text stringlengths 0 61.5k |
|---|
ಮೇ 19ರಂದು ಸಂಜೆ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದರು. |
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ನೇಮಕಕ್ಕೆ ಪ್ರಕಟಣೆ ನೀಡಿದ ನಂತರ ನಾಲ್ಕು ತಜ್ಞ ವೈದ್ಯರು, 8 ಜನ ವೈದ್ಯರು ಈಗಾಗಲೇ ಬಂದಿದ್ದಾರೆ. ನರ್ಸ್ ಹಾಗೂ ಗ್ರೂಪ್ ಡಿ ಸಿಬ್ಬಂದಿ ಕೂಡ ಸಮರ್ಪಕ ಪ್ರಮಾಣದಲ್ಲಿದೆ/ 40 ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ಅಚ್ಚುಕಟ್ಟಾಗಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ ಎಂದರು. |
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಸಂವಾದಲ್ಲಿ ನೀಡಲಾಗಿರುವ ಸಲಹೆಗಳು ಮತ್ತು ನಿರ್ದೇಶನಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುವುದು. ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಬೇಕಾದರೆ ಗ್ರಾಪಂ ಸದಸ್ಯರಿಂದ ಹಿಡಿದು ಎಲ್ಲಾ ರೀತಿಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಂದಾಗಿ ಕಾರ್ಯ ನಿರ್ವಹಿಸಿ ಎಂದು ಮೋದಿಯವರು ಸಲಹೆ ನೀಡಿದ್ದಾರೆ; ಅವರ ಸಲಹೆಯಂತೆ ಎಲ್ಲರೂ ಒಂದಾಗಿ ಕೆಲಸ ಮಾಡಲಾಗುತ್ತದೆ ಎಂದರು. |
ಜಿಲ್ಲೆಯಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ, ಆಕ್ಸಿಜನ್ ನಿರ್ವಹಣಾ ಕಮಿಟಿ, ಆಕ್ಸಿಜನ್ ಕೊರತೆಯಾಗದಂತೆ ನೋಡಿ ಕೊಳ್ಳುವುದರ ಜೊತೆಗೆ ಫ್ರಂಟ್ಲೈನ್ ವಾರಿಯರ್ಸ್ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸೈನ್ಯದ ರೀತಿಯಲ್ಲಿ ಕೆಲಸ ಮಾಡಿ ಎಂದು ಹೇಳಿದ್ದಾರೆ, ಅದರಂತೆ ಎಲ್ಲಾ ಕ್ರಮಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು. |
ಪ್ರಧಾನಿ ಮೋದಿಯವರು ಮುಂಬರುವ ಮೂರನೇ ಅಲೆಗೆ ಸಿದ್ಧತೆಯ ಜೊತೆಗೆ ಮಳೆಗಾಲದ ಸಮಯದಲ್ಲಿ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದು, ವಿದ್ಯುತ್ ನಿರಂತರ ಪೂರೈಕೆಗೆ ಶ್ರಮವಹಿಸುಂತೆ ತಿಳಿಸಿದ್ದಾರೆ ಅದರಂತೆ ಕಾರ್ಯ ನಿರ್ವಹಿಸಲಾಗುವುದು ಎಂದರು. |
ಹಳೆಯ ರಸಗೊಬ್ಬರ ದಾಸ್ತಾನು, ಹಳೆಯ ದರದಲ್ಲಿಯೇ ಮಾರಾಟ ಮಾಡಲು ಸೂಚನೆ - Janajagran |
On April 17, 2021 By ramlinganna |
ರಸಗೊಬ್ಬರಗಳ ಧಾರಣೆ ಎಪ್ರೀಲ್-2021 ರಿಂದ ಏರಿಕೆಯಾಗಿದೆ ಎಂಬ ಕಾರಣಕ್ಕೆ ಮಾರ್ಚ್-2021 ರ ವರೆಗೆ ಹೊಂದಿರುವ ಹಳೆಯ ರಸಗೊಬ್ಬರ ದಾಸ್ತಾನನ್ನು ಪರಿಷ್ಕೃತ ದರದ ಬದಲಾಗಿ ಹಳೆಯ ದರದಲ್ಲಿಯೆ ಮಾರಾಟ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರು ಅವರು ಜಿಲ್ಲೆಯ ಎಲ್ಲಾ ಸಗಟು, ಕಿರುಕುಳ ರಸಗೊಬ್ಬರ ಮಾರಾಟಗಾರರಿಗೆ ಸೂಚಿಸಿದ್ದಾರೆ. |
ವಿಶೇಷವಾಗಿ ಚಿಲ್ಲರೆ ಮಾರಾಟಗಾರರು ಪಾಯಿಂಟ್ ಆಫ್ ಸೇಲ್ ಉಪಕರಣದಲ್ಲಿ ಹಳೆಯ ಗೊಬ್ಬರ ದಾಸ್ತಾನನ್ನು ಪರಿಷ್ಕೃತವಲ್ಲದ ದರದಲ್ಲಿ ಮಾರಾಟ ಮಾಡಲು ತಿಳಿಸಿದೆ. ರೈತರಿಗೆ ಈ ದಾಸ್ತಾನನ್ನು ಆದ್ಯತೆ ಮೇಲೆ ಮಾರಾಟ ಮಾಡಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. |
ರೈತ ಬಾಂಧವರು ಎಂ.ಆರ್.ಪಿ. ದರದಲ್ಲಿಯೇ (ಚೀಲದ ಮೇಲೆ ಮುದ್ರಿಸಿದಂತೆ) ರಸಗೊಬ್ಬರಗಳನ್ನು ಖರೀದಿಸುವುದು ಮತ್ತು ಖರೀದಿಸಿದಕ್ಕೆ ಅಂಗಡಿಯವರಿAದ ರಸೀದಿ ಪಡೆಯಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಮನವಿ ಮಾಡಿದ್ದಾರೆ. |
Posted in ಕೃಷಿ ಸುದ್ದಿಗಳುTagged , Instruction to sell fertilizer at the old rateinstructions to sell at old ratesOld fertilizer stock |
ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್ ಸಮನ್ಸ್: ಸಂಸದ ಸ್ಥಾನಕ್ಕೆ ಆಪತ್ತು? | Prajwal Revanna gets summons about wrong information in election nomination - Kannada Oneindia |
14 min ago ಕಾರವಾರಕ್ಕೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ |
50 min ago ಸಂಸದೀಯ ಸಮಿತಿ ಸಭೆಯಲ್ಲಿ ಬಿಜೆಪಿ ಸಂಸದರ ಹೈಡ್ರಾಮಾ |
| Updated: Friday, July 26, 2019, 23:11 [IST] |
ಬೆಂಗಳೂರು, ಜುಲೈ 26: ಜೆಡಿಎಸ್ನ ಏಕೈಕ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಹೈಕೋರ್ಟ್ ಸಮನ್ಸ್ ನೀಡಿದ್ದು, ಚುನಾವಣೆ ಸಮಯದಲ್ಲಿ ನೀಡಿದ್ದ ಆಸ್ತಿ ಮಾಹಿತಿ ಬಗ್ಗೆ ಮಾಹಿತಿ ಕೇಳಿದೆ. |
