text stringlengths 0 61.5k |
|---|
ಅವರು ಹೀಗೆ ಹಾಸಿಗೆ ಹಿಡಿದಿದ್ದಾಗ ಸರ್ಕಾರ ಅವರನ್ನು ಹಿರಿಯ ಕಲಾವಿದರೆಂದು ಪರಿಗಣಿಸಿತು! ಕೇಂದ್ರದ ಲಲಿತಕಲಾ ಅಕ್ಯಾಡೆಮಿ ಅವರನ್ನು ಮಹಾಪುರುಷರೆಂದು ಸನ್ಮಾನಿಸಿತು. ರಾಜ ಸರ್ಕಾರ ಅವರ ಕಲಾಕೃತಿಗಳನ್ನು ಕೊಳ್ಳುವ ಮನಸ್ಸು ಮಾಡಿತು. ಅಕ್ಯಾಡೆಮಿಯ ಸನ್ಮಾನಕ್ಕೆ ಅವರು ದಿಲ್ಲಿಗಾಗಲೀ ಮತ್ತೆಲ್ಲಿ ಗಾಗಲೀ ಹೋಗುವ ಸ್ಥಿತಿಯಲ್ಲಿರಲಿಲ್ಲ. ದಿಲ್ಲಿಯಿಂದ ಅಧಿಕಾರಿಗಳು ಅವರ ಮನೆಗೇ ಬಂದು ಅವರು ಇದ್ದಲ್ಲಿಯೇ ಸನ್ಮಾನಿಸಿ ಹೋದರು. ರಾಜ್ಯಸರ್ಕಾರ ಅವರ ಕಲಾಕೃತಿಗಳನ್ನು ಕೊಂಡು ಇವರ ಹೆಸರಿನಲ್ಲಿ ಚಿತ್ರಕಲಾ ಸಂಗ್ರಹ ಶಾಲೆ (ಆರ್ಟ್ ಗ್ಯಾಲರಿ)ಯನ್ನು ವ್ಯವಸ್ಥೆ ಮಾಡಿದ್ದು ಅವರು ತೀರಿಕೊಂಡ ಮೇಲೆ. |
ಸರ್ಕಾರದ ಮತ್ತು ಜನಗಳ ದೃಷ್ಟಿಗೆ ಬಿದ್ದಮೇಲೆ ಅವರು ಬಹುದಿನ ಬಾಳಲಿಲ್ಲ. ಸನ್ಮಾನ ಸಮಾರಂಭಗಳ ಗದ್ದಲ ಮುಗಿದೊಡನೆ ತಮ್ಮ ಏಕಾಂತಕ್ಕೆ ಹಿಂತಿರುಗಿ, ಕೆಲ ತಿಂಗಳುಗಳು ತೀರ ಅಸ್ವಸ್ಥರಾಗಿದ್ದು ತೀರಿಕೊಂಡರು. |
ವೆಂಕಟ್ಪಪ್ಪ ಆರ್ಟ್ ಗ್ಯಾಲರಿ |
ಅವರ ಕಡೆಗಾಲದಲ್ಲಿ ಅವರನ್ನು ನೋಡಿ ಕೊಳ್ಳುತ್ತಿದ್ದವರು ಅವರ ತಂಗಿ ಮತ್ತು ಆಕೆಯ ಮಕ್ಕಳು ರಾಮರಾಜು. ಅವರು ತೀರಿಕೊಂಡ ಮೇಲೆ ಅವರ ಕಲಾಕೃತಿಗಳನ್ನೆಲ್ಲ ಎಚ್ಚರದಿಂದ ಕಾಯ್ದುಕೊಂಡು, ಸರ್ಕಾರ ದೊಂದಿಗೆ ವ್ಯವಹಾರ ನಡೆಸಿ, ಯೋಗ್ಯವಾದ ವ್ಯವಸ್ಥೆ ಆಗುವ ಭರವಸೆ ಮೂಡಿದೊಡನೆ, ಕಲಾಕೃತಿ ಗಳನ್ನೆಲ್ಲ ರಾಜ್ಯ ಸರ್ಕಾರದ ವಸ್ತು ಸಂಗ್ರಹಾಲಯದ ವಶಕ್ಕೆ ಒಪ್ಪಿಸಿ ದವರು ರಾಮರಾಜು. ಈಗ ವಸ್ತು ಸಂಗ್ರಹಾಲಯದ ಪಕ್ಕ ದಲ್ಲೇ ಬೇರೆ ಕಟ್ಟಡವೊಂದರಲ್ಲಿ 'ವೆಂಕಟಪ್ಪ ಆರ್ಟ್ ಗ್ಯಾಲರಿ'ಯನ್ನು ಸಜ್ಜುಗೊಳಿಸಲಾಗಿದೆ. ಅಲ್ಲಿ ವೆಂಕಟಪ್ಪ ನವರ ಪ್ಲಾಸ್ಟರ್ ಶಿಲ್ಪಫಲಕಗಳೂ, ಜಲವರ್ಣ ಚಿತ್ರಗಳೂ, ಅವರು ಬಳಸುತ್ತಿದ್ದ ವೀಣೆಗಳೂ, ಇತರ ಸ್ವಾರಸ್ಯವಾದ ಸ್ವತ್ತು ಗಳೂ ಅಂದವಾಗಿ ಅಣಿಮಾಡಲ್ಪಟ್ಟಿವೆ. |
ಪ್ಲಾಸ್ಟರ್ ಶಿಲ್ಪ ಫಲಕಗಳು ಉಬ್ಬು ಚಿತ್ರಗಳು, ಪ್ಲಾಸ್ಟರ್ ಆಫ್ ಪ್ಯಾರಿಸ್ ಎಂಬ ಬಿಳಿಮಣ್ಣಿನಿಂದ ಸಿದ್ಧ ಪಡಿಸಿದ ಹಲಗೆಯ ಮೇಲೆ ಸುಮಾರು ಎರಡಂಗುಲಕ್ಕೂ ಕಡಿಮೆ ಉಬ್ಬಿರುವಂತೆ ಹಲವು ದೃಶ್ಯಗಳನ್ನು ಕಡೆದಿರುವುದನ್ನು ಇಲ್ಲಿ ಕಾಣಬಹುದು. ಉಬ್ಬು ತೀರ ಲಘುವಾದುದರಿಂದ ನೆರಳು ಬೆಳಕುಗಳ ಚೆಲ್ಲಾಟ ದೃಶ್ಯಗಳ ಸೊಬಗನ್ನೂ ಸ್ವಾರಸ್ಯವನ್ನೂ ಸ್ಪಷ್ಟಪಡಿಸುತ್ತದೆ. ವೆಂಕಟಪ್ಪನ ವರು ಆರಿಸಿಕೊಂಡಿರುವ ಪ್ರಸಂಗಗಳು; ಶಕುಂತಲೆ ತನ್ನ ಸಾಕುತಂದೆಯಾದ ಕಣ್ವರಿಂದ ಆಶೀರ್ವಾದ ಪಡೆದು ಗಂಡನ ಮನೆಗೆ ಹೊರಡುತ್ತಿರುವುದು, ಏಕಲವ್ಯನು ದ್ರೋಣಾಚಾರ್ಯರ ಪ್ರತಿಕೃತಿಯನ್ನು ತಾನೇ ಮಾಡಿಟ್ಟುಕೊಂಡು ಅದರೆದುರು ತನ್ನ ಬಿಲ್ಲಾಟವನ್ನು ಅಭ್ಯಾಸಮಾಡುತ್ತಿರುವುದು, ಲೋಕವ್ಯವಹಾರವನ್ನು ತ್ಯಾಗಮಾಡಿ ಸಿದ್ಧಾರ್ಥನು ತನ್ನ ತಂದೆಯಾದ ಶುದ್ಧೋದನನ ಅರಮನೆಯಿಂದ ರಾತ್ರಿ ತನ್ನ ಕುದುರೆ ಕಂಥಕದ ಮೇಲೇರಿ ಹೊರಡುತ್ತಿರುವುದು, ದ್ರೋಣಾ ಚಾರ್ಯರು ಕೌರವ-ಪಾಂಡವ ಸೋದರರಿಗೆ ಧನುರ್ವಿದ್ಯೆ ಯನ್ನು ಕಲಿಸುತ್ತಿರುವುದು ಮತ್ತು ಶಿವನ ತಾಂಡವ ಇವು. ಈ ಪ್ರಸಂಗಗಳನ್ನೆಲ್ಲ ಮೂಲದಲ್ಲಿ ಅವರು ಆಳವಾಗಿ ಅಧ್ಯಯನ ಮಾಡಿ ಅದರ ವಿಚಾರವಾಗಿ ಚೆನ್ನಾಗಿ ಆಲೋಚನೆ ಮಾಡಿ, ಅಲ್ಲಿನ ಒಬ್ಬೊಬ್ಬ ವ್ಯಕ್ತಿಯ ಸ್ವಭಾವ ಮನೋಧರ್ಮಗಳು ಹೇಗಿರಬೇಕೆಂಬುದನ್ನು ಊಹಿಸಿ, ಅನಂತರ ಈ ಫಲಕಗಳಲ್ಲಿ ಕಡೆದಿದ್ದಾರೆ. ಸೂಕ್ಷ್ಮವಾದ ಕೈಕೆಲಸ, ಸ್ಪಷ್ಟವಾದ ಕೌಶಲ, ಅರ್ಥವತ್ತಾದ ವಿನ್ಯಾಸ ಇವು ಈ ಫಲಕಗಳಲ್ಲಿ ಎದ್ದು ಕಾಣುತ್ತವೆ. ವೆಂಕಟಪ್ಪನವರು ತುಂಬ ಕಷ್ಟದಿಂದ ಹಲವು ಕಾಲ ಹೆಣಗಾಡಿ, ಈ ಫಲಕಶಿಲ್ಪ, ವಿಧಾನಗಳನ್ನು ಗಟ್ಟಿ ಮಾಡಿಕೊಂಡಿದ್ದರು. |
ಜಲವರ್ಣ ಚಿತ್ರಗಳಲ್ಲಿ ನಿಸರ್ಗ ದೃಶ್ಯಗಳೇ ಹೆಚ್ಚು. ಅದೂ ನೀಲಗಿರಿ ಬೆಟ್ಟದ ಹಿನ್ನೆಲೆಯಲ್ಲಿ ಉದಕಮಂಡಲ, ಕೂನೂರುಗಳಲ್ಲಿ ಆರಿಸಿಕೊಂಡವು. ಈ ಪ್ರದೇಶಗಳಲ್ಲಿ ಅವರು ಸಾವಧಾನವಾಗಿ ತಂಗಿದ್ದು, ಪ್ರಕೃತಿಯ ರೂಪುರೇಷೆಗಳನ್ನು ಚೆನ್ನಾಗಿ ಗಮನಿಸಿ, ಸೂರ್ಯನು ಹುಟ್ಟುವಾಗ ಮುಳುಗುವಾಗ ಪ್ರಕೃತಿಯಲ್ಲಿ ಒದಗುವ ಮಾರ್ಪಾಟುಗಳನ್ನು ಅರಿತುಕೊಂಡು ಅಂಥ ನಿಸರ್ಗದಲ್ಲಿ ಸೇರಿಬಂದ ಮನೆಯ ಸೂರು, ಗಿಡಮರಗಳ ಸಾಲು, ಬೀದಿ ಮೊದಲಾದುವನ್ನು ಚಿತ್ರಿಸಿದ್ದಾರೆ. ಒಂದೊಂದು ಚಿತ್ರವೂ ಪ್ರಕೃತಿಯ ಒಂದೊಂದು ಮನೋಧರ್ಮವನ್ನು, ಒಂದೊಂದು ಪ್ರಕಾರವನ್ನು ಎತ್ತಿತೋರಿಸುತ್ತದೆ. ನಿಸರ್ಗಕ್ಕೆ ಈ ಚಿತ್ರಗಳು ಚಾಚೂ ತಪ್ಪದೆ ಒಪ್ಪವಾಗಿದ್ದರೂ ಈ ಚಿತ್ರಗಳಲ್ಲಿ ಏನೋ ಒಂದು ಅಲೌಕಿಕ ಕಳೆ ತುಂಬಿ ಬಂದಿದೆ. ಅವು ವಾಸ್ತವಿಕವೂ ಹೌದು, ಆಧ್ಯಾತ್ಮಿಕವೂ ಹೌದು, ಎನ್ನುವಂತಿವೆ. |
ಅವರೇ ಮಾಡಿದ ವೀಣೆ |
ವೀಣೆ ಅವರಿಗೆ ತುಂಬ ಪ್ರಿಯವಾದ ವಾದ್ಯವಷ್ಟೇ. ಆದರೆ ಸಾಮಾನ್ಯವಾಗಿ ಜನ ನುಡಿಸುವ ವೀಣೆ ಸಂಪ್ರದಾಯ ಶುದ್ಧವಾದುದಲ್ಲವೆಂದು ಅವರ ಹಠ. ಶಾಸ್ತ್ರದಲ್ಲಿ ಹೇಳಿರುವಂತೆ ತಾವೇ ಒಂದು ವೀಣೆಯನ್ನು ಸಿದ್ಧಪಡಿಸಿದರು. ಇದು ಸಾಮಾನ್ಯವಾಗಿ ಕಾಣಸಿಗುವ ವೀಣೆಗಿಂತ ದೊಡ್ಡದು, ಉದ್ದವಾದುದು. ಮೀಟಿದರೆ ಶುದ್ಧವಾದ ನಾದಸಂಪತ್ತಿನಿಂದ ಮೊರೆಯುತ್ತದೆ. ಈ ವೀಣೆಯನ್ನೂ ಆರ್ಟ್ ಗ್ಯಾಲರಿಯಲ್ಲಿಟ್ಟಿದ್ದಾರೆ. ಇದಕ್ಕೆ ವಿವರಣೆಗಳನ್ನೂ ಅವರು ಸಿದ್ಧಪಡಿಸಿದ್ದರು, ಇದೂ ಆ ವೀಣೆಯೊಂದಿಗಿದೆ. ಶ್ರುತಿಶುದ್ಧವಾಗಿ, ನಾದಸಂಪತ್ತಿನಿಂದ ತುಂಬಿದ ಈ ವಾದ್ಯ ನೋಡಲೂ ಸರ್ವಾಂಗಸುಂದರ ವಾಗಿದೆ. ವೀಣೆಯನ್ನು ಮಾಡುವಾಗ ಮರವನ್ನು ಆರಿಸಿ ಕೊಳ್ಳುವುದು, ಅದನ್ನು ಹದಮಾಡುವುದು, ಕುಂಭವನ್ನು ತೋಡುವುದು, ದೋಣಿಯನ್ನು ಕಡೆಯುವುದು, ಯಾಳಿಯ ಮುಖವನ್ನು ಮಾಡುವುದು, ಕುದುರೆಯನ್ನು ನಿಲ್ಲಿಸುವುದು ಹೀಗೆ ಒಂದೊಂದು ಹಂತದಲ್ಲಿಯೂ ಅವರ ಕೈವಾಡ, ಮೇಲ್ವಿಚಾರಣೆ ಇರುತ್ತಿದ್ದುವು. ಅವರು ಯಾವುದನ್ನು ಮಾಡಿದರೂ ಹೀಗೆಯೇ ಅಚ್ಚುಕಟ್ಟಾಗಿ ಮಾಡುವರು; ಎಚ್ಚರದಿಂದ ಮಾಡುವರು. |
ಕಲಾತಪಸ್ವಿ |
ವೆಂಕಟಪ್ಪನವರನ್ನು ತಿಳಿದವರು 'ಕಲಾತಪಸ್ಸಿ' ಯೆಂದು ಕರೆದರು. ಇದು ಸರಿಯಾದ ಹೆಸರು. ಅವರು ಬಾಳಿದ ರೀತಿಗೂ ತಳೆದ ನಿಲುವಿಗೂ ಒಪ್ಪುವಂಥದು. ಅವರ ಬದುಕಿನಲ್ಲಿ ಕಲೆಯೊಂದನ್ನು ಬಿಟ್ಟರೆ ಅವರಿಗೆ ಬೇರೆ ಯಾವ ಆಸಕ್ತಿಯೂ ಇರಲಿಲ್ಲ. ಆದರೆ ಕಲೆಯನ್ನು ಅವರು ಲೌಕಿಕ ವ್ಯವಹಾರಕ್ಕೆ ದಾರಿಯೆಂದಾಗಲೀ ಹಣ ಸಂಪಾದಿಸುವುದಕ್ಕೆ ಸಾಧನವೆಂದಾಗಲೀ ಎಂದೂ ಎಣಿಸಿ ರಲಿಲ್ಲ. ದಿಟವಾಗಿ ಅವರು ಹಣಕ್ಕಾಗಿ ಅಥವಾ ಹೆಸರಿಗಾಗಿ ಎಂದೂ ಏನನ್ನೂ ಮಾಡಿದವರಲ್ಲ. ಕೆಲವು ಆದರ್ಶಗಳನ್ನು ತಮ್ಮೆದುರು ಇರಿಸಿಕೊಂಡು ಅವನ್ನು ಮುಟ್ಟಲು ಬದುಕಿನುದ್ದಕ್ಕೂ ಶ್ರಮಿಸಿದರು; ತಮಗೆ ತಾವೇ ಹಲವು ಬಗೆಯ ಕಟ್ಟುಪಾಡುಗಳನ್ನು ಏರ್ಪಾಟು ಮಾಡಿಕೊಂಡು ತಾವು ದಾರಿ ತಪ್ಪದಂತೆ ನೊಡಿಕೊಂಡರು. ಅವರು ಅನುಸರಿಸುತ್ತಿದ್ದ ನಿಯಮಗಳು ತುಂಬ ಕಠಿಣವಾದುವು ಎಂದು ಜನರು ಭಾವಿಸಿದ್ದರು. ಆದರೆ ಬೇಡವಾದ ಜನರನ್ನು ದೂರವಿರಿಸಲು ಅದೊಂದೇ ಮಾರ್ಗ ಎಂದು ಅವರ ನಂಬಿಕೆ. ನಿಯಮವನ್ನರಿಯದ ಜನ, ಬೇಕಾದಂತೆ ಬಾಳುವ ಕೀಳುಮಟ್ಟದ ಜನ ತಮ್ಮ ನಿಯಮಗಳಿಗೆ ಅಂಜಿ ತಮ್ಮ ಬಳಿ ಬರುವುದಿಲ್ಲ, ತಮ್ಮ ವೇಳೆಯನ್ನು ಹಾಳು ಮಾಡುವುದಿಲ್ಲ, ತಮ್ಮ ಕೆಲಸಕ್ಕೆ ಕಂಟಕರಾಗುವುದಿಲ್ಲ ಎಂದು ವೆಂಕಟಪ್ಪನವರು ಹೇಳುತ್ತಿದ್ದರು. |
ಕೆಲವೊಮ್ಮೆ ಈ ನಿಯಮಗಳನ್ನು ಅತಿರೇಕ ವೆಂಬಂತೆ ಅನುಸರಿಸುತ್ತಿದ್ದರು. ಒಂದು ನಿದರ್ಶನ ಸ್ವಾರಸ್ಯ ವಾದುದು. ಇವರು 'ಅಂಗುಲಿಪ್ರದಾನ' ಎಂಬ ಪ್ಲಾಸ್ಟರ್ ಶಿಲ್ಪಫಲಕವೊಂದನ್ನು ಸಿದ್ಧಪಡಿಸಿದ್ದರು. ರಾಮನ ಉಂಗುರ ವನ್ನು ಅವನ ಬಂಟ ಹನುಮಂತನು ಸೀತಾದೇವಿಗೆ ಅಶೋಕವನದಲ್ಲಿ ಕೊಡುತ್ತಿರುವ ಪ್ರಸಂಗ ಇದರಲ್ಲಿ ಚಿತ್ರಿತವಾಗಿದ್ದಿತು. ಅದರ ಛಾಯಾಚಿತ್ರವೊಂದನ್ನು ಬಂಗಾಳಿಯ 'ಉದ್ಭೋಧನ' ಎಂಬ ಪತ್ರಿಕೆ ತನ್ನ ಒಂದು ಸಂಚಿಕೆಯಲ್ಲಿ ಅಚ್ಚು ಮಾಡಿತು. ಅಚ್ಚಾದ ಮೇಲೆ ಈ ಚಿತ್ರ ತಿರುಗುಮುರುಗಾಗಿ ಕಾಣುತ್ತಿತ್ತು. ಹನುಮಂತನು ಉಂಗುರ ವನ್ನು ಎಡಗೈಯಿಂದ ಕೊಡುತ್ತಿರುವಂತೆ, ಸೀತಾದೇವಿ ಅದನ್ನು ಎಡಗೈಯಿಂದಲೇ ತೆಗೆದು ಕೊಳ್ಳುತ್ತಿರುವಂತೆ ಕಾಣುತ್ತಿತ್ತು. ವೆಂಕಟಪ್ಪನವರ ಗಮನಕ್ಕೆ ಈ ಪ್ರಕಟಣೆ ಬಂದೊಡನೆ ಸಿಟ್ಟಾದರು. 'ಇದೇನು ಈ ಪತ್ರಿಕೆಯ ಸಂಪಾದಕರಿಗೆ ಸಭ್ಯತೆಯ ಗಂಧವೇ ಇಲ್ಲವಲ್ಲ! ಚಿತ್ರವನ್ನು ಪ್ರಕಟಣೆಗೆ ಬಯಲುಮಾಡುವ ಮೊದಲು ಅದು ಕಲಾವಿದ ನಿರೂಪಿಸಿದಂತೆಯೇ ಇದೆಯೋ ಹೇಗೆ ಎಂಬುದನ್ನು ಗಮನಿಸಬೇಡವೆ? ಯಾರಾದರೂ ಎಡಗೈಯಿಂದ ರಾಮನ ಉಂಗುರವನ್ನು ಕೊಡುವುದುಂಟೆ ಸೀತಾದೇವಿಯಾದರೂ ಅದನ್ನು ಎಡಗೈಯಿಂದ ತೆಗೆದುಕೊಳ್ಳುವಳೇ? ಭಾರತೀಯ ಸಭ್ಯತೆಯಲ್ಲಿ ಇದು ಅನುಚಿತವೆಂಬುದು ಸಂಪಾದಕರಿಗೆ ತಿಳಿಯದೆ?' ಹೀಗೆ ದುಗುಡದಿಂದ ಸಂಪಾದಕರಿಗೆ ಪತ್ರ ವೊಂದನ್ನು ಬರೆದರು, 'ನಿಮ್ಮ ತಪ್ಪಿತವನ್ನು ತಿದ್ದಿಕೊಳ್ಳಿ, ಓದುಗರ ಕ್ಷಮೆ ಬೇಡಿ' ಎಂದು ಸೂಚಿಸಿದರು. |
ಸಂಪಾದಕರು ವೆಂಕಟಪ್ಪನವರ ಪತ್ರವನ್ನು ಗಣನೆಗೆ ತಂದುಕೊಳ್ಳಲಿಲ್ಲ. ಮುಂದಿನ ಸಂಚಿಕೆಯಲ್ಲಿ ತಪ್ಪನ್ನು ಒಪ್ಪಿಕೊಳ್ಳಲೂ ಇಲ್ಲ, ಸರಿಯಾದ ಚಿತ್ರವನ್ನು ಅಚ್ಚು ಮಾಡಲೂ ಇಲ್ಲ. ವೆಂಕಟಪ್ಪನವರು ಇನ್ನೂ ಸಿಟ್ಟಿಗೆದ್ದು, ಇದರಿಂದ ಕಲಾವಿದನಿಗೆ ಅಪಮಾನವಾಗಿದೆ ಯೆಂದೂ ತಮ್ಮ ಚಿತ್ರವನ್ನು ಜನರು ಮೂದಲಿಸುವಂತೆ ಅಚ್ಚು ಮಾಡಿದ್ದಾರೆಂದೂ ಪತ್ರಿಕೆಯ ಸಂಪಾದಕರ ಮೇಲೆ ನ್ಯಾಯಾಲಯದಲ್ಲಿ ತಕರಾರು ಹೂಡಿದರು. ವಿಚಾರಣೆ ನಡೆದು ನ್ಯಾಯಾಲಯವು ವೆಂಕಟಪ್ಪನವರ ವಾದವನ್ನು ಎತ್ತಿಹಿಡಿದು, ಅವರಿಗಾದ ನಷ್ಟವನ್ನು ತುಂಬಿಕೊಡಲು, ಎಂದರೆ ಎರಡು ಸಾವಿರದ ಐನೂರು ರೂಪಾಯಿಗಳನ್ನು ವೆಂಕಟಪ್ಪನವರಿಗೆ ಕೊಡಲು, ಸಂಪಾದಕರಿಗೆ ಅಪ್ಪಣೆ ಮಾಡಿತು. ಪತ್ರಿಕೆಯ ಸಂಪಾದಕರು, ಅಷ್ಟು ಹಣವನ್ನು ಕೊಡಲು ಬಂದಾಗ, ವೆಂಕಟಪ್ಪನವರು, 'ನನಗೆ ನಿಮ್ಮ ಹಣಬೇಡ; ಹಣಕ್ಕಾಗಿ ನಾನು ವ್ಯವಹಾರ ತೆಗೆಯಲಿಲ್ಲ. ನ್ಯಾಯ ನನ್ನ ಕಡೆ ಇದೆಯೆಂದೂ, ತಪ್ಪು ನಿಮ್ಮದೆಂದೂ ನಿಮಗೆ ತಿಳಿದರೆ ಸಾಕು' ಎಂದುಬಿಟ್ಟರು. |
ವೆಂಕಟಪ್ಪನವರ ನ್ಯಾಯನಿಷ್ಠುರತೆಯ ನಿದರ್ಶನ ಇದು. ತಪ್ಪೆಂದು ತಮಗೆ ಅನಿಸಿದುದನ್ನು ಅದರಿಂದ ತಮಗೆ ಎಷ್ಟೇ ತೊಂದರೆಯಾದರೂ ಮಾಡರು; ತಮ್ಮ ವಿಚಾರವಾಗಿ ತಪ್ಪನ್ನು ಬೇರೆಯವರಲ್ಲಿ ಸಹಿಸರು. ತಾವಾಗಿ ಯಾರನ್ನೂ ಟೀಕಿಸರು, ನಿಂದಿಸರು; 'ಅವರ ಪಾಡು, ನನಗೇಕೆ?' ಎಂದು ಸುಮ್ಮನಿರುವರು. ಆದರೆ ತಮಗೆ ಸಂಬಂಧಿಸಿದಂತೆ ಯಾರಾದರೂ ಸರಿಯಾಗಿ ನಡೆದು ಕೊಳ್ಳದಿದ್ದರೆ ಸುಮ್ಮನೆ ಬಿಡುವವರಲ್ಲ ಈ ಸಂದರ್ಭದಲ್ಲಿ ಇವರು ರಾಜರು, ಇವರು ಶ್ರೀಮಂತರು, ಇವರು ಅಧಿಕಾರಿ ಗಳು, ಇವರು ಸಾಮಾನ್ಯರು ಎಂಬ ಭೇದವೇ ಇಲ್ಲ; ಯಾರಾದರೂ ಇವರಿಗೆ ಸಮನೇ! ಅರಮನೆಯ ಮೇಲೇ ತಕರಾರು ಹೂಡಿದುದನ್ನು ಹಿಂದೆ ಹೇಳಿದೆ. |
ವೈಯಕ್ತಿಕವಾಗಿ ಅವರು ಯಾರಿಂದಲೂ ಏನನ್ನೂ ಬಯಸುತ್ತಿರಲಿಲ್ಲವಾದುದರಿಂದ, ತಮ್ಮ ವಿಚಾರ ವಾಗಿ ಏನಾದರೂ ಅಪಚಾರ ನಡೆದರೆ ಅದು ಕಲೆಗೆ ಅಪಚಾರವೆಂದೇ ಅವರು ಬಗೆಯುತ್ತಿದ್ದರು. ಅದನ್ನು ಅವರು ಎಷ್ಟು ಮಾತ್ರವೂ ಸಹಿಸುತ್ತಿರಲಿಲ್ಲ. ಕಲೆ ಅವರ ಪಾಲಿನ ದೇವತೆ; ಅವರ ಸರ್ವಸ್ವ. ತಾವು ಬದುಕಿನುದ್ದಕ್ಕೂ ಕಲೆಯ ವಿದ್ಯಾರ್ಥಿ, ಕಲಾಸಾಧಕ ಎಂದೇ ನಂಬಿದ್ದರು. ಅವರು ತಮ್ಮನ್ನು ತಾವು ಪತ್ರವ್ಯವಹಾರಗಳಲ್ಲಿ ಕರೆದು ಕೊಳ್ಳುತ್ತಿದ್ದುದೂ 'ಆರ್ಟ್ ಸ್ಟೂಡೆಂಟ್' ಎಂದೇ. |
ಕಲೆಯನ್ನು ಯಾವ ಅಡ್ಡಿ ಆತಂಕವೂ ಇಲ್ಲದಂತೆ ಅಭ್ಯಾಸ ಮಾಡಲೆಂದೇ ಅವರು ಒಂಟಿಯಾಗಿ ಉಳಿದರು; ನೆಂಟರನ್ನೂ ದೂರ ಮಾಡಿದರು; ಜನರನ್ನು ಹತ್ತಿರ ಸೇರಿಸಲಿಲ್ಲ. ತಪಸ್ಸಿಗೆ ಬೇಕಾದ ಏಕಾಂತವಾಸ, ಏಕಾಗ್ರಚಿತ್ತ, ಎಡೆಬಿಡದ ಅಭ್ಯಾಸ ಇವನ್ನು ಅವರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡರು. ಹಾಗೆಂದೇ ಅವರಿಗೆ 'ಕಲಾತಪಸ್ವಿ' ಎನ್ನುವುದು ಸಾರ್ಥಕವಾದ ಹೆಸರಾಯಿತು. |
ಶಿಕ್ಷಣದ ಕಷ್ಟ |
ಕಲೆಯನ್ನು ಅವರು ತಪಸ್ಸಿನಂತೆ ಬಗೆದುದರಿಂದ ಕಲೆಯ ಅಭ್ಯಾಸ ಸಡಿಲವಾಗಿರಬಾರದು, ಕ್ರಮವಿಲ್ಲದಿರ ಬಾರದು ಎಂದು ಅವರ ಹಠ. ಕಲೆಯನ್ನು ಕಲಿಯುವುದು ಕಷ್ಟವೆಂದೂ, ನಿಷ್ಠೆಯಿಲ್ಲದಿದ್ದರೆ ಅದು ದಕ್ಕುವುದಿಲ್ಲವೆಂದೂ ಅವರು ಮತ್ತೆ ಮತ್ತೆ ಹೇಳುತ್ತಿದ್ದರು. ಸಂಪ್ರದಾಯದಲ್ಲಿ ಶ್ರದ್ಧೆಯಿಲ್ಲದಿದ್ದರೆ ಕಲೆಗೆ ಅರ್ಥವಿಲ್ಲವೆಂದು ಅವರ ವಾದ. |
ಅವರು ಏಕಾಂಗಿಯಾಗಿ, ನಿಷ್ಠುರರಾಗಿ ಇರುತ್ತಿದ್ದರೆಂದ ಮಾತ್ರಕ್ಕೆ ಅವರು ಕಲೆಯನ್ನು ಯಾರಿಗೂ ಕಲಿಸಬಾರದೆಂದು ನೆನೆಸಿರಲಿಲ್ಲ. ಯಾರಿಗಾದರೂ ಚಿತ್ರಕಲೆ ಯನ್ನು ಹೇಳಿಕೊಡಲು ಸಿದ್ಧರಾಗಿದ್ದರು. ದಿಟವಾಗಿ, ಅಂಥ ವಿದ್ಯಾರ್ಥಿಗಳು ಯಾರಾದರೂ ಬಂದಾರೋ ಎಂದು ಎದುರು ನೋಡುತ್ತಿದ್ದರು. ವಿದ್ಯಾರ್ಥಿಗಳಿಂದ ಅವರು ಹಣ ವನ್ನು ಬಯಸುತ್ತಿರಲಿಲ್ಲ. ಕಲೆಯನ್ನು ಕಲಿಯುವವರಿಗೆ ಮಾರಲಾರೆ ಎನ್ನುತ್ತಿದ್ದರು. ಅವರು ತೆರೆಯಬೇಕೆಂದಿದ್ದ ಕಲಾಶಾಲೆಯಲ್ಲಿ ವಿದ್ಯಾರ್ಥಿ ಯಾವ ಬಗೆಯ ಶುಲ್ಕವನ್ನೂ ತೆರಬೇಕಾದ ಅಗತ್ಯವಿಲ್ಲದಂತೆ ವ್ಯವಸ್ಥೆ ಮಾಡಿದ್ದರು. ಕಲಾಶಿಕ್ಷಣ ಉಚಿತವಾಗಿಯೇ ಇರಬೇಕು ಎಂದು ಅವರ ತವಕ. |
ಹೀಗಾದರೂ ವಿದ್ಯಾರ್ಥಿಗಳೇಕೆ ಅವರ ಸುತ್ತ ನೆರೆಯಲಿಲ್ಲ? ಅದಕ್ಕೆ ಕಾರಣ, ಅವರ ಶಿಕ್ಷಣವಿಧಾನದ ನಿಷ್ಠುರತೆ. ಯಾರಾಗಲೀ ಅವರಲ್ಲಿ ಕಲಿಯಬೇಕೆಂದರೆ ಗೆರೆ ಎಳೆಯುವುದರಿಂದ ಆರಂಭಿಸಬೇಕು, ಅವರು ಹಾಕಿದ ದಾರಿಯಲ್ಲೇ ಇಷ್ಟೂ ತಪ್ಪದೆ ಸಾಗಬೇಕು. 'ಕಲೆಯ ಗುಟ್ಟು ಬೇಗನೆ ಕೈಗೂಡಲಿ,' 'ಕಲಿತದ್ದನ್ನು ಗಳಿಕೆಗೆ ಬಳಸು ವಂತಾಗಲಿ' ಎಂದು ಮೊದಲಾಗಿ ಆಲೋಚನೆ ಮಾಡಿದರೆ ಕಲೆಯ ಸಿದ್ಧಿ ತುಂಬ ದೂರವೇ. ವಿದ್ಯಾರ್ಥಿಗಳು ಎಷ್ಟೇ ಪ್ರೌಢರಾಗಿರಲಿ, ಮೊದಲು ಎಷ್ಟೇ ಅಭ್ಯಾಸ ಮಾಡಿರಲಿ, ಕೈ ಎಷ್ಟೇ ಕುದುರಿರಲಿ, ವೆಂಕಟಪ್ಪನವರ ಬಳಿ ಬಂದರೆ ನೀಟಾಗಿ ಗೆರೆ ಎಳೆಯುವುದರಿಂದಲೇ ಶುರುಮಾಡಬೇಕು. ಅವರ ದಾರಿಯಲ್ಲಿ ಸುಲಭ, ಶೀಘ್ರ ಎಂಬ ಮಾತುಗಳಿಲ್ಲ. |
ತಾವು ಕಲಿತಂತೆಯೇ, ಅಷ್ಟೇ ನಿಷ್ಠೆಯಿಂದ ಅಷ್ಟೇ ಕಷ್ಟಪಟ್ಟು, ಇತರರೂ ಕಲಿಯಲಿ ಎಂದು ಅವರ ಹಂಬಲ. ತಮ್ಮ ಬಳಿ ಬಂದು ಯಾರೂ ಕಲಿಯುವುದಿಲ್ಲವೆಂಬ ದುಗುಡವೂ ಅವರಿಗೆ ಇರಲಿಲ್ಲ. 'ನಿಷ್ಠೆಯಾಗಲೀ ಆದರ ವಾಗಲೀ ಇಲ್ಲದ ಜನ ಕಲೆಯನ್ನು ಕಲಿಯದಿದ್ದರೆ ಯಾರಿಗೂ ನಷ್ಟವಿಲ್ಲ; ಕಲೆಯನ್ನು ಪೋಲು ಮಾಡಲಾರೆ' ಎಂದು ಅವರು ಸಮಾಧಾನದಿಂದಿದ್ದರು. ಕಲಿಯುವು ದಾದರೆ ಸರಿಯಾಗಿ, ಕ್ರಮಬದ್ಧವಾಗಿ, ಬೇರೆ ಯಾವ ವ್ಯಸನವೂ ಇಲ್ಲದೆ ಕಲಿಯಬೇಕು; ಹಾಗಲ್ಲವಾದರೆ, ಕಲಿಯುವುದೇ ಬೇಡ. ಇದು ಅವರ ದೃಷ್ಟಿ. |
ಅವರ ಬಳಿ ಒಬ್ಬ ವಿದ್ಯಾರ್ಥಿಯೂ ಬರಲೇ ಇಲ್ಲ ವೆಂದಲ್ಲ, ಕೆಲವರು ಬಂದು ಅವರ ದಾರಿಯಲ್ಲಿ ಸಾಗಲು ಯತ್ನಿಸಿ ಸಾಗದೆ ಕೈಬಿಟ್ಟರು. ಮತ್ತೆ ಕೆಲವರು ಉತ್ಸಾಹ ದಿಂದ ಬಂದು ಅವರ ನಿಯಮಗಳಿಗೆ ಬೆಚ್ಚಿಬಿದ್ದು ಹಿಂದಕ್ಕೆ ಸರಿದರು. ಒಬ್ಬ ವಿದ್ಯಾರ್ಥಿ ಮಾತ್ರ ಅವರಂತೆಯೇ ನಿಷ್ಠೆ ಯಿಂದ, ನಿಯಮದಿಂದ ಕೆಲವು ವರ್ಷಗಳ ಕಾಲ ಅವರಲ್ಲಿ ಶಿಷ್ಯವೃತ್ತಿ ಮಾಡಿದ. ಅವನು ತೆಲುಗು ದೇಶದ ರಾಮಮೋಹನ ಶಾಸ್ತ್ರಿ ಎಂಬಾತ. ಆದರೆ ಪ್ರತಿಭಾ ಶಾಲಿ ಯಾದ ಈತನು ಪ್ರಸಿದ್ಧನಾಗುತ್ತಿರುವಾಗ, ನಡು ವಯಸ್ಸಿನಲ್ಲೇ ತೀರಿಕೊಂಡ! |
ಸಂತೋಷಕ್ಕಾಗಿ ವೀಣಾವಾದನ |
ಚಿತ್ರಕಲೆಯನ್ನು ಕಲಿಸಲು ಅವರು ಸಿದ್ಧರಾಗಿ ದ್ದರೂ ವೀಣೆಯ ನುಡಿಸಾಣಿಕೆಯನ್ನು ಯಾರಿಗೂ ಕಲಿಸಲು ಒಪ್ಪಲಿಲ್ಲ. ವೈಣಿಕ ಶಿಖಾಮಣಿ ಶೇಷಣ್ಣನವರ ಅಚ್ಚುಮೆಚ್ಚಿನ ಶಿಷ್ಯನೆಂದ ಮೇಲೆ ಅವರ ಪ್ರೌಢಿಮೆಯ ಬಗ್ಗೆ ಹೇಳಬೇಕೆ? ಶೇಷಣ್ಣನವರು ಬದುಕಿದ್ದಾಗ ಆಗಾಗ ಕೆಲವರು ಶಿಷ್ಯರಿಗೆ ವೆಂಕಟಪ್ಪನೇ ಹೇಳಿಕೊಡಲಿ ಎಂದು ಅಪ್ಪಣೆ ಮಾಡುತ್ತಿದ್ದರು. ಅಂಥ ಸಂದರ್ಭಗಳನ್ನು ಬಿಟ್ಟರೆ ಅವರು ವೀಣಾವಾದನವನ್ನು ಯಾರಿಗೂ ಹೇಳಿಕೊಡಲಿಲ್ಲ. ಅದನ್ನು ತಮ್ಮ ಸ್ವಂತ ಸಂತೋಷಕ್ಕಾಗಿಯೇ ಮೀಸಲಾಗಿರಿಸಿ ಕೊಂಡಿದ್ದರು. ಸಭೆಗಳಲ್ಲಿಯೂ ನುಡಿಸುತ್ತಿರಲಿಲ್ಲ. ಯಾರಾದರೂ ರಸಿಕರು ತುಂಬ ಇಷ್ಟಪಟ್ಟರೆ ರಾತ್ರಿ ಊರೆಲ್ಲ ಮಲಗಿದ ಮೇಲೆ ಅವರೆದುರು ಕೆಲವು ಗಂಟೆಗಳ ಕಾಲ ನುಡಿಸುತ್ತಿದ್ದರು. ಅದನ್ನು ಕೇಳಿದವರೇ ಧನ್ಯರು ಎಂದು ಬೇರೆ ಹೇಳಬೇಕೆ? ಅಂಥ ಧನ್ಯರು ತೀರ ವಿರಳರು ಎಂದೂ ಒತ್ತಿ ಹೇಳಬೇಕಾಗಿಲ್ಲ! |
ಅವರ ಆದರ್ಶ |
ಒಟ್ಟಿನಲ್ಲಿ, ವೆಂಕಟಪ್ಪನವರ ಬದುಕಿನ ತಾತ್ಪರ್ಯ ವೇನು? ಕಲೆಗಾಗಿಯೇ ಮುಡಿಪಿಟ್ಟ ಬದುಕು ಅವರದ್ದು. ಚಿತ್ರ, ಶಿಲ್ಪ, ಸಂಗೀತ ಮೂರೂ ಪ್ರಕಾರಗಳಲ್ಲಿ ಅವರು ಪಡೆದಿದ್ದ ಸಿದ್ಧಿ ಯಾರನ್ನಾದರೂ ಬೆರಗು ಮಾಡುವಂಥದು. ಕಲೆಯೆಂದರೆ ಖುಷಿಗೆ ಸಾಧನ ಎಂದು ಕಲ್ಪನೆಯಿರುವ ಕಾಲದಲ್ಲಿ ಕಲೆಯೆನ್ನುವುದು ತಪಸ್ಸು ಎಂದು ತೋರಿಸಿ ಕೊಟ್ಟವರು ಅವರು. ಬಾಳುವೆಯಲ್ಲಿ ನಿಯಮ ವಿಲ್ಲದೆ ಯಾವ ಸಿದ್ಧಿಯನ್ನೂ ಪಡೆಯುವುದು ಸಾಧ್ಯವಿಲ್ಲ ಎಂದು ಅವರ ಸಂದೇಶ. ಕಾಲದ ನಿಯಮ, ಅಭ್ಯಾಸದ ನಿಯಮ, ಆಹಾರ ವಿಹಾರಗಳ ನಿಯಮ, ವ್ಯವಹಾರದ ನಿಯಮ ಎಲ್ಲವೂ ಕಲೆತರೆ ಬದುಕಿಗೆ ಗುರಿಯೊಂದು ಕಾಣಿಸಿ ಕೊಳ್ಳುತ್ತದೆ. ಹೀಗೆ ಗುರಿ ಕಾಣಿಸಿಕೊಳ್ಳದಿದ್ದರೆ ಬದುಕಿಗೆ ಅರ್ಥವೇನು? |
ವೆಂಕಟಪ್ಪನವರು ಬದುಕಿದ ಬಗೆ, ಅವರು ತಮ್ಮ ವೃತ್ತಿಯಲ್ಲಿ ಗಳಿಸಿದ ಯಶಸ್ಸು, ತಮ್ಮ ಸಾಧನೆಗಳಲ್ಲಿ ಪಡೆದ ಜಯ, ತಮ್ಮ ಬಾಳಿನಿಂದ ಕಂಡುಕೊಂಡ ಸಮಾಧಾನ ಇವೆಲ್ಲಕ್ಕೂ ಅವರ ವ್ರತನಿಷ್ಠೆಯೇ ಅಡಿಗಲ್ಲು. ಯಾವುದೋ ಒಂದು ಆದರ್ಶವನ್ನು ಹಿಡಿದು ಅದಕ್ಕಾಗಿ ತಮ್ಮ ಇಡೀ ಜೀವನವನ್ನೇ ಸವೆಸಿದರು. ಜಗತ್ತಿನಲ್ಲಿ ಇಂಥ ಆದರ್ಶವೇ ಕಾಪಾಡುವುದು; ಆದರ್ಶವನ್ನು ಹಿಡಿದು ನಡೆಯುವವರೇ ಇತರರಿಗೆ ದಾರಿದೀಪವಾಗುವರು. |
ರಾಸ್ ವಿಡಿಯೋ ಸ್ವಾಧೀನ ಸಂಖ್ಯೆ ಹದಿನಾರು ಮಾಡುತ್ತದೆ - ಚಿತ್ರ ವಿಡಿಯೋ | NAB ಸುದ್ದಿ ತೋರಿಸಿ | 2020 ಎನ್ಎಬಿ ಶೋ ಮೀಡಿಯಾ ಪಾಲುದಾರ ಮತ್ತು ಎನ್ಎಬಿ ಶೋ ಲೈವ್ನ ನಿರ್ಮಾಪಕ. ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಸುದ್ದಿ |
ಮುಖಪುಟ » ಒಳಗೊಂಡಿತ್ತು » ರಾಸ್ ವಿಡಿಯೋ ಸ್ವಾಧೀನ ಸಂಖ್ಯೆ ಹದಿನಾರು ಮಾಡುತ್ತದೆ - ಚಿತ್ರ ವಿಡಿಯೋ |
ರಾಸ್ ವಿಡಿಯೋ ಟೊರೊಂಟೊ ಮೂಲದ ಇಮೇಜ್ ವೀಡಿಯೊವನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಘೋಷಿಸಲು ಸಂತೋಷವಾಗಿದೆ. ಇಮೇಜ್ ವಿಡಿಯೋವನ್ನು 1974 ರಲ್ಲಿ ಸ್ಥಾಪಿಸಲಾಯಿತು - ಅದೇ ವರ್ಷ ರಾಸ್ - ಮತ್ತು ಅದರ ಟಿಎಸ್ಐ ಟ್ಯಾಲಿ ಕಂಟ್ರೋಲ್ ಪ್ಲಾಟ್ಫಾರ್ಮ್ಗೆ ಹೆಸರುವಾಸಿಯಾಗಿದೆ, ಇದನ್ನು ಪ್ರಮುಖ ಪ್ರಸಾರ ನೆಟ್ವರ್ಕ್ ಪೂರೈಕೆದಾರರು, ಕ್ರೀಡಾ ಸ್ಥಳಗಳು, ಕಾರ್ಪೊರೇಟ್ ವೀಡಿಯೊ ಸೌಲಭ್ಯಗಳು ಮತ್ತು ಪೂಜಾ ಮನೆಗಳು ಬಳಸುತ್ತವೆ. ಇಪ್ಪತ್ತೊಂಬತ್ತು ದೇಶಗಳಲ್ಲಿನ ಮಾರಾಟ, ಪ್ರಭಾವಶಾಲಿ ಗ್ರಾಹಕರ ಸಂಖ್ಯೆ ಮತ್ತು ನೂರಾರು ಬೆಂಬಲಿತ ಸಾಧನ ಪ್ರೋಟೋಕಾಲ್ಗಳು (ಪರಂಪರೆ ಸರಣಿ ಸಂಪರ್ಕಗಳಿಂದ ಹಿಡಿದು ಇತ್ತೀಚಿನ ಎಸ್ಟಿ 2110 ವರ್ಕ್ಫ್ಲೋಗಳವರೆಗೆ), ಟಿಎಸ್ಐ ಪ್ಲಾಟ್ಫಾರ್ಮ್ ಟ್ಯಾಲಿ ಮತ್ತು ಯುಎಂಡಿ ಉತ್ಪನ್ನ ವರ್ಗದಲ್ಲಿ ಮುಂಚೂಣಿಯಲ್ಲಿದೆ. |
ಈ ಸ್ವಾಧೀನ - ರಾಸ್ ವಿಡಿಯೋ2009 ರಿಂದ ಹದಿನಾರನೇಯದು - ach ಾಕ್ ವಿಲ್ಕಿ ಮತ್ತು ಡೇವಿಡ್ ರಸ್ಸೆಲ್ ನೇತೃತ್ವದ ಇಮೇಜ್ ವಿಡಿಯೋ ಉತ್ಪನ್ನ ತಂಡವನ್ನು ಅವರ ಆರ್ & ಡಿ ಮತ್ತು ತಾಂತ್ರಿಕ ಬೆಂಬಲ ತಂಡಗಳೊಂದಿಗೆ ರಾಸ್ಗೆ ಪರಿವರ್ತನೆಗೊಳ್ಳುತ್ತದೆ. Ach ಾಕ್ ವಿಲ್ಕಿ ಈಗ ಉತ್ಪನ್ನ ವ್ಯವಸ್ಥಾಪಕ, ರಾಸ್ ಟ್ಯಾಲಿ ಸಿಸ್ಟಮ್ಸ್, ಭಾಗವಾಗಿ ಜೀವನದ ನಿರೀಕ್ಷೆಯಲ್ಲಿ ಉತ್ಸುಕರಾಗಿದ್ದಾರೆ ರಾಸ್ ವಿಡಿಯೋ. "ಅದೇ ವರ್ಷದಲ್ಲಿ ಸ್ಥಾಪಿಸಲಾದ ಸಹ ಕೆನಡಾದ ಕಂಪನಿಯಾಗಿ, ನಾವು ಸ್ಪಷ್ಟವಾಗಿ ಬೆಳೆದಿದ್ದೇವೆ ರಾಸ್ ವಿಡಿಯೋ ಮತ್ತು ರಾಸ್ ವ್ಯವಹಾರದ ಪ್ರಭಾವಶಾಲಿ ಬೆಳವಣಿಗೆ ಮತ್ತು ವಿಸ್ತರಣೆಯನ್ನು ನಾವು ನೋಡಿದ್ದೇವೆ, ವಿಶೇಷವಾಗಿ ಕಳೆದ ದಶಕದಲ್ಲಿ. ಕುಟುಂಬದ ಭಾಗವಾಗಲು ನಮಗೆ ತುಂಬಾ ಸಂತೋಷವಾಗಿದೆ ಮತ್ತು ಈ ಸ್ವಾಧೀನವು ಹೊಸ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಅಳೆಯಲು ನಮಗೆ ಸಹಾಯ ಮಾಡುತ್ತದೆ. " |
ಸಿಇಒ ಡೇವಿಡ್ ರಾಸ್, ಸ್ವಾಧೀನದ ವೈಯಕ್ತಿಕ ಮಹತ್ವವನ್ನು ಪ್ರತಿಬಿಂಬಿಸುತ್ತದೆ. "1973 ರಲ್ಲಿ, ನನ್ನ ತಂದೆ ಕಾಲು ಮುರಿದ ನಂತರ ಆಸ್ಪತ್ರೆಯಲ್ಲಿದ್ದರು. ಲೀಚ್ ವೀಡಿಯೊದ ಸಂಸ್ಥಾಪಕ ಜಿಮ್ ಲೀಚ್ (ಈಗ ಕಮ್ಯುನಿಕೇಷನ್ಸ್ ಇಮ್ಯಾಜಿನ್) ಭೇಟಿ ನೀಡಿ ನನ್ನ ತಂದೆಗೆ ಸ್ವಂತ ಕಂಪನಿಯನ್ನು ಪ್ರಾರಂಭಿಸಲು ಸಲಹೆ ನೀಡಿದರು. ಕೆನಡಾದಲ್ಲಿ ಲೀಚ್ ವಿಡಿಯೋ ಮತ್ತು ಇಮೇಜ್ ವಿಡಿಯೋ ಇದೆ, ಆದ್ದರಿಂದ ಎ ಕೂಡ ಇರಬೇಕು ಎಂದು ಹೇಳಿದರು ರಾಸ್ ವಿಡಿಯೋ. ಇಮೇಜ್ ವಿಡಿಯೋ ಅಸ್ತಿತ್ವದಲ್ಲಿಲ್ಲದಿದ್ದರೆ, ದಾರಿ ತೋರಿಸಲು ನನ್ನ ತಂದೆಗೆ ಅಂತಹ ರೋಲ್ ಮಾಡೆಲ್ಗಳು ಇಲ್ಲದಿರಬಹುದು, ಮತ್ತು ಅಪ್ಪ ನಮ್ಮ ಕಂಪನಿಯನ್ನು ಪ್ರಾರಂಭಿಸಿದರೂ ಸಹ, ನಾವು ಹೆಸರಿಸದಿರಬಹುದು ರಾಸ್ ವಿಡಿಯೋ ಇಂದು! ಈ ಎಲ್ಲಾ ವರ್ಷಗಳ ನಂತರ, ಚಿತ್ರವು ಈಗ ರಾಸ್ನ ಭಾಗವಾಗಿದೆ, ನನ್ನ ತಂದೆ ಒಪ್ಪುವ ವಿಷಯವು ಗಮನಾರ್ಹವಾಗಿದೆ. ಇಮೇಜ್ನ ಟಿಎಸ್ಐ ಟ್ಯಾಲಿ ಪ್ಲಾಟ್ಫಾರ್ಮ್ ನಮ್ಮ ಅಸ್ತಿತ್ವದಲ್ಲಿರುವ ಶ್ರೇಣಿಯ ಪರಿಹಾರಗಳಿಗೆ ಉತ್ತಮ ಪೂರಕವಾಗಿದೆ ಮತ್ತು ಲೈವ್ ಉತ್ಪಾದನಾ ಮಾರುಕಟ್ಟೆಗೆ ಇನ್ನೂ ಹೆಚ್ಚಿನ ಆಯ್ಕೆಯನ್ನು ತರಲು ರಾಸ್ಗೆ ಅನುವು ಮಾಡಿಕೊಡುತ್ತದೆ. " |
ರಾಸ್ ಟ್ಯಾಲಿ ಸಿಸ್ಟಮ್ಸ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್. |
ರಾಸ್ ವಿಡಿಯೋ - ಹೆಚ್ಚಿನ ಪರಿಣಾಮ, ಹೆಚ್ಚಿನ ದಕ್ಷತೆಯ ಉತ್ಪಾದನಾ ಪರಿಹಾರಗಳು |
ಉದ್ಯಮದ ವಿಶಾಲ ವ್ಯಾಪ್ತಿಯೊಂದಿಗೆ ರಾಸ್ ಪ್ರತಿದಿನ ಶತಕೋಟಿ ಜಾಗತಿಕ ವೀಕ್ಷಕರಿಗೆ ವೀಡಿಯೊ ನಿರ್ಮಾಣಗಳನ್ನು ಲೈವ್ ಮಾಡುತ್ತದೆ ಹೆಚ್ಚಿನ ಪರಿಣಾಮ, ಹೆಚ್ಚಿನ ದಕ್ಷತೆ ಪರಿಹಾರಗಳು ಮತ್ತು ಸೇವೆಗಳು. ಬಲವಾದ ಸುದ್ದಿ, ಹವಾಮಾನ ಮತ್ತು ಕ್ರೀಡೆಗಳನ್ನು ರಚಿಸಲು ರಾಸ್ ಸುಲಭಗೊಳಿಸುತ್ತದೆ ಪ್ರಸಾರಗಳು, ತೊಡಗಿಸಿಕೊಳ್ಳುವ ವಿಷಯ ಕ್ರೀಡಾ ಕ್ರೀಡಾಂಗಣ ಪರದೆಗಳು, ಮನರಂಜನಾ ಪ್ರದರ್ಶನಗಳು ಮತ್ತು ರಾಕ್ ಸಂಗೀತ ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು, ಶಾಸಕಾಂಗ ಸಭೆಗಳು, ಸಾಂಸ್ಥಿಕ ಪ್ರಸ್ತುತಿಗಳು ಮತ್ತು ಸ್ಪೂರ್ತಿದಾಯಕ ವಿಷಯ ಪೂಜಾ ಮನೆಗಳು. |
ರಾಸ್ ಪರಿಹಾರಗಳು ಪ್ರೇಕ್ಷಕರು ಮತ್ತು ಮಾರ್ಕೆಟಿಂಗ್ ಪಾಲುದಾರರನ್ನು ಆಕರ್ಷಿಸಿವೆ ಯುರೋಸ್ಪೋರ್ಟ್, ಬಿಬಿಸಿ ವರ್ಲ್ಡ್, ಎಸ್ಕೆವೈ, ಗೂಗಲ್ ಯೂಟ್ಯೂಬ್ ಸ್ಪೇಸ್ ಲಂಡನ್, ಮತ್ತು ಅಂತರರಾಷ್ಟ್ರೀಯ ಎಸ್ಪೋರ್ಟ್ಸ್ ಪವರ್ಹೌಸ್ ಈಎಸ್ಎಲ್. ಕ್ಯಾಮೆರಾಗಳು, ನೈಜ-ಸಮಯದ ಚಲನೆಯ ಗ್ರಾಫಿಕ್ಸ್, ಪ್ರೊಡಕ್ಷನ್ ಸ್ವಿಚರ್ಗಳು, ರೊಬೊಟಿಕ್ ಕ್ಯಾಮೆರಾ ವ್ಯವಸ್ಥೆಗಳು, ವರ್ಧಿತ ರಿಯಾಲಿಟಿ / ವರ್ಚುವಲ್ ಸ್ಟುಡಿಯೋಗಳು, ವಿಡಿಯೋ ಸರ್ವರ್ಗಳು, ಮೂಲಸೌಕರ್ಯ ಮತ್ತು ಮಾರ್ಗನಿರ್ದೇಶಕಗಳು, ಸಾಮಾಜಿಕ ಮಾಧ್ಯಮ ನಿರ್ವಹಣೆ, ನ್ಯೂಸ್ರೂಮ್ ವ್ಯವಸ್ಥೆಗಳು ಮತ್ತು ಒಳಗೊಂಡ ಉತ್ಪನ್ನಗಳು ಮತ್ತು ಸೇವೆಗಳನ್ನು ರಾಸ್ ಒದಗಿಸುತ್ತಾನೆ. ಲೈವ್ ಈವೆಂಟ್ ಉತ್ಪಾದನಾ ಸೇವೆಗಳು. |
ಹಿಂದಿನ: ವೆಲೋಸಿಕ್ಸ್ ಮೇಘ-ಸ್ಥಳೀಯ ವೀಡಿಯೊ ಜಾಹೀರಾತು ಮತ್ತು ಸ್ಟ್ರೀಮ್ ವೈಯಕ್ತೀಕರಣ ಸೇವೆಯನ್ನು ಅನಾವರಣಗೊಳಿಸಿದೆ |
ಮುಂದೆ: ಪೇಸ್ ಪಿಕ್ಚರ್ಸ್ ಉತ್ಪಾದನೆ ಮತ್ತು ಪೋಸ್ಟ್ ನಡುವಿನ ರೇಖೆಯನ್ನು ಮಸುಕುಗೊಳಿಸಲು ಬ್ಲ್ಯಾಕ್ಮ್ಯಾಜಿಕ್ ವಿನ್ಯಾಸವನ್ನು ಬಳಸುತ್ತದೆ |
ವಿವಿಧ ನಿಗಮ- ಮಂಡಳಿ ಅಧ್ಯಕ್ಷರ ನೇಮಕ: ಆರಗ ಜ್ಞಾನೇಂದ್ರ, ಹರತಾಳ ಹಾಲಪ್ಪ ಸಹಿತ 24 ಮಂದಿಗೆ ಸ್ಥಾನ ಭಾಗ್ಯ - ಉಪಯುಕ್ತ ನ್ಯೂಸ್ |
by Upayuktha July 27, 2020 079 |
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮೊದಲ ವರ್ಷ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ವಿವಿಧ ನಿಗಮ- ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. |
ಅದರಂತೆ ಕರ್ನಾಟಕ ಗೃಹಮಂಡಳಿ ಅಧ್ಯಕ್ಷರಾಗಿ ಹಿರಿಯ ಶಾಸಕ ಅರಗ ಜ್ಞಾನೇಂದ್ರ ಅವರನ್ನು ನೇಮಿಸಲಾಗಿದೆ. |
ಎಂಎಸ್ಐಎಲ್ ಅಧ್ಯಕ್ಷರಾಗಿ ಸಾಗರದ ಶಾಸಕ ಹರತಾಳ ಹಾಲಪ್ಪ, ಕೆ.ಎಸ್.ಆರ್ಟಿಸಿ ಅಧ್ಯಕ್ಷರಾಗಿ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಹಾಗೂ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿ ಶೋರಾಪುರ ಶಾಸಕ ರಾಜೂಗೌಡ ಅವರನ್ನು ನೇಮಿಸಲಾಗಿದೆ. |
ಒಟ್ಟು 24 ಶಾಸಕರನ್ನು ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ. |
ಪುನೀತ್ 'ಜಾಕಿ' ಧ್ವನಿಸುರುಳಿ ಸೂಪರ್ ಡೂಪರ್ ಹಿಟ್! | Jackie Audio | Puneeth Rajkuamar | Director Soori | Yograj Bhat | V Harikrishna | ಜಾಕಿ | ಪುನೀತ್ ರಾಜ್ ಕುಮಾರ್ | ವಿ ಹರಿಕೃಷ್ಣ | ಯೋಗರಾಜ್ ಭಟ್ - Kannada Filmibeat |
14 min ago ಅರಮನೆಯನ್ನೇ ಹೊಂದಿರುವ ಸೈಫ್, ಮನೆ ಬದಲಾಯಿಸುತ್ತಿದ್ದಾರೆ! |
25 min ago 51ನೇ ಗೋವಾ ಚಿತ್ರೋತ್ಸವಕ್ಕೆ ಚಾಲನೆ: ಕನ್ನಡದಲ್ಲಿ ಮಾತು ಆರಂಭಿಸಿದ ಸುದೀಪ್ |
1 hr ago ತಲ್ವಾರ್ನಲ್ಲಿ ಕೇಕ್ ಕತ್ತರಿಸಿ ಬಳಿಕ ಕ್ಷಮೆಯಾಚಿಸಿದ ವಿಜಯ್ ಸೇತುಪತಿ |
2 hrs ago ತೆಲುಗು 'ಲವ್ ಮಾಕ್ಟೈಲ್' ಜೋಡಿಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನ |
Lifestyle ನಿಮ್ಮ ಮಕ್ಕಳ ಕೋಣೆಯನ್ನು ವಾಸ್ತು ಪ್ರಕಾರ ಈ ರೀತಿ ರೆಡಿ ಮಾಡಿ |
News "ಲಸಿಕೆ ಮೇಲೆ ಅಷ್ಟು ನಂಬಿಕೆಯಿದ್ದರೆ ನೀವೆಲ್ಲಾ ಇನ್ನೂ ತೆಗೆದುಕೊಂಡಿಲ್ಲ ಏಕೆ?" |
Finance Gold Silver Rate: ಪ್ರಮುಖ ನಗರಗಳಲ್ಲಿ ಜ.16ರ ಚಿನ್ನ, ಬೆಳ್ಳಿ ದರ |
Automobiles ಟೈರ್ ಸೇವೆಗಳನ್ನು ಸರಳಗೊಳಿಸಲು ಪ್ರತ್ಯೇಕ ಸರ್ವಿಸ್ ಸೆಂಟರ್ ತೆರೆದ ಅಪೊಲೊ ಟೈರ್ಸ್ |
ಪುನೀತ್ 'ಜಾಕಿ' ಧ್ವನಿಸುರುಳಿ ಸೂಪರ್ ಡೂಪರ್ ಹಿಟ್! |
| Published: Tuesday, September 14, 2010, 17:41 [IST] |
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಜಾಕಿ' ಆಡಿಯೋಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಎಲ್ಲಾ ಹಾಡುಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಸಾಮಾನ್ಯವಾಗಿ ಒಂದು ಚಿತ್ರದಲ್ಲಿ ಎರಡು, ಮೂರು ಹಾಡುಗಳು ಮಾತ್ರ ಹಿಟ್ ಆಗುತ್ತವೆ. ಆದರೆ ಜಾಕಿ ಚಿತ್ರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಚಿತ್ರದ ಎಲ್ಲಾ ಹಾಡುಗಳನ್ನು ಪ್ರೇಕ್ಷಕ ಮನಸಾರೆ ಇಷ್ಟಪಟ್ಟಿದ್ದಾನೆ. |
ಯೋಗರಾಜ್ ಭಟ್ಟರ ಲೇಖನಿಯ ಮತ್ತೆ ಗಮ್ಮತ್ತು! ಅವರು ಬರೆದಿರುವ ಚಿತ್ರದ ಎಲ್ಲಾ ಹಾಡುಗಳು ಈಗ ಪಡ್ಡೆಗಳ ಪಾಲಿಗೆ ಪಂಚಾಮೃತ. ವಿ ಹರಿಕೃಷ್ಣ ಸಂಗೀತ ಸಪ್ಪಳ ಮತ್ತೊಮ್ಮೆ ವಿಜೃಂಭಿಸಿದೆ. ಶಿವ ಅಂಥ ಹೋಗುತ್ತಿದೆ ರೋಡಿನಲ್ಲಿ, ಎಕ್ಕ ರಾಜ ರಾಣಿ, ಎರಡು ಜಡೆಯನು ಮತ್ತು ಎಡವಟ್ಟಾಯ್ತು ಹಾಡುಗಳ ಗಾನ ಬಜಾನ ಈಗ ಎಲ್ಲ ಕಡೆ ಕೇಳಿಸುತ್ತಿದೆ. |
ಸೂರಿ ನಿರ್ದೇಶನದ ಈ ಚಿತ್ರ ಬಿಡುಗಡೆ ಮುನ್ನವೆ ಹೊಸ ಭರವಸೆಯನ್ನು ಮೂಡಿಸಿದೆ. ಆನಂದ್ ಆಡಿಯೋ ಹೊರತಂದಿರುವ 'ಜಾಕಿ' ಸಿಡಿಗಳು ಬಿಸಿಬಿಸಿ ಬೋಂಡಾಗಳಂತೆ ಬಿಕರಿಯಾಗುತ್ತಿವೆ. ಯೋಗರಾಜ್ ಭಟ್ ತುಂಬ ಮುತುವರ್ಜಿಯಿಂದ ರಚಿಸಿದ ಸಾಹಿತ್ಯ ಈಗ ಫಲ ನೀಡುತ್ತಿದೆ ಎಂಬ ಮಾತನ್ನು ಪುನೀತ್ ಸಹ ಒಪ್ಪುತ್ತಾರೆ. |
ಜಾಕಿ ಧ್ವನಿಸುರುಳಿ ವಿಮರ್ಶೆ |
Read more about: ಜಾಕಿ ಪುನೀತ್ ರಾಜ್ ಕುಮಾರ್ ಸೂರಿ ಯೋಗರಾಜ್ ಭಟ್ ವಿ ಹರಿಕೃಷ್ಣ ಆನಂದ್ ಆಡಿಯೋ jackie audio puneeth rajkumar soori yogaraj bhat v harikrishna anand audio |
ದೇವಾಲಯ ಶಿಲ್ಪಗಳಲ್ಲಿ ನಾಟ್ಯಾಯಮಾನತೆ – ಭಾಗ ೩ | Prekshaa |
This article is part 3 of 5 in the series ದೇವಾಲಯ ಶಿಲ್ಪಗಳು |
ಪ್ರಕೃತ ಕಾಲದ ಕಲೆಗಳಿಗೆ ಶಿಲ್ಪಸಾಗರಯಾನದ ಅವಶ್ಯಕತೆ |
ದೇವಾಲಯ ಸಂಸ್ಕೃತಿಯಲ್ಲಿ ರಂಗಭೋಗದಂತಹ ಹಲವು ಕಲಾವಿಶೇಷಗಳ ಸನ್ನಿಧಾನ ಕಾಲಕ್ರಮೇಣ ಕ್ಷಯಿಸಿದರೂ ಶಿಲ್ಪದ ಸಂವಿಧಾನ ಮತ್ತು ಸನ್ನಿಧಾನ ಎಷ್ಟೊಂದು ಶಕ್ತಿಯುತವಾಗಿದೆಯಂದರೆ ಹಾಗೆ ಕಾಲದ ಓಟದಲ್ಲಿ ಕಳೆದುಕೊಂಡದುದನ್ನೂ ಗಾತ್ರರೂಪದಲ್ಲಿ ಅಲ್ಲವಾದರೂ ಸೂತ್ರರೂಪದಿಂದ ಸಮಾಶ್ರಯವಾಗಿದೆ. ಹಾಗೆ ನೋಡಲಾಗಿ ಎಲ್ಲಾ ಕಲೆಗಳು ತಮ್ಮ ಆಯುರ್ಬಲವೆಲ್ಲವನ್ನೂ ಶಿಲ್ಪವೆಂಬ ವಿಶಾಲ ಕಲಾಕಕ್ಷೆಗೇ ಧಾರೆಯೆರೆದಿದ್ದಾರೇನೋ ಎಂದನಿಸದಿರದು. ಹೀಗೆ ಕಲೆಗಳೆಲ್ಲವನ್ನೂ ತನ್ನೊಳಗೆ ತಾಳಿಕೊಂಡು, ಕಾಪಾಡಿಕೊಂಡು ಬರುವ ಶಿಲ್ಪವೆಂಬ ಸ್ಥಾಯಿಯು ಸಕಲ ತತ್ತ್ವಗಳ ತವರೆನಿಸುವ ಮತ್ತೊಂದು ಸ್ಥಾಯಿಯೂ, ಸ್ಥಾವರರೂಪವೂ ಆದ ದೇವಾಲಯದ ಆಡುಂಬೊಲವನ್ನೇ ಆಶ್ರಯಿಸಿದೆ. ಇದನ್ನು ಮನನ ಮಾಡುತ್ತಾ ಹೋದಂತೆ ಬೃಹತ್ ಆಗಿರುವ ಒಂದು ವ್ಯವಸ್ಥೆಯು ಮತ್ತೊಂದು ಬೃಹತ್ ವ್ಯವಸ್ಥೆಯನ್ನು ಸದಾ ಪೋಷಿಸುವ ಸೌಹಾರ್ದ ಮತ್ತು ತಾನೂ ಪರಸ್ಪರ ಅವಿನಾಭಾವದಿಂದ ಕಲೆತು ಅದ್ವೈತವೆನಿಸುವ ಸನ್ನಿಧಿಯನ್ನು ಪ್ರಕಾಶಿಸುವ ಭಾವವು ಸನಾತನಸಂಸ್ಕೃತಿಯ ಪರಮಮೌಲ್ಯವನ್ನೇ ಪ್ರತಿಪಾದಿಸುತ್ತದೆ. ದೊಡ್ಡದರ ಸಂಬಂಧ ದೊಡ್ಡದರೊಂದಿಗೇ ಎಂಬ ಸರಳ ಸೂತ್ರವೂ ಅಸಾಧಾರಣವಾಗಿರುವ ಧ್ವನಿಯನ್ನು ವ್ಯಂಜಿಸುತ್ತದೆ. |
ಹೇಗೆ ದೇವಾಲಯ-ಪದದ ನಿರುಕ್ತಿಯ ಧಾತ್ವ್ವರ್ಥಾನುಸಾರ- ದೇವಶಬ್ದಕ್ಕೆ ಲೀಲೆ, ಗೆಲ್ಮೆ, ವ್ಯವಹಾರ, ಬೆಳಕು, ಸ್ತುತಿ, ಆನಂದ, ಆಮೋದ, ಕನಸು, ಚೆಲುವು ಮತ್ತು ಗತಿಶೀಲತೆ ಎಂಬೆಲ್ಲಾ ಬಹುಆಯಾಮಗಳಿವೆಯೋ (ದಿವು>ಕ್ರೀಡಾ-ವಿಜಿಗೇಷಾ-ವ್ಯವಹಾರ-ದ್ಯುತಿ-ಸ್ತುತಿ-ಮೋದ-ಸ್ವಪ್ನ-ಕಾಂತಿ-ಗತಿಷು) (ಗಣೇಶ್, ೨೦೦೯;೧೬೧) ಶಿಲ್ಪಗಳೂ ಅಂತೆಯೇ. ಚಿತ್ರ, ಗೀತ, ಕಾವ್ಯ, ನರ್ತನಾದಿ ಎಲ್ಲಾ ಕಲೆಗಳನ್ನೂ ಪ್ರಾಚೀನರು ಶಿಲ್ಪದ ಸಂವಿಧಾನದೊಳಗಡೆಯೇ ಕಂಡಿದ್ದರು. ಭರತಮುನಿಯು ಬ್ರಹ್ಮನ ಮೂಲಕ ಆಡಿಸುವ ಮಾತುಗಳಲ್ಲಿಯೂ – ನಾಟ್ಯವು ಸಕಲ ಶಿಲ್ಪಪ್ರವರ್ತಕವಾಗಿದೆ ಎಂದೇ ಹೇಳಿದ್ದಾನೆ. ಇಲ್ಲಿಯೇ ಎಲ್ಲಾ ಲಲಿತಕಲೆಗಳನ್ನೂ ಶಿಲ್ಪವೆಂಬ ವಿಶಾಲ ಸನ್ನಿಧಾನದೊಳಗೆ ಅಡಕ ಮಾಡಿರುವ ಸೂಕ್ಷ್ಮ ತಿಳಿದುಬರುತ್ತದೆ. |
ಸರ್ವಶಾಸ್ತ್ರಾರ್ಥಸಂಪನ್ನಂ ಸರ್ವಶಿಲ್ಪಪ್ರವರ್ತಕಮ್ |
(ನಾಟ್ಯಶಾಸ್ತ್ರ, ಪ್ರಥಮ ಅಧ್ಯಾಯ) |
ಈ ಕುರಿತಾಗಿ ಕೌಷೀತಕೀ ಬ್ರಾಹ್ಮಣವೂ ಗೀತ, ಕಾವ್ಯ, ನೃತ್ಯಗಳೆಲ್ಲದಕ್ಕೂ ಶಿಲ್ಪವೆಂಬ ಹೆಸರನ್ನು ನೀಡಿರುವುದರ ಉಲ್ಲೇಖವನ್ನು ನೀಡುತ್ತಾ, ಪಾಣಿನಿಯೂ ಶಿಲ್ಪವೆಂದರೆ ಗೀತವಾದನ ನೃತ್ತಗಳಂತಹ ಲಲಿತಕಲೆಯೆಂದಿದ್ದು ಶಿಲ್ಪಿನ್ ಎಂದರೆ ಗಾಯಕ, ವಾದಕ, ನರ್ತಕ ಎನ್ನುವ ವಿಚಾರ ಅಷ್ಟಾಧ್ಯಾಯಿಯಲ್ಲಿ ಕಂಡುಬರುತ್ತದೆ, ಕಾಳಿದಾಸನೂ ಶಿಲ್ಪಕಾರ್ಯವೆಂದರೆ ಗೀತವಾದ್ಯನರ್ತನಗಳೆಂದೇ ಅರ್ಥೈಸಿದ್ದಾನೆ ಎನ್ನುತ್ತಾರೆ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣರು. ಇದರೊಂದಿಗೆ ಚೌಷಷ್ಟಿ ಕಲೆಗಳಲ್ಲದಕ್ಕೂ ವಾತ್ಸಾಯನನು ಕಾಮಸೂತ್ರದಲ್ಲಿಯೂ, ಸೋಮದೇವನು ಕಥಾಸರಿತ್ಸಾಗರದಲ್ಲಿಯೂ ಶಿಲ್ಪಗಳೆಂದೇ ಕರೆದಿರುವ ಉಲ್ಲೇಖವನ್ನೂ ಮನಗಾಣಿಸುತ್ತಾರೆ. ಮುಂದೆ ಶಿಲ್ಪ ಶಬ್ದದ ವ್ಯವಹಾರವು ಬದಲಾದ ರೀತಿಗಳನ್ನು ಮೆಲುಕು ಹಾಕುತ್ತಾ, ಗೀತವಾದನನರ್ತನಗಳ ಸಂಬಂಧವು ಶಿಲ್ಪ ಎಂಬ ಶಬ್ದಕ್ಕೆ ಕಡಿಮೆಯಾಗುತ್ತಾ ಬಂದು ಚಿತ್ರಲೇಖನ, ಕಲಾತ್ಮಕವಾದ ಕೆತ್ತನೆ, ಕಟೆಯುವುದು, ಸೌಧನಿರ್ಮಾಣ ಮುಂತಾದ ಅರ್ಥವೇ ಪ್ರಧಾನವಾಯಿತು, ಲಲಿತಕಲೆ ಎಂಬ ಸಂಕೇತದಿಂದ ಪ್ರಾರಂಭವಾದ ಅರ್ಥವಾಹಿನಿಯು ಕುಶಲಕಲೆ ಎಂಬ ವ್ಯವಹಾರದಲ್ಲಿ ಮುಗಿದು ಸ್ಥಿರಗೊಂಡಿದೆ ಎನ್ನುವುದನ್ನು ಪ್ರತಿಪಾದಿಸುತ್ತಾರೆ ( ರಾ.ಸತ್ಯನಾರಾಯಣ, ೧೯೮೬, ೨೨ಪು). ಇದರಿಂದ ಶಿಲ್ಪಗಳಿಗೆ ಕಲೆಗಳು ಎಂಬ ವಿಶಾಲ ಅರ್ಥವು ಪ್ರಾಚೀನದಲ್ಲಿತ್ತು ಎಂದೂ ಮತ್ತು ಮಾರ್ಗಕಾಲದ ಪೂರ್ವಾರ್ಧ ಕಳೆಯುವಷ್ಟರಲ್ಲಿ ಈ ಪಲ್ಲಟಗಳು ಹೆಚ್ಚಾಗುತ್ತಾ ಹೋಗಿ ಸ್ಥಿರವಾದ ಅರ್ಥಗಳು ಬಂದುದರ ಬಗ್ಗೆ ಸುಳುಹು ದೊರೆಯುತ್ತವೆ. |
ಶತಾವಧಾನಿ ಡಾ. ರಾ.ಗಣೇಶರೂ ಶಿಲ್ಪಮಹಾಸಮುದ್ರವನ್ನು ಗಮನಿಸಿದ ರೀತಿಯನ್ನು ಕಂಡಾಗ ಶಿಲ್ಪವೆಂಬುದು ಯಾವುದನ್ನೂ, ಯಾವ ಹೊತ್ತಿಗೂ, ಯಾವ ಗಾತ್ರದಲ್ಲೂ ತನ್ನೊಳಗೆ ಗರ್ಭೀಕರಿಸಿದ ವಿಶ್ವವೇ ಆಗಿತ್ತೆಂಬುದು ತಿಳಿದುಬರುತ್ತದೆ. |
ಶಿಲ್ಪವೆಂಬ ಮಹಾಕಕ್ಷೆಯೊಳಗೆ ಮೂರು ಖಂಡಗಳು, ಒಂಭತ್ತು ಉಪಶಾಸ್ತ್ರಗಳು, ಮೂವತ್ತೊಂದು ವಿದ್ಯೆಗಳು, ಅರುವತ್ತನಾಲ್ಕು ಕಲೆಗಳು (ಇವು ವಾತ್ಸ್ಯಾಯನಾದಿಗಳು ಹೇಳುವ ಕಲೆಗಳಲ್ಲ) ಅಂತರ್ಗತವಾಗಿವೆ. ಇದೊಂದು ಮಹಾಸಮುದ್ರ (ಗಣೇಶ್, ೨೦೦೬; ೬೨). |
ಒಟ್ಟಿನಲ್ಲಿ ಶಿಲ್ಪಕ್ಷೇತ್ರದ ಆಳ ಅಗಲಗಳ ವಿಸ್ತಾರವು ಜ್ಯೋತಿರ್ಲಿಂಗದೋಪಾದಿಯಲ್ಲಿ ಅಗಾಧ, ಅಪಾರ. ಬಗೆದಷ್ಟೂ ಮುಗಿಯದ ನಿಧಿ. |
ಹೀಗಿರುವಾಗ ಒಂದಾನೊಂದು ಕಾಲದಲ್ಲಿ ಶಿಲ್ಪಾಯತನದೊಳಗಿನಿಂದ ಹೊರಚಿಮ್ಮಿ ಪ್ರಪ್ರತ್ಯೇಕ ಸ್ಥಾನಮಾನ ಪಡೆದು ಆಧುನಿಕ ಕಾಲದಲ್ಲಿ ತಮ್ಮದೇ ಅಸ್ತಿತ್ವಶ್ರೀಮಂತಿಕೆಯಲ್ಲಿ ಮೆರೆವ ಅನೇಕ ಸೋದರಕಲೆಗಳ ಕಲಾವಿದರು ಇನ್ನಾದರೂ ಈ ತಂತಮ್ಮ ಕಲೆಗಳಿಂದ ಸಲ್ಲಬೇಕಾದ ಹಿಂದಿನ ಋಣಸಂದಾಯವನ್ನು ಮನದಟ್ಟು ಮಾಡಿಕೊಳ್ಳಬೇಕು. ಏನಿಲ್ಲವೆಂದರೂ ತತ್ಕಾಲೀನ ಸಂದರ್ಭದಲ್ಲಿ ಮಿತಿಗೊಳಪಟ್ಟ ಶಿಲ್ಪಶಾಸ್ತ್ರದ ಪರಿಧಿಯನ್ನೊಮ್ಮೆ ಪರಿಭ್ರಮಿಸುವ ಕಾರ್ಯವನ್ನು ಮಾಡಬೇಕು. ಪಿತೃಸಮಾನವಾದ ಶಿಲ್ಪದ ಬೀಜಾವಾಪದ ನೆನಕೆ ಈಗಿನ ಆಧುನಿಕ ಸಂದರ್ಭದ ಕಲೆಗಳಲ್ಲಿ ಕಾಣಸಿಗುವುದು ಕಷ್ಟವೇ. ಆದಾಗ್ಯೂ ಇಂದಿನ ನೃತ್ಯಚಮತ್ಕೃತಿಗಳು ಮುಂದೊಂದು ಕಾಲಕ್ಕೆ ಚಿರಂತನ ರೂಪದಿಂದ ನೋಡುಗರ ಕಣ್ಮನಗಳನ್ನು ಸೆರೆ ಹಿಡಿವ ಹಂಬಲವಿದ್ದರೆ ಶಿಲ್ಪಸನ್ನಿಧಿಯನ್ನು ಆಶ್ರಯಿಸಲೇಬೇಕು. ಅದು ಈ ಕಾಲದಲ್ಲಿ ವಿರಳವಾಗಿ ನೆರವೇರುತ್ತಿದೆ ಎಂಬುದನ್ನು ವಿಧಿಯಿಲ್ಲದೆ ಹೇಳಬೇಕಾಗಿದೆ. ದೇವಾಲಯಗಳ ಶಿಲ್ಪಕಲೆಯ ಹಾದಿಯಲ್ಲಿಯೂ ನವನವೀನವೆನಿಸುವ ಸಮೋಹಿಸುವ ಜೀವಂತ ಮೂರ್ತಿಶಿಲ್ಪಗಳು ಮೈತಳೆಯುತ್ತಿಲ್ಲವೆಂಬುದು ಈ ನಿಟ್ಟಿನಲ್ಲಿ ಗಮನಿಸಬೇಕಾದ್ದು. |
ಈ ನಿಟ್ಟಿನಲ್ಲಿ ಇಂದಿನ ನರ್ತನೋಪಚಾರ ಕ್ಷೇತ್ರದ ದಿಕ್ಕನ್ನು ಅರಸಿ ಹೋಗುವವರಿಗೆ ಪ್ರಕೃತ ಲೇಖಿಕೆಯ ಅರಿವಿನ ಮಿತಿಗೆ ಎಟುಕಿದ ಅಂಶಗಳನ್ನು ಮುಂದಿನ ಭಾಗಗಳಲ್ಲಿ ಸಲಹೆಯ ರೂಪದಿಂದ ನೀಡಲಾಗಿದೆ. ಈ ನಿದರ್ಶನಗಳನ್ನು ಆಯಾ ಕಲಾಮಾಧ್ಯಮದವರು ತಮ್ಮ ಆಯದಿಂದ ನೋಡಿಕೊಂಡು ಬೆಳೆಸಿಕೊಂಡರೆ ಶಿಲ್ಪ-ಕಲಾ ಭವಿಷ್ಯ ಉಜ್ಜ್ವಲವಾಗುವುದರಲ್ಲಿ ಸಂದೇಹವಿಲ್ಲ. |
ಶಿಲ್ಪಗಳ ನರ್ತನೋಪಚಾರದ ಶೈಲಿ ಮತ್ತು ಶೋಧವೈಶಿಷ್ಟ್ಯ |
ಶಿಲ್ಪಗಳ ಅಧ್ಯಯನದಲ್ಲಿ ಶೋಧಕರಾಗಿ ಹೊರಟ ನೃತ್ಯಾಸಕ್ತರಿಗೆ ಕೆಲವೊಂದು ಗುಣಗಳಿರಲೇಬೇಕು ಎಂಬುದನ್ನು ಈಗಾಗಲೇ ಗಮನಿಸಬಹುದು. ಇದನ್ನು ಮತ್ತೂ ಸ್ಪಷ್ಟವಾಗಿ ಹೇಳುವುದಾದರೆ- ಶಿಲ್ಪಿಯ ಕಣ್ಮನಗಳ ಜಾಡನ್ನು ಅರಿಯುವ ಬಗೆ ಮತ್ತು ಅದನ್ನು ಕಲಾತ್ಮಕವಾಗಿ ಪುನರ್ಸೃಷ್ಟಿಸಿಕೊಳ್ಳುವ ಕೌಶಲ್ಯ ಪ್ರಮುಖವಾದದ್ದು. ಇದಕ್ಕೆ ಪೂರ್ವಭಾವಿಯಾಗಿ ಐತಿಹಾಸಿಕ ಮತ್ತು ಲಕ್ಷಣಗ್ರಂಥಾಧಾರಿತವಾಗಿ ಶಿಲ್ಪಗಳನ್ನು ಗಮನಿಸಿಕೊಂಡಿರಬೇಕಾಗುತ್ತದೆ. ಹಾಗೆಂದು ಅಂದಿನ ಕಾಲದ ನೃತ್ತ-ನೃತ್ಯಗಳನ್ನು ನವೀಕರಿಸಿಕೊಳ್ಳಲು ಅವಷ್ಟೇ ಮಾಹಿತಿ ಸಾಲದು. ಬರಿಯ ಮಾಹಿತಿ ಕಲಾಸಮಯದ ರಂಜನೆಯನ್ನು ಬೆಳೆಸಲಾರದಲ್ಲಾ! ಆದ್ದರಿಂದ ಶಿಲ್ಪವು ಹೇಳುವ ಆ ಹೊತ್ತಿನ ನರ್ತನಕ್ರಮದ ಶಿಸ್ತನ್ನು ಅಂದಾಜಿಸಿ ಅದನ್ನು ಆಂಗಿಕಾಭಿನಯದಲ್ಲಿ ಕಾಪಿಟ್ಟುಕೊಳ್ಳುತ್ತಲೇ, ಕಲೆಯ ಕಾಲದಲ್ಲಿ ಎಂದೆಂದಿಗೂ ಆದರಣೀಯವಾಗಿರುವ ಸಾತ್ತ್ವಿಕಾಶ್ರಯವಾದ ರಸಸ್ರೋತದ ಅಧೀನವಾಗಿ ನೃತ್ಯಸೃಷ್ಟಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಬಗೆಯ ಕಲಾವಿದರ ಸ್ವಾತಂತ್ರ್ಯಕ್ಕೆ ಔಚಿತ್ಯದ ನಿಕಷ ಅತ್ಯವಶ್ಯ. ಪ್ರತಿಭೆಯನ್ನೆಲ್ಲವನ್ನು ಶಿಲ್ಪಿ ಚಾಣಕ್ಕೆ ಪಣವಿಟ್ಟಂತೆಯೇ ನರ್ತಕನೂ ತನ್ನನ್ನು ತಾನು ಸರ್ವನೆಲೆಯಲ್ಲಿಯೂ ಕಟೆದುಕೊಳ್ಳಬೇಕು. ಇದು ಒಬ್ಬ ಕಲಾವಿದನ ಒಳಗನ್ನು ಹೊಕ್ಕು ಮತ್ತೊಬ್ಬ ಕಲಾವಿದ ಕಲೆಯನ್ನು ಕಾಣ್ಕೆಯಾಗಿಸುವ ಋಣಸಂದಾಯ. |
ಈ ಉಪಕ್ರಮದಲ್ಲಿ ಶಿಲ್ಪಗಳು ಯಾವೆಲ್ಲಾ ನೃತ್ತಾದಿವರ್ಗಗಳಲ್ಲಿ ಬರುತ್ತವೆ? ಅವುಗಳ ಸಾಧ್ಯತೆ ಮತ್ತು ಮಿತಿಗಳೇನು ಎಂಬುದೂ ತಕ್ಕಮಟ್ಟಿಗೆ ಶಿಲ್ಪಾನುಸಂಧಾನಕ್ಕೆ ಪೂರಕ. ಉದಾಹರಣೆಗೆ : ನೃತ್ತಶಿಲ್ಪಗಳಲ್ಲಿ ಅವುಗಳ ವಾಚ್ಯತೆಯನುಸಾರ ಚಾರಿತ್ರಕವಾದ ವಿವರವನ್ನು ಲಕ್ಷಿಸಿಯೇ ನೃತ್ತನವೀಕರಣವನ್ನು ಮಾಡಿಕೊಳ್ಳಬೇಕಾಗುತ್ತದೆ. ನೂರೆಂಟು ಕರಣ, ದೇಶೀಕರಣ, ಪೇರಣೀ, ಗೌಂಡಲೀನೃತ್ತಗಳಂಥವು ಈ ಜಾಡಿನವು. |
ಯಾವುದ್ಯಾವುದೋ ಕಾಲದ ಶಿಲ್ಪಗಳನ್ನು ಒಂದೆಡೆ ಕಲೆಹಾಕಿ ನಿರ್ದಿಷ್ಟ ನೃತ್ಯಕ್ರಮವನ್ನು ಅಂದಾಜಿಸುವುದು ಅಧ್ಯಯನಕ್ರಮದ ಶಿಸ್ತಿಗೆ ಭೂಷಣವಲ್ಲ. ಈ ಬಗೆಯ ಮಾದರಿಯೇನಿದ್ದರೂ ನೃತ್ತದ ಅಂಗಾಂಶಗಳನ್ನು ಸ್ಥೂಲವಾಗಿ ಸಮೀಕ್ಷೆ ಮಾಡಲು ನೆರವಾಗುತ್ತದೆ. ನರ್ತನದ ಶಿಸ್ತನ್ನಷ್ಟೇ ಅರಸಿ ಹೊರಡುವವರಿಗೆ ನೃತ್ತಶಿಲ್ಪಗಳೇ ಅಧ್ಯಯನಕ್ಕೆ ಹೆಚ್ಚು ಒದಗಿಬರುವಂತವು. ಅದೇ ನಾಟ್ಯ ಮತ್ತು ನೃತ್ಯವರ್ಗದ ಶಿಲ್ಪಗಳು ನೃತ್ಯಸನ್ನಿವೇಶವೊಂದನ್ನು ಸೃಷ್ಟ್ಯಾತ್ಮಕವಾಗಿ ನಿರ್ಮಿಸಲು ಚೋದನೆ, ಪ್ರೇರಣೆ ಕೊಡುವಂತವು. |
ಕಲೆಯೊಂದು ಐತಿಹಾಸಿಕ ಬದ್ಧತೆ-ಶಿಸ್ತಿಗೆ ಒಳಪಡುವುದಕ್ಕಿಂತಲೂ ಹೆಚ್ಚಿನ ಸ್ವಾತಂತ್ರ್ಯ ಪಡೆಯುವುದು ಆಯಾ ಕಾಲದ ಕಲಾವಿದನ ಕಲ್ಪನಾವೇಶಗಳಿಗೆ ಹೆಚ್ಚಿನ ಅನುಕೂಲ ಕೊಡುವ ಪುರಾಣದಂಥ ವಸ್ತುಸಂವಿಧಾನದಲ್ಲಿಯೇ. ಒಂದರ್ಥದಲ್ಲಿ ಚಾರಿತ್ರಕವಾದ ಶಿಸ್ತು ಆಕೃತಿನಿಷ್ಠವಾದರೆ, ಪುರಾಣ-ಕಥಾ-ಕಲ್ಪನೆಗಳು ಆಶಯನಿಷ್ಠೆಗೆ ದುಡಿಯುತ್ತವೆ. ಚಾರಿತ್ರಕ ಮಾಹಿತಿಯು ಆಂಗಿಕ ಇಲ್ಲವೇ ನೃತ್ಯತಂತ್ರದ ನಿರೂಪಣೆಗೆ ಇಂಬಾದರೆ, ಕಥಾಪ್ರಕಲ್ಪಗಳು ಆ ಆಂಗಿಕವನ್ನು ಸತ್ತ್ವಾಶ್ರಿತವಾಗಿ ಬೆಳಗಿಸುವ ಮೂಲವಸ್ತು. ಆಂಗಿಕ್ಕಾದರೂ ಗುರೂಪದೇಶ ಬೇಕು. ಆದರೆ ಸತ್ತ್ವ ಹಾಗಲ್ಲ. ಅದು ವ್ಯಕ್ತಿನಿಷ್ಠ ಸಂಸ್ಕಾರ. ನೃತ್ಯವರ್ಗ ಮತ್ತು ನಾಟ್ಯವರ್ಗಕ್ಕೊಪ್ಪುವ ಶಿಲ್ಪಗಳಲ್ಲಿ ನೃತ್ಯಕಲಾವಿದನ ಕಲ್ಪನೆ/ಸ್ವಾತಂತ್ರ್ಯಕ್ಕೆ ಹೆಚ್ಚಿನ ಅನುಕೂಲ ಇರುತ್ತವೆ. ಇವುಗಳನ್ನಾಧರಿಸಿದ ನರ್ತನಪ್ರಸ್ತುತಿಗೆ ಮಾನ್ಯತೆಯೂ ಅಧಿಕ. ಅಂತಃಪುರ ಗೀತಗಳ ಸೃಷ್ಟಿ, ನೃತ್ಯಮಾಧ್ಯಮದಲ್ಲಿ ಅವುಗಳ ಅಳವಡಿಕೆ ಇಂತಹುದೇ ಒಂದು ಶೋಧಫಲ. |
ಈ ತ್ರಿವರ್ಗಗಳಲ್ಲದೆಯೂ ಶಿಲ್ಪಪ್ರಪಂಚದ ಯಾವುದೇ ಬಗೆಯಾದ ಅಂಗಭಂಗಿಗಳನ್ನೂ ನರ್ತನಕ್ಕೆ ಅಳವಡಿಸಿಕೊಳ್ಳಬಹುದಾಗಿದೆ. ಅಲ್ಲಿಯೂ ಈ ಚಾಕಚಕ್ಯತೆ ನರ್ತಕನಿಗೆ ಇದ್ದರೆ ಯಾವುದೇ ಶಿಲ್ಪವೂ ಆತನ ಕಲ್ಪನೆಯೊಳಗೆ ಮಿಂದು ಬೆಂದು ಹದವಾಗಿ ನರ್ತನದ ಮೂರ್ತರೂಪ ತಳೆಯಬಹುದು. ಯುದ್ಧಗತಿಯ ಚಲನೆಗಳು ಹೇಗೆ ಮಂಡಲನೃತ್ಯವೆನ್ನುವ ವಿಶಿಷ್ಟ ನೃತ್ತಬಂಧವನ್ನು ತನ್ನ ಆಯಾಮದೊಳಗೆ ಕಟ್ಟಿಕೊಟ್ಟಿದೆ ಎನ್ನುವುದು ಈ ನೆಲೆಯಲ್ಲಿ ಉಜ್ಜ್ವಲ ನಿದರ್ಶನ. ರಣರಂಗವೂ ರಸರಂಗವಾಗುವ, ಆಹವವೂ ಆನಂದಕ್ಕೆ ಸ್ರೋತವಾಗುವ ವಿಶಿಷ್ಟ ಚಲನೆಗಳು ಸಿಗುವುದು ಇಲ್ಲಿಯೇ. ಒಟ್ಟಿನಲ್ಲಿ ರುಚಿಶುದ್ಧಿಯುಳ್ಳ ಶಿಲ್ಪಿ ತನ್ನ ಪ್ರತಿಯೊಂದು ಚಾಣದ ಮೊನೆಯನ್ನೂ ನರ್ತಿಸುತ್ತಲೇ ಹೋಗುತ್ತಾನೆ. ಅಂತೆಯೇ ಕಾಂಬ ಕಣ್ಣುಗಳೊಳಗೂ ನರ್ತನನಿರ್ಮಿತಿಗೆ ಬೇಕಾದ ಸೂಚನೆಯನ್ನು, ಸೌಂದರ್ಯವನ್ನು,ಉಜ್ಜೀವಿಸಬಲ್ಲ. |
ಈಗಿನ ಕಾಲಕ್ಕೆ ನಾಟ್ಯಾಯಮಾನತೆಯನ್ನು ಉದ್ದೇಶಿಸಿ ಶಿಲ್ಪಗಳನ್ನು ಶೋಧಪ್ರಜ್ಞೆಯಿಂದ ಪರಿಭಾವಿಸುವಾಗ ಅವು ಬಿಂಬಿಸಲ್ಪಟ್ಟ ನರ್ತನದ ಶಿಸ್ತನ್ನೋ ಅಥವಾ ಇಂದಿನ ನೃತ್ಯಕ್ರಮವನ್ನೋ ಹೆಚ್ಚು ಲಂಬಿಸದೇ ಔಚಿತ್ಯಾನೌಚಿತ್ಯದ ಹದದಲ್ಲಿ ರಸಭಾವಯುಕ್ತವಾಗಿ ನೇತ್ರಪ್ರೀತ್ಯರ್ಥ ಮಾಡಿಕೊಳ್ಳುವುದು ಸರ್ವಥಾ ಅಪೇಕ್ಷಿತ. ವಸ್ತು ಮತ್ತು ತಂತ್ರಗಳು ರಸ-ಧ್ವನಿ-ಔಚಿತ್ಯಗಳ ಪ್ರಮಾಣದಲ್ಲಿ ಗ್ರಹಿಸಲ್ಪಟ್ಟು ನಿರಾಗ್ರಹರೂಪದಿಂದ ವಿಸ್ತರಿಸಿದಾಗಲೇ ಕಲೆಯು ದೈವಿಕವೆನಿಸಿ ಅಧ್ಯಾತ್ಮ ಮತ್ತು ಜೀವನವನ್ನು ಏಕಸೂತ್ರತೆಯಲ್ಲಿ ವ್ಯಂಜಿಸಲು ದೀವಟಿಗೆಯಾಗುತ್ತದೆ. ಚಿರಂತನ ಪ್ರಯೋಗಮೌಲ್ಯಗಳಿಂದ ಶೋಭಿಸುತ್ತವೆ. |
ಶಿಲ್ಪದಲ್ಲಿ ಬಿಂಬಿತವಾದ ಸೂಕ್ಷ್ಮ ವಿವರಗಳನ್ನು ನರ್ತನಕ್ಷೇತ್ರದ ದಾಖಲೆಯ ದೃಷ್ಟಿಗಷ್ಟೇ ಚಿಂತಿಸುವ ಪ್ರಯುಕ್ತಿ ಪ್ರಾಥಮಿಕ ವರ್ಗದ ಅಧ್ಯಯನದ್ದು. ಶಿಲ್ಪಗಳ ಮೂಲಕ ಪಡೆದ ಅರಿವನ್ನು ಕ್ವಚಿತ್ತಾಗಿ ಸ್ಥಾನಕ, ಭಂಗಿಭಾವಗಳ ನಿರ್ಣಯಕ್ಕಷ್ಟಕ್ಕೇ ಮುಕ್ತಾಯಗೊಳಿಸಿಯೋ ಇಲ್ಲವೇ ಅದರ ಆಧಾರದಲ್ಲಿ ನೃತ್ತವೊಂದನ್ನು ಪುನರ್ಸೃಷ್ಟಿಸಿಕೊಳ್ಳುವುದು ಮಾಧ್ಯಮಿಕ ವರ್ಗದ್ದು. ಇವೆರಡಕ್ಕಿಂತ ಮೇಲ್ಮಟ್ಟದ್ದು- ಶಿಲ್ಪದಲ್ಲಿರುವ ಚರ-ಸ್ಥಿರರೇಖಾವಿಲಾಸಗಳನ್ನು ದರ್ಶನವೋ ಎಂಬಂತೆ ಅರಿತು ಸರ್ಜನಶೀಲತೆಯನ್ನೂ ಜೊತೆಗಿಟ್ಟು ಬೆಳಗುವ ರುಚಿಶುದ್ಧಿಯುಳ್ಳ ಚಲನೆಗಳು ಮತ್ತು ಅವುಗಳನ್ನು ಆಧಾರವಾಗಿಸಿ ಹೆಣೆದ ನೃತ್ಯಕೌಶಲ್ಯ. ಅಪರೂಪಕ್ಕೊಮ್ಮೆಯೆಂಬಂತೆ ಇವು ಪ್ರಯುಕ್ತಿಗೊಂಡರೂ ಶೋಧಕರ ಪ್ರತಿಭೆ ಮತ್ತು ವ್ಯುತ್ಪತ್ತಿಗೆ ಸಮರ್ಥ ನಿದರ್ಶನಗಳಾಗುತ್ತವೆ. ಮಾತ್ರವಲ್ಲ, ಕ್ರಮೇಣ ನೃತ್ತಾದಿ ತ್ರಿವರ್ಗಗಳೆಲ್ಲದಕ್ಕೂ ಆಧಾರವೆನಿಸಿ ಇಡಿಯ ನಾಟ್ಯಕ್ಷೇತ್ರದಲ್ಲಿ ರಾಜ್ಯಭಾರ ನಡೆಸಿದರೂ ಆಶ್ಚರ್ಯವಿಲ್ಲ. |
ಹೀಗೆ ಶಿಲ್ಪದ ಪ್ರೇರಣೆಯಲ್ಲಿ ನರ್ತನಕ್ರಮಕ್ಕೆ ಜೀವನ-ಉಜ್ಜೀವನವನ್ನು, ಪ್ರಯೋಗಶ್ರೀಮಂತಿಕೆಯನ್ನು ಕೊಡಲು ಕಲಾವಿದರು ಅನುಸರಿಸಿದ ಪ್ರಮುಖ ಎರಡು ಮಾರ್ಗಗಳನ್ನೂ ನಿದರ್ಶನವಾಗಿ ವಿವೇಚಿಸುವುದು ಸಮಂಜಸ. ಅವು ಶಿಲ್ಪಾಧಾರಿತವಾಗಿ ನಡೆದ ನರ್ತನಶೋಧದಲ್ಲಿ ಉನ್ನತೋನ್ನತ ಸ್ಥಾನವನ್ನಲಂಕರಿಸಿದವು. ಶೋಧಕರ ಅಧ್ಯಯನಕ್ರಮಕ್ಕೆ ಮಾರ್ಗದರ್ಶಿಸ್ವರೂಪದವು. ಇವೆರಡರ ನಂತರಕ್ಕೆ ಅದೇ ಜಾಡಿನಲ್ಲಿ ಅನೇಕ ಅಧ್ಯಯನಗಳು ನಡೆದಿವೆಯಾದರೂ ಕ್ಷಮತೆ-ನಿರ್ವಹಣೆಯ ದೃಷ್ಟಿಯಿಂದ ಇವುಗಳ ಮಟ್ಟವನ್ನು ಮುಟ್ಟಿದ್ದಿಲ್ಲ; ಮೀರಿದ್ದಿಲ್ಲ. ಆದ್ದರಿಂದ ಈ ದಿಗ್ದರ್ಶಕ ಮಾರ್ಗಗಳೆಡೆಗೊಂದು ಕ್ಷ-ಕಿರಣ ಇಲ್ಲಿದೆ. |
೧. ಡಾ. ಪದ್ಮಾ ಸುಬ್ರಹ್ಮಣ್ಯಂ ಅವರಿಗೆ ನೂರೆಂಟು ಕರಣಗಳ ಪುನರ್ನವೀಕರಣಕ್ಕೆ ಒದಗಿದ ತಮಿಳುನಾಡಿನ ಚೋಳರ ಕಾಲದ ಶಿಲ್ಪಗಳು. ತಂಜಾವೂರು, ಕುಂಭಕೋಣಂ, ಚಿದಂಬರಂ, ತಿರುವಣ್ಣಾಮಲೈ, ವೃದ್ಧಾಚಲಂ ಮತ್ತು ಇಂಡೋನೇಷ್ಯಾದ ದೇವಾಲಯಗಳಲ್ಲಿ ಕೆತ್ತಲ್ಪಟ್ಟ ಶಿಲ್ಪಾಕೃತಿಗಳ ನಮೂನೆಗಳನ್ನು ಪಡೆದು ಅವುಗಳೊಳಗೆ ಏಕಸೂತ್ರವಾಗಿ ಹಂಚಲ್ಪಟ್ಟಿದ್ದ ಕರಣಗಳ ಚಲನ-ವಲನಗಳನ್ನು ಗುರುತಿಸಿ, ಚಲನೆಗಳಲ್ಲಿದ್ದ ಒಂದು ನಿರಂತರತೆಯನ್ನು ದೃಶ್ಯಾವಹವಾಗಿ ಜೋಡಿಸಿಕೊಂಡು ಸೃಷ್ಟ್ಯಾತ್ಮಕವಾಗಿ ಮಾರ್ಗಕಾಲದ ಕರಣಗಳನ್ನು ಪುನಃಶೋಧಿಸಿದ್ದರು. ಅಲ್ಲಿವರೆಗೂ ಈ ಶಿಲ್ಪಗಳಲ್ಲಿ ಬಿಂಬಿತವಾಗಿದ್ದ ಕರಣಗಳನ್ನು ನಿರ್ದಿಷ್ಟ ಭಂಗಿಗಳೆಂದೇ ಸಂಶೋಧಕರು ಗುರುತಿಸಿದ್ದರಷ್ಟೇ. ಡಾ. ಪದ್ಮಾ ಅವರ ಸಂಶೋಧನೆಯಲ್ಲಿ ಅವು ಚಲನಶೀಲ ಸಾಕಾರಮೂರ್ತಿಗಳೆಂಬುದು ಮೊತ್ತಮೊದಲಿಗೆ ತಿಳಿಯಿತು. ನಾಟ್ಯಶಾಸ್ತ್ರದಲ್ಲಿ ಹೇಳಲಾದ ನಿರ್ದಿಷ್ಟ ನೃತ್ತಕ್ರಮದ ಆಧಾರಕ್ಕೆ ಒಪ್ಪುವಂತೆ ರೂಪಿಸಲಾಗಿದ್ದ ಈ ಪ್ರಾಯೋಗಿಕ ಪರಿಕ್ರಮವು ನೃತ್ಯಸೌಂದರ್ಯದ ನೆಲೆಯಿಂದಲೂ ಆವಿಷ್ಕಾರವೆನಿಸಿತು. ಆವರೆಗೂ ಲುಪ್ತವಾಗಿದ್ದ ಮಾರ್ಗಕಾಲದ ನಾಟ್ಯಕ್ರಮವನ್ನು ಶೋಧಿಸಿದ ಅದ್ವಿತೀಯ ಪ್ರಸಕ್ತಿಯಿದು. ಚಾರಿತ್ರಕವಾಗಿಯೂ ಲಾಕ್ಷಣಿಕವಾಗಿಯೂ ಮಹತ್ತ್ವದ್ದಾದ ಸಂಶೋಧನೆ. ಡಾ. ಪದ್ಮಾ ಅವರ ಜೀವಮಾನವೇ ಈ ಶಿಲ್ಪ ಮತ್ತು ಶಾಸ್ತ್ರಗ್ರಂಥಾಧಾರಿತ ಅಧ್ಯಯನಕ್ಕೆ ಮತ್ತು ಅದರ ಪ್ರಾಯೋಗಿಕ ಸಾಕ್ಷಾತ್ಕರಕ್ಕೆ ಮುಡಿಪಾಗಿದೆ. |
೨. ಇಂಥದ್ದೇ ಬೆಲೆಬಾಳುವ ಮತ್ತೊಂದು ಸಂಶೋಧನೆ ಡಾ.ಪದ್ಮಾ ಸುಬ್ರಹ್ಮಣ್ಯಂ ಅವರ ಶಿಷ್ಯೆ ಸುಂದರೀಸಂತಾನಂ ಅಧ್ಯಯನದಲ್ಲಿ ಪಡಿಮೂಡಿದ ೧೦೮ದೇಶೀಕರಣಗಳ ಪುನರ್ನಿರ್ಮಿತಿ. ಇದಕ್ಕೆ ಆಕರವಾದದ್ದು ಬಳ್ಳಿಗಾವೆಯ ನರ್ತನಸುಂದರಿಯ ಸರಣಿಶಿಲ್ಪಗಳು. ಇದೇನು ಮಾರ್ಗಕರಣಗಳಂತೆ ಚಾರಿತ್ರಕ ಪುನರ್ಸೃಷ್ಟಿಯಾಗಿರಲಿಲ್ಲ. ಒಂದಾನೊಂದು ಕಾಲದಲ್ಲಿ 'ಇದ್ದಿರಬಹುದೆನ್ನಲಾದ' ನೃತ್ಯಶೈಲಿಯನ್ನು ಅಂದಾಜಿಸಿ ಶೋಧಕಿಯು ಕೊಟ್ಟ ಹೊಸ ಸೃಷ್ಟಿಶೀಲ ವ್ಯಾಖ್ಯಾನ. ಹನ್ನೊಂದನೇ ಶತಮಾನದಲ್ಲಿ ಮಾರ್ಗ ಮತ್ತು ದೇಶೀ ನರ್ತನಶೈಲಿಗಳನ್ನು ಸಮನ್ವಯಿಸಿ ಹೊಸ ದೇಶೀಕರಣಗಳ ನೃತ್ಯಸಂವಿಧಾನವನ್ನೇ ನೀಡಿದಳೆನ್ನಲಾದ ರಾಣಿ ಲಚ್ಚಲದೇವಿಯ ಶಾಸನವನ್ನು ಬೆಂಬತ್ತಿ ಹೊರಟವರಿಗೆ ಕಂಡದ್ದು ಉತ್ತರಕನ್ನಡದ ಬಳ್ಳಿಗಾವೆಯಲ್ಲಿ ಚಿತ್ರಿತವಾಗಿದ್ದ ೭೨ ನರ್ತಕಿಶಿಲ್ಪಗಳು. ಆದರೆ ಇವುಗಳಿಗೆ ಅಧಿಕೃತವೆನಿಸುವ ಲಾಕ್ಷಣಿಕ ಉಲ್ಲೇಖಬಲವಿರಲಿಲ್ಲ. ಆದಾಗ್ಯೂ ಆ ಶಿಲ್ಪಗಳಲ್ಲಿ ಹೇಳಿರುವ ವಿವರಗಳೇ ಪಠ್ಯಕ್ರಮವಾಗಿ ಏಕಸೂತ್ರವಾಗಿ ದೇಶಿಯೆಂಬ ನೆಲೆಯಲ್ಲಿ ಹಬ್ಬಿದ್ದಿರಬಹುದೆಂದು ಅಂದಾಜಿಸಿದರು. ಪೂರಕವಾಗಿ ೧೩ನೇ ಶತಮಾನದ ಸುಮಾರಿಗೆ ಸಂಗೀತ ರತ್ನಾಕರವು ಉಲ್ಲೇಖಿಸಿದ ೩೬ ಉತ್ಪ್ಲುತೀ ಕರಣಗಳನ್ನೇ ಪ್ರಾತಿನಿಧಿಕ ಉಲ್ಲೇಖವೆಂದು ಗ್ರಹಿಸಿದರು. ಆ ಮೂಲಕವಾಗಿ ಶಿಲ್ಪಗಳ ಸಂವಿಧಾನಕ್ಕೆ ಬೇಕಾದ ನರ್ತನಲಕ್ಷಣದ ಆಧಾರಕ್ಕೆ ಸಂಗೀತ ರತ್ನಾಕರ ಗ್ರಂಥದ ಅನ್ವಯವನ್ನು ಮಾಡಿಕೊಂಡರು. ಆದರೆ ಸಂಗೀತ ರತ್ನಾಕರದಲ್ಲಿ ಉಲ್ಲೇಖಿಸಲ್ಪಟ್ಟ ೩೬ ಕರಣಗಳಿಗೆ ಬಳ್ಳಿಗಾವೆಯಲ್ಲಿ ಶಿಲ್ಪಗಳ ಸಾಕ್ಷಿ ದೊರಕಲಿಲ್ಲವಾಗಿ, ಆ ಕರಣಗಳು ಮೂಡಿರಬಹುದಾದ ಕಾಲಕ್ಕೆ ಮತ್ತು ಪ್ರದೇಶಕ್ಕೆ ಸಮೀಪವೆನಿಸುವ ದೇವಾಲಯ ರಚನೆಗಳನ್ನು ಆಯ್ದುಕೊಂಡರು. ಕುಪ್ಪಗದ್ದೆ, ಆನವಟ್ಟಿ, ನಾಡಕಳಸಿ, ಕೆಳದಿ, ಡಂಬಳ, ಲಕ್ಕುಂಡಿ, ಬೇಲೂರು, ಹಳೆಬೀಡು, ನುಗ್ಗೇಹಳ್ಳಿಯ ದೇವಾಲಯಗಳನ್ನು ಸಂದರ್ಶಿಸಿ, ಅಲ್ಲಿ ಕಂಡುಬಂದ ೩೬ ಭಂಗಿಗಳನ್ನು ಶಾಸ್ತ್ರೌಚಿತ್ಯದ ನೆಲೆಯಿಂದ ತರ್ಕಿಸಿ ಸಂಗೀತರತ್ನಾಕರದ ಆ ಉಳಿದ ೩೬ ಕರಣಗಳಿಗೆ ಶಿಲ್ಪಾಧಾರವನ್ನು ಹೊಂದಿಸಲಾಯಿತು. ಆಕಾಶಚಾರಿಗಳನ್ನೇ ಬಹುವಾಗಿ ಅವಲಂಬಿಸಿ ಉದ್ಧತವೆನಿಸಿಕೊಳುತ್ತಿದ್ದ ಉತ್ಪ್ಲುತೀ ಕರಣಗಳನ್ನು ಸರಸ ಲಲಿತ ಅಭಿವ್ಯಕ್ತಿಗೊಪ್ಪುವಂತೆ ಪರಿಷ್ಕರಿಸಿ ಪ್ರಾಯೋಗಿಕ ಸ್ಪರ್ಶವನ್ನೂ ಕೊಡಲಾಯಿತು. ಇತ್ತ ಶಿಲ್ಪಾಧಾರವಿದ್ದ ಕರಣಗಳಿಗೆ ಲಕ್ಷಣಗ್ರಂಥಗಳ ಅನ್ವಯವಿರಲಿಲ್ಲವಾಗಿ ಅದಕ್ಕೆಂದೇ ಹೊಸತಾದ ನಾಮಕರಣ ನೆರವೇರಿಸಿದ ಶತಾವಧಾನಿ ಡಾ. ಆರ್. ಗಣೇಶರು ಲಕ್ಷಣಶ್ಲೋಕಗಳನ್ನು ರಚಿಸಿಕೊಟ್ಟರು. ಮಾತ್ರವಲ್ಲ, ಸುಂದರೀ ಸಂತಾನಂ ಅವರು ಈ ೧೦೮ ಕರಣಗಳ ಕಲಿಕೆಗೆ ಅವಶ್ಯವಿದ್ದ ಪ್ರಾಥಮಿಕ ವ್ಯಾಯಾಮ, ಚಾರಿ, ನೃತ್ತಹಸ್ತಗಳನ್ನು ಮಾರ್ಗ ಮತ್ತು ದೇಶೀಲಕ್ಷಣಗ್ರಂಥಗಳೆರಡರ ಸಹಾಯದಿಂದ ದೇಶೀನೃತ್ತನಿರೂಪಣೆಗೆ ಅನುಕೂಲವಾಗುವಂತೆ ಪುನಃಪ್ರಸ್ತುತಿ ಮಾಡಿದರು. ಈ ಅಧ್ಯಯನದಲ್ಲಿ ಸುಂದರೀ ಸಂತಾನಂ ಅವರ ನಡೆಯು ೧೦೮ಕರಣಗಳ ದೇಶೀನೃತ್ತವಿಶೇಷವನ್ನು ಗುರುತಿಸಿಕೊಳ್ಳುವುದೇ ಆಗಿದ್ದರೂ ಅದು ಸಾಕಷ್ಟು ಪ್ರಾಯೋಗಿಕ ಆವಿಷ್ಕಾರ- ಸೃಷ್ಟ್ಯಾತ್ಮಕ ಪ್ರಸ್ತುತಿಯನ್ನೇ ಉದ್ದೇಶಿಸಿದ್ದಾಗಿತ್ತು. ಇದೇ ಸಂದರ್ಭದಲ್ಲಿ ಶಿಲ್ಪಾಧಾರವನ್ನು ಗಮನಿಸಿ ಪ್ರಾಚೀನರ ಕೇಶವಿನ್ಯಾಸವನ್ನೂ ವಿನ್ಯಾಸಗೊಳಿಸಿ ದೇಶೀನೃತ್ತಪ್ರಯೋಗದಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಅನಂತರದಲ್ಲಿ ಶಿಲ್ಪಾಧಾರಿತವಾಗಿದ್ದ ಒಂದು ನೃತ್ಯವಸ್ತುವನ್ನೂ ಪ್ರಾಯೋಗಿಕವಾಗಿ ರಂಗಕ್ಕೂ ತರಲಾಗಿತ್ತು. ಸುಂದರಸ್ತ್ರೀಯೋರ್ವಳು ನೈದಿಲೆಯನ್ನು ಕೊಳದಿಂದ ಕಿತ್ತು ತುರುಬಿಗಿಟ್ಟುಕೊಳ್ಳುವ ಸನ್ನಿವೇಶವದು. ಈ ಸನ್ನಿವೇಶವನ್ನು ಪ್ರಪ್ರತ್ಯೇಕ ಮೂರ್ತಿಶಿಲ್ಪಗಳ ಮೂಲಕ ಕಟೆಯಲಾಗಿದ್ದರಿಂದ ಮೇಲ್ನೋಟಕ್ಕೆ ಪ್ರತಿಯೊಂದು ಶಿಲ್ಪಗಳೂ ಪ್ರತ್ಯೇಕ ಭಂಗಿಗಳಂತೆಯೇ ಕಂಡುಬಂದಿದ್ದವು. ಆದರೆ ದೇವಾಲಯ ಪ್ರಾಕಾರದ ಅಧಿಷ್ಠಾನಪಟ್ಟಿಕೆಯ ಮೇಲುಗಡೆ ಸುತ್ತಲೂ ಕಣ್ಣಾಡಿಸುತ್ತಾ ಹೋದಂತೆಲ್ಲಾ, ಆ ಒಂದು ನಿರ್ದಿಷ್ಟ ಸನ್ನಿವೇಶವನ್ನೇ ಪ್ರತಿಪಾದಿಸುವ ಚಲನವಲನಗಳನ್ನು ಒಂದರ ಅನಂತರದಲ್ಲೊಂದು ಆದ್ಯಂತವಾಗಿ ಪ್ರತಿಪಾದಿಸುತ್ತಾ ಸಾಗಿದಂತಿದ್ದನ್ನು ಶೋಧಕರು ಕಂಡುಕೊಂಡಿದ್ದರು. ಹೀಗೆ ಶಿಲ್ಪಗಳ ನರ್ತನಸಮಯವನ್ನು ಸೃಷ್ಟ್ಯಾತ್ಮಕವಾಗಿ ಲಕ್ಷಣೀಕರಿಸಿದ ಅದ್ವಿತೀಯ ಪ್ರತಿಭೆ ಮತ್ತು ಪರಿಸರವೆರಡೂ ಕರ್ನಾಟಕದಲ್ಲಿತ್ತು ಎಂಬುದೇ ನಮ್ಮ ಹೆಮ್ಮೆ. |
ಇವೆರಡೂ ಅಧ್ಯಯನಗಳ ವೈಶಿಷ್ಟ್ಯವನ್ನು ಕಲಾವಿದೆ, ಸಂಶೋಧಕಿ ಡಾ.ಶೋಭಾ ಶಶಿಕುಮಾರ್ ಹೀಗೆ ಅಭಿಪ್ರಾಯಿಸುತ್ತಾರೆ- ನೃತ್ಯಸಂಶೋಧಕರು ತಮ್ಮ ಶೋಧನೆಯಲ್ಲಿ ಕಂಡುಕೊಂಡ ನರ್ತನಚಲನೆಗಳಲ್ಲಿ ಆಯಾಕಾಲಕ್ಕೆ ಅವರದ್ದೇ ಆದ ಸೃಷ್ಟಿಶೀಲ ಸಾಧ್ಯತೆಗಳು ಹೆಚ್ಚಿರಬಹುದು. ನಂತರದ ಕಾಲಗಳಲ್ಲಿ ಇವು ಕಲಿಕೆಗೂ, ಪ್ರಯೋಗಕ್ಕೂ ಒಳಪಡುವಾಗ ವಿದ್ಯಾರ್ಥಿಗಳಿಗೆ ಅದು ಸೃಷ್ಟಿಶೀಲ ಪುನರ್ನವೀಕರಣವೆಂಬ ಶಿರೋನಾಮೆಯಲ್ಲಷ್ಟೇ ಉಳಿಯುವುದಿಲ್ಲ. ಬದಲಾಗಿ ಶಾಸ್ತ್ರೋಚಿತವಾದ ಶಿಸ್ತುಗಳನ್ನು ಪಡೆದ ನೃತ್ತಸಂಪ್ರದಾಯವಾಗಿ ಮುಂದುವರೆಯುತ್ತದೆ. |
ಒಟ್ಟಿನಲ್ಲಿಇಂತಹ ಐತಿಹಾಸಿಕವೆನಿಸುವ ನರ್ತನೋಪಚಾರ/ಸಂಶೋಧನೆಗಳಷ್ಟೇ ರಂಗದಲ್ಲೂ ಶಾಸ್ತ್ರದಲ್ಲೂ ಗೆಲ್ಲಬಲ್ಲವು ಮತ್ತು ಮಾದರಿಯಾಗಬಲ್ಲವು. |
ಶಿಲ್ಪಗಳ ಕಾವ್ಯೋಪಚಾರ ನೆಲೆ- ಕನ್ನಡದಲ್ಲಿ ಅಂತಃಪುರಗೀತಗಳ ಮೇಲ್ಪಂಕ್ತಿ |
ಶಿಲ್ಪದ ಕಾವ್ಯೋಪಯೋಗಗಳ ಬಗೆಗೊಂದು ಇಣುಕುನೋಟ ಬೀರುವ ಯತ್ನ ಈ ಅಧ್ಯಾಯದ್ದು. ಈ ಪೈಕಿ ಅಂತಃ ಪುರಗೀತಗಳ ಮೇಲ್ಪಂಕ್ತಿಯನ್ನು ಗಮನಿಸುತ್ತಾ, ಅನಂತರದಲ್ಲಿ ಲೇಖಿಕೆಯ ಸಂಶೋಧನಾಂಶಗಳ ಹಿನ್ನೆಲೆಯಲ್ಲಿ ಶಿಲ್ಪಾಧಾರಿತವಾದ ಕಾವ್ಯನಿರ್ಮಾಣದ ಅವಶ್ಯಕತೆಯನ್ನೂ ಇಲ್ಲಿ ವಿಶ್ಲೇಷಿಸಲಾಗಿದೆ. |
ಶಿಲೆ ನಡೆಯಲು ಸಾಧ್ಯವೇ?-ಇಲ್ಲ. ಆದರೆ ಕಲೆಯಾದಾಗ ಅದಕ್ಕೆ ಆಂತರಂಗಿಕವಾದ ನಡೆಯೊಂದು ಸಿದ್ಧಿಸುವುದು ಸುಳ್ಳಲ್ಲ. ಕನಿಷ್ಟಪಕ್ಷ, ಕಲ್ಪನೆಯಲ್ಲಾದರೂ ಸರಿಯೇ- ಶಿಲ್ಪವೊಂದು ಚಲನೆಯ ಪರಿಕಲ್ಪನೆಯನ್ನು ಕಣ್ಣಿಗೆ ನೀಡುವುದು ಸಣ್ಣಸಂಗತಿಯೇನಲ್ಲ. ಇದು ಹಲವು ಬಗೆಗಳಲ್ಲಿ ಪ್ರಸ್ತುತಿಗೊಳ್ಳುತ್ತಿದ್ದರೆ ಆಲಂಬನ ಮತ್ತು ಅವಲಂಬನ ಕಲೆಯೆರಡರ ಆಯುಷ್ಯವೂ ವರ್ಧಿಸುವುದರಲ್ಲಿ ಸಂದೇಹವಿಲ್ಲ. ಶಿಲ್ಪವು ನರ್ತನಕ್ರಮಕ್ಕೂ, ನರ್ತನಕ್ರಮವು ಶಿಲ್ಪೋದ್ಯೋಗಕ್ಕೂ, ಶಿಲ್ಪದಿಂದ ಸಾಹಿತ್ಯಕೃಷಿಗೂ, ಕಾವ್ಯವು ನೃತ್ಯನಿರ್ಮಿತಿಗೂ ಪರಸ್ಪರ ಆದಾನ-ಪ್ರದಾನಗಳನ್ನು ಸಲ್ಲಿಸುವುದೆಂದರೆ ಅದು ದ್ವೈತವಾಗಿ ಮೇಲ್ನೋಟಕ್ಕೆ ತೋರಿಕೊಳ್ಳುವ ಕಲೆಗಳ ಅಸ್ತಿತ್ತ್ವವು ಆಶಯದಲ್ಲಿ ಅದ್ವೈತಸ್ತರಕ್ಕೇರುವ ಸಿದ್ಧಿಗೆ ಸಾಕ್ಷಿ. ಸೃಷ್ಟಿ-ಪ್ರತಿಸೃಷ್ಟಿಗಳ ಈ ಕಲಾಚರ್ಯೆಯಲ್ಲಿ ಶಾಸ್ತ್ರವೂ- ಪ್ರಯೋಗವೂ ಮತ್ತು ಅದನ್ನು ಪೋಷಿಸುವ ಬದುಕಿನ ಮೌಲ್ಯಗಳೂ ಕೇವಲ ಉತ್ಸವಮೂರ್ತಿಯಾಗಷ್ಟೇ ಉಳಿಯದೆ, ಮೂಲಬಿಂಬದಂತಾಗಿ ನಿತ್ಯಪೂಜಾರ್ಹವಾಗಿಸುವ ಕಾಯಕ ಕಲಾವಿದನದ್ದು. |
ಕಲೆಯಿಂದ ಶಿಲೆಯಮೃತ |
ಲಲಿತಕಲೆ ಹೃತ್ಸುಕೃತ | ಬೇಲೂರ ನೋಡು |
ಅಳಿವ ಲೋಕದ ನಡುವೆ ಉಳಿವ ರಸಘಟಿಕೆ ಬಾಳ್ಜೇನ ಗೂಡು– (ಡಿವಿಜಿ, ೨೦೦೨; ೨೦). |
ಹಾಗೆ ನೋಡಿದರೆ, ಡಿವಿಜಿ ಅವರ ಅಂತಃಪುರ ಗೀತಗಳು ಕಾವ್ಯಾತ್ಮಕವಾಗಿ ಅರಳಿಕೊಂಡ ನೃತ್ಯಶೋಧವೇ ಸರಿ. ಬಹುಶಃ ಡಿವಿಜಿ |
ಅವರು ರಚಿಸುವವರೆಗೂ ಶಿಲ್ಪಗಳನ್ನೇ ಆಧರಿಸಿ ಜನಪ್ರಿಯವಾದ ಕಾವ್ಯಕನ್ನ್ಯಕೆಗಳೇ ಇರಲಿಲ್ಲ. ಕುವೆಂಪು ಅವರು ಬರೆದ 'ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ' ಎಂಬ ಪ್ರಸಿದ್ಧ ಪದ್ಯ ಮತ್ತು ಇದೇ ಜಾಡಿನಲ್ಲಿ ಬಂದಿರಬಹುದಾದ ಕೆಲವೊಂದಷ್ಟು ಇತರ ಕವಿಗಳ ಬಿಡಿ ಪದ್ಯರಚನೆಗಳನ್ನು ಗುರುತಿಸಬಹುದಾದರೂ ಅಂತಃಪುರ ಗೀತಗಳಂತೆ ಅಗಾಧತೆಯನ್ನು ಮೊಗಮೊಗೆದು ಕೊಟ್ಟ ಕಾವ್ಯಗಳೇ ಕನ್ನಡದಲ್ಲಿ ಇರಲಿಕ್ಕಿಲ್ಲ. ಅಷ್ಟೇ ಅಲ್ಲ, ಅಂತಃಪುರ ಗೀತಗಳಷ್ಟರ ಮಟ್ಟಿಗೆ ಕಳೆದ ನಾಲ್ಕು ದಶಕಗಳ ಪರ್ಯಂತ ನೃತ್ಯಮಾಧ್ಯಮದಲ್ಲಿ ಮಾತ್ರವಲ್ಲದೆ ಕನ್ನಡ ಚಲನಚಿತ್ರ, ಸಂಗೀತಕಲೆಗಳಲ್ಲಿ ಪ್ರಸ್ತುತಿಗೊಳ್ಳುತ್ತಲೇ ಇರುವ ಅಭಿಜಾತೀಯ ಗುಣದ ಮತ್ತೊಂದು ಕಾವ್ಯವೇ ಇದ್ದಿರಲಾರದು (ಈ ಬಗೆಯ ಕಾವ್ಯಪ್ರಸ್ತುತಿ ಇನ್ನಿತರ ಭಾಷೆಗಳಲ್ಲಿ ಯಾವ ಮಟ್ಟಿಗೆ ನಡೆದಿದೆ, ಅವುಗಳಿಗೆ ಆಧಾರವಾದ ಶಿಲ್ಪಪ್ರಪಂಚದ ವಿಸ್ತಾರ ಎಷ್ಟು, ಹೇಗೆ ಎನ್ನುವುದನ್ನು ಬಗೆಗಾಣುವುದೂ ಆಸಕ್ತರಿಗೆ ಒಂದು ಸಂಶೋಧನಾವಿಷಯವೇ ಆಗಿರುವಂತದ್ದು.) ಇದು ಶಿಲ್ಪಾಧಾರಿತವಾಗಿ ಭಾವಪ್ರಕಾಶವಿರುವಂತೆ ಮಾಡಬೇಕಾದ ಕಾವ್ಯಸೃಷ್ಟಿಗೆ ದಿಗ್ದರ್ಶಕವೂ ಹೌದು. ಇದಕ್ಕೆ ಕಾರಣಗಳನ್ನು ಗುರುತಿಸುವುದಾದರೆ ಡಿವಿಜಿ ಅವರ ಮಾತನ್ನೇ ಗಮನಿಸಬಹುದು. |
ರೂಪಭಾವವು ವಿಗ್ರಹದಲ್ಲಿ ಶಿಲ್ಪಿ ಕೊರೆದಿರುವ ಅಂಗಾಂಗಸಂಜ್ಞೆಗಳಿಂದ ತೋರತಕ್ಕದ್ದು. ವಾಕ್ಯಭಾವವು ಅಂಗಭಂಗಿಗಳ ಇಂಗಿತವನ್ನು ಮಾತುಗಳಿಂದ ಸ್ಪಷ್ಟಪಡಿಸತಕ್ಕದ್ದು. ಗಾನಭಾವವು ಅಕ್ಷರಗಳ ಒಳಗೂ ಹೊರಗೂ ತುಂಬಿಕೊಂಡು ರಂಜನೆಯನ್ನುಂಟುಮಾಡುವ ರಾಗಪ್ರವಾಹ (ಡಿವಿಜಿ, ೨೦೦೨; ೨೦). |
ಕವಿಯಾದವನು ಶಿಲ್ಪಗಳ ಜೀವಚೈತನ್ಯವನ್ನು ಮೂರು ಹೃದಯಭಾವಗಳಾಗಿ ಕಂಡಿರುವುದೇ ಶಿಲ್ಪಗಳನ್ನಾಧರಿಸಿ ಮೂಡಿದ ಮಹತ್ಕಾವ್ಯಕ್ಕೆ ಮುಖ್ಯ ಕಾರಣವೆಂದು ಕಂಡುಕೊಳ್ಳಬಹುದು. ಇನ್ನು ಭಾವಸಂವಹನವಾದರೋ ಭಾರತೀಯ ಶಿಲ್ಪಗಳ ವಿಶೇಷತೆ. ಅದರೊಳಗೂ ಹೊಯ್ಸಳ ಶಿಲ್ಪಗಳಲ್ಲಂತೂ ನಾಟ್ಯಧರ್ಮೀಯ ಪರಿಕಲ್ಪನೆ, ನರ್ತನ ಪ್ರಭಾವ ಹೆಚ್ಚು. ಹಾಗೆಂ ದೇ ಬೇಲೂರಿನ ಮದನಿಕೆಗಳ ಭಾವಜಗತ್ತು ರಸಾವಹಲೋಕವನ್ನೇ ನಿರ್ಮಿಸಿದೆ. ಮದನಿಕೆಗಳ ಅಲಂಕಾರ, ನಡೆ, ಒನಪು, ಮುಖಭಾವ, ಪೋಷಕ ಸಾಮಗ್ರಿಗಳೆಲ್ಲವೂ ಕವಿಕಲ್ಪನೆಗೂ ತನ್ಮೂಲಕ ನರ್ತನಕ್ಕ್ಕೂ ಸುಗ್ರಾಸವನ್ನೇ ಇತ್ತಿವೆ. ರತಿಸ್ಥಾಯಿಭಾವನ್ನಿಟ್ಟುಕೊಂಡೇ ಬಗೆಬಗೆಯಾದ ವಿಭಾವದ ಸಾಧ್ಯತೆಗಳನ್ನು ಮೊಗೆಮೊಗೆದು ಕೊಟ್ಟಿವೆ. ಇದಕ್ಕೆ ಪೋಷಕವಾಗುವ ವ್ಯಭಿಚಾರಿಭಾವಗಳನ್ನು ಕವಿ ಕಲ್ಪನೆಯಿಂದ ಅಧಿಕಗೊಳಿಸಿ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದಾರೆ. ಕಾವ್ಯಾನುಭೂತಿಗೆ ಒದಗಿದ ಬಹುತೇಕ ಶಿಲ್ಪಗಳೂ ಇಂಥವೇ. ಕಾರಣ, ವಿಗ್ರಹಶಿಲ್ಪ ಮತ್ತು ಅಲಂಕರಣಶಿಲ್ಪಗಳ ಆಶಯ ಮತ್ತು ಸೌಂದರ್ಯದೃಷ್ಟಿಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಇದನ್ನು ಪರಿಶೀಲಿಸಿರುವ ಡಿವಿಜಿ ಅವರು, ಪ್ರಚೋದನೀಯವಾದ ಶಿಲ್ಪಗಳ ಗುಣಮಾಹಾತ್ಮ್ಯವನ್ನು ಬೇಲೂರಿನ ನಿದರ್ಶನದಡಿಯಲ್ಲಿ ಕಾಣಿಸಿದ್ದಾರೆ. |
ವಾಸ್ತುಶಿಲ್ಪದ ಅಂಗಭೂತವಾಗಿ ಬರುವುದರಲ್ಲಿ ಉಪಯೋಗಾಂಶವೇ ಎದ್ದು ತೋರುವುದರಿಂದ ಕಲಾವ್ಯಾಪಾರಕ್ಕೆ ಬೆಲೆ ಅತ್ಯಲ್ಪ. ಅದೇ ವಿಗ್ರಹಶಿಲ್ಪದಲ್ಲಿ ಹಾಗಲ್ಲ. ಆದಾಗ್ಯೂ ಬೇಲೂರಿನಂತಹ ಸರ್ವೋತ್ಕೃಷ್ಟ ಕಲಾಭೂಮಿಕೆಗಳಲ್ಲಿ ಅದೂ ಸರ್ವದಾ ಸ್ತುತ್ಯರ್ಹವೇ. ಬೇಲೂರಿನ ಶ್ರೇಷ್ಠತೆಯಿರುವುದೇ ಅದರ ಕಲಾಭಾಗದಲ್ಲಿ ಅಂದರೆ ವಿಗ್ರಹಶಿಲ್ಪದ ಸೌಂದರ್ಯದಲ್ಲಿ. ಅದಕ್ಕಿರುವ ಹೃದಯೋದ್ದೀಪನ ಶಕ್ತಿ ಅನನ್ಯ. ವರ್ಣಿಸಲಸದಳ. ಅದು ಕಲ್ಲಿನದ್ದಾದ ಕಾವ್ಯ. ಈ ಕಾರಣದಿಂದ ಅದರ ಕೀರ್ತಿ (ಡಿವಿಜಿ, ೨೦೦೨; ೨೦). |
ಈ ನೆಲೆಯಲ್ಲಿ ಶಿಲ್ಪಗಳು ಮತ್ತು ಅದರ ಕಾವ್ಯೋಪಚಾರದ ರೀತಿ-ನೀತಿಗಳನ್ನು ಏಕಸೂತ್ರತೆಯಲ್ಲಿ ಕಟ್ಟಿಕೊಟ್ಟಿದ್ದಾರೆ ಸ್ವತಃ ಕವಿಗಳಾದ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು. ಲೇಖನದ ಉದ್ದೇಶ ಮತ್ತು ಪ್ರಶ್ನೆಗಳ ಹಿನ್ನೆಲೆಯಲ್ಲಿ ಕಾವ್ಯಪರಿಹಾರವೆಂಬಂತೆ ಇದನ್ನು ಗುರುತಿಸಿಕೊಳ್ಳಬಹುದಾಗಿರುವುದರಿಂದ ಇಲ್ಲಿ ವಿಶೇಷತಃ ಉಲ್ಲೇಖಿಸಲಾಗಿದೆ. |
ಕಲೆಯನಲ್ಲದೆ ಶಿಲ್ಪಿ ಶಿಲೆಯನೇಂ ಸೃಷ್ಟಿಪನೆ |
ಶಿಲೆಯೆ ತಾಳೇಗರಿಯು ಲೇಖನಿಯೆ ಚಾಣ |
ಘಾತಘಾತದಿ ವರ್ಣವರ್ಣಗಳಲಂಕೃತಿಯ |
Subsets and Splits
No community queries yet
The top public SQL queries from the community will appear here once available.