text
stringlengths
0
61.5k
`ಈ ಮಸೂದೆಯು ರಾಜ್ಯಸಭೆಯಲ್ಲಿ ಮತದಾನಕ್ಕೆ ಬಂದಿದ್ದೇ ಆದರೆ, ನಮ್ಮ ಪಕ್ಷವು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುವ ಬಗ್ಗೆ ಚಿಂತಿಸಬೇಕಾಗುತ್ತದೆ' ಎಂದು ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಸುದ್ದಿಗಾರರಿಗೆ ಇಲ್ಲಿ ತಿಳಿಸಿದ್ದಾರೆ. `ಇದು ರಾಷ್ಟ್ರ ವಿರೋಧಿ ಮಸೂದೆ. ಇದು ಸಮಾಜವನ್ನು ಒಡೆಯುತ್ತದೆ. ಈ ಮಸೂದೆಯನ್ನು ನಾವು ಸಂಸತ್ ಒಳಗೆ ಮತ್ತು ಹೊರಗೆ ವಿರೋಧಿಸುತ್ತೇವೆ ಮತ್ತು ಅದನ್ನು ಮುಂದುವರಿಸುತ್ತೇವೆ' ಎಂದು ಅವರು ಹೇಳಿದ್ದಾರೆ.
ತೀವ್ರಗೊಂಡ ಪ್ರತಿಭಟನೆ: ಇದೇ ವೇಳೆ, ಬಡ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಮೀಸಲಾತಿ ಕಲ್ಪಿಸುವ ಮಸೂದೆಯ ವಿರುದ್ಧ ಉತ್ತರ ಪ್ರದೇಶದ ಲಕ್ಷಾಂತರ ಸರ್ಕಾರಿ ನೌಕರರು ಶನಿವಾರ ರಾಜ್ಯದ ವಿವಿಧ ಕಡೆಗಳಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ಹಾಗೂ ಧರಣಿಗಳನ್ನು ನಡೆಸಿದರು.
18 ಲಕ್ಷಕ್ಕೂ ಅಧಿಕ ನೌಕರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಲು ಮುಂದಾಗಿರುವುದು ಸಂವಿಧಾನ ಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ವಜನ ಹಿತ ಸಂರಕ್ಷಣಾ ಸಮಿತಿಯು ಈ ಪ್ರತಿಭಟನೆ ನೇತೃತ್ವ ವಹಿಸಿತ್ತು. ಪ್ರತಿಭಟನೆಯ ಸಂದರ್ಭದಲ್ಲಿ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿತ್ತು.
ರಾಖಿಭಾಯ್ ಅಖಾಡಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಎಂಟ್ರಿ – ಶೂಟಿಂಗ್ ಆರಂಭ – Public TV
Home/Districts/Bengaluru City/ರಾಖಿಭಾಯ್ ಅಖಾಡಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಎಂಟ್ರಿ – ಶೂಟಿಂಗ್ ಆರಂಭ
ರಾಖಿಭಾಯ್ ಅಖಾಡಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಎಂಟ್ರಿ – ಶೂಟಿಂಗ್ ಆರಂಭ
ಬೆಂಗಳೂರು: ಭಾರತೀಯ ಚಿತ್ರರಂಗ ಎದುರು ನೋಡುತ್ತಿರುವ ಸಿನಿಮಾ 'ಕೆಜಿಎಫ್ ಚಾಪ್ಟರ್-2' ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ.
ಕೊರೊನಾ ಅಟ್ಟಹಾಸ, ಲಾಕ್‍ಡೌನ್‍ನಿಂದಾಗಿ ಬರೋಬ್ಬರಿ ನಾಲ್ಕು ತಿಂಗಳು ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿತ್ತು. ಕಳೆದೊಂದು ತಿಂಗಳ ಹಿಂದೆ ಸರ್ಕಾರ ಶೂಟಿಂಗ್‍ಗೆ ಅನುಮತಿ ಸಿಕ್ಕಿದ್ದು, ಕೆಜಿಎಫ್ ಬಳಗ ಇಂದಿನಿಂದ ಚಿತ್ರೀಕರಣಕ್ಕೆ ಹಾಜರಾಗಿದೆ.
ಮಿನರ್ವ ಮಿಲ್‍ನಲ್ಲಿ ಹಾಕಲಾಗಿರುವ ಅದ್ಧೂರಿ ಸೆಟ್‍ನಲ್ಲಿ ಚಿತ್ರೀಕರಣವನ್ನು ಶುರು ಮಾಡಲಾಗಿದೆ. ಇದೀಗ ಕೆಜಿಎಫ್ ಚಿತ್ರತಂಡಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಹೊಸದಾಗಿ ಸೇರಿಕೊಂಡಿದ್ದಾರೆ. ಆದರೆ ಪ್ರಕಾಶ್ ರೈ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಚಿತ್ರರಂಡ ರಿವೀಲ್ ಮಾಡಿಲ್ಲ.
ಸದ್ಯಕ್ಕೆ ನಟಿ ಮಾಳವಿಕಾ ಅವಿನಾಶ್ ಹಾಗೂ ಪ್ರಕಾಶ್ ರೈ ಕಾಂಬಿನೇಷನ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಕೆಜಿಎಫ್ ಚಿತ್ರತಂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಕೆಲ ತಿಂಗಳ ನಂತರ ಚಿತ್ರೀಕರಣಕ್ಕೆ ಬಂದಿರುವುದರಿಂದ ನಟಿ ಮಾಳವಿಕಾ ಸಂತಸಪಟ್ಟಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
After 6 full months…the COVID break is broken…Shooting today! Feels like a rebirth! Guess which film???!!!😊😊😊 pic.twitter.com/nHRiiIejMX
"ಆರು ತಿಂಗಳ ನಂತರ ಕೊರೊನಾ ಬ್ರೇಕ್ ಅಂತ್ಯವಾಗಿದೆ. ಇಂದಿನಿಂದ ಚಿತ್ರೀಕರಣ ಆರಂಭವಾಗಿದೆ. ಈ ಮೂಲಕ ಪುನರ್ಜನ್ಮ ಸಿಕ್ಕಿದ್ದಂತೆ ಭಾಸವಾಗುತ್ತಿದೆ" ಎಂದು ಮಾಳವಿಕಾ ಬರೆದುಕೊಂಡಿದ್ದಾರೆ. ಅಲ್ಲದೇ ಯಾವ ಸಿನಿಮಾ ಗೆಸ್ ಮಾಡಿ? ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ನಟಿ ಮಾಳವಿಕಾ ಅವಿನಾಶ್ ಕೆಜಿಎಫ್ ಚಾಪ್ಟರ್ 1ರಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಇದೀಗ ಚಾಪ್ಟರ್ 2ನಲ್ಲೂ ತನ್ನ ಪಾತ್ರವನ್ನು ಮುಂದುವರಿಸಿದ್ದಾರೆ. ಸಣ್ಣ ಪಾತ್ರವಾದರೂ ಮಾಳವಿಕಾ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು.
bengaluru cinema kgf malavika avinash Prakash Raj Public TV shooting ಕೆಜಿಎಫ್ ಪಬ್ಲಿಕ್ ಟಿವಿ ಪ್ರಕಾಶ್ ರೈ ಬೆಂಗಳೂರು ಮಾಳವಿಕಾ ಅವಿನಾಶ್ ಶೂಟಿಂಗ್ ಸಿನಿಮಾ
ರೋಸ್ ವಾಟರ್‌ನಿಂದ ಈ ರೀತಿ ಮಾಡಿದರೆ ಅನಗತ್ಯ ರೋಮಗಳು ಬರಲ್ಲ, ಹೇಗೆ ಗೊತ್ತಾ ...! - KannadaPlus
ರೋಸ್ ವಾಟರ್‌ನಿಂದ ಈ ರೀತಿ ಮಾಡಿದರೆ ಅನಗತ್ಯ ರೋಮಗಳು ಬರಲ್ಲ, ಹೇಗೆ ಗೊತ್ತಾ …!
ಕೂದಲು ಸ್ತ್ರೀಯರ ತಲೆ ಮೇಲೆ ಇದ್ದರೆ ಅಂದ. ಅದೇ ಕೈಗಳು, ಕಾಲುಗಳು, ಮುಖದ ಮೇಲೆ ಬರುವಂತಹದ್ದೇ ಅನಗತ್ಯ ರೋಮಗಳು. ಬಹಳಷ್ಟು ಮಂದಿ ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಅನಗತ್ಯ ಕೂದಲು ಸಹ ಒಂದು. ಈ ಕೂದಲು ಅವರನ್ನು ಸೌಂದರ್ಯ ಹೀನವನ್ನಾಗಿ ಮಾಡುತ್ತವೆ. ಇಂತಹವರು ಎಷ್ಟೇ ಸುಂದರವಾಗಿ ಇದ್ದರೂ ಈ ಲೋಪ ಅಂದವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಈ ಅನಗತ್ಯ ಕೂದಲಿಂದ ಮಹಿಳೆಯರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಬಹಳಷ್ಟು ಮಂದಿ ನಾಚಿಕೆಯಿಂದ ನರಳುತ್ತಾ, ಕೊರಗುತ್ತಾ ಹತ್ತು ಮಂದಿಯಲ್ಲಿ ಬೆರೆಯಬೇಕೆಂದರೆ ಕುಗ್ಗಿಹೋಗುತ್ತಾರೆ. ಕೆಲವು ರೀತಿಯ ಔಷಧಿಗಳನ್ನು ದೀರ್ಘಕಾಲ ಬಳಸುವುದರಿಂದ ಹಾರ್ಮೋನ್ ಅಸಮತೋಲನದಿಂದ ಕೆಲವರಲ್ಲಿ ಈ ಸಮಸ್ಯೆಗಳು ತಲೆ ಎತ್ತುತ್ತವೆ. ಕೆಳಗೆ ಕೊಟ್ಟಿರುವ ಸಿಂಪಲ್ ಟಿಪ್ಸ್ ಪಾಲಿಸಿದರೆ 15 ದಿನಗಳಲ್ಲಿ ಬೆಸ್ಟ್ ರಿಸಲ್ಟ್ ಪಡೆಯಬಹುದು.
* ಕಡಲೆ ಹಿಟ್ಟು 2 ಸ್ಫೂನ್
* ಕೊಬ್ಬರಿ ಎಣ್ಣೆ ಅಗತ್ಯವಿರುವಷ್ಟು
* ರೋಸ್ ವಾಟರ್ 1 ಟೀ ಸ್ಫೂನ್
ಒಂದು ಬೌಲ್‌ನಲ್ಲಿ ಒಂದೂವರೆ ಸ್ಫೂನ್ ಕಡಲೆ ಹಿಟ್ಟು, ಕೊಬ್ಬರಿ ಎಣ್ಣೆಯನ್ನು ತಕ್ಕಷ್ಟು ಬಳಸಿಕೊಳ್ಳಬೇಕು. ಅದರಲ್ಲಿ ಒಂದು ಟೀ ಸ್ಫೂನ್ ರೋಸ್ ವಾಟರ್ ಹಾಕಿಕೊಳ್ಳಬೇಕು. ಚೆನ್ನಾಗಿ ಗಟ್ಟಿಯಾಗಿರುವಂತೆ (ಜಾರುವಂತೆ ಆಗದಂತೆ ಎಚ್ಚರ ವಹಿಸಬೇಕು) ಬೆರೆಸಿಕೊಳ್ಳಬೇಕು. ಅದೇ ಥಿಕ್ ಫಾಮ್‍ನಲಿ (ಸ್ವಲ್ಪ ಮುದ್ದೆಯಂತೆ) ಇರುವ ಪೇಸ್ಟನ್ನು ಅನಗತ್ಯ ರೋಮಗಳು ಇರುವ ಜಾಗದಲ್ಲಿ ಕೂದಲ ಬೆಳೆಯುವ ವಿರುದ್ಧ ದಿಕ್ಕಿನಲ್ಲಿ ಹಚ್ಚಬೇಕು. ಶೇವಿಂಗ್ ಮಾಡುವಾಗ ಹೇಗೆ ವಿರುದ್ಧ ದಿಕ್ಕಿನಲ್ಲಿ ತೆಗೆಯುತ್ತೇವೋ ಮೇಲೆ ತಿಳಿಸಿದ ಮಿಶ್ರಣವನ್ನು ಹಚ್ಚಬೇಕು. ಆ ಬಳಿಕ ಸಂಪೂರ್ಣ ಒಣಗುವವರೆಗೂ ಕನಿಷ್ಠ 20, 25 ನಿಮಿಷಗಳು ಹಾಗೆಯೇ ಬಿಡಬೇಕು. ಹೇಗೆ ಹಚ್ಚಿದಿರೋ ಅದೇ ರೀತಿ ಗಟ್ಟಿಯಾಗಿ ಉಜ್ಜುತ್ತಾ ತೆಗೆಯಬೇಕು. ಈ ರೀತಿ ಉಜ್ಜುವುದರಿಂದ ಕೂದಲು ಸೆನ್ಸಿಟೀವ್ ಆಗಿ ಬದಲಾಗುತ್ತವೆ. ಬಳಿಕ ನೀರಿನಲ್ಲಿ ತೊಳೆದುಕೊಳ್ಳಬಹುದು. ಹೀಗೆ ವಾರಕ್ಕೆ ಎರಡು ಸಲ 2 ವಾರಗಳ ಕಾಲ ಮಾಡಿದರೆ ಒಳ್ಳೆಯ ಫಲಿತಾಂಶ ಇರುತ್ತದೆ. ಒಂದು ತಿಂಗಳ ಕಾಲ ಪಾಲಿಸಿದರೆ ಇನ್ನೂ ಒಳ್ಳೆಯ ರಿಸಲ್ಟ್ ಪಡೆಯಬಹುದು. ಇದರಲ್ಲಿ ಬಳಸುವ ಕೊಬ್ಬರಿ ಎಣ್ಣೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಅನಗತ್ಯ ಕೂದಲು, ಅದೇ ರೀತಿ ಬ್ಯಾಕ್ಟೀರಿಯಾ, ಡಸ್ಟ್ ರಿಮೂವ್ ಮಾಡಲು ಈ ಮಿಶ್ರಣ ಎಫೆಕ್ಟೀವ್ ಆಗಿ ಕೆಲಸ ಮಾಡುತ್ತದೆ. ಕಡಲೆ ಹಿಟ್ಟು ನ್ಯಾಚುರಲ್ ಸ್ಕ್ರಬ್ಬರ್.
ಟಂಗ್ ಕ್ಲೀನರ್ ಬಹಳಷ್ಟು ಮಂದಿ ಉಪಯೋಗಿಸುತ್ತಾರೆ, ಅವು ಬಳಸುವುದರಿಂದ ನಮಗೆ ಆರೋಗ್ಯವೇ..! ಅನಾರೋಗ್ಯವೇ..! ತಿಳಿದುಕೊಳ್ಳಿ
ರಾಜ್ಯದಲ್ಲಿ ಸೋಮವಾರ 5018 ಸೋಂಕು ದೃಢ; 8005 ಬಿಡುಗಡೆಯಾದವರ ಸಂಖ್ಯೆ ; 64 ಸಾವು | Udayavani – ಉದಯವಾಣಿ
Tuesday, 01 Dec 2020 | UPDATED: 10:34 AM IST
Team Udayavani, Oct 19, 2020, 7:47 PM IST
ಬೆಂಗಳೂರು: ರಾಜ್ಯದಲ್ಲಿ ಸೋಮವಾರ (19.10.2020) 5018 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 7,70,604 ಕ್ಕೆ ಏರಿಕೆಯಾಗಿದೆ.
64 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 10,542 ಜನ ಸೋಂಕಿತರು ಮೃತಪಟ್ಟಿದ್ದಾರೆ. ಒಂದೇ ದಿನ 8005 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 6,53,829 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 1,06,214 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರಿನಲ್ಲಿ ಇಂದು 2481 ಹೊಸ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,10,021 ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಬೆಂಗಳೂರಿನಲ್ಲಿ 17 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 3542 ಮಂದಿ ಮೃತಪಟ್ಟಿದ್ದಾರೆ. 2363 ಮಂದಿ ಇವತ್ತು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 2,41,942 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 64,536 ಸಕ್ರಿಯ ಪ್ರಕರಣಗಳಿವೆ.
ಒಣ ಹುಲ್ಲಿಗೆ ದರ್ಬೆ ಎಂಬ ಪವಿತ್ರ ಸ್ಥಾನ ಬಂದಿದ್ದು ಹೇಗೆ ಗೊತ್ತೆ?? | Vaartaa Sante
Home ಭಕ್ತಿ ಒಣ ಹುಲ್ಲಿಗೆ ದರ್ಬೆ ಎಂಬ ಪವಿತ್ರ ಸ್ಥಾನ ಬಂದಿದ್ದು ಹೇಗೆ ಗೊತ್ತೆ??
ಒಣ ಹುಲ್ಲಿಗೆ ದರ್ಬೆ ಎಂಬ ಪವಿತ್ರ ಸ್ಥಾನ ಬಂದಿದ್ದು ಹೇಗೆ ಗೊತ್ತೆ??
ಭಾರತೀಯ ಸಂಪ್ರದಾಯಗಳಲ್ಲಿ ಜರುಗುವ ಶುಭ ಸಮಾರಂಭಗಳಲ್ಲಿ ದರ್ಭೆಗೆ ಅತಿ ಹೆಚ್ಚು ಶ್ರೇಷ್ಟತೆ ಇದೆ. ಶುಭ ಕಾರ್ಯಕ್ರಮಗಳಲ್ಲಷ್ಟೇ ಅಲ್ಲದೇ ಗ್ರಹಣದ ಸಂದರ್ಭಗಳಲ್ಲೂ ದರ್ಬೆ ಅತ್ಯಂತ ಮುಖ್ಯವಾದ ವಸ್ತು. ಆದ್ದರಿಂದಲೇ ದರ್ಭೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಹಿರಿಯರು ಕೊಟ್ಟಿದ್ದಾರೆ.
ದರ್ಬೆಗೆ ಪವಿತ್ರ ಎಂಬ ಹೆಸರೂ ಇದೆ. ಈ ಹೆಸರು ಬರಲು ಸಮುದ್ರ ಮಂಥನದ ಭಾಗವಾದ ಪೌರಾಣಿಕ ಕಥೆಯೊಂದು ಕಾರಣವಾಗಿದೆ. ಯಾವುದು ಗೊತ್ತೆ…?
ಕದ್ರು ಮತ್ತು ವಿನುತೆ ಯ ಕಥೆ.
ಕದ್ರು ಮತ್ತು ವಿನುತೆ ಕಶ್ಯಪನ ಪತ್ನಿಯರು. ಕದ್ರುವಿಗೆ ಸಾವಿರಾರು ಸರ್ಪಪುತ್ರರು. ವಿನತೆಗೆ ಅರುಣ( ಸೂರ್ಯನ ಸಾರಥಿ) ಹಾಗೂ ಗರುಡ( ವಿಷ್ಣುವಿನ ವಾಹನ, ವೈನತೇಯ) ನೆಂಬ ಇಬ್ಬರು ಪುತ್ರರು. ಕದ್ರುವಿಗೆ ವಿನತೆಯನ್ನು ತನ್ನ ದಾಸಿ ಮಾಡಿಕೊಳ್ಳಬೇಕೆಂದು ತೀರ್ಮಾನಿಸುತ್ತಾಳೆ. ಹಾಗಾಗಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಕದ್ರುವಿಗೆ ಸಮುದ್ರ ಮಂಥನದ ಸಮಯದಲ್ಲಿ ಹುಟ್ಟಿದ ಬಿಳಿ ಕುದುರೆ ಉಚ್ಚೈಶ್ರವಸ್ ಇಂದ್ರ ಲೋಕಕ್ಕೆ ಹಾದು ಹೋಗುವಾಗ ತಾವು ವಾಸಿಸುತ್ತಿರುವ ಪ್ರದೇಶಕ್ಕೆ ಹತ್ತಿರದಲ್ಲೇ ಸ್ಪಷ್ಟವಾಗಿ ಗೋಚರಿಸಲಿದೆ ಎಂಬುದು ತಿಳಿಯುತ್ತದೆ. ಇದನ್ನೇ ಸರಿಯಾದ ಸಮಯ ಎಂದು ತಿಳಿದ ಕದ್ರು ವಿನತೆಯೊಂದಿಗೆ ಉಚ್ಚೈಶ್ರವಸ್ ಬಾಲದ ಬಣ್ಣದ ಕುರಿತಾಗಿ ವಾಗ್ವಾದ ನಡೆಸಿ ಬಿಳಿ ಕುದುರೆಯ ಬಾಲ ಸಂಪೂರ್ಣ ಕಪ್ಪು ಬಣ್ಣದಲ್ಲಿದೆ ಎಂದು ಹೇಳುತ್ತಾಳೆ. ಇಬ್ಬರ ನಡುವೆ ವಾದ ನಡೆಯುತ್ತದೆ. ಇಬ್ಬರೂ ಸೋತವರು ಗೆದ್ದವರ ದಾಸಿಯಾಗಬೇಕೆಂದು ಒಪ್ಪಂದಕ್ಕೆ ಬರುತ್ತಾರೆ.
ಕದ್ರು ತನ್ನ ಉದ್ದೇಶ ಸಾಧಿಸಿಕೊಳ್ಳಲು ಕುದುರೆಯ ಬಾಲವನ್ನು ಕಪ್ಪು ಬಣ್ಣದಲ್ಲಿರುವಂತೆ ತೋರಿಸಲು ತನ್ನ ಸಾವಿರಾರು ಸರ್ಪಪುತ್ರರನ್ನು ಕರೆದು ಕುದುರೆಯ ಬಾಲಕ್ಕೆ ಸುತ್ತಿಕೊಳ್ಳುವಂತೆ ಹೇಳುತ್ತಾಳೆ. ಆದರೆ ಮೊದಲ ಪುತ್ರ ವಾಸುಕಿ ಸೇರಿದಂತೆ ಪ್ರಾರಂಭದಲ್ಲಿ ಯಾರೂ ಸಹ ಕದ್ರುವಿನ ಮಾತನ್ನು ಕೇಳಲಿಲ್ಲ. ಕುಪಿತಗೊಂಡ ಕದ್ರು ಜನಮೇಜಯ ರಾಜ ನಡೆಸುವ ಸರ್ಪ ಯಜ್ಞದಲ್ಲಿ ಬಿದ್ದು ಸಾಯಿರಿ ಎಂದು ಶಾಪ ಕೊಟ್ಟಳು. ಶಾಪದಿಂದ ಹೆದರಿದ ಸರ್ಪಗಳು ಕದ್ರು ಹೇಳಿದಂತೆಯೇ ಮಾಡಲು ಮುಂದಾಗುತ್ತವೆ. ಅಂತೆಯೇ ಉಚ್ಚೈಶ್ರವಸ್ ತಮ್ಮ ವಾಸ ಪ್ರದೇಶದ ಹತ್ತಿರಕ್ಕೆ ಬರುವ ಮುನ್ನವೇ ತಾಯಿ ಹೇಳಿದಂತೆ ಕುದುರೆಯ ಬಾಲಕ್ಕೆ ಗಂಟು ಹಾಕಿಕೊಳ್ಳುತ್ತವೆ. ಉಚ್ಚೈಶ್ರವಸ್ ಬರುವ ವೇಳೆಗೆ ಸರ್ಪಗಳು ಸುತ್ತಿಕೊಂಡ ಅದರ ಬಾಲ ಕಪ್ಪು ಬಣ್ಣದಲ್ಲಿ ಕಾಣಿಸುತ್ತಿರುತ್ತದೆ. ಒಪ್ಪಂದದ ಪ್ರಕಾರ ವಿನತೆ ಕದ್ರುವಿನ ದಾಸಿಯಾಗುತ್ತಾಳೆ. ಇದೇ ಸಂದರ್ಭದಲ್ಲಿ ವಿನತೆಯ ಎರಡನೇ ಪುತ್ರ ಗರುಡ, ವೈನತೇಯ ಜನಿಸುತ್ತಾನೆ. ಆತ ಮಹಾಶಕ್ತಿ ಶಾಲಿ, ಇಂದ್ರನಿಗಿಂತಲೂ ಶಕ್ತಿಶಾಲಿಯಾದವನನ್ನು ತಯಾರಿಸುತ್ತೇವೆ ಎಂಬ ವಾಲಖಿಲ್ಯ ಮಹರ್ಷಿಗಳ ಸಂಕಲ್ಪದ, ತಪಸ್ಸಿನ ಅನುಗ್ರಹದಿಂದ ಹುಟ್ಟಿದಾತ. ಆದ್ದರಿಂದಲೇ ಆತನಿಗೆ ಖಗೇಂದ್ರ (ಪಕ್ಷಿಗಳ ರಾಜ ಎಂಬ ಹೆಸರು) ತಾಯಿ ಹಾಗೂ ತನ್ನ ದಾಸ್ಯವನ್ನು ಕಂಡು ಬೇಸರಗೊಂಡ ವೈನತೇಯ ಸರ್ಪಗಳೊಂದಿಗೆ ಸಮಾಲೋಚನೆ ನಡೆಸಿ ದಾಸ್ಯದಿಂದ ಮುಕ್ತಿ ಪಡೆಯಲು ಏನು ಮಾಡಬೇಕೆಂದು ಕೇಳುತ್ತಾನೆ.
ಸಮುದ್ರ ಮಂಥನದಿಂದ ಅಮೃತವನ್ನು ತಂದು ಕೊಟ್ಟರೆ ದಾಸ್ಯದಿಂದ ಮುಕ್ತಗೊಳಿಸುವುದಾಗಿ ತಿಳಿಸುತ್ತಾರೆ. ದಾಸ್ಯದಿಂದ ಮುಕ್ತಿ ಪಡೆಯಲು ವೈನತೇಯ ಅಮೃತವನ್ನು ರಕ್ಷಿಸಲು ಇಂದ್ರ ನಿಯೋಜಿಸಿದ್ದ ಸರ್ಪಗಳನ್ನು ವಧಿಸಿ, ಅಮೃತ ಕುಂಭವನ್ನು ಹೊತ್ತುಕೊಂಡು ಹೊರಡುತ್ತಾನೆ. ಮಾರ್ಗ ಮಧ್ಯದಲ್ಲಿ ಇಂದ್ರ ಪ್ರತ್ಯಕ್ಷನಾಗಿ ವಜ್ರಾಯುಧ ಪ್ರಯೋಗಿಸುತ್ತಾನೆ. ಆದರೂ ವಜ್ರಾಯುಧವೂ ಸಹ ವೈನತೇಯನನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಮೃತವನ್ನು ತೆಗೆದುಕೊಂಡು ಹೋಗಿ ಯಾರು ಯಾರಿಗೋ ಕೊಡದಂತೆ ಇಂದ್ರ ವೈನತೇಯನಲ್ಲಿ ಮನವಿ ಮಾಡುತ್ತಾನೆ. ತನಗೆ ಅಮೃತ ಬೇಕಿರುವುದು ಸ್ವಾರ್ಥಕ್ಕಾಗಿ ಅಲ್ಲ ತಾಯಿಯನ್ನು ದಾಸ್ಯದಿಂದ ಮುಕ್ತಗೊಳಿಸಲು. ನಾನು ಸರ್ಪಗಳ ಮುಂದಿಟ್ಟ ಮೇಲೆ ಅಮೃತವನ್ನು ನೀನೇ ತೆಗೆದುಕೊಂಡು ಹೋಗು ಎಂದು ವೈನತೇಯ ಇಂದ್ರನಿಗೆ ಹೇಳುತ್ತಾನೆ. ಇತ್ತ ವೈನತೇಯ ಅಮೃತಕಲಶವನ್ನು ನಾಗಗಳಿಗೆ ಕೊಟ್ಟು ತನ್ನ ತಾಯಿಯನ್ನು ದಾಸ್ಯದಿಂದ ವಿಮುಕ್ತಿಗೊಳಿಸಿದನು. ಸರ್ಪಗಳು ಸ್ನಾನ ಮಾಡಿಕೊಂಡು ಅಮೃತವನ್ನು ಸ್ವೀಕರಿಸಲು ಬರುವ ಹೊತ್ತಿಗೆ ಇಂದ್ರ ದರ್ಭೆಯ ಮೇಲೆ ಇಟ್ಟಿದ್ದ ಅಮೃತ ಕುಂಭವನ್ನು ತೆಗೆದುಕೊಂಡು ಹೋಗಿದ್ದ. ಹತಾಷಗೊಂಡ ನಾಗಗಳು ಅಮೃತವು ಸೋರಿ ದರ್ಭೆಯ ಮೇಲೆ ಬಿದ್ದಿರಬಹುದೆಂದು ಆ ದರ್ಭೆಯನ್ನು ನೆಕ್ಕಿದವು. ಹಾಗೆ ಮಾಡಿದ್ದರಿಂದ ನಾಗಗಳ ನಾಲಿಗೆ ಸೀಳಿತು. ಅಮೃತದ ಕುಂಭದ ಸ್ಪರ್ಷವಾಗಿದ್ದರಿಂದ ದರ್ಭೆಗೆ ಅಂದಿನಿಂದ ಪವಿತ್ರ ಎಂಬ ಹೆಸರು ಬಂತೆಂಬ ಉಲ್ಲೇಖವಿದೆ.
ಮತ್ತೆ ರಾಜ್ಯಸಭೆಗೆ ವೆಂಕಯ್ಯ ನಾಯ್ಡು, ಕನ್ನಡಿಗರಿಗೆ ಇಲ್ಲ ಅವಕಾಶ? | Venkaiah Naidu may elect for Rajya Sabha from Karnataka again - Kannada Oneindia
» ಮತ್ತೆ ರಾಜ್ಯಸಭೆಗೆ ವೆಂಕಯ್ಯ ನಾಯ್ಡು, ಕನ್ನಡಿಗರಿಗೆ ಇಲ್ಲ ಅವಕಾಶ?