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಎದುರು ಪರಾಜಿತವಾಗಿರುವ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಪ್ರಜ್ವಲ್ ರೇವಣ್ಣ ಅವರು ನಾಮಪತ್ರದ ವೇಳೆ ಆಸ್ತಿ ಕುರಿತು ಮಾಹಿತಿಯನ್ನು ಚುನಾವಣಾ ಆಯೋಗದಿಂದ ಬಚ್ಚಿಟ್ಟಿದ್ದಾರೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರ ವಿಚಾರಣೆ ನಡೆದು ಈಗ ಸಮನ್ಸ್ ಜಾರಿ ಆಗಿದೆ. |
ಸಂಸದ ಪ್ರಜ್ವಲ್ ರೇವಣ್ಣ ಅವರು ಆಗಸ್ಟ್ 18 ರಂದು ಖುದ್ದು ಹಾಜರಾಗಿ ಉತ್ತರ ನೀಡುವಂತೆ ಹೈಕೋರ್ಟ್ ಸೂಚಿಸಿದೆ. ಅದಾಗದಿದ್ದಲ್ಲಿ ವಕೀಲರ ಮೂಲಕ ಸ್ಪಷ್ಟನೆ ಕೊಡಿಸುವಂತೆ ನ್ಯಾಯಾಲಯ ಹೇಳಿದೆ. |
'ಸಂಸದ ಪ್ರಜ್ವಲ್ ರೇವಣ್ಣ ಅವರು, 2019 ರ ಲೋಕಸಭೆ ಚುನಾವಣೆ ವೇಳೆ ಚುನಾವಣೆ ಆಯೋಗಕ್ಕೆ ನಾಮಪತ್ರ ಸಲ್ಲಿಸಿದಾಗ ನೀಡಿದ್ದ ದಾಖಲೆಗಳನ್ನು ಮತ್ತು ಚುನಾವಣಾ ವೆಚ್ಚದ ಮಾಹಿತಿಯನ್ನು ಜುಲೈ 3 ರ ಒಳಗಾಗಿ ನೀಡಬೇಕು' ಎಂದು ಹೈಕೋರ್ಟ್, ಹಾಸನ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. |
ಕಳೆದ ಬಾರಿಯೂ ಇಂತಹುದೇ ಸಮನ್ಸ್ ಅನ್ನು ನೀಡಲಾಗಿತ್ತು, ಆಗ ಉತ್ತರಿಸಿದ್ದ ಜಿಲ್ಲಾಧಿಕಾರಿಗಳು, ಕಡತಗಳು ಖಜಾನೆಯಲ್ಲಿ ಸುರಕ್ಷಿತವಾಗಿದ್ದು, ತ್ವರಿತವಾಗಿ ನೀಡಲಾಗದು ಎಂದು ಉತ್ತರ ನೀಡಿದ್ದರು. |
ಅಕಸ್ಮಾತ್ ಎ.ಮಂಜು ಅವರು ದಾವೆ ಹೂಡಿರುವಂತೆ ಪ್ರಜ್ವಲ್ ರೇವಣ್ಣ ಅವರು ಆಸ್ತಿ ವಿವರವನ್ನು ಚುನಾವಣಾ ಆಯೋಗದಿಂದ ಮುಚ್ಚಿಟ್ಟಿದ್ದಾರೆ ಎಂದು ಸಾಬೀತಾದಲ್ಲಿ ಪ್ರಜ್ವಲ್ ರೇವಣ್ಣ ಅವರ ಸಂಸತ್ ಸ್ಥಾನ ಅನರ್ಹಗೊಳ್ಳುವ ಭೀತಿ ಇದೆ. |
prajwal revanna high court lok sabha elections 2019 nomination ಪ್ರಜ್ವಲ್ ರೇವಣ್ಣ ಹೈಕೋರ್ಟ್ ಲೋಕಸಭಾ ಚುನಾವಣೆ 2019 ನಾಮಪತ್ರ |
JDS only MP Prajwal Revanna gets high court summons about giving wrong information and hiding information about his income in election nomination in lok sabha elections 2019. |
ನಾನು ಮೊನ್ನೆ ಅ೦ಗಡಿಯಿ೦ದ ಹಿ೦ತಿರುಗುವಾಗ ದಾರಿಯಲ್ಲೊಬ್ಬಳು ಹೆ೦ಗಸು ಹಲಸಿನ ಹಣ್ಣಿನ ತೊಳೆಗಳನ್ನು ಮಾರುತ್ತಿದ್ದಳು. ಅದನ್ನು ನೋಡಿದಾಗ ನನಗೆ ನೆನಪಿಗೆ ಬ೦ದದ್ದು ನನ್ನಮ್ಮ ಮಾಡುತ್ತಿದ್ದ ಹಲಸಿನ ಹಣ್ಣಿನ ಗಟ್ಟಿ. ಅದನ್ನೇ ಬ್ಲಾಗಿನಲ್ಲೂ ಬರೆದು ನಿಮಗೆ ಹಲಸಿನ ಹಣ್ಣಿನ ಗಟ್ಟಿಯನ್ನು ಉಣಬಡಿಸುತ್ತೇನೆ. |
ಮನೆಯ ಹಿತ್ತಲಿನ ಮರದಿ೦ದ ಬಲಿತ ಹಲಸಿನ ಕಾಯಿಯನ್ನು ಅಮ್ಮ ಕೊಯ್ದು ತ೦ದು ಮನೆಯ ಮೂಲೆಯೊ೦ದರಲ್ಲಿ ಗೋಣಿ ಚೀಲದೊಳಗಿಡುತ್ತಿದ್ದಳು. ಅದರ ನ೦ತರ ನನಗೆ ಮತ್ತು ನನ್ನ ತ೦ಗಿಗೆ ಅದು ಹಣ್ಣಾಗಿದೆಯೋ ಇಲ್ಲವೋ ಎ೦ದು ದಿನಾ ಅದನ್ನು ಕುಟ್ಟಿನೋಡುವುದೇ ಕೆಲಸ. ಹಲಸನ್ನು ಕುಟ್ಟಿದಾಗ ಬರುವ ಶಬ್ಧದಿ೦ದ ಅದು ಹಣ್ಣೊ ಕಾಯಿಯೋ ಎ೦ದು ತಿಳಿಯುವ ಬ್ರಹ್ಮವಿದ್ಯೆ ನನ್ನ ತ೦ಗಿಗೆ ಕರಗತ. ನಾನು ಅದರಲ್ಲಿ ದಡ್ಡ. ನಾನು ಬಗ್ಗಿ ಹಲಸನ್ನು ಮೂಸಿ ಅದು ಹಣ್ಣೋ ಕಾಯಿಯೋ ಎ೦ದು ಹೇಳುವುದರಲ್ಲಿ ನಿಸ್ಸೀಮ. ಹಾಗೆ ತ೦ದಿಟ್ಟ ಹಲಸು ಹಣ್ಣಾಗಲು ೪-೫ ದಿನ, ಇಲ್ಲವೆ೦ದರೆ 'ಸೊಕ್ಕಿನ ಕಾಯಿ' ಆದರೆ ಒ೦ದು ವಾರಕ್ಕಿ೦ತಲೂ ಹೆಚ್ಚು ದಿನ ಬೇಕಾಗುವುದು. ಹಲಸು ಬೇಗ ಹಣ್ಣಾಗದಿದ್ದರೆ ಅದು 'ಸೊಕ್ಕಿನ ಕಾಯಿ' ಎ೦ದು ನಾವು ಮಾಡಿದ ಆರೋಪ. |
ನಾನು ಮೂಸಿ ನೋಡಿ, ನನ್ನ ತ೦ಗಿ ಕುಟ್ಟಿನೋಡಿ ಹಲಸು ಹಣ್ಣಾಗಿದೆ ಎ೦ದು ಖಚಿತಪಡಿಸಿಕೊ೦ಡ ನ೦ತರ ಅಮ್ಮನಿಗೆ ಹಲಸನ್ನು ಕೊಯ್ಯೆ೦ದು ದು೦ಬಾಲು ಬೀಳುತ್ತಿದ್ದೆವು. ಅಮ್ಮ ತನ್ನ ಬ್ಯುಸಿ ಶೆಡ್ಯೂಲಿನ ನಡುವೆ ಸಮಯ ಸಿಕ್ಕರೆ, ಹಲಸನ್ನು ಕೊಯ್ಯಲು ಮುಹೂರ್ತ ಫಿಕ್ಸ್ ಮಾಡುತ್ತಿದ್ದಳು. ಆ ಮುಹೂರ್ತದ ಮೊದಲು ನಾವು ಏನು ಕೆಲಸ ಹೇಳಿದರೂ ಮಾಡುತ್ತೇವೆ ಎ೦ದು ಗೊತ್ತಿದ್ದ ಅಮ್ಮ ತನ್ನ ಸಣ್ಣಪುಟ್ಟ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಳು. ತನ್ನ ವೇಳಾ ಪಟ್ಟಿಯಲ್ಲಿ ತುಸು ಹೆಚ್ಚು ಸಮಯ ಮಿಕ್ಕಿದ್ದರೆ ಅಮ್ಮ ಹಲಸಿನ ಗಟ್ಟಿ ಮಾಡುವ ದೊಡ್ಡ ಮನಸು ಮಾಡುತ್ತಿದ್ದಳು. ಆಗ ನನ್ನ ಮತ್ತು ತ೦ಗಿಯ ದ೦ಡಯಾತ್ರೆ ತೋಟಕ್ಕೆ ಹೊರಡುತ್ತಿತ್ತು ತೇಗದ ಎಲೆ ಕೊಯ್ದು ತರಲು. ಅಮ್ಮ ಹಲಸಿನ ಗಟ್ಟಿ ಮಾಡುತ್ತಿದ್ದುದು ತೇಗದ ಎಲೆಯಲ್ಲಿ. ಬಾಳೆ ಎಲೆಯಲ್ಲಿ ಮಾಡಿದ ಗಟ್ಟಿಗಿ೦ತ ತೇಗದ ಎಲೆಯಲ್ಲಿ ಮಾಡಿದ ಗಟ್ಟಿಯ ರುಚಿಯೇ ಬೇರೆ. ತೋಟದಲ್ಲಿರುವ ತೇಗದ ಮರದಿ೦ದ ದೊಡ್ಡ ದೊಡ್ಡ ತೇಗದ ಎಲೆಗಳನ್ನು ಕೊಯ್ದು ತರುತ್ತಿದ್ದೆವು ನಾನು ಮತ್ತು ನನ್ನ ತ೦ಗಿ. ತೇಗದ ಚಿಗುರೆಲೆಯನ್ನು ಅ೦ಗೈಗೆ ತಿಕ್ಕಿದರೆ ಅ೦ಗೈ ಕೆ೦ಪಾಗುತ್ತದೆ. ಸಣ್ಣವರಿದ್ದಾಗ ಹೀಗೆ ಅ೦ಗೈಗೆ ತಿಕ್ಕಿಕೊ೦ಡು 'ಗಾಯ… ರಕ್ತ….' ಎ೦ದೆಲ್ಲಾ ಹುಡುಗಾಟ ಮಾಡುತ್ತಿದ್ದೆವು. |
ಹಣ್ಣು ಕೊಯ್ಯುವ ಮುಹೂರ್ತ ಸಮೀಪಿಸಿದಾಗ ನಾನು ಒ೦ದು ಗೋಣಿ ಚೀಲದ ಮೇಲೆ ಹಲಸನ್ನು ಇಟ್ಟು ಅದರ ಹತ್ತಿರ ಕೊಯ್ಯಲು ಕತ್ತಿ ಇಟ್ಟು ರೆಡಿ ಮಾಡುತ್ತಿದ್ದೆ. ನನ್ನ ತ೦ಗಿ ಒ೦ದು ತಟ್ಟೆಯಲ್ಲಿ ತೆ೦ಗಿನೆಣ್ಣೆ ತ೦ದಿಡುತ್ತಿದ್ದಳು ಮೇಣ ಕೈಗೆ ಮೆತ್ತದಿರಲೆ೦ದು. ಇಷ್ಟೆಲ್ಲಾ ತಯಾರಿಯಾದ ಮೇಲೆ ನನ್ನಮ್ಮ ರಾಣಿಯ ಹಾಗೆ ಬ೦ದು ಹಣ್ಣು ಕೊಯ್ಯುವ ಮಹತ್ಕಾರ್ಯ ನಿರ್ವಹಿಸುತ್ತಿದ್ದಳು. ಹಲಸನ್ನು ಕೆಲವು ತು೦ಡುಗಳಾಗಿ ಮಾಡಿದ ಮೇಲೆ ನನ್ನ ಅಕ್ಕ ರ೦ಗಪ್ರವೇಶ ಮಾಡುತ್ತಿದ್ದಳು. ನ೦ತರ ನಾವೆಲ್ಲಾ ಸೇರಿ ಹಣ್ಣಿನ ತೊಳೆಯನ್ನು ಬೇರ್ಪಡಿಸಿ, ತು೦ಡು ಮಾಡಿ ಬೋಗುಣಿಯಲ್ಲಿ ಹಾಕುತ್ತಿದ್ದೆವು. |
ಬೆಳ್ತಿಗೆ ಅಕ್ಕಿಯನ್ನು ಎರಡು ಮೂರು ಗ೦ಟೆಗಳವರೆಗೆ ನೆನೆಸಿಡಬೇಕು. ಅಕ್ಕಿಯ ಪ್ರಮಾಣ ಮತ್ತು ನಿಮ್ಮ ಮನೆಯಲ್ಲಿರುವ ಸದಸ್ಯರ ಸ೦ಖ್ಯೆ ನೇರ ಅನುಪಾತದಲ್ಲಿರುತ್ತದೆ. ಹಲಸಿನ ತೊಳೆಯ ಪ್ರಮಾಣದ ಬಗ್ಗೆ ಹೇಳಬೇಕೆ೦ದರೆ, ಅಕ್ಕಿಯೊಳು ಹಲಸಿನ ತೊಳೆಯಿರುವ೦ತೆ ಇರಬೇಕು, ಅದು ಬಿಟ್ಟು ಹಲಸಿನ ತೊಳೆಯೊಳು ಅಕ್ಕಿ ಇರುವ೦ತೆ ಇರಬಾರದು. ಇದಕ್ಕೆ ಸ್ವಲ್ಪ ಬೆಲ್ಲ (ಸಿಹಿಗೆ), ಜೀರಿಗೆ (ಹಲಸು ಗ್ಯಾಸ್ ಉತ್ಪಾದಕ ಅದಕ್ಕೆ), ನ೦ತರ ಕಾಳುಮೆಣಸು (ಸಿಹಿ-ಕಾರ ಪ್ರಿಯರಿಗೆ) ಮತ್ತು ಪರಿಮಳಕ್ಕೆ ಏಲಕ್ಕಿ ಹಾಕಿ ಸಣ್ಣಗೆ ಕಡೆಯಬೇಕು.ತೆ೦ಗಿನ ತುರಿಯನ್ನು ಕಡೆಯುವಾಗಲೇ ಹಾಕಬಹುದು ಅಥವಾ ಕಡೆದಾದ ಮೇಲೆ ಕಣಕವನ್ನು ತೇಗದ ಎಲೆಯ ಮೇಲೆ ಹಚ್ಚಿಯಾದ ಮೇಲೆ ಅದರ ಮೇಲೆ ಉದುರಿಸಬಹುದು. ಕಣಕವನ್ನು ತೇಗದ ಎಲೆಯ ಮೇಲೆ ಹಚ್ಚಿ, ನ೦ತರ ಎಲೆಯನ್ನು ಮಡಚಿ, ಇಡ್ಲಿಯನ್ನು ಬೇಯಿಸುವ೦ತೆ ಹಬೆಯಲ್ಲಿ ಬೇಯಿಸಬೇಕು. ತೇಗದ ಎಲೆಯಲ್ಲಿ ಬೇಯಿಸಿದ್ದರೆ, ಹಲಸಿನ ಗಟ್ಟಿ ಕೆ೦ಪು ಕೆ೦ಪಾಗಿ ನೋಡಲು ಆಕರ್ಷಕವಾಗಿರುತ್ತದೆ. ಹಲಸಿನ ಗಟ್ಟಿ ಬಿಸಿಯಾಗಿರುವಾಗ ತಿನ್ನುವುದಕ್ಕಿ೦ತ ಬಿಸಿ ಆರಿದ ಮೇಲೆ ತಿನ್ನಲು ರುಚಿ. ನ೦ತರ……. ನ೦ತರ ಏನು…? ಗಟ್ಟಿಯನ್ನು ತಿ೦ದು ಆನ೦ದಿಸಿ ಮತ್ತು ಗಟ್ಟಿ ತಿನ್ನಲು ನನ್ನನ್ನು ಕರೆಯಲು ಮರೆಯದಿರಿ! |
ಹಲಸಿನ ಗಟ್ಟಿಯನ್ನು ಮಾಡುವ ವಿಧಾನವನ್ನು ವಿವರಿಸುವಾಗ ಅದರ ಹಿಂದಿನ ಅಕ್ಕ ತಂಗಿ ಅಮ್ಮನ ಅನುಭವಗಳನ್ನು ಸೇರಿಸಿದುದರಿಂದಲೇ ಈ ಬರಹವು ಹಲಸಿನ ಗಟ್ಟಿಯಂತೆ ರುಚಿಯಾಗಿದೆ. ಅರಸಿನ (turmeric) ಎಲೆಯಲ್ಲಿ ಮಡಚಿಟ್ಟರೆ ಅಥವಾ ತೇಗ / ಬಾಳೆ ಎಲೆಯ ಜತೆಗೆ ಅರಸಿನ ಎಲೆ ಇಟ್ಟರೆ ಪರಿಮಳವೂ ಬರುತ್ತದೆ. |
ಬಾನಾಡಿ ಅವರು ಸರಿಯಾಗಿ ಹೇಳಿದ್ದಾರೆ. ಬೆಂಗಳೂರಿನವರಾದ ನಮಗೆ ಇಂತ ರುಚಿಯೆಲ್ಲ ತುಂಬಾ ದೂರ. ರೆಸಿಪಿಗಿಂತ ಅದರ ಹಿಂದಿನ ನೈಜ ಭಾವನಾತ್ಮಕ ಜಗತ್ತೇ... ಬಹಳ ಹಿಡಿಸಿತು. |
24 July 2008 at 02:52 |
ಆಹಾ! ಹಲಸಿನ ಗಟ್ಟಿ ರುಚಿ! ಬಾಯಲ್ಲಿ ನೀರೂರಿಸಿಬಿಟ್ಟಿರಲ್ರೀ! ನಿಮ್ಮ ಬರವಣಿಗೆ ನನ್ನ ಬಾಲ್ಯದ ನೆನಪನ್ನು ಮರುಕಳಿಸಿಬಿಟ್ಟಿತು. |
ಟಾಲಿವುಡ್ Archives - ಸಿನಿ ಲಹರಿ |
ಸಿನಿ ಲಹರಿ |
Category: ಟಾಲಿವುಡ್ |
ನಾಗಚೈತನ್ಯರನ್ನು ನಿರ್ದೇಶಿಸಿದ ಫರ್ಹಾ ಖಾನ್ |
Post author By ದೇಶಾದ್ರಿ ಹೊಸ್ಮನೆ |
No Comments on ನಾಗಚೈತನ್ಯರನ್ನು ನಿರ್ದೇಶಿಸಿದ ಫರ್ಹಾ ಖಾನ್ |
ಬಾಲಿವುಡ್ನ ಪ್ರತಿಭಾವಂತ ನೃತ್ಯಸಂಯೋಜಕಿ, ಚಿತ್ರನಿರ್ದೇಶಕಿ ಫರ್ಹಾ ಖಾನ್ ತೆಲುಗು ನಟ ನಾಗಚೈತನ್ಯರನ್ನು ನಿರ್ದೇಶಿಸಿದ್ದಾರೆ. ಆದರೆ ಇದು ಸಿನಿಮಾ ಅಲ್ಲ. ನಾಗಚೈತನ್ಯ ನಟಿಸಿರುವ ಜಾಹೀರಾತೊಂದನ್ನು ನಿರ್ದೇಶಿಸಿರುವ ಫರ್ಹಾ ಟ್ವಿಟರ್ನಲ್ಲಿ ಯುವನಟನ ಜೊತೆಗಿನ ಫೋಟೋ ಹಂಚಿಕೊಂಡು ಸಂತಸಪಟ್ಟಿದ್ದಾರೆ. ವಿಶೇಷವೆಂದರೆ 1990ರಲ್ಲಿ ಫರ್ಹಾ ಅವರು ನಾಗಚೈತನ್ಯರ ತಂದೆ – ನಟ ನಾಗಾರ್ಜುನ ಅವರ ಸಿನಿಮಾ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದರಂತೆ. |
ನಾಗಚೈತನ್ಯ ಜೊತೆಗಿನ ಫೋಟೋ ಹಂಚಿಕೊಂಡಿರುವ ಫರ್ಹಾ, "ಇಪ್ಪತ್ತೈದು ವರ್ಷಗಳ ಹಿಂದೆ ನಾಗಾರ್ಜುನ ಅವರಿಗೆ ನೃತ್ಯ ಸಂಯೋಜಿಸಿದ್ದೆ. ಆಗಿನಿಂದಲೂ ನಾಗಾರ್ಜುನ ನನಗೆ ಒಳ್ಳೆಯ ಸ್ನೇಹಿತರಾಗಿದ್ದಾರೆ. ಈಗ ನಾಗ್ ಪುತ್ರನ ಜಾಹೀರಾತು ನಿರ್ದೇಶಿಸಿದ್ದೇನೆ. ಬದುಕು ಒಂದು ರೌಂಡು ಹೊಡೆದಿದೆ. ನನಗೆ ಹೆಚ್ಚು ವಯಸ್ಸಾಯ್ತೇನೋ ಎಂದು ಗೊಂದಲವಾಗುತ್ತಿದೆ!" ಎಂದು ಬರೆದುಕೊಂಡಿದ್ದಾರೆ. |
'ಲವ್ ಸ್ಟೋರಿ' ತೆಲುಗು ಚಿತ್ರದಲ್ಲಿ ಸಾಯಿ ಪಲ್ಲವಿ, ನಾಗ ಚೈತನ್ಯ |
ಹಿರಿಯ ನೃತ್ಯ ಸಂಯೋಜಕಿ ಫರ್ಹಾ ಖಾನ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದಿದ್ದಾರೆ ನಾಗ ಚೈತನ್ಯ. ಇನ್ನು ಮುಂದಿನ ತಿಂಗಳು ಏಪ್ರಿಲ್ 16ರಂದು ಅವರ 'ಲವ್ ಸ್ಟೋರಿ' ಸಿನಿಮಾ ತೆರೆಕಾಣಲಿದೆ. ಶೇಖರ್ ಕಮ್ಮುಲು ನಿರ್ದೇಶನದ ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿ. ವಿಕ್ರಂ ಕುಮಾರ್ ನಿರ್ದೇಶನದ 'ಥ್ಯಾಂಕ್ ಯೂ' ತೆಲುಗು ಚಿತ್ರದಲ್ಲಿ ನಾಗಚೈತನ್ಯ ಹಾಕಿ ಆಟಗಾರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಈ ವರ್ಷಾಂತ್ಯದಲ್ಲಿ ಥಿಯೇಟರ್ಗೆ ಬರಲಿದೆ. |
ಅಲಿಯಾ 'ಆರ್ಆರ್ಆರ್' ಫಸ್ಟ್ಲುಕ್ ಔಟ್ |
No Comments on ಅಲಿಯಾ 'ಆರ್ಆರ್ಆರ್' ಫಸ್ಟ್ಲುಕ್ ಔಟ್ |
ರಾಜ್ಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್ಆರ್ಆರ್' ಚಿತ್ರದಲ್ಲಿನ ನಟಿ ಅಲಿಯಾ ಭಟ್ ಫಸ್ಟ್ಲುಕ್ ಇಂದು ಬಿಡುಗಡೆಯಾಗಿದೆ. ಬಾಲಿವುಡ್ ನಟಿ ಅಲಿಯಾ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಜನ್ಮದಿನದ ಉಡುಗೊರೆಯಾಗಿ ನಿರ್ದೇಶಕ ರಾಜ್ಮೌಳಿ ಫಸ್ಟ್ಲುಕ್ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ. "ಭರಪೂರ ಆತ್ಮವಿಶ್ವಾಸದ ದಿಟ್ಟ ಮಹಿಳೆ ಸೀತಾ" ಎನ್ನುವ ಒಕ್ಕಣಿಯೊಂದಿಗೆ ರಾಜ್ಮೌಳಿ ಅಲಿಯಾ ಪಾತ್ರದ ಫೋಟೋ ಟ್ವೀಟ್ ಮಾಡಿದ್ದಾರೆ. |
ವೈವಿಧ್ಯಮಯ ಪಾತ್ರಗಳ ಮೂಲಕ ಬಾಲಿವುಡ್ನಲ್ಲಿ ಛಾಪು ಮೂಡಿಸುತ್ತಿರುವ ಅಲಿಯಾ ಭಟ್ ಇದೀಗ 'ಆರ್ಆರ್ಆರ್' (ರೌದ್ರಂ ರಣಂ ರುಧಿರಂ) ಚಿತ್ರದೊಂದಿಗೆ ದಕ್ಷಿಣಕ್ಕೆ ಬಂದಿದ್ದಾರೆ. ಸ್ವಾತಂತ್ರ್ಯಪೂರ್ವದ ಕತೆಯ ಈ ಚಿತ್ರಕ್ಕೆ ಹೊಂದುವಂತಹ ರೆಟ್ರೋ ಲುಕ್ನಲ್ಲಿ ಅಲಿಯಾ ಗಮನ ಸೆಳೆಯುತ್ತಿದ್ದಾರೆ. ಸುಮಾರು 1920ರ ಕಾಲಘಟ್ಟದ ಕತೆ ಎನ್ನುವುದು ರಾಜ್ಮೌಳಿ ಅವರ ಹೇಳಿಕೆ. |
ತೆಲುಗಿನ ಬುಡಕಟ್ಟು ಜನಾಂಗದ ವೀರರ ಪಾತ್ರಗಳಲ್ಲಿ (ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರನ್ ಭೀಮ್) ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್ಟಿಆರ್ ನಟಿಸಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್, ಸಮುದ್ರಖನಿ, ಒಲಿವಿಯಾ ಮೋರಿಸ್, ಅಲಿಸನ್ ಡೂಡಿ, ರೇ ಸ್ಟೀವನ್ಸನ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ ವರ್ಷ ಅಕ್ಟೋಬರ್ 31ರಂದು ಸಿನಿಮಾ ತೆರೆಕಾಣಲಿದೆ. ಇನ್ನು ಅಲಿಯಾ ಭಟ್ 'ಆರ್ಆರ್ಆರ್' ಅಲ್ಲದೆ 'ಗಂಗೂಬಾಯಿ ಕಥಿಯಾವಾಡಿ' ಮತ್ತು 'ಬ್ರಹ್ಮಾಸ್ತ್ರ' ಹಿಂದಿ ಚಿತ್ರಗಳು ತೆರೆಗೆ ಸಿದ್ಧವಾಗುತ್ತಿವೆ. |
ಚಿತ್ರರಂಗದಲ್ಲಿ ಹನ್ನೊಂದು ವರ್ಷ ಪೂರೈಸಿದ ಸಮಂತಾ; ಈಗಲೂ ಅವರು ಬೇಡಿಕೆಯ ನಟಿ |
No Comments on ಚಿತ್ರರಂಗದಲ್ಲಿ ಹನ್ನೊಂದು ವರ್ಷ ಪೂರೈಸಿದ ಸಮಂತಾ; ಈಗಲೂ ಅವರು ಬೇಡಿಕೆಯ ನಟಿ |
ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಮಂತಾ ಅಕ್ಕಿನೇನಿ ಜನಪ್ರಿಯ ನಟಿ. ಗ್ಲಾಮರಸ್ ನಟಿಯಾಗಿ ಬೆಳ್ಳಿತೆರೆ ಪ್ರವೇಶಿಸಿದ ಅವರು ಇದೀಗ ಅಪರೂಪದ, ವಿಶಿಷ್ಟ ಕತೆಗಳಲ್ಲಿ ನಟಿಸತೊಡಗಿದ್ದಾರೆ. ಸ್ವತಃ ತಮ್ಮ ಹೆಸರಿನಿಂದಲೇ ಥಿಯೇಟರ್ಗೆ ಪ್ರೇಕ್ಷಕರನ್ನು ಕರೆತರುವಷ್ಟು ಖ್ಯಾತಿ ಅವರದಾಗಿದೆ. ಇಂದಿಗೆ ಅವರು ಸಿನಿಮಾ ಪ್ರವೇಶಿಸಿ ಹನ್ನೊಂದು ವರ್ಷ. ತೆಲುಗು ಜನಪ್ರಿಯ ನಟ ನಾಗ ಚೈತನ್ಯ ಪತ್ನಿಯಾಗಿ, ಪ್ರತಿಷ್ಠಿತ ಅಕ್ಕಿನೇನಿ ಕುಟುಂಬದ ಸೊಸೆಯಾಗಿ ವೈಯಕ್ತಿಕ ಬದುಕಿನಲ್ಲೂ ಆಕೆ ಸಂತೃಪ್ತರು. |
ಗೌತಮ್ ಮೆನನ್ ನಿರ್ದೇಶನದ 'ಯೇ ಮಾಯ ಚೇಸಾವೆ' (2010) ತೆಲುಗು ಚಿತ್ರದೊಂದಿಗೆ ಅವರು ಸಿನಿಮಾಗೆ ಪರಿಚಯವಾಗಿದ್ದು. ನಾಗ ಚೈತನ್ಯ ಹೀರೋ ಆಗಿ ನಟಿಸಿದ್ದ ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಈ ಗೆಲುವು ಅವರ ವೃತ್ತಿ ಬದುಕಿಗೆ ಚಿಮ್ಮು ಹಲಗೆಯಾಯ್ತು. ಮುಂದೆ ಅವರು ನಟಿಸಿದ ಸಾಕಷ್ಟು ಸಿನಿಮಾಗಳು ದೊಡ್ಡ ಯಶಸ್ಸು ಕಂಡವು. ದೂಕುಡು, ಬೃಂದಾವನಂ, ಅತ್ತಾರಿಂಟಿಕಿ ದಾರೇದಿ, ಈಗಾ, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು, ಮನಂ, ಸನ್ಆಫ್ ಸತ್ಯಮೂರ್ತಿ, ಜನತಾ ಗ್ಯಾರೇಜ್, ರಂಗಸ್ಥಳಂ, ಮಹಾನಟಿ ಚಿತ್ರಗಳಲ್ಲಿ ಪ್ರೇಕ್ಷಕರು ಅವರನ್ನು ಮೆಚ್ಚಿಕೊಂಡರು. |
ತಮಿಳಿನಲ್ಲೂ ಅವರು ಸಾಕಷ್ಟು ಯಶಸ್ಸು ಕಂಡ ತಾರೆ. ಕತ್ತಿ, ಥೆರಿ, 24, ಮೆರ್ಸಲ್, ಸೂಪರ್ ಡಿಲಕ್ಸ್ ಕೆಲವು ಉದಾಹರಣೆ. ಅವರ ನಾಯಕಿಪ್ರಧಾನ ಸಿನಿಮಾ 'ಓಹ್ ಬೇಬಿ' ಬ್ಲಾಕ್ಬಸ್ಟರ್ ಎನಿಸಿಕೊಂಡಿತು. ಈ ಮೂಲಕ ಹೀರೋ ಇಲ್ಲದೆಯೇ ಸ್ವತಃ ತಮ್ಮ ನಾಮಬಲದಿಂದ ಸಿನಿಮಾ ಗೆಲ್ಲಿಸಬಲ್ಲೆ ಎನ್ನುವುದನ್ನು ಅವರು ಸಾಬೀತು ಮಾಡಿದರು. ಕಳೆದ ವರ್ಷ ಅವರ 'ಜಾನು' ಸಿನಿಮಾ ತೆರೆಕಂಡಿತ್ತು. ಈ ವರ್ಷ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿಯೊಂದಿಗೆ ಅವರು ಓಟಿಟಿಗೂ ಪದಾರ್ಪಣೆ ಮಾಡಿದ್ದಾರೆ. ಸದ್ಯ ತೆಲುಗು ಸಿನಿಮಾ 'ಶಾಕುಂತಲಂ' ಮತ್ತು ತಮಿಳು 'ಕಥುವಾಕುಲ ರೆಂಡು ಕಾಧಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಹನ್ನೊಂದು ವರ್ಷ ಪೂರೈಸಿದರುವ ಸಮಂತಾಗೆ ಅವರ ತಾರಾ ನಟಿ ಕೀರ್ತಿ ಸುರೇಶ್ ಶುಭ ಹಾರೈಸಿದ್ದಾರೆ. |
ಸಮಂತಾಗೆ ನಟಿ ಕೀರ್ತಿ ಸುರೇಶ್ ಅವರಿಂದ ಅಭಿನಂದನೆ |
ಯಾರಾಗಲಿದ್ದಾರೆ 'ಸೀತಾ'? ಅನುಷ್ಕಾ ಅಥವಾ ಕೀರ್ತಿಗೆ ಒಲಿಯಲಿದೆಯೇ ಅದೃಷ್ಟ? |
No Comments on ಯಾರಾಗಲಿದ್ದಾರೆ 'ಸೀತಾ'? ಅನುಷ್ಕಾ ಅಥವಾ ಕೀರ್ತಿಗೆ ಒಲಿಯಲಿದೆಯೇ ಅದೃಷ್ಟ? |
ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ದೊಡ್ಡ ಯಶಸ್ಸು ಫ್ಯಾಂಟಸಿ ಐತಿಹಾಸಿಕ ಚಿತ್ರಗಳಿಗೆ ಪ್ರೇರಣೆ ನೀಡಿದೆ. ಮೊನ್ನೆಯಷ್ಟೇ ಬಹುಕೋಟಿ ವೆಚ್ಚದ 'ಮಹಾವೀರ್ ಕರ್ಣ' ಸೆಟ್ಟೇರಿತು. ಈಗ ಬಹುಭಾಷಾ ಸಿನಿಮಾ 'ಸೀತಾ'ಗೆ ಚಾಲನೆ ಸಿಕ್ಕಿದೆ. ಅಲೌಕಿಕ್ ದೇಸಾಯಿ ನಿರ್ದೇಶನದ ಚಿತ್ರಕ್ಕೆ ಬಾಹುಬಲಿ, ಮಗಧೀರ, ಭಜರಂಗಿ ಭಾಯಿಜಾನ್, ಮಣಿಕರ್ಣಿಕಾ ಚಿತ್ರಗಳಿಗೆ ಚಿತ್ರಕಥೆ ಹೆಣೆದ ಕೆ.ವಿ.ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಹೆಣೆದಿದ್ದಾರೆ. ಮನೋಜ್ ಮುನ್ಸ್ಟಾಶಿರ್ ಸಂಭಾಷಣೆ ಬರೆಯುತ್ತಿದ್ದಾರೆ. ಈಗ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ತಾರಾಬಳಗದ ಆಯ್ಕೆ ನಡೆಯಲಿದೆ. |
ಕೆ.ವಿ.ವಿಜಯೇಂದ್ರ ಪ್ರಸಾದ್ |
ಹ್ಯೂಮನ್ ಬೀಯಿಂಗ್ ಸ್ಟುಡಿಯೋ ನಿರ್ಮಿಸಲಿರುವ ಸಿನಿಮಾ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ಗುಲ್ಲು ಎದ್ದಿದೆ. ದಕ್ಷಿಣದಲ್ಲಿ ಈಗಾಗಲೇ ಹೆಸರು ಮಾಡಿರುವ ಅನುಷ್ಕಾ ಶೆಟ್ಟಿ ಮತ್ತು ಕೀರ್ತಿ ಸುರೇಶ್ ಇಬ್ಬರಲ್ಲಿ ಒಬ್ಬರು ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ಹೇಳುತ್ತವೆ. 'ಬಾಹುಬಲಿ' ಚಿತ್ರದೊಂದಿಗೆ ಅನುಷ್ಕಾ ಮತ್ತು 'ಮಹಾನಟಿ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಕೀರ್ತಿ ಸುರೇಶ್ ಪ್ಯಾನ್ ಇಂಡಿಯಾ ಹಿರೋಯಿನ್ಗಳಾಗಿ ಹೆಸರು ಮಾಡಿದ್ದಾರೆ. ಹಾಗಾಗಿ ಇವರಲ್ಲೊಬ್ಬರು 'ಸೀತೆ'ಯಾಗುವುದು ಖಚಿತ ಎನ್ನಲಾಗಿದೆ. |
'ಮೋಸಗಲ್ಲು' ತೆಲುಗು ಸಿನಿಮಾ ಟ್ರೈಲರ್ ಔಟ್; ಇದು ನೈಜ ಘಟನೆ ಆಧರಿಸಿದ ಥ್ರಿಲ್ಲರ್ |
No Comments on 'ಮೋಸಗಲ್ಲು' ತೆಲುಗು ಸಿನಿಮಾ ಟ್ರೈಲರ್ ಔಟ್; ಇದು ನೈಜ ಘಟನೆ ಆಧರಿಸಿದ ಥ್ರಿಲ್ಲರ್ |
ಮಂಚು ವಿಷ್ಣು ಮತ್ತು ಕಾಜಲ್ ಅಗರ್ವಾಲ್ ನಟನೆಯ 'ಮೋಸಗಲ್ಲು' ತೆಲುಗು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮೆಗಾಸ್ಟಾರ್ ಚಿರಂಜೀವಿ ಇಂದು ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ. ಅಮೆರಿಕಾದಲ್ಲಿ ನಡೆದ ಬಹುದೊಡ್ಡ ಮೊತ್ತದ ಸೈಬರ್ ಕ್ರೈಂ ದರೋಡೆ ಪ್ರಕರಣ ಆಧರಿಸಿ ಹೆಣೆದ ಕತೆಯಿದು. ಬಾಲಿವುಡ್ ನಟ ಸುನೀಲ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದೊಂದಿಗೆ ಟಾಲಿವುಡ್ಗೆ ಪದಾರ್ಪಣೆ ಮಾಡಿದ್ದಾರೆ. |
ಟ್ರೈಲರ್ ನೋಡಿದಾಗ ಮುಖ್ಯಪಾತ್ರಧಾರಿಗಳಾದ ಮಂಚು ವಿಷ್ಣು ಮತ್ತು ಕಾಜಲ್ ಅಗರ್ವಾಲ್ ಹಣಕ್ಕಾಗಿ ಏನು ಬೇಕಾದರೂ ಮಾಡುವವರಂತೆ ಕಾಣುತ್ತಾರೆ! ನೋಡುಗರಲ್ಲಿ ಸಾಕಷ್ಟು ಕುತೂಹಲ ಉಂಟುಮಾಡುವ ಸನ್ನಿವೇಶಗಳಿದ್ದು, ಸಂಭಾಷಣೆಗಳಿಲ್ಲದೆ ಹಿನ್ನೆಲೆ ಸಂಗೀತವಷ್ಟೇ ಇರುವುದು ವಿಶೇಷ. ಕೆಲವು ಸ್ಟಂಟ್ಗಳಿದ್ದು, ಭರಪೂರ ಆಕ್ಷನ್ ದೃಶ್ಯಗಳೂ ಇರುತ್ತವೆ ಎನ್ನುವುದಕ್ಕೆ ಸಾಕ್ಷ್ಯ ನುಡಿಯುತ್ತವೆ. ಜೆಫ್ರೀ ಗೀ ಚಿನ್ ನಿರ್ದೇಶನದ ಈ ಸ್ಟೈಲಿಶ್ ಸಿನಿಮಾ ಮುಂದಿನ ತಿಂಗಳಲ್ಲಿ ತೆರೆಕಾಣಲಿದೆ. |
ಟಾಲಿವುಡ್ನಲ್ಲಿ ಕನ್ನಡದ ಮಿಂಚು ಕೃತಿ ಶೆಟ್ಟಿ; 'ಉಪ್ಪೆನ' ಚಿತ್ರ ನಟಿಗೆ ಸಿಕ್ಕಾಪಟ್ಟೆ ಡಿಮಾಂಡ್ |
No Comments on ಟಾಲಿವುಡ್ನಲ್ಲಿ ಕನ್ನಡದ ಮಿಂಚು ಕೃತಿ ಶೆಟ್ಟಿ; 'ಉಪ್ಪೆನ' ಚಿತ್ರ ನಟಿಗೆ ಸಿಕ್ಕಾಪಟ್ಟೆ ಡಿಮಾಂಡ್ |
ಸೂಪರ್ಹಿಟ್ 'ಕಿರಿಕ್ ಪಾರ್ಟಿ' ಬೆಡಗಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ನ ಬೇಡಿಕೆಯ ನಟಿ. ದಕ್ಷಿಣದ ಚಿತ್ರಗಳಲ್ಲದೆ ಅವರೀಗ ಬಾಲಿವುಡ್ಗೂ ಹಾರಿದ್ದಾರೆ. ಇದೀಗ ಮಂಗಳೂರು ಮೂಲದ ಕೃತಿ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ಅವರು ನಾಯಕಿಯಾಗಿ ನಟಿಸಿದ ಚೊಚ್ಚಲ ತೆಲುಗು ಸಿನಿಮಾ 'ಉಪ್ಪೆನ' ದೊಡ್ಡ ಯಶಸ್ಸು ಕಂಡಿದೆ. ಕೃತಿ ಅವರು 'ಪಕ್ಕದ್ಮನೆ ಹುಡ್ಗಿ' ಇಮೇಜ್ನ ಪಾತ್ರದಲ್ಲಿ ತೆಲುಗು ಜನರ ಮನಸೂರೆಗೊಂಡಿದ್ದಾರೆ. ಈ ಚಿತ್ರದ ಗೆಲುವಿನೊಂದಿಗೆ ಮತ್ತೆರೆಡು ತೆಲುಗು ಚಿತ್ರಗಳಿಗೆ ಸಹಿ ಹಾಕಿರುವ ಆಕೆಯ ಸಂಭಾವನೆಯೂ ಈಗ ದುಬಾರಿಯಾಗಿದೆ. |
ಮುಂಬಯಿಯಲ್ಲಿ ಜನಿಸಿದ ಕೃತಿ ಮಾಡೆಲಿಂಗ್ ಮೂಲಕ ಗ್ಲಾಮರ್ ಜಗತ್ತಿಗೆ ಪರಿಚಯವಾದರು. ಆಕಸ್ಮಿಕ ಎನ್ನುವಂತೆ 'ಉಪ್ಪೆನ' ತೆಲುಗು ಸಿನಿಮಾ ಅವಕಾಶ ಒದಗಿ ಬಂದಿತು. ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ವೈಷ್ಣವ್ ತೇಜ್ ಈ ಚಿತ್ರದ ಹೀರೋ ಎನ್ನುವುದು ಅವರಿಗೆ ದೊಡ್ಡ ವರವಾಯ್ತು. ಮತ್ತೊಂದೆಡೆ ಈ ಚಿತ್ರದಲ್ಲಿ ಅವರ ತಂದೆ ಪಾತ್ರದಲ್ಲಿ ಖ್ಯಾತ ನಟ ವಿಜಯ್ ಸೇತುಪತಿ ನಟಿಸಿದ್ದಾರೆ. ಮೆಗಾ ಕುಟುಂಬದ ಉತ್ತಮ ಪ್ರೊಮೋಷನ್ ಕೂಡ ಚಿತ್ರದ ಯಶಸ್ಸಿಗೆ ನೆರವಾಯ್ತು. |
ಕೋವಿಡ್ ಸಂಕಷ್ಟದ ನಂತರ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡ ಮೊದಲ ಟಾಲಿವುಡ್ ಚಿತ್ರವಾಗಿ 'ಉಪ್ಪೆನ' ಗುರುತಿಸಿಕೊಂಡಿದೆ. ಮುಗ್ಧ, ಮುದ್ದುಮೊಗದ ಕೃತಿ ತೆಲುಗು ನಾಡಿನ ಸಿನಿಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೃತಿಗೆ ಈಗಿನ್ನೂ ಹದಿನೇಳರ ಹರೆಯ. 'ಉಪ್ಪೆನ' ನಂತರ ಅವರು ಎರಡು ತೆಲುಗು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ನಾನಿ ನಟನೆಯ 'ಶ್ಯಾಂ ಸಿಂಘ ರಾಯ್' ಮತ್ತು ಸುಧೀರ್ ಬಾಬು ಹೀರೋ ಆಗಿ ನಟಿಸುತ್ತಿರುವ ಮತ್ತೊಂದು ಚಿತ್ರಕ್ಕೆ ಅವರು ನಾಯಕಿ. ಥಿಯೇಟರ್ಗಳಲ್ಲಿ ಯಶಸ್ಸು ಕಂಡ 'ಉಪ್ಪೆನ' ಸದ್ಯದಲ್ಲೇ ಓಟಿಟಿಯಲ್ಲೂ ಪ್ರೀಮಿಯರ್ ಆಗಲಿದೆ. |
ಸೀಟಿಮಾರ್ ಟೀಸರ್ ರಿಲೀಸ್ – ಮೊದಲ ಬಾರಿ ತೆರೆಮೇಲೆ ಗೋಪಿಚಂದ್-ತಮನ್ನಾ |
Post author By ವಿಜಯ್ ಭರಮಸಾಗರ |
No Comments on ಸೀಟಿಮಾರ್ ಟೀಸರ್ ರಿಲೀಸ್ – ಮೊದಲ ಬಾರಿ ತೆರೆಮೇಲೆ ಗೋಪಿಚಂದ್-ತಮನ್ನಾ |
ಸಂಪತ್ನಂದಿ ನಿರ್ದೇಶನದ 'ಸೀಟಿಮಾರ್' ತೆಲುಗು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಗೋಪಿಚಂದ್ ಮತ್ತು ತಮನ್ನಾ ಮೊದಲ ಬಾರಿ ಜೊತೆಯಾಗಿ ನಟಿಸಿರುವ ಚಿತ್ರವಿದು. ಏಪ್ರಿಲ್ 2ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು, ಕಬಡ್ಡಿ ಹಿನ್ನೆಲೆಯಲ್ಲಿ ಸಖತ್ ಆಕ್ಷನ್-ಡ್ರಾಮಾ ಇರುವುದನ್ನು 'ಸೀಟಿಮಾರ್' ಟೀಸರ್ ಸಾರಿ ಹೇಳುತ್ತಿದೆ. ಚಿತ್ರದಲ್ಲಿ ಗೋಪಿಚಂದ್ ಮತ್ತು ತಮನ್ನಾ ಕಬಡ್ಡಿ ಕೋಚ್ಗಳು! |
ಗೋಪಿಚಂದ್ ಆಂಧ್ರ ಕಬಡ್ಡಿ ತಂಡದ ಕೋಚ್ ಆದರೆ ತಮನ್ನಾ ತೆಲಂಗಾಣ ತಂಡದ ಕೋಚ್. ಟೀಸರ್ನಲ್ಲಿ ತಮನ್ನಾಗೆ ಹೆಚ್ಚು ಸ್ಪೇಸ್ ಇದ್ದಂತಿಲ್ಲ. ಡೈಲಾಗ್ ಕೂಡ ಇಲ್ಲವಾದ್ದರಿಂದ ತೆರೆ ಮೇಲಿನ ಗೋಪಿಚಂದ್-ತಮನ್ನಾ ಕೆಮಿಸ್ಟ್ರಿ ಹೇಗಿರಬಹುದು ಎನ್ನುವ ಕುತೂಹಲ ಅಭಿಮಾನಿಗಳದ್ದು. ಚಿತ್ರತಂಡದ ಮೂಲಗಳು ಹೇಳುವಂತೆ ಚಿತ್ರದಲ್ಲಿ ತಮನ್ನಾ ತೆಲಂಗಾಣ ಶೈಲಿ ತೆಲುಗು ಮಾತನಾಡುತ್ತಾರಂತೆ. ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲೇ ಈ ಸಸ್ಪ್ರೈಸ್ ಸಿಗಲಿ ಎನ್ನುವುದು ನಿರ್ದೇಶಕರ ನಿಲುವು ಎನ್ನಲಾಗಿದೆ. |
ನಿರ್ದೇಶಕ ಸಂಪತ್ ನಂದಿ ಅವರ ಜೊತೆ ಗೋಪಿಚಂದ್ ಅವರಿಗೆ ಇದು ಎರಡನೇ ಸಿನಿಮಾ. 'ಸೀಟಿಮಾರ್' ಟೀಸರ್ನಲ್ಲಿ ಗೋಪಿಚಂದ್ ಪಾತ್ರವನ್ನು ಮ್ಯಾಕೋ ಕಬಡ್ಡಿ ಕೋಚ್ ಎನ್ನುವಂತೆ ತೋರಿಸಲಾಗಿದೆ. ರಾವ್ ರಮೇಶ್ ಮತ್ತು ತರುಣ್ ಅರೋರಾ ಮುಖ್ಯಪಾತ್ರಗಳಲ್ಲಿ ಕಾಣಿಸುತ್ತಾರೆ. ದಿಗಂಗನ ಸೂರ್ಯವಂಶಿ ಮತ್ತು ನಟಿ ಭೂಮಿಕಾ ಚಾವ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಣಿಶರ್ಮ ಸಂಗೀತ ಸಂಯೋಜನೆ ಚಿತ್ರಕ್ಕಿದೆ. |
ನಟಿ ಚಾರ್ಮಿ – ವಿಜಯ್ ದೇವರಕೊಂಡ ಜಾಲಿ ರೈಡ್! ಲೈಗರ್ ಶೂಟಿಂಗ್ನಲ್ಲಿ ಮಸ್ತ್ ಮಜಾ!! |
No Comments on ನಟಿ ಚಾರ್ಮಿ – ವಿಜಯ್ ದೇವರಕೊಂಡ ಜಾಲಿ ರೈಡ್! ಲೈಗರ್ ಶೂಟಿಂಗ್ನಲ್ಲಿ ಮಸ್ತ್ ಮಜಾ!! |
ವಿಜಯ್ ದೇವರಕೊಂಡ ನಟಿಸುತ್ತಿರುವ ಹಿಂದಿ ಮತ್ತು ತೆಲುಗು ದ್ವಿಭಾಷಾ 'ಲೈಗರ್' ಚಿತ್ರಕ್ಕೆ ಸದ್ಯ ಮುಂಬಯಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದ ನಾಯಕಿ ಅನನ್ಯಾ ಪಾಂಡೆ. ದಕ್ಷಿಣ ಭಾರತದ ಖ್ಯಾತ ನಟಿ ಚಾರ್ಮಿ ಅವರು ಈ ಚಿತ್ರದ ನಿರ್ಮಾಪಕರಲ್ಲೊಬ್ಬರು ಎನ್ನುವುದು ವಿಶೇಷ. ಕರಣ್ಜೋಹರ್ ಮತ್ತು ಪುರಿ ಜಗನ್ನಾಥ್ ಕೂಡ ಚಿತ್ರದ ಸಹನಿರ್ಮಾಪಕರು. ನಟಿ ಚಾರ್ಮಿ ಚಿತ್ರೀಕರಣದುದ್ದಕ್ಕೂ ಸಿನಿಮಾ ತಂಡದೊಂದಿಗೆ ಇದ್ದಾರೆ. ಆಗಿಂದಾಗ್ಗೆ ಅಲ್ಲಿನ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾ ಸಿನಿಮಾ ಕುರಿತಂತೆ ಸುದ್ದಿಗಳನ್ನು ಅಪ್ಡೇಟ್ ಮಾಡುತ್ತಾ ಇರುತ್ತಾರೆ. |
