text stringlengths 0 61.5k |
|---|
ಅದು ದಕ್ಷಿಣ ಏಶಿಯಾದ ಜನಸಂಖ್ಯೆಯನ್ನು ಬೇರೆಯವರಿಂದ ಬೇರ್ಪಡಿಸಿ ಗುರುತಿಸಬಲ್ಲ ಚಿನ್ಹೆ. ಏಕೆಂದರೆ ಪ್ರಥಮ ಭಾರತೀಯ ಪೂರ್ವಜ-ಸಂತತಿ ಈಗ ದಕ್ಷಿಣ ಏಶಿಯಾದಲ್ಲಿ ಮಾತ್ರ ಸಿಗುತ್ತದೆ. ಅದು ಭಾರತದ ಜನಾಂಗಸ್ಥಿತಿಯ ತಳಹದಿ ಹಾಕಿದ ಮೊದಲನೇ ವರ್ಗದ ವಲಸೆಯಾಯಿತು. |
ಇನ್ನು ಎರಡನೇ ವರ್ಗದ ವಲಸೆ. ಅಂದರೆ ವ್ಯವಸಾಯ ಸಂಬಂಧಿತ ವಲಸೆ. ಇದರಲ್ಲಿ ಎರಡು ಬಗೆಗಳಿವೆ. ಒಂದು ಪಶ್ಚಿಮ ಏಶಿಯಾದಿಂದ ಬಂದಿದ್ದು ಇನ್ನೊಂದು ಪೂರ್ವ ಏಶಿಯಾದಿಂದ ಬಂದಿದ್ದು. ಇವೆರಡೂ ವಲಸೆಗಳು ಭಾರತದ ಜನಾಂಗಸ್ಥಿತಿಯನ್ನು ರೂಪಿಸುವಲ್ಲಿ ಪಾಲುಗೊಂಡಿವೆ. ವ್ಯವಸಾಯ ಸಂಬಂಧಿತ ವಲಸೆ ಭಾರತದಲ್ಲಿ ಪ್ರಾರಂಭವಾಗುವುದು, ಭಾರತದಲ್ಲಿ ವ್ಯವಸಾಯವೇ ಪ್ರಾರಂಭವಾದಾಗ. ಅದು ಈಗಿನ ಪಾಕಿಸ್ತಾನದ ಬಲೂಚಿಸ್ತಾನದ ಮೆಹೆರ್ಗಾಡ್ ಎಂಬಲ್ಲಿ ಸುಮಾರು 9000 ವರ್ಷಗಳ ಹಿಂದೆ ನಡೆದಿತ್ತು. ಅಲ್ಲಿಂದ ವ್ಯವಸಾಯವು ಉತ್ತರ-ಪಶ್ಚಿಮ ಭಾರತದಲ್ಲೆಲ್ಲಾ ಹರಡಿತು. ಹಾಗೆ ಸಾವಿರಾರು ವರ್ಷಗಳವರೆಗೆ ವ್ಯವಸಾಯವು ಆ ಪ್ರದೇಶದಲ್ಲೆಲ್ಲಾ ಹರಡುತ್ತಾ ಬಂದ ಮೇಲೆ ಅಂತಿಮವಾಗಿ ಅದು ಹರಪ್ಪಾ ನಾಗರಿಕತೆಯಾಗಿ ಕೊನೆಗೊಂಡಿತು. ಉತ್ತರ ಭಾರತದಲ್ಲಿ ಈ ವ್ಯವಸಾಯ ಕ್ರಾಂತಿಯನ್ನು ನಡೆಸಿದ ಜನರು ಒಂದು ಮಿಶ್ರಣವಾಗಿದ್ದರು. ಅವರು ನಾವು ಮೊದಲು ಮಾತನಾಡಿದ ಮೊದಲ ಭಾರತೀಯರ ಮತ್ತು ವ್ಯವಸಾಯ ನಡೆಸುವ ಪಶ್ಚಿಮ ಏಶಿಯಾದ ಇರಾನಿನ ಜನರಿಗೆ ನಂಟಿದ್ದ ಜನಾಂಗಗಳ ಮಿಶ್ರಣವಾಗಿದ್ದರು. ನಿರ್ದಿಷ್ಠವಾಗಿ ಹೇಳುವುದಾದರೆ ಇರಾನಿನ Zagros ಪರ್ವತ ಪ್ರಾಂತ್ಯದವರು. ಅವರು ಸುಮಾರು 12,000 ವರ್ಷದ ಹಿಂದೆ ಇಲ್ಲಿಗೆ ಬಂದಿದ್ದರು. ಆದ್ದರಿಂದ ಅದೊಂದು ಮಿಶ್ರಣವಾಗಿತ್ತು ; ಅಂದರೆ ಮೊದಲ ಭಾರತೀಯರು ಹಾಗೂ ಉತ್ತರ-ಪಶ್ಚಿಮ ಭಾರತ ಪ್ರದೇಶಗಳಲ್ಲಿ ಒಂದು ವ್ಯವಸಾಯ ಕ್ರಾಂತಿಯನ್ನು ನಡೆಸಿದ ಇರಾನಿನ ವ್ಯವಸಾಯ ಸಂಬಂಧಿತವಾದ ವಲಸೆ ಜನಾಂಗಗಳ ಮಿಶ್ರಣ. ಹೀಗೆ ಅದು ಭಾರತೀಯ ಜನಾಂಗಸ್ಥಿತಿಯನ್ನು ರೂಪಿಸಿದ ಎರಡನೇ ವರ್ಗದ ವಲಸೆ. |
ಎರಡನೇ ವಲಸೆ – ಇರಾನಿನ ಜನರದ್ದು |
ಮುಂದೇ ಇದೇ ಜನರು ಹರಪ್ಪ ನಾಗರಿಕತೆಯನ್ನು ಕಟ್ಟಿದರು. ಅಲ್ಲಿಂದ ಮುಂದೆ ಹರಪ್ಪಾ ನಾಗರೀಕತೆಯು ಸುಮಾರು ಕ್ರಿಸ್ತ ಪೂರ್ವ 1900 ನಲ್ಲಿ , ಬೇರೆ ಪ್ರದೇಶಗಳ ಮೇಲೂ ಅದೇ ಕಾಲದಲ್ಲಿ ಪ್ರಭಾವ ಬೀರಿದ ಒಂದು ಬಹುಕಾಲದ ಬರಗಾಲದಿಂದಾಗಿ ಅವಸಾನಗೊಂಡಾಗ ಅಲ್ಲಿನ ಜನರು ಅಲ್ಲಿಂದ ಮತ್ತೆ ಚಲಿಸಿದರು. ಅವರು ಉತ್ತರ ಪಶ್ಚಿಮದ ಹರಪ್ಪಾ ನಾಗರೀಕತೆಯ ಪ್ರದೇಶವನ್ನು ಬಿಟ್ಟು ಹೊರಟು ಭಾರತದ ಉಳಿದ ಎಲ್ಲಾ ಭಾಗಗಳಿಗೆ ಅಂದರೆ ಉತ್ತರ ಮತ್ತು ದಕ್ಷಿಣ ಭಾಗಗಳಿಗೆ ವಲಸೆ ಹೊರಟರು. ಹೀಗಾಗಿ ಅವರು ಉತ್ತರ ಭಾರತದ ಮತ್ತು ದಕ್ಷಿಣ ಭಾರತದ ಜನರ ಪೂರ್ವಜ-ಸಂತತಿಯವರಾದರು. |