ಮತ್ತೆ ರಾಜ್ಯಸಭೆಗೆ ವೆಂಕಯ್ಯ ನಾಯ್ಡು, ಕನ್ನಡಿಗರಿಗೆ ಇಲ್ಲ ಅವಕಾಶ?
Updated: Wednesday, May 18, 2016, 12:39 [IST]
ಬೆಂಗಳೂರು, ಮೇ 07 : ಕರ್ನಾಟಕದಿಂದ ಈ ಬಾರಿಯು ರಾಜ್ಯಸಭಾ ಸದಸ್ಯರಾಗಿ ವೆಂಕಯ್ಯ ನಾಯ್ಡು ಅವರು ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಮೂರು ಬಾರಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಅವರು ಆಯ್ಕೆಯಾಗಿದ್ದಾರೆ. ಈ ಬಾರಿಯು ಕನ್ನಡಿಗರಿಗೆ ಬಿಜೆಪಿ ಅವಕಾಶ ನೀಡುವ ಸಾಧ್ಯತೆ ಕಡಿಮೆ.
ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಎಂ.ವೆಂಕಯ್ಯ ನಾಯ್ಡು (ಬಿಜೆಪಿ), ಆಯನೂರು ಮಂಜುನಾಥ್ (ಬಿಜೆಪಿ), ಆಸ್ಕರ್ ಫರ್ನಾಂಡೀಸ್ (ಕಾಂಗ್ರೆಸ್), ವಿಜಯ್ ಮಲ್ಯ (ಪಕ್ಷೇತರ) ಅವರ ಅವಧಿ ಜೂನ್ 30ಕ್ಕೆ ಅಂತ್ಯಗೊಳ್ಳಲಿದೆ. [ಕುಮಾರಸ್ವಾಮಿ ರಾಜ್ಯಸಭೆಗೆ, ಗೌಡರ ಸ್ಪಷ್ಟನೆಗಳು]
ಈ ಸ್ಥಾನಗಳಿಗೆ ಆಯ್ಕೆಯಾಗಲು ಪೈಪೋಟಿ ಆರಂಭವಾಗಿದೆ. ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಲು 45 ಮತಗಳು ಬೇಕು. ವಿಧಾನಸಭೆಯಲ್ಲಿ 46 ಸದಸ್ಯ ಬಲ ಹೊಂದಿರುವ ಬಿಜೆಪಿ ಒಬ್ಬರು ಸದಸ್ಯರನ್ನು ಆಯ್ಕೆ ಮಾಡಿ ಕಳಿಸುವ ಶಕ್ತಿ ಹೊಂದಿದೆ. ಆದರೆ, ಈ ಸದಸ್ಯರು ಕನ್ನಡಿಗರಾಗಿರುವುದಿಲ್ಲ. [ರಾಜ್ಯಸಭೆ ಸದಸ್ಯರಾಗಲು ಪೈಪೋಟಿ]
ವೆಂಕಯ್ಯ ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾರೆ. ದಕ್ಷಿಣ ಭಾರತದ ಬೇರೆ ಯಾವುದೇ ರಾಜ್ಯಗಳಲ್ಲಿ ಬಿಜೆಪಿ ರಾಜ್ಯಸಭೆಗೆ ಸದಸ್ಯರನ್ನು ಆಯ್ಕೆ ಮಾಡುವಷ್ಟು ಸದಸ್ಯ ಬಲ ಹೊಂದಿಲ್ಲ. ಆದ್ದರಿಂದ, ಕರ್ನಾಟಕದಿಂದ ವೆಂಕಯ್ಯ ನಾಯ್ಡು ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. [ಪ್ರತಿಕ್ರಿಯೆ : ವೆಂಕಯ್ಯ ನಾಯ್ಡು ಕರ್ನಾಟಕಕ್ಕೆ ದ್ರೋಹ ಮಾಡಿಲ್ಲವೇ?]
ವೆಂಕಯ್ಯ ನಾಯ್ಡು ಅವರು 1998ರಲ್ಲಿ ಮೊದಲ ಬಾರಿಗೆ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದರು. ನಂತರ 2004 ಮತ್ತು 2010ರಲ್ಲಿ ಸತತವಾಗಿ ರಾಜ್ಯದಿಂದಲೇ ಆಯ್ಕೆಯಾಗಿದ್ದಾರೆ. 2016ರಲ್ಲಿಯೂ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. [ದೇವನಹಳ್ಳಿಯಲ್ಲಿ ಗ್ರಾಮ ದತ್ತು ಪಡೆದ ವೆಂಕಯ್ಯ ನಾಯ್ಡು]
ಒಟ್ಟು ನಾಲ್ಕು ಸದಸ್ಯರನ್ನು ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳಿಸಬೇಕಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ 123 ಶಾಸಕ ಬಲ ಹೊಂದಿರುವ ಕಾಂಗ್ರೆಸ್ ಇಬ್ಬರು ಸದಸ್ಯರನ್ನು ಆಯ್ಕೆ ಮಾಡುವ ಶಕ್ತಿ ಹೊಂದಿದೆ. ಒಂದು ವೇಳೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡರೆ 3ನೇ ಸದಸ್ಯರನ್ನು ಆಯ್ಕೆ ಮಾಡಿ ಕಳಿಸಬಹುದಾಗಿದೆ.
rajya sabha, venkaiah naidu, karnataka, bjp, ವೆಂಕಯ್ಯ ನಾಯ್ಡು, ರಾಜ್ಯಸಭೆ, ಕರ್ನಾಟಕ, ಬಿಜೆಪಿ
Urban Development minister M.Venkaiah Naidu all set to re-elect for Rajya Sabha from Karnataka assembly. In 1998, 2004 and 2010 Venkaiah Naidu elected for Rajya Sabha from Karnataka.
ಭಾಷೆ-ಸಂಸ್ಕೃತಿಯದು ಅವಿನಾಭಾವ ಸಂಬಂಧ | Vikrama
Vikrama > ಲೇಖನಗಳು > ಭಾಷೆ-ಸಂಸ್ಕೃತಿಯದು ಅವಿನಾಭಾವ ಸಂಬಂಧ
ಭಾಷೆ-ಸಂಸ್ಕೃತಿಯದು ಅವಿನಾಭಾವ ಸಂಬಂಧ
-ಡಾ. ಹೆಚ್‍.ಪಾಂಡುರಂಗ ವಿಠಲ
ಹರನ್ ಅವರೆೀ, ನಿಮ್ಮ ಕವನ ಸಂಕಲನ, ಕಥಾ ಸಂಕಲನ, ಕಾದಂಬರಿ, ಭಾಷಣ ಲೇಖನಗಳ ಸಂಗ್ರಹ ಗುಂಭ, ಚಿಂತನ, ವ್ಯಕ್ತಿಚಿತ್ರಗಳ ಸಂಗ್ರಹ ರಾಷ್ಟ್ರಕ, ಅನುವಾದ ದೈವವಾಣಿ ಇವೆಲ್ಲ ಒಂದೊಂದೇ ಪ್ರಕಟವಾಗಿವೆ. ಈ ಹಾದಿಗಳಲ್ಲಿ ನೀವು ಮುಂದುವರೆದಿಲ್ಲ ಏಕೆ?
ಎಲ್ಲರಂತೆ ನಾನೂ ವಿದ್ಯಾರ್ಥಿ ದೆಸೆಯಲ್ಲಿ ಕವನಗಳಿಂದ ನನ್ನ ಬರಹ ಆರಂಭಿಸಿದೆ. ಆಮೇಲೆ, ಸಂದರ್ಭವಶಾತ್ ಕತೆಗಳು, ಕಾದಂಬರಿಯನ್ನೂ ಬರೆದೆ. ಇವೆಲ್ಲ ಸಣ್ಣವು. ಸಂಶೋಧನೆಗೆ ತೊಡಗಿದ ಮೇಲೆ ನನ್ನ ಹಾದಿ ಇದೇ ಎಂದು ನಿರ್ಧರಿಸಿದೆ. ಮುಂದೆ ಬಂದ ಇತರ ಸಾಹಿತ್ಯವೆಲ್ಲ ಸಂದರ್ಭವಶಾತ್ ಬಂದವು, ಅಷ್ಟೆ.
ನಿಮ್ಮ ಪ್ರವಾಸ ಕಥನಗಳು ಹೊಸರೀತಿಯವಾಗಿವೆ. ಅಮೇರಿಕಾ ಬಗೆಗೆ ಎರಡು ಪುಸ್ತಕಗಳಲ್ಲೂ ಹೊಸತೇ ಕೊಟ್ಟಿದ್ದೀರಿ. ವಸ್ತು ಕೂಡ ಪ್ರವಾಸವನ್ನು ಆಗಾಗ ಬಿಟ್ಟು ಬೇರೆಡೆ ಚಲಿಸುತ್ತದೆ. ಪ್ರವಾಸ ಕಥನ ಬರೆಯುವವರಿಗೆ ನಿಮ್ಮ ಸಲಹೆ ಏನು?
ನಾನು ಯಾವ ಸಿದ್ಧತೆಯೂ ಇಲ್ಲದೆ ಮಾನವನ ಮೂಲಭೂತ ಸ್ವಭಾವಗಳು ಎಷ್ಟೊಂದು ಬಗೆಯಲ್ಲಿ ಪ್ರಕಟವಾಗುತ್ತವೆ ಎಂದು ಕುತೂಹಲದಿಂದ ನೋಡಿದ್ದನ್ನು ಬರೆದೆ. ಎಲ್ಲಿ ಹೇಗೆ ಸುತ್ತಿದೆ, ಏನು ನೋಡಿದೆ ಎಂದು ಬರೆಯುವುದಕ್ಕಿಂತ ಇದೇ ನನಗೆ ಮುಖ್ಯ ಎನ್ನಿಸಿತು. ಸ್ಯಾನ್ ರಮೋನಿನಿಂದ ಕರೋನಾ ದಲ್ಮಾರ್ ವರೆಗೆ ಮಾಡಿದ 500 ಮೈಲು ದೀರ್ಘ ಪ್ರಯಾಣದಲ್ಲಿ ಎರಡು ದೃಶ್ಯಗಳನ್ನು ಕಂಡೆ. ನ್ಯೂಯಾರ್ಕಿನ ಅನೇಕ ಚದುರ ಮೈಲು ದೊಡ್ಡದಾದ ಸುಂದರ ಸ್ಮಶಾನ, ವಸತಿ ಪ್ರದೇಶದಂತೆಯೇ ಲೈನುಗಳು, ನಂಬರುಗಳು ಹೊಂದಿದ ಒಂದೇ ಅಳತೆ, ವಿನ್ಯಾಸದ ಅಲ್ಲಿನ ಸಮಾಧಿಗಳು, ಅವುಗಳ ಮೇಲಿನ ಹೊಗಳಿಕೆಯ ಮಾತುಗಳು, ಅಲ್ಲಿಯಂತೆಯೇ ಇಲ್ಲೂ ಸ್ಥಳ ಕಾದಿರಿಸಿ, ಅಲ್ಲಿನ ಜೀವನ ಮುಗಿದ ಮೇಲೆ ಇಲ್ಲಿಗೆ ಬರುವ ವ್ಯವಸ್ಥೆ ಇವುಗಳು ಬೆರಗು ತಂದವು. ಇದರಂತೆಯೇ ಕಟುಕರ ಕಾರ್ಖಾನೆಯ ಮುಂದೆ ಹುಲ್ಲು ಮೇಯುತ್ತಾ ಮೈಮರೆತು ಮಲಗಿದ್ದ ಇಪ್ಪತ್ತೋ ಮುವ್ವತ್ತೋ ಸಾವಿರ ದನಗಳ ಹಿಂಡನ್ನೂ ಕಂಡೆ. ಇವುಗಳ ನಡುವೆ ವಿಚಿತ್ರವಾದ ಸಂಬಂಧವೊಂದು ಕಂಡು ನನಗೆ ಹುಟ್ಟಿದ ಭಾವನೆಯನ್ನು ಬರೆದೆ. ಹೀಗೆಯೇ ಇತರ ಪ್ರಸಂಗಗಳನ್ನು ಬರೆದಿದ್ದು.
ವಿಮರ್ಶೆಗೆ ನೀವು ಬಳಸುವ ಮಾರ್ಗ?
ಸರಳತೆ, ಒಳ್ಳೆಯದನ್ನೆ ಗಮನಿಸುವ ಮಾಸ್ತಿಯವರ ಸಾಧನೆ ನನ್ನದಾದ ದಿನ ಧನ್ಯ ಎಂದುಕೊಳ್ಳುತ್ತೇನೆ. ವಿಮರ್ಶೆ ಎಲ್ಲರಿಗೂ ಅರ್ಥವಾಗುವಂತೆ ಸರಳ ಭಾಷೆ, ಶೈಲಿಯಲ್ಲಿರಬೇಕು. ರಾಷ್ಟ್ರಕವು ವಸ್ತುವಿನ ದೃಷ್ಟಿಯಿಂದ ಪ್ರಕೀರ್ಣಕವಾದರೂ, ಸಾರ್ಥಕ ಪ್ರಜೆಗಳ ನಿರ್ಮಾಣದ ಆಶಯವೇ ಇಡೀ ಪುಸ್ತಕದಲ್ಲಿದೆ. ಅವರವರ ಅಭಿರುಚಿ ಮತ್ತು ಸಿದ್ಧತೆಗೆ ತಕ್ಕಂತೆ ಓದುಗರು ವಸ್ತುನಿರ್ವಹಣೆಯನ್ನು ಸ್ವೀಕರಿಸುತ್ತಾರೆ.
ಕನ್ನಡ ಅಪಾಯದಲ್ಲಿದೆ ಎಂದು ನೀವೂ ಹೇಳುತ್ತ ಹೆದರಿಸುತ್ತೀರಲ್ಲ! ಆರು ಕೋಟಿ ಕನ್ನಡಿಗರು, 1500 ವರ್ಷಗಳ ಸಮೃದ್ಧ ಸಾಹಿತ್ಯದ ಇತಿಹಾಸವುಳ್ಳ ಕನ್ನಡ ತನ್ನನ್ನು ಉಳಿಸಿಕೊಳ್ಳಲಾರದೆ?
ಆರು ಕೋಟಿ ಎಂದಿರಲ್ಲಾ ಅವರು ಸೈನಿಕರೆ? ಖಂಡಿತ ಅಲ್ಲ, ಅವು ಕನ್ನಡವನ್ನು ತಳ್ಳಿ ಇಂಗ್ಲಿಷ್ ಮನೆಯತ್ತ ಉಸಿರುಗಟ್ಟಿಕೊಂಡು ಓಡುತ್ತಿರುವ ಆರು ಕೋಟಿ ಘಟಕಗಳು. ಕನ್ನಡ ಶಾಲೆ ಮುಚ್ಚುತ್ತಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರ ಕಣ್ಣು ಕನ್ನಡಕ್ಕೆ ಒಗ್ಗಿಕೊಳ್ಳುವುದಿಲ್ಲ. ಅವರಿಗೆ ಸಲೀಸಾಗಿ ಕನ್ನಡ ಓದಲು ಬರುವುದಿಲ್ಲ. ಹೀಗೆ ಕ್ರಮವಾಗಿ ಇಂಗ್ಲಿಷಿಗೆ ಒಗ್ಗಿಹೋಗುತ್ತಾರೆ. ಟಿವಿಯಲ್ಲಿ ಗಣ್ಯರ ಮಕ್ಕಳು ಯಾವ ಭಾಷೆಯಲ್ಲಿ ಮಾತನಾಡುತ್ತಾರೆ ನೋಡಿದ್ದೀರಾ? ಮುಂದೆ ನಮ್ಮ ಮಕ್ಕಳೂ ಆಗುವುದೂ ಅವರಂತೆಯೇ.
ಪರಿಹಾರವಿಲ್ಲ. ಇಂಗ್ಲಿಷ್ ಮಾಧ್ಯಮಕ್ಕೂ ಹೊಟ್ಟೆಯಪಾಡಿಗೂ ಸಂಬಂಧವಿದೆ. ಕನ್ನಡಕ್ಕೂ ಹೊಟ್ಟೆಯಪಾಡಿಗೂ ಸಂಬಂಧ ಕಲ್ಪಿಸಿದರೆ ಆದೀತು. ಅದು ಸಾಧ್ಯವೆ? ಜನರಲ್ಲಿ ಅಭಿಮಾನವಿಲ್ಲ; ಅವರ ಪ್ರೀತಿ ಇಂಗ್ಲಿಷ್ ಕಡೆಗಿದೆ. ಸದ್ಯಕ್ಕೆ ಮಾಡಬಹುದಾದುದೆಂದರೆ ಟಿವಿಗಳನ್ನು ತಿದ್ದುವುದು. ಆಡುಗನ್ನಡದ ನಿಘಂಟನ್ನು ಕೊಟ್ಟು ಅದನ್ನೇ ಬಳಸಬೇಕೆಂದು ನಿಯಮಿಸಬೇಕು. ಆಡುಗನ್ನಡ ಮೊದಲು ಸರಿಯಾಗಲಿ. ಆಮೇಲೆ ಅಭಿಮಾನ ಬೆಳೆದೀತು.
ನೀವು ನಿಮ್ಮ ಮೊಮ್ಮಗುವಿಗಾಗಿ ಅಮೇರಿಕೆಗೆ ಹಿಂದೂಧರ್ಮದ ಪುಸ್ತಕಗಳನ್ನು ಒಯ್ದಿರಿ. ಅಲ್ಲಿ ಚಿನ್ಮಯ ಮಿಶನ್ನಿನವರು ಹಿಂದೂ ಮಕ್ಕಳಿಗಾಗಿ ನಡೆಸುತ್ತಿರುವ ಶಾಲೆಯ ಬಗ್ಗೆ ಬರೆದಿದ್ದೀರಿ. ಅಲ್ಲಿನ ಕನ್ನಡಿಗರ ಮಕ್ಕಳು ಎಷ್ಟು ಮಟ್ಟಿಗೆ ಕನ್ನಡವನ್ನು ಉಳಿಸಿಕೊಂಡಿದ್ದಾರೆ? ಎಷ್ಟು ಕಾಲ ಹಿಂದೂಗಳಾಗಿ ಉಳಿಯುತ್ತಾರೆ?
ಈಗ ಅಮೆರಿಕಾದ ಕೆಲವು ಸಣ್ಣ ಪ್ರದೇಶಗಳಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು ತಮ್ಮ ಕನ್ನಡವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಮೆರಿಕಾದಲ್ಲಿ ಈಗ 700 ದೇವಸ್ಥಾನಗಳಿದ್ದು, ಅಲ್ಲಿ ಹಿಂದೂ ಸಂಸ್ಕಾರಗಳನ್ನು ನೀಡುತ್ತಾರೆ. ಅಲ್ಲಿ ನೆಲೆಸಿರುವ ಎಲ್ಲ ದೇಶಗಳ ಮಕ್ಕಳೂ ತಮ್ಮ ಭಾಷೆ ಮತ್ತು ಧರ್ಮವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದಲ್ಲದೆ, ಯಾವ ಭಾಷೆ ಧರ್ಮಗಳಿರಲಿ, ಪ್ರತಿಯೊಬ್ಬರೂ ರಾಷ್ಟ್ರಧರ್ಮಕ್ಕೆ ಆದ್ಯತೆ ನೀಡುತ್ತಾರೆ. ಈ ಉದಾತ್ತ ನಡೆವಳಿಕೆಗೆ ಹಿಂದೂಧರ್ಮದ ತಿಳುವಳಿಕೆ ಪೂರಕವೆಂದು ಎಲ್ಲರೂ ತಿಳಿದಿದ್ದಾರೆ.
ದೀರ್ಘಕಾಲದಿಂದ ನೀವು ಸಾಂಸ್ಕೃತಿಕ ಸಂಶೋಧನೆಯಲ್ಲಿ ತೊಡಗಿದ್ದೀರಿ. ಪ್ರಾರಂಭದಲ್ಲಿ ನೀವು ಎದುರಿಸಿ ಪರಿಹರಿಸಿಕೊಂಡ ತೊಡಕುಗಳನ್ನು ವಿವರಿಸಿದರೆ ಹೊಸಬರಿಗೆ ಅನುಕೂಲವಾದೀತು.
ಕಾಲೇಜಿನಲ್ಲಿ ಜನಪದಗೀತೆಗಳ ಮೂಲ ಮಟ್ಟುಗಳನ್ನು ತೋರಿಸಿ ಕೊಡಬೇಕಾದ ಸಂದರ್ಭ ಬಂತು. ಸಂಶೋಧನೆಯ ಉದ್ದೇಶವೇ ಇಲ್ಲದೆ ನಾನು ಕ್ಷೇತ್ರಕಾರ್ಯಕ್ಕೆ ತೊಡಗಿದೆ. ಅದರ ಶಾಸ್ತ್ರೀಯ ವಿಧಿವಿಧಾನಗಳು ತಿಳಿದಿರಲಿಲ್ಲ. ಕ್ಷೇತ್ರದ ಗ್ರಹಿಕೆಯಾಗಲಿ, ಒಂದು ಕ್ರಮವಾಗಲಿ ಇಲ್ಲದೆ ನಾನು ಕಷ್ಟಪಟ್ಟೆ. ಸಾಂಸ್ಕೃತಿಕ ಸಂಶೋಧನೆಯೇ ನನ್ನ ಕ್ಷೇತ್ರವೆಂದು ಗುರುತಿಸಿಕೊಳ್ಳುವ ಹೊತ್ತಿಗೆ ಸಾವಿರಾರು ಪುಟಗಳ ಸಾಮಗ್ರಿಯನ್ನು ಸಂಗ್ರಹಿಸಿ ಆಗಿತ್ತು. ಸಮುದಾಯ ಅಧ್ಯಯನಕ್ಕೆ ತೊಡಗುವವರಿಗೆ ಇನ್ನೊಂದು ತೊಡಕಿದೆ. ಅದಕ್ಕೆ ಸಂಬಂಧಪಡದ ಜ್ಞಾನಕ್ಷೇತ್ರವೇ ಇಲ್ಲ ಎನ್ನಬಹುದು. ಇಡೀ ಸಮುದಾಯದ ಸಮಗ್ರ ಅಧ್ಯಯನ, ನಿರೂಪಣೆಯಲ್ಲಿ ಸಾಕ್ಷ್ಯಾಧಾರಗಳನ್ನು ಹೊಂದಿಸುತ್ತ ಹೋದರೆ ಕೆಲವು ಬೃಹತ್ ಸಂಪುಟಗಳಾದರೂ ಅದು ಮುಗಿಯುವುದಿಲ್ಲ. ಸಣ್ಣಕ್ಷೇತ್ರ ಮತ್ತು ಆಳವಾದ ಅಧ್ಯಯನ ಎನ್ನುವುದು ಸಂಶೋಧಕನ ಸುವರ್ಣ ಸೂತ್ರ. ಇದು ಸಮುದಾಯದ ಅಧ್ಯಯನಕ್ಕೆ ಸೂಕ್ತ. ಕ್ಷೇತ್ರಕಾರ್ಯದ ಹೆಜ್ಜೆಹೆಜ್ಜೆಯ ವಿವರಗಳು ದಾಖಲಾದರೆ ಅದೇ ಒಂದು ಒಳ್ಳೆಯ ಸಂಶೋಧನ ವರದಿಯಾಗುತ್ತದೆ. ಈ ಮಾಹಿತಿ ಕಣಜದ ಆಧಾರದಿಂದ ನಿಬಂಧವನ್ನು ಮಂಡಿಸಿದರೆ ಹೆಚ್ಚು ವಿಶ್ವಸನೀಯವಾಗುತ್ತದೆ. 'ಸಂಕೇತಿ ಒಂದು ಅಧ್ಯಯನ' ಎಂಬುದು ನನ್ನ ಪಿಎಚ್.ಡಿ ವಿಷಯ. ಇಡೀ ಸಮುದಾಯದ ಸಾಂಸ್ಕೃತಿಕ ಅಧ್ಯಯನ ನನ್ನ ಸಂಶೋಧನೆಯಾದುದರಿಂದ, ಮೂವತ್ತು ವರ್ಷವಾದರೂ ಮುಂದುವರಿದಿದೆ. ಆಕರ ವಸ್ತುಗಳ ಬಗ್ಗೆ 25 ಪುಸ್ತಕಗಳನ್ನೂ, ಸಂಶೋಧನೆಯ ಬಗ್ಗೆ 10 ಸಂಪುಟಗಳನ್ನೂ ಸಮುದಾಯ ಅಧ್ಯಯನ ಕೇಂದ್ರದ ಮೂಲಕ ಪ್ರಕಟಿಸಿದ್ದೇನೆ. ಕ್ಷೇತ್ರಕಾರ್ಯದ ಬಗ್ಗೆ ಈ ವರ್ಷ ಮಾನಿಷಾದ, ಸಂಚರ, ಸಂಭತಿ ಎಂಬ ಮೂರು ಪುಸ್ತಕಗಳನ್ನು ಹೊರತರುತ್ತಿದ್ದೇನೆ. ಸಾಂಸ್ಕೃತಿಕ ಅಧ್ಯಯನ ಮಾಡುವ ಹೊಸಬರಿಗೆ ನನ್ನ ಸಲಹೆ ಸಣ್ಣ ಕ್ಷೇತ್ರವನ್ನು ಆಯ್ದುಕೊಂಡು, ಆಳವಾದ ಸಂಶೋಧನೆ ನಡೆಸಿ ಎಂದು.
ಇನ್ನೂ ಮುಂದುರಿಸುವ ಅಗತ್ಯವಿದೆಯೆ?
ಯಾವುದೇ ಕ್ಷೇತ್ರದಲ್ಲಾದರೂ ಸಂಶೋಧನೆಯ ಲಕ್ಷಣವೇ ನಿರಂತರತೆ. ಸಮುದಾಯ ಅಧ್ಯಯನದಲ್ಲಿ ಇದು ಹೆಚ್ಚು ನಿಜ. ಇಷ್ಟು ಮಾಡಿದಮೇಲೂ, ಪ್ರಾರಂಭದಿಂದ ಕ್ಷೇತ್ರಕಾರ್ಯದ ವಿವರಗಳನ್ನು ಕ್ರಮಬದ್ಧವಾಗಿ, ಸಮಗ್ರವಾಗಿ ದಾಖಲಿಸಿ ಇಡದೇ ಇದ್ದುದು ದೊಡ್ಡ ನಷ್ಟವೆಂಬ ಭಾವ ಇದ್ದೇ ಇದೆ. ಬೇಕಾದ ಮಾಹಿತಿಯನ್ನು ಉಳಿಸಿಕೊಂಡು ಉಳಿದ ಸಾಮಗ್ರಿಯನ್ನೂ ಅನುಭವವನ್ನೂ ಹಿನ್ನೆಲೆಯನ್ನೂ ಕೈಬಿಡುವುದು ಈ ಕ್ಷೇತ್ರಕ್ಕಂತೂ ಸಲ್ಲದು. ಸಮುದಾಯದ ಯಾವುದೋ ಸಣ್ಣ ಭಾಗವನ್ನು ಅಧ್ಯಯನಕ್ಕೆ ಆರಿಸಿದರೆ ಈ ಪರ್ವತ ಸದೃಶ ಕೆಲಸವನ್ನು ಸ್ವಲ್ಪ ಇಳಿಸಿಕೊಳ್ಳಬಹುದಷ್ಟೆ.
ನೀವು ಸಾಹಿತ್ಯ ಕ್ಷೇತ್ರಕ್ಕೆ ಬಂದದ್ದು ಯಾವಾಗ? ನಿಮ್ಮ ಪ್ರವಾಸ ಕಥನ ಮೊದಲಾದ ಪುಸ್ತಕಗಳಲ್ಲಿ ಸಮುದಾಯ ಅಧ್ಯಯನದ ಪ್ರಭಾವ ಇರಬಹುದೆ?
2001ರಲ್ಲಿ ನಾನು ಸಾಹಿತ್ಯದ ಕಡೆ ಹೊರಳಿದ್ದು. ಸುಮ್ಮನೆ ಬ್ರಾಹ್ಮಣರನ್ನು ಬಯ್ಯೋದು, ಬರೆಯೋದು ನೋಡಿ, ಇದರಲ್ಲಿ ಏನಾದರೂ ನಿಜವಿದೆಯೇ ಎಂದು ನನ್ನ ಸಮುದಾಯದ ಅಧ್ಯಯನಕ್ಕೆ ತೊಡಗಿದೆ. ಜೊತೆಗೇ ಪಿಯು ಪಠ್ಯಗಳಿಗೆ ಸಂಬಂಧಿಸಿದಂತೆ ಲೇಖನಗಳನ್ನು ಬರೆದೆ. ಓದುವ ಹುಚ್ಚಿನ ಪ್ರೊ. ಜಿ.ಅಶ್ವತ್ಠನಾರಾಯಣ ನನ್ನ ರೂಂಮೇಟ್. ಪುಸ್ತಕದ ಆಯ್ಕೆ, ಮಾತು, ಕೊಳ್ಳೋದರಿಂದ ಹಿಡಿದು ವಿಮರ್ಶೆಯ ವರೆಗೆ ಮಾತನಾಡುತ್ತ, ಪ್ರಚೋದಿಸಿದ್ದರಿಂದ ಪಿಎಚ್.ಡಿ ಕಡೆ ಗಮನ ಹೋಯಿತು. ಮಾರ್ಗದರ್ಶಕ ಅಂಬಳಿಕೆ ಹಿರಿಯಣ್ಣ ನನಗೆ ಪದ್ಯ ಬರೆಯೋದನ್ನು ನಿಲ್ಲಿಸಿ ಅಂದರು. ಅದು ಸರಿ. ಪದ್ಯದ ಗುಂಗು ವಾರದವರೆಗೆ ಇರುತ್ತೆ. ಸಂಶೋಧನೆಗೆ ಅಡ್ಡಿ. ಪದ್ಯ ಬರೆಯೋದು ನಿಂತೇ ಹೋಯಿತು. ಸಂಶೋಧನೆಯ ಬಗೆಗೆ ಪುಸ್ತಕ ಪಿಎಚ್.ಡಿ ಪದವಿ ಸಿಕ್ಕ ಅನಂತರ ಎಂದರು ಮಿತ್ರ ಅಶ್ವತ್ಥನಾರಾಯಣ. ಮುಗಿದ ಮೇಲೆ ಮೂಲ ಪಠ್ಯಗಳನ್ನು ಪರಿಷ್ಕಾರ ಮಾಡಲೂ, ಪ್ರಕಟಿಸಲೂ ಅವರೇ ಪ್ರೇರಿಸಿದರು. ಇದು ಇಂದೂ ಮುಂದುವರೆದಿದೆ. ಇನ್ನು ಬರವಣಿಗೆಯಲ್ಲಿ ಅಗತ್ಯವಾಗಿ ನನ್ನ ಅಧ್ಯಯನ ನನ್ನ ದೃಷ್ಟಿಧೋರಣೆಗಳನ್ನೂ ನಿರ್ಧರಿಸುತ್ತದೆ. ಒಬ್ಬ ವಿಮರ್ಶಕರು ಗುರುತಿಸಿದಂತೆ ಆಯಾ ಹೊತ್ತಿನ ಸಮಗ್ರ ವಿವೇಕವೇ ನನ್ನ ಸಾಹಿತ್ಯವನ್ನು ನಡೆಸಿದೆ, ಯಾವುದೋ ಒಂದು ಸಿದ್ಧಾಂತವಲ್ಲ.
ನೀವು ಭೈರಪ್ಪನವರ ಸಾರ್ಥವನ್ನು ಸಂಕೇತಿ ಭಾಷೆಗೆ ಅನುವಾದಿಸಿದ್ದೀರಲ್ಲ? ಏಕೆ?
ಇದೂ ನನ್ನ ಸಂಶೋಧನೆಯ ಒಂದು ಭಾಗವೇ. ಸಂಕೇತಿಗಳು 8ನೇ ಶತಮಾನದಲ್ಲಿ ಉತ್ತರದೇಶದಿಂದ ಕೇರಳ, ತಮಿಳ್ನಾಡು ಅಕ್ಕಪಕ್ಕದ, ತಾಮ್ರಪರ್ಣಿ ತೀರದ ಶೆಂಗೊಟ್ಟೈ ಪ್ರಾಂತಕ್ಕೆ ವಲಸೆ ಬಂದರು. ಮುಂದೆ ಜನಸಂಖ್ಯೆ ಹೆಚ್ಚಾಗಿ, ಕೇರಳದ ಒಳನಾಡಿಗೆ ಕೆಲವರು ಹೋದರು. ತ್ರಿವೇಂದ್ರಂ ಕಡೆ ಹೋದವರು ನಂಬೂದಿರಿಗಳಾದರು, ಪಾಲ್ಘಾಟ್ ಕಡೆ ಹೋದವರು ಅಯ್ಯರ್‌ಗಳಾದರು. ಅನಂತರ ಕರ್ನಾಟಕಕ್ಕೆ ಹಾಸನ, ಶಿವಮೊಗ್ಗ, ಬಳ್ಳಾರಿ ಕಡೆ ವಲಸೆ ಬಂದರು. ಇದಕ್ಕೆ ಹಿನ್ನೆಲೆಯಾಗಿ ನಾಚಾರಮ್ಮನ ಶಾಪದ ಕತೆಯೂ ಇದೆ. ವಲಸೆ ಬಂದವರು ಮತ್ತೆ ಶಾಪದ ಹೆದರಿಕೆಯಿಂದ ತಮಿಳ್ನಾಡಿಗೆ ಹಿಂದಿರುಗಲೂ ಇಲ್ಲ, ಸಂಪರ್ಕ ಇಟ್ಟುಕೊಳ್ಳಲೂ ಇಲ್ಲ. ನಾಚಾರಮ್ಮನ ಹೆಸರಿಡುವ ಸಂಪ್ರದಾಯ ಎಲ್ಲ ಭಾಗದವರಲ್ಲೂ ಇದೆ. ಶಾಂತಿಗ್ರಾಮದ ಕೇಶವ ದೇವಾಲಯದ ಶಾಸನದಲ್ಲಿ ತಲೆ ಮೇಲೆ ಕೇಶವನನ್ನು ಹೊತ್ತು ತಂದ ಉಲ್ಲೇಖ ಇದೆ. ಹರಪನಹಳ್ಳಿ ತಾಮ್ರಶಾಸನದಲ್ಲಿ ಮೊದಲು ತಮಿಳು ಬ್ರಾಹ್ಮಣರು 300 ಜನ ಅನಂತರ 700 ಜನ ವಲಸೆ ಬಂದು, ರಾಜ ಉಂಬಳಿ ಕಲ್ಪಿಸಿದ ಬಗ್ಗೆ ಉಲ್ಲೇಖವಿದೆ. ವಲಸೆ ಹೋದ ಮೊದಲ ತಮಿಳು ಬ್ರಾಹ್ಮಣರು ಸಂಕೇತಿಗಳೇ. ಆದರೆ ಎಲ್ಲೆಡೆ ಮೌಖಿಕ ಪರಂಪರೆ, ಆಚರಣೆಗಳೆಲ್ಲ ಒಂದೇ. ಸಾರ್ಥದ ವಸ್ತು ಹೀಗೇ ಇದೆ. ಅಲ್ಲದೆ, ಸಂಕೇತಿ ಭಾಷೆ ಉಳಿಸಲು ಸಾಹಿತ್ಯಸೃಷ್ಟಿ ಅಗತ್ಯವೆನ್ನಿಸಿ ಅನುವಾದಿಸಿದೆ. ಅನುವಾದದ ಬಗ್ಗೆ ನನಗೆ ಸಮಾಧಾನವಿದೆ.
ಅಯ್ಯಂಗಾರರು, ಅಯ್ಯರ್‌ಗಳು ತಮಿಳನ್ನು ಬಿಟ್ಟಿಲ್ಲವಲ್ಲ? ತಮಿಳು, ತೆಲಗು ಮೂಲದವರಿಗೆ ಭಾಷಾಭಿಮಾನ ಹೆಚ್ಚಲ್ಲವೆ?
ಸಂಕೇತಿ ಭಾಷೆ ಲಿಪಿ ಇಲ್ಲದ್ದು. ನಮ್ಮ ಸಮುದಾಯದ ಎರಡು ಮಾಸಪತ್ರಿಕೆಗಳು ಹೊರಬರುತ್ತಿದ್ದರೂ, ಯಶಸ್ವಿಗಳ ಕತೆ, ವರದಿ, ಸಮಾರಂಭಗಳ ವಿವರಗಳು ಮೊದಲಾದುವನ್ನೆ ಮುದ್ರಿಸುತ್ತಾರೆ. ನಮ್ಮ ಭಾಷೆಯ ಬರಹ ಇಲ್ಲ. ನಮ್ಮವರು ವಿದೇಶ ಸೇರುವುದು ಹೆಚ್ಚಾದುದರಿಂದ, ಭಾಷೆಯ ಬಗ್ಗೆ ಗಮನ ಕಡಿಮೆ. ವಲಸೆ ಬಂದವರಾದ್ದರಿಂದ ತಮ್ಮ ಭಾಷೆಯ ಬಗ್ಗೆ ಕೀಳರಿಮೆ. ನನ್ನ ಕ್ಷೇತ್ರಕಾರ್ಯದಲ್ಲಿ ಹಳಬರು ಮಾತ್ರ ಸಂಕೇತಿ ಭಾಷೆ ಉಪಯೋಗಿಸುವುದು, ಉಳಿದವರು ಕನ್ನಡ ಬಳಸುವುದು ಗಮನಕ್ಕೆ ಬಂದು, ವೇದನೆಯಾಯಿತು. ಭಾಷೆಗೂ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ.
ನಿಮಗೆ ಸಾರ್ಥಕ ಭಾವ ತಂದ ಅನುವಗಳು ಯಾವುವು?
ನಾನು ನಿವೃತ್ತನಾದ ಮೇಲೆ ಕನ್ನಡದ ಮೇರು ವಿದ್ವಾಂಸರಾದ ಪ್ರೊ. ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ತಮ್ಮ ಮುಲಕನಾಡು ಮಹನೀಯರು ಪುಸ್ತಕ ಮಾಲಿಕೆಯಲ್ಲಿ ಬೆಳಗೆರೆ ಕೃಷ್ಣಶಾಸ್ತ್ರಿಗಳ ಅಣ್ಣ ಕ್ಷೀರಸಾಗರರ ಬಗೆಗೆ ಪುಸ್ತಕ ಬರೆಯಲು ಕೊಟ್ಟರು. ಅವರ ಜೊತೆ ಕೆಲಸ ಮಾಡುವುದೇ ಒಂದು ಅನುಭವ. ಇದೇ ರೀತಿ, ಇನ್ನೊಬ್ಬ ವಿದ್ವಾಂಸರಾದ ಪ್ರೊ. ಎ.ವಿ. ನರಸಿಂಹಮೂರ್ತಿಯವರಿಗೆ 75 ವರ್ಷವಾದ ಸಂದರ್ಭದಲ್ಲಿ, ಅವರ ಜೀವನ ಚರಿತ್ರೆ 'ನರಸಿಂಹ ಪಥ' ಹೊರತಂದು, ಸಂತೋಷ ಪಟ್ಟೆ.