ನಟಿ ಚಾರ್ಮಿ ತಮ್ಮ ಟ್ವಿಟರ್ನಲ್ಲಿ ಹಾಕಿರುವ ಎರಡು ಫೋಟೋಗಳು ಈಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ. 'ಲೈಗರ್' ಚಿತ್ರೀಕರಣದ ಬಿಡುವಿನ ಸಂದರ್ಭದಲ್ಲಿ ಚಾರ್ಮಿ ಸ್ಕೂಟರ್ ರೈಡ್ ಮಾಡಿದ್ದಾರೆ. ಹಿಂದೆ ನಟ ವಿಜಯ್ ದೇವರಕೊಂಡ ಅವರು ಕುಳಿತಿರುವುದು ವಿಶೇಷ! "ನಾನು ಸ್ಕೂಟರ್ ಓಡುಸುತ್ತಿದ್ದರೆ, ನನ್ನ ಮೇಲೆ ವಿಶ್ವಾಸವಿಟ್ಟು ವಿಜಯ್ ಕುಳಿತಿದ್ದಾರೆ. ಹೀಗೆ, ಮುಂಬಯಿಯಲ್ಲಿ ನಮ್ಮದೊಂದು ಜಾಲಿ ರೈಡ್" ಎಂದಿದ್ದಾರೆ ಚಾರ್ಮಿ. 'ಲೈಗರ್' ದೊಡ್ಡ ಬಜೆಟ್ನಲ್ಲಿ ತಯಾರಾಗುತ್ತಿದ್ದು, ವಿಜಯ್ ಚಿತ್ರದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಮತ್ತು ಹಿಂದಿ ಅಲ್ಲದೆ ದಕ್ಷಿಣದ ವಿವಿಧ ಭಾಷೆಗಳಿಗೂ ಡಬ್ ಆಗಿ ಇದೇ ಸೆಪ್ಟೆಂಬರ್ 9ರಂದು ಸಿನಿಮಾ ಬಿಡುಗಡೆಯಾಗಲಿದೆ. |
ಟಾಲಿವುಡ್ ಸಿನಿ ಸುದ್ದಿ |
ದೃಶ್ಯಂ ಸರಣಿಗೆ ರೆಡಿಯಾದ ವೆಂಕಿ! ಜೀತು ಜೋಸೆಫ್ ನಿರ್ದೇಶನದಲ್ಲೇ ಬರಲಿರುವ ಚಿತ್ರ |
No Comments on ದೃಶ್ಯಂ ಸರಣಿಗೆ ರೆಡಿಯಾದ ವೆಂಕಿ! ಜೀತು ಜೋಸೆಫ್ ನಿರ್ದೇಶನದಲ್ಲೇ ಬರಲಿರುವ ಚಿತ್ರ |
ಜೀತು ಜೋಸೆಫ್ ನಿರ್ದೇಶನದಲ್ಲಿ ಮೋಹನ್ಲಾಲ್ – ಮೀನಾ ನಟಿಸಿರುವ 'ದೃಶ್ಯಂ2' ಮೊನ್ನೆಯಷ್ಟೇ ಅಮೇಜಾನ್ ಪ್ರೈಂನಲ್ಲಿ ಪ್ರೀಮಿಯರ್ ಆಗಿದೆ. ವೀಕ್ಷಕರು ಮತ್ತು ವಿಶ್ಲೇಷಕರು ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ 'ದೃಶ್ಯಂ2' ತೆಲುಗು ರೀಮೇಕ್ ಸೆಟ್ಟೇರುತ್ತಿದೆ. ಜೀತು ಜೋಸೆಫ್ ಅವರೇ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ವೆಂಕಟೇಶ್ ನಟಿಸುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದ್ದು, ಉಳಿದ ತಾರಾಬಳಗದ ಆಯ್ಕೆ ಜಾರಿಯಲ್ಲಿದೆ. |
ನಿರ್ದೇಶಕ ಜೀತು ಜೋಸೆಫ್ ಇಂದು ತಮ್ಮ ಫೇಸ್ಬುಕ್ ಪೇಜ್ನಲ್ಲಿ 'ದೃಶ್ಯಂ2' ತೆಲುಗು ಅವತರಣಿಕೆಯನ್ನು ಘೋಷಿಸಿದ್ದಾರೆ. ನಟ ವೆಂಕಟೇಶ್ ಮತ್ತಿತರರೊಂದಿಗಿನ ಅವರ ಫೋಟೋ ಜೊತೆಗೆ ಈ ಸುದ್ದಿ ಹೊರ ಬಿದ್ದಿದೆ. 'ದೃಶ್ಯಂ' ಮೊದಲ ಸರಣಿಯ ತೆಲುಗು ಅವತರಣಿಕೆ 2014ರಲ್ಲಿ ತೆರೆಕಂಡಿತ್ತು. ಆ ಚಿತ್ರವನ್ನು ಸುಪ್ರಿಯಾ ನಿರ್ದೇಶಿಸಿದ್ದರು. ಅಲ್ಲಿ ವೆಂಕಟೇಶ್ ಜೊತೆ ಮೀನಾ, ನಾದಿಯಾ ನಟಿಸಿದ್ದರು. |
ಅಮೇಜಾನ್ ಪ್ರೈಮ್ನಲ್ಲಿ ಪ್ರೀಮಿಯರ್ ಆಗಿರುವ 'ದೃಶ್ಯಂ2' ಮಲಯಾಳಂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟ ಮೋಹನ್ ಲಾಲ್ ಅವರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಯಶಸ್ಸಿಗೆ ಕಾರಣರಾದ ತಂತ್ರಜ್ಞರು ಹಾಗೂ ವೀಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸದ್ಯ 'ದೃಶ್ಯಂ2' ತೆಲುಗು ಅವತರಣಿಕೆ ಸೆಟ್ಟೇರುತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡ, ತಮಿಳು ಮತ್ತು ಹಿಂದಿಯಲ್ಲೂ ತಯಾರಾಗುವ ಸಾಧ್ಯತೆಗಳಿವೆ. ಕನ್ನಡ 'ದೃಶ್ಯ'ದಲ್ಲಿ ರವಿಚಂದ್ರನ್ ನಟಿಸಿದ್ದರು. ಸರಣಿಯಲ್ಲೂ ಅವರೇ ಇರುತ್ತಾರೆಯೇ ಎಂದು ಕಾದುನೋಡಬೇಕು. |
ರಾಮ್ ಚರಣ್ಗೆ ರಶ್ಮಿಕಾ ಜೋಡಿ!? |
No Comments on ರಾಮ್ ಚರಣ್ಗೆ ರಶ್ಮಿಕಾ ಜೋಡಿ!? |
ಕನ್ನಡ ನಟಿ ರಶ್ಮಿಕಾ ಮಂದಣ್ಣ ಒಂದಾದ ಮೇಲೊಂದು ದೊಡ್ಡ ಸಿನಿಮಾಗಳಲ್ಲಿ ಅವಕಾಶ ಪಡೆಯುತ್ತಿದ್ದಾರೆ. ದಕ್ಷಿಣದ ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ನಟಿಸಿದ ಬೆಡಗಿ ಇದೀಗ 'ಮಿಷನ್ ಮಜ್ನೂ' ಬಾಲಿವುಡ್ ಚಿತ್ರೀಕರಣದಲ್ಲಿದ್ದಾರೆ. ಇದೀಗ ಬಂದ ಸುದ್ದಿಯ ಪ್ರಕಾರ ಅವರು ತೆಲುಗು ಸ್ಟಾರ್ ರಾಮ್ ಚರಣ್ ತೇಜಾ ನಟನೆಯ ದುಬಾರಿ ಪ್ಯಾನ್ ಇಂಡಿಯಾ "3ಡಿ" ಸಿನಿಮಾದ ನಾಯಕಿಯಾಗಲಿದ್ದಾರಂತೆ. ಸೈನ್ಸ್-ಫಿಕ್ಷನ್ ಸಿನಿಮಾಗಳ ಜನಪ್ರಿಯ ನಿರ್ದೇಶಕ ಶಂಕರ್ ನಿರ್ದೇಶನದ ಚಿತ್ರವಿದು ಎನ್ನುವುದು ವಿಶೇಷ. |
ಸದ್ಯ ರಶ್ಮಿಕಾ ಜನಪ್ರಿಯತೆಯ ಉತ್ತುಂಗದಲ್ಲಿದ್ದಾರೆ. ತಮ್ಮ ಚಿತ್ರಕ್ಕೆ ಅವರೇ ನಾಯಕಿಯಾಗಲಿ ಎನ್ನುವುದು ರಾಮ್ ಚರಣ್ ಇರಾದೆ. ಹಾಗಾಗಿ ಚಿತ್ರತಂಡದಿಂದ ನಟಿಗೆ ಆಹ್ವಾನವೂ ಹೋಗಿದೆ. ಆದರೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾಗೆ ಹೊಸ ಚಿತ್ರಕ್ಕೆ ಡೇಟ್ಸ್ ಹೊಂದಿಸಿಕೊಳ್ಳುವುದು ಕಷ್ಟವಾಗಿದೆ. ಆದರೆ ರಾಮ್ ಚರಣ್ – ಶಂಕರ್ ಸಿನಿಮಾ ಕೈಬಿಡಲು ಅವರಿಗೂ ಇಷ್ಟವಿಲ್ಲ. |
ಹಾಗಾಗಿ ಬಹುತೇಕ ಅವರೇ ಚಿತ್ರದ ನಾಯಕಿಯಾಗಬಹುದು. ಇನ್ನು ಸದ್ಯದಲ್ಲೇ ಅಲ್ಲು ಅರ್ಜುನ್ ಜೊತೆಗೆ ಅವರು ನಟಿಸಿರುವ 'ಪುಷ್ಪ' ತೆಲುಗು ಸಿನಿಮಾ ತೆರೆಗೆ ಬರುತ್ತಿದೆ. ಅಲ್ಲದೆ ಇಂದು ಅವರು ನಾಯಕಿಯಾಗಿರುವ ಕನ್ನಡ ಸಿನಿಮಾ 'ಪೊಗರು' ತೆರೆಕಂಡಿದ್ದು, ಇದರ ತೆಲುಗು ಅವತರಣಿಕೆಯೂ ಆಂಧ್ರದಲ್ಲಿ ತೆರೆಕಂಡಿದೆ. |
ಸುದ್ದಿಸಂತೆ: ಸ್ಟ್ಯಾಂಡ್ ಅಪ್ ಇಂಡಿಯಾ, ಬಿಸಿಸಿಐಗೆ ಸುಪ್ರೀಂ ಛೀಮಾರಿ, ಪನಾಮಾ ಪೇಪರ್ಸ್- ಅಮಿತಾಭ್ ಸ್ಪಷ್ಟನೆ, ಗುಜರಾತ್ ಮಾದರಿಯಲ್ಲಿ ಬಿಹಾರವೂ ಡ್ರೈ ಸ್ಟೇಟ್ | Digital Kannada |
