧ್ಯ. ಹೀಗಾಗಿ ಕರ್ನಾಟಕದ ೬.೫ ಕೋಟಿ ಜನರಲ್ಲಿ ೫ ಕೋಟಿ ಜನಕ್ಕೆ ಕನ್ನಡದ ಹೊರತಾಗಿ ಯಾವುದೇ ಭಾಷೆ ತಿಳಿದಿಲ್ಲ, ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ. ಇದು ಯಾರಿಗೂ ಅಚ್ಚರಿ ಏನೂ ಹುಟ್ಟಿಸಬೇಕಿಲ್ಲ, ಏಕೆಂದರ ಹೇಗೆ ಉತ್ತರ ಪ್ರದೇಶದ ಹಳ್ಳಿಗರಿಗೆ ಹಿಂದಿ ಮಾತ್ರ ಗೊತ್ತಿರುವುದೋ ಹಾಗೆಯೇ ಕರ್ನಾಟಕದ ಬಹುತೇಕ ಗ್ರಾಮಗಳಲ್ಲಿ ಒಬ್ಬ ವ್ಯಕ್ತಿಗೆ ಕೇವಲ ಕನ್ನಡ ಮಾತ್ರ ತಿಳಿದಿರುತ್ತದೆ. ಹೀಗಾಗಿ ಕೇವಲ ಕನ್ನಡ ಗೊತ್ತು ಎನ್ನುವ ಕಾರಣಕ್ಕಾಗಿ ಈ ಕರ್ನಾಟಕದಲ್ಲಿಯೇ ನೆಲೆಸಿದ ಜನಸಾಮಾನ್ಯರಿಗೆ ಯಾವುದೇ ಸೌಲಭ್ಯ ನಿರಾಕರಿಸದಂತೆ ಹಾಗೂ ಇವರು ಯಾವುದೇ ತಾರತಮ್ಯ ಅನುಭವಿಸದಂತೆ ನೋಡಿಕೊಳ್ಳುವ ಭರವಸೆ ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ.
ಆದರೆ ಈ ಭರವಸೆಯನ್ನು ನಿಜಕ್ಕೂ ಕಾಯ್ದುಕೊಳ್ಳಲಾಗುತ್ತಿದೇಯೇ?
ನಾನು ಹೌದೆಂದೇ ಭಾವಿಸಿದ್ದೆ,ಇದನ್ನು ಅಲ್ಲಗೆಳೆಯುವ ಹಲವು ಕುತೂಹಲಕಾರಿ ಸಾಕ್ಷ್ಯಗಳು ಸಿಗುವುದಕ್ಕೂ ಮುನ್ನ.
"ಭಾರತೀಯ ಅಂಚೆ" ಎಂದು ಕರೆಯಲ್ಪಡುವ, ಭಾರತದ ಎಲ್ಲ ರಾಜ್ಯಗಳ ತೆರಿಗೆದಾರರ ಹಣದಿಂದ ನಡೆಯುತ್ತಿರುವ ಸಂಸ್ಥೆಯೊಂದಿಗೆ ಪ್ರಾರಂಭಿಸುತ್ತೇನೆ.
ನನ್ನ ಕರ್ನಾಟಕದ ಗೆಳೆಯರೊಬ್ಬರು ಕನ್ನಡದಲ್ಲಿ ಒಂದು ಪತ್ರ ಕಳಿಸಿ ೨೦ ದಿನವಾದರೂ ಯಾವುದೇ ಉತ್ತರ ಬಂದಿರಲಿಲ್ಲ. ಭಾರತೀಯ ಅಂಚೆಯ ಅಧಿಕೃತ ಟ್ವಿಟ್ಟರ್ ಖಾತೆಗೆ ಅವರು ತಮ್ಮ ಕಾಳಜೆಯನ್ನು ಟ್ವೀಟ್ ಮಾಡಿದಾಗ, ಅವರಿಗೆ ಸಿಕ್ಕ ಉತ್ತರವು ಸೇವೆಯನ್ನು ನಿರಾಕರಿಸುವುದಷ್ಟೇ ಆಗಿರದೆ, ಅಧಿಕಾರಿಯು ಅವರಿಗೆ "Use google translator" ಎಂದು ಹಿಂದಿ/ಇಂಗ್ಲಿಷ್‍ಗೆ ಅನುವಾದಿಸಲು ಹೇಳಿದ್ದಾಗಿತ್ತು.
ಉಲ್ಲೇಖ:https://www.facebook.com/photo.php?fbid=10210166246861891&set=a.1770961003064.221799.1510418566&type=3&theater
ಆದರೆ ನನಗೆ ಚೆನ್ನಾಗಿ ನೆನಪಿರುವಂತೆ ನನ್ನ ಬಾಲ್ಯದ ಸಮಯದಲ್ಲಿ, ೧೯೯೦ರ ದಶಕದಲ್ಲಿ, ಕನ್ನಡದಲ್ಲಿ ಬರೆದ ವಿಳಾಸವನ್ನು ಕನ್ನಡದಲ್ಲಿಯೇ ಹೊಂದಿದ ಪತ್ರಗಳನ್ನು ಕಳುಹಿಸುತ್ತಿದ್ದುದು ಬಹಳ ಸಾಮಾನ್ಯವಾಗಿ ಕಾಣಸಿಗುತ್ತಿತ್ತು. ವಿಶೇಷವಾಗಿ ದೂರದರ್ಶನ ಇತ್ಯಾದಿ ನಡೆಸುತ್ತಿದ್ದ ಕನ್ನಡ ಸ್ಪರ್ಧೆಗಳಲ್ಲಿ. ಇದು ಸಹಜವಾಗಿ ಒಪ್ಪಿತವೂ, ಸ್ವೀಕಾರಾರ್ಹವೂ ಆಗಿತ್ತು. ಏಕೆಂದರೆ ಕನ್ನಡ ಭಾರತದ ಅಧಿಕೃತ ಭಾಷೆಗಳಲ್ಲಿ ಒಂದು. ಹೀಗಿರುವಾಗ ಈ ರೀತಿ ಕನ್ನಡದಲ್ಲಿ ಪತ್ರ ಮತ್ತು ವಿಳಾಸ ಬರೆದಿರುವವರೊಬ್ಬರಿಗೆ ಸೇವೆಯನ್ನು ನಿರಾಕರಿಸುವುದು, ಮತ್ತು ಅನುವಾಗಿಸಲು ಗೂಗಲ್ ಟ್ರಾನ್ಸ್ಲೇಟರ್ ಬಳಸುವಂತೆ ಹೇಳುವುದು ಸಂಬಂಧಿತ ಅಧಿಕಾರಿಗಳ ಸಾರ್ವಭೌಮ ಧೋರಣೆಯನ್ನು ತೋರಿಸುತ್ತದೆ .
ಈಗ, ಭಾರತೀಯ ಸ್ಟೇಟ್ ಬಾಂಕ್‍ನ ಉದಾಹರಣೆಯನ್ನು ನೀಡುತ್ತೇನೆ. ಇದು ಭಾರತ ಸರ್ಕಾರದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು (Public Sector Bank) ಬ್ಯಾಂಕ್ ಆಗಿದ್ದು ಭಾರತದ ಎಲ್ಲ ರಾಜ್ಯಗಳ ತೆರಿಗೆದಾರರ ಹಣದಿಂದ ನಡೆಯುತ್ತದೆ.
ಕರ್ನಾಟಕ SBI ಗ್ರಾಹಕರೊಬ್ಬರು ಬ್ಯಾಂಕಿಗೆ ತಮ್ಮ ಕಳಕಳಿಯೊಂದನ್ನು ಕಳುಹಿಸಿದಾಗ, ಅವರಿಗೆ ಸಹಾಯ ನೀಡುವಂತಾಗಲು ತಮ್ಮ ಕಳಕಳಿಯನ್ನು ಹಿಂದಿ ಅಥವಾ ಇಂಗ್ಲಿಷಿನಲ್ಲಿ ಬರೆಯಲು ಕೇಳಲಾಯಿತು.
ಉಲ್ಲೇಖ:https://www.facebook.com/photo.php?fbid=10210681205055524&set=a.1770961003064.221799.1510418566&type=3&theater
ಇದು ಕೇವಲ ಆಶ್ಚರ್ಯಕಾರಿಯಷ್ಟೇ ಅಲ್ಲ, ಗರ್ವ ಮತ್ತು ಸಾಮ್ರಾಜ್ಯಶಾಹಿ ಮನೋಭಾವದ ಉತ್ತರವಾಗಿದೆ. ಡಿಜಿಟಲ್ ಇಂಡಿಯಾ, ನಗದು ರಹಿತ ಅರ್ಥವ್ಯವಸ್ಥೆ, ಬ್ಯಾಂಕಿಂಗ್ ಸೌಕರ್ಯಗಳನ್ನೆಲ್ಲ ಮುಂದೂಡುವುದರೊಂದಿಗೆ ಕರ್ನಾಟಕದಲ್ಲಿ ನೆಲೆಸಿರುವ ಕೇವಲ ಕನ್ನಡವನ್ನಷ್ಟೇ ಅರಿತ ೫ ಕೋಟಿ ಜನಕ್ಕೆ ಸರಿಯಾದ ಬ್ಯಾಂಕ್ ಸೌಕರ್ಯಗಳು ಕೇವಲ ಹಿಂದಿ ಅಥವಾ ಇಂಗ್ಲಿಷ್ ಬಾರದೆನ್ನುವ ಕಾರಣಕ್ಕೆ ಲಭ್ಯವಾಗದಿದ್ದಲ್ಲಿ, ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಹಿಂದಿ/ಇಂಗ್ಲಿಷ್ ಸಾಮ್ರಾಜ್ಯಶಾಹಿಯಿಂದ ಬದಲು ಮಾಡಿದ್ದಷ್ಟೇ ಎಂದು ಯೋಚಿಸಬೇಕಾಗುತ್ತದೆ; ಜನಸಾಮಾನ್ಯರು ತಾರತಮ್ಯಕ್ಕೊಳಗಾಗಿ, ಸೇವೆಗಳಂದ ವಂಚಿತರಾಗುತ್ತಿರುವ ಈ ಸನ್ನಿವೇಶದಲ್ಲಿ.
ಇದೇ ಸಮಯದಲ್ಲಿ ಇನ್ನೊಂದು ವಿವಾದವಾಯಿತು, ಆದರೆ ತಮಿಳುನಾಡಿನಿಂದ. ರಾಜ್ಯದ ಭಾರತೀಯ ಪ್ರಜೆಯೊಬ್ಬರಿಗೆ ತಮಿಳಿನಲ್ಲಿ ನೀಡಿದ್ದಾರೆನ್ನುವ ಕಾರಣಕ್ಕೆ RTI ಕೋರಿಕೆಯೊಂದನ್ನು ನಿರಾಕರಿಸಲಾಯಿತು.
ಉಲ್ಲೇಖ:https://www.facebook.com/photo.php?fbid=10212612993949039&set=a.1770961003064.221799.1510418566&type=3&theater
ಇದು ಆಘಾತಕಾರಿ ಸಂಗತಿ. ಏಕೆಂದರೆ ಬೇರೆಲ್ಲ ದೇಶಗಳು ತಮ್ಮದಲ್ಲದ ಹೆಚ್ಚು ಬಾಷೆಗಳಿಗೆ ತೆರೆದುಕೊಳ್ಳುತ್ತ, ಎಲ್ಲರನ್ನೊಳಗೊಳ್ಳುತ್ತಿರುವಾಗ, ಇಲ್ಲಿ ನಮ್ಮ ವೈವಿಧ್ಯತೆಯ ಕುರಿತು ಹೆಮ್ಮೆ ಹೊಂದಿರುವ ಭಾರತದಲ್ಲಿ ೨೨ ಅಧಿಕೃತ ಭಾಷೆಗಳನ್ನು ಹೊಂದಿದ್ದು, ಈ ರೀತಿ ತಮಿಳುನಾಡಿನ ಒಬ್ಬ ತಮಿಳನ್ನಷ್ಟೇ (ಇದು ಕೇವಲ ೨೨ ಅಧಿಕೃತ ಭಾಷೆಗಳಲ್ಲೊಂದಷ್ಟೇ ಅಲ್ಲ, ಶಾಸ್ತ್ರೀಯ ಭಾಷೆಯಾಗಿಯೂ ಷೋಷಿಸಲ್ಪಟ್ಟಿದೆ) ಅರಿತ ಪ್ರಾಮಾಣಿಕ ತೆರಿಗೆದಾರ, ಕೇವಲ ಹಿಂದಿ ಅಥವಾ ಇಂಗ್ಲಿಷ್ ಅರಿಯದ್ದಕ್ಕಾಗಿ, ತನ್ನ RTI ಕೋರಿಕೆಯ ನಿರಾಕರಣೆಯನ್ನು ಕಾಣಬೇಕಾದ ಅನ್ಯಾಯ ನಡೆಯುತ್ತಿದೆ.
ಇದು ಕೇವಲ ಮಂಜುಗಡ್ಡೆಯ ತುದಿಯಷ್ಟೇ. ಹಿಂದಿಯ ಬದಲಾಗಿ ಕನ್ನಡವನ್ನು ಅರಿತಿದ್ದಕ್ಕಾಗಿ ಕನ್ನಡಿಗರಿಗೆ ಸರ್ಕಾರಿ ಸೇವೆಗಳು ನಿರಾಕಾರಿಸಲ್ಪಟ್ಟಿರುವುದು ಲೆಕ್ಕವಿಲ್ಲದಷ್ಟು ನಡೆದಿದೆ. ಹಲವು ಗ್ರಾಹಕರು ಬ್ಯಾಂಕುಗಳು ಕನ್ನಡದಲ್ಲಿ ಜಮಾ ಮತ್ತು ವಾಪಾಸಾತಿ ಅರ್ಜಿಗಳನ್ನು ನೀಡುವುದನ್ನು ನಿಲ್ಲಿಸಿ ನಿಧಾನವಾಗಿ ಹಿಂದಿಯ ಅರ್ಜಿಗಳನ್ನು ಸೇರಿಸುತ್ತಿವೆಯೆಂದು ದೂರಿದ್ದಾರೆ. ಈ ಮೂಲಕ ಬ್ಯಾಂಕುಗಳು ತಮ್ಮೊಡನೆ ವಹಿವಾಟು ನಡೆಸಲು ಎಲ್ಲ ಗ್ರಾಹಕರಿಗೆ ಹಿಂದಿ/ಇಂಗ್ಲಿಷ್ ತಿಳಿದಿರಬೇಕೆಂದು ಅಪೇಕ್ಷಿಸುತ್ತಿವೆ.
ಬರೀ ಕನ್ನಡ ಅರಿತಿದ್ದು ಹಿಂದಿ ಅರಿಯದ್ದಕ್ಕಾಗಿ ಕರ್ನಾಟಕದ ಜಿಲ್ಲೆಯೊಂದರ ಹಳ್ಳಿಗರಿಗೆ ಬ್ಯಾಂಕ್ ಅಧಿಕಾರಿಯೊಬ್ಬರು ಸೇವೆಯನ್ನು ನಿರಾಕರಿಸಿದ್ದಲ್ಲದೇ, ಒರಟಾಗಿ ವರ್ತಿಸಿದರೆಂದು ದೂರಿದ ವಾರ್ತೆಯೊಂದು ಇಲ್ಲಿದೆ.