ಹಾಗಾಗಿ ನಾವು ಹರಪ್ಪ ನಾಗರೀಕತೆಯ ಪೂರ್ವಜ-ಸಂತತಿಯವರು ನಮ್ಮ ತಳಭಾಗದ ಮೇಲಿನ ಎರಡನೇ ಪದರ ಎನ್ನಬಹುದು. ಅದು ನಮ್ಮ ಪೀಟ್ಜಾದ ತಳದ ರೊಟ್ಟಿಯ ಮೇಲಿನ ಸಾಸ್. ಅವರು ಭಾರತ ಉಪಖಂಡದಲ್ಲಿ ಹರಡಿದಂತೆಲ್ಲಾ ತಮ್ಮ ಸಂಸ್ಕೃತಿಯನ್ನೂ ಹರಡಿದರು. ಅದು ನಮ್ಮನ್ನೆಲ್ಲ ಹಲವು ರೀತಿಯಲ್ಲಿ ಒಗ್ಗೂಡಿಸಿ ಒಟ್ಟಿಗೆ ಹಿಡಿದಿಡುವಂಥ ಒಂದು ಅಂಟು ಎನ್ನಬಹುದು. ಇವು ಭಾರತೀಯ ಜನಾಂಗಸ್ಥಿತಿಯನ್ನು ರೂಪಿಸಿದ ಎರಡನೇ ವರ್ಗದ ವಲಸೆಗಳು. |
ಟಿಪ್ಪಣಿ : ಕಳೆದ ಸೆಪ್ಟೆಂಬರ್ ನಲ್ಲಿ ಪ್ರಕಟವಾದ ಹೊಸ ಸಂಶೋಧನಾ ಫಲಿತಾಂಶಗಳ ಪ್ರಕಾರ , ಸಿಂಧೂ ಬಯಲಿನ ನಾಗರೀಕತೆ ಕಟ್ಟಿದ ಇರಾನಿನ ಜನ ಅಲ್ಲಿಂದ ವಲಸೆ ಬಂದ ಕೃಷಿಕರಲ್ಲ ಬದಲಾಗಿ ಅದಕ್ಕಿಂತ ಮೊದಲಿನ ಇರಾನಿನ ಬೇಟೆಗಾರ – ಆಹಾರ ಸಂಗ್ರಾಹಕ ಜನ ಎಂದಿದೆ . ಅಂದರೆ ಇರಾನಿನಲ್ಲಿ ಕೃಷಿಯ ಅನ್ವೇಷಣೆಯಾಗುವ ಮೊದಲೇ ಅಲ್ಲಿನ ಒಂದಷ್ಟು ಜನ ಸಿಂಧೂ ಬಯಲಿನ ಕಡೆಗೆ ವಲಸೆ ಶುರು ಮಾಡಿದ್ದಾರೆ . ಹಾಗಾಗಿ ಮೊದಲ ಭಾರತೀಯರು ಮತ್ತು ಇರಾರಿನ ಬೇಟೆಗಾರ – ಆಹಾರ ಸಂಗ್ರಾಹಕ ಜನ ಒಟ್ಟಾಗಿ ಸಿಂಧೂ ಕಣಿವೆಯ ನಾಗರೀಕತೆ ಕಟ್ಟಿದರು ಬದಲಾಗಿ ಇರಾನಿನ ಕೃಷಿಕ ಜನರು ಅಲ್ಲ . ಮತ್ತು ಭಾರತದಲ್ಲಿ ಆರಂಭವಾದ ಕೃಷಿ ಪದ್ದತಿ ಸ್ಥಳೀಯವಾಗೆ ಅಭಿವೃದ್ದಿ ಹೊಂದಿರುವಂತದ್ದು. |
ಈ ಸಂಶೋಧನೆಗಾಗಿ ವಂಶವಾಹಿ ತಜ್ಞರು ಸಿಂಧೂ ಬಯಲಿನ ನಾಗರೀಕತೆಯ ಪ್ರಮುಖ ತಾಣವಾದ ಹರ್ಯಾಣ ರಾಜ್ಯದ ಹಿಸಾರ್ ಜಿಲ್ಲೆಯಲ್ಲಿರುವ ರಾಖಿಗಢಿಯ ಅವಶೇಷಗಳಲ್ಲಿ ಸಮಾಧಿಯಲ್ಲಿ ಸಿಕ್ಕಿದ ಇಬ್ಬರು ಪ್ರೌಢ ವಯಸ್ಕ ಪುರುಷರ, ಒಬ್ಬ ಮಹಿಳೆಯ ಮತ್ತು ಒಂದು ಮಗುವಿನ ಆಸ್ತಿಪಂಜರಗಳಲ್ಲಿ , ಮಹಿಳೆಯ ಅಸ್ತಿಪಂಜರದ ಕಿವಿಯಿಂದ ತೆಗೆಯಲಾದ ಡಿ ಎನ್ ಎ ಯನ್ನು ಪರೀಕ್ಷೆಗೊಳಪಡಿಸಿದರು . |
ರಾಖಿಗಡಿಯಲ್ಲಿ ಸಿಕ್ಕಿದ ಅಸ್ತಿಪಂಜರವನ್ನು ಪರೀಕ್ಷಿಸುತ್ತಿರುವ ವಿಜ್ಞಾನಿಗಳು. ಇಲ್ಲಿನ ನಾಲ್ಕು ಆಸ್ತಿಪಂಜರಗಳಿಂದ ಡಿ ಎನ್ ಎ ಸ್ಯಾಂಪಲ್ ಹೊರತೆಗೆಯಲಾಯಿತು. |
ಮೂರನೇ ವರ್ಗದ ವಲಸೆ ಸುಮಾರು 4000 ವರ್ಷಗಳ ಹಿಂದೆ ಅಥವಾ ಅದಕ್ಕೂ ಸ್ವಲ್ಪ ತಡವಾಗಿ ಪೂರ್ವ ಏಶಿಯಾದಿಂದ ಆಯಿತು. ಚೈನಾದಲ್ಲಿ ವ್ಯವಸಾಯ ನಡೆಯುವುದು ಪ್ರಾರಂಭವಾದ ಪರಿಣಾಮವಾಗಿ ಈ ವಲಸೆ ನಡೆಯಿತು. ಇದರಿಂದಾಗಿ ದೊಡ್ಡ ಜನಸಂಖ್ಯಾ ವಿಸ್ತರಣೆಯಾಯಿತು. ಆ ವಲಸೆಯು ಅಷ್ಟು ದೂರದಿಂದ ಹೊರಟು, ಮೊದಲು ಪೂರ್ವ ಏಶಿಯಾವನ್ನು ಹೊಕ್ಕು ಅಲ್ಲಿನ ಜನಾಂಗಸ್ಥಿತಿಯ ಮೇಲೆ ಪರಿಣಾಮ ಬೀರಿ, ಅಲ್ಲಿಂದ ದಕ್ಷಿಣ ಪೂರ್ವ ಏಶಿಯಾಗೆ ಬಂದು ಕೊನೆಯಲ್ಲಿ ಭಾರತವನ್ನು ತಲುಪಿತು. |
ಈ ವಲಸಿಗರು ತಮ್ಮೊಂದಿಗೆ "ಆಸ್ಟ್ರೋ-ಏಶಿಯಾಟಿಕ್ ಭಾಷೆಗಳನ್ನು ಕರೆತಂದರು. ಉದಾಹರಣೆಗೆ ಖಾಸಿ ಮತ್ತು ಮುಂಡಾರಿ. ಈ ಭಾಷೆಗಳನ್ನು ಈಗಲೂ ಮಧ್ಯ ಭಾರತದಲ್ಲಿ ಮತ್ತು ಪೂರ್ವ ಭಾರತದಲ್ಲಿ ಆದಿವಾಸಿ ಜನರು ಮಾತನಾಡುತ್ತಾರೆ. ಈ ಭಾಷೆಗಳು ಲಾವೋಸ್, ವಿಯೆಟ್ನಾಮ್ ಮತ್ತಿತರ ದಕ್ಷಿಣ ಏಶಿಯಾ ದೇಶಗಳಲ್ಲಿ ಮಾತನಾಡುವ 'Mon-Khmer" ಭಾಷಾ-ಕುಟುಂಬಕ್ಕೆ ಸೇರಿದ ಭಾಷೆಗಳು. ಹೀಗೆ ಇದು ಭಾರತದ ಜನಾಂಗಸ್ಥಿತಿಯನ್ನು ರೂಪಿಸಿದ ಮೂರನೇ ವರ್ಗದ ವಲಸೆಗಳು. |
ಚೈನಾ ಪ್ರದೇಶದಿಂದ ಮೂರನೇ ವಲಸೆ ಮತ್ತು ಆಸ್ಟ್ರೋ-ಏಶಿಯಾಟಿಕ್ ಭಾಷಾ ಸಂಕುಲದ ಪ್ರಸರಣ |
ನಾವು ಹಿಂದೆಯೇ ಚರ್ಚಿಸಿದಂತೆ,ಭಾರತದ ಜನಾಂಗಸ್ಥಿತಿಯನ್ನು ರೂಪಿಸಿದ ನಾಲ್ಕನೇ ವರ್ಗದ ವಲಸೆಗಳು ಮಧ್ಯ ಏಶಿಯಾದ ಸ್ಟೆಪ್ಪೀ ಪ್ರದೇಶದಿಂದ ಬಂದವುಗಳು. ಆ ವಲಸೆಗಳು ಸುಮಾರು 4 ಅಥವಾ 3 ಸಾವಿರ ವರ್ಷಗಳ ಹಿಂದೆ ಭಾರತಕ್ಕೆ ಬಂದವುಗಳು. ಅಂದರೆ ಕ್ರಿಸ್ತ ಪೂರ್ವ 2000 ಮತ್ತು ಕ್ರಿಸ್ತ ಪೂರ್ವ 1500ರ ನಡುವೆ ಬಂದವುಗಳು. ಈ ವಲಸಿಗರು "ಇಂಡೋ-ಯೂರೋಪಿಯನ್" ಅಥವಾ "ಇಂಡೋ-ಆರ್ಯನ್"ಭಾಷೆಗಳನ್ನು ಮಾತನಾಡುತ್ತಿದ್ದರು. ಅವರು ತಮ್ಮನ್ನು ತಾವು ಆರ್ಯರೆಂದು ಕರೆದುಕೊಂಡರು. ಅವರು ಭಾರತ ಭೂಪ್ರದೇಶದೊಳಗೆ ಬಂದು ಉತ್ತರ ಭಾರತದಲ್ಲೆಲ್ಲಾ ತಮ್ಮ ಪಾರುಪತ್ಯವನ್ನು ಹರವಿದರು. ಅದರೊಂದಿಗೆ ಅವರ ಭಾಷೆಯಾದ "ಇಂಡೋ-ಆರ್ಯನ್" ಭಾಷೆಯೂ ಉತ್ತರ ಭಾರತದಲ್ಲೆಲ್ಲಾ ಹಬ್ಬಿತು. |
ನಾಲ್ಕನೇ ವಲಸೆ – ಸ್ಟೆಪ್ ಹುಲ್ಲುಗಾವಲಿನ ಜನ (ಆರ್ಯ) ರ ವಲಸೆ ಪಥ |
ನಾವು ಈಗಾಗಲೇ ಕಂಡಂತೆ, ಸುಮಾರು 4000 ದಿಂದ 3500 ವರ್ಶಗಳ ಹಿಂದಿನ ಕಾಲದ ಹೊತ್ತಿಗಾಗಲೇ , ಭಾರತದ ಜನಾಂಗಸ್ಥಿತಿಯ ಎಲ್ಲಾ ನಾಲ್ಕು ಘಟಕಗಳೂ ಭಾರತದಲ್ಲಿದ್ದವು. "ಆಫ್ರಿಕಾದಿಂದ ಹೊರಬಂದ ವಲಸಿಗರು" ಅಂದರೆ ಮೊದಲ ಭಾರತೀಯರು ಈಗಾಗಲೇ ಇಲ್ಲಿದ್ದರು. ಅಲ್ಲದೆ, ಪಶ್ಚಿಮ ಏಶಿಯಾದವರು, ಪೂರ್ವ ಏಶಿಯಾದವರು ಮತ್ತು ಮಧ್ಯ ಏಶಿಯಾದವರೂ ಇಲ್ಲಿದ್ದರು. ಮುಂದಿನ 1500-2000 ವರ್ಷಗಳವರೆಗೆ ಈ ನಾಲ್ಕೂ ವರ್ಗಗಳ ಜನರ ನಡುವೆ ಇಲ್ಲಿ ನಡೆಯುವ ರೀತಿಯ ಮಿಶ್ರಣ ಮತ್ತು ಅಂತರ-ಸಂಬಂಧಗಳು ತಳಿವಿಜ್ಞಾನದ ಪ್ರಾಕಾರ ಹಿಂದೆಂದೂ ನಡೆದಿರದಂಥದ್ದು ಮತ್ತು ಮುಂದೂ ಕೂಡ ನಡೆಯದಿರುವಂಥದ್ದು. |
ನೀವು ಈಗಿನ ಯಾವುದೇ ಇಲ್ಲಿನ ಜನರ ಪಂಗಡವನ್ನು ಪರೀಕ್ಷಿಸಿದರೂ ಅವರೆಲ್ಲಾ ಈ ನಾಲ್ಕು ಜನಸಂಖ್ಯೆಗಳ, ವಿವಿಧ ಪ್ರಮಾಣಗಳಲ್ಲಿ ಬೆರೆತ ಒಂದು ಮಿಶ್ರಣ ಎನ್ನುವುದು ನಿಮಗೆ ತಿಳಿಯುತ್ತದೆ. ಪೂರ್ವ ಭಾರತದ ಜನರಲ್ಲಿ ನಾವು ಪೂರ್ವ ಏಶಿಯಾದ ಪೂರ್ವಜ-ಸಂತತಿಯನ್ನು ಹೆಚ್ಚಾಗಿ ಕಾಣುತ್ತೀರಿ; ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಪಶ್ಚಿಮ ಏಶಿಯಾದ ಮತ್ತು ಮಧ್ಯ ಏಶಿಯಾದ ಪೂರ್ವಜ-ಸಂತತಿಯನ್ನು ಹೆಚ್ಚಾಗಿ ಕಾಣುತ್ತೀರಿ; ಹಾಗೂ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಪ್ರಥಮ ಭಾರತೀಯರ ಪೂರ್ವಜ ಸಂತತಿಯನ್ನು ಕಾಣುತ್ತೀರಿ. ಹಾಗಾಗಿ ಭಾರತದ ಯಾವುದೇ ಜನರ ಯಾವುದೇ ಪಂಗಡವನ್ನು ನೀವು ನೋಡಿದರೂ ಅದರಲ್ಲಿ ಈ ನಾಲ್ಕೂ ಪೂರ್ವಜ-ಸಂತತಿಗಳ ವಿವಿಧ ಪ್ರಮಾಣದ ಒಂದು ಮಿಶ್ರಣವು ನಮಗೆ ಕಾಣುತ್ತದೆ. |
ಹಾಗಾದರೆ ಕ್ರಿಸ್ತಶಕ 100 ರಲ್ಲಿ ಏನಾಯಿತು? ತಳಿ ವಿಜ್ಞಾನಿಗಳ ಪ್ರಕಾರ ಸುಮಾರು ಕ್ರಿಸ್ತಶಕ 100 ರ ವೇಳೆಗೆ , ಅಂದರೆ ಸುಮಾರು 2000 ವರ್ಷಗಳ ಹಿಂದೆ ಈ ಬೆರೆಯುವಿಕೆ ನಿಂತುಹೋಯಿತು. ಏಕೆಂದರೆ ಆಗ ಅಂತರ್ ಸಮುದಾಯದ ಗಂಡು ಹೆಣ್ಣಿನ ಕೂಡುವಿಕೆ ನಿಂತವು ; ಅಂದರೆ ಜನರು ತಮ್ಮ ತಮ್ಮ ಸಮುದಾಯದ ಒಳಗೇ ಸಂಗಾತಿಯನ್ನು ಆರಿಸಿ ಮದುವೆ ಮಾಡಿಕೊಳ್ಳುವ ಪದ್ಧತಿ ಆಚರಣೆಗೆ ಬಂತು. ನಮಗೆ ಗೊತ್ತಿರುವಂತೆ ಇದು ಜಾತಿಪದ್ಧತಿಯಲ್ಲಿ ಮುಖ್ಯವಾದ ಪ್ರತ್ಯೇಕಿಸುವ ವೈಶಿಷ್ಟ್ಯ. ಹಾಗಾಗಿ ನಮಗೆ ಈಗ ಈ ಮುಂದಿನ ಪ್ರಶ್ನೆಗೆ ಉತ್ತರ ಸಿಕ್ಕಿತ್ತದೆ. ; "ಜಾತಿಪದ್ಧತಿ ಯಾವಾಗ ಪ್ರಾರಂಭವಾಯಿತು?". ಜಾತಿಪದ್ಧತಿ 2000 ವರ್ಷಗಳ ಹಿಂದೆ ಪ್ರಾರಂಭವಾಯಿತು. ಅಂದರೆ ಮಧ್ಯಏಶಿಯಾದಿಂದ ತಮ್ಮನ್ನು ತಾವು ಆರ್ಯರೆಂದು ಕರೆದುಕೊಳ್ಳುತ್ತಿದ್ದ ಜನರು ಇಲ್ಲಿಗೆ ವಲಸೆ ಬಂದು ಬಹಳ ಕಾಲ ಕಳೆದ ನಂತರ ಜಾತಿಪದ್ಧತಿ ಇಲ್ಲಿ ಪ್ರಾರಂಭವಾಯಿತು. ಆದ್ದರಿಂದ ನಾವು ಜಾತಿಪದ್ಧತಿಯ ಆರಂಭವನ್ನು ಕ್ರಿಸ್ತಶಕ 100 ರ ಸುಮಾರಿಗೆ ಶುರುವಾದ ಒಂದು ರಾಜಕೀಯ ಬೆಳವಣಿಗೆಯಾಗಿ ನೋಡಬೇಕಾಗುತ್ತದೆಯೇ ಹೊರತು ಒಂದು ಅನಿವಾರ್ಯವಾದ, ಅಗತ್ಯವಾಗಿದ್ದ, ಸಹಜವಾದ, ಬೆಳವಣಿಗೆಯಂತೆ ಪರಿಗಣಿಸಲಾಗುವುದಿಲ್ಲ. ಇದೊಂದು ಅತಿ ಮುಖ್ಯವಾದ ಶೋಧನೆ. ಈ ವಿಧಾನದಲ್ಲಿ ನಾವು ಭಾರತದ ಜನಸಂಖ್ಯೆ ಈಗಿರುವ ರೀತಿಯಲ್ಲಿ ಏಕಿದೆ ಎಂಬುದನ್ನು ವಿವರಿಸಬಹುದು. |
ನಾವು ನಮ್ಮನ್ನು ನೋಡುವ ರೀತಿಯಲ್ಲಿ ಮತ್ತು ಇತರರನ್ನು ನಾವು ನೋಡುವ ರೀತಿಯಲ್ಲಿ, ಆಗುವ ಬದಲಾವಣೆಗಳ ಮೇಲೆ, ಈ ಶೋಧನೆಯಿಂದ ನಮಗೆ ದೊರೆತ ಅರಿವು, ಒಂದು ಅತ್ಯಂತ ಪ್ರಮುಖವಾದ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಆದಿವಾಸಿಗಳನ್ನು ಭಾರತದ ಇತರ ನಿವಾಸಿಗಳು, ಅವರು ತಮ್ಮಿಂದ ಬಹಳ ಬೇರೆಯ ರೀತಿಯವರೆಂದೂ, ತಮಗೂ ಅವರಿಗೂ ಬಹಳ ವ್ಯತ್ಯಾಸಗಳಿವೆಯೆಂದೂ ಪರಿಗಣಿಸುತ್ತಾರೆ. ಆದರೆ ಈಗ ನಮಗೆ , ಭಾರತದ ನಿವಾಸಿಗಳಿಗೆ ಆದಿವಾಸಿಗಳು ಬಹಳ ಹತ್ತಿರದ ಸಂಬಂಧಿಕರೆಂದೂ, ಆದಿವಾಸಿಗಳ ಹೊರತಾಗಿ ಜಗತ್ತಿನ ಬೇರೆ ಭಾಗಗಳಲ್ಲಿ ಎಲ್ಲಿಯೂ ಭಾರತೀಯರಿಗೆ ಅವರಿಗಿಂತ ಹತ್ತಿರದ ಸಂಬಂಧಿಗಳಿಲ್ಲವೆಂದೂ ತಿಳಿದಿದೆ. ನಾನು ಆಗಲೇ ಹೇಳಿದಂತೆ ಭಾರತದ ಮುಕ್ಕಾಲುಮೂರು ಪಾಲು ಹೆಚ್ಚೂಕಮ್ಮಿ ಎಲ್ಲಾ ಜನರ ಪಂಗಡಗಳಿಗೂ ಭಾರತದ ಪ್ರಥಮ ಪೂರ್ವಜ-ಸಂತತಿಯವರೇ ಸುಮಾರು 50-60%ರಷ್ಟು ಪೂರ್ವಜರು. |
ಆದ್ದರಿಂದ ಈ ಜ್ಞಾನ, ಅಂದರೆ, ಹರಪ್ಪಾ ನಾಗರೀಕತೆಯು ಭಾರತದ ಎಲ್ಲಾ ಜನರ ಆನುವಂಶಿಕಪ್ರಾಪ್ತಿಯೂ ಹೌದು ಎಂಬ ವಿಷಯ, ನಾವು ನಮ್ಮನ್ನು ನೋಡಿಕೊಳ್ಳುವ ಬಗೆಯನ್ನು ಬದಲಿಸಬೇಕು. ಹೀಗಾಗಿ ಹರಪ್ಪಾ ನಾಗರೀಕತೆಯಲ್ಲಿ ಒಂದು "ಪ್ರೋಟೋ-ದ್ರಾವಿಡಿಯನ್"(ಮೂಲ-ದ್ರಾವಿಡದ ಭಾಷೆ) ಭಾಷೆಯಿದ್ದಿರಬಹುದಾದ ಸಾಧ್ಯತೆಯಿದೆ. ಏಕೆಂದರೆ ಹರಪ್ಪಾ ನಾಗರೀಕತೆಯು ಆರ್ಯರು ಇಂಡೋ-ಯೂರೋಪಿಯನ್ ಭಾಷೆಗಳನ್ನು ಇಲ್ಲಿಗೆ ತರುವ ಬಹಳ ಮುಂಚೆಯೇ ಅಸ್ತಿತ್ವದಲ್ಲಿತ್ತು. ಬಹುಶಃ ಆರ್ಯರ ಜೊತೆಗೆ ಆಗಮಿಸಿದ ಇಂಡೋ-ಯೂರೋಪಿಯನ್ ಭಾಷೆ ಉತ್ತರ ಭಾರತದಲ್ಲಿ ಆಗ ಇದ್ದ ಮೂಲ ದ್ರಾವಿಡರ ಭಾಷೆಯ ಮೇಲೆ ಹರಡಿ ಅದರ ಮೇಲೆ ಮುಸುಕು ಹಾಕಿತು. ಆದರೆ ದಕ್ಷಿಣ ಭಾರತದಲ್ಲಿ ಆ ಭಾಷೆ ಉಳಿದುಕೊಂಡು ವೃದ್ಧಿಗೊಂಡಿತು ಹಾಗೂ ಕಾಲಾಂತರದಲ್ಲಿ ಅದು ದ್ರಾವಿಡದ ಬೇರೆಬೇರೆ ಭಾಷೆಗಳು ಮತ್ತು ನುಡಿಗಟ್ಟುಗಳಾಗಿ ಅಭಿವೃದ್ಧಿ ಹೊಂದಿತು. |
ಹಾಗಾಗಿ ನಮ್ಮನ್ನು ಒಟ್ಟಾಗಿ ಒಂದುಗೂಡಿಸುವ ನಮ್ಮೊಳಗಿನ ಸಮಾನತೆಗಳು ಬಹಳಷ್ಟಿವೆ. ನಾವು ಇಲ್ಲಿ ಸಾವಿರಾರು ವರ್ಷಗಳಿಂದ ನಡೆದ ಬಹುದಿಕ್ಕುಗಳ ಬಹುಹರಿವಿನ ವಲಸೆಗಳಿಂದ ಒಂದು ಸಮಾನವಾದ ನಾಗರೀಕತೆಯನ್ನು ರೂಪಿಸಿದ್ದೇವೆ. ನಾವು ಈಗಿರುವಂತೆ ಹೇಗಾದೆವು, ಎಂಬುದೊಂದು ಅತ್ಯಂತ ನವಿರೇಳಿಸುವ ಇತಿಹಾಸ. |
ಪತ್ರಕರ್ತ ಮತ್ತು ಬಿಸಿನೆಸ್ ವರ್ಲ್ಡ್ ನಿಯತಕಾಲಿಕದ ಮಾಜಿ ಸಂಪಾದಕ. "Early Indians: The Story of Our Ancestors and Where We Came From" ಎಂಬ ಪುಸ್ತಕದ ಲೇಖಕರೂ ಆಗಿದ್ದಾರೆ. |
One comment to "ನಮ್ಮ ಪೂರ್ವಜರು ಎಲ್ಲಿಂದ ಬಂದರು ?" |
ಲೇಖನ ಬಹಳ ಚೆನ್ನಾಗಿದೆ. ಹಲವು ವಿಷಯಗಳನ್ನು ತಿಳಿಸಿದ್ದಾರೆ. ಓದುತ್ತಾ ಓದುತ್ತಾ ಹಿಂದೆ ಇದ್ದಿರಬಹುದಾದ ನಾಗರಿಕತೆಯ ಕಲ್ಪನೆ ಸಿಕ್ಕಿತು. Quarantine ದಿನಗಳಲ್ಲಿ ಓದಿದ ಉತ್ತಮ ಲೇಖನ ಇದೇ ಆಗಿದೆ. |
ಗುರುತು - Varthabharati |
ದಾದಾಪೀರ್ ಜೈಮನ್, ಬೆಂಗಳೂರು |
ವಿಮಾನ ನಿಲ್ದಾಣದಿಂದ ಹೊರಬಂದು ಕ್ಯಾಬಿನೊಳಗೆ ಕೂತು ಡ್ರೈವರನಿಗೆ ಒಟಿಪಿ ಹೇಳುವ ತರಾತುರಿಯಲ್ಲೇ ತಂಗಿಯ ಫೋನು. ಅವಳ ಫೋನ್ ಕಟ್ ಮಾಡಿದರೆ ನಾನು ಬ್ಯುಸಿ ಇರುತ್ತೇನೆ ಎಂದು ಅಂದುಕೊಳ್ಳುವವಳಲ್ಲ. ಫೋನ್ ಎತ್ತಿ ಮಾತನಾಡುವವರೆಗೂ ನೂರು ಬಾರಿಯಾದರೂ ಅಡ್ಡಿಯಿಲ್ಲ, ರಿಂಗು ಕೊಡುತ್ತಾಳೆ. ಆಮೇಲೆ ನನ್ನ ಮರೆವಿನ ಬಗ್ಗೆ ಅವಳಿಗೆ ಗೊತ್ತು... ''ಮತ್ತೆ ಫೋನ್ ಮಾಡ್ತೀನಿ ಅಂತಂದು ಊಫಿ ಮಾಡಿಬಿಟ್ಯಲ. ಏನಾದ್ರು ಅರ್ಜೆಂಟ್ ಇದ್ರೆ ನಾವೆನಿಲ್ಲಿ ಸತ್ತು ಹೋಗ್ಬೇಕಾ'' ಎನ್ನುವ ಅವಳ ಮಾತಿನಲ್ಲಿ ಅತಿಯಿದ್ದರೂ ನಿಜವಿತ್ತು. ಯಾರ ಕರೆಗೆ ಉತ್ತರಿಸದಿದ್ದರೂ ಅವಳದ್ದು ಮಾತ್ರ ಮೂರನೇ ರಿಂಗಿಗೆ ಮುಂಚೆ ಎತ್ತಿಬಿಡುತ್ತಿದ್ದೆ. ಈ ಸಲವೂ ''ಏನಪ್ಪಾ ರಾಜ್ಕುಮಾರ. ಹದಿನೈದು ದಿನ ಆಫೀಸ್ ಕೆಲಸದ ಮೇಲೆ ಬ್ಯಾರೆ ದೇಶಕ್ಕೋಗಿ ನಮ್ಮನ್ನೆಲ್ಲ ಮರ್ತು ಬಿಟ್ಟೀಯೇನು?'' |
''ಬೇ ಈಗೇನಾತು ಹೇಳು... ಅರಾಮಿದ್ದಿ?'' ಎಂದದ್ದಕ್ಕೆ ''ನಿಮ್ಮಷ್ಟ ಅರಾಮಲ್ಲ ಬಿಡಪಾ ಎರಡು ಸುದ್ದಿ ಹೇಳ್ಬಕು ಅಂತ ಫೋನ್ ಮಾಡಿದೆ. ಬಾಳ ದಿನದಿಂದ ಹೇಳ್ಬಕು ಅನ್ಕೊಂಡೆ ಹೇಳಿರಲಿಲ್ಲ. ಇತ್ತಿತ್ಲಾಗ ಟೀವಿ ಬಿರುಕು ಬಿಡಾಕ ಸುರುವಿಟ್ಟವಾ. ಒಂದೊಂದ್ಸಲ ಈ ವಾರ್ತಾ ಓದೋರಿಗೆ, ರಾಜಕಾರಣಿಗಳಿಗೆ ಕೊಂಬು, ಕೋರೆ ಹಲ್ಲು ಕಾಣಿಸ್ತಿರ್ತಾವ... ಒಂದೊಂದ್ಸಲ ಮಜಾ ಅನಿಸ್ತದ. ಭಯ ಆಗ್ತದ. ನನಗ ಹುಚ್ಚು ಅನ್ಕೊಂಡಿ ಮತ್ತ!!! ಇಡೀ ಓಣಿಯೊರ ಮನಿ ಟೀವಿಯೊಳಗೂ ಇದಾ ಕಥಿ. ಅದರ ಫೋಟೊ ತಗದು ಕಳ್ಸಿನಿ ನೋಡು'' ಅಂದಳು. ನನಗೆ ನಗು ಬಂತು. ಕಿಸಕ್ಕನೆ ನಕ್ಕೆ ಕೂಡ. ಅವಳಿಗೆ ಕೇಳಿಸಿರಬೇಕು... ''ಹು ನಿನಗ ಸೊಕ್ಕು. ನಾ ಏನ್ ಹೇಳಿದ್ರು ಅದು ನಿನಗ ಅಡಿಗಿ ಮನಿ ಕಥಿ ಅನಿಸ್ತದ. ಇಡೀ ಶಾಲೆಕಾ ನಾ ಫಸ್ಟ್ ಇದ್ನಿ. ಮಾಸ್ತರು ನನ್ನ ನೋಡಿ ಕಲಿ ಅನತಿದ್ರು ನೆನಪಿದ್ಯೋ ಇಲ್ಲೋ ನಿನಗ? ನನ್ನನ್ನೂ ಕೆಲ್ಸಕ್ ಕಳ್ಸಿದ್ರ ನಾನೂ ನಿನಿಗಿಂತ ಜಾಸ್ತಿ ಸಂಬಳ ತಗೋತಿದ್ದೆ. ಹುಡುಗ ಬಾಳ ಛೋಲೋ ಅಂತ ಮದುವಿ ಮಾಡಿ ಕೊಟ್ರಿ. ಇವ ನೋಡಿದ್ರ ನಮಗ ಬಾಳ ಆಸ್ತಿ ಅದಾ. ನೀ ಮತ್ತ್ ಕೆಲ್ಸ ಮಾಡೂ ಜರೂರಿಲ್ಲ. ಇಲ್ಲೆ ಉಂಡು ತಿನ್ಕೋತ ಅರಾಮಿರು ಅಂದ. ನಾ ಕುಂತುಂಡು ದಪ್ಪ ಆದ್ನಿ ಅಂತ ಅಪ್ಪ ಅವ್ವ ಎಲ್ರು ಅಂತಾರ. ನೀನೂ ಎಷ್ಟೋ ಸಲ ಅಂದಿ!!! ಆದ್ರ ಮನಿಕೆಲ್ಸ ರಗೂಡ ಇರ್ತಾವು. ನಾವು ಮನಿ ಕೆಲ್ಸ ಮಾಡುದು ಯಾರ ಕಣ್ಣಿಗೂ ಬೀಳುದಿಲ್ಲ...'' ತಂಗಿ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಂತೆ ಪಟಪಟ ಮಾತನಾಡುತ್ತಲೇ ಹೋದಳು. ಅವಳನ್ನ ಮಧ್ಯ ತಡೆಯಲು ಹೋದರೆ ಅದಕ್ಕಿಂತ ಮೂರು ಪಟ್ಟು ಕೇಳಬೇಕಾಗುತ್ತದೆ. ಸುಮ್ಮನೆ ಕೇಳಿಸಿಕೊಳ್ಳುವುದು ಒಳಿತು. |
'ಆ ಟೀವಿ ವಿಷ್ಯ ಬಿಡು. ಇನ್ನೊಂದೇನ ಹೇಳ್ತಿನಿ ಅಂದ್ಯಲಾ. ಅದೇನ್ ಹೇಳು'' ಅಂದೆ. |
''ಮುನ್ನಿನಾ ದೇಶಾ ಬಿಟ್ಟು ಕಳಿಸ್ತಾರಂತೆ. ಅದನ್ನ ಕೇಳಿದಾಗಿಂದ ಯಾಕೋ ಸಮಾಧಾನ ಇಲ್ಲ. ಈ ದೇಶದಾಕಿ ಅನ್ನೋ ಯಾವ ಗುರ್ತು ಇಲ್ಲ ಅನ್ನಾಕತ್ತಾರ. ನಾವು ಇಷ್ಟು ವರ್ಷ ನಮ್ಮನಿಯಾಗ ಕೆಲಸಕ್ಕಿದ್ಲು. ಸಂಬಳ ಕೊಟ್ಟಿವಿ ಅಂದ್ರ ಸುಮ್ನಿರ್ತಾರೇನು. ಏನಾರ ಮಾಡಯಣ... ನಿಮ್ಮನಿ ಬಾಯಿನ ಇಕಿನ್ನ ಇಲ್ಲಿ ಕಳ್ಸಿದ್ದು... ಅಲ್ಲಿ ಹೆಂಗದ?'' ಅವಳು ಹೇಳಿದ್ದಕ್ಕೆ ನನಗೆ ಈಗ ಅರ್ಥ ಹೊಳೆಯಲಾರಂಭಿಸಿತು. |
''ನಾನು ಊರಾಗಿರಲಿಲ್ಲ. ಮನಿಗೋಗಿ ಏನಾಗೇತಿ ಅಂತ ನೋಡಿ ಹೇಳ್ತಿನಿ' ಅಂದು ಫೋನಿಟ್ಟೆ. |
ತಂಗಿಯ ರಸಕಸಿ ಹಿಂಸೆ ಅನ್ಸಿದ್ರು ಅವಳದು ತಾಯಿ ಹೃದಯ. ನಾವು ಊರಿನಲ್ಲಿ ಶಾಲೆ ಓದುತ್ತಿದ್ದ ದಿನಗಳಲ್ಲಿ ತಂಗಿಯೆ ಬೆಳಗ್ಗೆ ರಂಗೋಲಿ ಹಾಕುತ್ತಿದ್ದಳು. ಸಾಮಾನ್ಯವಾಗಿ ಗಾಳಿ, ಇರುವೆ, ಜಿಟ್ಟಿ, ಜಂಡಿಗಿ, ಹುಳ, ಹುಪ್ಪ್ಪುಡಿ ಅವಳ ಪುಟ್ಟ ಬೆರಳಿನಿಂದ ಹಾಕಿದ ಗೆರೆಗಳನ್ನ ದಾಟಿ ಒಳಬಂದು ಬಿಟ್ಟಿರುಬಿಡುತ್ತಿದ್ದವು. ರಂಗೋಲಿಯ ಗೆರೆಗಳ ಮಧ್ಯದ ಜಾಗದಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಹರಿದಾಡುತ್ತಾ ವಾಸಿಸುತ್ತಿದ್ದವು... ಆಗೆಲ್ಲ ತಂಗಿಯ ಕೋಪ ತಾರಕಕ್ಕೇರುತ್ತಿತ್ತು. ಒಳಗೆ ಬರುವ ಜಿಟ್ಟೆಯ ಮೀಸೆ ಹಿಡಿದು ಹೊರದಬ್ಬುತ್ತಿದ್ದಳು. ಇರುವೆಯ ಹೊರದಬ್ಬಿ ತನ್ನ ರಂಗೋಲಿ ಕೆಡಿಸಿದ ಕೋಪಕ್ಕೆ ಪಕ್ಕದ ಹೂಜಿಯಲ್ಲಿ ಹಾಕಿ ಚಪ್ಪಾಳೆ ತಟ್ಟುತ್ತಿದ್ದಳು. ರಜಾದಿನವಾದ ರವಿವಾರ ರಂಗೋಲಿ ಹಾಕಿದಾಗಲಂತು ಅದರ ಸುತ್ತಲೆ ಕಾವಲು ಕೂರುತ್ತಿದ್ದಳು. ಅಲ್ಲಿಯೇ ಒಂದು ಪುಟ್ಟ ಸ್ಟೂಲ್ ಹಾಕಿಕೊಂಡು ತಿಂಡಿ ಕಾಫಿ ಮುಗಿಸುತ್ತಿದ್ದಳು. ಅವಳು ಸಂಜೆ ಶಾಲೆಯಿಂದ ಬಂದವಳೆ ಅಪ್ಪನ ಬಳಿ ದೂರು ಹೇಳುತ್ತಿದ್ದಳು. ಅಪ್ಪ ಆಗೆಲ್ಲ ಬಹಳ ತೂಕದಿಂದ ''ಅವು ನಿನ್ನ ರಂಗೋಲಿ ಕೆಡಿಸಲಾಕೆ ಅಂತ ಬರ್ತವೇನು? ಎಷ್ಟು ಚಂದ ರಂಗೋಲಿ ಬಿಡಿಸ್ತಿ ನೀನು... ಇಲ್ಲಿ ಬದುಕೋಬೋದು ಅಂತ ಬರ್ತಾವಪ್ಪ'' ಅಂದಾಗ ತಂಗಿ ಪೆಪೆಪೆಪೆ ಮಾಡಿ ಅರ್ಥವಾಗದೆ ನನ್ನ ಮುಖ ನೋಡುತ್ತಿದ್ದಳು. ಶಾಲೇಲಿ ಫಸ್ಟ್ ಇದ್ದ ಆಕಿಗೆ ಹಂಗಾದ್ರ ನಾನಿನ್ನೇನು ಹೇಳಲು ಸಾಧ್ಯವಿತ್ತು. ಈಗ ಅದಕ್ಕೆ ಅರ್ಥ ಹೊಳೆದು ರೆಕ್ಕೆ ಪುಕ್ಕ ಕಟ್ಟಿಕೊಂಡು ಏನೋ ಧ್ವನಿಸುತ್ತ ಸುತ್ತ ತಿರುಗುತ್ತಿವೆ ಅನಿಸಲಿಕ್ಕೆ ಶುರುವಾಯಿತು. |
ಕೀ ತೆಗೆದು ನನ್ನ ಫ್ಲ್ಯಾಟಿನೊಳಗೆ ಕಾಲಿಡುತ್ತಿದ್ದಂತೆಯೇ ಮನೆಯ ಅಸ್ತವ್ಯಸ್ತತೆ ಗೋಚರಿಸಿತು. ಬಾಯಿ ಸುಮಾರು ದಿನದಿಂದ ಬಂದಿಲ್ಲ. ಒಂದು ವಾರವಾಗಿರಬೇಕು. ಕಸ ಹಾಗೆ ಬಿದ್ದಿದೆ. ಅಡುಗೆ ಮನೆಗೆ ಹೋದರೆ ಅಲ್ಲೊಂದೆರಡು ಪಾತ್ರೆಗಳು ಹಾಗೆ ಇವೆ. ಬಹುಷಃ ನಾಳೆ ತೊಳೆದರಾಯಿತು ಅಂದು ಬಿಟ್ಟಿರಬೇಕು. ಕೂಡಲೇ ಅವಳ ನಂಬರಿಗೆ ಕರೆ ಮಾಡಿದೆ. ''ನೀವು ಕರೆ ಮಾಡಿದ ಚಂದಾದಾರರು ನೆಟ್ವರ್ಕ್ ಕ್ಷೇತ್ರದಿಂದ ಹೊರಗಿದ್ದಾರೆ'' ಎನ್ನುವ ಉತ್ತರ ಬಂದಿತು. ಪ್ರಯಾಣದ ಸುಸ್ತು ಇದ್ದದ್ದರಿಂದ ತುಸು ಹೊತ್ತು ಅಡ್ಡಾಗಿ ಆಮೇಲೆ ಅವಳ ಅಡ್ರೆಸ್ಸ್ ಹುಡುಕಿ ಮಾತನಾಡಿಸಿಕೊಂಡು ಬಂದರಾಯಿತೆಂದು ವಿಶ್ರಾಂತಿ ತೆಗೆದುಕೊಳ್ಳಲು ಕೋಣೆಗೆ ಹೋದೆ. |
ಏಳುವಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಮತ್ತೊಮ್ಮೆ ಕರೆ ಮಾಡಿದೆ. ಮತ್ತದೇ ಉತ್ತರ: ''ನೆಟ್ವರ್ಕ್ ಕ್ಷೇತ್ರದಿಂದ ಹೊರಗೆ''. ಮನೆಯ ಸ್ಥಿತಿ ನೋಡುವಂತಿರಲಿಲ್ಲ. ನಾನೇ ಪೊರಕೆ ಹಿಡಿದು ಶುಚಿಗೊಳಿಸಲು ಹೋದೆ. ಎಷ್ಟು ಗುಡಿಸಿದರೂ ಮತ್ತೆ ಹಿಂದೆ ಹಿಂದೆ ಉಳಿಯುವ ಕಸ. ಪಾತ್ರೆ ತೊಳೆಯಲು ಹೋದೆ. ಅಲ್ಲೂ ಹಾಗೆ!!! ನಳದೊಳಗಿನ ನೀರು ಪಾತ್ರೆಗೆ ಅಂಟುತ್ತಿಲ್ಲವೆಂಬಂತೆ ಭಾಸವಾಯಿತು. ಬ್ರೆಡ್ ಆಮ್ಲೆಟ್ ಮಾಡಲು ಹೋದೆ. ಸರಿಯಾಗಲಿಲ್ಲ. ಕಾಫಿ ಮಾಡಿಕೊಂಡೆ. ರುಚಿಯಿರಲಿಲ್ಲ. ಯಾಕೋ ಮನೆಯ ಯಾವುದೂ ನನಗೆ ಸಹಕರಿಸುತ್ತಿಲ್ಲ ಎನಿಸಲಾರಂಭಿಸಿತು. ನಾನೇಕೆ ಹೀಗೆ ತಂಗಿಯಂತೆ ಮಳ್ಳನ ಹಾಗೆ ಆಡುತ್ತಿದ್ದೇನೆ? ಮೊದಲ ಬಾರಿ ಮನೆಗೆಲಸಕ್ಕೆಂದು ಬಂದಾಗ ಬಾಯಿಗೆ ನಮ್ಮ ಭಾಷೆ ಬರುತ್ತಿರಲಿಲ್ಲ. ಅವಳು ಮಾತನಾಡುವ ಧಾಟಿಯಲ್ಲೇ ಅವಳು ಇಲ್ಲಿನವಳಲ್ಲ ಎಂದು ತಿಳಿಯಿತು. ಯಾವ ಊರು ಕೇಳಿದೆ? ಯಾವುದೋ ಊರಿನ ಹೆಸರು ಹೇಳಿದ್ದಳು... ಅದೆಲ್ಲಿ ಬರುತ್ತದೆಂದರೆ 'ಮುಝೆ ಮಾಲೂಮ್ ನಹಿ' ಎಂದಿದ್ದಳು. ಹಿಂದಿಯು ಅಷ್ಟು ಸ್ಪಷ್ಟವಿರಲಿಲ್ಲ. ಅವಳ ಊರಿನ ಹೆಸರನ್ನೇ ಇನ್ನೊಮ್ಮೆ ಕೇಳಿ ಗೂಗಲ್ಲಿನಲ್ಲಿ ತಲಾಷಿ ನಡೆಸಿದಾಗ ಆ ಹೆಸರಿನ ಯಾವ ಊರೂ ಸಿಗಲಿಲ್ಲ. ನಾನು ಆಗ ತಾನೆ ಹೊಸತಾಗಿ ಕೆಲಸಕ್ಕೆ ಸೇರಿದ್ದರಿಂದ ಸಂಬಳ ಕಡಿಮೆಯೇ ಹೇಳಿದೆ. ಯಾವುದೇ ಚೌಕಾಸಿ ಮಾಡದೆ ಒಪ್ಪಿಕೊಂಡು ಬಿಟ್ಟಿದ್ದಳು. ಯಾವ ಊರಿನವರಾದರೇನು? ಸಂಬಳ ಕಡಿಮೆ ಇದೆಯಲ್ಲ. ಇಲ್ಲಿಯವರೆ ಆದರೆ ಅವರ ಡಿಮ್ಯಾಂಡುಗಳೆ ನೂರೆಂಟು ಎಂದು ಕೇಳಲ್ಪಟ್ಟಿದ್ದೆ. ಹೆಂಗೂ ನನಗೆ ಚೂರು ಮಿಕ್ಕುತ್ತದೆ ಎಂದು ಸುಮ್ಮನಾಗಿದ್ದೆ. ಬಾಯಿ ತುಂಬಾ ರುಚಿಕರವಾಗಿ ಅಡುಗೆ ಮಾಡಿ ಹಾಕುತ್ತಿದ್ದಳು. ಮನೆಯನ್ನ ಅತಿ ಎನ್ನಿಸುವಷ್ಟು ಸ್ವಚ್ಛ ಮಾಡಿ ಇಡುತ್ತಿದ್ದಳು. ಅವಳ ಬಳಿ ಕೇವಲ ಮಾತನಾಡಬಹುದಾದ ಫೋನ್ ಇತ್ತು. ಒಮ್ಮೆ ಯಾರ ಬಳಿಯೋ ಮಾತನಾಡಬೇಕಾದರೆ ಅವಳ ಭಾಷೆ ಬೆಂಗಾಲಿ ಎಂದು ತಿಳಿಯಿತು. ಬಹುಶಃ ಬಾಂಗ್ಲಾದಿಂದ ಬಂದಿರಬಹುದೆಂದು ಊಹಿಸಿದೆನಾದರೂ ಅದು ಅಷ್ಟು ಮುಖ್ಯವೆನಿಸಲಿಲ್ಲ. ಅವಳು ಇಲ್ಲಿ ಒಡನಾಡುತ್ತಾ ಒಡನಾಡುತ್ತಾ ಇಲ್ಲಿಯವಳೆ ಆಗಿದ್ದಳು. ಸ್ವತಂತ್ರ ದಿವಸದ ದಿನ ನನಗಿಷ್ಟದ ಹೆಸರುಬೇಳೆ ಪಾಯಸವನ್ನು ಅದು ಹೇಗೋ ಕಲಿತು ಮಾಡಿಕೊಟ್ಟಿದ್ದಳು. ಚೂರು ಪಾರು ಕನ್ನಡ ಕಲಿಯುತ್ತಿದ್ದಳು. ''ಹೋಗಿ ನೀವು... ಬನ್ನಿ... ತಿಂಡಿ ಮಾಡಿದೆ. ನಾ... ನು ನಾಳೆ ಬರುತ್ತೆ''. ಹೀಗೆ ಅವಳ ಬಾಯಲ್ಲಿ ಕನ್ನಡ ಕೇಳುವುದೇ ಚಂದ ಅನಿಸಿತ್ತು. ನನ್ನ ಸುತ್ತಮುತ್ತಲಿನ ಎಷ್ಟೋ ಮನೆಗಳಿಗೆ ಅವಳೇ ಪರಿಚಯದ ಬಾಯಿಯರನ್ನ ಕಳಿಸಿದ್ದಳು. ಇದೇ ಅಪಾರ್ಟ್ಮೆಂಟಿನಲ್ಲಿರುವ ನನ್ನದೇ ಆಫೀಸಿನಲ್ಲಿ ಕೆಲಸ ಮಾಡುವ ಸ್ನೇಹಿತನ ಮನೆಗೂ ಇವಳ ಗೆಳತಿಯನ್ನೇ ಕಳಿಸಿದ್ದಳು. ಇದು ಗೊತ್ತಾಗಿ ನಾನು ಕಿಚಾಯಿಸುವಂತೆ ''ಅಡುಗೆ ಕೆಲಸದವರನ್ನ ಸಪ್ಲೈ ಮಾಡೋ ಬ್ರೋಕರ್ ಆಗಿಬಿಟ್ಟಿದ್ದೀರಲ್ಲಾ ಬಾಯಿ'' ಎಂದದ್ದಕ್ಕೆ 'ಭೂಖ್ ಸಾಹಬ್' ಎನ್ನುವ ಉತ್ತರ ನನ್ನ ಬಾಯಿ ಮುಚ್ಚಿಸಿತ್ತು. ನಾನು ಉತ್ತರ ಕರ್ನಾಟಕದಲ್ಲಿರುವ ನನ್ನ ತಂಗಿಯ ಮನೆಗೂ ಯಾರಾದರೂ ಇದ್ದಾರೆಯೇ? ಎಂದಿದ್ದಕ್ಕೆ ಮುಖವರಳಿಸಿಕೊಂಡು 'ಮುನ್ನಿ ಅಂತ ಇದೆ. ಉಸ್ಕೊ ಅಠಾರಾ ನಹಿ ಹುಯಿ ಹೈ ಸಾಬ್. ಒ ಪಡ್ನ ಚಾಹತಿ ಹೈ' ಅಂದಳು. ಅದರ ಬಗ್ಗೆ ಚಿಂತೆ ಬೇಡ. ನನ್ನ ತಂಗಿ ತುಂಬಾ ಜಾಣೆ. ಅವಳು ಚೆನ್ನಾಗಿ ಇಟ್ಟುಕೊಳ್ಳುತ್ತಾಳೆ. ಓದಿಸುತ್ತಾಳೆ ಕೂಡ ಎಂದಿದ್ದೆ. ತಂಗಿಯೂ ಹಾಗೆಯೇ ನಡೆದುಕೊಂಡಳು. ಮುನ್ನಿಯೂ ಅಲ್ಲಿ ