text
stringlengths
0
61.5k
ರಾವಣನಿಗೆ ದುಃಖ ತುಂಬಿ ಬಂದಿತು, ಕೋಪ ಜ್ವಾಲಾಮುಖಿಯಂತೆ ಸ್ಫೋಟಿಸಿತು. ತನ್ನಂತಹ ಅಸಮಾನ ವೀರನ ತಂಗಿಗೆ – ತಮ್ಮನಿಗೆ ಇಂತಹ ಗತಿಯೇ ಎಂದು ಕೆರಳಿದ. ಜೊತೆಗೆ, ಶೂರ್ಪಣಖಿ ಸೀತೆಯ ಸೌಂದರ್ಯವನ್ನು ವರ್ಣಿಸಿದುದನ್ನು ಕೇಳಿ ಕೆಟ್ಟ ಯೋಚನೆಯೊಂದು ಮನಸ್ಸಿನಲ್ಲಿ ಹೊಳೆಯಿತು – ಆಕೆಯನ್ನು ಕದ್ದು ತರಬೇಕು!
ರಾವಣ ಹಲವು ಯೋಚನೆಗಳನ್ನು ಮಾಡಿದ. ಕಡೆಗೆ ಮಾರೀಚ ಎಂಬವನ ಸಹಾಯವನ್ನು ಬೇಡುವುದು ಎಂದು ತೀರ್ಮಾನಿಸಿದ. ಮಾರೀಚ ಅವನ ನೆಂಟ. ಶ್ರೀರಾಮನ ಹೆಸರನ್ನು ಕೇಳುತ್ತಲೇ ಮಾರೀಚನಿಗೆ ಮೈ ನಡುಗಿತು. ರಾಮಬಾಣದ ಮಹಿಮೆಯನ್ನು ಅವನು ರಾವಣನಿಗೆ ವಿವರಿಸಿದ. "ಸೀತೆಯನ್ನು ಕದ್ದು ತರುವುದು ಕೆಟ್ಟ ಯೋಚನೆ. ಇದನ್ನು ಬಿಟ್ಟುಬಿಡು" ಎಂದು ಬುದ್ಧಿ ಹೇಳಿದ.
ರಾವಣನು ಅವನ ಮಾತಿಗೆ ಕಿವಿಗೊಡಲಿಲ್ಲ. ಒಂದೇ ಹಟ ಹಿಡಿದ "ನೀನು ನನ್ನ ಮಾತಿನಂತೆ ನಡೆಯದಿದ್ದರೆ ನಿನ್ನ ಆಯುಷ್ಯ ಮುಗಿಯಿತು. ನಿನ್ನನ್ನು ಕೊಂದುಬಿಡುತ್ತೇನೆ" ಎಂದು ಬೆದರಿಸಿದ. ರಾವಣನಿಗೆ ಬುದ್ಧಿ ಹೇಳಿ ಪ್ರಯೋಜನವಿಲ್ಲ ಎಂದು ಮಾರೀಚನಿಗೆ ಅರ್ಥವಾಯಿತು.
ಸೀತೆಯನ್ನು ತಾನು ಕದಿಯಲು ಶ್ರೀರಾಮನೂ ಲಕ್ಷ್ಮಣನೂ ಆಶ್ರಮವನ್ನು ಬಿಟ್ಟುಹೋಗುವಂತೆ ಮಾಡಬೇಕು ಎಂದು ರಾವಣನ ಯೋಚನೆ. ಅದಕ್ಕಾಗಿ ಒಂದು ಉಪಾಯವನ್ನು ಯೋಚಿಸಿದ್ದ. ಮಾರೀಚನು ಅವನು ಹೇಳಿದಂತೆಯೇ ಮಾಡಿದ.
ಮಾರೀಚನು ಸುಂದರ ಜಿಂಕೆಯಾದ. ಬಂಗಾರದಂತೆ ಥಳಥಳ ಹೊಳೆಯುವ ಮನೋಹರ ಜಿಂಕೆಯಾದ. ಸೀತೆಯ ಮುಂದೆ ಸುಳಿದಾಡಿದ.
ವನದಲ್ಲಿ ಕುಸುಮಗಳನ್ನು ಬಿಡಿಸುತ್ತಿದ್ದ ಸೀತಾದೇವಿ ಆ ಮೃಗವನ್ನು ಕಂಡಳು. ಆಶ್ಚರ್ಯದಿಂದ ಅದನ್ನು ನೋಡುತ್ತಾ, "ರಾಮಚಂದ್ರಾ! ನೋಡು ಬಾ ಇತ್ತ, ಎಂತಹ ರೂಪರಾಶಿ? ಇದನ್ನು ಹಿಡಿದು ಸಾಕಿದರೆ ನಮ್ಮ ಅಯೋಧ್ಯೆಗೆ ಅಲಂಕಾರವಾಗಿರುವುದಲ್ಲವೆ?" ಎಂದಳು.
ಲಕ್ಷ್ಮಣನು "ಅಣ್ಣ! ಇದು ನಿಜವಾದ ಜಿಂಕೆಯಲ್ಲ, ಮಾಯಾಮೃಗ. ರಾಕ್ಷಸಮಾಯೆಗೆ ಮರುಳಾಗಬಾರದು" ಎಂದು ಎಚ್ಚರಿಸಿದ.
ಆದರೆ, ಸೀತೆಯ ಆಸೆಯನ್ನು ಪೂರೈಸಬೇಕು ಎಂದು ಶ್ರೀರಾಮನಿಗೆ ಎನ್ನಿಸಿತು. ಜಿಂಕೆಯನ್ನು ಹಿಡಿದು ತರುವೆನೆಂದು ಅದರ ಹಿಂದೆಯೇ ಹೊರಟ.
ಮಾಯಾಮೃಗವು ಕೈಗೆ ಸಿಗದೆ ಬಹುದೂರಕ್ಕೆ ಶ್ರೀರಾಮನನ್ನು ಕೊಂಡೊಯ್ದಿತು. ಕಡೆಗೆ ಬೇಸರಗೊಂಡು ಶ್ರೀರಾಮನು ಅದರ ಮೇಲೆ ಬಾಣ ಪ್ರಯೋಗ ಮಾಡಿದ. ಶ್ರೀರಾಮನ ಬಾಣ ಮಾರೀಚನಿಗೆ ತಗುಲಿತು. ಅವನು ಪ್ರಾಣ ಬಿಡುವಾಗ "ಹಾ ಲಕ್ಷ್ಮಣಾ! ಹಾ ಸೀತಾ!" ಎಂದು ರಾಮನ ಕಂಠಧ್ವನಿಯನ್ನೇ ಹಿಡಿದು ಚೀತ್ಕಾರ ಮಾಡಿದ.
ಶ್ರೀರಾಮನು ಎಷ್ಟು ಹೊತ್ತಾದರೂ ಬರಲಿಲ್ಲ ಎಂದು ಸೀತಾದೇವಿ ಆತಂಕದಿಂದ ಕಾಯುತ್ತಿದ್ದಳು. ಅವಳ ಕಿವಿಗೆ ಕೇಳಿಸಿತು ಕೂಗು: "ಹಾ ಲಕ್ಷ್ಮಣ! ಹಾ ಸೀತಾ!"
ಇದನ್ನು ಕೇಳುತ್ತಲೇ ಸೀತಾದೇವಿ ಭಯಾಕ್ರಾಂತಳಾಗಿ "ಲಕ್ಷ್ಮಣಾ! ಶ್ರೀರಾಮನಿಗೇಕೋ ಅಪಾಯ ಸಂಭವಿಸಿದೆ. ಬೇಗ ಹೋಗಿ ರಕ್ಷಿಸು" ಅಂದಳು.
ಲಕ್ಷ್ಮಣನು "ತಾಯೇ! ಲೋಕರಕ್ಷಕನಾದ ನಮ್ಮಣ್ಣನಿಗೆ ಅಪಾಯವೆಂದರೇನು? ಇನ್ನೊಬ್ಬರು ರಕ್ಷಿಸುವುದೆಂದರೇನು? ಅಂಜಬೇಡ. ಇದೆಲ್ಲಾ ರಾಕ್ಷಸರ ತಂತ್ರ" ಎಂದು ಸಮಾಧಾನ ಹೇಳಿದ. ಸೀತೆ ಲಕ್ಷ್ಮಣನ ಮಾತನ್ನು ನಂಬಲಿಲ್ಲ. ಲಕ್ಷ್ಮಣ ಎಷ್ಟೋ ರೀತಿಗಳಲ್ಲಿ ಅವಳಿಗೆ ಧೈರ್ಯ ಹೆಳಿದ. ಸೀತೆ ಕೇಳಲಿಲ್ಲ. ಕಡೆಗೆ ಅವಳಿಗೆ ಕೋಪವೇ ಬಂದಿತು. ಲಕ್ಷ್ಮಣನ ಮೇಲೆ ಅನ್ಯಾಯದ ಆಪಾದನೆಗಳನ್ನು ಹೊರಿಸಿ, "ದುರಾಸೆಯಿಂದ ನೀನು ನಮ್ಮನ್ನು ಅನುಸರಿಸಿ ಬಂದಿರುವೆ. ಅಣ್ಣನು ಮಹಾ ವಿಪತ್ತಿಗೆ ಸಿಕ್ಕಿರುವಾಗ ಜಾಗ್ರತನಾಗದೆ ವೃಥಕಾಲಹರಣ ಮಾಡುತ್ತಿರುವೆ. ನಿನ್ನ ದ್ರೋಹ ಚಿಂತನೆಗೆ ನಾನೆಂದಿಗೂ ಒಪ್ಪುವವಳಲ್ಲ" ಎಂದು ಕಠಿಣವಾಗಿ ನುಡಿದು ಅಳತೊಡಗಿದಳು. ಲಕ್ಷ್ಮಣನಿಗೆ ಆ ನಿಂದೆಯನ್ನು ಸಹಿಸಲಾಗಲಿಲ್ಲ. ಸೀತೆಯೊಬ್ಬಳನ್ನೆ ಬಿಟ್ಟು ಹೋದರೆ ಅವಳಿಗೆ ಏನು ಅಪಾಯವಾಗುವುದೊ ಎಂದು ಅವನಿಗೆ ಹೆದರಿಕೆ. ಸೀತೆಯನ್ನು ರಕ್ಷಿಸುವಂತೆ ವನದ ದೇವತೆಗಳನ್ನು ಕೈಮುಗಿದು ಬೇಡಿದ. ಅತ್ತಿಗೆ ಪಾದಗಳಿಗೆ ನಮಸ್ಕರಿಸಿ ಇಷ್ಟವಿಲ್ಲದೆ ಲಕ್ಷ್ಮಣನು ಆ ಸ್ಥಳವನ್ನು ಬಿಟ್ಟನು.
ಸೀತೆ ಒಬ್ಬಳೇ ಉಳಿದಳು. ಚಿಂತೆಯಲ್ಲಿ ಮುಳುಗಿದಳು.
ಯಾರು ಈ ಸಂನ್ಯಾಸಿ
ಸಂನ್ಯಾಸಿಯೊಬ್ಬ ಆಶ್ರಮದ ಬಾಗಿಲಿಗೆ ಬಂದ.
ತಲೆಯಲ್ಲಿ ಜಟೆ, ಕೈಯಲ್ಲಿ ದಂಡ ಕಮಂಡಲು, ಮೈಮೇಲೆ ಕಾವಿಯ ಬಟ್ಟೆ, ಬಾಯಿಯಲ್ಲಿ ವೇದದ ಮಂತ್ರಗಳು.
ಸೀತಾದೇವಿ ತಲೆ ಎತ್ತಿ ನೋಡಿದಳು.
ಸಂನ್ಯಾಸಿಯು "ಇಷ್ಟು ಸುಂದರಿಯಾದ ನೀನು ಕಾಡಿನಲ್ಲಿ ಒಬ್ಬಳೇ ಏಕೆ ದುಃಖಪಡುತ್ತಿದ್ದೀಯೆ?" ಎಂದು ಕೇಳಿದನು.
ಸೀತೆ ಪೂಜ್ಯನಾದ ಸಂನ್ಯಾಸಿ ಬಂದಿದ್ದಾನೆ ಎಂದು ಅವನಿಗೆ ಸತ್ಕಾರ ಮಾಡಿದಳು. ತನ್ನ ಕಥೆಯನ್ನೆಲ್ಲ ಹೇಳಿಕೊಂಡಳು.
ರಾವಣನೇ ಸಂನ್ಯಾಸಿಯ ವೇಷದಲ್ಲಿ ಬಂದಿದ್ದಾನೆ ಎಂದು, ಪಾಪ, ಸೀತಾದೇವಿಗೆ ತಿಳಿಯಲಿಲ್ಲ.
ಸಂನ್ಯಾಸಿ ಹೇಳಿದ: "ನಾನು ರಾವಣೇಶ್ವರ, ಮೂರು ಲೋಕಗಳೂ ನನ್ನ ಹೆಸರನ್ನು ಕೇಳಿದರೇ ನಡುಗುತ್ತವೆ. ನಿನ್ನಂತಹ ಸುಂದರಿಯನ್ನು ನಾನು ನೋಡಿಯೇ ಇಲ್ಲ ನೀನು ನನ್ನ ಪಟ್ಟದ ರಾಣಿಯಾಗು, ಸುಖ ಸಂತೋಷಗಳಿಂದ ಬಾಳು."
ಸೀತಾದೇವಿ ಈ ಮಾತುಗಳನ್ನು ಕೇಳಿ ಕೆಂಡಕೆಂಡವಾದಳು. "ಅಯ್ಯೋ ಪಾಪಿ, ನಾನು ಪುರುಷಸಿಂಹನಾದ ಶ್ರೀರಾಮನ ಹೆಂಡತಿ. ನನ್ನನ್ನು ಮುಟ್ಟುವುದು ಉರಿಯುವ ಬೆಂಕಿಯನ್ನು ಬಟ್ಟೆಯಲ್ಲಿ ಕಟ್ಟಿದಂತೆ" ಎಂದು ಛೀಮಾರಿ ಹಾಕಿದಳು.
ಅವಳು ಎಷ್ಟು ಬೈದರೂ, ಅತ್ತರೂ ರಾವಣ ಬಿಡಲಿಲ್ಲ. ಆಕೆಯನ್ನು ಹಿಡಿದೆತ್ತಿ ತನ್ನ ರಥದಲ್ಲಿ ಹಾಕಿಕೊಂಡು ಹೊರಡಲನುವಾದ. ಸೀತಾದೇವಿ ಅವನನ್ನು ಬಗೆಬಗೆಯಾಗಿ ನಿಂದಿಸಿದಳು. ತನ್ನ ರಕ್ಷಣೆಗಾಗಿ ತರುಗಳನ್ನು, ಗಿರಿಗಳನ್ನು, ನದಿಗಳನ್ನು, ವನ್ಯಜೀವಿಗಳನ್ನೆಲ್ಲಾ ಅಂಗಲಾಚಿದಳು.
ಸೀತಾದೇವಿಯ ಆರ್ತಸ್ವರವನ್ನು ಕೇಳಿ ಮರದ ಮೇಲೆ ನಿದ್ರಿಸುತ್ತಿದ್ದ ಜಟಾಯುವಿಗೆ ಎಚ್ಚರವಾಯಿತು. ಅವನು ಥಟ್ಟನೆ ಹಾರಿಬಂದು ರಥವನ್ನು ಅಡ್ಡಗಟ್ಟಿದ. ರಥವನ್ನೂ ಸಾರಥಿಯನ್ನೂ ತನ್ನ ರೆಕ್ಕೆಗಳಿಂದ ಬಡಿದು ಕೊಕ್ಕಿನಿಂದ ತಿವಿದು ನಾಶಮಾಡಿದ. ರಾವಣಿಗೆ ಮಿತಿ ಮೀತಿ ಕೋಪ ಬಂದಿತು. ಆ ಪಕ್ಷಿರಾಜನೊಂದಿಗೆ ಹೋರಾಡುತ್ತಾ ಕಡೆಗೆ ಅವನ ರೆಕ್ಕೆಗಳನ್ನು ಕಡಿದು ಹಾಕಿದ. ನೆಲಕ್ಕೆ ಬಿದ್ದ ಜಟಾಯುವನ್ನು ಕಂಡು ಸೀತಾದೇವಿಯ ದುಃಖ ಹೆಚ್ಚಿತು. ರಾವಣನು ತಡಮಾಡದೆ ಆಕೆಯನ್ನೆತ್ತಿಕೊಂಡು ಗಗನಕ್ಕೆ ಹಾರಿದ.
ಸೀತೆ ಎಲ್ಲಿ?
ಮಾರೀಚನ ಆರ್ತಸ್ವರವನ್ನು ಕೇಳಿದಾಗಲೇ ಶ್ರೀರಾಮನಿಗೆ ಇದೇನೋ ವಿಪತ್ತು ಸಂಭವಿಸಿತೆಂದು ತೋರಿತು. ಬೇಗಬೇಗ ಹೆಜ್ಜೆ ಹಾಕುತ್ತ ಹಿಂದಕ್ಕೆ ಹೊರಟ. ಮಾರ್ಗಮಧ್ಯದಲ್ಲಿ ಲಕ್ಷ್ಮಣನು ಸಿಕ್ಕಿದ. ಶ್ರೀರಾಮನ ಸಂದೇಹ ಭಯಗಳಿನ್ನೂ ಹೆಚ್ಚಾದುವು, ಅಪಶಕುನಗಳಾದುವು. "ತಮ್ಮಾ! ಇದೇನು? ನೀನೇಕೆ ಬಂದೆ? ಸೀತೆಯ ಗತಿಯೇನು? ನಾವು ಹೋಗುವ ವೇಳೆಗೆ ಆಕೆಯು ಜೀವದಿಂದಿರುವಳೇ? ನಮಗೆ ಕಾಣಸಿಗುವಳೇ?" ಎಂದು ಹಂಬಲಿಡುತ್ತಾ ಆಶ್ರಮದ ಬಳಿಗೆ ಬಂದು ದೇವೀ! ಜಾನಕೀ!" ಎಂದು ದೀನವಾಣಿಯಲ್ಲಿ ಕೂಗಿದನು. ಉತ್ತರವಿಲ್ಲ, ಆಶ್ರಮವು ಬರಿದು. ಶ್ರೀರಾಮನು ಸೀತೆಯನ್ನು ಎಲ್ಲೆಡೆಗಳಲ್ಲಿಯೂ ಹುಡುಕಿದ. "ಎಲೆ ಮೃಗಗಳಿರಾ, ಪಕ್ಷಿಗಳಿರಾ! ಜಾನಕಿಯನ್ನು ಕಂಡಿರಾ! ಆಕೆ ಎಲ್ಲಿ ಹೋದಳೋ ತಿಳಿಸಿ" ಎಂದು ಮೊರೆಯಿಡುತ್ತಾ ಅಲೆದಾಡಿದ. ಹೀಗೆ ಅಲೆಯುವಾಗ ಸೀತೆ ಮುಡಿದಿದ್ದ ಕುಸುಮಗಳು ಬಿದ್ದಿದ್ದು ಕಾಣಿಸಿದವು. ಜಟಾಯು ಗುಟುಕು ಜೀವದಿಂದ ಕೊರಗುತ್ತು ಬಿದ್ದಿದ್ದ. ಶ್ರೀರಾಮನಿಗೆ ಸೀತಾಪಹರಣ ವಾರ್ತೆಯನ್ನು ತಿಳಿಸುವುದಕ್ಕಾಗಿಯೇ ಪ್ರಾಣವನ್ನು ಬಿಗಿ ಹಿಡಿದಿದ್ದ ಆ ಪಕ್ಷಿರಾಜ, "ರಘುರಾಮಾ! ಲಂಕೇಶ್ವರನಾದ ರಾವಣನು ಸೀತಾದೇವಿಯನ್ನು ಅಪಹರಿಸಿಕೊಂಡು ಹೋದ. ಆಕೆಯ ರಕ್ಷಣೆಗಾಗಿ ಹೋರಾಡಿದೆ. ನನ್ನನ್ನು ಇಂತಹ ಅವಸ್ಥೆಗೆ ಗುರಿಮಾಡಿದವನು ಅವನೇ!" ಎನ್ನುತ್ತಾ ಪ್ರಾಣಬಿಟ್ಟ.
ರಾಮ ಲಕ್ಷ್ಮಣರಿಗೆ ಬಹು ದುಃಖವಾಯಿತು. ಶಾಸ್ತ್ರೀಯವಾಗಿ ಜಟಾಯುವನ್ನು ದಹನ ಮಾಡಿದರು.
ರಾವಣಾ, ನಿನಗೆ ಆಯಸ್ಸು ಮುಗಿದಿದೆ.
ರಾವಣನು ಸೀತೆಯನ್ನು ಎತ್ತಿಕೊಂಡು ಓಡಿ ಲಂಕೆಯನ್ನು ಸೇರಿದನು. ಅವಳಿಗೆ ತನ್ನ ಅರಮನೆಯನ್ನೂ ಐಶ್ವರ್ಯವನ್ನೂ ತೋರಿಸಿದನು. ತನ್ನ ರಾಕ್ಷಸರ ಸೈನ್ಯವನ್ನು ತೋರಿಸಿದನು. "ನೋಡು, ಇಲ್ಲಿಗೆ ರಾಮ ಬರಲಾರ. ಅವನನ್ನು ಮರೆತುಬ ಇಡು. ನನ್ನಂತಹ ಪರಾಕ್ರಮಶಾಲಿ, ಐಶ್ವರ್ಯವಂತ ಯಾರಿದ್ದಾರೆ? ನನ್ನ ರಾಣಿಯಾಗಿ ಸುಖವಾಗಿರು" ಎಂದನು.
ಸೀತೆಗೆ ರಾವಣನ ಜೊತೆಗೆ ಮಾತನಾಡಲೂ ಇಷ್ಟವಿರಲಿಲ್ಲ. ಒಂದು ಹುಲ್ಲುಕಡ್ಡಿಯನ್ನು ಕೈಯಲ್ಲಿ ಹಿಡಿದು ಅದನ್ನು ನೋಡುತ್ತ ಹೇಳಿದಳು: "ರಾವಣಾಸುರ, ಶ್ರೀರಾಮನು ಇಲ್ಲದಿದ್ದಾಗ ಕಳ್ಳತನದಲ್ಲಿ ನನ್ನನ್ನು ಎತ್ತಿಕೊಂಡು ಬಂದೆ. ಅವನು ಇದಿರಿನಲ್ಲಿ ಇದ್ದಿದ್ದರೆ ನೀನು ಪುಡಿಪುಡಿಯಾಗುತ್ತಿದ್ದೆ. ನಿನಗೆ ಆಯ೮ಸ್ಸು ಮುಗಿದಿದೆ ಎಂದು ತೋರುತ್ತದೆ."
ರಾವಣನು ಕೋಪದಿಂದ ಹಲ್ಲು ಕಡಿದನು. ಸೀತಾದೇವಿಯನ್ನ ಅಶೋಕವನದಲ್ಲಿಟ್ಟನು. ಅವಳ ಕಾವಲಿಗೆ ರಾಕ್ಷಸಿಯರನ್ನು ನೇಮಿಸಿದನು.
ಶ್ರೀರಾಮನೂ ಲಕ್ಷ್ಮಣನೂ ಸೀತೆಯನ್ನು ಹುಡುಕುತ್ತಾ ಅಲೆದಾಡಿದರು. ಹೀಗೆ ಅಲೆಯುವಾಗ ಋಷ್ಯಮೂಕ ಎಂಬ ಪರ್ವತದ ಬಳಿಗೆ ಬಂದರು. ಆ ಪರ್ವತದ ಮೇಲಿಂದ ಇವರನ್ನು ನೋಡಿ ಸುಗ್ರೀವ ಎಂಬ ಕಪಿರಾಜನು ತನ್ನ ಆಪ್ತಮಂತ್ರಿಯಾದ ಆಂಜನೇಯನನ್ನು ಕಳಿಸಿ ಇವರನ್ನು ತನ್ನಲ್ಲಿಗೆ ಬರಮಾಡಿಕೊಂಡನು.
ತನ್ನ ಅಣ್ಣನಾದ ವಾಲಿಯಿಂದ ಸುಗ್ರೀವನು ರಾಜ್ಯ ಭ್ರಷ್ಟನಾಗಿದ್ದನು. ಅವನ ಹೆಂಡತಿಯನ್ನೂ ವಾಲಿಯು ತನ್ನವಳನ್ನಾಗಿ ಮಾಡಿಕೊಂಡಿದ್ದನು. ಈ ದುಃಖವನ್ನು ರಾಮನಲ್ಲಿ ತಿಳಿಸಿ ಅವನು ರಾಮನ ಸಹಾಯವನ್ನು ಬೇಡಿದನು. ಶ್ರೀರಾಮನೂ ತನ್ನ ದುಃಖವನ್ನು ಹೇಳಿಕೊಂಡು ಸುಗ್ರೀವನ ಸಹಾಯವನ್ನು ಕೇಳಿದನು. ಒಬ್ಬರಿಗೊಬ್ಬರು ಸಹಾಯ ಮಾಡಲು ಮಾತು ಕೊಟ್ಟರು. ಅಗ್ನಿಸಾಕ್ಷಿಯಾಗಿ ಇವರು ಸ್ನೇಹಿತರಾದರು.
ಶ್ರೀರಾಮನು ವಾಲಿಯನ್ನು ಕೊಂದು ಸುಗ್ರೀವನನ್ನು ರಾಜನನ್ನಾಗಿ ಮಾಡಿದನು. ಸುಗ್ರೀವನು ಸೀತಾದೇವಿಯನ್ನು ಹುಡುಕಲು ನಾಲ್ಕು ದಿಕ್ಕುಗಳಿಗೂ ತನ್ನ ಸೈನ್ಯವನ್ನು ಕಳುಹಿಸಿದನು. ಶ್ರೀರಾಮನು ಆಂಜನೇಯನನ್ನು ಹತ್ತಿರಕ್ಕೆ ಕರೆದು "ವಾಯು ಕುಮಾರಾ! ಈ ಸಂದರ್ಭದಲ್ಲಿ ನೀನು ಕೃತಕಾರ್ಯನಾಗಿ ಬರುವೆಯೆಂದು ನನಗೆ ನಂಬಿಕೆಯಿದೆ. ಲಂಕೆಗೆ ಹೋಗಲು ನೀನೊಬ್ಬನೇ ಸಮರ್ಥನು. ಅಲ್ಲಿ ಸೀತೆಯನ್ನು ನೋಡಿದಾಗ ನಮ್ಮ ಕುಶಲವನ್ನು ತಿಳಿಸು. ಗುರುತಿಗಾಗಿ ಈ ಮುದ್ರೆಯುಂಗುರವನ್ನು ಆಕೆಗೆ ಕೊಡು" ಎಂದು ಹರಸಿದನು. ತನ್ನ ಉಂಗುರವನ್ನು ಅವನಿಗೆ ಕೊಟ್ಟನು.
ವಾನರ ಸೈನ್ಯ ಸಮುದ್ರತೀರಕ್ಕೆ ಬಂದಿತು.
ಅಗಾಧವಾದ ಈ ಸಮುದ್ರವನ್ನು ದಾಟುವುದು ಹೇಗೆ? ಹಾರಬೇಕು. ಅಷ್ಟು ಸಾಮರ್ಥ್ಯ ನಮ್ಮಲ್ಲಿ ಯಾರಿಗುಂಟು? ಎಂದು ವಿಚಾರಮಾಡಿ ಎಲ್ಲರೂ ಒಮ್ಮತದಿಂದ ಆಂಜನೇಯನೊಬ್ಬನೇ ಇದಕ್ಕೆ ಸಮರ್ಥನೆಂದು ತೀರ್ಮಾನಿಸಿದರು. ಅವರೆಲ್ಲರ ಇಷ್ಟದಂತೆ ಆಂಜನೇಯನು ವಾಯುವೇಗದಿಂದ ನೂರು ಯೋಜನದ ಸಮುದ್ರವನ್ನು ಲಂಘಿಸಿ ಲಂಕೆಗೆ ಬಂದನು. ರಾವಣನ ಅಂತಃಪುರವನ್ನು ಹೊಕ್ಕು ಅಲ್ಲೆಲ್ಲ ಹುಡುಕಿದನು. ಕಡೆಗೆ ಸೀತೆಯನ್ನು ಅಶೋಕವನದಲ್ಲಿ ಕಂಡನು.
'ಭಾಗ್ಯವೋ ಬಡತನವೋ ರಾಮನ ಜೊತೆಗೇ
ಒಂದು ಶಿಂಶುಪಾ ವೃಕ್ಷದ ಕೆಳಗೆ ಶ್ರೀರಾಮನ ಪ್ರಿಯಸತಿ ಕುಳಿತಿದ್ದಾಳೆ. ದುಃಖದಿಂದ ದೇಹ ಸಣ್ಣಗಾಗಿದೆ. ಮಾಸಿದ ಸೀರೆ. ಬರಿ ನೆಲದ ಮೇಲೆ ಕುಳಿತಿದ್ದಾಳೆ. ಎಡೆಬಿಡದೆ ಕಣ್ಣೀರುಗರೆಯುತ್ತಾ "ರಾಮಚಂದ್ರಾ" ಕೃಪಾನಿಧೇ! ನನ್ನೀ ದುರ್ಗತಿಯನ್ನು ನೀನು ತಿಳಿಯಲಾರೆಯಾ? ಈ ಹತಭಾಗಿನಿಗೆ ನಿನ್ನನ್ನು ನೋಡುವ ಭಾಗ್ಯವಿರುವುದೋ ಇಲ್ಲವೋ!" ಎಂದು ಹಲಬುತ್ತಿದ್ದಾಳೆ. ಆಕೆಯ ಸುತ್ತ ವಿಕಾರರೂಪದ ರಕ್ಕಸಿಯರು, "ರಾಮನನ್ನು ಮರೆತುಬಿಡು. ಮಹಾವೀರನೂ ಭಾಗ್ಯವಂತನೂ ಆದ ರಾವಣನನ್ನು ವರಿಸು. ಆತನ ಇಷ್ಟದಂತೆ ನಡೆದರೆ ಎಂತಹ ವೈಭವದಿಂದ ಬಾಳಬಹುದು! ತಿರಸ್ಕರಿಸಿದರೆ ನಿನ್ನ ಬಾಳು ಮುಗಿಯಿತು" ಎಂದು ಪೀಡಿಸುತ್ತಿದ್ದಾರೆ. ಸೀತೆ "ನಾನು ಕನಸಿನಲ್ಲೂ ಪರಪುರುಷನನ್ನು ಸ್ಮರಿಸುವುದಿಲ್ಲ. ಎಡಗಾಲಿನಿಂದಲೂ ಸ್ಪರ್ಶಿಸುವುದಿಲ್ಲ" ಎಂದು ಖಂಡಿತವಾಗಿ ಹೇಳುತ್ತಿದ್ದಾಳೆ.
ಆಂಜನೇಯನು ಗಿಡದ ಮೇಲೆ ಕುಳಿತು ಎಲ್ಲವನ್ನೂ ನೋಡುತ್ತಿದ್ದ, ಕೇಳುತ್ತಿದ್ದ.
ಬೆಳಗಾಗುತ್ತಲೇ ಅಲ್ಲಿಗೆ ರಾವಣನೂ ಬಂದ. ಪದ್ಧತಿಯಂತೆ ಅವನೊಂದಿಗೆ ಅಂತಃಪುರಸ್ತ್ರೀಯರೂ ಬಂದರು.
ರಾವಣನು "ಸೀತೆ, ಮಾಸಿದ ಸೀರೆಯುಟ್ಟು ಉಪವಾಸ ಮಾಡುತ್ತ ಹೀಗೇಕೆ ಕಷ್ಟಪಡುತ್ತಿ? ನಾನು ಮೂರು ಲೋಕದ ರಾಜ. ನನ್ನ ಅರಮನೆ, ಐಶ್ವರ್ಯ, ವೈಭವ ಎಲ್ಲ ನಿನ್ನದು, ಅರಮನೆಗೆ ಬಾ. ಕಾಡಿನಲ್ಲಿ ತಪಸ್ವಿಯಂತೆ ವಾಸಿಸುವ ರಾಮನು ಬದುಕಿರುವನೋ, ಸತ್ತೇಹೋದನೋ! ಅವನನ್ನು ಮರೆತುಬಿಡು" ಎಂದ.
ಸೀತೆ ಒಂದು ಹುಲ್ಲುಕಡ್ಡಿಯನ್ನು ಮುಂದಿಟ್ಟುಕೊಂಡು ಹೇಳಿದಳು: "ಅಯ್ಯಾ, ನಾನು ಶ್ರೀರಾಮನ ಹೆಂಡತಿ. ಭಾಗ್ಯವೋ ಬಡತನವೋ ಅವನ ಜೊತೆಗೇ ನನಗಿರಲಿ. ನಾನು ನಿನ್ನ ಕಡೆ ನೋಡುವುದೂ ಇಲ್ಲ. ನನ್ನನ್ನು ಹೊತ್ತು ತಂದು ನೀನೂ ನಿನ್ನ ಕುಲವೂ ಹಾಳಾಗುವಂತೆ ಮಾಡಿಕೊಂಡೆ."
ರಾವಣನು ಇನ್ನೂ ಅವಳನ್ನು ಮಾತನಾಡಿಸಲು ಹೋದ. ಮೂರು ಲೋಕಗಳೂ ರಾವಣನೆಂದರೆ ನಡುಗುತ್ತಿದ್ದವು. ಅಂತಹ ಪರಾಕ್ರಮಿ ಅವನು. ಆದರೆ ಅವಳು ಅವನನ್ನು ಹೇಡಿ, ಪಾಪಿ ಎಂದು ತಿರಸ್ಕರಿಸಿದಳು.
ರಾವಣನಿಗೆ ಕೋಪ ಬಂದಿತು. ಅವಳನ್ನು ಕೊಂದುಬಿಡುತ್ತೇನೆ ಎಂದು ನುಗ್ಗಿದ. ಧಾನ್ಯಮಾಲಿನಿ ಎಂಬ ಅವನ ಹೆಂಡತಿ ಅವನನ್ನು ತಡೆದಳು. ರಾವಣನು ಸೀತೆಗೆ ಎರಡು ತಿಂಗಳ ಅವಕಾಶ ಕೊಟ್ಟ. "ಅಷ್ಟರಲ್ಲಿ ನೀನು ಮನಸ್ಸು ಬದಲಾಯಿಸದೆ ಹೋದರೆ ನಿನ್ನನ್ನು ತಿಂದುಬಿಡುತ್ತೇನೆ" ಎಂದು ಗುಡುಗಿ ಹಿಂದಕ್ಕೆ ಹೋದ.
ರಾವಣನು ಹೋದನಂತರ ರಾಕ್ಷಸಿಯರು ಮನಬಂದಂತೆ ಮಾತನಾಡುತ್ತಾ ಸೀತೆಯನ್ನು ಪೀಡಿಸತೊಡಗಿದರು. ಸೀತಾದೇವಿಗೆ ಬಹು ದುಃಖವಾಯಿತು. ರಾಕ್ಷಸರು ಆಹಾರಕ್ಕಾಗಿ ತನ್ನ ದೇಹವನ್ನು ಕಿತ್ತು ಮೊದಲು ತಾನೇ ತನ್ನ ಜೀವನವನ್ನು ಮುಗಿಸುವುದು ಒಳ್ಳೆಯದು ಎಂದು ನಿಶ್ಚಯಿಸಿದಳು. ಆಗ ತ್ರಿಜಟೆಯೆಂಬ ಮುದಿ ರಕ್ಕಸಿಯೊಬ್ಬಳು ತನ್ನವರನ್ನು ಗದರಿಸಿದಳು. ತನಗಾದ ಒಂದು ಕೆಟ್ಟ ಸ್ವಪ್ನವನ್ನು ತಿಳಿಸಿ, "ಈ ಪತಿವ್ರತೆಯನ್ನು ಹೀಗೆ ಹಿಂಸೆ ಮಾಡಬೇಡಿ. ಲಂಕೆಗೆ ಮಹಾವಿಪತ್ತು ಸಂಭವಿಸಲಿದೆ. ಆಕೆಯ ಕ್ಷೆಮೆಬೇಡಿ" ಅಂದಳು. ಅವರೆಲ್ಲ ಸುಮ್ಮನಾಗಿ ಮಲಗಿದರು.
ಸಂತೋಷದ ಅರುಣೋದಯ
ಮರದ ಮೇಲಿಂದ ಹನುಮಂತನು ಇದನ್ನೆಲ್ಲ ಕಣ್ಣಾರೆ ನೋಡಿದ. ಶ್ರೀರಾಮನ ಗುಣಗಾನ ಮಾಡುತ್ತಾ ಮರದಿಂದಿಳಿದು ಸೀತಾದೇವಿಯ ಮುಂದೆ ನಿಂತ.
ಸೀತಾದೇವಿ ಬೆಚ್ಚಿದಳು. ಇದೂ ರಾವಣನ ತಂತ್ರ ಎಂದು ಹೆದರಿದಳು. ಆದರೆ ಆಂಜನೇಯನು ಪ್ರಮಾಣಮಾಡಿ ನಿಜರೂಪವನ್ನೂ ತೋರಿದ ಮೇಲೆ ಆಕೆಗೆ ನಂಬಿಕೆಯಾಯಿತು. ಆಂಜನೇಯನು ರಾಮ ಲಕ್ಷ್ಮಣರ ಕುಶಲವನ್ನು ತಿಳಿಸಿ ಮುದ್ರೆಯುಂಗುರವನ್ನು ಒಪ್ಪಿಸಿದ. ಸೀತಾದೇವಿಗೆ ತುಂಬಾ ಸಂತೋಷವಾಯಿತು. ಉಂಗುರವನ್ನು ಕಣ್ಣಿಗೊತ್ತಿಕೊಂಡಳು. ವಿವರವಾಗಿ ತನ್ನ ವಿಷಯವನ್ನೆಲ್ಲಾ ಆಂಜನೇಯನಿಗೆ ತಿಳಿಸಿದಳು. "ಎರಡು ತಿಂಗಳೊಳಗೆ ಶ್ರೀರಾಮನು ಬರದಿದ್ದರೆ ನನ್ನ ಆಯುಷ್ಯ ಮುಗಿದ ಹಾಗೆಯೇ. ಹೇಗಾದರೂ ಅಷ್ಟರೊಳಗೆ ನನ್ನನ್ನು ಬಿಡುಗಡೆ ಮಾಡಬೇಕು ಎಂದು ಶ್ರೀರಾಮನಿಗೆ ಹೇಳು" ಎಂದಳು.
ಹನುಮಂತನು "ತಾಯೇ! ಅದುವರೆಗೆ ಕಾಯುವುದೇಕೆ? ಈಗಲೇ ನಾನು ನನ್ನ ಹೆಗಲ ಮೇಲೆ ಕೂರಿಸಿಕೊಂಡು ವಾಯುವೇಗದಲ್ಲಿ ಶ್ರೀರಾಮನೆಡೆಗೆ ಕೊಂಡೊಯ್ಯುತ್ತೇನೆ" ಎಂದನು. ದೇವಿಯು ಅದನ್ನು ಒಪ್ಪಲಿಲ್ಲ. "ಆಂಜನೇಯ, ಅದು ಶ್ರೀರಾಮನ ಕರ್ತವ್ಯ, ಅದಕ್ಕೆ ಕೊರತೆಯುಂಟಾಗಬಾರದು. ಆತನು ಬರುವವರೆಗೆ ಹೇಗಾದರೂ ನಾನು ಕಷ್ಟವನ್ನು ಸಹಿಸುತ್ತೇನೆ. ಗುರುತಿಗಾಗಿ ಇದನ್ನು ನನ್ನ ಪತಿಗೆ ಕೊಡು" ಎಂದು ಚೂಡಾಮಣಿ ಎಂಬ ಒಡವೆಯನ್ನು ಕೊಟ್ಟು ಹನುಮಂತನನ್ನು ಆಶೀರ್ವಾದಿಸಿ ಕಳುಹಿಸಿದಳು.
ಸ್ವಲ್ಪವೂ ಕಾಲಹರಣ ಮಾಡದೆ ಶ್ರೀರಾಮನು ಕಪಿ ವೀರರೊಂದಿಗೆ ಲಂಕೆಗೆ ಹೊರಟನು. ಸಮುದ್ರವನ್ನು ದಾಟಲು ಸೇತುವೆ ನಿರ್ಮಾಣವಾಯಿತು.
ರಾಮನ ಸೈನ್ಯಕ್ಕೂ ರಾವಣನ ಸೈನ್ಯಕ್ಕೂ ಬಹು ಘೋರವಾದ ಯುದ್ಧ ನಡೆಯಿತು. ರಾವಣನೂ ಅಸಾಧಾರಣ ಪರಾಕ್ರಮಿ. ಆವನ ಮಗ ಇಂದ್ರಜಿತು, ತಮ್ಮ ಕುಂಬಕರ್ಣ, ಸೇನಾಪತಿ ಪ್ರಹಸ್ತ ಮೊದಲಾದವರೂ ಶೂರರು. ಅವರೆಲ್ಲ ದೃಢಮನಸ್ಸಿನಿಂದ ಹೋರಾಡಿದರು. ಆದರೆ ರಾವಣನ ಸೈನ್ಯಕ್ಕೆ ಸೋಲಿನ ಮೇಲೆ ಸೋಲಾಯಿತು. ಪ್ರಹಸ್ತ, ಇಂದ್ರಜಿತು, ಕುಂಭಕರ್ಣ ಎಲ್ಲ ಸತ್ತರು. ರಾವಣನು ಅಷ್ಟೆಲ್ಲಾ ಸರ್ವನಾಶವಾಗಿದ್ದರೂ ತನ್ನ ಹಟವನ್ನು ಬಿಡಲಿಲ್ಲ. ಕಡೆಗೆ ರಾಮನೊಂದಿಗೆ ಕಾದಾಡಿದ. ಅವನ ಯುದ್ಧ ಭಯಂಕರವಾಗಿತ್ತು. ಕಡೆಗೆ ರಾವಣ ಸತ್ತುಬಿದ್ದ. ಶ್ರೀರಾಮನು ರಾವಣನ ತಮ್ಮ ವಿಭೀಷಣನಿಗೆ ಲಂಕಾರಾಜ್ಯವನ್ನು ಕೊಟ್ಟ. ಇದೆಲ್ಲ ಮುಗಿದ ಮೇಲೆ ಶ್ರೀರಾಮನ ಮಾತಿನಂತೆ ವಿಭೀಷಣು ಸೀತಾದೇವಿಯನ್ನು ರಾಮನ ಬಳಿಗೆ ಕರೆತಂದ.
'ಎಲ್ಲಿಯಾದರೂ ಹೋಗು'
ಸೀತಾದೇವಿ ರಾಮನ ಧ್ಯಾನದಲ್ಲಿಯೇ ಕಾಲ ಕಳೆದಿದ್ದಳು. ರಾವಣನ ಅಸಹ್ಯದ ಮಾತುಗಳು, ಬೆದರಿಕೆ, ರಾಕ್ಷಸಿಯರ ಗರ್ಜನೆ, ಮೂದಲಿಕೆ ಎಲ್ಲವನ್ನೂ ಸಹಿಸಿದ್ದಳು. ರಾಮನು ಬರುತ್ತಾನೆ, ರಾವಣನನ್ನು ಗೆದ್ದು ತನ್ನನ್ನು ಬಿಡಿಸಿಕೊಳ್ಳುತ್ತಾನೆ. ಮತ್ತೆ ತಾನು ಸಂತೋಷವನ್ನು ಕಾಣುತ್ತೇನೆ ಎಂದು ನೆಚ್ಚಿದ್ದಳು.
ರಾಮನು ಗೆದ್ದ, ರಾವಣನು ಸತ್ತ.
ಆದರೆ ಸೀತೆಗೆ ಸಂತೋಷ ಲಭ್ಯವಾಗಲಿಲ್ಲ.
ವಿಭೀಷನು ಸೀತೆಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿಕೊಂಡು ಬಂದನು.
ಸುಗ್ರೀವನ ಸೈನ್ಯ, ವಿಭೀಷಣನ ಸೈನ್ಯ ನಿಂತಿವೆ.
ಸೀತಾದೇವಿ ಪಲ್ಲಕ್ಕಿಯಿಂದ ಇಳಿದಳು. ಶ್ರೀರಾಮನ ಬಳಿಗೆ ಹೋದಳು. 'ಆರ್ಯಪುತ್ರ!' ಎಂದಷ್ಟೆ ನುಡಿದಳು. ಸಂತೋಷದಿಂದ ಗಂಟಲು ಕಟ್ಟಿತು.
ಶ್ರೀರಾಮನು ಆಕೆಗೆ ಹೇಳಿದ: "ಎಲೆ ಕಲ್ಯಾಣಿ! ನೀನು ನಿರ್ಬಂಧದಿಂದ ಮುಕ್ತಳಾಗಿರುವೆ. ರಾಜಧರ್ಮವನ್ನು ಹಿಡಿದು ನಾನು ನಿನ್ನನ್ನು ಬಿಡಿಸಲು ಬಂದೆ. ನಿನ್ನ ಮೇಲಿನ ಮೋಹದಿಂದಲ್ಲ. ರಾಕ್ಷಸನ ವಶದಲ್ಲಿ ವರ್ಷಕಾಲವಿದ್ದ ನಿನ್ನನ್ನು ಮೊದಲಿನಂತೆ ಹೆಂಡತಿ ಎಂದು ನಾನು ಕರೆದುಕೊಳ್ಳಲಾರೆ. ಈಗ ನೀನು ಸ್ವತಂತ್ರಳು. ಎಲ್ಲಿಯಾದರೂ ಹೋಗಿ ಬದುಕು."
ಶ್ರೀರಾಮನಂತಹ ದಯಾಳು. ಇಂತಹ ಕಠೋರ ಮಾತುಗಳನ್ನಾಡುವನೇ? ಸೀತಾ ತನ್ನ ಕಿವಿಗಳನ್ನೇ ನಂಬಲಾರದೆ ಹೋದಳು.
"ಇದು ನನ್ನ ಸತ್ವಪರೀಕ್ಷೆ. ಆಗಲಿ. ಪತಿಗೆ ಬೇಡವಾದ ನಾನು ಇರುವುದೇ ಬೇಡ. ಈ ದೇಹವನ್ನು ಅಗ್ನಿದೇವನಿಗೆ ಅರ್ಪಿಸುತ್ತೇನೆ" ಎಂದು ನಿಶ್ಚಯ ಮಾಡಿದಳು.
ಲಕ್ಷ್ಮಣನತ್ತ ನೋಡಿ, "ವತ್ಸ ಲಕ್ಷ್ಮಣಾ! ಅಗ್ನಿಯನ್ನು ಹೊತ್ತಿಸು, ಈ ದೇಹವು ಅಗ್ನಿಗೆ ಅರ್ಪಿತವಾಗಲಿ" ಅಂದಳು.
ಲಕ್ಷ್ಮಣನು ಅಣ್ಣನನ್ನು ದುರುಗುಟ್ಟಿ ನೋಡಿದ ಸುಗ್ರೀವಾದಿ ವೀರರೆಲ್ಲಾ ನಡುಗಿಹೋದರು. ಶ್ರೀರಾಮನು ದಿಟ್ಟವಾಗಿ ಅಚಲ ಪರ್ವತದಂತೆ ನಿಂತಿದ್ದಾನೆ. ಕಣ್ಣೀರಿಡುತ್ತಾ ಲಕ್ಷ್ಮಣನು ಅಗ್ನಿಯನ್ನು ಸಿದ್ಧ ಮಾಡಿದ.
ಸೀತಾದೇವಿ ಪತಿಯ ಕಡೆ ನೋಡಿ ಕೈಮುಗಿದು "ಅಗ್ನಿದೇವಾ! ನಾನು ಸದಾ ಶ್ರೀರಾಮನೇ ನನ್ನ ಪತಿಯೆಂದು ಯೋಚಿಸುತ್ತ ಪರಿಶುದ್ಧೆಯಾಗಿದ್ದರೆ ನನ್ನನ್ನು ರಕ್ಷಿಸು" ಎಂದಳು. ಅಗ್ನಿಗೆ ಪ್ರದಕ್ಷಿಣೆ ಮಾಡಿದಳು. ಧಗಧಗನೆ ಉರಿಯುತ್ತಿದ್ದ ಬೆಂಕಿಯಲ್ಲಿ ಪ್ರವೇಶ ಮಾಡಿದಳು.
'ಅಗ್ನಿದೇವಾ, ನಾನು ಪರಿಶುದ್ದೆಯಾಗಿದ್ದರೆ ನನ್ನನ್ನು ರಕ್ಷಿಸು.'
ನೋಡುತ್ತಿದ್ದವರಿಗೆ ಎದೆ ಝಲ್‌ ಎಂದಿತು. ವಾನರರೂ ರಾಕ್ಷಸರೂ ನಡುಗಿಹೋದರು. ಹೆಂಗಸರು ಹಾಹಾಕಾರ ಮಾಡಿದರು.
ಆದರೆ ಅಗ್ನಿ ಶಮನವಾಯಿತು. ಅಗ್ನಿಪುರುಷನು ಸೀತಾದೇವಿಯನ್ನೆತ್ತಿಕೊಂಡು ಮೇಲೆದ್ದು ಬಂದು "ರಾಮಚಂದ್ರಾ! ಈ ಸತಿ ದೋಷರಹಿತಳು! ಈಕೆಯಲ್ಲಿ ನೀನು ಸಂದೇಹಪಡುವುದೇ? ಇದೋ ಈ ಮಂಗಾಳಾಂಗಿಯನ್ನು ಸ್ವೀಕರಿಸು" ಎಂದು ಶ್ರೀರಾಮನಿಗೆ ಸೀತೆಯನ್ನು ಒಪ್ಪಿಸಿದನು. ಮೇಲಿನಿಂದ ಮಂಗಳವಾದ್ಯಗಳು ಮೊಳಗಿದುವು. ಹೂಮಳೆಗರೆಯಿತು. ಶ್ರೀರಾಮನು "ಸೀತೆಯು ಪರಿಶುದ್ಧೆಯೆಂದು ನಾನು ಬಲ್ಲೆ. ಆದರೂ ಜನರು ಕೆಟ್ಟಮಾತು ಆಡದೆ ಇರಲಿ ಎಂದು ನಾನು ಹೀಗೆ ಆಚರಿಸಿದೆ" ಎಂದು ಹೇಳುತ್ತಾ ಸೀತೆಯನ್ನು ಸಂತೋಷದಿಂದ ಸ್ವೀಕರಿಸಿದನು.
ಅಲ್ಲಿಗೆ ವನವಾಸದ ಅವಧಿ ಮುಗಿಯಿತು. ಶ್ರೀರಾಮನು ಪುಷ್ಪಕವಿಮಾನದಲ್ಲಿ ಅಯೋಧ್ಯೆಗೆ ಹೊರಟನು. ಮಹಾ ಸಂಭ್ರಮದಿಂದ ಭರತನೂ ಪ್ರಜೆಗಳೂ ಸ್ವಾಗತವಿತ್ತರು. ಎಲ್ಲರ ಮುಖಗಳಲ್ಲಿ ಭಾನುಪ್ರಕಾಶ, ಎಲ್ಲರ ಬಾಯಲ್ಲೂ ಸೀತಾವೃತ್ತಾಂತ. ಪಟ್ಟಾಭೀಷೇಕಕ್ಕೆ ಸರ್ವಸಿದ್ಧತೆಯಾಗಿತ್ತು. ಶ್ರೀರಾಮಚಂದ್ರನು ಪಟ್ಟಾಭಿಷಿಕ್ತನಾದನು.
ಕೊಟ್ಟ ಮಾತಿಗೆ ತಪ್ಪಿದವರು ಯಾರು? | udupibits
ಕೊಟ್ಟ ಮಾತಿಗೆ ತಪ್ಪಿದವರು ಯಾರು?
Posted: ಜೂನ್ 25, 2014 in Uncategorized
# ಚುನಾವಣಾ ಪ್ರಚಾರ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಮಾತ­ನಾ­­ಡುವ ಭರದಲ್ಲಿ 'ಬಿಜೆಪಿ ನನಗೆ ಮಾತೃ ಸ್ವರೂಪಿ' ಎಂದಿದ್ದರು. ಅದು ಅವರ ಭಾವೋ­ದ್ವೇಗದ ಹೇಳಿಕೆ ಎಂದು ನಾನು ಭಾವಿಸಿದ್ದೆ. ಅವರು ಪ್ರಧಾನ ಮಂತ್ರಿಯಾದ ನಂತರ ಮಾತ­ನಾ­ಡುತ್ತಾ 'ಈ ದೇಶದ 125 ಕೋಟಿ ಜನರನ್ನು ನಾನು ಅಭಿವೃದ್ಧಿಯ ಪಥದಲ್ಲಿ ಕರೆದೊಯ್ಯುವೆ' ಎಂದಿದ್ದೂ
ಅರ್ಥಪೂರ್ಣವಾಗಿತ್ತು.
ಈಚೆಗೆ ಆ ಪಕ್ಷದ ಕಾರ್ಯಕ್ರಮಗಳ ವಿವರಗ­ಳನ್ನು ನೋಡಿದಾಗ ಎಲ್ಲವೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶಯಕ್ಕೆ ಪೂರಕವಾಗಿವೆ ಎಂದೆನಿ­ಸು­ವಂತಿದೆ. ಆರ್‌ಎಸ್‌ಎಸ್‌ ತನ್ನ ನಂಬಿಕ­ಸ್ಥ­ರನ್ನು ಆಯಕಟ್ಟಿನ ಸ್ಥಳಗಳಲ್ಲಿ ಕುಳ್ಳಿರಿಸುವ ಪ್ರಕ್ರಿ­ಯೆಗೆ ಇದೀಗ ಚಾಲನೆ ಸಿಕ್ಕಂತಿದೆ. ಕೆಳಸ್ತರದ ಕಾರ್ಯ­ಕ್ರಮಗಳಿಗೆ ಆರ್‌ಎಸ್‌ಎಸ್‌ನ
ಕಾರ್ಯ­ಕ­ರ್ತ­ರನ್ನೇ ನೇಮಿಸಲಾಗುತ್ತಿದೆ. ಅಧಿಕಾರಿ ವರ್ಗ­ವಂತೂ ಯಾವತ್ತೂ ಗಾಳಿ ಬಂದತ್ತ ತೂರಿಕೊ­ಳ್ಳುವ ಸ್ವಭಾವ ಹೊಂದಿರುತ್ತದೆ ತಾನೆ. ಹೀಗಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ತನ್ನ ಕಾರ್ಯ­ಸೂ­ಚಿಯನ್ನು ಕಾರ್ಯರೂಪಕ್ಕೆ ತರಲು ಯಾವುದೇ ಅಡ್ಡಿ ಇಲ್ಲ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳೂ ಆಗಿ­ರುವ ಕೇಂದ್ರದ ಮಾಜಿ ಕೃಷಿ ಸಚಿವ ಶರದ್‌ ಪವಾರ್‌ ಮಾತನಾಡುತ್ತಾ 'ಬಿಜೆಪಿಯ ಗೆಲು­ವಿನ ನಂತರ ದೇಶದ ಎಲ್ಲೆಡೆಯೂ ಕೋಮು­ವಾದ ಎದ್ದು ಕಾಣತೊಡಗಿದೆ' ಎಂದಿರುವುದು ಗಮ­ನಾರ್ಹ.
ಮೋದಿಯವರು ಅಧಿಕಾರದ ಗದ್ದು­ಗೆಗೆ ಏರಿ ಕೆಲವು ದಿನಗಳಾಗಿವೆ ಅಷ್ಟೆ. ಅವರು ಐದು ವರ್ಷಗಳ ಅವಧಿಯನ್ನು ಪೂರ್ಣ­ಗೊ­ಳಿಸಲು ಇನ್ನೂ ಬಲು ದೂರ ಸಾಗುವುದಿದೆ. ಅಷ್ಟ­ರಲ್ಲಿಯೇ ನಡೆದಿರುವ ಕೆಲವು ಘಟನೆಗಳು ಆತಂಕ ಕಾರಿಯಾಗಿವೆ. ಅವುಗಳಲ್ಲಿ ಪುಣೆಯಲ್ಲಿ ನಡೆ­ದಿ­ರುವ ಘಟನೆಯೂ ಒಂದು. ಮಹಾರಾ­ಷ್ಟ್ರದ ಮಟ್ಟಿಗೆ ಅತ್ಯಂತ ಪ್ರಶಾಂತವಾದ ನಗರ ಪುಣೆ­ಯಲ್ಲಿ ನಡೆದ ಘಟನೆಯೊಂದು ಈಚೆಗೆ ಎಂಥ­ವ­ರನ್ನೂ ಭಯಭೀತರನ್ನಾಗಿಸುವಂತಿದೆ. ತೀವ್ರ­ವಾದಿ ಹಿಂದೂ ಸಂಘಟನೆಯೊಂದರ ಕೆಲ­ವರು ಮೊಹಿಸಿನ್‌ ಶೇಕ್‌ ಎಂಬ ಇಪ್ಪತ್ತೆಂಟರ ಹರೆ­ಯದ ಯುವಕನನ್ನು ಇರಿದು ಕೊಂದಿದ್ದಾರೆ. ಅವರು ಐ.ಟಿ. ಕಂಪೆನಿಯೊಂದರಲ್ಲಿ ಮ್ಯಾನೇ­ಜರ್‌ ಆಗಿದ್ದರು. ಶಿವಾಜಿ ಮತ್ತು ಬಾಳಾ ಠಾಕ್ರೆ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತಹ ಕೆಟ್ಟ ಚಿತ್ರ­ವೊಂದು ಅಂತರ್ಜಾಲದಲ್ಲಿ ಹರಿದಾಡು­ತ್ತಿತ್ತು. ಅದರ ಹಿಂದೆ ಮೊಹಿಸಿನ್‌ ಕೈವಾಡ ಇರಬ­ಹು­ದೆಂದು ಶಂಕಿಸಿದ ಕೆಲವರು ಅವರ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ್ದಾರೆ. ಮೊಹಿಸಿನ್‌ ಅವರ ಕೈವಾಡ ಇತ್ತು ಎನ್ನುವುದಕ್ಕೆ ಯಾವುದೇ ಸಾಕ್ಷಿ ಅಥವಾ ಆಧಾರಗಳು ಇರಲಿಲ್ಲ.
ಬಿಜೆಪಿಯೂ ಈ ಕಗ್ಗೊಲೆಯನ್ನು ಖಂಡಿಸಿದೆ, ನಿಜ. ಆದರೆ ಪ್ರಧಾನಿ ಮೋದಿಯವರಿಗೆ ಈಗ ಒಂದು ಸುವರ್ಣ ಅವಕಾಶ ಲಭಿಸಿದೆ. ಈ ಕೊಲೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮೋದಿ­ಯವರು ನೋಡಿಕೊಳ್ಳಬೇಕಿದೆ. ಇದ­ರಿಂದ ಮುಸ್ಲಿಮ್‌ ಸಮುದಾಯದ ಒಡಲಲ್ಲಿ ಭದ್ರ­ತೆಯ ಮನೋಭಾವ ಮೂಡಿಸಲು ಸಾಧ್ಯ­ವಿದೆ. ಕೊಲೆಯಾದ ಮೊಹಿಸಿನ್‌ ಅವರ ಕುಟುಂ­ಬ­ವನ್ನು ಸಂಪರ್ಕಿಸಿ ಕನಿಷ್ಠ ಸಹಾನುಭೂತಿಯ ಮಾತು­ಗಳನ್ನಾದರೂ ಮೋದಿಯವರು ಹೇಳ­ಬಹುದಿತ್ತು.
ಇವತ್ತು ನನ್ನಂತಹವರು ಮುಸಲ್ಮಾನ ಸಮು­ದಾಯಕ್ಕೆ ಭದ್ರತೆಯ ಮತ್ತು ಧೈರ್ಯ ತುಂಬುವ ಮಾತು­ಗಳನ್ನು ಹೇಳಬೇಕಿದೆ. ಸುಮಾರು 15­ರಿಂದ 16 ಕೋಟಿಯಷ್ಟು ಜನಸಂಖ್ಯೆ ಹೊಂದಿ­ರುವ ಈ ಸಮುದಾಯ ಯಾವುದೇ ಕಾರಣಕ್ಕೂ ಎದೆ­ಗುಂದಬಾರದು, ತಲ್ಲಣಗೊಳ್ಳಬಾರದು ಎಂಬ ಭರವಸೆ ನೀಡಬೇಕಿದೆ. ಈ ದೇಶದ ಸಂವಿ­ಧಾನ, ಇಲ್ಲಿಯ ಕಾನೂನುಗಳು ಈ ನೆಲದಲ್ಲಿ ಪ್ರತಿ­ಯೊಬ್ಬರೂ ಸಮಾನರು ಎಂಬ ನೆಲೆ­ಯ­ಲ್ಲಿಯೇ ರೂಪುಗೊಂಡಿವೆ. ಅದರ ಚೌಕಟ್ಟಿನ­ಲ್ಲಿಯೇ ಇವತ್ತು ಆಡಳಿತ ನಡೆಯುತ್ತಿದೆ. ಇಲ್ಲಿ ನ್ಯಾಯಾ­ಲಯಗಳಿವೆ, ಮಾಧ್ಯಮಗಳಿವೆ, ಜನ­ಪರ ಧೋರಣೆಯ ಮುಖಂಡರಿದ್ದಾರೆ, ನಿಷ್ಪಕ್ಷ­ಪಾ­ತ­ವಾಗಿ ಯೋಚಿಸುವ ಜನರಿದ್ದಾರೆ. ಒಂದು ವೇಳೆ ಮುಸಲ್ಮಾನರನ್ನೇ ಗುರಿಯಾಗಿಸಿಕೊಂಡು ಕುಕೃ­ತ್ಯಗಳನ್ನು ಯಾರೇ ಎಸಗಿದರೂ ಅಂತಹ ಮಂದಿಯ ವಿರುದ್ಧ ಧ್ವನಿ ಎತ್ತುವವರು ದೇಶದಾದ್ಯಂತ ಇದ್ದಾರೆ ಎನ್ನುವುದನ್ನು ಮುಸ­ಲ್ಮಾನರು ಮರೆಯಬಾರದು. ಹಿಂದೆ ಬಾಬರಿ ಮಸೀ­ದಿಯನ್ನು ಉರುಳಿಸಿದಾಗ ಮತ್ತು ಗುಜ­ರಾತ್‌ನಲ್ಲಿ ಮುಸ್ಲಿಮರ ಮೇಲೆ ದಾಂದಲೆ ನಡೆ­ದಾಗ ದೇಶದ ಎಲ್ಲೆಡೆಯೂ ಆ ಕೃತ್ಯದ ವಿರುದ್ಧ ಪ್ರತಿಭಟನೆ ನಡೆದಿದ್ದು ನಮಗೆ ಗೊತ್ತೇ ಇದೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯವು ಮುಸ್ಲಿಮ್‌ ಸಮುದಾಯವೇ ಬಹುಸಂಖ್ಯಾತ­ರಾಗಿರುವ ಪ್ರದೇಶ. ಅಲ್ಲಿಗೆ ಸಂಬಂಧಿಸಿದ ಸಂವಿ­ಧಾನದ 370ನೇ ವಿಧಿ ಸ್ವತಂತ್ರ ಭಾರತಕ್ಕೆ ಇರು­ವಷ್ಟೇ ಇತಿಹಾಸವನ್ನು ಹೊಂದಿದೆ. ಇದೀಗ ಮೋದಿ ಸರ್ಕಾರ ಕಾಶ್ಮೀರಕ್ಕೆ ಇರುವ ವಿಶೇಷ ಸ್ಥಾನ­ಮಾ­ನಕ್ಕೆ ಧಕ್ಕೆ ಉಂಟು ಮಾಡಬಹುದೇ ಎಂಬ ಅನುಮಾನ ಆ ರಾಜ್ಯದ ಜನರನ್ನು ಕಾಡುತ್ತಿದೆ.
1947ರ ಆಗಸ್ಟ್‌ನಲ್ಲಿ ಬ್ರಿಟಿಷರು ಭಾರತ­ವನ್ನು ತೊರೆದು ಹೋದರು. ಆ ಸಂದರ್ಭದಲ್ಲಿ ಈ ದೇಶದಲ್ಲಿ ಸುಮಾರು 560ಕ್ಕೂ ಹೆಚ್ಚು ಸ್ವತಂತ್ರ ಸಂಸ್ಥಾನಗಳಿದ್ದವು. ಆ ಸಂಸ್ಥಾನಗಳ ರಾಜರು ಒಂದೋ ಭಾರತದ ಜತೆಗೆ ನಿಲ್ಲ­ಬ­ಹುದಿತ್ತು, ಇಲ್ಲವೇ ಪಾಕಿಸ್ತಾನದ ಜತೆಗೆ ಹೋಗ­ಬ­ಹುದಿತ್ತು. ಧರ್ಮ ಅಥವಾ ಇನ್ನಾವುದೇ ಅಂಶ­ಗಳನ್ನು ಮುಂದಿಟ್ಟುಕೊಂಡು ಆ ಆಡಳಿತಗಾರರು ನಿರ್ಧಾರ­ಗಳನ್ನು ತೆಗೆದುಕೊಳ್ಳಬಹುದಿತ್ತು. ಸ್ವತಂತ್ರವಾಗಿ ಉಳಿಯುವ ಅವಕಾಶಗಳೂ ಆ ಸಂಸ್ಥಾನಗಳಿಗೆ ಇದ್ದವು.
ಅಂದು ಜಮ್ಮು ಕಾಶ್ಮೀರದಲ್ಲಿ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದರು. ಆದರೆ ಅಲ್ಲಿ ಮಹಾ­ರಾಜಾ ಹರಿಸಿಂಗ್‌ ಎಂಬುವವರು ಆಡಳಿತ ನಡೆ­ಸು­ತ್ತಿದ್ದರು. ಅವರು ಭಾರತ ಒಕ್ಕೂಟವನ್ನು ಸೇರಿ­ಕೊಂಡರು. ಆ ಸಂದರ್ಭದ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನನಗನ್ನಿಸುತ್ತಿದೆ, ಒಂದು ವೇಳೆ ಪಾಕಿಸ್ತಾನ ತಾಳ್ಮೆಯಿಂದ ಇದ್ದು ಬಿಟ್ಟಿದ್ದರೆ, ಆ ಪ್ರದೇಶ ಪಾಕ್‌ನೊಳಗೆ ಸೇರುವ ಸಾಧ್ಯತೆಯೂ ಇತ್ತು. ಆದರೆ ಅಂದು ಪಾಕಿಸ್ತಾನ ಏಕಾಏಕಿ ತನ್ನ ಸೇನೆಯನ್ನೇ ಕಾಶ್ಮೀರ ಪ್ರದೇಶದೊಳಗೆ ಕಳುಹಿಸಿ ಆಕ್ರಮಣಕ್ಕಿಳಿದು ಬಿಟ್ಟಿತು. ಆಗ ಹರಿಸಿಂಗ್‌ ಅವರು ಪಾಕ್‌ ಸೇನೆಯನ್ನು ತಡೆಯಲು ಸಹಜವಾಗಿಯೇ ಭಾರತದ ನೆರವು ಯಾಚಿಸಿದರು. ಪಾಕ್ ಸೇನೆಯಿಂದ ಅಲ್ಲಿ ನಡೆಯಬಹುದಾಗಿದ್ದ ಪ್ರಾಣಹಾನಿಯನ್ನು ತಪ್ಪಿಸಲು ಅವರು ಆ ರೀತಿ ನಡೆದುಕೊಂಡಿದ್ದರು. ಜತೆಗೆ ಅವರು ಭಾರತದ ಒಕ್ಕೂಟದೊಳಗೆ ಸೇರಿಕೊಳ್ಳುವ ಒಪ್ಪಂದಕ್ಕೂ ಸಹಿ ಹಾಕಿದರು. ಅಂದು ಅವರು ರಕ್ಷಣಾ ಇಲಾಖೆ, ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕ ಖಾತೆಯನ್ನು ಹೊರತು ಪಡಿಸಿ ಉಳಿದ ಎಲ್ಲಾ ವಿಷಯಗಳಲ್ಲೂ ಕಾಶ್ಮೀರ ಸ್ವಾಯತ್ತತೆ ಹೊಂದಿರುತ್ತದೆ ಎಂದು ಅಲ್ಲಿನ ಜನರಿಗೆ ತಿಳಿಸಿದ್ದರು. 370ನೇ ವಿಧಿ ಇದಕ್ಕೆ ಸಂಬಂಧಿಸಿದ ಕಾನೂನು ನಿಯಮಗಳ ಸಂಗ್ರಹವೇ ಆಗಿದೆ. ಒಂದು ವೇಳೆ ಕೇಂದ್ರ ಸರ್ಕಾರಕ್ಕೆ ಹೆಚ್ಚು ವಿಷಯಗಳಲ್ಲಿ ಹಿಡಿತ ಬೇಕೆಂದರೆ, ಅದಕ್ಕೆ ಜಮ್ಮು ಮತ್ತು ಕಾಶ್ಮೀರದ ಒಪ್ಪಿಗೆ ಬೇಕೇ ಬೇಕು. ಅಂತಹ ಷರತ್ತಿನ ಮೇರೆಗೇ ಆ ರಾಜ್ಯ ಭಾರತ ಒಕ್ಕೂಟ ವ್ಯವಸ್ಥೆಯ ಒಳಗೆ ಸೇರಿದ್ದು ತಾನೆ. ಹೀಗಾಗಿ, ಒಂದು ವೇಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂದಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಬೇಕು ಎಂದು ಒತ್ತಡ ಹೇರಿದರೆ, ಅದು ತಪ್ಪಾಗುತ್ತದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿವಾದ ಅಷ್ಟೊಂದು ಸರಳವಾಗಿಲ್ಲ. ಅದ­ಕ್ಕೊಂದು ಸೂಕ್ತ ಪರಿಹಾರ ಹುಡುಕಬೇಕೆಂದರೆ, ಅದಕ್ಕೆ ಭಾರತ, ಪಾಕಿಸ್ತಾನ ಅಷ್ಟೇ ಅಲ್ಲ, ಜಮ್ಮು ಕಾಶ್ಮೀರದ ಒಪ್ಪಿಗೆಯೂ ಬೇಕಾಗುತ್ತದೆ. ಒಂದು ವೇಳೆ ಇವತ್ತು ಜನಮತಗಣನೆ ನಡೆಯಿತು ಎಂದಿಟ್ಟುಕೊಳ್ಳಿ, ಆಗ ಕಾಶ್ಮೀರ ಕಣಿವೆಯ ಮಂದಿ ಸ್ವತಂತ್ರ ಕಾಶ್ಮೀರದ ಬಗ್ಗೆಯೇ ಒಲವು ತೋರ­ಬಹುದು. ಜಮ್ಮು ಪ್ರದೇಶದಲ್ಲಿ ಹಿಂದೂ­ಗಳೇ ಬಹು
ಸಂಖ್ಯೆಯಲ್ಲಿರುವುದರಿಂದ ಅವರು ಭಾರತದ ಜತೆಗೇ ಇರಲು ಇಷ್ಟಪಡು­ತ್ತಾರೆ. ಲಡಾಖ್‌ ಪ್ರದೇಶದಲ್ಲಿ ಬೌದ್ಧ ಧರ್ಮೀಯರೇ ಬಹುಸಂಖ್ಯಾತರು. ಅವರು ನವದೆಹಲಿಯ ಆಡಳಿತಗಾರರ ಜತೆಗೆ ನೇರ ಸಂಪರ್ಕವಿರಿ­ಸಿ­ಕೊಂಡು ಕೇಂದ್ರಾಡಳಿತ ಪ್ರದೇಶವಾಗಿರಲು ಇಚ್ಛಿ­ಸ­ಬಹುದು. ಈ ಎಲ್ಲಾ ಅಂಶಗಳು ಕಾಶ್ಮೀರ ವಿವಾ­ದ­ವನ್ನು ಇನ್ನಷ್ಟು ಜಟಿಲಗೊಳಿಸು­ವಂತಹದ್ದಾಗಿವೆ. ಅದೇನೇ ಇರಲಿ, ಇಂತಹ ಯಾವುದೇ ವಿಚಾರ­ಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಹಸ್ತಕ್ಷೇಪ ನಡೆಸಬಾರದು. ಏಕೆಂದರೆ ಆರ್‌ಎಸ್‌ಎಸ್‌ ತನ್ನನ್ನು ಸಾಂಸ್ಕೃತಿಕ ಸಂಘಟನೆ ಎಂದೇ ಬಿಂಬಿಸಿಕೊಳ್ಳುತ್ತಾ ಬಂದಿದೆ!
1948ರ ಜನವರಿ 30ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಿದವರು ಎನ್ನಲಾ­ಗಿದ್ದ ನಾಥೂರಾಮ್‌ ಗೋಡ್ಸೆ ಎನ್ನುವವರು ಮಹಾತ್ಮ ಗಾಂಧಿಯವರನ್ನು ಕೊಲೆ ಮಾಡಿದ್ದ­ರೆಂಬ ಕಾರಣಕ್ಕಾಗಿ ಆರ್‌ಎಸ್‌ಎಸ್‌ ಮೇಲೆ ನಿಷೇಧ ಹೇರಲಾಗಿತ್ತು. ಆ ನಿಷೇಧವನ್ನು ತೆಗೆಯಬೇಕೆಂದು ಆರ್‌ಎಸ್‌ಎಸ್‌ ಸಂಘಟನೆ­ಯವರು ನಂತರ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಆಗ ವಲ್ಲಭಭಾಯ್‌ ಪಟೇಲ್‌ ಅವರು ಕೇಂದ್ರ ಗೃಹ ಸಚಿವರಾಗಿದ್ದರು. ಆರ್‌ಎಸ್‌ಎಸ್‌ ಸಂಘಟ­ನೆಯ ಮುಖಂಡರು ಗೃಹ ಸಚಿವಾಲಯದ ಜತೆಗೆ ಸಾಕಷ್ಟು ಮಾತುಕತೆ ನಡೆಸಿ, ಮನ­ವೊ­ಲಿ­ಸಲೆತ್ನಿಸಿದ್ದರು. ಕೊನೆಗೆ 'ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಯಾವುದೇ ರಾಜಕೀಯ ಚಟು­ವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ, ಕೇವಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಷ್ಟೇ ತೊಡಗಿ­ಕೊಳ್ಳು­ವುದು' ಎಂಬ ಷರತ್ತಿನ ಮೇರೆಗೆ ನಿಷೇಧವನ್ನು ತೆಗೆಯಲಾಯಿತು.
ಅಷ್ಟಾದರೂ ಪಟೇಲ್‌ ಅವರಿಗೆ ತೃಪ್ತಿ ಆಗಿರ­ಲಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ­ದ­ವರ ಸಂವಿಧಾನದಲ್ಲಿಯೇ ಈ ಬದಲಾವಣೆ ಬಗ್ಗೆ ಸ್ಪಷ್ಟ­ಪಡಿಸುವಂತೆ ಕೋರಿದ್ದರು. ಆಗ 'ಆರ್‌ಎಸ್‌ಎಸ್‌ ಸಾಂಸ್ಕೃತಿಕ ಸಂಘಟನೆ. ಯಾವುದೇ ಕಾರಣಕ್ಕೂ ಯಾವುದೇ ರಾಜಕೀಯ ಚಟು­ವಟಿಕೆಗಳಲ್ಲಿ ಭಾಗವಹಿಸುವುದಿಲ್ಲ' ಎಂದು ಖಚಿತಪಡಿಸಿದ ಮೇಲೆಯೇ ನಿಷೇಧ ತೆರವು­ಗೊ­ಳಿಸಲಾಯಿತು ಎನ್ನುವುದು ಈಗ ಇತಿಹಾಸ. ಆದರೆ ಈಗ ಏನಾಗಿದೆ ನೋಡಿ. ಆರ್‌ಎಸ್ಎಸ್‌ ಕೊಟ್ಟ ಮಾತಿಗೆ ತಪ್ಪಿತು ಅಲ್ಲವೇ?
ಈಚೆಗಿನ ಸಾರ್ವತ್ರಿಕ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ನ ಸರಸಂಘಚಾಲಕ್‌ ಮೋಹನ್‌ ಭಾಗವತ್‌ ಅವರೇ ರಾಜಕೀಯ ಚಟುವಟಿಕೆ­ಗಳಲ್ಲಿ ಪಾಲ್ಗೊಂಡಿದ್ದರಲ್ಲ. ಹಿಂದೆ
ಆರ್‌ಎಸ್‌ಎಸ್‌ ಪ್ರಚಾರಕ್‌ ಆಗಿದ್ದ ನರೇಂದ್ರ ಮೋದಿ­ಯವರನ್ನು ಪ್ರಧಾನಿ
ಪಟ್ಟಕ್ಕೇರಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ದುಡಿ­ದಿರುವುದು ಸತ್ಯ ತಾನೆ? ಫಲಿತಾಂಶ ಈಗ ಎಲ್ಲರ ಮುಂದಿದೆ. – ಕುಲದೀಪ್ ನಯ್ಯರ್. (ಕೃಪೆ: ಪ್ರಜಾವಾಣಿ, 25.06.14.)
ಕುತ್ತಿಗೆ ಮೇಲಿನ ಟಾನ್ ತೆಗೆಯಲು ಕೆಲವ 10 ನಿಮಿಷ ಹೀಗೆ ಮಾಡಿ ನೋಡಿ | ಮಾಹಿತಿ ಗುರು
Home ಅರೋಗ್ಯ ಮಾಹಿತಿ ಕುತ್ತಿಗೆ ಮೇಲಿನ ಟಾನ್ ತೆಗೆಯಲು ಕೆಲವ 10 ನಿಮಿಷ ಹೀಗೆ ಮಾಡಿ ನೋಡಿ
ಕುತ್ತಿಗೆ ಮೇಲಿನ ಟಾನ್ ತೆಗೆಯಲು ಕೆಲವ 10 ನಿಮಿಷ ಹೀಗೆ ಮಾಡಿ ನೋಡಿ
ಯಾವುದೇ ವೆಚ್ಚವಿಲ್ಲದೆ ನಿಮ್ಮ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ನಿಮ್ಮ ಚರ್ಮ ಕಪ್ಪು ಅಂದರೆ ಟಾನ್ ಅನ್ನು ತೆಗೆಯುವ ಸುಲಭ ವಿಧಾನಗಳು ಹಲವುಗಳು, ಇನ್ನು ಕತ್ತಿನ ಮೇಲೆ ಹಾಗು ಹಿಂಬಾಗದಲ್ಲಿ ಕಪ್ಪು ಕಲೆ ಅತಿಯಾಗಿ ಕಾಣಿಸುತ್ತದೆ, ಇದರಿಂದ ನಿಮ್ಮ ಶರ್ಟ್ ನ ಕಾಲರ್ ಗಳು ಸಹ ಬೇಗನೆ ಕೊಳೆಯಾಗುತ್ತವೆ, ನೀವು ದಿನ ನಿತ್ಯ ಬಳಸುವ ಸ್ನಾನದ ಸೋಪಿನಿಂದ ಎಷ್ಟೇ ತೊಳೆದರು ಕಪ್ಪು ಹಾಗೆಯೇ ಇರುವುದನ್ನು ನೀವು ಗಮನಿಸಿರುತ್ತೀರಿ, ಆದರೆ ಈ ಕಪ್ಪು ಕಲೆಗಳನ್ನ ತೊಲಗಿಸಲು ಏನು ಮಾಡಬೇಕು ಅಂತ ತಿಳಿಯದೆ ಸುಮ್ಮನಾಗಿದ್ದಲ್ಲಿ, ಈ ಮಾಹಿತಿಯನ್ನು ಒಮ್ಮೆ ಸಂಪೂರ್ಣವಾಗಿ ಓದಿ.
ಈ ನಾವು ತಿಳಿಸುವ ವಸ್ತು ಗಳನ್ನೂ ಬಳಸಿ ಕುತ್ತಿಗೆ ಮೇಲಿನ ಕಪ್ಪು ಕಲೆಯನ್ನು ತೊಲಗಿಸ ಬಹುದು, ಇದಕ್ಕೆ ಬೇಕಾಗುವುದು 3 ವಸ್ತುಗಳು ಯಾವುದಾದರು ಕಾಫಿಪುಡಿ, ನಿಂಬೆ ಹಣ್ಣು ಮತ್ತು ರೋಸ್ ವಾಟರ್, ಇನ್ನು ಇವುಗಳನ್ನು ಹೇಗೆ ಬಳಸಿ ನಿಮ್ಮ ಚರ್ಮದ ಟಾನ್ ತೆಗಿಯಬಹುದು ಮುಂದೆ ಓದಿ.
ಒಂದು ಕಪ್ ನಲ್ಲಿ ಕಾಫಿಪುಡಿ ಮತ್ತು ರೋಸ್ ವಾಟರ್ ನ ಮಿಶ್ರಣ ಮಾಡಿ ಅದನ್ನು ನಿಂಬೆ ಹಣ್ಣಿನ ಚಿಪ್ಪೆಯ ಸಹಾಯದಿಂದ ಟಾನ್ ಆದ ಜಾಗ ಅಂದರೆ ಕುತ್ತಿಗೆ ಕೆಳಗಿನ ಕಪ್ಪು, ಕಣ್ಣಿನ ಕೆಳಗಿನ ಕಪ್ಪು, ಕೈ ಚರ್ಮ ಹೀಗೆ 10 ನಿಮಿಷದ ವರೆಗೂ ಚೆನ್ನಾಗಿ ಮಸಾಜ್ ಮಾಡಿ, ನಂತರ ತಕ್ಷಣ ತಣ್ಣಗಿನ ನೀರಿಂದ ತೊಳೆಯಿರಿ ಮತ್ತು ಕಪ್ಪು ಚರ್ಮದಿಂದ ಮುಕ್ತಿ ಪಡೆಯಿರಿ.
ಕಾಫಿ ಪುಡಿಯಲ್ಲಿ ಆಂಟಿ ಅಕ್ಸಿಡೆಂಟ್ ಗಳು ಹೆಚ್ಚಿದ್ದು ರಕ್ತ ಸಂಚಾರ ಮತ್ತು ಟಾನ್ ತೆಗೆಯಲು ಒಳ್ಳೆ ಉಪಕಾರಿಯಾಗಿ ಕೆಲಸ ಮಾಡುತ್ತದೆ.
ಬೆಂಬಲ ವಾಪಸ್: ಮುಲಾಯಂ ಬೆದರಿಕೆ | Prajavani
ಬೆಂಬಲ ವಾಪಸ್: ಮುಲಾಯಂ ಬೆದರಿಕೆ
ಎಸ್‌ಸಿ, ಎಸ್ಟಿ ಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ವಿರೋಧ
ಮೈನಾಪುರಿ (ಉತ್ತರ ಪ್ರದೇಶ) (ಪಿಟಿಐ): ಪರಿಶಿಷ್ಟ ಜಾತಿ, ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಸಮಾಜವಾದಿ ಪಕ್ಷ (ಎಸ್‌ಪಿ), ಈ ಮಸೂದೆ ಅಂಗೀಕೃತವಾದರೆ ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುವ ಕುರಿತು ಆಲೋಚಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದೆ.