text
stringlengths
0
61.5k
ಜಾನಪದ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕದಿಂದ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆಗೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಮನಸ್ಸಿನ ಭಾವನೆಗಳನ್ನು ಹೊರಹಾಕಲು, ದೇಶಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಜನಪದವೇ ಸೂಕ್ತ ಎಂದರು.
ಇಡೀ ಪ್ರಪಂಚವೇ ಇಂದು ಜನಪದ ಸಂಸ್ಕೃತಿಯತ್ತ ವಾಲುತ್ತಿದೆ. ನಮಸ್ಕಾರ ಮಾಡುವ ಪದ್ಧತಿ, ಮನೆಯೂಟ, ಮನೆಮದ್ದು, ಸ್ವಚ್ಛತೆ, ಶಿಸ್ತು ಅನೇಕ ವಿಷಯಗಳಲ್ಲಿ ಜನರು ಆಧುನಿಕತೆ ಮರೆತು ಜನಪದ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಜನಪದಕ್ಕೆ ಹಲಸಂಗಿ ಗೆಳೆಯರ ಬಳಗ ಹಾಗೂ ವಿದೇಶಿಗರ ಕೊಡುಗೆಯೂ ಅಪಾರವಾಗಿದೆ. ಜನಪದ ಸೊಗಡಿನ ಪ್ರೇರಣೆ ಪಡೆದು ಗರತಿಯರು ಕೂಡ ಆಧುನಿಕರಣ, ಯಾಂತ್ರೀಕರಣಕ್ಕೆ ಅತಿಯಾಗಿ ಮಾರು ಹೋಗದೆ ಜನಪದ ಸಂಸ್ಕೃತಿಯನ್ನು ಅಪ್ಪಿಕೊಂಡು ಉಳಿಸಿ ಬೆಳೆಸಬೇಕಿದೆ ಎಂದರು.
ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಟಾಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಕೋವಿಡ್ ವೈರಸ್‌ ಪ್ರಭಾವ ಕಡಿಮೆಯಾದ ನಂತರ ಬೀದರನಲ್ಲಿ ಅಂತಾರಾಷ್ಟ್ರೀಯ ಜಾನಪದ ಸಮ್ಮೇಳನ ಆಯೋಜಿಸುವ ಆಶಯ ಹೊಂದಿದ್ದು, ಈ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.
ಹಿರಿಯ ಕಲಾವಿದರಾದ ಎಸ್‌.ಬಿ ಕುಚಬಾಳ, ಲಕ್ಷ್ಮಣರಾವ ಕಾಂಚೆ ಜನಪದ ಗಾಯನ ನಡೆಸಿಕೊಟ್ಟರು. ಯೋಗೇಂದ್ರ ಯದಲಾಪುರೆ, ಶಿವಶರಣಪ್ಪ ಗಣೇಪುರ, ಪ್ರಕಾಶ ಕನ್ನಾಳೆ, ಕಾಂತ ಪಾಟೀಲ, ಮಲ್ಲಮ್ಮ ಸಂತಾಜಿ, ಡಾ. ಸುನಿತಾ ಕೂಡ್ಲಿಕರ್‌ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರೆ, ರಾಷ್ಟ್ರೀಯ ಯುವ ಫೆಲೋಶಿಪ್‌ ಪ್ರಶಸ್ತಿ ಪುರಸ್ಕೃತ ಮಹಾರುದ್ರ ಡಾಕುಳಗಿ ನಿರೂಪಿಸಿದರು. ಡಾ| ಮಹಾನಂದ ಮಡಕಿ ವಂದಿಸಿದರು.
ಕಡಬದಲ್ಲಿ ಕಾಡಾನೆ ಹಾವಳಿ: ಕೃಷಿ ತೋಟಗಳಿಗೆ ಹಾನಿ – V4 News
June 17, 2021 34 No comment
ಕಡಬ: ಕೊಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಬಾಗಿಲು ಗ್ರಾಮದ ಕಾಡಂಚಿನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳು ಕೃಷಿ ತೋಟಗಳಿಗೆ ದಾಳಿಮಾಡಿ ಹಾನಿಯುಂಟು ಮಾಡುತ್ತಿವೆ.
ಕೃಷಿ ತೋಟಗಳಲ್ಲಿ ಕಾಡಾನೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಪಿಲಿಕಜೆ ಎಂಬಲ್ಲಿ ಪಿ.ಸಿ.ಸುಂದರ ಗೌಡ ಎಂಬುವರ ತೋಟಕ್ಕೆ ಲಗ್ಗೆಯಿಟ್ಟ ಆನೆ ಅಡಕೆ, ತೆಂಗು, ಕೊಕ್ಕೋ, ಬಾಳೆ ಮೊದಲಾದ ಕೃಷಿಯನ್ನು ನಾಶಪಡಿಸಿದೆ.
ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ - Mangalorean.com
Home Mangalorean News Kannada News ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್
ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್
tweet ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್
ನವದೆಹಲಿ: ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸೂಚನೆ ನೀಡಿದೆ.
ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಉಭಯ ರಾಜ್ಯಗಳ ಪರ ವಕೀಲರ ವಾದವನ್ನು ಆಲಿಸಿತು. ಬಳಿಕ ತನ್ನ ಆದೇಶ ನೀಡಿದ ನ್ಯಾಯಾಲಯ ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನಂತೆ ಸೆಪ್ಟೆಂಬರ್ 20ರವರೆಗೆ ನೀರು ಹರಿಸುವಂತೆ ಆದೇಶ ನೀಡಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಲಾಗಿದೆ.
ಇದಕ್ಕೂ ಮೊದಲು ಕರ್ನಾಟಕದ ಪರ ತಮ್ಮ ವಾದ ಮಂಡಿಸಿದ ವಕೀಲ ಫಾಲಿ ನಾರಿಮನ್ ಅವರು, ಕರ್ನಾಟಕ ರಾಜ್ಯವೇ ಸಾಕಷ್ಟು ನೀರಿನ ತೊಂದರೆ ಎದುರಿಸುತ್ತಿದೆ. ಈ ಸಂಕಷ್ಟ ಕಾಲದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ತನ್ನ ಈ ಹಿಂದಿನ ಆದೇಶಕ್ಕೆ ತಡೆ ನೀಡಬೇಕು ಎಂದು ಹೇಳಿದರು.
ಇದಕ್ಕೆ ತಕರಾರು ತೆಗೆದ ತಮಿಳುನಾಡು ಪರ ವಕೀಲ ಶೇಖರ್ ನಫಡೆ ಅವರು, ಕರ್ನಾಟಕದ ವಾದವನ್ನು ಒಪ್ಪುವಂತಿಲ್ಲ. ಕರ್ನಾಟಕ ಏಕ ಪಕ್ಷೀಯವಾಗಿ ಮೇಲ್ಮನವಿ ಸಲ್ಲಿಸಿದೆ. ಉಭಯ ರಾಜ್ಯಗಳಿಗೂ ನೀರು ಸರಿಸಮಾನವಾಗಿ ಹಂಚಿಕೆಯಾಗಬೇಕು. ಆದರೆ ಪ್ರಸ್ತುತ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿ ಏಕಪಕ್ಷೀಯವಾಗಿದೆ ಎಂದು ವಾದ ಮಂಡಿಸಿದರು.
ಬಳಿಕ ತಮ್ಮ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನ್ಯಾ. ದೀಪಕ್ ಮಿಶ್ರಾ ಮತ್ತು ನ್ಯಾ. ಉದಯ್ ಲಲಿತ್ ನೇತೃತ್ವದ ನ್ಯಾಯಪೀಠ ಪ್ರತಿ ನಿತ್ಯ 12 ಸಾವಿರ ಕ್ಯೂಸೆಕ್ಸ್ ನೀರಿನಂತೆ ಸೆಪ್ಟೆಂಬರ್ 20ರವರೆಗೆ ನೀರು ಬಿಡುವಂತೆ ಆದೇಶ ನೀಡಿತು. ಆ ಮೂಲಕ ಈ ಹಿಂದಿನ ಆದೇಶಕ್ಕಿಂತ ಕರ್ನಾಟಕ ತಮಿಳುನಾಡಿಗೆ ಹೆಚ್ಚುವರಿ 3 ಟಿಎಂಸಿ ಅಧಿಕ ನೀರು ಬಿಡುವ ಅನಿವಾರ್ಯತೆ ಎದುರಾಗಿದೆ.
ಕರ್ನಾಟಕದ ಪರ ತೀರ್ಪಿಗೆ ತಮಿಳುನಾಡು ಪರ ವಕೀಲರ ಕೊಕ್ಕೆ?
ಇದಕ್ಕೂ ಮೊದಲು ಕರ್ನಾಟಕದ ಪರ ವಕೀಲ ನಾರಿಮನ್ ವಾದಕ್ಕೆ ಮನ್ನಣೆ ನೀಡಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಪ್ರತಿನಿತ್ಯ 10 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶ ನೀಡಲು ಮುಂದಾಗುತ್ತಿದ್ದಂತೆಯೇ ತಮಿಳುನಾಡಪರ ವಕೀಲ ಶೇಖರ್ ನಫಡೆ ಆದೇಶಕ್ಕೆ ತಕರಾರು ತೆಗೆದರು. 10 ಸಾವಿರ ಕ್ಯೂಸೆಕ್ಸ್ ನೀರು ಏನೇನಕ್ಕೂ ಸಾಲುವುದಿಲ್ಲ. ನೀರಿಲ್ಲದೇ ತಮಿಳುನಾಡು ರೈತರು ಸಾಕಷ್ಟು ತೊಂದರೆಗೀಡಾಗಿದ್ದಾರೆ ಎಂದು ಹೇಳಿದರು. ಆ ಬಳಿಕ ಇಡೀ ತೀರ್ಪನ್ನೇ ಬದಲಿಸಿದ ನ್ಯಾಯಮೂರ್ತಿಗಳು ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿದರು.
ಕರ್ನಾಟಕಕ್ಕೆ ಮುಳುವಾದ ಪ್ರತಿಭಟನೆ?
ಇದೇ ವೇಳೆ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಕರ್ನಾಟಕದ ಜನತೆ ವಿರೋಧಿಸಿದ್ದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾ.ದೀಪಕ್ ಮಿಶ್ರಾ ಅವರು, ದೇಶದ ನಾಗರಿಕರು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕು. ಆದೇಶ ಪಾಲನೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಯಾವುದೇ ಕಾರಣಕ್ಕೂ ನಾಗರಿಕರು ಕಾನೂನು ಕೈಗೆ ತೆಗೆದುಕೊಳ್ಳಬಾರದು. ಅಂತೆಯೇ ಕಾರ್ಯಾಂಗ ಕೂಡ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಮಧ್ಯಂತರ ಅರ್ಜಿ ವಿಚಾರಣೆಯಲ್ಲೂ ಕರ್ನಾಟಕಕ್ಕೆ ಹಿನ್ನಡೆ; ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ
ಬೆಂಗಳೂರು: ಮದ್ಯಂತರ ಅರ್ಜಿ ವಿಚಾರಣೆಯಲ್ಲೂ ಕರ್ನಾಟಕಕ್ಕೆ ಹಿನ್ನಡೆಯಾದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನಾಕಾರರ ಆಕ್ರೋಶ ಭುಗಿಲೆದ್ದಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡಪರ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅತ್ತ ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಂತರ ಅರ್ಜಿ ವಿಚಾರಣೆ ತೀರ್ಪು ಹೊರ ಬೀಳುತ್ತಿದ್ದಂತೆಯೇ ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚಿಸಿದರು. ಬಳಿಕ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು ಇದೇ ಸೆಪ್ಟೆಂಬರ್ 15ರಂದು ರಾಜ್ಯಾದ್ಯಂಚ ರೈಲು ಬಂದ್ ಮಾಡುವ ಪ್ರತಿಭಟನೆ ಮಾಡುವುದಾಗಿ ಘೋಷಣೆ ಮಾಡಿದರು.
