text stringlengths 0 61.5k |
|---|
7947 ಹಿಟ್ಸ್ |
ಛಂದದ ಪುಸ್ತಕಗಳು |
Submitted by hpn on April 9, 2012 - 5:11pm |
ಕಳೆದ ಶುಕ್ರವಾರ ಛಂದ ಪುಸ್ತಕದ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಇತ್ತು. ಆ ದಿನದ ಕೆಲವು ಚಿತ್ರಗಳು ಇಲ್ಲಿವೆ: |
Submitted by ಅನನ್ಯ on March 15, 2012 - 8:15pm |
ಭಾರತದಲ್ಲಿ ಅಂದಾಜು ೨೫ ಲಕ್ಷ ಸಲಿಂಗ ಸಂಬಂಧದ ಪುರುಷರಿ(gays)ದ್ದಾರೆ; ಅವರಲ್ಲಿ ಶೇಕಡಾ ೭ರಷ್ಟು - ಅಂದರೆ ೧.೭೫ ಲಕ್ಷ ಮಂದಿ - HIV ಸೋಂಕಿತರು ಎಂದು PTI ಸಂಸ್ಥೆ ವರದಿ ಮಾಡಿದೆ. |
6250 ಹಿಟ್ಸ್ |
ಈಜಿಪ್ಟಿನ ಸ್ತ್ರೀ ವಾದಿ ಡಾ| ನವಲ್ ಎಲ್ ಸಾದವಿ |
Submitted by udayaravi.shastry on March 9, 2012 - 8:31am |
ಈಕೆ ದೇವರ ಬಗ್ಗೆ, ಪ್ರವಾದಿಗಳ ಬಗ್ಗೆ ಹಾಗೂ ದೈವೀಕವಾದ ಧಮ್ರದ ಬಗ್ಗೆ ಅವಹೇಳನವಾಗಿ/ ಆಕ್ರಮಣಕಾರಿಯಾಗಿ ಮಾತನಾಡಿದ್ದಾಳೆ' ಎಂಬ ಕಾರಣಕ್ಕೆ ಇಸ್ಲಾಮಿಕ್ ರಿಸಚ್್ರ ಕೌನ್ಸಿಲ್ ಇವಳ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಯೋಚಿಸುತ್ತಿದೆ. ಈ ರೀತಿಯ ಉದಾಹರಣೆಗಳು ನಮಗೆ ಅಲ್ಲಲ್ಲಿ ಅಪರೂಪಕ್ಕೆ ಸಿಗುತ್ತವೆ. ಇಸ್ಲಾಂ ಧಮ್ರದ ಎಲ್ಲ ನಿಯಮಗಳನ್ನೂ ಪ್ರತಿಯೊಬ್ಬ ಮುಸಲ್ಮಾನನೂ ಸವ್ರಸಮ್ಮತದಿಂದ, ಶ್ರದ್ಧೆ ಹಾಗೂ ಮುತುವಜ್ರಿಯಿಂದ ಪಾಲಿಸುತ್ತಾನೆ ಎಂಬ ಸಾಧಾರಣ ಭಾವನೆ ಎಲ್ಲರಲ್ಲಿ ಇದೆ. |
ಪ್ಲಾಸ್ಟಿಕ್ ಕಸ ಪರಿಹಾರವೇನು? |
Submitted by anand33 on February 15, 2012 - 4:18pm |
ಇಂದು ಪ್ಲಾಸ್ಟಿಕ್ ಬಳಕೆ ಎಲ್ಲೆಡೆ ಸರ್ವವ್ಯಾಪಿಯಾಗಿದೆ. ಇದನ್ನು ಬಳಸಿ ಎಲ್ಲೆಂದರಲ್ಲಿ ಬಿಸಾಡಿ ಪರಿಸರಕ್ಕೆ ಭಾರೀ ಹಾನಿ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಇಲ್ಲವೇ? ಕೆಲವರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ಹೇಳಿದರೆ, ಇನ್ನು ಕೆಲವರು ಪ್ಲಾಸ್ಟಿಕ್ ನಿಷೇಧ ಮಾಡಬೇಕು ಎಂದು ಹೇಳುತ್ತಾರೆ. ಯಾರು ಏನೇ ಹೇಳಿದರೂ, ಎಷ್ಟೇ ನಿಷೇಧ ಮಾಡಿದರೂ ಪ್ಲಾಸ್ಟಿಕ್ ಬಳಕೆ ದಿನೇ ದಿನೇ ಹೆಚ್ಚುತ್ತಿದೆಯೇ ಹೊರತು ಕಡಿಮೆ ಆಗುವುದು ಕಾಣಿಸುತ್ತಿಲ್ಲ. ಉದಾಹರಣೆಗೆ ನಾವು ಬಳಸುವ ಹಾಲು ಬರುವುದು ಪ್ಲಾಸ್ಟಿಕ್ ತೊಟ್ಟೆಯಲ್ಲಿ. ಬೇಕರಿ ತಿಂಡಿಗಳು ಬರುವುದು ಪ್ಲಾಸ್ಟಿಕ್ ಪ್ಯಾಕಿಂಗ್ನಲ್ಲಿ. ಸೂಪರ್ ಮಾರ್ಕೆಟ್ ಅಥವಾ ಮಾಲುಗಳಲ್ಲಿ ಬರುವ ಎಲ್ಲ ಆಹಾರ ಪದಾರ್ಥಗಳು (ದಿನಸಿ, ಧಾನ್ಯದ ಪುಡಿ, ಅಡಿಗೆ ಎ |
ಸಚಿವರ ಆಶ್ವಾಸನೆಗಳು. |
Submitted by pavu on February 4, 2012 - 10:45am |
1.ಬಿಸಿಲಿನ ತಾಪ ಹೆಚ್ಚುತ್ತೀರುವುದರಿಂದ ,ಆಕಾಶಕ್ಕೆ ಶಾಖ ನಿರೋಧಕ ಟಾರುಪಾಲ್ಗಳನ್ನು ಈ ಕೂಡಲೇ ಹಾಕಿಸುವುದು. |
2.ರಸ್ತೆ ವಿಸ್ತರಿಸಲು ಕಡಿದ ಸಾಲು ಮರಗಳ ಬದಲಾಗಿ ರಂಜಿಸುವ ಪ್ಲಾಸ್ಟಿಕ್ ಮರಗಳನ್ನು ನೆಡಲಾಗುವುದು. |
3.ವಿದ್ಯಾವಂತ ನಿರುದ್ಯೋಗಿಗಳ ಸಮೀಕ್ಷೆಗೆ ಅವಿದ್ಯಾವಂತರನ್ನು ನೇಮಿಸುವುದು. |
ಕಣಿಪುರ ಉಳಿಸಿ |
Submitted by GOPALAKRISHNA B... on January 24, 2012 - 8:19am |
ಕಾಸರಗೋಡು ಈಗ ಕೇರಳದಲ್ಲಿ ಇರುವ ಕನ್ನಡ ಪ್ರದೇಶ.ಸಾಂಸ್ಕೃತಿಕವಾಗಿ ಕನ್ನಡವನ್ನು ಉಳಿಸಿಕೊಂಡ ತಾಣ.ಈ ಪ್ರದೇಶಕ್ಕೆ ಮೊದಲು ಕುಂಬಳೆ ಸೀಮೆ ಎಂಬ ಹೆಸರು ಇತ್ತು.ಕುಂಬಳೆ ಎಂದರೆ |
ಕಾಸರಗೋಡಿನಿಂದ ೧೨ ಕಿ.ಮೀ.ಉತ್ತರಕ್ಕೆ ,ಮಂಗಳೂರಿನಿಂದ ೪೦ ಕಿ.ಮೀ.ದಕ್ಷಿಣಕ್ಕೆ ಇರುವ ಊರು.ರಾಷ್ಟ್ರೀಯ ಹೆದ್ದಾರಿ ನಂ.೬೬[ಹಳೆ ನಂ.೧೭] ಕುಂಬಳೆಯ ಮೂಲಕ ಹಾದು ಹೋಗುತ್ತದೆ.ಇತ್ತೀಚೆಗೆ ಈ ಹೆದ್ದಾರಿಯನ್ನು ಅಗಲಗೊಳಿಸುವ ಕೆಲಸಕ್ಕೆ ಚಾಲನೆ ಕೊಡಲು ಅಧಿಸೂಚನೆ ಹೊರಡಿಸಲಾಗಿದೆ.ಇದರಂತೆ ಕುಂಬಳೆಯಲ್ಲಿ ಇರುವ |
ಶ್ರೀ ಗೋಪಾಲಕೃಷ್ಣ ದೇಗುಲದ ಬಹು ಭಾಗವನ್ನೂ ಸ್ವಾಧೀನಪಡಿಸಲು ಆಲೋಚಿಸಲಾಗುತ್ತಿದೆ. |
Submitted by pavu on January 12, 2012 - 1:05pm |
ಐಷಾರಾಮಿ ಜೀವನ ಅಂದರೆ ಏನು?ದೊಡ್ಡದಾದ ಬಂಗಲೆ,ಎ ಸಿ ಕಾರು,ಕೋಟಿಗಟ್ಟಲೇ ದುಡ್ಡು,ದೇಹದ ಮೇಲೆ ಹೊರಲಾರದಷ್ಟು ಚಿನ್ನ,ದೇಶ ವಿದೇಶ ಗಳಲ್ಲಿ ವಿಮಾನ ಪ್ರಯಾಣ,ಅವರ ಮಕ್ಕಳಿಗೆ ವಿದೇಶದಲ್ಲಿ ವಿದ್ಯಾಭ್ಯಾಸ,ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ (7ಸ್ಟಾರ್) ಊಟ,ಇಷ್ಟೆಲ್ಲಾ ಇದ್ದು ವಿಶ್ರಾಂತಿಗಾಗಿ ರೆಸಾರ್ಟ್ ಗಳು.ಇದೇ ನಾ ಐಷಾರಾಮಿ ಜೀವನ? |
Submitted by hpn on January 1, 2012 - 12:29am |
ಸಂಪದಿಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷದಲ್ಲಿ ಕನ್ನಡದ ಏಳಿಗೆಯಾಗಲಿ. |
ಡಾ ಎಚ್ ಎಸ ವಿ ಯವರ ಹೊಸ ಕಾದಂಬರಿ "ವೇದವತಿ ನದಿಯಲ್ಲ" ಬಿಡುಗಡೆ |
Submitted by gopinatha on December 31, 2011 - 10:46pm |
ಸ್ಪಂದನ ತಾ ೨೫.೧೨.೨೦೧೧ ರಂದು |
ಶ್ರೀಯುತ ನಾಗರಾಜ ವಸ್ತಾರೆಯವರ ಸ್ವಗೃಹ "ವಸ್ತಾರೆ" ಯಲ್ಲಿ |
ಅದೊಂದು ನವ ಚೈತನ್ಯದ ಅನುಭವದ ಸ್ಪಂದನ ಗೋಷ್ಠಿ . |
ಸದ್ದಿಲ್ಲದೇ ತಮ್ಮ ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡುವ ನಮ್ಮ ಜನಪ್ರೀತಿಯ ಕವಿ ಎಚ್ ಎಸ ವಿಯವರು ಕಳೆದೆ ಹೋಯ್ತು ಎಂದು ಕೊಂಡ ೩೫ ವರ್ಹದ ಹಳೆ ಕಾದಂಬರಿ "ವೇದವತಿ ನದಿಯಲ್ಲ " ಸದ್ದು ಗದ್ದಲವಿಲ್ಲದೆ ಹೊಸ ಸ್ಪಂದನದಿಂದ ಅನಾವರಣ ಗೊಂಡಿತು . ನಮ್ಮ ಪ್ರೀತಿಯ ಕವಿ ಲೇಖಕ ಕಥೆಗಾರ ಹಾಗು ವಾಸ್ತು ಶಿಲ್ಪಿ ಶ್ರೀಯುತ ನಾಗರಾಜ ವಸ್ತಾರೆಯವರ ಸ್ವಗೃಹ ವಸ್ತಾರೆಯಲ್ಲಿ ಕಳೆದ ಕ್ರಿಸ್ಮಸ್ ದಿನದಂದು ( ೨೫.೧೨.೨೦೧೧ ರಂದು) ಡಾ ಸಿ ಎನ್ ರಾವ್ ಅವರಿಂದ ಸುಂದರ ಸರಳ ಕೌಟುಂಬಿಕ ಪರಿಸರದಲ್ಲಿ ಅನಾವರಣಗೊಂಡಿತು. |
ವಸ್ತಾರೆಯವರ ಸ್ವಾಗತ ನುಡಿಗಳಿಂದ ಆರಂಭಗೊಂಡ ಈ ಕಾರ್ಯಕ್ರಮ ಡಾ ಸಿ ಎನ್ ರಾವ್, ಡಾ ನರಹಳ್ಳಿ ,ಜ ನಾ ತೇಜಸ್ವಿ ,ವಸುಧೇಂದ್ರ, ಶ್ರೀಧರ್ ಮೂರ್ತಿ , ರುದ್ರ ಸ್ವಾಮಿ ಮುಂತಾದ ಗಣ್ಯರ ಈ ಕಾದಂಬರಿ ಬಗೆಗಿನ ಅನಿಸಿಕೆಗಳ ದೃಷ್ಟಿ ಕೋನ ನುಡಿಮುತ್ತು ಗಳಿಂದ ಅಲಂಕೃತಗೊಂಡು ನೆರೆದವರೆಲ್ಲರ ಮನರಂಜಿಸಿತು. |
