text
stringlengths
0
61.5k
ಉವಾಚ.. Subrahmanya at 6:31 AM
ಭಾಷಾಭಿಮಾನ !
" ಕನ್ನಡದ್ಮಕ್ಳು ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಪ್ರಾರಂಭಿಸಿ ಕನ್ನಡ ಭಾಷೆಯ ಆಭಿವೃಧ್ದಿಗಾಗಿ ಹಗಲಿರುಳೂ ಶ್ರಮಿಸಬೇಕು. ಕನ್ನಡದ ಸಂಪೂರ‍್ಣ ಅನುಷ್ಟಾನಕ್ಕಾಗಿ ನಿಮ್ಮ ಶಾಲೆಗಳು, ಮನೆ, ಹಾಗೂ ಎಲ್ಲೆಡೆಯಲ್ಲಿಯೂ ಕನ್ನಡ ಭಾಷೆಯಲ್ಲಿಯೆ ಮಾತನಾಡಬೇಕು. ನಿಮಗೆ ಕನ್ನಡ ಭಾಷೆ ಅತ್ಯಂತ ಸರಳ ಎನ್ನಿಸಬೇಕೆಂದರೆ ಹೆಚ್ಚು ಕನ್ನಡ ಕಾದಂಬರಿಗಳು, ಲೇಖನಗಳು, ಹಾಗೂ ಕವನ ಗಳನ್ನು ಓದಬೇಕು ! ಇನ್ನೂ ಸರಳವಾಗಿ ಹೇಳಬೇಕೆಂದರೆ ನನ್ನ ಲೇಖನಗಳು , ಕಾದಂಬರಿಗಳನ್ನು ನೀವು ಕೊಂಡು ಓದಿದಲ್ಲಿ ನಿಮ್ಮ ಕನ್ನಡಾಭಿಮಾನ ಉತ್ತುಂಗಕ್ಕೇರುವುದರಲ್ಲಿ ಯಾವುದೇ ಸಂದೇಹವಿಲ್ಲ. ಉದಾಹರಣೆಗೆ ನನ್ನ ಮಕ್ಕಳನ್ನೇ ತೆಗೆದುಕೊಳ್ಳಿ...(ಸನ್ಮಾನ್ಯರು 'ಮಗಳು' ಎನ್ನಲಿಲ್ಲಾವಲ್ಲಾ ಎಂದು ಸಂಭು ವಿನ ಚಡಪಡಿಕೆ !!) ಈದಿನ ಅವರೆಲ್ಲಾ ಆಮೇರಿಕಾದಲ್ಲಿ ವೈದ್ಯರಾಗಿದ್ದಾರೆ ! ಹೇಗೆ ಹೇಳಿ ನೋಡೋಣ ? ಅವರೆಲ್ಲಾ ನಿಮ್ಮಂತೆ ಕನ್ನಡ ಮಾಧ್ಯಮದಲ್ಲಿ ಓದ್ದೇ ಇದ್ದರೂ ಸಹ ಕೇವಲ ನನ್ನ ಕಾದಂಬರಿ , ಪ್ರಬಂಧ ಗಳನ್ನು ಓದಿ ಪ್ರಭಾವಿತರಾಗಿ ಈದಿನ ಉತ್ತುಂಗದಲ್ಲಿದ್ದಾರೆ ! ( ಕೂಸುಗಳು ಕರತಾಡಿಸಿದವು !) ..ಮಕ್ಕಳೇ....ನಿಮ್ಮ ತಂದೆ-ತಾಯಿಯರನ್ನು ಮಮ್ಮಿ-ಡ್ಯಾಡಿ ಎನ್ನುವ ಬದಲು ಅಪ್ಪ-ಅಮ್ಮ ಎನ್ನಿ, ಅದರಲ್ಲಿ ಪ್ರೀತಿ ತುಂಬಿರುತ್ತೆ. ನನ್ನ ಮಕ್ಕಳು ನನ್ನನ್ನು ಡ್ಯಾಡಿಅಂತ್ಲೇ ಕರೆಯೋದು...ಆದ್ರೇ ನಾನ್ಯಾವತ್ತೂ ಅದಕ್ಕೆ ಬೆಲೆ ಕೊಡಲಿಲ್ಲ..ತಿದ್ದಲೂ ಇಲ್ಲ.. ಅವ್ರು ಹಾಗ ಕರೆದಾಕ್ಷಣ ಕನ್ನಡಕ್ಕೆ ಯಾವ ಅವಮಾನವೂ ಆಗೋಲ್ಲ ಆಲ್ವೇ, ನೀವು ಹಾಗೇ ಇದ್ಬಿಡಿ ಅಷ್ಟೇ...!! ನೋಡಿ ಕನ್ನಡಕ್ಕೆ ಈಗ ಶಾಸ್ತ್ರೀಯ ಸ್ಥಾನ ಸಿಕ್ಕಿದೆ ( ಹಾಗಂದ್ರೇನು? ಅಂತ ಮಕ್ಳು ಕೇಳ್ಳಿಲ್ಲ ಅನ್ನೋದೆ ಸಂಬು ವಿಗೆ ಸಮಾಧಾನ), ಕನ್ನಡದ ಘನತೆ ಹೆಚ್ಚಾಗಿದೆ,
ಆದ್ದರಿಂದ ನೀವು ಪ್ರತಿನಿತ್ಯ ಕನ್ನಡವನ್ನೇ ಉಂಡು, ಕನ್ನಡವನ್ನೇ ಹೊದ್ದು ಮಲಗಿ, ಕನ್ನಡದಲ್ಲೇ ಹೇ....(ಸೆನ್ಸಾರ್ ಕಟ್ !) ಕನ್ನಡವನ್ನು ಉಳಿಸಿ ..( ಸನ್ಮಾನ್ಯರಿಗೆ ಜಂಗಮಗಂಟೆಯ ಕರೆ ಬರುತ್ತದೆ...ಅದೇನೋ ಆಂಗ್ಲ ಭಾಷೆಯಲ್ಲಿ ಮಾತನಾಡಿ ...)
ಮಕ್ಕಳೆ ನನಗೊಂದು ಆಂಗ್ಲ ಶಾಲೆಯ ತುರ್ತು ಉದ್ಘಾಟನಾ ಕಾರ್ಯವಿದೆ...ಇನ್ನೊಮ್ಮೆ ಸಿಗುವೆ...ಬರಲೇ..
( ತಮ್ಮ ಫ಼ಾರಿನ್ ಕಾರ್ ಹತ್ತಿ ಬುರ್ ಎಂದು ಹೋಗುತ್ತಾರೆ ! ಕೂಸುಗಳು ಕೊಬ್ರಿ ಬಿಸ್ಕತ್ ತಿನ್ನುತ್ತವೆ ! )
ಸಂದರ್ಭ :- ಕನ್ನಡ ರಾಜ್ಯೋತ್ಸವ ದಂದು ಕನ್ನಡದ ನೆಚ್ಚಿನ ಮೆಚ್ಚಿನ ಸಾಹಿತಿಯೊಬ್ಬರು ಮುಖ್ಯ 'ಅತಿಥಿ'
ಯಾಗಿ ಆಂಗ್ಲ ಶಾಲೆಯೊಂದರಲ್ಲಿ ಆಂಗ್ಲ ಭಾಷೆಯಲ್ಲಿ ಮಾಡಿದ ಭಾಷಣದ ಕನ್ನಾಡಾನುವಾದ !!
ಅನುವಾದಕರು :- ಸಂಭುಲಿಂಗ.
ಉವಾಚ.. Subrahmanya at 9:51 PM
ಹಣೆಬರಹ: ಟಿಪಿಕಲ್ ಶಂಭುಲಿಂಗ
ರಾಜ್ಕೀಯದ್ ಮಾತು
ಸಿವನೇ ಸಂಬುಲಿಂಗ..........
ಇದೆಂಥಾ ಇಸ್ಯ ಬಿಡ್ಲಾ.....ಧಾರವಾಡ ದಿಂದ ಗೋವಾಕ್ಕೋದ್ರೆ ಏನ್ಲಾ ಬತ್ತದೆ ? ಗೋವಾದ್ಲೇನು ಇಲ್ಲಾ ಕಣಾಪ ಈಗ ...ಎಲ್ಲಾರ್ನು ಓಡಿಸ್ಬಿಟ್ಟವ್ರಂತೆ ಆಲ್ಲಿಂದಾ...ಆದ್ರೂ ನಮ್ ಮೆಂಬ್ರಿ ಗಳಿಗೂ ಯೇಗ ಬಂತು ಕಣಪಾ..ನೂರಿನ್ನೂರು ಕೆಬ್ರಿಕಾತ ಇದ್ದ ಐಕ್ಳು ಏಕ್ದ್ಂ ಸಾವಿರ , ಲಕ್ಸ ನೋಡಂಗಾದ್ರಲಾ...ಆದೇ ದೋಡ್ ಸಾದ್ನೆ ಬಿಡ್ಳಾ !! ಎಲ್ಲಾ ಲಕ್ಸಮಿ ಆಸೀರ್ವಾದ ಕನ್ಲೆ...ಬರೀ ಲಕ್ಸ್ಮಿ ಆಲಾ ಕನ್ಲಾ ..ವರಮಾಲಕ್ಸ್ಮಿ ಅಂತೆ !! ಪಾಪ ನಮ್ ಗೌಡ್ರು ಪನ್ಚೆ ಮ್ಯಾಗಿನ್ ಧೂಳ್ ಕೊಡ್ವಕಳದೇ ಆಯ್ತು....ಒಂದೀಸ್ಲಾದ್ರು ಇಂಗ್ ಮಜಾ ಮಾಡ್ಲಿಲ್ಲಾ ಕಣ್ಳಾ...!! ಆ ಐಕ್ಳಿಗಾದ್ರು ವಸಿ ಮರ್ವಾದಿ ಬ್ಯಾಡ್ವೆ ? ಓಟ್ಳಾಗೆ ಬರೀ ಚಡ್ಡೀಲೇ ಓತ್ಲಾ ವಡೀತಿದ್ರಂತೆ...ಆ ವಯ್ಯ ಅಮುಲ್ದಾರ್ರು ಓದೇಟ್ ಗೆ ಲುಂಗಿ ಸುತ್ಕ್ಂಡ್ವಂತೆ....ಏನ್ ಕಾಲ ಬಂತ್ಲಾ ದೇಸಕ್ಕೆ... ಒಂದ್ ಇಸ್ಯ ನಿಂತಾವ್ಲೆ ಇರ್ಲಿ....ಓಟ್ಳಾಗೆ ಮೂಗ್ ಬಟ್ಟಿಗೂ ಯವಸ್ತೆ ಆಗಿತ್ತಂತೆ...ಆಮುಲ್ದಾರ್ರು ಓಗಿ ಎಲ್ಲಾ ನೆಗೆದ್ ಬಿತ್ತಂತೆ ಕಣ್ಳಾ...(ಕಿಸ ಕಿಸ ನಗು !!) .....ಒತ್ತಾತು ನಡೀಲೇ....ಆಮ್ಯಾಕ್ ಸಿಗನಾ!!!
ನ್ಯೂ ಜೆರ್ಸಿಯಲ್ಲಿ ಕಾಲಭೈರವೇಶ್ವರ ದೇವಾಲಯ ಸಿಎಂ ಸಂತಸ – Supertime24x7
Home > Bakthi > ನ್ಯೂ ಜೆರ್ಸಿಯಲ್ಲಿ ಕಾಲಭೈರವೇಶ್ವರ ದೇವಾಲಯ ಸಿಎಂ ಸಂತಸ
ಬೆಂಗಳೂರು: ನ್ಯೂ ಜೆರ್ಸಿಯ ಸೋಮರ್ಸೆಟ್‍ನ 20 ಎಕರೆ ಪ್ರದೇಶದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯ ನಿರ್ಮಿಸುತ್ತಿದೆ. ಇದರ ಭೂಮಿ ಪೂಜೆಗೆ ಸಂಬಂಧಿಸಿ ವಿವಿಧ ಧಾರ್ಮಿಕ ವಿಧಿ ವಿಧಾನಗಳಲ್ಲಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಪಾಲ್ಗೊಂಡರು.
ನಂತರ ಮಾತನಾಡಿದ ಎಚ್‍ಡಿಕೆ, "ಆದಿಚುಂಚನಗಿರಿ ಮಹಾಸಂಸ್ಥಾನ ನ್ಯೂ ಜೆರ್ಸಿಯಲ್ಲಿ ಕಾಲಭೈರವೇಶ್ವರ ದೇವಾಲಯವನ್ನು ನಿರ್ಮಿಸುತ್ತಿದೆ. ಈ ಈ ದೇವಾಲಯವು ಭಾರತೀಯರು, ಅದರಲ್ಲೂ ಕನ್ನಡಿಗರ ಪ್ರಮುಖ ಸಾಂಸ್ಕತಿಕ ಕೇಂದ್ರವಾಗಿ ರೂಪುಗೊಳ್ಳಲಿದೆ. ಹೊರದೇಶದಲ್ಲಿರುವ ಕನ್ನಡಿಗರು ತಮ್ಮ ಬೇರನ್ನು ಬಲಪಡಿಸಲು, ಸಂಸ್ಕತಿಯೊಂದಿಗೆ ಬೆಸೆದುಕೊಳ್ಳಲು ಇಂತಹ ಸಾಂಸ್ಕತಿಕ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ," ಎಂದು ಅಭಿಪ್ರಾಯಪಟ್ಟರು.
ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಕನ್ನಡಿಗರು ಪಾಲ್ಗೊಳ್ಳಬೇಕು ಎಂದು ಕೋರಿದ ಅವರು, "ನ್ಯೂಜೆರ್ಸಿಯಲ್ಲಿ ನೆಲೆಸಿರುವ ಕನ್ನಡಿಗರು ಈ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ಮನಃಪೂರ್ವಕವಾಗಿ ಕೈಜೋಡಿಸಬೇಕು," ಎಂದು ಮನವಿ ಮಾಡಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿವೆ. ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಕುಮಾರಸ್ವಾಮಿಗೆ ಸಾಥ್ ನೀಡಿದ್ದಾರೆ.
ಸಿಂಗಪುರ ಸಾಂಸ್ಕೃತಿಕ ಹಬ್ಬದ ಮೊದಲನೇ ದಿನ! | Singapore Kannada Convention | Opening day highlights | Singapore Kannada Sangha | ಸಿಂಗಪುರ ಕನ್ನಡ ಸಮ್ಮೇಳನ | 7ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ - Kannada Oneindia
5 min ago ಬೆಂಗಳೂರು: ಮಾಲೀಕನ ಅಮಾನವೀಯ ವರ್ತನೆ ಕ್ಯಾಮರಾದಲ್ಲಿ ಸೆರೆ
ಸಿಂಗಪುರ ಸಾಂಸ್ಕೃತಿಕ ಹಬ್ಬದ ಮೊದಲನೇ ದಿನ!
| Published: Saturday, November 27, 2010, 14:17 [IST]
ಕನ್ನಡ ಸಂಘ ಸಿಂಗಪುರ ಮತ್ತು ಮಂಗಳೂರಿನ ಹೃದಯವಾಹಿನಿ ಅವರು ಜಂಟಿಯಾಗಿ ಆಯೋಜಿಸಿರುವ 7ನೇ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನವು ಶನಿವಾರ ಮತ್ತು ಭಾನುವಾರ ವಿಜೃಂಭಣೆಯಿಂದ ನಡೆಯಲಿದೆ! ಕಾರ್ಯಕ್ರಮದ ಸಕಲ ಸಿದ್ಧತೆಗಳು ಪೂರ್ರ್‍ಣಗೊಂಡಿದ್ದು, ಹಬ್ಬಕ್ಕೆ ಇಲ್ಲಿನ ಡೋವರ್ ಕನ್ವೆನ್ಷನ್ ಸಂಕೀರ್ಣವು ಅಲಂಕರಿಸಿಕೊಂಡು ನವವಧುವಿನಂತೆ ಸಜ್ಜಾಗಿ ನಿಂತಿದೆ. ಅತಿಥಿಗಳು ಆಗಲೇ ಬಂದಿಳಿಯುತ್ತಿದ್ದಾರೆ. ಈ ಸಮ್ಮೇಳನವನ್ನು ಎಲ್ಲ ರೀತಿಯಿಂದಲೂ ಯಶಸ್ವಿಗೊಳಿಸಲು ಸಂಘದ ಹತ್ತು ಹಲವು ಸಮಿತಿಗಳ ಕಾರ್ಯಕರ್ತರು ಅವಿರತವಾಗಿ ದುಡಿಯುತ್ತಿದ್ದಾರೆ. ಈ ಸಮ್ಮೇಳನಕ್ಕೆ ಒಂದು ವರ್ಷದಿಂದಲೇ ಸಿದ್ಧತೆಗಳು ಪ್ರಾರಂಭವಾಗಿದ್ದು ಎಲ್ಲಾ ಅಂಶಗಳನ್ನು ಕೂಲಂಕುಶವಾಗಿ ಯೋಚಿಸಿ ಆಯೋಜಿಸಲಾಗಿದೆ.
ಇಂದು ಬೆಳಗ್ಗೆ 9 ಘಂಟೆಗೆ ವಾಣಿಜ್ಯ ವೇದಿಕೆ ಮತ್ತು ಸಮಾವೇಶದೊಂದಿಗೆ ಪ್ರಾರಂಭವಾಗುವ ಭರ್ಜರಿ ಸಮ್ಮೇಳನವು ಇಲ್ಲಿನ ಕನ್ನಡಿಗರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಕಾರ್ಯಕ್ರಮ ಪದ್ಮಶ್ರೀ ಕದ್ರಿ ಗೋಪಾಲನಾಥ್ ಅವರ ಸ್ಯಾಕ್ಸೋಫೋನ್ ಮಂಗಳ ಧ್ವನಿಯೊಂದಿಗೆ ಮಧ್ಯಾನ್ಹ ಉದ್ಘಾಟಣೆಗೊಂಡು ರಾತ್ರಿ ಬದ್ರಿ ಪ್ರಸಾದ್ ಮತ್ತು ಅನುರಾಧ ಭಟ್ ಅವರ ಚಿತ್ರ ಮಂಜರಿಯೊಂದಿಗೆ ಮೊದಲನೇ ದಿನದ ಕಾರ್ಯಕ್ರಮಗಳು ಅಂತ್ಯಗೊಳ್ಳಲಿವೆ. ಇಂದಿನ ಇನ್ನೂ ಕೆಲವು ವಿಶೇಷಗಳು - ಪುತ್ತೂರ್ ನರಸಿಂಹ ನಾಯಕ್ ಅವರಿಂದ ದಾಸಮಂಜರಿ, ಪ್ರಯೋಗ ರಂಗ ಅವರ ನಾಟಕ, ಕವಿಗೋಷ್ಠಿ, ಜನಪದ ಮತ್ತು ಇತರ ನೃತ್ಯಗಳು ಹಾಗು ವಿಶ್ವಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿತರಣೆ.
ಹೊರದೇಶದಲ್ಲಿ ಕಾರ್ಯನಿಮಿತ್ತ ವಲಸೆ ಹೋಗಿ ತಾಯ್ನಾಡಿನಿಂದ ದೂರವಾಗಿ ವಾಸಿಸುತ್ತಿರುವ ಕನ್ನಡಿಗರಿಗೆ ಕರ್ನಾಟಕದ ಕಲೆ, ಸಾಹಿತ್ಯವನ್ನು ಪುನರ್ ಪರಿಚಯಿಸುವ ಮತ್ತು ಹೊರದೇಶದಲ್ಲೇ ಹುಟ್ಟಿ ಬೆಳೆದಿರುವ ಯುವ ಜನಾಂಗಕ್ಕೆ ಕರ್ನಾಟಕದ ಹಿರಿಮೆಯನ್ನು ತೋರುವ ಸದುದ್ದೇಶವನ್ನು ಹೊಂದಿರುವ ಈ ವಿಶ್ವ ಕನ್ನಡ ಸಮ್ಮೇಳನವು, ಈ ಹಿಂದೆ 2004 (ಅಬುಧಾಭಿ), 2005 (ಸಿಂಗಪುರ), 2006 (ಬಹಮಿಯನ್), 2007 (ಕುವೈತ್), 2008 (ಕತಾರ್) ಮತ್ತು 2009 (ದುಬೈ)ನಲ್ಲಿ ಯಶಸ್ವಿಯಾಗಿ ನಡೆದಿದೆ.
ಸಮ್ಮೇಳನದ ಎರಡು ದಿನವೂ ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವಸ್ತು ಪ್ರದರ್ಶನ ಮಳಿಗೆಗಳಿರುತ್ತವೆ. ಇಲ್ಲಿ ಕರ್ನಾಟಕದ ಗ್ರಾಮೀಣ ಆಟಗಳನ್ನು ಆಡಬಹುದು, ಕನ್ನಡದ ಹಳೆಯ ದಿನಪತ್ರಿಕೆಗಳನ್ನು ಓದಬಹುದು ಮತ್ತು ವಿಶ್ವ ವಿಖ್ಯಾತ ಮೈಸೂರು ಶೈಲಿಯ ತೈಲವರ್ಣಗಳನ್ನು ನೋಡಬಹುದು!
ಬನ್ನಿ ಈ ಸಾಂಸ್ಕೃತಿಕ ಹಬ್ಬದಲ್ಲಿ ಇಂದು ಮತ್ತು ನಾಳೆ ಪಾಲ್ಗೊಳ್ಳಿ. ಕನ್ನಡಮ್ಮನ ರಥವನೆಳೆಯಲು ನೀವು ಕೈ ನೀಡಿ. ಸಮ್ಮೇಳನದಲ್ಲಿ ನಡೆಯುತ್ತಿರುವ ಕಾರ್ಯಕಲಾಪಗಳ ಮಿಂಚಿನ ವರದಿಗಳಿಗೆ ದಟ್ಸ್ ಕನ್ನಡಕ್ಕೆ ನಿರಂತರವಾಗಿ ಭೇಟಿ ನೀಡುತ್ತಿರಿ.
ಸಿಂಗಪುರ ಕನ್ನಡ ಸಮ್ಮೇಳನ ಸಿಂಗಪುರ ಕನ್ನಡ ಸಂಘ ಗಿರೀಶ್ ಜಮದಗ್ನಿ singapore kannada convention singapore kannada sangha girish jamadagni vkss
7th World Kannada Cultural Convention 2010, Singapore is beginning on Saturday, November 27. The convention will be inaugurated with the melodious rendition by Saxophone Kadri Gopalanath. First day events by Girish Jamadagni.
ಮುಖಪುಟಟರ್ಕಿಟರ್ಕಿಶ್ ಮೆಡಿಟರೇನಿಯನ್ ಕೋಸ್ಟ್33 ಮರ್ಸಿನ್ಅಧ್ಯಕ್ಷ ಸೀಸರ್ ಟಾಸುಕು ಬಂದರಿನಲ್ಲಿ ತನಿಖೆ ನಡೆಸುತ್ತಾರೆ
05 / 10 / 2019 ಲೆವೆಂಟ್ ಎಲ್ಮಾಸ್ತಸ್ 33 ಮರ್ಸಿನ್, ಟರ್ಕಿಶ್ ಮೆಡಿಟರೇನಿಯನ್ ಕೋಸ್ಟ್, ಸಾಮಾನ್ಯ, HIGHWAY, ಟರ್ಕಿ 0
ಅಧ್ಯಕ್ಷ ಸೆಸರ್ ತಾಸುಕು ಬಂದರಿನಲ್ಲಿ ಪರೀಕ್ಷೆಗಳನ್ನು ಕಂಡುಕೊಂಡರು
ಮೆರ್ಸಿನ್ ಮೆಟ್ರೋಪಾಲಿಟನ್ ಪುರಸಭೆ ಮೇಯರ್ Vahap ಆಯ್ಕೆಯ, ಮೆಟ್ರೋಪಾಲಿಟನ್ ಪುರಸಭೆ, ಬಂಧಿತ ಎಂಬ ಮತ್ತು ಪುರಸಭೆಗಳು Taşucu ಬಂದರಿನಲ್ಲಿ ಅಂತಾರಾಷ್ಟ್ರೀಯ ತನಿಖೆಗೆ ಬಂದರು ನಿರ್ವಹಿಸುತ್ತವೆ ಹಕ್ಕನ್ನು ಹೊಂದಿರುವ ಟರ್ಕಿಯ ಏಕೈಕ ವ್ಯತ್ಯಾಸ. ಸರಕು ಸಾಗಣೆ ಮತ್ತು ಪ್ರಯಾಣಿಕರ ಸಾಗಣೆಯನ್ನು ನಡೆಸುವ ಬಂದರಿನಲ್ಲಿ ಅಧಿಕೃತ ಸಿಬ್ಬಂದಿಯಿಂದ ಮಾಹಿತಿಯನ್ನು ಪಡೆದ ಸೀಸರ್ ಈ ಪ್ರದೇಶಕ್ಕೆ ಭೇಟಿ ನೀಡಿ ಬಂದರಿನ ಬಗ್ಗೆ ವ್ಯಾಪಕ ಮಾಹಿತಿಯನ್ನು ಪಡೆದರು.
ತನಿಖೆಯ ನಂತರ ಮೌಲ್ಯಮಾಪನ ಮಾಡಿದ ಮೇಯರ್ ಸೀಸರ್, ಅನ್ ಇದು ಅಚ್ಚುಕಟ್ಟಾದ ಬಂದರು ಆಗಿರಲಿ. ಸರಕು ಸಾಗಣೆ ಮತ್ತು ಪ್ರಯಾಣಿಕರನ್ನು ಸಾಗಿಸಲು ಹೆಚ್ಚು ಅನುಕೂಲಕರವಾಗಿಸೋಣ. ಭೌತಿಕ ಪರಿಸ್ಥಿತಿಗಳನ್ನು ಸರಿಪಡಿಸೋಣ. ಇಲ್ಲಿ ನಾವು ಮರೀನಾ ಆಗಿ ಚಟುವಟಿಕೆಯ ಕ್ಷೇತ್ರವನ್ನು ಅಭಿವೃದ್ಧಿಪಡಿಸಬಹುದು. ಇದು ಅನುಕೂಲಕರ ಬಂದರು. ಇವುಗಳಿಗೆ ವಿತ್ತೀಯ ದೃಷ್ಟಿಯಿಂದ ಗಮನಾರ್ಹ ಹೂಡಿಕೆಗಳು ಬೇಕಾಗುತ್ತವೆ. ಸ್ಮಾರ್ಟ್ ಯೋಜನೆಯೊಂದಿಗೆ, ನಾವು ನಂತರ ನಮ್ಮ ಟಾಸುಕು ಬಂದರನ್ನು ಪ್ರಜ್ಞಾಪೂರ್ವಕ ವ್ಯವಹಾರ ವಿಧಾನದೊಂದಿಗೆ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮಾಡಬಹುದು. "
"ನಾವು ಕೇವಲ ಪುರಸಭೆ ಟರ್ಕಿಯಲ್ಲಿ ಅಂತಾರಾಷ್ಟ್ರೀಯ ಬಂದರು ಮತ್ತು ಕಸ್ಟಮ್ಸ್ ನಿರ್ವಹಿಸಲು ಸಮರ್ಥವಾಗಿರುವ ಆಗಿದೆ"
ಟಾಸುಕು ಬಂದರಿನಲ್ಲಿ ತನಿಖೆ ನಡೆಸಿದ ಮೇಯರ್ ಸೀಸರ್, ಯೊಲ್ಕು ಪ್ರಯಾಣಿಕರು ಮತ್ತು ಸರಕು ಸಾಗಣೆಯನ್ನು ಇಲ್ಲಿ ಮಾಡಬಹುದು. ಈ ಸ್ಥಳದ ಬಗ್ಗೆ ಏನಾದರೂ ವಿಶೇಷತೆ ಇದೆ. ಬಂಧಿತ ಮತ್ತು ಅಂತರರಾಷ್ಟ್ರೀಯ ಬಂದರು. ಪುರಸಭೆಯಾಗಿ, ನಮಗೆ ವಿಶೇಷ ಲಕ್ಷಣವಿದೆ; ನಾವು ಪುರಸಭೆ ಬಂಧಿತ ಇದೆ ಮತ್ತು ಒಂದು ಅಂತಾರಾಷ್ಟ್ರೀಯ ಬಂದರು ಟರ್ಕಿ ಕಾರ್ಯ ಮಾಡುತ್ತದೆ. ನಾನು ಇಲ್ಲಿನ ದೈಹಿಕ ಪರಿಸ್ಥಿತಿಗಳನ್ನು ಪರಿಶೀಲಿಸಿದ್ದೇನೆ ಮತ್ತು ಅಧಿಕೃತ ಸ್ನೇಹಿತರಿಂದ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ನಮ್ಮ ಮಹಾನಗರ ಪಾಲಿಕೆಯ ಜವಾಬ್ದಾರಿಯುತ ಇಲಾಖೆಯ ಅಧಿಕೃತ ಸ್ನೇಹಿತರಿಂದ ಮತ್ತು ಕಸ್ಟಮ್ಸ್ ಸಚಿವಾಲಯದ ನಿರ್ದೇಶಕರಿಂದ ಮಾಹಿತಿಯನ್ನು ನಾವು ಸ್ವೀಕರಿಸಿದ್ದೇವೆ. "
ವರ್ ಈ ಬಂದರಿನಲ್ಲಿ ನಾವು ಆಳವಾಗಿ ಬೇರೂರಿರುವ ಯೋಜನೆಯನ್ನು ಹೊಂದಿದ್ದೇವೆ "
ಬಂದರನ್ನು ಪರಿಣಾಮಕಾರಿಯಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಅವರು ದೀರ್ಘಾವಧಿಯ ಹಂಚಿಕೆಯನ್ನು ಹೊಂದಿರುತ್ತಾರೆ ಮತ್ತು ಈ ಉದ್ದೇಶಕ್ಕಾಗಿ ಅವರು ಸಂಬಂಧಿತ ಸಂಸ್ಥೆಗಳೊಂದಿಗೆ ಸಭೆ ನಡೆಸುತ್ತಾರೆ ಎಂದು ಸೆಕರ್ ಹೇಳಿದರು. ನಾವು ಇದನ್ನು ಒದಗಿಸಿದರೆ, ನಾವು ಇಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ಬಯಸುತ್ತೇವೆ. ಇದನ್ನು ಅಚ್ಚುಕಟ್ಟಾದ ಬಂದರು ಮಾಡಿ. ಸರಕು ಸಾಗಣೆ ಮತ್ತು ಪ್ರಯಾಣಿಕರನ್ನು ಸಾಗಿಸಲು ಹೆಚ್ಚು ಅನುಕೂಲಕರವಾಗಿಸೋಣ. ಭೌತಿಕ ಪರಿಸ್ಥಿತಿಗಳನ್ನು ಸರಿಪಡಿಸೋಣ. ಇಲ್ಲಿ, ನಾವು ಮರೀನಾ ಆಗಿ ಚಟುವಟಿಕೆಯ ಕ್ಷೇತ್ರವನ್ನು ಅಭಿವೃದ್ಧಿಪಡಿಸಬಹುದು. ಇದು ಅನುಕೂಲಕರ ಬಂದರು ".
"ನಾವು ಸ್ಮಾರ್ಟ್ ಯೋಜನೆಯೊಂದಿಗೆ ಬಂದರನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತರಬಹುದು"
ಮೇಯರ್ ಸೀಸರ್ ಅವರು ಪರಿಗಣಿಸುತ್ತಿರುವ ಯೋಜನೆಗಳಿಗೆ ಗಂಭೀರವಾದ ಹೂಡಿಕೆಗಳು ಬೇಕಾಗುತ್ತವೆ ಮತ್ತು ಸೇರಿಸಲಾಗಿದೆ: ile ಒಂದು ಸ್ಮಾರ್ಟ್ ಯೋಜನೆಯೊಂದಿಗೆ, ನಾವು ಪ್ರಜ್ಞಾಪೂರ್ವಕ ವ್ಯವಹಾರ ವಿಧಾನದೊಂದಿಗೆ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಮ್ಮ ಟಾಸುಕು ಬಂದರನ್ನು ಮಾಡಬಹುದು. ಈ ಕಾರ್ಯಗಳನ್ನು ಮಾಡುವ ಮೂಲಕ ಅಂತಹ ಪ್ರದೇಶವನ್ನು ನಮ್ಮ ಪ್ರದೇಶಕ್ಕೆ ತರಲು ನಾವು ಬಯಸುತ್ತೇವೆ, ಆದರೆ ಇದು ಸಂಬಂಧಿತ ಸಂಸ್ಥೆಯ ಅನುಮತಿಯನ್ನು ಅವಲಂಬಿಸಿರುತ್ತದೆ. ನಾವು ದೀರ್ಘಾವಧಿಯ ಹಂಚಿಕೆ ಅಥವಾ ಗುತ್ತಿಗೆ ಪ್ರೋಟೋಕಾಲ್ ಒಪ್ಪಂದವನ್ನು ಮಾಡಲು ಸಾಧ್ಯವಾದರೆ, ಈ ಎಲ್ಲಾ ಯೋಜನೆಗಳನ್ನು ಕಾರ್ಯಗತಗೊಳಿಸಲು ನಮಗೆ ಸಾಧ್ಯವಾಗುತ್ತದೆ. ಕೊನು
ಅಂತರರಾಷ್ಟ್ರೀಯ ವಿಮಾನಗಳನ್ನು ಟಾಸುಕು ಬಂದರಿನಿಂದ ತಯಾರಿಸಲಾಗುತ್ತದೆ, ಇದನ್ನು ಮೀನುಗಾರಿಕೆ ಆಶ್ರಯ, ಮರೀನಾ, ಡಾಕ್ ಮತ್ತು ಬಂಧಿತ ಪ್ರದೇಶ, ಅಂತರರಾಷ್ಟ್ರೀಯ ಬಂದರು ಪ್ರದೇಶ ಸೇರಿದಂತೆ 3 ವಿಭಾಗಗಳಾಗಿ ವಿಂಗಡಿಸಲಾಗಿದೆ. ಟಿಆರ್‌ಎನ್‌ಸಿಗೆ ಪ್ರವಾಸಗಳನ್ನು ಆಯೋಜಿಸಲಾಗಿರುವ ಬಂದರಿನಲ್ಲಿ, ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ, ವಿಹಾರ ನೌಕೆಗಳು ಮತ್ತು ದೈನಂದಿನ ವಿಹಾರ ದೋಣಿಗಳು 1000-1500 ಜನರನ್ನು ಸಿಲಿಫ್ಕೆ ಕೊಲ್ಲಿಗಳಿಗೆ ಸಾಗಿಸುತ್ತವೆ. ದೋಣಿ, ಪ್ರಯಾಣಿಕರ ಹಡಗು, ರೋ-ರೋ ಪ್ರಯಾಣಿಕ ಮತ್ತು ರೋ-ರೋ ಸರಕು ಹಡಗುಗಳು, ಒಣ ಸರಕು ಹಡಗು, ಸಾಮಾನ್ಯ ಸರಕು ಹಡಗು, ಸಮುದ್ರ ಬಸ್ಸುಗಳು, ಕ್ರೂಸ್ ಹಡಗು, ವಿಹಾರ ನೌಕೆಗಳು ಮತ್ತು ಮೀನುಗಾರಿಕಾ ಹಡಗುಗಳ ದಿನದಂದು 7 ಗಂಟೆಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ಬಂದರು ಸೌಲಭ್ಯವನ್ನು 24 ಬಳಸುತ್ತದೆ.
ಡರ್ಮಾಜ್ಲಾರ್ ಕಾರ್ಖಾನೆಯಲ್ಲಿನ ಅಧ್ಯಕ್ಷ ಕರೋಸ್ಮನೊಗ್ಲು 19 / 12 / 2016 ಡಯರ್ಮಾಜ್ಲಾರ್ ಫ್ಯಾಕ್ಟರಿನಲ್ಲಿ ತನಿಖೆ ನಡೆಸಿದ ಮೇಯರ್ ಕಾರೊಸ್ಮನ್ ಯೋಗ್ಲು: ಯೂನಿಯನ್ ಆಫ್ ಟರ್ಕಿಯಲ್ ವರ್ಲ್ಡ್ ಮುನಿಸಿಪಾಲಿಟಿಸ್ (ಟಿಡಿಬಿಬಿ) ಮತ್ತು ಕೊಕೇಲಿ ಮೆಟ್ರೋಪಾಲಿಟನ್ ಮೇಯರ್ ಇಬ್ರಾಹಿಂ ಕರೊಸ್ಮಾನ್ಗುಗ್ಲು ಡರ್ಮಸ್ಲಾರ್ ಮೆಷಿನರಿ ಇಂಡಸ್ಟ್ರಿ ಫ್ಯಾಕ್ಟರಿನಲ್ಲಿ ತಪಾಸಣೆ ನಡೆಸಿದರು. ಅಲ್ಲಿ ಟ್ರ್ಯಾಮ್ ಪ್ರಾಜೆಕ್ಟ್ನಲ್ಲಿ 12 ಟ್ರಾಮ್ ವಾಹನಗಳನ್ನು ಬಳಸಲಾಗುವುದು. ಇದು ಕೊಕೇಲಿಯಲ್ಲಿ ರೈಲು ವ್ಯವಸ್ಥೆಯನ್ನು ವರ್ಗಾವಣೆ ಮಾಡುತ್ತದೆ. ನಾವು ರಾಷ್ಟ್ರೀಯ ಉತ್ಪಾದನೆಯ 7,2 ಕಿಲೋಮೀಟರ್ ಮಾರ್ಗದಲ್ಲಿ ಆಧುನಿಕ ನಾಗರೀಕತೆಯ ಮಟ್ಟವನ್ನು ತಲುಪುತ್ತೇವೆ XMLX ಕಿಲೋಮೀಟರ್ ಮತ್ತು 14.4 ಕೇಂದ್ರಗಳು ಟ್ರ್ಯಾಮ್ ರೇಖೆಯ ಮೂಲಸೌಕರ್ಯದ ಸ್ಥಳಾಂತರವನ್ನು ಒಳಗೊಂಡಿರುತ್ತವೆ, ಮೆಟ್ರೋಪಾಲಿಟನ್ ಪುರಸಭೆಯ ಮೇಯರ್ ಇಬ್ರಾಹಿಂ ಕರೋಸ್ಮನೊಗ್ಲು ವಿವರಗಳ ಬಗ್ಗೆ ಪೂರ್ಣಗೊಂಡ ಮತ್ತು ನಡೆಯುತ್ತಿರುವ ವಾಹನಗಳು ನಿರ್ಮಾಣಗೊಳ್ಳುತ್ತವೆ. ಹೇಳಿಕೆ ಅವರು ಪರೀಕ್ಷೆಯ ನಂತರ ಮಾಡಿದ, ಮು
ಸುಳ್ಳುಗಳ ವಿಜೃಂಬಣೆ ಮತ್ತು 'ಬಹುತ್ವ' ದ ನಾಶ : ಸಮಕಾಲೀನ ಸವಾಲುಗಳು | ಅನಿಕೇತನ
- ಬಿ.ಶ್ರೀಪಾದ ಭಟ್
ಅಸಮಾನತೆಯು ಹಿಂದೂಯಿಸಂನ ಆತ್ಮವಾಗಿದೆ. ಸಾಮಾಜಿಕ ಉಪಯುಕ್ತತೆಯ ಫಲಾಫಲವನ್ನು ಪರಾಮರ್ಶಿಸಲು ಸೋಲುವ ಹಿಂದೂಯಿಸಂ ಫಿಲಾಸಫಿಯು ವೈಯುಕ್ತಿಕ ನ್ಯಾಯಪರತೆಯ ಫಲಾಫಲವನ್ನು ಪರಾಮರ್ಶಿಸಲು ಸಹ ಸೋತಿದೆ — ಬಿ.ಆರ್. ಆಂಬೇಡ್ಕರ್
ಮತ್ತೆ ಇಂದು ರಾಷ್ಟ್ರೀಯತೆ ಸುದ್ದಿಯಲ್ಲಿದೆ. ಸಾವರ್ಕರ್ ಅವರ ವಿಕೃತ ರಾಷ್ಟ್ರೀಯತೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮುಖ್ಯ ಪ್ರಣಾಳಿಕೆ ಆಗಿರುವುದು ಇಂದಿನ ವಾಸ್ತವ. ಕಳೆದ 3 ವರ್ಷಗಳ ಬಿಜೆಪಿ ನೇತೃತ್ವದ ಆರೆಸ್ಸಸ್‍ನ ಆಡಳಿತದಲ್ಲಿ ಘರ್ ವಾಪಸಿಯಿಂದ, ದಾದ್ರಿಯ ಅಖ್ಲೇಕ್ ಹತ್ಯೆಯವರೆಗೆ ಒಂದು ಘಟ್ಟಕ್ಕೆ ಬಂದು ತಲುಪಿದ ಸಂಘ ಪರಿವಾರದ ದುಷ್ಟತನದ ಹಲ್ಲೆಗಳು ಮತ್ತು ಹತ್ಯಾಕಾಂಡಗಳು ದಾದ್ರಿ ಘಟನೆಯ ನಂತರ ಮತ್ತೊಂದು ಮಜಲಿಗೆ ಬಂದು ನಿಂತಿದೆ. ಕೇಂದ್ರದಲ್ಲಿ ಸಂಘ ಪರಿವಾರ ಅಧಿಕಾರದಲ್ಲಿರುವ ಸಂದರ್ಭದಲ್ಲಿಯೇ ಜಾತಿ ತಾರತಮ್ಯವನ್ನು ಗಟ್ಟಿಗೊಳಿಸುವ ನಿರ್ಧಾರಕ್ಕೆ ಬಂದಿರುವ ಆರೆಸ್ಸಸ್ ಎಫ್‍ಟಿಐಐ, ಮದ್ರಾಸ್ ಯೂನಿವರ್ಸಿಟಿಯ ಅಂಬೇಡ್ಕರ್-ಪೆರಿಯಾರ್ ಸ್ಟಡಿ ಸರ್ಕಲ್, ಹೈದರಾಬಾದ್ ಕೇಂದ್ರೀಯ ಯೂನಿವರ್ಸಿಟಿ, ಜೆಎನ್‍ಯು ಯೂನಿವರ್ಸಿಟಿ, ಅಲಹಾಬಾದ್ ಯೂನಿವರ್ಸಿಟಿ, ಕೊಲ್ಕತ್ತಾದ ಜಾಧವ್ ಯೂನಿವರ್ಸಿಟಿ, ಪುಣೆಯ ಫಗ್ರ್ಯೂಸನ್ ಕಾಲೇಜ್ ಮತ್ತು ಮೊನ್ನೆ ದೆಹಲಿಯ ರಾಮ್‍ಜಾಸ್ ಕಾಲೇಜ್‍ನ ವೆರಗೂ ಹೀಗೆ ಎಲ್ಲಾ ಉನ್ನತ ಶಿಕ್ಷಣದ ಯೂನಿವರ್ಸಿಟಿಗಳಲ್ಲಿ ತನ್ನ ಮತೀಯವಾದಿ ಅಜೆಂಡಾದ ಛಾಪನ್ನು ಒತ್ತಲು ಹೊರಟಿದೆ. ಶಿಲಾಯುಗದ ಸನಾತನವಾದಿ ಮನುಸ್ಮøತಿಯನ್ನು ಇಂದು ಮರಳಿ ಚಲಾವಣೆಗೆ ತರಲು ತುದಿಗಾಲಲ್ಲಿರುವ ಆರೆಸ್ಸಸ್ ಯೂನಿವರ್ಸಿಟಿ ಕ್ಯಾಂಪಸ್‍ಗಳನ್ನು ಎಬಿವಿಪಿಯ ಮೂಲಕ ಒಂದು ರಣರಂಗದಂತೆ ಸಜ್ಜುಗೊಳಿಸಿದೆ.
ಹಿಂದೂ ಮತಾಂಧರ ಕೈಯಲ್ಲಿ ಬಲು ಸುಲಭವಾಗಿ ಅಸ್ತ್ರವಾಗಿಬಿಡುವ ಈ ಸಾವರ್ಕರ್ ರಾಷ್ಟ್ರೀಯತೆಯೊಳಗೆ ಹಿಂದೂ ಧರ್ಮವನ್ನು ಬೆರೆಸಿ ಯಾವ ಕಾಲಕ್ಕೆ ಬೇಕಾದರೂ ಸ್ಪೋಟಿಸಬಲ್ಲ ಒಂದು ಮದ್ದುಗುಂಡನ್ನು ಸದಾ ತಯಾರಿಸುತ್ತಾ ಕಾಲಕಾಲಕ್ಕೆ ಸ್ಪೋಟಿಸುತ್ತಾ ದಿನನಿತ್ಯ ಅಸಹನೆಯ, ಹಿಂಸಾಚಾರದ ವಾತಾವರಣವನ್ನು ಸೃಷ್ಟಿಸುತ್ತಿರುವ ಸಂಘ ಪರಿವಾರವನ್ನು ಇಂದು ಎದುರಿಸಲು ಬೇಕಾದ ನಿಜದ ಸೆಕ್ಯುಲರಿಸಂನ ಹತಾರಗಳಿಲ್ಲದೆ ಪ್ರಜ್ಞಾವಂತರು ಅಸಹಾಯಕರಾಗಿರುವುದು ಒಂದು ದುರಂತ.
ಏಕೆಂದರೆ ಈ ಹಿಂದೂ ಧರ್ಮವನ್ನು ತಾತ್ವಿಕವಾಗಿ, ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಅರ್ಥೈಸಲು ಇಲ್ಲಿನ ಪ್ರಗತಿಪರ ಚಿಂತನೆಗಳು ಸೋತಿರುವುದು ಒಂದೆಡೆಯಿದ್ದರೆ ಇದರ ಫಲವಾಗಿ ಹುಟ್ಟಿಕೊಂಡ ನಿರ್ವಾತವನ್ನು ಸಂಘ ಪರಿವಾರ ತನ್ನ ರಾಜಕೀಯ-ಸಾಮಾಜಿಕ ದುರುದ್ದೇಶಕ್ಕೆ ಯಶಸ್ವಿಯಾಗಿ ಬಳಸಿಕೊಲ್ಳುತ್ತಿದೆ. ಇದಕ್ಕೆ ಎಪ್ಪತ್ತು ವರ್ಷಗಳ ರಕ್ತಸಿಕ್ತ ಇತಿಹಾಸವೇ ಇದೆ. ಇದರ ಕುರಿತಾಗಿ ಸಾಕಷ್ಟು ಚರ್ಚೆಗಳಾಗಿವೆ. ವಿಶ್ಲೇಷಣೆಗಳಾಗಿವೆ. ಆದರೂ ಪ್ರಜ್ಞಾವಂತರು ಇದಕ್ಕೆ ಪರ್ಯಾಯ ಚಿಂತನೆಗಳನ್ನು ರೂಪಿಸುವುದಕ್ಕಾಗಿ ಇಂದಿಗೂ ಕತ್ತಲಲ್ಲಿ ತಡಕಾಡುತ್ತಿರುವುದು ಮಾತ್ರ ನಮ್ಮನ್ನು ಗಾಬರಿಗೊಳಿಸುತ್ತಿದೆ.
ಬ್ರಾಹ್ಮಣ ಉದಾರವಾದಿಗಳನ್ನು ಹೊಂದಿದ್ದ ಆರ್ಯ ಸಮಾಜ, ಬ್ರಹ್ಮ ಸಮಾಜದ ಬ್ರಾಹ್ಮಣ್ಯವನ್ನು ಮೀರಲಾಗದ ಆ ಸುಧಾರಣವಾದಿ ನಡೆಗಳ ಮಿತಿಗಳನ್ನು ಮೀರಿ 19ನೇ ಶತಮಾನದಲ್ಲಿಯೇ ಬ್ರಾಹ್ಮಣ್ಯ-ಫ್ಯೂಡಲಿಸಂ ವಿರುದ್ಧ ಹೊಸದಾದ "ಶೂದ್ರ ಅತಿಶೂದ್ರ" ಚಳುವಳಿಯನ್ನು ಸಂಘಟಿಸಿದ ಫುಲೆ ದಂಪತಿಗಳ ಇಡೀ ಹೋರಾಟದ ಬದುಕನ್ನು ನಮ್ಮ ಪೋಸ್ಟ್ ಕಲೋನಿಯಲ್ ಚಿಂತಕರು ಮರೆತಿರುವುದು ಸಹ ಆತಂಕಗೊಳಿಸುತ್ತದೆ
ಈ ಹಿಂದೂ ಮತಾಂಧರ ರಾಷ್ಟ್ರೀಯವಾದದ ಅಪಾಯವನ್ನು ಗ್ರಹಿಸಿದ್ದ ರವೀಂದ್ರನಾಥ ಟ್ಯಾಗೂರ್ ಅವರು ರಾಷ್ಟ್ರೀಯತೆಯ ಕುರಿತಾಗಿ ತಳೆದ ಸ್ಪಷ್ಟ ನಿಲುವುಗಳು ಇಂದಿಗೂ ಪ್ರಸ್ತುತವಾಗಿವೆ. ಇಪ್ಪತ್ತನೇ ಶತಮಾನದ ಆರಂಬದಲ್ಲಿಯೇ ಟ್ಯಾಗೂರ್ ಅವರು " ರಾಷ್ಟ್ರೀಯವಾದಿಗಳು ಆದರ್ಶಗಳ ಕುರಿತು ಮಾತನಾಡುವಾಗ ಸ್ವತಃ ತಾವೇ ಸಾಮಾಜಿಕ ಆಚರಣೆಯ ಸಂದರ್ಭದಲ್ಲಿ ಸಂಪ್ರದಾಯವಾದಿಗಳಾಗಿರುವುದನ್ನು ಮರೆತಿರುತ್ತಾರೆ. ಆದರೆ ಇಂಡಿಯಾದಲ್ಲಿ ಸಹಜವಾದ ಹುಟ್ಟಿನ ಕುರಿತಾದ ಹಕ್ಕು ಸಾಧ್ಯವಾಗಿಲ್ಲ, ಪಶ್ಚಿಮ ರಾಷ್ಟ್ರಗಳ ರಾಷ್ಟ್ರೀಯವಾದದ ಕುರಿತಾಗಿ ಮಾತನಾಡುವವರು ನಮ್ಮಲ್ಲಿನ ವಿವಿಧ ಜಾತಿಗಳಿರುವುದನ್ನು ಮರೆಯುತ್ತಾರೆ" ಎಂದು ಹೇಳುತ್ತಾರೆ
ಹಿಂದೂ ಧರ್ಮ : ನಮ್ಮ ಚಿಂತನೆಯ ಬಿಕ್ಕಟ್ಟುಗಳು
ಇದೇ ಸಂದರ್ಭದಲ್ಲಿ 19ನೇ ಶತಮಾನದ ಪ್ರಮುಖ ಆಧ್ಯಾತ್ಮದ ಗುರುವಾಗಿದ್ದ ರಾಮಕ್ರಿಷ್ಣ ಪರಮಹಂಸರು ಧರ್ಮದ ಕುರಿತಾಗಿ "ವ್ಯಕ್ತಿಯೊಬ್ಬನು ತಾನು ನಂಬಿದ ಧರ್ಮದಲ್ಲಿ ಅನೇಕ ಲೋಪದೋಷಗಳಿದ್ದಲ್ಲಿ ಮತ್ತು ಆ ವ್ಯಕ್ತಿಯು ಪ್ರಾಮಾಣಿಕ ಮತ್ತು ಶ್ರದ್ಧೆಯುಳ್ಳವನಾಗಿದ್ದರೆ ಆಗ ದೇವರು ಸ್ವತಃ ಆ ಲೋಪದೋಷಗಳನ್ನು ಸರಿಪಡಿಸುತ್ತಾನೆ. ಬೇರೊಂದು ಧರ್ಮದಲ್ಲಿ ಲೋಪದೋಷಗಳಿದ್ದರೆ ಅದು ಆ ಧರ್ಮದಲ್ಲಿ ನಂಬಿಕೆಯಿಟ್ಟವರಿಗೆ ಸಂಬಂಧಪಟ್ಟಿರುತ್ತದೆ, ದೇವರು ಅದನ್ನು ಸರಿಪಡಿಸುತ್ತಾನೆ. ನಾನು ಹಿಂದೂಯಿಸಂ, ಇಸ್ಲಾಂ, ಕ್ರಿಶ್ಚಿಯಾನಿಟಿ ಎಲ್ಲಾ ಧರ್ಮಗಳನ್ನು ಪಾಲಿಸಿದ್ದೇನೆ. ಈ ಧರ್ಮಗಳ ಆಚರಣೆಗಳನ್ನು ಆಳವಾಗಿ ಆಚರಿಸಿದಾಗ ನಾನು ಕಂಡುಕೊಂಡ ಸತ್ಯವೇನೆಂದರೆ ಒಂದೇ ದೇವರ ಕಡೆಗೆ ನಾವೆಲ್ಲಾ ಚಲಿಸುತ್ತಿದ್ದೇವೆ ಆದರೆ ವಿಭಿನ್ನ ದಾರಿಗಳನ್ನು ಬಳಸುತ್ತಿದ್ದೇವೆ. ಆದರೆ ದುರಂತವೆಂದರೆ ಧರ್ಮದ ಹೆಸರಿನಲ್ಲಿ ಹಿಂದೂಗಳು, ಮುಸ್ಲಿಂರು, ಕ್ರಿಶ್ಚಿಯನ್ನರು, ವೈಶ್ಣವ, ಶೈವ ಹೀಗೆ ಪರಸ್ಪರ ಕಚ್ಚಾಡುತ್ತಿರುವುದು. ಆದರೆ ಕ್ರಿಷ್ಣ ಎಂದು ಕರೆಯಲ್ಪಡುವ ದೇವರು ಶಿವ ಎಂದು ಕರೆಯಲ್ಪಡುತ್ತಾನೆ, ಶಿವ ಎಂದು ಕರೆಯಲ್ಪಡುವ ದೇವರು ಜೀಸಸ್ ಎಂದೂ, ಅಲ್ಲಾ ಎಂದೂ ಕರೆಯಲ್ಪಡುತ್ತಾನೆ. ಎಲ್ಲರೂ ಒಂದೇ ಆದರೆ ಈ ನಂಬಿಕೆಯನ್ನು ಜನರು ಜನರು ಸೋಲು ಗೆಲವುಗಳ ನೆಲೆಯಲ್ಲಿ ನೋಡುವ ಜನರು ತಮ್ಮ ಧರ್ಮ ಮಾತ್ರ ಸದಾ ಗೆಲವು ಸಾಧಿಸುತ್ತದೆ ಮತ್ತು ಬೇರೆಲ್ಲ ಧರ್ಮಗಳು ಸೋಲುತ್ತವೆ ಎಂದು ಚಿಂತಿಸುತ್ತಾರೆ" ಎಂದು ಹೇಳುತ್ತಾರೆ.
ಚಿಂತಕ 'ಜ್ಯೋತಿರ್ಮಯ ಶರ್ಮ' ಅವರು ಸಂಶೋಧನ ಪುಸ್ತಕ "Cosmic Love and Human Apathy: Swami Vivekananda's Re-statement of Religion"ದಲ್ಲಿ ರಾಮಕ್ರಿಷ್ಣ ಮತ್ತು ಅವರ ಶಿಷ್ಯರಾದ ವಿವೇಕನಾಂದರ ಕುರಿತಾಗಿ ಹೊಸ ಚಿಂತನೆಗಳೊಂದಿಗೆ ಚರ್ಚೆಗಳನ್ನು ನಡೆಸುತ್ತಾರೆ. ಆ ಪುಸ್ತಕದಲ್ಲಿ ಜ್ಯೋತಿರ್ಮಯ ಶರ್ಮ ಅವರು ಬರೆಯುತ್ತಾರೆ " '1896ರಲ್ಲಿ ಅಮೇರಿಕಾ ಮತ್ತು ಲಂಡನ್‍ಗೆ ಪ್ರವಾಸ ಮಾಡುವ ವಿವೇಕಾನಂದ ಅಲ್ಲಿ ಧರ್ಮದ ಕುರಿತಾಗಿ, ತಮ್ಮ ಗುರುಗಳಾದ ರಾಮಕ್ರಿಷ್ಣರ ಕುರಿತಾಗಿ ಮಾತನಾಡುತ್ತ 'ರಾಮಕ್ರಿಷ್ಣ ಅವರು ಎಲ್ಲಾ ಧರ್ಮಗಳ ಕುರಿತಾದ ಸತ್ಯಗಳನ್ನು ಅರಿಯಲು ಉತ್ಸುಕರಾಗಿದ್ದರು. ರಾಮಕ್ರಿಷ್ಣರವರು ಯಾವುದೇ ವ್ಯಕ್ತಿಯ ವೈಯುಕ್ತಿಕ ನಂಬಿಕೆಯನ್ನು ತೊಂದರೆಗೊಳಪಡಿಸಲು ಬಯಸುತ್ತಿರಲಿಲ್ಲ ' ಎಂದು ಭಾಷಣ ಮಾಡಿದ್ದರು. ರಾಜಕೀಯವಾಗಿ ಹಿಂದೂಯಿಸಂ ಕುರಿತಾಗಿ ಆಳವಾಗಿ ಮಾತನಾಡಿದ್ದ ವಿವೇಕಾನಂದ ಬೇರೆ ಧರ್ಮದ ಜನರ ನಂಬಿಕೆಗಳ ಕುರಿತಾಗಿ ಬಹಳಷ್ಟು ಲಿಬರಲ್ ಆಗಿ ಚಿಂತಿಸುತ್ತಿದ್ದರು. ಎಲ್ಲಾ ಧರ್ಮಗಳ ನಂಬಿಕೆಗಳು ವಿಭಿನ್ನವಾಗಿದ್ದರೂ ಅದು ಕಡೆಗೆ ಒಂದೇ ದೇವರನ್ನು ಪ್ರಾಥಿಸುತ್ತದೆ ಎಂದು ವಿವೇಕಾನಂದ ಸಹ ನಂಬಿದ್ದರು.
ತಮ್ಮ ಅನೇಕ ಸಾರ್ವಜನಿಕ ಭಾಷಣಗಳಲ್ಲಿ ವಿವೇಕಾನಂದ ಅವರು ತಮ್ಮ ಸಂದೇಶವು ಶಾಂತಿ ಮತ್ತು ಧರ್ಮದ ಒಗ್ಗಟ್ಟನ್ನು ಬೆಂಬಲಿಸುತ್ತದೆ ಮತ್ತು ಶತೃತ್ವವನ್ನು ನಾನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.ಸ್ವತಹ ಹಿಂದೂ ಧರ್ಮದ ಕುರಿತಾಗಿ ನಂಬಿಗೆಯನ್ನು ಹೊಂದಿದ್ದ ವಿವೇಕಾನಂದ ಪ್ರತಿಯೊಬ್ಬರೂ ತನ್ನ ಧರ್ಮದ ಕುರಿತಾದ ಇರುವ ನಂಬಿಕೆಯ ಪ್ರಮಾಣದಷ್ಟೇ ವಿವಿಧ ಧರ್ಮಗಳ ಕುರಿತಾಗಿ ಇರಬೇಕೆಂದು ಹೇಳಿದ್ದರು.ನಂಬಿಕೆಗಳು ಬಹುರೂಪಿಯಾಗಿರುತ್ತವೆಂದು ನಂಬಿದ್ದರು. ಸಹ ವಿವಿಧ ಧರ್ಮಗಳ ನಂಬಿಕೆಗಳ ಕುರಿತಾಗಿ ವಿವೇಕಾನಂದ ಅವರು 'ಜಗತ್ತಿನಲ್ಲಿರುವ ವಿವಿಧ ಪಂಥಗಳನ್ನು ನಾನು ವಿರೋಧಿಸುವುಲ್ಲ. ಪಂಥಗಳ ಸಂಖ್ಯೆ ಹೆಚ್ಚಾದಷ್ಟು ದೇವರಿಗೆ ಆಯ್ಕೆಗಾಗಿ ವಲಯಗಳು ವಿಶಾಲವಾಗುತ್ತ ಹೋಗುತ್ತವೆ. ಆದರೆ ಪ್ರತಿಯೊಂದು ಸಂದರ್ಭದಲ್ಲಿ, ಸಂಗತಿಗಳಲ್ಲಿ, ವ್ಯಾಜ್ಯಗಳಲ್ಲಿ ಒಂದೇ ಧರ್ಮವನ್ನು ಗುರಿಯಾಗಿ ದೂಷಿಸುವುದನ್ನು ನಾನು ವಿರೋಧಿಸುತ್ತೇನೆ. ಪ್ರತಿಯೊಂದು ಧರ್ಮದವರನ್ನು ನಾವು ಒಳಗೊಳ್ಳಬೇಕು ಮತ್ತು ಗೌರವಿಸಬೇಕು ಎಂದು ಪ್ರತಿಪಾದಿಸಿದರು' ಎಂದು ಜ್ಯೋತಿರ್ಮಯ ಶರ್ಮ ಹೇಳುತ್ತಾರೆ.
ಒಂದು ಕಡೆ ಧರ್ಮದ ವಿವಿಧ ಮಜಲುಗಳನ್ನು ಅರಿತುಕೊಳ್ಳಲು ಆಧ್ಯಾತ್ಮವನ್ನು ಬಳಸಿಕೊಂಡ ರಾಮಕ್ರಿಷ್ಣ ಹಿಂದೂ ಧರ್ಮವನ್ನು ಸನಾತನ ಧರ್ಮವೆಂದೇ ಪರಿಭಾವಿಸಿದ್ದರು. ಇವರ ಆಧ್ಯಾತ್ಮದ ಚಿಂತನೆಗಳಿಗೂ ಧರ್ಮದ ಕುರಿತಾದ ಶ್ರೇಣೀಕೃತ ವ್ಯವಸ್ಥೆಯ ಕುರಿತಾದ ಚಿಂತನೆಗಳ ನಡುವೆ ಅನೇಕ ವೈರುಧ್ಯಗಳಿದ್ದವು. ಆದರೆ ತಮ್ಮ ಗುರುಗಳಿಂದ ವಿಭಿನ್ನವಾಗಿ ಚಿಂತಿಸಿದ ವಿವೇಕಾನಂದ ಅವರು ಧರ್ಮವನ್ನು ಒಂದು ಕಡೆ ಆಧ್ಯಾತ್ಮದ ತುದಿಯಲ್ಲಿಯೂ ಮತ್ತೊಂದೆಡೆ ರಾಜಕೀಯ ನೆಲೆಯಲ್ಲಿಯೂ ನಿರ್ವಚಿಸಿದರು.
ಮತ್ತೊಂದೆಡೆ ಅದೇ ಕಾಲಕ್ಕೆ ಹೆಗೆಲ್‍ನ "ನಿಚ್ಚಳ ಆದರ್ಶವಾದ"(absolute idealism) ಮತ್ತು Phenomenology of Spirit ನ ಫಿಲಾಸಫಿ ಚಿಂತನೆಗಳ ನಂತರ 19ನೇ ಶತಮಾದ ಎರಡು ಮತ್ತು ಮೂರನೇ ದಶಕಗಳಲ್ಲಿ ಯುರೋಪಿನಲ್ಲಿ ಸಂಸ್ಕøತಿಗಳ ವಿಸ್ಮøತಿ ಮತ್ತು ಬಂಡವಾಳಶಾಹಿಗಳ ಏಳಿಗೆಗಳು ಆ ಕಾಲದ ದಾರ್ಶನಿಕರಲ್ಲಿ ಚಿಂತೆಯನ್ನು ಹೆಚ್ಚಿಸಿದ್ದವು. ಬೂಜ್ರ್ವ ಶಕ್ತಿಗಳು ತಲೆಯೆತ್ತುತ್ತಿರುವುದು ಅವರಲ್ಲಿ ಆತಂಕವನ್ನುಂಟು ಮಾಡಿತು. ಕಡೆಗೆ 19ನೇ ಶತಮಾನ ಕೊನೆಯ ದಶಕದಲ್ಲಿ ಯುರೋಪ್ ರಾಷ್ಟ್ರಗಳು ಮತ್ತು ಇಂಡಿಯಾದಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು, ಚೈತನ್ಯವನ್ನು ಆಧ್ಯಾತ್ಮದ ಚಿಂತನೆಗಳೊಂದಿಗೆ ಬೆಸೆಯಲಾಯಿತು. ಈ ಪ್ರಕ್ರಿಯೆಯು ಕ್ರಮೇಣ ಗಟ್ಟಿಗೊಳ್ಳುತ್ತಾ ಹೋಯಿತೇ ಹೊರತು ಕುಂಠಿತಗೊಳ್ಳಲಿಲ್ಲ. ಧರ್ಮವನ್ನು ಪುನರುಜ್ಜೀವನಗೊಳಿಸುವ ಮಾತುಗಳು ಕೇಳಿಬಂದವು.
ಇಂತಹ ಕಾಲಘಟ್ಟದಲ್ಲಿ ವಿವೇಕಾನಂದ ಅವರು ಈ ಹಿಂದೂ ಧರ್ಮದ ಪುನರುಜ್ಜೀವನದ ಚಿಂತನೆಗಳಿಗೆ ಹೊಸ ತಿರುವುಗಳನ್ನು ಕೊಟ್ಟರು. ಈ ಹಿಂದೂ ಧರ್ಮಕ್ಕೆ ಪಾರಮಾರ್ಥಿಕ ಚಿಂತನೆಗಳ ಜೊತೆ ಜತೆಗೆ ರಾಜಕೀಯ ಪರಿಹಾರವನ್ನೂ ಬೆಸೆದವರು ವಿವೇಕಾನಂದ. ಭಕ್ತಿಪಂಥ ಮತ್ತು ರಾಮಕ್ರಿಷ್ಣ ಪರಮಹಂಸರತಹವರು ಪ್ರತಿಪಾದಿಸಿದ್ದ ಸಂಕೇತಗರ್ಭಿತವಾದ,ಉದಾರವಾದಿ ನೆಲೆಗಳಲ್ಲಿದ್ದ ಧರ್ಮದ ಕುರಿತಾದ ಚಿಂತನೆಗಳನ್ನು ಅಲ್ಲಿಂದ ಬೇರ್ಪಡಿಸಿದ ವಿವೇಕಾನಂದ ಅವರು ಹಿಂದೂಯಿಸಂ ಅನ್ನು ಧಾರ್ಮಿಕ ಸಮ್ಮೋಹಕತೆಯ ತತ್ವಗಳಿಗೆ, ಜನಸಾಮಾನ್ಯರ ರಾಜಕಾರಣಕ್ಕೆ ಹೊರಳಿಸಿದರು. ರಾಜಕೀಯ ಹಿಂದೂಯಿಸಂಗೆ ಮೊಟ್ಟ ಮೊದಲ ಬುನಾದಿಯನ್ನು ಹಾಕಿದ್ದು ವಿವೇಕಾನಂದ ಅವರು ಎಂದು ಚಿಂತಕರು ವಿಶ್ಲೇಷಿಸುತ್ತಾರೆ. ಕಲೋನಿಯಲ್ ಆಡಳಿತದ ಸಂದರ್ಭದ 19ನೇ ಶತಮಾನದಲ್ಲಿ ಭಕ್ತಿಪಂಥದ ಚಳುವಳಿಯಿಂದ ಪ್ರೇರೇಪಿತಗೊಂಡಿದ್ದ ರಾಮಕ್ರಿಷ್ಣ ಪರಮಹಂಸರು ಧರ್ಮವನ್ನು ಮಾನವೀಯ ಜವಾಬ್ದಾರಿಯ ಮೂಲಕ, ರಹಸ್ಯವೆನಿಸುವ ಆಧ್ಯಾತ್ಮದ ಯೋಗದ ಮೂಲಕ ಬೋಧಿಸುತ್ತ ಮಧ್ಯಮವರ್ಗಗಳನ್ನು ಬೆರಗಾಗಿಸಿದ್ದರು.
ಜ್ಯೋತಿರ್ಮಯ ಶರ್ಮ ಅವರು 'ಆದರೆ ರಾಮಕ್ರಿಷ್ಣ ಪರಮಹಂಸರ ಸಮಾನತಾ ಭಾವದ, ರಹಸ್ಯಾತ್ಮಕ ಆಧ್ಯಾತ್ಮಕತೆಯಿಂದ ಧರ್ಮವನ್ನು ಸಂಪೂರ್ಣವಾಗಿ ಹೊರತಂದ ವಿವೇಕಾನಂದ ಅವರು ಧರ್ಮದ ನಂಬಿಕೆಯನ್ನು ನೈತಿಕ ಮತ್ತು ದೈಹಿಕ ಶಕ್ತಿಯ ಅಭಿವ್ಯಕ್ತಿಯಾಗಿ ರೂಪಿಸಿದರು ಮತ್ತು ಧರ್ಮ ಮತ್ತು ನಂಬಿಕೆಗಳ ಪರಂಪರೆಯ ಚಿಂತನೆಗಳನ್ನು ಹುಟ್ಟು ಹಾಕಿದರು ಹಾಗೂ ಯಶಸ್ವಿಯಾದರು. ಕೇವಲ ಕಾರಣಗಳ ಮಿತಿಯೊಳಗೆ ಧರ್ಮವನ್ನು ಅರಿತುಕೊಳ್ಳಬೇಕೆಂದು ಪ್ರತಿಪಾದಿಸಿದ ವಿವೇಕಾನಂದ ಹೀಗೆ ಮಾಡುವುದರ ಮೂಲಕ ಸತ್ಯವನ್ನು ವಿವಿಧ ಮಜಲುಗಳಲ್ಲಿ ಅನಾವರಣಗೊಳಿಸಬಹುದೆಂದು, ಪ್ರೀತಿ ಮತ್ತು ಮಮತೆಯನ್ನು ದೇವರನ್ನು ನೋಡುವ ಸಾಕ್ಷಾಧಾರಗಳಾದ ಸಾಮಥ್ರ್ಯಗಳು ಎಂದೂ ಚಿಂತಿಸಿದರು.' ಎಂದು ವಿವರಿಸುತ್ತಾರೆ. ಇದರ ಫಲವಾಗಿ ಭಕ್ತಿಪಂಥವು ನಿರಂತರವಾಗಿ ನಿರಾಕರಿಸುತ್ತಾ ಬಂದಿದ್ದ ವರ್ಣಾಶ್ರಮದ ಸನಾತನ ಚಿಂತನೆಗಳ ಸ್ವಧರ್ಮ ಪರಿಕಲ್ಪನೆಯು ಹಿಂಬಾಗಿಲಿನಿಂದ ಪ್ರವೇಶ ಪಡೆದುಕೊಂಡಿತು. ಪೌರುಷತ್ವ, ಬಲಶಾಲಿ ಸಾಮಥ್ರ್ಯತೆಗಳು ಧರ್ಮದ ಪುನರುಜ್ಜೀವನಕ್ಕೆ ಬುನಾದಿಗಳಾಗಿ ಪ್ರತಿಪಾದನೆಗೊಂಡವು. ಮಾನವೀಯತೆಯ ಪರವಾಗಿದ್ದ ವಿವೇಕಾನಂದರ ಈ ರಾಜಕೀಯ ಹಿಂದೂಯಿಸಂ ಮುಂದೆ ವಿವಿಧ ರೀತಿಯಲ್ಲಿ ಬದಲಾವಣೆಗೊಳ್ಳುತ್ತ ಕಾಲು ಶತಮಾನದ ನಂತರ ಗಾಂಧಿಯವರ 'ಹಿಂದ್ ಸ್ವರಾಜ್' ಆಗಿ ಹೊರ ಹೊಮ್ಮಿತು ಮತ್ತು ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ರಾಷ್ಟ್ರೀಯತೆಯ ಸ್ವರೂಪ ಪಡೆದುಕೊಂಡಿತು.
ಭಕ್ತಿಪಂಥ ಮತ್ತು ರಾಮಕ್ರಿಷ್ಣ ಪರಮಹಂಸರ ಚಿಂತನೆಗಳ ಈ ಆಧ್ಯಾತ್ಮಕತೆಯ ಸಂಕೇತಗರ್ಭಿತ ಉದಾರವಾದಿ ಚಿಂತನೆಗಳು ಮೇಲಿನಂತೆ ಹೈಜಾಕ್‍ಗೊಂಡಿದ್ದನ್ನು ಕಣ್ಣಾರೆ ಕಂಡಿದ್ದ ಡಾ.ಬಿ.ಆರ್.ಆಂಬೇಡ್ಕರ್ ಅವರು ಈ ಧಾರ್ಮಿಕ ಆಧ್ಯಾತ್ಮಿಕತೆಯು ಮುಂದೊಂದು ದಿನ ವಿಕಾರ ಸ್ವರೂಪಕ್ಕೆ ತಿರುಗುತ್ತದೆ ಎಂದು ಎಚ್ಚರಿಸಿದ್ದರು. ಈ ಮಾದರಿಯ ಹಿಂದೂ ಧಾರ್ಮಿಕತೆಯ ಆಧ್ಯಾತ್ಮಕತೆಯನ್ನು ಅಂಬೇಡ್ಕರ್‍ರವರು ಅನೈತಿಕವಾದ, ವಿಕಾರವಾದ ಮೃಗಸದೃಶ್ಯ ಶಕ್ತಿಗೆ ಹೋಲಿಸಿ ಮುಂದೊಂದು ದಿನ ಇದು ರೂಢಿಗತಗೊಳ್ಳುವ ಹೇರುವಿಕೆಯ ಕಾನೂನಾಗಿ ಮಾರ್ಪಡುತ್ತದೆ ಎಂದು 1920ರಲ್ಲಿಯೇ ಎಚ್ಚರಿಸಿದ್ದರು
ಇಂದು 21ನೇ ಶತಮಾನದಲ್ಲಿ ಈ ಆಧ್ಯಾತ್ಮ ಧಾರ್ಮಿಕತೆಯು ಸಂಪೂರ್ಣವಾಗಿ ವಿಕಾರಗೊಂಡು, ಕ್ರೌರ್ಯದ ಪ್ರದರ್ಶಕ್ಕೆ ಆಡೊಂಬೊಲವಾಗಿ, ಮಾನವ ವಿರೋಧಿ ತತ್ವಗಳಾಗಿ ಪರಿವರ್ತನೆಗೊಂಡು ದಿನೇ ದಿನಕ್ಕೆ ವಿರೂಪಗೊಳ್ಳುತ್ತಿದೆ ಮತ್ತು ಜಟಿಲಗೊಳ್ಳುತ್ತಿದೆ. ಜಾತೀಯತೆಯನ್ನು ವಿರೋಧಿಸಿದ ವಿವೇಕಾನಂದರನ್ನು ತನ್ನ ಮತೀಯವಾದಿ, ಜಾತಿ ಪದ್ಧತಿಯ, ಪ್ರತ್ಯೇಕತೆಯ ಹಿಂದೂ ಧರ್ಮಕ್ಕೆ appropriation ಮಾಡಿಕೊಂಡ ಸಂಘ ಪರಿವಾರ ಈ ಮತಾಂಧತೆಯನ್ನು ವಿರೋಧಿಸುವ ನಾಗರಿಕರ ಮೇಲೆ ದೈಹಿಕ ಮತ್ತು ಮಾನಸಿಕ ಹಲ್ಲೆಗಳನ್ನು ನಡೆಸುತ್ತಿದೆ. ಈ ಸಂಘ ಪರಿವಾರದ ಲುಂಪೆನ್ ಗುಂಪು ಮತ್ತು ಅವರನ್ನು ಕುರುಡಾಗಿ ಬೆಂಬಲಿಸುವ ಧಾರ್ಮಿಕ ಮತಾಂಧರು ಈ ಧಾರ್ಮಿಕ ಮೂಲಭೂತವಾದವನ್ನು ವಿರೋಧಿಸುವ ಜನಪರ ಚಿಂತಕರು, ಲೇಖಕರ ಮೇಲೆ ವ್ಯಕ್ತಪಡಿಸುತ್ತಿರುವ ಅಸಹನೆಗಳು ಕ್ರೌರ್ಯದ ನೆಲೆಯಲ್ಲಿ ನಡೆಸುತ್ತಿರುವ ಮಾನಸಿಕ ಹಲ್ಲೆಗಳು ಅಂಬೇಡ್ಕರ್ ಅವರ ಮೇಲಿನ ಎಚ್ಚರಿಕೆಯ ಮಾತುಗಳಿಗೆ ಸಾಕ್ಷಿಯಾಗಿವೆ. 'ಪ್ರಜ್ಞಾವಂತರು ಸಂಸ್ಕøತಿ ಮತ್ತು ಧರ್ಮಗಳ ಪ್ರಶ್ನೆಗಳನ್ನು ಕಡೆಗಣಿಸಿದ್ದರಿಂದ ಅವು ಉಡಾಳರ ಕೈಯಲ್ಲಿ ತ್ರಿಶೂಲಗಳಾದವು,ಅಗ್ನಿ ಭಕ್ಷಕ ರಾಜಕಾರಣಿಗಳ ಕೈಯಲ್ಲಿ ಮಾರಕಾಸ್ತ್ರಗಳಾದವು' ಎಂದು ಡಿ.ಆರ್.ನಾಗರಾಜ್ ಮಾರ್ಮಿಕವಾಗಿ ಹೇಳುತ್ತಾರೆ.
ಮತ್ತೊಂದೆಡೆ ಇಂದು ಈ ಬಲಪಂಥೀಯ ಮತೀಯವಾದದ ಸಮರ್ಥಕರು ಇದನ್ನು ವಿರೋಧಿಸುವವರನ್ನು ನೇರವಾಗಿಯೇ ಎಡಪಂಥೀಯರು, ಮಾರ್ಕ್ಸ್ವಾದಿಗಳು ಎಂದು ಜರೆದು ಇಡೀ ಸಂವಾದದ ದಿಕ್ಕನ್ನೇ ಹಾದಿ ತಪ್ಪಿಸುತ್ತಿರುವುದಕ್ಕೆ ಕಳೆದ ವರ್ಷ ಜೆಎನ್‍ಯು ಪ್ರಕರಣದಿಂದ ಇಂದಿನ ದೆಹಲಿಯ ರಾಮಜಾಸ್ ಕಾಲೇಜ್‍ನ ಗೂಂಡಾಗಿರಿಗಳು ಸಾಕ್ಷಿಯಾಗಿವೆ. ಈ ಎಡಪಂಥೀಯ ಎನ್ನುವ ಇಂದಿನ ಬಹುಸಂಖ್ಯಾತವಾದದ ಪ್ರತಿಪಾದಕರ ವಿಲನ್ ಅನ್ನು ಮತ್ತೊಮ್ಮೆ ಅಮೂಲಾಗ್ರವಾಗಿ ವಿಶ್ಲೇಷಿಸುವ ತುರ್ತು ಅಗತ್ಯ ನಮ್ಮ ಮುಂದಿದೆ.
ಬಲಪಂಥೀಯರು ಬಿಡಿ ಒಂದು ಸಾಮಾನ್ಯವಾಗಿ ಮಾರ್ಕ್ಸ್ವಾದದ ಕುರಿತಾಗಿ ಪ್ರಮುಖ ಟೀಕೆಯನ್ನು ಪ್ರಸ್ತಾಪಿಸುತ್ತಾ ಟೆರಿ ಈಗಲ್ಟನ್ " ಮಾಕ್ರ್ಸಿಸಂ ಒಂದು ನಿರ್ದಿಷ್ಟ ದೃಷ್ಟಿಕೋನಕ್ಕೆ ಮಾತ್ರ ಬದ್ಧವಾಗಿರುತ್ತದೆ. ಅದು ಹೆಣ್ಣು ಮತ್ತು ಗಂಡನ್ನು ಇತಿಹಾಸದ ಒಂದು ಕೈಗೊಂಬೆಯನ್ನಾಗಿ ಮಾತ್ರ ಪರಿಭಾವಿಸುತ್ತದೆ ಮತ್ತು ಹೀಗೆ ಪರಿಭಾವಿಸುವ ಮೂಲಕ ಅವರ ಸ್ವಾತಂತ್ರ್ಯದ, ವೈಯುಕ್ತಿಕ ನೆಲೆಗಳ ಬದುಕನ್ನು ನಿರಾಕರಿಸುತ್ತದೆ. ಮಾನವ ಸಂತತಿಯು ಪ್ರತಿರೋಧಿಸಲಾರದಷ್ಟು ಕಟುವಾದ, ಕನಿಕರವಿಲ್ಲದ, ಅಪಾರವಾದ ಶಕ್ತಿಯನ್ನುಳ್ಳ ಒಂದು ಬಗೆಯ ಉಗ್ರವಾದ ಕಟ್ಟುನಿಟ್ಟನ್ನೊಳಗೊಂಡ ಇತಿಹಾಸದ ಕಾನೂನುಗಳನ್ನು ಮಾಕ್ರ್ಸ ನಂಬುತ್ತಾನೆ. ಆತನ ಪ್ರಕಾರ ಫ್ಯೂಡಲಿಸಂ ವ್ಯವಸ್ಥೆಯು ಬಂಡವಾಳಶಾಹಿಯ ಹುಟ್ಟಿಗೆ ಕಾರಣವಾಗುತ್ತದೆ, ಬಂಡವಾಳಶಾಹಿಯು ಮುಂದೆ ಸಮಾಜವಾದಕ್ಕೆ ದಾರಿ ಮಾಡಿಕೊಡುತ್ತದೆ. ಇತಿಹಾಸ ಕುರಿತಾದ ಮಾಕ್ರ್ಸನ ಸಿದ್ಧಾಂತವು ವಿಧಿನಿಯಮ ನಂಬುಗೆಯ ಸೆಕ್ಯುಲರ್ ಅವತರಿಣಿಕೆಯಷ್ಟೆ.ಇದು ಮಾಕ್ರ್ಸವಾದಿ ರಾಜ್ಯಗಳಂತೆಯೇ ಮನುಷ್ಯನ ಘನತೆ ಮತ್ತು ಸ್ವಾತಂತ್ರ್ಯಕ್ಕೆ ಸದಾ ವಿರೋಧವಾಗಿರುತ್ತದೆ." ಎಂದು ಬರೆಯುತ್ತಾನೆ.
ಮುಂದುವರೆದು ಟೆರಿ "ಮಾರ್ಕ್ಸ್ ವಾದವು ಕ್ರಾಂತಿಕಾರಿ ಸಿದ್ಧಾಂತವಂತೂ ಅಲ್ಲ. ಮಾರ್ಕ್ಸ್ ಸಮಾಜವಾದದ, ಕಮ್ಯುನಿಸಂನ ಹರಿಕಾರನಂತೂ ಅಲ್ಲವೇ ಅಲ್ಲ. ಮಾಕ್ರ್ಸ ಉದಾರವಾದಿಯಾಗಿದ್ದ, ಪ್ರಾರಂಭದ ದಿನಗಳಲ್ಲಿ ಯುರೋಪ್‍ನ ರಾಷ್ಟ್ರಗಳಲ್ಲಿನ ದುಡಿಯುವ ವರ್ಗಗಳ ಚಳುವಳಿಗಳಾಗಲೇ ಸಮಾಜವಾದಿ ಚಿಂತನೆಗಳಿಗೆ ಒಗ್ಗಿಕೊಳ್ಳಲಾರಂಬಿಸಿದ್ದವು. ತಾನು ಸಮಾಜವಾದದ ಸಿದ್ಧಾಂತವನ್ನು ಬಿತ್ತಿದವನೆಂಬುದನ್ನು ಸ್ವತಃ ಮಾಕ್ರ್ಸನೇ ನಿರಾಕರಿಸುತ್ತಾನೆ. ಆದರೆ ಮಾಕ್ರ್ಸ ಈ ಸಮಾಜವಾದ ಸಿದ್ಧಾಂತವನ್ನು ಮರು ರೂಪಿಸಿದ್ದಂತೂ ನಿಜ. ಮಾರ್ಕ್ಸ್ವಾದವು ಬಂಡವಾಳಶಾಹಿಯ ಬಲು ದೊಡ್ಡ ಟೀಕಾಕಾರ ಮತ್ತು ಬಂಡವಾಳಶಾಹಿಯ ಒಪ್ಪಿತ ಸಂಸ್ಕøತಿಗೆ ಈ ಮಾಕ್ರ್ಸವಾದವು ವಿರೋಧ ನೆಲೆಯ ಮತ್ತೊಂದು ಪ್ರತಿಸಂಸ್ಕøತಿಯಾಗಿಯೇ ರೂಪಿತಗೊಂಡಿದೆ. ಎಲ್ಲಿಯವರೆಗೆ ಬಂಡವಾಳಶಾಹಿಯ ಸಂಸ್ಕøತಿ ಇರುತ್ತದೆಯೋ ಅಲ್ಲಿಯವರೆಗೆ ಮಾಕ್ರ್ಸವಾದವೂ ಪ್ರಚಲಿತವಾಗಿರುತ್ತದೆ ಎನ್ನುದರಲ್ಲಿ ಸಂಶಯವೇ ಇಲ್ಲ.
ಮಾರ್ಕ್ಸ್ನ ವಿಮುಖ ನೀತಿಗಳು ಹೆಗೆಲ್‍ನಿಂದ ಪ್ರಭಾವಗೊಂಡಿದ್ದವು. ಸಹಕಾರ ತತ್ವದಡಿ ನಿರ್ಮಿತಗೊಳ್ಳುವ ಸಮಾಜವು ಶೋಷಣೆಯಿಂದ ಮುಕ್ತಗೊಂಡು ಸ್ವಾವಲಂಬನೆಯನ್ನು ಸಾಧಿಸಲು ಕ್ರಾಂತಿಕಾರಿ ಮಾರ್ಗವನ್ನು ಆರಿಸಿಕೊಳ್ಳುತ್ತದೆ ಎಂದು ಮಾರ್ಕ್ಸ್ ಪ್ರತಿಪಾದಿಸಿದ್ದ. ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕ ಪರಿಸ್ಥಿತಿಯೇ ಜೀವನದ ನಿರ್ಧಾರಕ ಅಂಶವಾಗಿರುತ್ತದೆ ಮತ್ತು ಇದಕ್ಕೆ ಪೂರಕವಾಗಿ ಇತಿಹಾಸದುದ್ದಕ್ಕೂ ಉತ್ಪಾದನ ಪದ್ಧತಿಗಳು ಬದಲಾವಣೆಗೊಳಲ್ಪಡುತ್ತಿರುತ್ತವೆ ಎಂಬುದು ಮಾಕ್ರ್ಸನ ಎರಡು ಪ್ರಮುಖ ಚಿಂತನೆಗಳು ಸಹ ಆತ ಅವಿಷ್ಕಾರ ಮಾಡಿದ್ದಲ್ಲ.ಅದು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದ್ದವು. ಹಾಗಿದ್ದರೆ ಮಾಕ್ರ್ಸಿಸಂನ ವೈಶಿಷ್ಟತೆ ಇರುವುದು ವರ್ಗಕ್ಕಿಂತಲೂ ವರ್ಗ ಹೋರಾಟ ಮುಖ್ಯ ಎನ್ನುವ ನೀತಿಯಲ್ಲೇ ? ಆದರೆ ಬಹಶಃ ಇದು ಕೂಡ ಹಳೆಯದು. ಉದಾಹರಣೆಗೆ ಒಲಿವರ್ ಗೋಲ್ಡ್‍ಸ್ಮಿತ್‍ನ "ಪಾಳುಬಿದ್ದ ಹಳ್ಳಿ'ಯ ಕವನದ ಸಾಲುಗಳಲ್ಲಿ, ಜಾನ್ ಮಿಲ್ಟನ್‍ನ ಕಾಮೂಸ್ ಪದ್ಯದಲ್ಲಿ, ಶೇಕ್ಸಪಿಯರ್‍ನ ಕಿಂಗ್‍ಲಿಯರ್ ನಾಟಕದಲ್ಲಿ ವರ್ಗ ಹೋರಾಟದ ಮಾತುಗಳು ಕಾಣಿಸಿಕೊಳ್ಳುತ್ತವೆ'. ಬಡವರ ರಕ್ತವನ್ನು ಬಸಿದು ಸೌಧವನ್ನು ಕಟ್ಟಿದ ಜಮೀನ್ದಾರನ ಆಸ್ತಿಯೇ ಸಾಮಾಜಿಕ ಸಂಘರ್ಷದ ಕೇಂದ್ರವಾಗುತ್ತದೆ' ಎಂದು ವಾಲ್ಟೇರ್ ಹೇಳುತ್ತಾನೆ. ಆದರೆ ಪ್ರಮುಖವಾದ ವ್ಯತ್ಯಾಸವೆಂದರೆ ಸಾವಯವವಾದ ಸಾಮೂಹಿಕ ಒಗ್ಗಟ್ಟಿನಲ್ಲಿ ಮಾನವ ನಾಗರಿಕತೆಯು ರೂಪುಗೊಳ್ಳುತ್ತದೆ ಎಂದು ಅನೇಕ ಸಾಮಾಜಿಕ ಚಿಂತಕರು ಪರಿಭಾವಿಸಿದರೆ ಮಾರ್ಕ್ಸ್ ಸಾಮೂಹಿಕ ಗುಂಪಿನ ಭಿನ್ನತೆಯಲ್ಲಿ ನಾಗರೀಕತೆಯು ರೂಪುಗೊಳ್ಳುತ್ತದೆ ಎಂದು ಪ್ರತಿಪಾದಿಸುತ್ತಾನೆ .ಬಂಡವಾಳಗಾರನು ದುಡಿಯುವ ವರ್ಗಗಳ ದಿನಗೂಲಿಯನ್ನು ಕನಿಷ್ಠ ಮಟ್ಟದಲ್ಲಿ ಮುಂದುವರೆಸಿ ತನ್ನ ವ್ಯಾಪಾರದ ಹಿತಾಸಕ್ತಿಗಳನ್ನು ಮೇಲ್ಮಟ್ಟಕ್ಕೇರಿಸಿಕೊಳ್ಳಲು ಹವಣಿಸುತ್ತಾನೆ ಎನ್ನುವುದು ಮಾರ್ಕ್ಸ್ ನ ವಾದ" ಎಂದು ಬರೆಯುತ್ತಾನೆ.
ಆದರೆ ಇಂದಿನ ನವಉದಾರೀಕರಣದ ಕಾಲಘಟ್ಟದಲ್ಲಿ, ಕೇಂದ್ರದಲ್ಲಿ ಫ್ಯಾಸಿಸ್ಟ್ ಬಿಜೆಪಿ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿರುವಂತಹ ಸಂದರ್ಭದಲ್ಲಿ, ಧಾರ್ಮಿಕ ಮತಾಂಧತೆ ಅಟ್ಟಹಾಸದ, ಇಡೀ ಸರ್ಕಾರಿ ಉದ್ದಿಮೆಗಳನ್ನು ಮುಂದಿನ ವರ್ಷಗಳಲ್ಲಿ ಕ್ರಮೇಣ ಖಾಸಗೀಕರಣಗೊಳಿಸುವ ಬೃಹತ್ ಯೋಜನೆಯ ಅನುಷ್ಠಾನದಲ್ಲಿರುವ ಮೋದಿಯ ರಾಜ್ಯಭಾರದಲ್ಲಿ ನಮ್ಮಲ್ಲಿನ ಎಡಪಂಥೀಯ ಪಕ್ಷಗಳು ಮತ್ತಷ್ಟು ತೀವ್ರತೆಯಿಂದ, ಈಗಿನ ಸವಕಲು ಮಾರ್ಗವನ್ನು ಕೈಬಿಟ್ಟು ವಿಭಿನ್ನ ಚಿಂತನೆಗಳಿಂದ ನಿರಂತರ ಹೋರಾಟಗಳನ್ನು ಕಟ್ಟುವ, ಮುಂದಿನ ದಶಕಕ್ಕೆ ಜನಪರ ರಾಜಕೀಯ ತಳಹದಿಯನ್ನು ರೂಪಿಸುವಂತಹ ವಿವಿಧ ಮಾಡೆಲ್‍ಗಳನ್ನು ಇಷ್ಟರಲ್ಲಾಗಲೇ ಕಟ್ಟಬೇಕಿತ್ತು. ತಮ್ಮ ಮಡಿವಂತಿಕೆಯನ್ನು ಬಿಟ್ಟು ಸಮಾನಮನಸ್ಕರೊಂದಿಗೆ ಒಳಗೊಳ್ಳುವ ಪ್ರಕ್ರಿಯೆಯನ್ನು ಈಗಾಗಲೇ ಶುರುವಾಗಬೇಕಿತ್ತು. ಆದರೆ ಇದಾವುದೂ ಕಾಣುತ್ತಿಲ್ಲ. ಚುನಾವಣಾ ಸೋಲುಗಳಿಂದ ಸಂಪೂರ್ಣ ನಿಶ್ಯಕ್ತಿಗೊಂಡಂತೆ ಕಾಣುತ್ತಿರುವ ಇಲ್ಲಿನ ಎಡ ಪಕ್ಷಗಳು ಮರುಚೇತನ ಪಡೆದುಕೊಳ್ಳುವ ಯಾವ ಲಕ್ಷಣಗಳೂ ಸಧ್ಯಕ್ಕಂತೂ ಕಾಣುತ್ತಿಲ್ಲ. ಈ ಹಿನ್ನಡೆಗಳೇ ನಮ್ಮಲ್ಲಿ ಪದೇ ಪದೇ ಎಡಪಕ್ಷಗಳ ಕುರಿತಾದ ಭ್ರಮನಿರಸನವನ್ನು ಮೂಡಿಸುತ್ತವೆ. ಈ ಎಡಪಂಥೀಯ ಪಕ್ಷಗಳ ಬಿಕ್ಕಟ್ಟು ಅಂತರಿಕವಾಗಿರುವುದು ಎಷ್ಟು ನಿಜವೂ ಈ ನವಉದಾರೀಕರಣದ ಕಾಲದಲ್ಲಿ ಬಳಸಬೇಕಾದ ಸಮಕಾಲೀನ ನುಡಿಕಟ್ಟುಗಳಿಗಾಗಿ ಇವರು ಇನ್ನೂ ತಡಕಾಡುತ್ತಿರುವುದು ಕೂಡ ನಮ್ಮ ಕಣ್ಣ ಮುಂದಿದೆ.
'Theses on Feuerbach' ನಲ್ಲಿ ತರುಣ ಮಾರ್ಕ್ಸ್ " ಮನುಷ್ಯರು ವ್ಯವಸ್ಥೆಯ, ಸಂದರ್ಭಗಳ, ಪಾಲನೆ ಮತ್ತು ಪೋಷಣೆಯ ಉತ್ಪನ್ನಗಳು ಹಾಗೂ ಅದರ ಶಿಶುಗಳು ಎನ್ನುವ ಜಡವಾದ ಭೌತಿಕವಾದದ ತತ್ವಗಳು ಈಗ ಕೊಂಚ ಬದಲಾಗಿ ಮನುಷ್ಯರು ಬೇರೊಂದು ವ್ಯವಸ್ಥೆಯ, ಬದಲಾವಣೆಗೊಂಡ ಪೋಷಣೆಯ ನೀತಿಗಳ ಉತ್ಪನ್ನಗಳು ಎಂದು ಹೇಳುತ್ತಿದ್ದಾರೆ. ಆದರೆ ಇವರು ಮರೆತಿರುವುದೇನೆಂದರೆ ಈಗ ಮನುಷ್ಯರು ಈ ವ್ಯವಸ್ಥೆಯನ್ನು, ಸಂದರ್ಭಗಳನ್ನು ಬದಲಾಯಿಸುತ್ತಾರೆ, ಮತ್ತು ಶಿಕ್ಷಕನಿಗೆ ಶಿಕ್ಷಣ ಕೊಡುವುದು ಅವಶ್ಯಕವಾಗಿದೆ" (ಮಾರ್ಕ್ಸ್ ಮತ್ತು ಎಂಗೆಲ್ಸ್,1978:144) ಎಂದು ಹೇಳುತ್ತಾನೆ.
ಸಿಎಂ ತೀರ್ಮಾನದಂತೆ ಅನ್ನಭಾಗ್ಯ ಅಕ್ಕಿ ಪ್ರಮಾಣ | Udayavani – ಉದಯವಾಣಿ
Thursday, 01 Oct 2020 | UPDATED: 11:48 PM IST
ಸಿಎಂ ತೀರ್ಮಾನದಂತೆ ಅನ್ನಭಾಗ್ಯ ಅಕ್ಕಿ ಪ್ರಮಾಣ
ಬೆಂಗಳೂರು: "ಅನ್ನಭಾಗ್ಯ ಯೋಜನೆಯಡಿ ಸದ್ಯ ಏಳು ಕೆ.ಜಿ. ಅಕ್ಕಿ ಕೊಡುತ್ತಿದ್ದೇವೆ. ಮುಂದೆ ಮುಖ್ಯಮಂತ್ರಿಯವರು ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದರಂತೆ ವ್ಯವಸ್ಥೆ ಮುಂದುವರಿಯಲಿದೆ' ಎಂದು ಆಹಾರ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, "ಅಕ್ಕಿ ಕಡಿತ ಮಾಡಿ ಎಂದು ಮುಖ್ಯಮಂತ್ರಿ ಈವರೆಗೆ ಸೂಚನೆ ಕೊಟ್ಟಿಲ್ಲ. ಏಳು ಕೆ.ಜಿ. ಅಕ್ಕಿ ನೀಡುವಂತೆ ಹೇಳಿದ್ದಕ್ಕೆ ಅದೇ ರೀತಿ ಕೊಡಲಾಗುತ್ತಿದೆ. ಅವರು ಏಳು ಕೆ.ಜಿ. ಕೊಡಿ ಅಂತಾರೋ ಅಥವಾ 5 ಕೆ.ಜಿ. ಕೊಡಿ ಅಂತಾರೋ ಅದನ್ನು ನಾವು ಪಾಲಿಸಬೇಕು. ಸಿಎಂ ಡೈರೆಕ್ಷನ್‌ ಓವರ್‌ಟೇಕ್‌ ಮಾಡಲಿಕ್ಕೆ' ಆಗುತ್ತಾ ಎಂದು ಪ್ರಶ್ನಿಸಿದರು. ಅನಿಲಭಾಗ್ಯ ಯೋಜನೆಯ ಫ‌ಲಾನುಭವಿಗಳಿಗೆ ನೀಡಲು ಖರೀದಿಸಿರುವ ಸ್ಟೌಗಳನ್ನು ಟೆಂಡರ್‌ ಕರೆದು, ನಿಯಮಗಳ ಪ್ರಕಾರ ಖರೀದಿ ಮಾಡಲಾಗಿದೆ. ಸರ್ಕಾರಿ ಆದೇಶ ಹೊರಡಿಸಿಯೇ ಖರೀದಿ ಪ್ರಕ್ರಿಯೆ ನಡೆಸಲಾಗಿದೆ. ಗುಣಮಟ್ಟದ ಬಗ್ಗೆ ಎಂಎಸ್‌ಐಎಲ್‌ಗೆ ಪತ್ರ ಬರೆದು ವಿವರಣೆ ಕೇಳಿದ್ದೇನೆ. ಅಷ್ಟಕ್ಕೂ ಕೇಂದ್ರ ಸರ್ಕಾರದ ಉಜ್ವಲ ಯೋಜನೆಗೂ ಇದೇ ಸ್ಟೌಗಳನ್ನು ಖರೀದಿ ಮಾಡಲಾಗಿದೆ ಎಂದು ಇದೇ ವೇಳೆ ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಂಬೈಯಲ್ಲಿ ಕನ್ನಡದ ಘಮ | Prajavani
ಮುಂಬೈಯಲ್ಲಿ ಕನ್ನಡದ ಘಮ
ಸಂಗೀತಕ್ಕೆ ಭಾಷೆಯ ಹಂಗಿಲ್ಲ, ಅದು ಸ್ನೇಹವನ್ನು ಬೆಸೆಯುತ್ತದೆ. ಅದರ ಇಂಪನ್ನು ಆಸ್ವಾದಿಸುವ ಮನಸ್ಸಿದ್ದರೆ, ಭಾವ ಪ್ರತಿಯೊಬ್ಬರನ್ನು ತಲುಪುತ್ತದೆ... ಹೀಗೆ ಆ ವೇದಿಕೆಯಲ್ಲಿ ಸಂಗೀತ ಮತ್ತು ಸ್ನೇಹದ ಸುತ್ತಲೇ ಮಾತು ಹೊರಳುತ್ತಿತ್ತು. ಭಿನ್ನ ಭಾಷೆ, ರಾಜ್ಯಗಳ ಸಂಗೀತ ಮೋಹಿಗಳು ಇದ್ದ ಈ ಸಮಾರಂಭ ನಡೆದಿದ್ದು, ಮುಂಬೈಯ ತಾಜ್‌ ಮಹಲ್‌ ಪ್ಯಾಲೆಸ್‌ ಹೋಟೆಲ್‌ನಲ್ಲಿ.
ಮ್ಯಾಕ್‌ ನಂ.1 ಸೋಡಾ ತನ್ನ ಹೊಸ ಜಿಂಗಲ್‌ ಬಿಡುಗಡೆಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕನ್ನಡ, ಮರಾಠಿ, ಹಿಂದಿ, ರಾಜಾಸ್ತಾನಿ, ಪಂಜಾಬಿ ಭಾಷೆಯಲ್ಲಿ ಈ ವಿಡಿಯೊ ತಯಾರಾಗಿದೆ. ಸಾಮಾನ್ಯವಾಗಿ ಜಾಹೀರಾತು ಒಂದೇ ಭಾಷೆಯಲ್ಲಿ ತಯಾರಾಗಿ, ಸ್ಥಳೀಯ ಭಾಷೆಗೆ ಡಬ್‌ ಆಗುತ್ತದೆ. ಆದರೆ ಇದು ಐದು ಭಾಷೆಯಲ್ಲಿ ತಯಾರಾಗಿರುವುದರ ಜೊತೆಗೆ ಐದರಲ್ಲೂ ವಿಭಿನ್ನವಾದ ಥೀಮ್‌ ಇದೆ.
ಗೆಳೆತನದ ಮಹತ್ವ, ಸಂಭ್ರಮ, ಸಂತೋಷವನ್ನು ತಿಳಿಸುವ ಜೊತೆಗೆ 'ಮ್ಯಾಕ್‌ ಡೊವೆಲ್ಸ್‌ ಸೋಡಾ ಕೂಡ ನಿಮ್ಮ ಸ್ನೇಹಿತ' ಎಂದು ತಿಳಿಸುವ ಇರಾದೆ ಈ ಜಿಂಗಲ್‌ನದ್ದು. ಐದು ಭಾಷೆಯಲ್ಲಿ ಸಂಗೀತ ಸಂಯೋಜನೆಗೆ ನೆರವಾಗಿದ್ದ ಜೋಡಿಗಳು ಅಲ್ಲಿದ್ದರು.
2014ರಲ್ಲಿ ಬಿಡುಗಡೆಯಾಗಿದ್ದ 'ಯಾರಿ (ಸ್ನೇಹಿತ)' ಹಾಡಿಗೆ ಈಗ ಹೊಸದೊಂದು ರೂಪು ಸಿಕ್ಕಿದೆ. ಬಾಲಿವುಡ್‌ನ ಜನಪ್ರಿಯ ಸಂಗೀತ ಜೋಡಿಗಳಾದ ಸಲೀಂ, ಸುಲೇಮಾನ್‌ಗೆ ಈ ಜಿಂಗಲ್‌ ತಯಾರಿಕೆಯ ಜವಾಬ್ದಾರಿ ವಹಿಸಲಾಗಿತ್ತು. ಐದು ಭಾಷೆಯಲ್ಲಿ ಪ್ರತಿಭಾವಂತರನ್ನು ಹುಡುಕಿ ವಿಭಿನ್ನವಾಗಿ ವಿಡಿಯೊ ಹೊರತಂದಿದೆ ಈ ಜೋಡಿ.
ಪಾಪ್ ಸಂಗೀತದ ಚೌಕಟ್ಟಿಗೆ ಭಾವಗೀತೆ ಒಗ್ಗಿಸಿರುವ ಸ್ವರಾತ್ಮ ತಂಡ ಕನ್ನಡದಲ್ಲಿ ಜಿಂಗಲ್‌ ತಯಾರಿಗೆ ನೆರವಾಗಿದೆ. ಇದರಲ್ಲಿ ಸಲೀಂ ಹಾಡಿರುವುದು ವಿಶೇಷ. ತಮ್ಮ ಅನುಭವಗಳ ಜೊತೆಗೆ ತಮ್ಮ ಮುಂದಿನ ಯೋಜನೆಯ ಬಗ್ಗೆ ಸ್ವರಾತ್ಮ ತಂಡ ತಿಳಿಸುವುದು ಹೀಗೆ...
'ಇದು ರಾಷ್ಟ್ರಮಟ್ಟದ ಪ್ರಾಜೆಕ್ಟ್‌. ಇದರ ಅವಕಾಶ ನಮಗೆ ಸಿಕ್ಕಿದ್ದು ಅದೃಷ್ಟ. ಇದರ ಥೀಮ್‌ ಕಂಪೆನಿಯದ್ದು. ಐದು ಹಾಡುಗಳಲ್ಲಿ ಕನ್ನಡಕ್ಕೂ ಅವಕಾಶ ನೀಡಿರುವುದು ಖುಷಿಯಾಗಿದೆ. ಪ್ರಪಂಚದಾದ್ಯಂತ ಸ್ಥಳೀಯ ಹಾಡುಗಳಿಗೂ ಪ್ರಾಮುಖ್ಯ ಹೆಚ್ಚುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ಕನ್ನಡ ಬರದಿದ್ದರೂ, ಸಲೀಂ ಕನ್ನಡವನ್ನು ಚೆನ್ನಾಗಿ ಉಚ್ಚರಿಸಿದ್ದಾರೆ' ಎನ್ನುತ್ತಾರೆ ತಂಡದ ವರುಣ್‌.
ಬಳಿಕ ಮಾತು ಸ್ವರಾತ್ಮದ ಮುಂದಿನ ಯೋಜನೆಗಳ ಬಗ್ಗೆ ಹರಿಯಿತು. 'ಹೊಸ ಜಾಹೀರಾತೊಂದರ ತಯಾರಿ ನಡೆಯುತ್ತಿದೆ. ಇದರ ಜೊತೆಗೆ 2018ರಲ್ಲಿ ಹೊಸ ಆಲ್ಬಂ ಬಿಡುಗಡೆಯ ಸಿದ್ಧತೆಯೂ ಮಾಡುತ್ತಿದ್ದೇವೆ' ಎನ್ನುತ್ತಾರೆ ಅವರು.
'ಮೊದಲೆಲ್ಲ ಸಂಗೀತ ಬ್ಯಾಂಡ್‌ ಅಂದರೆ ಇಂಗ್ಲಿಷ್‌ ಹಾಡಷ್ಟೇ ಎಂಬ ಪರಿಕಲ್ಪನೆ ಇತ್ತು. ಆದರೆ ಈಗ ಸ್ಥಳೀಯ ಭಾಷೆಯ ಹಾಡಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ. ಅದಕ್ಕೆ ಈ ವೇದಿಕೆಯೇ ಸಾಕ್ಷಿ. ನಾವು ಬ್ರಿಟನ್‌, ಆಸ್ಟ್ರೇಲಿಯಾ, ಹಾಂಕಾಂಗ್‌ನಲ್ಲೆಲ್ಲ ಕನ್ನಡದ ಹಾಡನ್ನೇ ಹಾಡುತ್ತೇವೆ. ಜನರಿಗೆ ಭಾಷೆ ಬರದಿರಬಹುದು. ನಮ್ಮ ಭಾವ ಅವರನ್ನು ತಲುಪಿದರೆ ಸಾಕು.
ಹಾಡುವ ಮೊದಲು ಅದರ ಥೀಮ್‌ ತಿಳಿಸುತ್ತೇವೆ. ನಮ್ಮ ಉತ್ಸಾಹ ಅವರಲ್ಲಿಯೂ ಸಂಗೀತದ ಬಗ್ಗೆ ಪ್ರೀತಿ ಬೆಳೆಸುತ್ತದೆ. ಸಂಗೀತದ ವಿಷಯದಲ್ಲಿ ಭಾಷೆ ಎಂದಿಗೂ ಆದ್ಯತೆ ಆಗುವುದೇ ಇಲ್ಲ' ಎಂದು ಸಂಗೀತದ ಗರಿಮೆಯ ಬಗ್ಗೆ ತಿಳಿಸುತ್ತಾರೆ ತಂಡದ ಜಿಷ್ಣುದಾಸ್‌ ಗುಪ್ತಾ.
'ನಮ್ಮ ತಂಡದಲ್ಲಿ ಹಾಡಿನ ಪರಿಕಲ್ಪನೆಯ ಬಗ್ಗೆ ಮೊದಲು ಚರ್ಚಿಸುತ್ತೇವೆ. ಸಂಗೀತ ಸಂಯೋಜನೆ ಮಾಡುತ್ತೇವೆ. ನಂತರ ಎಲ್ಲರೂ ಒಟ್ಟಿಗೆ ಚರ್ಚಿಸಿ, ನಮ್ಮ ಭಾವನೆಗಳ ಹದಕ್ಕೆ ತಕ್ಕಂತೆ ಹಾಡು ಬರೆಯುತ್ತೇವೆ' ಎನ್ನುತ್ತಾರೆ ಅವರು.
'ಈವರೆಗಿನ ಪಯಣ ಸುಖಕರವಾಗಿದೆ. ಈ ದಿನ ಇದ್ದ ಹಾಗೆ ಇನ್ನೊಂದು ದಿನ ಇರುವುದಿಲ್ಲ. ಈಗ ಈ ಜಿಂಗಲ್‌ ಮಾಡಿದ್ದೇವೆ. ಮುಂದೆ ಆಲ್ಬಂ ಹಾಡು ಮಾಡಬಹುದು. ಅನಂತರ ಸಿನಿಮಾದಲ್ಲಿಯೂ ಅವಕಾಶ ಸಿಗಬಹುದು. ಯಾವುದನ್ನೂ ಊಹಿಸಲು ಸಾಧ್ಯವಿಲ್ಲ. ಆದರೆ ಈ ಪಯಣ ತುಂಬಾ ಸೊಗಸಾಗಿದೆ' ಎಂಬ ಸಂತಸ ಹಂಚಿಕೊಳ್ಳುತ್ತದೆ ತಂಡ.
'ಗುಂಪಿನಲ್ಲಿ ಜಗಳವೂ ಇರುತ್ತದೆ. ಸಂಗೀತ, ಕಂಪೆನಿಯಲ್ಲಿ ಸಂಬಳಕ್ಕೆ ಕೆಲಸ ಮಾಡುವ ತರವಲ್ಲ. ಸುತ್ತಮುತ್ತಲ ಜಗತ್ತಿನ ಬಗ್ಗೆ ಮನದ ಭಾವನೆ ಹಂಚಿಕೊಳ್ಳಲು ಸಂಗೀತ ಸುಲಭಮಾರ್ಗ. ಆ ರೀತಿ ಕೆಲಸ ಮಾಡುವಾಗ ಎಲ್ಲರಿಗೂ ಇದು ನಮ್ಮದು ಎನ್ನುವ ಭಾವನೆ ಇರುತ್ತದೆ. ಹಾಗಿರುವಾಗ ಜಗಳ ಸಾಮಾನ್ಯ. ಆದರೆ ಕೊನೆಗೆ ಎಲ್ಲರೂ ಒಮ್ಮತ ನಿರ್ಣಯ ತೆಗೆದುಕೊಳ್ಳುತ್ತೇವೆ' ಎನ್ನುತ್ತದೆ ತಂಡ.
ಸಂಗೀತಾಸಕ್ತಿಯನ್ನು ಗೌರವಿಸುವ ಮನೋಧರ್ಮವಿರುವುದರಿಂದ ಇಂಥದ್ದೇ ಸ್ಥಳ ಎನ್ನದೇ ಎಲ್ಲೆಡೆಯೂ ಕಾರ್ಯಕ್ರಮ ನೀಡಲು ಖುಷಿಯಾಗುತ್ತದೆ. ಆದರೆ ಬೆಂಗಳೂರು ನಮ್ಮೂರು. ಅಲ್ಲಿ ಕಾರ್ಯಕ್ರಮ ನೀಡುವುದು ಮನಸ್ಸಿಗೆ ಇನ್ನಷ್ಟು ಮುದ ನೀಡುತ್ತದೆ' ಎನ್ನುತ್ತಾರೆ ವರುಣ್‌.
ಜಿಂಗಲ್‌ಗಾಗಿ ಕನ್ನಡದಲ್ಲಿ 'ಸ್ವರಾತ್ಮ' ಸಂಗೀತ ಸಂಯೋಜಿಸಿದರೆ, ರಾಜಸ್ತಾನಿಯಲ್ಲಿ 'ಮಾಮೆ ಖಾನ್‌', ಪಂಜಾಬಿನಲ್ಲಿ 'ಇಶ್ಕ್‌ ಬೆಕ್ಟಾರ್‌', ಮರಾಠಿಯಲ್ಲಿ ಸಿದ್ದಾರ್ಥ್‌ ಮಹದೇವನ್‌, ಸೌಮಿಲ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.
ಶ್ರೀನಿವಾಯಪುರ: ನೀರಿನ ಬಿಲ್ ವಿಚಾರದಲ್ಲಿ ಇತ್ತೀಚೆಗೆ ನಡೆದ ಗುಂಪು ಘರ್ಷಣೆ – ಗಾಯಗೊಂಡ ವೆಕ್ತಿ ಸಾವು | ವಿಶ್ವ ಕನ್ನಡಿಗ ನ್ಯೂಸ್
ವಿಪತ್ತು ನಿರ್ವಹಣೆಗೆ ಸಿದ್ಧತೆ ಅಗತ್ಯ: ಶ್ರೀ ಗೋಪಾಲ್‍ಲಾಲ್ ಮೀನಾ 13 hours ago
ಅಕ್ರಮಗಳನ್ನು ವಿರೋಧಿಸುವ ಮೂಲಕ ಸತ್ಕರ್ಮಗಳ ಹಾದಿಯಲ್ಲಿ ನಡೆಯೋಣ: ಅಬೂಝೈದ್ ಶಾಫಿ ಮದನಿ ಕರಾಯ 1 day ago
ಎಸ್ಕೆಎಸ್ಸೆಸ್ಸೆಫ್ ಕುಕ್ಕಾಜೆ ಸರ್ಗಲಯ ಕ್ಲಸ್ಟರ್ ನೂತನ ಸಮಿತಿ ರಚನೆ 1 day ago
Home ರಾಜ್ಯ ಸುದ್ದಿಗಳು ಕೋಲಾರ ಶ್ರೀನಿವಾಯಪುರ: ನೀರಿನ ಬಿಲ್ ವಿಚಾರದಲ್ಲಿ ಇತ್ತೀಚೆಗೆ ನಡೆದ ಗುಂಪು ಘರ್ಷಣೆ – ಗಾಯಗೊಂಡ ವೆಕ್ತಿ ಸಾವು
Posted By: ಕೆಎಸ್ಎಂ ಎಲಿಮಲೆ (ವಿಶ್ವ ಕನ್ನಡಿಗ ನ್ಯೂಸ್)on: May 25, 2020 In: ಕೋಲಾರ
ಶ್ರೀನಿವಾಸಪುರ(ವಿಶ್ವಕನ್ನಡಿಗ ನ್ಯೂಸ್): ತಾಲ್ಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಈಚೆಗೆ ನಡೆದ ಹಲ್ಲೆಯಲ್ಲಿ ಗಾಯಗೊಂಡ ವ್ಯಕ್ತಿ ಭಾನುವಾರ ಮೃತಪಟ್ಟಿದ್ದು, ಇದರಿಂದ ಆಕ್ರೋಶಗಗೊಂಡ ಮೃತ ವ್ಯಕ್ತಿಯ ಕುಟುಂಬಸ್ಥರು ಹಾಗೂ ಬೆಂಬಲಿಗರು ಆರೋಪಿಗಳ 4 ಮನೆಗಳಿಗೆ ಬೆಂಕಿ ಹಚ್ಚಿ, 7 ಬೈಕ್ ಹಾಗೂ 1 ಟ್ರಾಕ್ಟರ್‌ ಸುಟ್ಟುಹಾಕಿದ್ದಾರೆ.
ಮೇ.20 ರಂದು ನೀರಿನ ಬಿಲ್‌ ವಿಚಾರದಲ್ಲಿ ಗ್ರಾಮದ ವೆಂಕಟಕೃಷ್ಣಪ್ಪ ಹಾಗೂ ವೆಂಕಟರೆಡ್ಡಿ ಅವರ ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಘರ್ಷಣೆಯಲ್ಲಿ ಗಾಯಗೊಂಡಿದ್ದ ವೆಂಕಟಕೃಷ್ಣಪ್ಪ (55) ಭಾನುವಾರ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಹಿನ್ನೆಲೆಯಲ್ಲಿ ವೆಂಕಟರೆಡ್ಡಿ ಮತ್ತು ಅವರ ಬೆಂಬಲಿಗರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಇದ್ದು ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.
ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಾಹ್ನವಿ, ಡಿವೈಎಸ್‌ಪಿ ನಾರಾಯಣಸ್ವಾಮಿ, ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ಗಳಾದ ಎನ್‌.ಕೆ.ರಾಘವೇಂದ್ರ ಪ್ರಕಾಶ್‌, ಆಂಜಿನಪ್ಪ, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳಾದ ಪ್ರದೀಪ್‌ ಸಿಂಗ್‌, ವಿಠಲ್‌ ತಳವಾರ್‌, ಶೃತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಣ್ಣನ ಸಿನಿಮಾಕ್ಕೆ ತಮ್ಮನ ಹಾರೈಕೆ | Udayavani – ಉದಯವಾಣಿ