ಬಳಿಕ ಸಾರಾಗೋವಿಂದು ಸೇರಿದಂತೆ, ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಅಲ್ಲೇ ಕರ್ತವ್ಯ ನಿರತರಾಗಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಒಂದು ಹಂತದಲ್ಲಿ ವಾಟಾಳ್ ನಾಗರಾಜ್, ಸಾರಾಗೋವಿಂದು ಸೇರಿದಂತೆ ಹಲವು ಕನ್ನಡಪರ ಸಂಘಟನೆಯ ಮುಖಂಡರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು.
ತಮ್ಮನ್ನು ತಡೆದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್ ಅವರು, ತಾವೇನೂ ದರೋಡೆಕೋರರಲ್ಲ. ಈ ಹಿಂದೆಯೂ ಕೂಡ ವಿಧಾನಸೌಧ ಮುತ್ತಿಗೆಗೆ ಪ್ರಯತ್ನಿಸಿದೆವು. ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಇಲ್ಲಿಗೆ ಆಗಮಿಸಿದ್ದೇವೆಯೇ ಹೊರತು ಕಾನೂನು ಸುವ್ಯವಸ್ಥೆಗೆ ಭಂಗ ತರಲು ಅಲ್ಲ ಎಂದು ಹೇಳಿದರು. ಬಳಿಕ ವಾಟಾಳ್ ನಾಗರಾಜ್, ಸಾರಾಗೋವಿಂದು ಸೇರಿದಂತೆ ವಿವಿಧ ಕನ್ನಡಪರ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ರಾಜ್ಯಾದ್ಯಂತ ಭುಗಿಲೆದ್ದ ಆಕ್ರೋಶ
ಇದೇ ವೇಳೆ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮತ್ತೆ ಆಕ್ರೋಶ ಭುಗಿಲೆದ್ದಿದ್ದು, ರಾಜಧಾನಿ ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನಾಕಾರರ ಆಕ್ರೋಶ ಭುಗಿಲೆದ್ದಿದೆ. ಮಂಡ್ಯದಲ್ಲಿ ರೈತರು ಬೃಹತ್ ಜಾಥಾ ನಡೆಸುವ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿದರೆ, ಮೈಸೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಬೆಳಗಾವಿಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಚೆನ್ನಮ್ಮ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರು ಪ್ರಕ್ಷುಬ್ಧ
ಇನ್ನು ಕಾವೇರಿ ವಿಚಾರವಾಗಿ ರಾಜಧಾನಿ ಬೆಂಗಳೂರು ಪ್ರಕ್ಷುಬ್ಧಗೊಂಡಿದ್ದು, ಮೈಸೂರು ರಸ್ತೆಯಲ್ಲಿ ಉದ್ರಿಕ್ತರ ಗುಂಪೊಂದು ತಮಿಳುನಾಡು ನೋಂದಣಿಯ ಲಾರಿಗಳಿಗೆ ಬೆಂಕಿ ಹಾಕಲಾಗಿದೆ. ಮೈಸೂರು ರಸ್ತೆಯಲ್ಲಿರುವ ಟಿಂಬರ್ ಯಾರ್ಡ್ ನಲ್ಲಿ ಈ ಘಟನೆ ನಡೆದಿದ್ದು, ಲಾರಿ ಸಂಪೂರ್ಣ ಭಸ್ಮವಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ಮೈಸೂರುರಸ್ತೆಯ ಸ್ಯಾಟೆಲೈಟ್ ಬಸ್ ನಿಲ್ದಾಣದ ಆವರಣದಲ್ಲಿರುವ ಅಡಿಯಾರ್ ಆನಂದಭವನದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಹೊಟೆಲ್ ನ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅರೆ ಸೇನಾ ಪಡೆ ಸಿಬ್ಬಂದಿಗಳು ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಉದ್ರಿಕ್ತರನ್ನು ಚದುರಿಸಿದರು. ಪೊಲೀಸರು ಆಗಮಿಸುತ್ತಿದ್ದಂತೆಯೇ ಸ್ಯಾಟೆಲೈಟ್ ಬಸ್ ನಿಲ್ದಾಣಕ್ಕೆ ಪ್ರತಿಭಟನಾಕಾರರು ಹಾಗೂ ಪೊಲೀಸರು ನುಗ್ಗಿದ್ದರಿಂದ ಸ್ಯಾಟೆಲೈಟ್ ಬಸ್ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಪ್ರಸ್ತುತ ಬಸ್ ನಿಲ್ದಾಣದಲ್ಲಿ ಪೊಲೀಸರ ಲಾಠಿಚಾರ್ಜ್ ವಿರೋಧಿಸಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.
ಸೆಪ್ಟೆಂಬರ್ 5ರಂದು ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರ ಕಳೆದ ಶನಿವಾರ ಮದ್ಯಂತರ ಅರ್ಜಿ ಸಲ್ಲಿಸಿತ್ತು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಸೆಪ್ಟೆಂಬರ್ 20ರವರೆಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಹೇಳಿತ್ತು. ಈ ಹಿಂದಿನ ತೀರ್ಪಿನಲ್ಲಿ ಕರ್ನಾಟಕ 10 ಸಾವಿರ ಕ್ಯೂಸೆಕ್ಸ್ ನಂತೆ 1.50 ಲಕ್ಷ ಕ್ಯೂಸೆಕ್ಸ್ ನೀರು ಹಿರಿಸಿದ್ದರೆ ಸಾಕಿತ್ತು. ಆದರೆ ಇಂದಿನ ತೀರ್ಪಿನ ಬಳಿಕ ಸರ್ಕಾರ ಹೆಚ್ಚುವರಿಯಾಗಿ 30 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ. ಅಂದರೆ ಒಟ್ಟಾರೆ ಸೆಪ್ಟೆಂಬರ್ 20ರವರೆಗೆ ಒಟ್ಟು 1.80ಲಕ್ಷ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಬೇಕಿದೆ.
tweet Previous Articlesಕಾವೇರಿ ವಿವಾದ; ತಮಿಳುನಾಡಿನಲ್ಲಿ ಕನ್ನಡಿಗರ ಹೊಟೆಲ್ ಮೇಲೆ ದುಷ್ಕರ್ಮಿಗಳ ದಾಳಿNext ArticlesSai Tamhankar not yet finalised for 'Hunterrr' Telugu remake Agencieshttp://www.mangalorean.com Related ArticlesMore from Author
Local News Former Indian Cricketer Azharuddin to inaugurate MPL 2016 Kannada News ಉರ್ವಾ ಪೋಲಿಸರಿಂದ ಅಂತರಾಜ್ಯ ಕಳ್ಳನ ಬಂಧನ Local News Dist Court grants bail to 15 accused in Praveen Poojary murder case Leave a Reply Cancel Reply 9
ಕುಂಭ ರಾಶಿ ಜುಲೈ ತಿಂಗಳ ರಾಶಿ ಭವಿಷ್ಯ 2022 - Kumbha Rashi Bhavishya July 2022
ಸೋಮವಾರ, ಜುಲೈ 4, 2022 22:22
ಕುಂಭ ರಾಶಿ ಜುಲೈ ತಿಂಗಳ ರಾಶಿ ಭವಿಷ್ಯ 2022
ಕುಂಭ ರಾಶಿ ಜುಲೈ ತಿಂಗಳ ರಾಶಿ ಭವಿಷ್ಯ - Kumbha Rashi Bhavishya For The Month of July 2022 in Kannada - Aquarius Monthly Horoscope
By Kannada News Today On ಜೂನ್ 28, 2022 20:32 IST
ಕುಂಭ ರಾಶಿ ಜುಲೈ ತಿಂಗಳ ಭವಿಷ್ಯ 2022
Aquarius July 2022 monthly 2022 horoscope
ಜುಲೈ ತಿಂಗಳ ಮೊದಲ ವಾರವು ಸಂಬಂಧದ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಮರ್ಥವಾಗಿದೆ. ನಿಮ್ಮ ಎಲ್ಲಾ ಕೆಲಸಗಳು ಉತ್ತಮ ವೇಗದಲ್ಲಿ ಮುಂದುವರಿಯುತ್ತದೆ. ವಿವಾಹಿತ ದಂಪತಿಗಳು ಕುಟುಂಬವನ್ನು ಹೆಚ್ಚಿಸಲು ಯೋಜಿಸಬಹುದು. ವೃತ್ತಿ ಜೀವನದಲ್ಲಿ ಸ್ಥಿರತೆ ಇರುತ್ತದೆ. ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಜುಲೈ 18 ರಂದು ಶುಕ್ರನ ಸಂಕ್ರಮವು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ನಿಮಗೆ ಅವಕಾಶಗಳನ್ನು ನೀಡುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಪ್ರಣಯ ಪ್ರವಾಸಕ್ಕೆ ಹೋಗಬಹುದು.
ನೀವು ಐಷಾರಾಮಿಯಾಗಿ ಬಹಳಷ್ಟು ಹಣವನ್ನು ಖರ್ಚು ಮಾಡುತ್ತೀರಿ. ಅಧಿಕಾರಿ ವರ್ಗದಿಂದ ಅನುಕೂಲಕರ ಸಹಕಾರ ದೊರೆಯಲಿದೆ. ನೀವು ರಜೆ ತೆಗೆದುಕೊಳ್ಳಲು ಬಯಸಿದರೆ, ನೀವು ಬಾಸ್ ಜೊತೆ ಮಾತನಾಡಬಹುದು. ತಿಂಗಳ ಮಧ್ಯ ಭಾಗವು ತುಂಬಾ ಶುಭಕರವಾಗಿರುತ್ತದೆ..
Aquarius Career and Business Horoscope – Month Of July 2022
ಜುಲೈ 2022 ರ ತಿಂಗಳ ಆರಂಭದಿಂದ, ಕುಂಭ ರಾಶಿಯ ಜನರ ವೃತ್ತಿ ಜೀವನವು ಉತ್ತಮವಾಗಿರುತ್ತದೆ. ಕೆಲಸದಲ್ಲಿನ ನಿಮ್ಮ ಸಮರ್ಪಣೆಯು ಸಂಭಾವನೆಯ ಹೆಚ್ಚಳದೊಂದಿಗೆ ಗುರುತನ್ನು ನೀಡುತ್ತದೆ. ನಿಮ್ಮ ತಕ್ಷಣದ ಮೇಲಧಿಕಾರಿಗಳಿಂದ ಮೆಚ್ಚುಗೆಯನ್ನು ನೀಡುವ ಸೂಕ್ಷ್ಮ ವಿಷಯಗಳಲ್ಲಿ ನೀವು ತೊಡಗಿಸಿಕೊಳ್ಳುತ್ತೀರಿ. ನೀವು ಕೆಲಸದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು ಮತ್ತು ಕಚೇರಿಗೆ ತಲುಪುವಲ್ಲಿ ಸಮಯಪ್ರಜ್ಞೆಯನ್ನು ಹೊಂದಿರಬೇಕು.
ವೃತ್ತಿಪರ ಉನ್ನತಿಯಲ್ಲಿ ಈ ತಿಂಗಳು ಪ್ರಗತಿಶೀಲವಾಗಿರುವಂತೆ ತೋರುತ್ತಿದೆ. ನಿಮ್ಮ ಮೇಲಧಿಕಾರಿಗಳೊಂದಿಗೆ ಪರಿಣಾಮಕಾರಿಯಾಗಿ ಸಂವಹನವನ್ನು ನಿರ್ಮಿಸುವಿರಿ. ನಿಮ್ಮ ಸೂಕ್ಷ್ಮ ನಿರ್ಧಾರಗಳು ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ನಿಮ್ಮ ಸಂಭಾವನೆಗೆ ಹೆಚ್ಚುವರಿ ಪರ್ಕ್‌ಗಳು ಸೇರ್ಪಡೆಯಾಗಲಿವೆ. ಈ ಸಮಯದಲ್ಲಿ ದೂರದ ಪ್ರಯಾಣಗಳು ಕಂಡುಬರುತ್ತವೆ.
Aquarius Love and Relationship Horoscope – Month Of July 2022
ಜುಲೈ 2022 ಈ ತಿಂಗಳು ವೈವಾಹಿಕ ಆನಂದದಲ್ಲಿ ಬೆಂಬಲವನ್ನು ತೋರುತ್ತಿದೆ. ನಿಮ್ಮ ಜವಾಬ್ದಾರಿಗಳನ್ನು ನೀವು ಅತ್ಯಂತ ಎಚ್ಚರಿಕೆಯಿಂದ ತೆರವುಗೊಳಿಸಬೇಕಾಗಿದೆ, ಏಕೆಂದರೆ ಇದು ಗೌರವವನ್ನು ಹೆಚ್ಚಿಸಬಹುದು. ವೈಯಕ್ತಿಕ ಜೀವನದಲ್ಲಿ ನಿಮ್ಮ ಮಧ್ಯಂತರ ಕ್ರಮಗಳು ಹೆಚ್ಚಿನ ತೃಪ್ತಿಯನ್ನು ತುಂಬುತ್ತವೆ. ಹೆಚ್ಚಿನ ಬೌದ್ಧಿಕತೆಯೊಂದಿಗೆ ನೀವು ಸುಲಭವಾಗಿ ಜವಾಬ್ದಾರಿಗಳನ್ನು ಪೂರೈಸುತ್ತೀರಿ. ಉತ್ತಮ ಬೆಂಬಲ ಕ್ರಮಗಳೊಂದಿಗೆ ಹೊಸ ಪ್ರೇಮ ಜೀವನ ಪ್ರಾರಂಭವಾಗಲಿದೆ.
ಮೊದಲ ವಾರದಲ್ಲಿ ಕುಂಭ ರಾಶಿಯ ಜನರು ತಮ್ಮ ನಂಬಿಕೆಯನ್ನು ಹೆಚ್ಚಿಸುವ ಮೂಲಕ ಮತ್ತು ಅವರನ್ನು ಆಕರ್ಷಿಸುವ ಮೂಲಕ ತಮ್ಮ ಪಾಲುದಾರರೊಂದಿಗೆ ಸಂಬಂಧದಲ್ಲಿ ತೊಡಗುತ್ತಾರೆ. ಅಂದರೆ ಅನುಕೂಲಕರ ವಾತಾವರಣ ಉಳಿಯುತ್ತದೆ. ತಿಂಗಳ ಎರಡನೇ ವಾರದಲ್ಲಿ ನಿಮ್ಮ ಕಷ್ಟದ ಮಟ್ಟ ಹೆಚ್ಚಾಗುತ್ತದೆ. ಈ ತಿಂಗಳ ಮೂರನೇ ಮತ್ತು ಅಂತಿಮ ವಾರದಲ್ಲಿ ಇದು ಸಾಮಾನ್ಯವಾಗಿರುತ್ತದೆ. ಇದು ಸಂಬಂಧಗಳಲ್ಲಿ ಮಾಧುರ್ಯದ ಆರಂಭಕ್ಕೆ ಕಾರಣವಾಗುತ್ತದೆ.
Aquarius Finances Horoscope – Month of July 2022
2022 ರ ಜುಲೈ ತಿಂಗಳಲ್ಲಿ, ಕುಂಭ ರಾಶಿಯ ಜನರ ಹಣಕಾಸಿನ ಸಮಸ್ಯೆಗಳಲ್ಲಿ ನಿಮ್ಮ ಆದ್ಯತೆಯ ಕ್ರಮಗಳು ಹಣ ಮತ್ತು ಸಮಯವನ್ನು ಉಳಿಸುತ್ತದೆ. ನೀವು ಕೆಲವು ಸ್ವತ್ತುಗಳನ್ನು ಖರೀದಿಸುವಿರಿ ಮತ್ತು ಬಾಕಿ ಉಳಿದಿರುವ ಪೂರ್ವಜರ ಆಸ್ತಿಗಳು ನಿಮ್ಮ ಪರವಾಗಿ ತೆರವುಗೊಳ್ಳಲಿವೆ. ಊಹಾಪೋಹಗಳು ಉತ್ತಮ ಚಲನೆಗಳೊಂದಿಗೆ ಬೆಂಬಲವನ್ನು ತೋರುತ್ತಿವೆ.
ವ್ಯಾಪಾರ ಸಿಬ್ಬಂದಿ ತಮ್ಮ ಯೋಜನೆಗಳಲ್ಲಿ ಹೆಚ್ಚು ಗಮನಹರಿಸುತ್ತಾರೆ. ನಿಮ್ಮ ನಿಖರವಾದ ಕ್ರಮಗಳು ಮತ್ತು ಚಲನೆಗಳ ಯೋಜನೆಯು ದೀರ್ಘಾವಧಿಯ ಆರ್ಥಿಕ ಲಾಭಗಳಿಗೆ ತ್ವರಿತ ತಿರುವು ನೀಡುತ್ತದೆ. ನಿಮ್ಮ ಪಾಲುದಾರರು ಆಡಳಿತಾತ್ಮಕ ತತ್ವಗಳ ಬದಲಾವಣೆಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ. ಬಜೆಟ್ ಅನ್ನು ಮೀರಿದ ಒಟ್ಟು ವೆಚ್ಚದ ಮೇಲೆ ನೀವು ಕಟ್ಟುನಿಟ್ಟಾದ ವೆಚ್ಚ ಕಡಿತವನ್ನು ಮಾಡಬೇಕಾಗಿದೆ.
Aquarius Education and Knowledge Horoscope – Month of July 2022
ಜುಲೈ 2022 ರ ತಿಂಗಳಲ್ಲಿ, ಕುಂಭ ರಾಶಿಯ ಜನರು ಪ್ರಾಯೋಗಿಕವಾಗಿ ನಿಮ್ಮ ಪ್ರಯತ್ನಗಳನ್ನು ಹಾಕುವ ಸಮಯ ಇದು. ಉತ್ತಮ ಶ್ರೇಣಿ ಮತ್ತು ಹಂತವನ್ನು ನೀಡುವ ಪರೀಕ್ಷೆಗಳಲ್ಲಿ ಹೆಚ್ಚು ಪ್ರಾಮಾಣಿಕವಾಗಿರಲು ಪ್ರಯತ್ನಿಸಿ. ನಿಮ್ಮ ಕಾರ್ಯಯೋಜನೆಗಳನ್ನು ತೆರವುಗೊಳಿಸಲು ಅಧ್ಯಯನಗಳಿಗೆ ಬೆಂಬಲ ಕ್ರಮಗಳು ಸಹಾಯಕವಾಗಿವೆ. ನಿಮ್ಮ ಎಲ್ಲಾ ಪರೀಕ್ಷೆಗಳಲ್ಲಿ ನೀವು ಉತ್ತಮವಾಗಿ ಯೋಜಿಸುತ್ತೀರಿ. ದೂರದ ನಾಡಿನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಕಾತರದಿಂದ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರಯಾಣಗಳು ಬರಲಿವೆ. ಪ್ರಯಾಣಕ್ಕೆ ಉತ್ತಮ ಅವಕಾಶವನ್ನು ಕಾಣಬಹುದು, ಹೆಚ್ಚು ಗಮನ ಮತ್ತು ನಿಮ್ಮ ವಸ್ತುಗಳ ಆರೈಕೆಯನ್ನು ಪ್ರಯತ್ನಿಸಿ.
ಕುಂಭ ರಾಶಿಯ ಜನರು ವಿಷಯಗಳನ್ನು ಸಿದ್ಧಪಡಿಸುವಲ್ಲಿ ಮತ್ತು ಉತ್ತಮ ಗುಣಮಟ್ಟದ ಯಶಸ್ಸನ್ನು ಗಳಿಸುವಲ್ಲಿ ತೊಡಗಿಸಿಕೊಳ್ಳುತ್ತಾರೆ. ಯಶಸ್ಸಿನ ಉತ್ತಮ ಚಿಹ್ನೆಗಳು ಕಂಡುಬರುತ್ತವೆ. ಆದರೆ ತಿಂಗಳ ಎರಡನೇ ವಾರದಲ್ಲಿ ನಿಮಗೆ ಹೆಚ್ಚಿನ ಕೆಲಸ ಬೇಕಾಗುತ್ತದೆ. ಈ ಮೂಲಕ ನೀವು ತಿಂಗಳ ಮೂರನೇ ಮತ್ತು ಕೊನೆಯ ವಾರದಲ್ಲಿ ನಿಮ್ಮ ಜ್ಞಾನವನ್ನು ಸುಧಾರಿಸಲು ಸಾಧ್ಯವಾಗುತ್ತದೆ.
Aquarius Health Horoscope – Month of July 2022
ಜುಲೈ 2022 ರ ತಿಂಗಳು, ಕುಂಭ ರಾಶಿಯ ಜನರು ದೈಹಿಕವಾಗಿ ಸದೃಢರಾಗಿರುತ್ತಾರೆ ಮತ್ತು ದೃಢವಾಗಿರಲು ಪ್ರಯತ್ನಿಸುತ್ತಾರೆ. ಯಾವುದೇ ಹಿಂದಿನ ನೋವು ಪರಿಹಾರವಾಗುತ್ತದೆ. ಆದ್ದರಿಂದ ಈ ತಿಂಗಳ ಎರಡನೇ ವಾರದಿಂದ, ನೀವು ಉತ್ತಮ ಮತ್ತು ಧನಾತ್ಮಕ ಫಲಿತಾಂಶಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತೀರಿ. ತಿಂಗಳ ಮೂರನೇ ವಾರದಲ್ಲಿ, ನಿಮ್ಮ ದೈಹಿಕ ಸಾಮರ್ಥ್ಯಗಳು ಉತ್ತಮವಾಗಿರುತ್ತವೆ. ಆದರೆ ತಿಂಗಳ ಕೊನೆಯ ವಾರದಲ್ಲಿ, ಆರೋಗ್ಯವು ದುರ್ಬಲವಾಗಿರುತ್ತದೆ.
ಹೆಚ್ಚುವರಿ ಶಕ್ತಿಯೊಂದಿಗೆ ಈ ತಿಂಗಳು ಆರೋಗ್ಯವು ಉತ್ತಮವಾಗಿರುತ್ತದೆ. ಕ್ಯಾಲ್ಸಿಯಂ ಸಂಬಂಧಿತ ಆಹಾರ ಮತ್ತು ಶಕ್ತಿಯುತ ಪಾನೀಯಗಳು ನಿಮ್ಮನ್ನು ಸಕ್ರಿಯವಾಗಿರಿಸಬಹುದು.
ಹನೂರಿಗೆ ಕೊಳ್ಳೇಗಾಲ ಅನುದಾನ ಬಳಕೆ | Udayavani – ಉದಯವಾಣಿ
ನೂತನ ತಾಲೂಕಿಗೆ 60 ಲಕ್ಷ ರೂ. ಮಾತ್ರ ಬಿಡುಗಡೆ
Team Udayavani, Oct 10, 2020, 2:39 PM IST
‌ಹನೂರು: ನೂತನ ತಾಲೂಕು ಪಂಚಾಯಿತಿಗೆ ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಯೋಜನೆಯಡಿ 60 ಲಕ್ಷ ರೂ. ಬಿಡುಗಡೆಯಾಗಿದೆ. ಇದನ್ನು ಹೊರತು ಪಡಿಸಿ,ಅನಿರ್ಬಂಧಿತ ಅನುದಾನದಡಿ ಹನೂರುಸೇರಿದಂತೆ 50 ಹೊಸ ತಾಲೂಕುಗಳ ಪೈಕಿಯಾವ ತಾಲೂಕಿಗೂಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಅವಿಭಜಿತ ಕೊಳ್ಳೇಗಾಲ ತಾಲೂಕಿಗೆ ಬಿಡುಗಡೆಯಾಗಿದ್ದ 1.50 ಕೋಟಿ ರೂ. ಅನುದಾನವನ್ನೇ ಹನೂರು ತಾಲೂಕಿಗೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಾಪಂ ಇಒ ರಾಜು ತಿಳಿಸಿದರು.
ಪಟ್ಟಣದ ಜಿ.ವಿ.ಗೌಡ ಪ್ರೌಢಶಾಲೆಯಲ್ಲಿ ತಾಪಂ ಅಧ್ಯಕ್ಷೆ ಸವಿತಾ ಅಧ್ಯಕ್ಷತೆಯಲ್ಲಿ ನಡೆದ ಚೊಚ್ಚಲ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು,ಹನೂರು ತಾಪಂಗೆ ಕಚೇರಿ ತೆರೆಯಲು ಈ ಹಿಂದೆ ಖಾಸಗಿ ಬಸ್‌ ನಿಲ್ದಾಣದ ವಾಣಿಜ್ಯ ಸಂಕೀರ್ಣವನ್ನು ಆಯ್ಕೆಮಾಡಲಾಗಿತ್ತು. ಇಲ್ಲಿ ವಾಹನ ನಿಲುಗಡೆ ಸಮಸ್ಯೆ ಮತ್ತು ಹೆಚ್ಚಿನ ಬಾಡಿಗೆ ನಿಗದಿಪಡಿಸಿದ್ದರಿಂದ ಕಚೇರಿ ತೆರೆದಿಲ್ಲ. ಇದೀಗ ಖಾಸಗಿಯವರ ಒಂದು ಸಂಕೀರ್ಣವನ್ನು ಬಾಡಿಗೆಗೆ ಪಡೆಯಲು ಕ್ರಮವಹಿಸಲಾಗಿದ್ದು, ಇದಕ್ಕೆ ಅನುಮೋದನೆ ಕೂಡ ದೊರೆತಿದೆ. ಆದರೆ, ಸಂಕೀರ್ಣದ ಇ-ಸ್ವತ್ತು ವಿತರಣೆಯಲ್ಲಿ ತಡವಾಗಿದ್ದರಿಂದಕಚೇರಿ ತೆರೆಯಲು ಅಡಚಣೆಯಾಗಿದ್ದು, ವಾರದೊಳಗೆ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗುವುದು ಎಂದರು. ಎಲ್ಲಾ ಇಲಾಖಾ ಅಧಿಕಾರಿಗಳುಫ‌ಲಾನುಭವಿಗಳ ಆಯ್ಕೆ ಮತ್ತು ಸವಲತ್ತು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಶೇ.94ರಷ್ಟುಬಿತ್ತನೆ: ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಂದ್ರಮ್ಮ ಮಾತನಾಡಿ, ತಾಲೂಕಿನ 32,665 ಹೆಕ್ಟೇರ್‌ ಕೃಷಿ ಭೂಮಿ ಪೈಕಿ 31,889 ಹೆಕ್ಟೇರ್‌ನ ಲ್ಲಿ ಅಂದರೆ ಶೇ.94ರಷ್ಟು ಬಿತ್ತನೆಯಾಗಿದೆ. ಇಲಾಖೆಯಲ್ಲಿ 2.54 ಲಕ್ಷ ರೂ. ಲಭ್ಯತೆಯಿದ್ದು, ಈ ಅನುದಾನದಡಿ ಕೊಳ್ಳೇಗಾಲ-ಹನೂರು ತಾಲೂಕಿಗೆ ಅನುದಾನವಿಭಜನೆಯಾದ ಕೂಡಲೇ ಸವಲತ್ತು ವಿತರಿಸಲಾಗುವುದು ಎಂದರು.
ನೀರಿನ ಅಭಾವ: ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರುವಿಭಾಗದಅಧಿಕಾರಿ ಮಹ ದೇವಮೂರ್ತಿ ಮಾತನಾಡಿ, ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಮೊದಲ ಹಂತದಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ. ತಾಲೂಕಿನ ಮಾರ್ಟಳ್ಳಿ, ಸಂದನಪಾಳ್ಯ ಭಾಗದಲ್ಲಿ ಗ್ರಾಪಂ ಮೂಲಕ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗುತ್ತಿದೆ ಎಂದರು.
20ಕ್ಕೆ ದೇಗುಲ ಆರಂಭ: ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮ ದೇವಾಲಯ ಅ. 20 ರಿಂದ ತೆರೆಯಲಿದ್ದು, ಇಲ್ಲಿಯೂ ನೀರಿನ ಅಭಾವವಿದೆ. ಕೊಳವೆ ಬಾವಿ ಕೊರೆದರೂ ನೀರು ಸಿಕ್ಕಿಲ್ಲ.ಈಭಾಗದ ಸಮಸ್ಯೆಯನ್ನು ಬಗೆಹರಿಸಲು ಕನಿಷ್ಠ 10 ಲಕ್ಷ ರೂ. ಅವಶ್ಯಕತೆಯಿದ್ದು, ಮುಂದಿನ ದಿನದಲ್ಲಿ ಕ್ರಿಯಾಯೋಜನೆ ತಯಾರಿಸುವಾಗ ಈ ಭಾಗಕ್ಕೆ ಹೆಚ್ಚಿನ ಅನುದಾನ ನೀಡುವಲ್ಲಿ ಸದಸ್ಯರು ಸಹಕಾರ ನೀಡಬೇಕು ಎಂದು ಕೋರಿದರು.
ತಾಪಂ ಸದಸ್ಯ ರಾಜೇಂದ್ರ, ಹೆಚ್ಚಿನ ಅನುದಾನ ಅವಶ್ಯಕತೆಯಿದ್ದಲ್ಲಿ ಜಿಪಂ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸಲಹೆ ನೀಡಿದರು.
ಪಶು ಸಂಗೋಪನಾ ಇಲಾಖೆ ಬಗ್ಗೆ ಸಹಾಯಕ ನಿರ್ದೇಶಕ ಸಿದ್ದರಾಜು ಮಾಹಿತಿ ನೀಡುತ್ತಿದ್ದರು. ಈ ವೇಳೆ ಕೆಲ ಸದಸ್ಯರು, ಸಭೆಗೆ ಹಿರಿಯ ಅಧಿಕಾರಿಯಾದ ವೆಂಕಟರಾಮು ಅವರಿಂದ ಮಾಹಿತಿ ಬೇಕಿತ್ತು. ಆದರೆ, ಅವರು ಗೈರಾಗಿದ್ದಾರೆ ಎಂದು ಕಿಡಿಕಾರಿದರು.
ಸಭೆಗೂ ಮುನ್ನ ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಪ್ರಗತಿಯಲ್ಲಿರುವಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ತಾಪಂಉಪಾಧ್ಯಕ್ಷೆರುಕ್ಮಿಣಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಮತಿ, ಸದಸ್ಯರಾದ ಶಿವಮ್ಮ, ಪಾರ್ವತಿ,ರಾಜೇಂದ್ರ,ನಟರಾಜು,ಶಕುಂತಲಾ, ಅಲಗತಂಬಡಿ, ಸಣ್ಣಕಾಳಶೆಟ್ಟಿ, ಮಣಿನಾಯ್ಕೆ ಮಾಣಿಕ್ಯ, ಬಿಇಒ ಸ್ವಾಮಿ, ಎಇಇ ರಮೇಶ್‌, ಶಂಕರ್‌, ಜೆ.ಇ ರಮೇಶ್‌, ಸಮಾಜ ಕಲ್ಯಾಣ ಇಲಾಖೆ ಮಂಜುಳಾ, ನರೇಗಾ ಸಹಾಯಕ ನಿರ್ದೇಶಕ ಮಹದೇವಸ್ವಾಮಿ, ವ್ಯವಸ್ಥಾಪಕ ಶಂಕರ್‌ ಇತರರಿದ್ದರು.
ಯೂರಿಯಾ ಅಭಾವ ಸೃಷ್ಟಿಸಿದರೆ ಲೈಸೆನ್ಸ್‌ರದ್ದು : ತಾಲೂಕಿನಲ್ಲಿ ಕೆಲ ಅಂಗಡಿಯವರು ಕೃತಕ ಯೂರಿಯಾ ಅಭಾವ ಸೃಷ್ಟಿಸಿ, ಪ್ರತಿ ಮೂಟೆಗೂ 400 ರೂ. ದರದಲ್ಲಿ ಕಾಳಸಂತೆಯಲ್ಲಿ ಮಾರುತ್ತಿದ್ದಾರೆ ಎಂದುತಾಪಂ ಸದಸ್ಯ ನಟರಾಜು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಂದ್ರಮ್ಮ, ಇಡೀ ರಾಜ್ಯದಲ್ಲಿಯೇ ಯೂರಿಯಾ ಸಮಸ್ಯೆ ಇದೆ. ಮಂಡ್ಯ ಜಿಲ್ಲೆಯಿಂದ ಖರೀದಿಸಿ ವಿತರಿಸಲಾಗುತ್ತಿದೆ. ಅದಾಗ್ಯೂ ಕೃತಕಅಭಾವ ಸೃಷ್ಟಿಸಿದರೆ ಅಂತಹ ಗೊಬ್ಬರ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಮ್ಮ ಪೂರ್ವಜರು ಎಲ್ಲಿಂದ ಬಂದರು ? – ಋತುಮಾನ
ನಮ್ಮ ಪೂರ್ವಜರು ಎಲ್ಲಿಂದ ಬಂದರು ?
Author ಟೋನಿ ಜೋಸೆಫ್ Date April 20, 2020
ನಮ್ಮನ್ನು ಒಟ್ಟಾಗಿ ಒಂದುಗೂಡಿಸುವ ನಮ್ಮೊಳಗಿನ ಸಮಾನತೆಗಳು ಬಹಳಷ್ಟಿವೆ. ನಾವು ಇಲ್ಲಿ ಸಾವಿರಾರು ವರ್ಷಗಳಿಂದ ನಡೆದ ಬಹುದಿಕ್ಕುಗಳ ಬಹುಹರಿವಿನ ವಲಸೆಗಳಿಂದ ಒಂದು ಸಮಾನವಾದ ನಾಗರೀಕತೆಯನ್ನು ರೂಪಿಸಿದ್ದೇವೆ. ನಮ್ಮ ಈಗಿರುವಂತೆ ಹೇಗಾದೆವು, ಎಂಬುದೊಂದು ಅತ್ಯಂತ ನವಿರೇಳಿಸುವ ಇತಿಹಾಸ. ಈಗಿನ ಭಾರತದ ಜನಸಂತತಿಯನ್ನು ರೂಪಿಸಿದ ನಾಲ್ಕು ಪ್ರಮುಖ ವಲಸೆಗಳ ಕುರಿತಾಗಿ ಟೋನಿ ಜೊಸೆಫ್ ಬರೆದಿರುವ ಲೇಖನ.
ಈವತ್ತಿನ ದಿನದಲ್ಲಿ ಭಾರತದ ಯಾವುದೇ ಸಮುದಾಯದ ಒಂದು ಗುಂಪನ್ನು ನೀವು ನೋಡಿದರೆ, ಅದು 4 ಬೇರೆ ಬೇರೆ ಜನಾಂಗದ ಒಂದು ಮಿಶ್ರಣ ಎಂಬುದು ನಿಮಗೆ ಗೋಚರಿಸುತ್ತದೆ. ಈ ಮಿಶ್ರಣ ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಇದೆ . ಅಂದರೆ ಪೂರ್ವ ಭಾರತದಲ್ಲಿ ಅದು ಪೂರ್ವ ಏಶಿಯಾದ ಸಂತತಿಯಾಗಿರಬಹುದು ಹಾಗೂ ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಅದು ಪಶ್ಚಿಮ ಮತ್ತು ಮಧ್ಯ ಏಶಿಯಾದ ಸಂತತಿಯಾಗಿರಬಹುದು. ಹಾಗೆಯೇ ದಕ್ಷಿಣ ಭಾರತದಲ್ಲಿ ಮೊದಲ ಭಾರತೀಯ ಸಂತತಿ ಹೆಚ್ಚಾಗಿ ಕಾಣಬರುತ್ತದೆ. ಆದರೆ ಭಾರತದ ಹೆಚ್ಚೂಕಮ್ಮಿ ಎಲ್ಲಾ ಜನಸಂಖ್ಯೆಯ ಗುಂಪುಗಳೂ ಕೂಡ ಈ ನಾಲ್ಕು ಬಣಗಳು ವಿವಿಧ ಪ್ರಮಾಣಗಳಲ್ಲಿ ಬೆರೆತುಕೊಂಡ ಮಿಶ್ರಣಗಳಾಗಿವೆ. ಅನಾದಿ ಕಾಲದಲ್ಲಿ ಈ ನಾಲ್ಕೂ ಬಣಗಳು ನಮ್ಮ ಉಪಖಂಡಕ್ಕೆ ವಲಸೆ ಬಂದು ನಮ್ಮ ಜನಸಂಖ್ಯೆಯನ್ನು ರೂಪಿಸಿದವು.
ನಮ್ಮ ಪೂರ್ವಜರು ಎಲ್ಲಿಂದ ಬಂದರು ? ಮತ್ತು ಅವರ ಸಂತತಿಯ ಎಲ್ಲಿದ್ದು?
ಒಂದು ಆಸಕ್ತಿಕರವಾದ ಸಂಗತಿಯೆಂದರೆ ಈ ಹಿಂದಿನ ಕೆಲವು ವರ್ಷಗಳ ತನಕವೂ, ನಾವು ಯಾರು ಎಲ್ಲಿಂದ ಬಂದೆವು ಎಂಬ ಪ್ರಶ್ನೆಗೆ ಎಲ್ಲರೂ ಒಪ್ಪುವಂಥ ಉತ್ತರ ಹೇಳುವುದು ಬಹಳ ಕಷ್ಟವಾಗುತ್ತಿತ್ತು. ನಿಜ, ಭಾಷಾವಿಜ್ಞಾನ(philology), ಶಿಲಾಶಾಸನ ಶಾಸ್ತ್ರ ಮತ್ತು ಭಾಷಾಶಾಸ್ತ್ರಗಳನ್ನು (linguistics ), ಮತ್ತು ಪುರಾತತ್ವಶಾಸ್ತ್ರಗಳಂಥಹ ಇತಿಹಾಸಕ್ಕೆ ಸಂಬಂಧ ಪಟ್ಟ ಶಾಸ್ತ್ರಗಳ ಆಧಾರದ ಮೇಲೆ ಹಲವು ಊಹೆಗಳನ್ನು ಮಾಡಬಹುದಿತ್ತು. ಆದರೆ ಅವು ಊಹೆಗಳಷ್ಟೇ ಆಗಿರುತ್ತಿದ್ದವು. ಆದರೀಗ ಅದು ಬದಲಾಗಿದೆ. ಅದಕ್ಕೆ ಕಾರಣ, ಇತರ ವಿಷಯಗಳಿಗಿಂತ ಸ್ವಲ್ಪ ಹೊಸ ಅಧ್ಯಯನ ಕ್ಷೇತ್ರವಾದ ಜನಸಂಖ್ಯಾ ತಳಿಶಾಸ್ತ್ರ.( Population genetics). ಈಗ ಜಸಂಖ್ಯಾ ತಳಿಶಾಸ್ತ್ರಜ್ಞರಿಗೆ ಅಲ್ಲಲ್ಲಿ ಸಿಗುತ್ತಿರುವ ಹತ್ತಾರು ಸಾವಿರ ವರ್ಷಗಳ ಹಿಂದೆ ಜೀವಿಸಿದ್ದ ಜನರ ಆಸ್ತಿಪಂಜರಗಳಿಂದ DNAಗಳನ್ನು ಹೊರತೆಗೆದು ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತಿದೆ.
ಹಾಗೆ ಅರಿತುಕೊಂಡ ವಿಷಯಗಳನ್ನು ಆಧರಿಸಿ ಯಾವ ಜನಸಂಖ್ಯೆಯ ಜನರು, ಯಾವಾಗ, ಎಲ್ಲಿಂದ, ಎಲ್ಲಿಗೆ ಚಲಿಸಿದರು ಎಂದು ಕಂಡುಹಿಡಿಯಬಹುದಾಗಿದೆ. ಈ ಹಿಂದಿನ ಕೆಲವು ವರ್ಷಗಳಲ್ಲಿ ನೂರಾರು, ಸಾವಿರಾರು ಪ್ರಾಚೀನ DNA ಸ್ಯಾಂಪಲ್ಲುಗಳನ್ನು ಜಗತ್ತಿನಾದ್ಯಂತ ವಿವಿಧ ಭಾಗಗಳಿಂದ ಸಂಗ್ರಹಿಸಲಾಗಿದೆ. ಇದರಿಂದ ನಮಗೆ ಬೇರೆಬೇರೆ ಜನಸಂಖ್ಯೆಗಳು ಹೇಗೆ ರಚಿತವಾದವು ಎಂಬುದರ ಬಗ್ಗೆ ಹೆಚ್ಚು ಸ್ಪಷ್ಟ ಚಿತ್ರಣ ಮೂಡುತ್ತದೆ. ಈ ತಳಿಶಾಸ್ತ್ರ ಕ್ಷೇತ್ರದ ಸಂಶೋಧನೆಯ ಫಲಿತಾಂಶಗಳನ್ನು ನಾವು ಈಗಾಗಲೇ ನಮ್ಮ ಬಳಿ ಇರುವ ಪುರಾತತ್ವ ಶಾಸ್ತ್ರ, ಭಾಷಾವಿಜ್ಞಾನ, ಭಾಷಾಶಾಸ್ತ್ರ ಮುಂತಾದ ಇತರ ಜ್ಞಾನ ಶಾಖೆಗಳ ತಿಳುವಳಿಕೆಗಳೊಂದಿಗೆ ಜೋಡಿಸಿದಾಗ ನಮಗೆ, ನಮ್ಮ ಇತಿಹಾಸಪೂರ್ವದ ಬಗೆಗೆ ಒಂದು ಅತಿ ಉತ್ತಮ ನಿರ್ಧಾರ ಮೂಡುತ್ತದೆ. ಉದಾಹರಣೆಗೆ, ನಮಗೆ ಈಗಿರುವ ಯೂರೋಪಿನ ಇಂದಿನ ಜನಸಂಖ್ಯೆಯು ಮೂರು ಪ್ರಮುಖ ವಲಸೆಗಳ ಫಲಿತಾಂಶವಾಗಿದೆ ಎಂದು ತಿಳಿದು ಬಂದಿದೆ. ಆ ಮೂರು ವಲಸೆಗಳಲ್ಲಿ ಎರಡು ಇತ್ತೀಚಿನ ಹತ್ತುಸಾವಿರ ವರ್ಷಗಳ ಒಳಗಷ್ಟೇ ನಡೆದಿವೆ. ಮೊದಲಿಗೆ ಪಶ್ಚಿಮ ಏಸಿಯಾದ, ಅಂದರೆ ಈಗ ನಾವು ಟರ್ಕೀ ಎಂದು ಕರೆಯುವ ಪ್ರದೇಶದ ಮೊದಮೊದಲ ವ್ಯವಸಾಯ ನಡೆಸುವ ಜನರ ಒಂದು ಬಣ ಯೂರೋಪಿನ ಒಳಗೆ ಚಲಿಸಿತು. ಆ ಬಣದವರು ಅಲ್ಲಿನ ಬೇಟೆಗಾರ- ಆಹಾರ ಸಂಗ್ರಹಕಾರ ಜನಾಂಗವನ್ನು ಹೆಚ್ಚಿನಮಟ್ಟದಲ್ಲಿ ಸ್ಥಾನಪಲ್ಲಟ ಮಾಡಿ ಬದಲಿಗೆ ತಾವು ಅಲ್ಲಿ ನೆಲೆನಿಂತರು. ಅಲ್ಲದೆ ಸ್ವಲ್ಪ ಮಟ್ಟಿಗೆ ಅಲ್ಲಿನ ಬೇಟೆಗಾರ-ಸಂಗ್ರಹಕಾರ ಜನರೊಡನೆ ಮಿಳಿತವೂ ಆದರು.
ಮತ್ತೆ ಸುಮಾರು 5000 ವರ್ಷಗಳ ಹಿಂದೆ ಮಧ್ಯ ಏಸಿಯಾದ 'ಸ್ಟೆಪ್' ಹುಲ್ಲುಗಾವಲಿನಲ್ಲಿ ವಾಸಿಸುತ್ತಿದ್ದ 'ಯಾಮ್ನಾಯ' ಸಂಸ್ಕೃತಿಯ ಒಂದಷ್ಟು ಜನಾಂಗ ಯೂರೋಪಿನೊಳಗೆ ಚಲಿಸಿತು. ಅಲ್ಲಿ ಉಳಿದಿದುಕೊಂಡಿದ್ದ ಅಲ್ಪಸ್ವಲ್ಪ ಸಂಖ್ಯೆಯ ಬೇಟೆಗಾರ-ಸಂಗ್ರಹಕಾರರನ್ನೂ ಮತ್ತು ಹಿಂದಿನ ವಲಸೆಯಿಂದ ನೆಲೆನಿಂತಿದ್ದ ವ್ಯವಸಾಯಗಾರರನ್ನೂ ಅವರು ಹೆಚ್ಚಿನ ಮಟ್ಟದಲ್ಲಿ ಸ್ಥಾನಪಲ್ಲಟಗೊಳಿಸಿ ಬದಲಿಗೆ ತಾವೇ ಅಲ್ಲಿ ನೆಲೆಸಿದರು. ಅಲ್ಲದೆ ಸ್ವಲ್ಪ ಮಟ್ಟಿಗೆ ಅವರೊಡನೆ ಮಿಳಿತವೂ ಆದರು. ಹೀಗಾಗಿ ಈಗಿರುವ ಯೂರೋಪಿನ ಜನಸಂಖ್ಯೆ ಈ ಎರಡು ವಲಸೆಗಳಿಂದ ರಚಿತವಾಗಿದೆ.
ಮತ್ತೆ ನಮಗೆ ಅಮೆರಿಕದ ಮೂಲ ನಿವಾಸಿಗಳ ಜನಸಂಖ್ಯೆಯೂ ಕೂಡ ಏಶಿಯಾದಿಂದ ವಲಸೆ ಹೋದ ಮೂರು ಪ್ರಮುಖ ಜನಸಂಖ್ಯೆಯ ಬಣಗಳಿಂದ ರಚಿತವಾಗಿದೆ ಎಂದು ತಿಳಿದಿದೆ. ಆ ವಲಸೆಗಳು ಸುಮಾರು 16000 ವರ್ಷಗಳ ಹಿಂದೆ, ಅಥವಾ ಅದರಿಂದ ಸ್ವಲ್ಪ ಇತ್ತೀಚೆಗೆ, ಸೈಬೀರಿಯಾದಿಂದ ವಲಸೆ ಹೋಗಿತ್ತು. ಇದೇ ರೀತಿಯಲ್ಲಿ ನಮಗೆ ಪ್ರಮುಖ ವಲಸೆಗಳ ಪರಿಣಾಮವಾಗಿ ಹೇಗೆ ವಿವಿಧ ಜನಸಂಖ್ಯಾ ಗುಂಪುಗಳು ರಚಿತವಾದವು ಎಂಬುದರ ಬಗ್ಗೆ ಸ್ಪಷ್ಟ ತಿಳುವಳಿಕೆಯಿದೆ.
ಈಗ ನಿಮ್ಮಲ್ಲಿ ಪ್ರಶ್ನೆಗಳೆದ್ದಿರಬಹುದು. "ವಲಸೆಗಳು ಎಲ್ಲಾ ಕಾಲದಲ್ಲೂ ಎಲ್ಲಾ ಪ್ರದೇಶಗಳಲ್ಲೂ ನಡೆಯುತ್ತಿರುತ್ತವೆ. ಅವುಗಳಿಗೆ ನೀವು ಹೇಗೆ ನಿರ್ದಿಷ್ಠ ಆಕಾರವನ್ನು ಕೊಡಬಲ್ಲಿರಿ? ಯಾವ ವಲಸೆಯಿಂದ ಎಂಥಹ ಪರಿಣಾಮವಾಯಿತು? ಎಂದು ಹೇಗೆ ಅರಿತುಕೊಳ್ಳಬಲ್ಲಿರಿ?" ಎಂದು ಕೇಳಬಹುದು. ಅದಕ್ಕೆ ಉತ್ತರ ಹೀಗಿದೆ, "ಅವುಗಳಿಗೆ ಒಂದು ಆಕಾರವನ್ನು ಕೊಡಲು ಒಂದು ಮಾರ್ಗವಿದೆ. ಅಂದರೆ ಒಟ್ಟಿನಲ್ಲಿ ಹೀಗೆ ಅರ್ಥಮಾಡಿಕೊಳ್ಳಬೇಕು. ನಾಲ್ಕು ಪ್ರಮುಖ ವಲಸೆಯ ವರ್ಗಗಳಿವೆ. ಅವುಗಳ ಪರಿಣಾಮವಾಗಿ ಪ್ರಪಂಚದ ಬಹುತೇಕ ಜನಾಂಗಗಳು ಆಕಾರಗೊಂಡವು. ಆ ನಾಲ್ಕು ವರ್ಗಗಳ ಪ್ರತಿ ವಲಸೆಯನ್ನೂ ಒಂದೊಂದು ಜಾಗತಿಕ ಶಕ್ತಿ/ಪ್ರಭಾವ ಚಾಲನೆಗೆ ಪ್ರಚೋದಿಸಿತು. ಅಂದರೆ, ನಾವು ಹಿಂದಿರುಗಿ ಗಮನಿಸಿದಾಗ ಆ ವಲಸೆಗಳು ಆ ಕಾಲಗಳಲ್ಲಿ ಏಕೆ ನಡೆಯಿತು ಎಂಬುದು ನಮಗೆ ತಿಳಿಯುತ್ತದೆ.
ಅವುಗಳಲ್ಲಿ ಮೊದಲ ವಲಸೆಯನ್ನು "ಆಫ್ರಿಕಾದಿಂದ ಹೊರಬಂದ ವಲಸೆ (Out of Africa)" ಎಂದು ಕರೆಯುತ್ತೇವೆ. ಇದರ ಬಗ್ಗೆ ಪ್ರಾಯಶಃ ನೀವು ಈಗಾಗಲೇ ಕೇಳಿರಬಹುದು ಅಥವಾ ಓದಿರಬಹುದು. ಇದು ಸುಮಾರು 70,000 ವರ್ಷಗಳ ಹಿಂದೆ ನಡೆಯಿತು. ಆಗ ಆಫ್ರಿಕಾದಲ್ಲಿ ಆಗ ಇದ್ದ ಜನಸಂಖ್ಯೆಯ ಒಂದು ಸಣ್ಣ ಉಪಬಣ ಅರೇಬಿಯನ್ ಪರ್ಯಾಯದ್ವೀಪ (Arabian Peninsula) ಪ್ರದೇಶಕ್ಕೆ ವಲಸೆ ಹೊರಟರು. ಮುಂದೆ ಕಾಲಾಂತರದಲ್ಲಿ ಜಗತ್ತಿನ ಇತರ ಎಲ್ಲಾ ಭಾಗಗಳಲ್ಲೂ ಜನರು ನೆಲೆಸುವಂತೆ ಮಾಡಲು ಈ ವಲಸೆಯೇ, ಮತ್ತವರ ಸಂತತಿಯೇ ಕಾರಣವಾಯಿತು. ಅವರು ತಲುಪಿದ ಕಡೆಯ ಖಂಡ ಅಮೆರಿಕಾ ಖಂಡ. ಅದನ್ನು ಅವರು ಸುಮಾರು 16000 ವರ್ಷಗಳ ಹಿಂದೆ ತಲುಪಿದರು. ಹಾಗಾಗಿ, 70,000 ವರ್ಷಗಳ ಹಿಂದಿನಿಂದ ಸುಮಾರು 16000 ವರ್ಷಗಳ ಹಿಂದಿನ ನಡುವಿನ ಅವಧಿಯಲ್ಲಿ ಪ್ರಪಂಚದ 'ತಿಳಿದಿರುವ ಆಫ್ರಿಕಾದ ಜಗತ್ತನ್ನು" ಜನಮಯವನ್ನಾಗಿಸುವ ಕಾರ್ಯ ನಡೆಯಿತು.
ಮೊದಲ ವಲಸೆ – ಆಫ್ರಿಕಾದಿಂದ ಹೊರಗೆ ಹೊರಟದ್ದು
ಹಾಗಾಗಿ "ಯಾರು ಮೊದಲ ಭಾರತೀಯರು? ಯಾರು ಮೊದಲ ಜಪಾನೀಯರು, ಆಸ್ಟ್ರೇಲಿಯಾದವರು, ಅಮೇರಿಕಾದವರು…. ಎಂಬ ಎಲ್ಲಾ ಪ್ರಶ್ನೆಗಳಿಗೂ ಒಂದೇ ಉತ್ತರ. ಅವರೆಲ್ಲರೂ ಒಂದೇ ಅಂದರೆ ಒಂದೇ ಮೂಲದ ಜನರು. ಅವರೆಲ್ಲರೂ "ಆಫ್ರಿಕಾದಿಂದ ಹೊರಬಂದ ವಲಸಿಗರು".
ಅವರು ಆಫ್ರಿಕಾದಿಂದ ಹೊರಬಂದು ಎಲ್ಲಾ ಕಡೆ ಹರಡಿಕೊಂಡ ಮೇಲೆ ಒಂದು ಮಹತ್ವದ ಘಟನೆ ನಡೆಯಿತು. ಅದೇ "ಹಿಮಯುಗ". ಈ ಹಿಮಯುಗ ಸಾವಿರಾರು ವರ್ಷಗಳವರೆಗೆ ನಡೆಯಿತು. ಆ ಹಿಮಯುಗದ ಕಾಲದಲ್ಲಿ, ಪ್ರಪಂಚದ ಬಹಳಷ್ಟು ಭಾಗ ವಾಸಿಸಲು ಅಯೋಗ್ಯವಾಗುತ್ತದೆ; ಎಷ್ಟೋ ಹರಿದ್ವರ್ಣ ದಟ್ಟ ಕಾಡುಗಳು ಮರಳುಗಾಡುಗಳಾಗುತ್ತವೆ. ಆದ್ದರಿಂದ ಈ ಹಿಮಯುಗದ ಕಾಲದಲ್ಲಿ ಆಗ ಬೆಳೆದು ಹರಡುತ್ತಿದ್ದ ಎಲ್ಲಾ ಆಧುನಿಕ ಮಾನವ ಗುಂಪುಗಳು ಒಂದರಿಂದ ಒಂದು ಬೇರ್ಪಟ್ಟವು. ಹಾಗಾಗಿ ಅವು ತಮ್ಮೊಳಗೆ ಕೆಲವು ಸಣ್ಣಪುಟ್ಟ ತಳೀಯ ವ್ಯತ್ಯಾಸಗಳನ್ನು ಕಲೆಹಾಕಿಕೊಂಡವು. ಆದ್ದರಿಂದ ಒಂದು ವಿಷಯವನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಈಗಿನ ಆಧುನಿಕ ಮಾನವರಾದ ನಾವು 99.9% ವಂಶವಾಹಿ (Gene) ಗಳನ್ನು ನಮ್ಮನಮ್ಮಲ್ಲಿ ಹಂಚಿಕೊಂಡಿದ್ದೇವೆ. ಅಂದರೆ ನಮ್ಮಲ್ಲಿರುವ 99.9% ವಂಶವಾಹಿ (Gene)ಗಳು ಮಿಕ್ಕ ಎಲ್ಲಾ ಮಾನವರಲ್ಲೂ ಇರುತ್ತವೆ. ಒಂದು ವಿಶಾಲವಾದ ನಿಟ್ಟಿನಲ್ಲಿ ಅವಲೋಕಿಸಿದರೆ ನಾನು ಉಲ್ಲೇಖಿಸಿದ ವ್ಯತ್ಯಾಸಗಳು ನಿಜಕ್ಕೂ ಬಹಳ ಸಣ್ಣಪುಟ್ಟ ವ್ಯತ್ಯಾಸಗಳು.
ಮತ್ತೆ, ಹಿಮಯುಗವು ಮುಗಿದ ನಂತರ ಅಂದರೆ ಸುಮಾರು 12,000 ವರ್ಷಗಳ ಹಿಂದೆ, ಪ್ರಪಂಚದ ಹಲವು ಪ್ರದೇಶಗಳಲ್ಲಿ ಹಲವು ಆಸಕ್ತಿಕರ ಘಟನೆಗಳು ನಡೆದವು. ಆಧುನಿಕ ಮಾನವ ಜನಾಂಗಗಳು ವ್ಯವಸಾಯ ಮಾಡಲು ಪ್ರಯೋಗಗಳನ್ನು ಮಾಡತೊಡಗಿದವು.
ಉದಾಹರಣೆಗೆ ನಮಗೆ ಈಗ ತಿಳಿದಿರುವಂತೆ ಆ ಸಮಯದಲ್ಲಿ ದಕ್ಷಿಣ ಏಶಿಯಾದಲ್ಲಿ ಜನರು ವಿವಿಧ ಗೆಡ್ಡೆಗೆಣಸುಗಳನ್ನೂ, ಬಾಳೆಹಣ್ಣನ್ನೂ ಬೆಳೆಯಲು ಪ್ರಯತ್ನಿಸುತ್ತಿದ್ದರು. ಆದರೆ ಈ ಬೆಳೆಗಳು ಹೆಚ್ಚು ವೃದ್ಧಿಸಲಿಲ್ಲ. ಅದರಿಂದಾಗಿ ಆ ಜನಾಂಗಗಳ ಬದುಕುವ ರೀತಿಯಲ್ಲಿ ಹೆಚ್ಚೇನೂ ಬದಲಾವಣೆಗಳಾಗಲಿಲ್ಲ. ಆದರೆ ಯಾವ ಜನಾಂಗಗಳಿಗೆ, ಅಕ್ಕಿ, ಗೋಧಿ ಅಥವಾ ಬಾರ್ಲಿಯಂಥಹ ಧಾನ್ಯಗಳನ್ನು ಬೆಳೆಸಬಹುದಾದಂಥ ಪ್ರದೇಶಗಳಲ್ಲಿ ವಾಸಿಸುವ ಅವಕಾಶ ದೊರೆಯಿತೋ ಅವರು ಬಹಳ ಅದೃಷ್ಟವಂತರಾದರು, ಏಕೆಂದರೆ ಈ ಧ್ಯಾನ್ಯಗಳು ಹೆಚ್ಚು ಫಲದಾಯಕ ಬೆಳೆಗಳು. ಇದರಿಂದಾಗಿ ಅವರು ತಮ್ಮ ಜೀವನಶೈಲಿಯನ್ನು ಬದಲಿಸಿಕೊಂಡು ಬೇಟೆಗಾರ-ಸಂಗ್ರಹಕಾರ ಬದುಕಿನಿಂದ ಬದಲಾಗಿ ರೈತರಾಗಲು ಸಾಧ್ಯವಾಯಿತು.
ಈ ಮೊದಮೊದಲ ವ್ಯವಸಾಯಗಾರರು ಈಜುಪ್ಟಿನವರು, ಮೆಸೊಪೊಟೇಮಿಯಾದವರು, ಭಾರತದವರೂ ಮತ್ತು ಚೀನಾದವರೂ ಆಗಿದ್ದರು. ಅವರು ವ್ಯವಸಾಯ ಮಾಡಲು ಪ್ರಾರಂಭಿಸಿದಾಗಿನಿಂದ ಅದರ ಪರಣಾಮವಾಗಿ ಅವರ ಜನಸಂಖ್ಯೆಯ ಸ್ಫೋಟವಾಯಿತು. ಏಕೆಂದರೆ ಬೇಟೆಗಾರ-ಸಂಗ್ರಹಕಾರ ಜನಸಂಖ್ಯೆಗಳಿಗಿಂತ ವ್ಯವಸಾಯ ಮಾಡುವವರ ಜನಸಂಖ್ಯೆ ಅತಿ ದೊಡ್ಡ ಮತ್ತು ಅತಿ ವೇಗವಾದ ಪ್ರಮಾಣದಲ್ಲಿ ಹೆಚ್ಚುತ್ತದೆ. ಆ ಜನಸಂಖ್ಯೆಯ ಹೆಚ್ಚಳದ ಅನಿವಾರ್ಯ ಪರಿಣಾಮಗಳೆಂದರೆ , ಅವು ವಲಸೆಗಳು. ಇದು ಜಗತ್ತಿನ ಜನಾಂಗ ಸ್ಥಿತಿಯ ಮೇಲೆ ಪ್ರಭಾವ ಬೀರಿದ ವಲಸೆಗಳು ನಡೆದುದದಕ್ಕೆ ಎರಡನೆಯ ಕಾರಣ. ಈ ಕ್ರಿಯೆಯನ್ನು ನಡೆಸಿದ ಚಾಲನ ಶಕ್ತಿಯೆಂದರೆ ಅದು ಪ್ರಕೃತಿಯ ಮೇಲೆ ಯಜಮಾನಿಕೆ ಮಾಡಿ ಅದನ್ನು ಅಂಕೆಯಲ್ಲಿಡುವ ಮಾನವನ ಸಾಮರ್ಥ್ಯ. ಅದು ಎಷ್ಟರ ಮಟ್ಟಿಗೆ ಇತ್ತೆಂದರೆ ಮಾನವನು ವ್ಯವಸಾಯ ಮಾಡುವುದನ್ನು ಕಂಡುಕೊಂಡನು. ಹಿಂದೆ "ಆಫ್ರಿಕಾದಿಂದ ಹೊರಬಂದ ವಲಸೆ'ಯನ್ನು ಚಾಲನೆ ಮಾಡಿದ ಕಾರಣ ಕರ್ತೃ ಜಾಗತಿಕ ಶಕ್ತಿ ಪ್ರಮುಖವಾಗ ಹವಾಮಾನ ಬದಲಾವಣೆಯಾಗಿತ್ತು. ಅದು ಮಾನವನಷ್ಟೇ ಅಲ್ಲದೆ ಹಲವಾರು ಪ್ರಾಣಿಗಳು ವಲಸೆ ಹೊರಡುವುದಕ್ಕೂ ಕಾರಣವಾಯಿತು. ಇವು ಎರಡೂ ವಲಸೆಯ ಎರಡು ಕಾರಣಗಳು.
ಪ್ರಾಚೀನ ಈಜಿಪ್ಟಿನಲ್ಲಿ ಕೊಂಬಿನ ಜಾನುವಾರುಗಳು ಮತ್ತು ನೊಗದೊಂದಿಗೆ ಉಳುಮೆ. ಸಮಾಧಿಯಲ್ಲಿನ ಕೊಠಡಿಯೊಂದರಲ್ಲಿ ಸಿಕ್ಕಿರುವ ಚಿತ್ರಕಲೆ . ಕ್ರಿ.ಪೂ 1200
ಮಧ್ಯ ಏಶಿಯಾದ ಆಧುನಿಕ ಮಾನವ ಜನಾಂಗದ ಒಂದು ಪಂಗಡ ಕುದುರೆ ಸವಾರಿ ಮಾಡುವುದು ಹೇಗೆಂದು ಕಲಿತು ಅದನ್ನು ತಮಗೆ ಆಗಲೇ ತಿಳಿದಿದ್ದ ಲೋಹವಿದ್ಯೆಯ ಪ್ರಾವೀಣ್ಯದೊಡನೆ ಸೇರಿಸಿ ಉಪಯೋಗಿಸಿಕೊಳ್ಳುವುದನ್ನು ಪ್ರಾರಂಭಿಸಿದಾಗ ವಲಸೆಗೆ ಮೂರನೇ ಕಾರಣವೂ ಪ್ರಾರಂಭವಾಯಿತು.
ಊಹಿಸಿಕೊಳ್ಳಿ. ಆಗಿನ ಒಂದು ಆಧುನಿಕ ಮಾನವ ಜನಾಂಗದ ಒಂದು ಪಂಗಡ ಕುದುರೆ ಸವಾರಿ ಮಾಡುವುದನ್ನು ಕಲಿತರೆ , ಆ ಪಂಗಡ ಆಗಿನವರೆಗೂ ಮತ್ಯಾವ ಆಗಿನ ಆಧುನಿಕ ಮಾನವ ಜನಾಂಗದ ಪಂಗಡಗಳೂ ಕಲ್ಪಿಸಿಕೊಳ್ಳಲೂ ಆಗದಿರುವಂಥಹ ಒಂದು ಚಲನಾ ಶಕ್ತಿಯನ್ನು ಪಡೆಯುತ್ತದೆ. ಆ ಸಾಮರ್ಥ್ಯದಿಂದಾಗಿ ಅವರು ವಿಶಾಲವಾದ ಭೂಭಾಗಳಲ್ಲಿ ಚಲಿಸಲು ಸಾಧ್ಯವಾಯಿತು. ಹೀಗಾಗಿ ಅವರು ಮಧ್ಯ ಏಶಿಯಾದಿಂದ ಯೂರೋಪಿಗೆ ಚಲಿಸಿದರು. ಆಗಲೇ ಹೇಳಿದಂತೆ ಈ 'ಯಾಮ್ನಾಯ' ಎಂಬ ಪಂಗಡಗಳು ಯೂರೋಪಿಗೆ ಹೋಗಿ ಅಲ್ಲಿಯ ಜನಾಂಗದ ಸ್ಥಿತಿಯನ್ನು ಬದಲಾವಣೆ ಮಾಡಿದರು. ಅವರು ಮಧ್ಯ ಏಶಿಯಾದ ಜನಾಂಗದ ಸ್ಥಿತಿಯನ್ನೂ, ಪಶ್ಚಿಮ ಏಶಿಯಾದ , ದಕ್ಷಿಣ ಏಶಿಯಾದ ಅಲ್ಲದೆ ಬಹು ದೂರದ ಚೈನಾದ ಜನಾಂಗದ ಸ್ಥಿತಿಗಳನ್ನೂ ಸಹ ಬದಲಾಯಿಸಿದರು.
ಹೀಗೆ ಮಾನವನ ವಲಸೆಗೆ ಕಾರಣ ಕುದುರೆ ಸವಾರಿ ಮತ್ತು ಲೋಹವಿದ್ಯೆಯ ಮೇಲಿನ ಪ್ರಾವೀಣ್ಯ ಮತ್ತು ಅದು ಯೂರೋಪ್ ಮತ್ತು ಏಶಿಯಾದ, ಅಂದರೆ ಯುರೇಶಿಯಾದ ಅತಿ ಹೆಚ್ಚು ಭಾಗಗಳ ಜನಾಂಗದ ಸ್ಥಿತಿಯನ್ನು ಬದಲಾಯಿಸಿತು.
ನಾವು ನಮ್ಮ ಪಠ್ಯ ಪುಸ್ತಕಗಳಲ್ಲಿ ಓದಿರುವ ಹಾಗೂ ನಮ್ಮ ತಂದೆತಾಯಿ ಅಥವಾ ಅಜ್ಜಮುತ್ತಜ್ಜಂದಿರು ಯಾವುದೋ ಒಂದು ರೀತಿಯಲ್ಲಿ ಅದರ ಪರಿಣಾಮಗಳನ್ನು, ಕಾರ್ಪಣ್ಯಗಳನ್ನೂ ಅನುಭವಿಸಿರುವ ವಲಸೆಗಳು ಅಂದರೆ ಅವು ವಸಾಹತುಶಾಹೀ ವಲಸೆಗಳು. ಅವು ನಾಲ್ಕನೇ ರೀತಿಯ ಕಾರಣವಿರುವ ವಲಸೆಗಳು. ಯೂರೋಪಿನ ಆಧುನಿಕ ಮಾನವ ಜನಾಂಗದ ಕೆಲವು ಪಂಗಡಗಳು ಸಮುದ್ರಗಳ ಮೇಲೆ ಹೇಗೆ ಅತಿದೂರ ಪ್ರಯಾಣ ಮಾಡುವುದೆಂದು ಕಲಿತುಕೊಂಡದ್ದರಿಂದ ಈ ವಲಸೆಗಳು ನಡೆದವು. ಅವರು ನೀರಿನ ಆವಿಯಿಂದ ಚಲಿಸುವ ಹಡಗುಗಳನ್ನು ಕಂಡು ಹಿಡಿದು ಈಗಾಗಲೇ ಜನಸಂಖ್ಯೆಗಳಿರುವ ಭೂಭಾಗಗಳಿಗೆ ಪ್ರಯಾಣಿಸಿ ಅಲ್ಲಿಯ ಜನಾಂಗಸ್ಥಿತಿಗಳನ್ನು ಬದಲಾಯಿಸಿದರು. ಅಮೆರಿಕಾದ ಜನಾಂಗಸ್ಥಿತಿ ದೊಡ್ಡ ರೀತಿಯಲ್ಲಿ ಬದಲಾವಣೆ ಆಯಿತು. ಅಂತೆಯೇ ಆಸ್ಟ್ರೇಲಿಯಾದಲ್ಲಿ ಮತ್ತು ಇತರ ಭಾಗಗಳಲ್ಲೂ ನಡೆಯಿತು.
ಇವು ನಮಗೆ ತಿಳಿದಿರುವಂತೆ ಜಗತ್ತಿನ ಜನಾಂಗಸ್ಥಿತಿಯನ್ನು ಬದಲಿಸಿದ ನಾಲ್ಕು ಪ್ರಮುಖ ವಲಸೆಯ ವರ್ಗಗಳು. ಇವು ಜಗತ್ತಿನ ಜನಾಂಗದ ಸ್ಥಿತಿಯನ್ನು ಬದಲಿಸಿದವು.
ಇದು ನಮ್ಮನ್ನು ಇನ್ನೊಂದು ಪ್ರಶ್ನೆಯೆಡೆಗೆ ಕರೆದೊಯ್ಯುತ್ತದೆ. ಆ ಪ್ರಶ್ನೆ ಏನೆಂದರೆ, "ಹಾಗಾದರೆ ಭಾರತೀಯ ಜನಾಂಗಸ್ಥಿತಿಯನ್ನು, ದಕ್ಷಿಣ ಏಶಿಯಾದ ಜನಾಂಗಸ್ಥಿತಿಯನ್ನು ಈ ವಲಸೆಗಳು ಹೇಗೆ ರಚಿಸಿದವು?"
ನನ್ನ ಮಟ್ಟಿಗೆ, ಈ ವಿಷಯದಲ್ಲಿ ಭಾರತ ಮತ್ತು ದಕ್ಷಿಣ ಏಶಿಯಾಗಳು ಒಂದೇ. ಭಾರತೀಯ ಉಪಖಂಡದ ಎಲ್ಲವೂ ಸೇರಿದ ಅವೆಲ್ಲವೂ ಸೇರಿದ ಪುರಾತನ ಭೂಭಾಗ. ಈಗ ನಾವು ಅಂದುಕೊಂಡಿರುವ ಈಗಿನ ಭಾರತ ಗಣರಾಜ್ಯವಲ್ಲ. ಹಾಗಾದರೆ ಭಾರತದ ಜನಾಂಗದ ಸ್ಥಿತಿಯನ್ನು ಈ ವಲಸೆಗಳು ಹೇಗೆ ರೂಪಿಸಿದವು? ಮೊದಲಿಗೆ ಇಲ್ಲಿ ನಾವು ಒಂದು ವಿಷಯವನ್ನು ನೆನಪಿಡಬೇಕು. ಅದೇನೆಂದರೆ ನಾಲ್ಕನೆಯ ವರ್ಗದ ವಲಸೆ ಅಂದರೆ ವಸಾಹತುಶಾಹೀ ವಲಸೆ ನಮ್ಮ ಜನಾಂಗಸ್ಥಿತಿಯ ಮೇಲೆ ಏನೂ ಪರಿಣಾಮ ಬೀರಲಿಲ್ಲ. ಬೀರಿದ್ದರೂ ಅದು ಅತ್ಯಂತ ಸ್ವಲ್ಪ. ವಸಾಹತುಶಾಹೀ ವಲಸೆ ನಮ್ಮ ಸಂಸ್ಕೃತಿಯ ಮೇಲೆ ಹೆಚ್ಚು ಪ್ರಭಾವ ಬೀರಿತು ಆದರೆ ನಮ್ಮ ಜನಾಂಗಸ್ಥಿತಿಯೇನೂ ಬದಲಾಗಲಿಲ್ಲ. ಏಕೆಂದರೆ ಅಲ್ಲಿಂದ ಇಲ್ಲಿಗೆ ವಲಸೆ ಬಂದ ಜನರ ಸಂಖ್ಯೆ, ಆಗಲೇ ಇಲ್ಲಿ ನೆಲೆಸಿದ್ದ ಜನಸಂಖ್ಯೆಗೆ ಹೋಲಿಸಿದರೆ ಅತಿ ಕಡಿಮೆ ಇತ್ತು. ಆದ್ದರಿಂದ ನಮ್ಮ ಭಾರತದ ಜನಾಂಗಸ್ಥಿತಿಯ ಮೇಲೆ ಹೇಗೆ ಮತ್ತು ಯಾವುವು ಪರಿಣಾಮ ಬೀರಿದವು ಎಂದು ಅರ್ಥ ಮಾಡಿಕೊಳ್ಳಲು ನಾವು ಉಳಿದ ಮೂರು ವಲಸೆಗಳು ಈ ಪ್ರದೇಶವನ್ನು ಹೇಗೆ ಮಾರ್ಪಾಡು ಮಾಡಿದವು ಎಂದು ಅರ್ಥ ಮಾಡಿಕೊಳ್ಳಬೇಕು.
ರಷ್ಯಾದಲ್ಲಿ 31 ಸಾವಿರ ವರ್ಷಗಳ ಹಿಂದಿನ ಹಾಲುಹಲ್ಲಿನ ಪಳವಳಿಕೆಗಳು ಸಿಕ್ಕಿರುವ ಜಾಗ
ಸರಿ, ಹಾಗಾದರೆ ಶುರು ಮಾಡೋಣ. ಮೊದಲಿಗೆ "ಆಫ್ರಿಕಾದಿಂದ ಹೊರಬಂದ ವಲಸೆ". ನಮಗೆ ಈಗ ಈ 'ಆಫ್ರಿಕಾದಿಂದ ಹೊರಬಂದ ವಲಸೆ' ಸುಮಾರು 70,000 ವರ್ಷಗಳ ಹಿಂದೆ ಆಫ್ರಿಕಾದಿಂದ ಹೊರಟಿತ್ತು ಮತ್ತು ಅದು ಭಾರತವನ್ನು ಸುಮಾರು 65,000 ವರ್ಷಗಳ ಹಿಂದೆ ತಲುಪಿತು ಎಂದು ಗೊತ್ತಿದೆ. (ಇವರನ್ನು ನಾವು ಮೊದಲ ಭಾರತೀಯರೆಂದು ಕರೆಯೋಣ ). ಅದು ನಮಗೆ ಹೇಗೆ ಗೊತ್ತು? ಹೇಗೆಂದರೆ ಪುರಾತತ್ವ ಶಾಸ್ತ್ರದಿಂದ ನಮಗೆ ಆಧುನಿಕ ಮಾನವರು ಸುಮಾರು 59,000 ವರ್ಷಗಳ ಹಿಂದೆ ಆಸ್ಟ್ರೇಲಿಯಾ ತಲುಪಿದ್ದರೆಂದೂ , ಸುಮಾರು 63,000 ವರ್ಷಗಳ ಹಿಂದೆ ದಕ್ಷಿಣ-ಪೂರ್ವ ಏಶಿಯಾವನ್ನು ತಲುಪಿದ್ದರೆಂದೂ ತಿಳಿದಿದೆ. ಅವರು ಅಲ್ಲಿಗೆ ತಲುಪಲು ಭಾರತ ಉಪಖಂಡದ ಮೂಲಕ ಹಾದು ಹೋಗಬೇಕಿತ್ತು. ಆದ್ದರಿಂದ ಅವರು, ಅಂದರೆ ಆಧುನಿಕ ಮಾನವರು ಸುಮಾರು 65,000 ವರ್ಷಗಳ ಹಿಂದೆ ಭಾರತದ ಭೂಪ್ರದೇಶಕ್ಕೆ ಬಂದರೆನ್ನುವುದು ತಾರ್ಕಿಕವಾಗಿ ಸಮಂಜಸವಾದ ಊಹೆ. ಆಸಕ್ತಿಕರವಾದ ವಿಷಯವೆಂದರೆ ಈವತ್ತಿಗೂ ಹೆಚ್ಚಾದ ಭಾರತೀಯ ಜನಸಂಖ್ಯಾ ಪಂಗಡಗಳು, ತಮ್ಮ ಒಳಗೆ ಸುಮಾರು 50-65% ಭಾಗ ಮೊದಲ ಭಾರತೀಯರ ಪೂರ್ವಜ-ಸಂತತಿಯನ್ನು ಹೊಂದಿರುತ್ತಾರೆ. ಅದು ನಮ್ಮ ಅತ್ಯಂತ ದೊಡ್ಡ ಪೂರ್ವಜ-ಸಂತತಿ.
ಮತ್ತೆ….ನಾನು ನನ್ನ ಪುಸ್ತಕದಲ್ಲಿ ಪೀಟ್ಜಾದ ಉಪಮೆಯನ್ನು ಕೊಡುತ್ತೇನೆ. ನೀವು ಭಾರತೀಯ ಜನಾಂಗಸ್ಥಿತಿಯನ್ನು ಒಂದು ಪೀಟ್ಜಾದ ಥರ ನೋಡುವುದಾದರೆ, ಮೊದಲ ಭಾರತೀಯ ಪೂರ್ವಜ-ಸಂತತಿ, ಅದರ ತಳಭಾಗದ ಪದರವಾಗುತ್ತದೆ. ಆ ತಳದ ಪದರವಿಲ್ಲದಿದ್ದರೆ , ಜನಾಂಗಸ್ಥಿತಿಯ ಪಿಟ್ಜಾನೇ ಇಲ್ಲವಾಗುತ್ತದೆ.