Submitted by vicesity on December 22, 2011 - 1:36am |
ಈ ಇಂಟರ್ನೆಟ್ ಒಂದು ಶಕ್ತಿಯಾಗಿ ಬದಲಾಗುತ್ತದೆ ಎಂದು ಅದನ್ನು ಕಂಡುಹಿಡಿದ ಮಹಾನ್ ಗುಣಿ ಲಿವಿಂಗ್ ಲೆಜೆಂಡ್ "ವಿಂಟ್ ಸೆಫ್ಟ್" ಅವತ್ತೇ ಊಹಿಸಿದ್ದನಂತೆ. |
ಈ ರೀತಿ ಇಂಟರ್ನೆಟ್ ಶಕ್ತಿಯನ್ನು ಚೆನ್ನಾಗಿ ಸವಿದು ಕೋಟ್ಯಂತರ ರೂಪಾಯಿ ಮಾಡುತ್ತಿರುವ ನಮ್ಮ ನಿಮ್ಮ ಗೆಳಯರಿಗೆ ಒಂದು ಹಾರೈಕೆ, ಒಂದು ನಮನ ವಿರಲಿ. |
ತುಂಬಾ ಫನ್ನೀ ಸಂಗತಿ ಏನಪ್ಪಾ ಅಂದರೆ ಇಂಟರ್ನೆಟ್ನ ಡೆಫಿನೇಶನ್ ಬದಲಾಯಿತು ಕಾಲ ಬದಲಾದ ಹಾಗೆ,ಎಷ್ಟು ಜನ ಅದನ್ನು ಒಪ್ಪಿಕೊಳ್ಳುತ್ತಾರೋ ಅವರುಗಳು ಟ್ರೂ ಇಂಟರ್ನೆಟ್ ಗೀಕ್ಸ್. |
ಆ ಒಬ್ಬ ಗೀಕ್ ಮಾರ್ಕ್. |
ಒಂದು ಸಣ್ಣದಾಗಿ ಹಾರ್ವರ್ಡ್ ಉನಿವರ್ಸಿಟಿಯಲ್ಲಿ ಶುರು ಮಾಡಿದ ಫಸೇಬೂಕ್ ಕೋಟಿಬೆಲೆ ಬಾಳುತ್ತದೆ ಎಂದು ಪ್ರಾಬಬ್ಲೀ ಮಾರ್ಕ್ ಸ್ಯೂಕ್ಬರ್ಗ್ ನಾಟ್ ಪ್ರಿಡಿಕ್ಟೆಡ್. |
ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು |
Submitted by Raghavendra Gudi on December 10, 2011 - 5:42pm |
"ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು" |
ವರಕವಿ ದ ರಾ ಬೇಂದ್ರೆಯವರ ಉದಾತ್ತ ಮನಸ್ಸಿನ ಮುತ್ತಿನ ನುಡಿಗಳಿವು. ಇದರ ಅರ್ಥ ಇಷ್ಟೆ ಅದು ಕವನ ಇರಬಹದು, ಸಾಹಿತ್ಯವಿರಬಹುದು ಅದನ್ನು ಯಾರೇ ಬರೆಯಲಿ, ಯಾರೇ ಓದಲಿ ಅದು ಆ ಭಾಷೆಯ ಸ್ವತ್ತು. ಯಾಕೆಂದರೆ ಆ ಭಾಷೆಯೇ ಇರದಿದ್ದರೆ, ಅದು ಸಾಧ್ಯವಾಗುತ್ತಿರಲಿಲ್ಲ. ಎಂಥ ಉತ್ಕೃಷ್ಟ ಚಿಂತನೆ! ನೀವೇ ಯೋಚಿಸಿ, ಕನ್ನಡವೇ ಇರದ ಮೇಲೆ ಕನ್ನಡ ಸಾಹಿತ್ಯವಾದರೂ ಇರಲು ಸಾಧ್ಯವಿತ್ತೆ? ಅಂದಮೇಲೆ ಅದು ಯಾವುದೇ ಕವಿ, ಲೇಖಕ, ಸಾಹಿತಿಯೇ ಆಗಿರಲಿ ಅವರ ಕನ್ನಡ ಸಾಹಿತ್ಯ ಕೃಷಿಗೆ ಯಾರಾದರೂ ಗೌರವ ತೋರಿದರೆ, ಪ್ರಶಸ್ತಿ, ಸನ್ಮಾನ, ಸ್ಥಾನಮಾನ ನೀಡಿದರೆ, ಅದು ಆ ವ್ಯಕ್ತಿಗೆ ದಕ್ಕಿದ ಗೌರವ ಅನ್ನುವುದಕ್ಕಿಂತಲೂ, ಕನ್ನಡಕ್ಕೆ ದಕ್ಕಿದ ಸಮ್ಮಾನ ಎಂಬ ಭಾವನೆ ಬೇಕಲ್ಲವೇ? ಅದು ಜ್ಞಾನ ಪೀಠವಿರಲಿ, ಸರಸ್ವತಿ ಸಮ್ಮಾನವಿರಲಿ, ಪಂಪ, ನಾಡೋಜ ಯಾವುದೇ ಪ್ರಶಸ್ತಿ ಸಮ್ಮಾನ ಕನ್ನಡಕ್ಕೆ ದೊರಕಿದೆ ಎಂದರೆ, ಕನ್ನಡಿಗರ ಮೈ ಮನಗಳಲ್ಲಿ ಅದೆಂಥ ಸಂಭ್ರಮ ಮೂಡಬೇಕು? ಮೂಡಿರಬೇಕಿತ್ತು? ಆದರೆ ಆದದ್ದೇನು? ನಡೆಯುತ್ತಿರುವುದೇನು? ಇದೆಂಥ ಕಾದಾಟ? ಇದೆಂಥ ಬೌದ್ಧಿಕ ಬರಗಾಲ? ಒಬ್ಬರನ್ನು ಸನ್ಮಾನಿಸುವ ನೆಪದಲ್ಲಿ, ಮತ್ತೊಬ್ಬರನ್ನು ಅವಮಾನಿಸುವ ಪರಿಪಾಠ? ಈ ರೀತಿಯಾಗಿ ಸನ್ಮಾನಕ್ಕೊಳಪಡುವವರನ್ನು ನೋಯಿಸುವ ದೂರ್ಥ ಸೆಣಸಾಟ? ಪ್ರಗತಿ ಎಂದರೆ ಇದೇನಾ? ಪ್ರಗತಿಪರರು ಎಂದರೆ ಇವರೇನಾ? ಅಷ್ಟಕ್ಕೂ ಇಂಥವರಿಗೆ ಭಾರತದ ಸಂವಿಧಾನವೇ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇನ್ನೊಬ್ಬರಿಂದ ಕಸಿಯುವಂತಹ ಹಕ್ಕನ್ನು ಕೊಟ್ಟವರಾರು? ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಯವನ್ನು ಬೇಕಾ ಬಿಟ್ಟಿಯಾಗಿ ಬಳಸುತ್ತಿರುವುದು, ಎಷ್ಟು ಸಮಂಜಸ? ಅವಶ್ಯವಿರಲಿ ಇರದೇ ಇರಲಿ ತಮ್ಮ ಬಾಯಿ ಚಪಲಕ್ಕೆ, ಮಾಧ್ಯಮಗಳಲ್ಲಿ ಕಾಣಬೇಕೆಂಬ ಕಾರಣಕ್ಕೆ ಇಲ್ಲ ಸಲ್ಲದ ಹೇಳಿಕೆಯನ್ನು ನೀಡುವ, ಅವಶ್ಯಕತೆಯೇನು? ಇದನ್ನು ಈ ಪ್ರಮುಖ ಪ್ರಾಜ್ಞರೇ ತಿಳಿಸಬೇಕು. |
Submitted by ರಾಮಕುಮಾರ್ on December 6, 2011 - 12:11pm |
ನಾನು ಇತೀ್ತಚೆಗೆ ಓದಿದ ಡಗ್ಲಾಸ್ ಹಾಫ್ಸಟೇಟರನ "ಗೋಡೆಲ್, ಎಶ್ಚರ್, ಬಾಕ್: ಆ್ಯನ್ ಎಟೆರ್ನಲ್ ಬ್ರೈಡ್" ಪುಸ್ತಕ ಕೃತಕ ಬುದ್ಧಿಮತ್ತೆ, ಪ್ರೋಗ್ರಾಮಿಂಗ್ ಬಾಷೆಗಳ ವಿನ್ಯಾಸ, ಝೆನ್ ಕಥೆಗಳು, ತತ್ವಶಾಸ್ತ್ರ, ಗೋಡೆಲ್ ನ ಅಪೂರ್ಣತೆಯ ಪ್ರಮೇಯ, "ಆಲಿಸ್ ಇನ್ ವಂಡರಲ್ಯಾಂಡ್" ಮಾದರಿಯ ಸಂಭಾಷಣೆಗಳು, ತರ್ಕಶಾಸ್ತ್ರದ ವಿಧ್ಯುಕ್ತ ವ್ಯವಸ್ಥೆ(formal system), ಡಿ.ಎನ್.ಎ ಎನ್ಕೋಂಡಿಗ್, ಎಶ್ಚರ್ನ ಕಲೆ, ಬಾಕ್ ನ ಸಂಗೀತ- ಹೀಗೆ ಹತ್ತು ಹಲವು ವಿಷಯಗಳ ಸುಸಂಬದ್ಧ ಹೆಣಿಗೆ, ಸುರಳೀತ ನಿರೂಪಣೆಯಿಂದ ಗಮನ ಸೆಳೆಯಿತು. ಈ ಪುಸ್ತಕಕ್ಕೆ ೧೯೮೦ರ ಪ್ರತಿಷ್ಟಿತ ಪುಲಿಟ್ಝರ್ ಪ್ರಶಸ್ತಿ ದೊರಕಿದೆ. |
ಮರೆಯಾದ 'ಎವರ್ ಗ್ರೀನ್ ಹೀರೋ' ದೇವ ಆನಂದ |
Submitted by H A Patil on December 4, 2011 - 7:13pm |
2011 ರ ಡಿಸೆಂಬರ್ 4 ರ ಬೆಳಗು ವಿಷಾದದ ರಾಗವೊಂದನ್ನು ಹೊತ್ತು ತಂದ ಬೆಳಗು ಆಯಿತು. ಮಾಮೂಲಿನಂತೆ ಇಂದು ಬೆಳಿಗ್ಗೆ ಟೆಲಿವಿಜನ್ ಆನ್ ಮಾಡಿದಾಗ ಚಾನಲ್ ವೊಂದರಲ್ಲಿ ಚುಟುಕು ಸುದ್ದಿಯೊಂದು ಬಿತ್ತರ ಗೊಳ್ಳುತ್ತಿತ್ತು. ಅದು ಹಿಂದಿ ಚಿತ್ರರಂಗದ ಹಳೆಯ ತಲೆಮಾರಿನ ಖ್ಯಾತ ನಟ ' ಎವರ್ಗ್ರೀನ್ ' ಹೀರೊ, ದಾದಾ ಸಾಹೇಬ ಫಾಲ್ಕೆ ಪುರಸ್ಕೃತ ದೇವ ಆನಂದನ ನಿಧನದ ಸುದ್ದಿ ಅದಾಗಿತ್ತು. ಹಾಗೆ ನೋಡಿದರೆ 88 ವರ್ಷಗಳ ಪ್ರಾಯದ ಚಿರ ಯೌವನಿಗ ದೇವ್ ಈಗ ಚಾಲ್ತಿಯಲ್ಲಿಲ್ಲದ ನಟನಾಗಿದ್ದ, ಕಾರಣ ಆತ ನಾಯಕ ಪಾತ್ರಗಳಿಂದ ನಿರ್ಗಮಿಸಿದ ನಂತರ ಬೇರೆ ಪಾತ್ರಗಳಲ್ಲಿ ಅಭಿನಯಿಸಲು ಹೋಗಲಿಲ್ಲ. ಆದರೆ ಸುಮಾರು 70 ವರ್ಷಗಳ ಹಿಂದಿನ ಯುವ ಪೀಳಿಗೆಗೆ ದೇವಾನಂದ ಅನೇಕ ವರ್ಷಗಳ ಕಾಲ ಮನರಂಜಿಸಿದ ನಟ ಎನ್ನುವುದಕ್ಕಾಗಿ ಈ ಸ್ಮರಣೆ. |
ಈ ಸಿನೆಮಾ ಪ್ರಪಂಚ ಎಲ್ಲ ಕಾಲಕ್ಕೂ ಆಯಾ ಕಾಲ ಘಟ್ಟದ ಯುವ ಪೀಳಿಗೆಯನ್ನು ರಂಜಿಸುತ್ತ ಬಂದಂತಹ ಒಂದು ಆಕರ್ಷಕ ಜಗತ್ತು. ಎಲ್ಲರಿಗೂ ಈ ಚಲನಚಿತ್ರಗಳನ್ನು ನೋಡುವ ಅವಕಾಶ ಆಗ ದೊರೆಯುತ್ತಿದ್ದುದು ಕಷ್ಟಕರವಾಗಿತ್ತು. ಆದರೂ ಈ ಕೊರತೆಯನ್ನು ನಾವು ಪ್ರತಿಕೆ ಗಳಲ್ಲಿ ಬರುತ್ತಿದ್ದ ಲೇಖನ ವಿಮಶರ್ೆಗಳನ್ನು ಓದುತ್ತ ಖುಷಿ ಪಡುತ್ತಿದ್ದೆವು. ಬಾಲ್ಯಕಾಲದಲ್ಲಿ ಅಜ್ಜಿಯ ಜೊತೆ ನೋಡಿದ ಪೌರಾಣಿಕ ಮತ್ತು ಭಕ್ತಿ ಪ್ರಧಾನ ಕೆಲ ಚಿತ್ರಗಳನ್ನು ನೋಡಿದ್ದು ಬಿಟ್ಟರೆ ಆ ಕಾಲದ ಯಾವ ಚಿತ್ರಗಳನ್ನು ನೋಡಲಾಗಿರಲಿಲ್ಲ. ದೂರದರ್ಶನ ಜಾಲ ಬಂದ ನಂತರ ಆ ಜಮಾನಾದ ಚಿತ್ರಗಳನ್ನು ನೋಡಲು ಸಾಧ್ಯವಾದದ್ದು. ಆಗ ಗ್ರಾಮೀಣ ಪರಿಸರದಲ್ಲಿ ಕಾಲೇಜು ಹುಡುಗರು ಮಾತ್ರ ನಗರ ಪ್ರದೇಶಗಳಿಗೆ ಓದಲು ಹೋದಾಗ ಅದು ಅನುಕೂಲಸ್ಥರ ಮಕ್ಕಳಿಗೆ ಮಾತ್ರ ಚಲನ ಚಿತ್ರ ವೀಕ್ಷಣೆ ಸಾಧ್ಯವಿತ್ತು.ಅ ಕಡೆಗೆ ಒಲವು ಬೆಳೆಸಿಕೊಂಡವರನ್ನು ದಾರಿ ತಪ್ಪಿದವರು ಎಂದು ಪರಿಗಣಿಸಲಾಗುತ್ತಿತ್ತು. ಹೀಗಾಗಿ ಅಚಾನಕ್ಕಾಗಿ ಒದಗಿ ಬರುತ್ತಿದ್ದ ಅವಕಾಶಕ್ಕಾಗಿ ನಾವು ಕಾಯುತ್ತಿದ್ದೆವು. |
ಆಂಡ್ರಾಯ್ಡ್ ಮತ್ತು ಕನ್ನಡ |
Submitted by hpn on December 2, 2011 - 11:37pm |
ಇತ್ತೀಚೆಗೆ ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳು ಬಹಳ ಜನಪ್ರಿಯವಾಗುತ್ತಿವೆ. ಕೈಗೆಟುಕುವ ಬೆಲೆಯಲ್ಲಿ ಆಂಡ್ರಾಯ್ಡ್ ಫೋನುಗಳು ಲಭ್ಯವಾಗುತ್ತಿರುವಂತೆ ಹೆಚ್ಚಿನ ಜನ ಇದನ್ನೇ ಕೊಳ್ಳುತ್ತಿದ್ದಾರೆ. ಆದರೆ ಮೊಬೈಲ್ ಫೋನು ಕೊಂಡ ನಂತರ ಎಲ್ಲರೂ ಸಾಮಾನ್ಯವಾಗಿ ಕೇಳುವ ಪ್ರಶ್ನೆ - "ಇದರಲ್ಲಿ ಕನ್ನಡ ಬಳಸುವುದು ಹೇಗೆ?"ಎಂಬುದು. |
ಆಂಡ್ರಾಯ್ಡ್ ಗೂಗಲ್ ಕಂಪೆನಿಯವರು ನಿರ್ಮಿಸಿರುವ ಆಪರೇಟಿಂಗ್ ಸಿಸ್ಟಮ್. ಇದನ್ನು ಮೂಲತಃ ಗ್ನು/ಲಿನಕ್ಸ್ ಕರ್ನೆಲ್ ಬಳಸಿ ನಿರ್ಮಿಸಲಾಗಿದೆ. ಆಂಡ್ರಾಯ್ಡ್ ವ್ಯವಸ್ಥೆಯಲ್ಲಿ ಕನ್ನಡ ಹಾಗು ಹಲವು ಭಾರತೀಯ ಭಾಷೆಗಳನ್ನು ಓದಲು, ಬರೆಯಲು ಸಾಧ್ಯವಾಗಿಸುವ 'ಲೊಕ್ಯಾಲೆ' ಬೆಂಬಲ ಸದ್ಯಕ್ಕೆ ಗೂಗಲ್ ನೀಡುತ್ತಿಲ್ಲ. ಹೀಗಾಗಿ ಮೊಬೈಲ್ ಫೋನುಗಳನ್ನು ಮಾರಾಟ ಮಾಡುವ ಸ್ಯಾಮ್ಸಂಗ್, ಎಲ್ ಜಿ ಮುಂತಾದ ಕಂಪೆನಿಗಳು ಭಾರತದಲ್ಲಿ ಮಾರುತ್ತಿರುವ ಮೊಬೈಲುಗಳಿಗೆ ಭಾರತೀಯ ಭಾಷೆಗಳನ್ನು ಬಳಸಲು ಅಗತ್ಯವಿರುವ ಫಾಂಟು, ಲೊಕ್ಯಾಲೆಗಳನ್ನು ಅಳವಡಿಸಿ ಮಾರುತ್ತಿವೆ. ಹಾಗೆಂದು ಭಾರತದಲ್ಲಿ ಮಾರಾಟಕ್ಕಿರುವ ಎಲ್ಲ ಮೊಬೈಲು ಫೋನುಗಳಲ್ಲೂ ಈ ಸವಲತ್ತು ಇಲ್ಲ! ಹೀಗಾಗಿ ಸ್ಮಾರ್ಟ್ ಫೋನು ಕೊಳ್ಳುವ ಮುನ್ನ "ಇದರಲ್ಲಿ ಕನ್ನಡ ಸರಿಯಾಗಿ ಬರುತ್ತದೆಯೇ?" ಎಂದು ಮಾರಾಟ ಮಾಡುತ್ತಿರುವವರಿಗೆ ವಿಚಾರಿಸಿ ಕೊಳುವುದು ಸೂಕ್ತ. ಹೆಚ್ಚು ಬಳಕೆದಾರರು ಹೀಗೆ ವಿಚಾರಿಸುತ್ತಿದ್ದರೆ ಮಾತ್ರ ಕನ್ನಡದ ಬಳಕೆಗೆ ಇರುವ ಬೇಡಿಕೆಯ ಅರಿವು ಮೊಬೈಲ್ ಮಾರುವ ಕಂಪೆನಿಗಳಿಗೆ ಆದೀತು. ಗೆಳೆಯರು ಯಾರಾದರೂ ಈಗಾಗಲೇ ಕೊಂಡಿರುವ ಮೊಬೈಲ್ ಫೋನ್ ಇದ್ದರೆ ಅದರಲ್ಲೊಮ್ಮೆ ಯುನಿಕೋಡ್ ಕನ್ನಡ ಬಳಸುವ ಯಾವುದಾದರೂ ವೆಬ್ಸೈಟು (ಉದಾಹರಣೆಗೆ: ಕನ್ನಡ ವಿಕಿಪೀಡಿಯ ಅಥವ ಸಂಪದ.ನೆಟ್) ತೆರೆದು ನೋಡಿದರೆ ಆ ಮೊಬೈಲ್ ಫೋನಿನಲ್ಲಿ ಕನ್ನಡ ಬರುತ್ತದೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು. |
ಈಗಾಗಲೇ ನನ್ನ ಬಳಿ ಒಂದು ಆಂಡ್ರಾಯ್ಡ್ ಫೋನು ಇದೆ. ಇದರಲ್ಲಿ ಕನ್ನಡ ಹೇಗೆ? ಎಂಬುದು ಪ್ರಶ್ನೆಯಾದರೆ, ಮೊದಲು ಮೊಬೈಲ್ ಮಾರುತ್ತಿರುವ ಕಂಪೆನಿಯ ಕಸ್ಟಮರ್ ಸಪೋರ್ಟ್ ನಂಬರಿಗೆ ಫೋನು ಮಾಡಿ ನಿಮ್ಮ ಮೊಬೈಲಿನಲ್ಲಿ ಕನ್ನಡ ಬರುತ್ತಿಲ್ಲ ಎನ್ನುವುದರ ಕುರಿತು ಅವರ ಗಮನ ಸೆಳೆಯುವುದು ಮೊದಲು ಮಾಡಬೇಕಾದ ಕೆಲಸ! ಹೀಗೆ ಮಾಡಿದರೆ ಈಗ ಕನ್ನಡದ ಬೆಂಬಲವಿಲ್ಲದಿದ್ದರೂ ಮುಂದೊಮ್ಮೆ ನಿಮ್ಮ ಮೊಬೈಲ್ ಫೋನಿನ ಮಾಡೆಲ್ಲಿಗೂ ಕನ್ನಡದ ಬೆಂಬಲ ಹೊರತರುವತ್ತ ಗಮನ ನೀಡಾರು. ಎರಡನೆಯ ಹೆಜ್ಜೆ - ನಿಮ್ಮ ಮೊಬೈಲ್ ಫೋನಿನ ಫರ್ಮ್ವೇರ್ ಆವೃತ್ತಿಗೆ ಯಾವುದಾದರೂ ಅಪ್ಡೇಟ್ ಇದೇಯೇ ಎಂಬುದನ್ನು ವಿಚಾರಿಸಿ ನೋಡಿ ಅಥವ ಇಂಟರ್ನೆಟ್ಟಿನಲ್ಲಿ ಹುಡುಕಿ ನೋಡಿ. ಬಹುತೇಕ ಹಲವು ಹೊಸ ಮೊಬೈಲ್ ಫೋನುಗಳಿಗೆ ಈ ರೀತಿಯ ಅಪ್ಡೇಟುಗಳು ಭಾರತೀಯ ಭಾಷೆಗಳನ್ನು ಓದಲು ಬೇಕಿರುವ ಸವಲತ್ತುಗಳನ್ನು ಹೊತ್ತು ತರುತ್ತವೆ. |
ಇನ್ನು ಹೊಸತನ್ನು ಕಲಿಯಬೇಕು, ಪ್ರಯೋಗ ಮಾಡಿ ನೋಡಿಬಿಡೋಣ ಎನ್ನುವ ಸಾಹಸಿಗರಿಗೆ xda-developers ಎನ್ನುವ ಒಂದು ಆನ್ಲೈನ್ ಸಮುದಾಯವಿದೆ. ಇಲ್ಲಿ ಸಿಗುವ ಪರ್ಯಾಯ ಆಂಡ್ರಾಯ್ಡ್ ವ್ಯವಸ್ಥೆ ಭಾಷೆಯ ಸಲಕರಣೆಗಳನ್ನಷ್ಟೇ ಅಲ್ಲ, ಇನ್ನೂ ಹಲವು ಸವಲತ್ತುಗಳನ್ನು ಹೊತ್ತು ತರುವ ಫರ್ಮ್ವೇರುಗಳು ಸಿಗುತ್ತವೆ. |
ಕನ್ನಡಕ್ಕೆ ಮೊದಲ ' ಸರಸ್ವತಿ ಸಮ್ಮಾನ ' |
Submitted by H A Patil on November 29, 2011 - 9:27pm |
2011 ನೇ ನವಂಬರ್ 16 ಗುರುವಾರ ಕನ್ನಡ ಸಾಹಿತ್ಯಾಭಿಮಾನಿಗಳು ಸಂತಸಪಡುವ ಮತ್ತೊಂದು ಅವಕಾಶ ಒದಗಿ ಬಂತು. ' ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ ' ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರಿಗೆ ಅವರ ' ಮಂದ್ರ ' ಕಾದಂಬರಿಗೆ 2010 ನೇ ಸಾಲಿನ |
' ಸರಸ್ವತಿ ಸಮ್ಮಾನ ' ಪ್ರಶಸ್ತಿ ಕೊಡಲ್ಪಟ್ಟಿತು. ಇದು ಭಾರತೀಯ ಭಾಷೆಗಳ ಉತ್ಕೃಷ್ಟ ಸಾಹಿತಿಗಳನ್ನು ಗುರುತಿಸಿ ಕೊಡಮಾಡುವ ಪ್ರಶಸ್ತಿ. ಕುವೆಂಪು ಜ್ಞಾನ ಪೀಠ ಪ್ರಶಸ್ತಿ ಪಡಸೆದ ಮೊದಲ ಕನ್ನಡ ಸಾಹಿತಿಯಾದರೆ, ಭೈರಪ್ಪ ಮೊದಲ ' ಸರಸ್ವತಿ ಸಮ್ಮಾನ ' ಪಡೆದ ಕನ್ನಡ ಸಾಹಿತಿ. |
ಈ ವರ್ಷ ಕನ್ನಡಿಗರಿಗೆ ಕನ್ನಡ ಸಾಹಿತ್ಯ ಲೋಕಕ್ಕೆ ಮನ್ನಣೆಯ ಸುರಿಮಳೆ. ಕಳೆದ ತಿಂಗಳು ಕನ್ನಡದ ಪ್ರತಿಷ್ಟಿತ ಜಾನಪದ ಕವಿ ಚಂದ್ರಶೇಖರ ಕಂಬಾರರಿಗೆ ಕನ್ನಡದ ಎಂಟನೇ ' ಜ್ಞಾನಪೀಠ ಪ್ರಶಸ್ತಿ ' ಸಂದರೆ, ಕನ್ನಡದ ರಾಜ್ಯೋತ್ಸವ ಮಾಸ ನವಂಬರ್ನಲ್ಲಿ ಭೈರಪ್ಪನವರಿಗೆ ' ಸರಸ್ವತಿ ಸಮ್ಮಾನ ' ಲಭಿಸಿದೆ. ಈ ಎರಡೂ ದೈತ್ಯ ಪ್ರತಿಭೆಗಳಿಗೆ ನಮ್ಮ ಅಭಿನಂದನೆ ಸಲ್ಲಿಸೋಣ. ಪ್ರಶಸ್ತಿಗೆ ಕೊಡ ಮಾಡುವ ಬೃಹತ್ ಮೊತ್ತದ ಹಣದಿಂದ ಪ್ರಶಸ್ತಿಯ ತುಲನೆ ಮಾಡುವುದು ಬೇಡ. ಪ್ರಶಸ್ತಿ ಕೊಡ ಮಾಡುವ ಸಂಸ್ಥೆಗಳು ರಾಷ್ಟೀಯ ಮಟ್ಟದವು ಮತ್ತು ಇವು ಸರಕಾರಿ ಸ್ವಾಮ್ಯಕ್ಕೆ ಒಳ ಪಟ್ಟವುಗಳಲ್ಲ. ಈ ಪ್ರಶಸ್ತಿಗಳು ಬೇರಾರಿಗೋ ಸಲ್ಲಬೇಕಿತ್ತು ಇವರಿಗೆ ಸಲ್ಲಬಾರದಿತ್ತು ಪ್ರಶಸ್ತಿ ಪಡೆಯುವಲ್ಲಿ ಲಾಬಿ ನಡೆದಿದೆ ಎಂಬ ಕ್ಷುಲ್ಲಕ ಊಹೆ ಬೇಡ. ಇವರಿಬ್ಬರಿಗೂ ಸಂದಿದೆ ಸಂತಸ ಪಡೋಣ. ಮುಂದೆ ಉಳಿದವರಿಗೆ ಸಲ್ಲಲಿ ಆಗಲೂ ಸಂಭ್ರಮಿಸೊಣ. |
೮೦ ಸಾವಿರ ಕೋಟಿ ಬಜೆಟ್ಟೂ, ೩೦೦೦ ಕನ್ನಡ ಶಾಲೆಗಳೂ... |
Submitted by Raghavendra Gudi on November 19, 2011 - 12:06pm |
ಮಕ್ಕಳನ್ನು ಆಕರ್ಷಿಸುವಂತೆ ಸರ್ಕಾರಿ ಶಾಲೆಗಳನ್ನು ರೂಪಿಸುವುದನ್ನು ಬಿಟ್ಟು ಮಕ್ಕಳಿಲ್ಲ ಎಂಬ ನೆಪವೊಡ್ಡಿ ಅವುಗಳನ್ನು ಮುಚ್ಚುವುದಕ್ಕೆ ಮುಂದಾಗುತ್ತಿರುವುದು ಕರ್ತವ್ಯ ವಿಮುಖತೆ ಎನ್ನುತ್ತಾರೆ ರಾಘವೇಂದ್ರ ಗುಡಿ |
"ಆರು ವರ್ಷದಿಂದ, ಹದಿನಾಲ್ಕು ವರ್ಷದೊಳಗಿನ ಪ್ರತಿಯೊಂದು ಮಗುವು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ತನ್ನ ಹತ್ತಿರದ ಶಾಲೆಯಲ್ಲಿ ಹೊಂದುವ ಹಕ್ಕನ್ನು ಹೊಂದಿರುತ್ತದೆ"- ಇದು ಭಾರತ ಸರ್ಕಾರ ೨೦೦೯ರ ಅಗಸ್ಟ್ ೨೭ರಂದು ಜಾರಿಗೊಳಿಸಿದ 'ಮಕ್ಕಳ ಶಿಕ್ಷಣ ಹಕ್ಕು' ಕಾಯ್ದೆಯ ಎರಡನೇ ಅಧ್ಯಾಯದ ಮೊದಲ ಪುಟದಲ್ಲಿ ಸ್ಪಷ್ಟವಾಗಿ ನಮೂದಿಸಿದ ಅಂಶವಾಗಿದೆ. |
ಬದುಕಿದ್ದರೆ ಎಂಭತ್ತು ವಸಂತಗಳನ್ನು ಪೂರೈಸಲಿದ್ದ ಶಮ್ಮಿ |
Submitted by H A Patil on October 22, 2011 - 7:03pm |
ಅಕ್ಟೋಬರ್ ೨೧ ಅನೇಕ ಐತಿಹಾಸಿಕ ಘಟನೆಗಳನ್ನು ತನ್ನ ಒಡಲಾಳದಲ್ಲಿ ಇರಿಸಿ ಕೊಂಡಿದೆ. ಈ ದಿನದಂದು ೧೭೭೨ ರಂದು ಇಂಗ್ಲೀಷ್ ಕವಿ ಸ್ಯಾಮೆವೆಲ್ ಕೊಲರಿಜ್ ಜನಿಸಿದರೆ, ೧೮೩೩ರಂದು ಸ್ವೀಡನ್ನಿನ ರಸಾಯನ ಶಾಸ್ತ್ರಜ್ಞ ಆಲ್ಫ್ರೆಡ್ ನೋಬೆಲ್ಲ ಜನಿಸಿದ. ೧೯೪೦ ರಂದು ಇಂಗ್ಲಂಡಿನ ಖ್ಯಾತ ಪ್ರಾರಂಭಿಕ ಬ್ಯಾಟ್ಸ್ಮಮನ್ ಜೆಫ್ರಿ ಬಾಯ್ಕಾಟ್ ಜನಿಸಿದರೆ , ಅದೆ ದಿನ ಇನ್ನೊಂದು ಪ್ರಖ್ಯಾತ ತಾರೆ ಉದಯ ವಾಯಿತು. ಆತ ಬೇರಾರೂ ಅಲ್ಲ ಬಾಲಿವುಡ್ನನ ಖ್ಯಾತ ನಟ ದಿ॥ ಶಮ್ಮಿಕಪೂರ. ಿಂದು ಆತ ಬದುಕಿದ್ದರೆ ಎಂಭತ್ತು ವಸಂತಗಳನ್ನು ಪೂರೈಸಲಿದ್ದ. ಈತ ಭಾರತದ ಖ್ಯಾತ ಕಪೂರ ವಂಶದ ಕುಡಿ. ಈತನ ತಂದೆ ಪೃಥ್ವಿ ಥಿಯೇಟರ್ಸನ ಮಾಲಿಕ ಟಾಕಿ ಯುಗ ಭಾರತ ಚಿತ್ರರಂಗದ ಪ್ರಥಮ ನಟ ಎಂಬೆಲ್ಬ ಹೆಗ್ಗಳಿಕೆಯನ್ನು ಹೊಂದಿದವ. ಅಣ್ಣ ಖ್ಯಾತನಟ ನಿರ್ಮಾಪಕ ನಿರ್ದೇಶಕ ಮತ್ತು ಆರ್್.ಕೆ.ಬ್ಯಾನರಿನ ಸಂಸ್ಥಾಪಕ ರಾಜಕಪೂರ. ಸಿನ್ನೊಬ್ಬ ತಮ್ಮ ಶಶಿಕಪೂರ ಸಹ ಹಿಮೀದ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ. ಹೌಸ್ ಹೋಲ್ಡರ್ ಹಾಗೂ ಸಿದ್ಧಾರ್ಥ ಹಾಲಿವುಡ್ ಚಿತ್ರಗಳಲ್ಲಿ ನಟಿಸಿದವ. |
ಹೆಂಗೆಂಗ್ ಇದ್ದೋರೆಲ್ಲ- ಏನೇನಾದ್ರು?-ಮೀಸೆ ಎತ್ತಿ ಮೆರ್ದೊರೆಲ್ಲ? |
Submitted by venkatb83 on September 24, 2011 - 12:00pm |
ಜಾಮೀನು ಅರ್ಜಿ ಸಲ್ಲಿಸಿ 'ಧೈನ್ಯತೆಯೇ ಮೈ ತಳೆದು ಬಂದಂತೆ ಕೋರ್ಟಿನ ಕಟಕಟೆಯಲ್ಲಿ ನಿಂತಿರುವ !!' ಆರೋಪಿತನ ಕಡೆ ನೋಡುತ್ತಾ 'ನ್ಯಾಯಾಧೀಶರು' ಚಾವಟಿ ಬೀಸಿದಂತೆ ಹೇಳುತ್ತಾರೆ, ನಿಮ್ಮ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ. |
variation in areca marketing |
Submitted by Aravind Aklapura on September 19, 2011 - 3:16pm |
ದೆಹಲಿ ಕೋರ್ಟ್ ಸ್ಫೋಟ: ಭಾರತದ ಮೇಲೆ ಮತ್ತೆ-ಮತ್ತೆ-ಧಾಳಿ-ಪ್ರಾಣ ಹಾನಿ-ಪರಿಹಾರ ಮಾತ್ರ ಸೊನ್ನೆ.... |
Submitted by venkatb83 on September 7, 2011 - 7:30pm |
ಪ್ರಿಯ ಸಂಪದಿಗರೇ |
ಕೆಲ ತಿಂಗಳ ಹಿಂದೆ (೧೫ ಜುಲೈ ೨೦೧೧) ನಾ ಮುಂಬೈ ಧಾಳಿ ಕುರಿತಾದ ಲೇಖನವೊಂದನ್ನ ಬರೆದಿದ್ದೆ, |
http://sampada.net/%E0%B2%AE%E0%B3%81%E0%B2%82%E0%B2%AC%E0%B3%88-%E0%B2%... |
ಇವತ್ತು(೦೭-೦೯-೨೦೧೧) ಬೆಳಗ್ಗೆ ದೆಹಲಿ ಕೋರ್ಟು ಮೇಲೆ ,ಧಾಳಿ ಆಗಿದೆ (ಉಗ್ರರಿಗೆ ಕೋರ್ಟು-ಶಾಲೆ-ದೇವಸ್ಥಾನ ರಸ್ತೆ-ಮಹಡಿ , ಉಹೂ ಒಂದೂ ವ್ಯತ್ಯಾಸವಿಲ್ಲ) |
ಮತ್ತದೇ 'ಯಥಾ ಪ್ರಕಾರದ ಹಳೆ ಕಿತ್ತೋಗಿರೋ ಟೇಪ್ ರೆಕಾರ್ಡರ್ ತರಹ ಅದೇ ಪೊಳ್ಳು ಭರವಸೆಗಳು, ಅಶ್ವಾಶನೆಗಳು, ''ಶಿಖಂಡಿ ಖಂಡನೆ'ಯೂ ಆಗುತ್ತಿದೆ |
Submitted by Nandish.H.B on September 5, 2011 - 1:01pm |
15347 ಹಿಟ್ಸ್ |
೬೫ ನೇ ಸ್ವಾತಂತ್ರೋತ್ಸವ : ೧೯೪೭-೨೦೧೧? |
Submitted by venkatb83 on August 13, 2011 - 12:11pm |
ಸಂಪದಿಗರಿಗೆಲ್ಲ ೬೫ ನೆ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು. |
ನಮಗೆ ಸ್ವಾತಂತ್ರ್ಯ ಬಂದು ನಾಡಿದ್ದಿಗೆ (೧೫-೦೮-೨೦೧೧) ೬೫ ವರ್ಷ ಈ ಸಂದರ್ಭದಲ್ಲಿ , ಒಮ್ಮೆ ಹಿನ್ನೋಟವರಿಸಿದರೆ ನಿರಾಸೆ ಮೂಡದೆ ಇರದು.ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಪೂಜ್ಯ ಪೂರ್ವಜರು ಅಂದುಕೊಂಡಿದ್ದೆ ಒಂದು -ಆಮೇಲೆ ಆದದ್ದೇ ಒಂದು. ನಮ್ಮ ಸ್ವಾತಂತ್ರ್ಯಕ್ಕಾಗಿ ತನು-ಮನ-ಧನ-ಪ್ರಾಣವನ್ನು ಅರ್ಪಿಸಿದ ಆ ಮಹಾನ್ ಚೇತನಗಳ ಸುಸ್ವಪ್ನ ಈಗ ಧುಸ್ವಪ್ನವಾಗಿದೆ . |
ದೀಪವು ನಿನ್ನದೆ, ಗಾಳಿಯೂ ನಿನ್ನದೆ; ಈ ದೀಪಾವಳಿ ಎಲ್ಲರಿಗೂ ಇರಲಿ ಏಕರೀತಿ. |
Submitted by mahalakshmihars... on November 6, 2010 - 4:16pm |
ಮಣ್ಣಿನ ತೆಪ್ಪವೋ; |
ತೆಪ್ಪದೊಳು ತುಪ್ಪದ ಸಮುದ್ರವೋ! |
ತೆಪ್ಪದ ಕಮಲದಲ್ಲಿ ಹತ್ತಿಯ ಬತ್ತಿಯೋ; |
ಬತ್ತಿಯ ತ್ಯಾಗದಿಂದ ಬೆಳಕಿನ ಸೆಲೆಯೋ! |
5120 ಹಿಟ್ಸ್ |
ನಾಯಕತ್ವದ ವಿಲಕ್ಷಣ ಜಿಗಿತ! |
Submitted by ಆರ್ ಕೆ ದಿವಾಕರ on November 6, 2010 - 11:59am |
ಹಿರಿತಲೆಮಾರಿನ ಪತ್ರಕರ್ತರ ಪೈಕಿ ಒಬ್ಬರಾದ ವಿ. ಎನ್. ಸುಬ್ಬರಾವ್, ಸಂಯುಕ್ತ ಕರ್ನಾಟಕ ಅಂಕಣವೊಂದರಲ್ಲಿ, ತಾವು ತುಂಬಾ ಹತ್ತಿರದಿಂದ ಕಂಡ 15 ಮುಖ್ಯಮಂತ್ರಿಗಳ ಪೈಕಿ ಇಂದಿನವರು, ಆತಂಕದಿಂದ ಆತಂಕಕ್ಕೇ ಜಿಗಿಯುವ ವಿಲಕ್ಷಣ ತೋರುತ್ತಿರುವ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ನಿರ್ಲಿಪ್ತ ನಿಲವಿನ Observerಗಳಿಗೂ, 'ಹೌದಲ್ಲವಾ?' ಎನಿಸುತ್ತದೆ. ಆದರಿದಕ್ಕೆ, ಯಡಿಯೂರಪ್ಪನವರ ನಾಯಕತ್ವ ಅಥವಾ ವ್ಯಕ್ತಿತ್ವಕ್ಕಿಂತಲೂ ಹೆಚ್ಚಾಗಿ ಯುಗ ಧರ್ಮದ ಅಷಡ್ಡಾಳತನವೇ ಕಾರಣವಾಗಿರಬಹುದಲ್ಲವೇ? |
ಟಚ್ ಸ್ಕ್ರೀನ್ ಸವಲತ್ತು:ತಂತ್ರಾಂಶದ ಮೂಲಕ |
Submitted by ASHOKKUMAR on November 5, 2010 - 5:18am |
ನಿಸ್ತಂತು ಸಂಸಾರ |
ಉಡುಪಿ: ಕೃಷ್ಣ ಮಠ/ದೇಗುಲ |
Subsets and Splits
No community queries yet
The top public SQL queries from the community will appear here once available.