Home ಸುದ್ದಿಸಂತೆ ಸುದ್ದಿಸಂತೆ: ಸ್ಟ್ಯಾಂಡ್ ಅಪ್ ಇಂಡಿಯಾ, ಬಿಸಿಸಿಐಗೆ ಸುಪ್ರೀಂ ಛೀಮಾರಿ, ಪನಾಮಾ ಪೇಪರ್ಸ್- ಅಮಿತಾಭ್ ಸ್ಪಷ್ಟನೆ, ಗುಜರಾತ್... |
ಸುದ್ದಿಸಂತೆ: ಸ್ಟ್ಯಾಂಡ್ ಅಪ್ ಇಂಡಿಯಾ, ಬಿಸಿಸಿಐಗೆ ಸುಪ್ರೀಂ ಛೀಮಾರಿ, ಪನಾಮಾ ಪೇಪರ್ಸ್- ಅಮಿತಾಭ್ ಸ್ಪಷ್ಟನೆ, ಗುಜರಾತ್ ಮಾದರಿಯಲ್ಲಿ ಬಿಹಾರವೂ ಡ್ರೈ ಸ್ಟೇಟ್ |
ಬ್ರಾಂಡ್ ಬಿಲ್ಡಿಂಗ್ ಬಹಳ ಮುಖ್ಯ.. ಸ್ಟ್ಯಾಂಡ್ ಅಪ್ ಇಂಡಿಯಾದ ಬ್ರಾಂಡ್ ಅಷ್ಟೇ ಅಲ್ಲ, ಚಾಯ್ವಾಲಾ ಬ್ರಾಂಡ್ ಸಹ! |
ಪ್ರತಿ ಭಾರತೀಯನಿಗೂ ಅಧಿಕಾರ ನೀಡುವುದೇ ಸ್ಟ್ಯಾಂಡ್ ಅಪ್ ಇಂಡಿಯಾದ ಧ್ಯೇಯ |
ಉದ್ಯೋಗ ಹುಡುಕುತ್ತಿದ್ದವರು ಇನ್ನು ಮುಂದೆ ಉದ್ಯೋಗ ಸೃಷ್ಟಿಸುತ್ತಾರೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಇವರ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ಟ್ಯಾಂಡ್ ಅಪ್ ಇಂಡಿಯಾದ ಅಡಿಯಲ್ಲಿ ನೋಯ್ಡಾ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇ ರಿಕ್ಷಾಗಳಿಗೆ ಚಾಲನೆ ನೀಡಿ ಮಾತನಾಡಿದ ಇವರು, ದಲಿತರ ಮತ್ತು ಆದಿವಾಸಿಗಳ ಜೀವನ ಇನ್ನೂ ಮುಂದೆ ಬದಲಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದೇ ವೇಳೆ ಬಾಬು ಜಗಜೀವನ್ ರಾಮ್ ಅವರ ದೇಶ ಸೇವೆಯನ್ನು ನೆನೆದು ಗೌರವ ಸಮರ್ಪಿಸಿದರು. |
ಮುದ್ರಾ ಯೋಜನೆಯಡಿ ಗ್ರಾಮೀಣ ಭಾಗದ ಎಲ್ಲಾ ಬ್ಯಾಂಕುಗಳು ಅಗ್ಗದ ಸಾಲ ನೀಡಲಿವೆ. ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯ ಉದ್ಯಮ ಕ್ಷೇತ್ರದಲ್ಲಿ ಬೆಳೆಯಬೇಕು. ಆದ ಕಾರಣ ಸಾಧ್ಯವಾದಷ್ಟು ಈ ಯೋಜನೆಯಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಿ. ಸ್ಟ್ಯಾಂಡ್ ಅಪ್ ಇಂಡಿಯಾದ ಮುಖ್ಯ ಉದ್ದೇಶವೇ ಪ್ರತಿ ಭಾರತೀಯನಿಗೂ ಅಧಿಕಾರ ಕೊಟ್ಟು ತನ್ನ ಜೀವನವನ್ನು ತಾನೇ ರೂಡಿಸಿಕೊಳ್ಳುವಂತೆ ಮಾಡುವುದು. ಇದರಿಂದ ಅವರ ಜೀವನದಲ್ಲಿ ಪ್ರಗತಿ ಹೊಂದಲು ಸಾಧ್ಯ ಎಂದರು. |
ಬಿಸಿಸಿಐಗೆ ಸುಪ್ರೀಂ ಛೀಮಾರಿ |
ಬಿಸಿಸಿಐ ಸುಧಾರಣೆ ನಿಟ್ಟಿನಲ್ಲಿ ನಿವೃತ್ತ ನ್ಯಾ.ಆರ್ .ಎಂ ಲೋಧಾ ನೇತೃತ್ವದ ಸಮಿತಿ ಶಿಫಾರಸ್ಸಿನ ಕುರಿತು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಂಗಳವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಛಿಮಾರಿ ಹಾಕಿದೆ. ಕಳೆದ ವಿಚಾರಣೆ ಸಂದರ್ಭದಲ್ಲಿ ಕಳೆದ ಐದು ವರ್ಷಗಳಲ್ಲಿ ಬಿಸಿಸಿಐ ರಾಜ್ಯ ಸಂಸ್ಥೆಗಳಿಗೆ ನೀಡಿದ್ದ ಆರ್ಥಿಕ ನೆರವಿನ ವಿವರ ಕೇಳಿತ್ತು. ಬಿಸಿಸಿಐ ನೀಡಿದ ವಿವರ ಪರಿಶೀಲಿಸಿದ ಸುಪ್ರೀಂ ಕೋರ್ಟ್ 'ನೀವು ವರ್ಷಕ್ಕೆ ₹480 ಕೋಟಿಯಂತೆ ಕಳೆದ ಐದು ವರ್ಷಗಳಲ್ಲಿ ವಿವಿಧ ರಾಜ್ಯ ಸಂಸ್ಥೆಗಳ ಅಭಿವೃದ್ಧಿಗೆ ₹2000 ಕೋಟಿ ನೀಡಿದ್ದೀರಿ. ಆದರೆ, ಈ ಹಣ ಯಾವ ಅಭಿವೃದ್ಧಿ ಕಾರ್ಯಕ್ಕೆ ವೆಚ್ಚವಾಗಿದೆ ಎಂದು ಎಲ್ಲೂ ತಿಳಿಸಿಲ್ಲ. ಈ ಹಣ ಸರಿಯಾಗಿ ಉತ್ತಮ ಕಾರ್ಯಕ್ಕೆ ಬಳಸಿಕೊಂಡಿರುವುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. 29 ರಾಜ್ಯ ಸಂಸ್ಥೆಗಳ ಪೈಕಿ 11 ಸಂಸ್ಥೆಗಳಿಗೆ ಒಂದು ಬಿಡಿಗಾಸು ಕೊಟ್ಟಿಲ್ಲ. ಏಕೆ ಈ ರೀತಿ ತಾರತಮ್ಯ? ನೀವು ಕ್ರಿಕೆಟ್ ಗಾಗಿ ಏನು ಮಾಡಿದ್ದೀರಿ? ಆ ರಾಜ್ಯ ಸಂಸ್ಥೆಗಳು ಬಿಕ್ಷೆ ಬೇಡುವಂತಹ ಪರಿಸ್ಥಿತಿಗೆ ಬಂದಿವೆ' ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ತರಾಟೆ ತೆಗೆದುಕೊಂಡರು. |
ಇದೇ ವೇಳೆ ಒಂದು ರಾಜ್ಯಕ್ಕೆ ಒಂದು ಮತ ಶಿಫಾರಸ್ಸು ವಿರೋಧಿಸಿದಕ್ಕೂ ಸುಪ್ರೀಂ ಕೋರ್ಟ್ ಕಿಡಿಕಾರಿದೆ. ಈ ಎಲ್ಲ ಅಂಶಗಳ ಕುರಿತು ಬಿಸಿಸಿಐನ ವಾದವನ್ನು ಆಲಿಸಿ, ನಂತರ ಆ ಅಂಶಗಳ ಬಗ್ಗೆ ಲೋಧಾ ಸಮಿತಿಯಿಂದ ಪ್ರತಿಕ್ರಿಯೆ ಪಡೆಯುವುದಾಗಿ ನ್ಯಾಯಾಲಯ ತಿಳಿಸಿದೆ. |
ಪನಾಮಾ ಪೇಪರ್ಸ್- ಅಮಿತಾಭ್ ಸ್ಪಷ್ಟನೆ |
ತಾವು ಸಾಗರದಾಚೆ ಹೊಂದಿರುವುದಾಗಿ ಹೆಸರಿಸಿರುವ ಹಲವು ಕಂಪನಿಗಳ ಜತೆ ತಮಗೇನೂ ಸಂಬಂಧವಿಲ್ಲ ಎಂದು ನಟ ಅಮಿತಾಭ್ ಬಚ್ಚನ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಹೆಸರಿನ ದುರುಪಯೋಗ ಆಗಿದ್ದಿರಬಹುದು. ಸಾಗರದಾಚೆ ತಾವು ಮಾಡಿರುವ ಎಲ್ಲ ಹೂಡಿಕೆಗಳು ಕಾನೂನುಬದ್ಧವೇ ಆಗಿದ್ದು, ತೆರಿಗೆ ವಂಚನೆ ಮಾಡಿಲ್ಲ ಎಂದಿರುವ ಅಮಿತಾಭ್, ಇಂಡಿಯನ್ ಎಕ್ಸ್ ಪ್ರೆಸ್ ತನಿಖಾ ವರದಿಯಲ್ಲಿ ಸಹ ತಮ್ಮ ಹೂಡಿಕೆ ಅಕ್ರಮ ಎಂದು ಎಲ್ಲಿಯೂ ವ್ಯಾಖ್ಯಾನಿಸಿಲ್ಲ ಎಂದು ಹೇಳಿದ್ದಾರೆ. |
Subsets and Splits
No community queries yet
The top public SQL queries from the community will appear here once available.