ಜ.31ರಂದು ಕೊಂಬಾರಿನಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ -ಜಾಗೃತಿ ಶಿಬಿರ : ಕಾರ್ಯಕ್ರಮದಲ್ಲಿ ಏನೆಲ್ಲಾ ಇದೆ?- ಇಲ್ಲಿದೆ ವಿವರ | KANNADIGA WORLD
Home ಕನ್ನಡ ವಾರ್ತೆಗಳು ಕರಾವಳಿ ಜ.31ರಂದು ಕೊಂಬಾರಿನಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ -ಜಾಗೃತಿ ಶಿಬಿರ : ಕಾರ್ಯಕ್ರಮದಲ್ಲಿ ಏನೆಲ್ಲಾ ಇದೆ?- ಇಲ್ಲಿದೆ ವಿವರ
ಮಂಗಳೂರು, ಜನವರಿ.28: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಡಬ ತಾಲೂಕು ಪತ್ರಕರ್ತರ ಸಂಘದ ಆತಿಥ್ಯದಲ್ಲಿ ,ಜಿಲ್ಲಾಡಳಿತ, ವಿವಿಧ ಇಲಾಖೆಗಳ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರ ದೊಂದಿಗೆ 'ಪತ್ರಕರ್ತರ ಗ್ರಾಮ ವಾಸ್ತವ್ಯ ಮತ್ತು ಜಾಗೃತಿ ಶಿಬಿರ' ಜ.31ರಂದು ಕೊಂಬಾರು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಹಿಂದುಳಿದ ಗ್ರಾಮವೊಂದನ್ನು ಗುರುತಿಸಿ, ಅಲ್ಲಿಗೆ ಜಿಲ್ಲೆಯ ಪತ್ರಕರ್ತರು ಭೇಟಿ ನೀಡಿ, ಆ ಗ್ರಾಮದ ಜನರ ಸಮಸ್ಯೆಗಳನ್ನು ತಿಳಿದುಕೊಂಡು ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರದೊಂದಿಗೆ ಜನರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನೆರವಾಗುವುದು.
ಗ್ರಾಮದ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಪರಿಸರ ಸಂರಕ್ಷಣೆ, ಶಿಕ್ಷಣ ,ಆರೋಗ್ಯ ಜಾಗೃತಿ ಕಾರ್ಯಕ್ರಮ ಗಳೊಂದಿಗೆ ಗ್ರಾಮದ ಪಾರಂಪರಿಕ ಜ್ಞಾನ, ಸಾಂಸ್ಕೃತಿಕ ಮೌಲ್ಯ ಗಳನ್ನು ಮುಂದಿನ ತಲೆಮಾರಿಗೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುವುದು, ಮಾಧ್ಯಮಗಳ ಮೂಲಕ ಆ ಗ್ರಾಮದ ಬಗ್ಗೆ ಬೆಳಕು ಚೆಲ್ಲುವುದು ಮತ್ತು ಗ್ರಾಮೀಣ ಪ್ರದೇಶದ ಬೆಳವಣಿಗೆಗೆ ಶ್ರಮಿಸುವ ಸಾಮೂಹಿಕ ಪ್ರಯತ್ನದ ಪರಿಕಲ್ಪನೆ ಪತ್ರಕರ್ತರ ಗ್ರಾಮ ವಾಸ್ತವ್ಯದ ಮುಖ್ಯ ಉದ್ದೇಶವಾಗಿದೆ ಎಂದರು.
ಪ್ರಥಮ ಗ್ರಾಮ ವಾಸ್ತವ್ಯ ಬೆಳ್ತಂಗಡಿಯ ಕುತ್ಲೂರಿನಲ್ಲಿ ಮತ್ತು ಎರಡನೆ ಗ್ರಾಮ ವಾಸ್ತವ್ಯ ಸುಳ್ಯದ ಮಡಪ್ಪಾಡಿಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದಿದೆ. ಇದೀಗ ಕಡಬ ತಾಲೂಕಿನ ಸಿರಿಬಾಗಿಲು-ಕೊಂಬಾರುವಿನಲ್ಲಿ ಮೂರನೇ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ ಎಂದು ಅವರು ಹೇಳಿದರು.
ಶಿಬಿರದಲ್ಲಿ ಏನೆಲ್ಲಾ ಇದೆ ?
ಉದ್ಘಾಟನೆ : ಬೆಳಗ್ಗೆ 10:00 ಗಂಟೆಗೆ ಪತ್ರಕರ್ತರ ಗ್ರಾಮ ವಾಸ್ತವ್ಯದ ಉದ್ಘಾಟನೆಯನ್ನು ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ನೆರವೇರಿಸಲಿರುವರು.
ಆರೋಗ್ಯ ತಪಾಸಣಾ ಶಿಬಿರವನ್ನು ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ಉದ್ಘಾಟಿಸುವರು. ಕುತ್ಲೂರು ಮತ್ತು ಮಡಪ್ಪಾಡಿಯಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯದ ಮಾಹಿತಿ ಕೈಪಿಡಿ ಯನ್ನು ಮಂಗಳೂರು ಶಾಸಕ ಯು.ಟಿ.ಖಾದರ್ ಬಿಡುಗಡೆಗೊಳಿಸಲಿರುವರು.
ಸ್ವಚ್ಛ ಪರಿಸರ,ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನಕ್ಕೆ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚಾಲನೆ ನೀಡಲಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ.
ಎ.ಜೆ.ಸಮೂಹ ಸಂಸ್ಥೆ ಯ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಎಜೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಡೀನ್ ಡಾ.ಅಶೋಕ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎ.ಶಾಂತಾರಾಮ ಶೆಟ್ಟಿ, ಗೌರವ ಕಾರ್ಯ ದರ್ಶಿಕೆ.ಎ.ಪ್ರಭಾಕರ ಶರ್ಮ, ಏಶ್ಯನ್ ಪತ್ರಕರ್ತರ ಒಕ್ಕೂಟದ ಸಂಚಾಲಕ ಹೆಚ್.ಬಿ. ಮದನ ಗೌಡ,ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ರಾಜ್ಯ ಕಾರ್ಯಕಾರಿ ಸಮಿತಿಸದಸ್ಯರಾದ ಆರ್.ರವಿಕುಮಾರ್ ,ಜಗನ್ನಾಥ ಶೆಟ್ಟಿ ಬಾಳ,
ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ ಭಾಗವಹಿಸಲಿರುವರು.
4:00 ಗಂಟೆಗೆ ಪತ್ರಕರ್ತರಿಂದ ಕ್ಷೇತ್ರ ಭೇಟಿ, ಪರಿಸರ ಅಧ್ಯಯನ ಊರಿನ ಹಿರಿಯರೊಂದಿಗೆ ಪತ್ರಕರ್ತರ ಚಾವಡಿ ಚರ್ಚೆ ನಡೆಯಲಿದೆ.
ಈ ಬಾರಿ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲೆಯ ಪತ್ರಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀನಿವಾಸ್ ನಾಯಕ್ ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ,
ದೇಶದಲ್ಲಿ 20 ವರ್ಷಗಳಲ್ಲಿ 1,888 ಲಾಕಪ್ ಡೆತ್: ಕೇವಲ 26 ಮಂದಿ ಪೊಲೀಸರಿಗೆ ಶಿಕ್ಷೆ
Homeಮುಖಪುಟದೇಶದಲ್ಲಿ 20 ವರ್ಷಗಳಲ್ಲಿ 1,888 ಲಾಕಪ್ ಡೆತ್: ಕೇವಲ 26 ಮಂದಿ ಪೊಲೀಸರಿಗೆ ಶಿಕ್ಷೆ
ಕಳೆದ 20 ವರ್ಷಗಳಲ್ಲಿ, ದೇಶಾದ್ಯಂತ 1,888 ಲಾಕಪ್ ಡೆತ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಪೊಲೀಸ್ ಸಿಬ್ಬಂದಿ ವಿರುದ್ಧ 893 ಪ್ರಕರಣಗಳನ್ನು ದಾಖಲಿಸಲಾಗಿದೆ. 358 ಸಿಬ್ಬಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಆದರೆ ಈ ಅವಧಿಯಲ್ಲಿ ಕೇವಲ 26 ಪೊಲೀಸರಿಗೆ ಶಿಕ್ಷೆಯಾಗಿದೆ ಎಂದು ಅಧಿಕೃತ ದಾಖಲೆಗಳು ತಿಳಿಸಿವೆ.
ಇದನ್ನೂ ಓದಿ: ಕಾಸ್‌ಗಂಜ್ ಮುಸ್ಲಿಂ ಯುವಕನ ಲಾಕಪ್ ಡೆತ್: ಸರ್ಕಾರದಿಂದ ವರದಿ ಕೇಳಿದ ಅಲ್ಪಸಂಖ್ಯಾತರ ಆಯೋಗ
ಎನ್‌ಸಿಆರ್‌ಬಿ ಪೊಲೀಸ್ ಕಸ್ಟಡಿ/ಲಾಕಪ್‌ ಡೆತ್‌‌ಗಳನ್ನು ರಿಮಾಂಡ್‌ನಲ್ಲಿ ಇಲ್ಲದ ವ್ಯಕ್ತಿಗಳು ಮತ್ತು ರಿಮಾಂಡ್‌ನಲ್ಲಿರುವ ವ್ಯಕ್ತಿಗಳು ಎಂದು ಎರಡು ವಿಭಾಗಗಳ ಅಡಿಯಲ್ಲಿ ವರ್ಗೀಕರಿಸಿದೆ.
ರಿಮಾಂಡ್‌ನಲ್ಲಿ ಇಲ್ಲದ ವ್ಯಕ್ತಿಗಳು ಎಂದರೆ, ಬಂಧಿಸಲ್ಪಟ್ಟವರನ್ನು ಇನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾದವರು. ರಿಮಾಂಡ್‌ನಲ್ಲಿರುವ ವ್ಯಕ್ತಿಗಳು ಎಂದರೆ ಪೊಲೀಸ್ ಅಥವಾ ನ್ಯಾಯಾಂಗ ಬಂಧನದಲ್ಲಿರುವವರು.
ಇದನ್ನೂ ಓದಿ: ಕಾಸ್‌ಗಂಜ್ ಲಾಕಪ್‌ ಡೆತ್: ಅಪರಿಚಿತ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲು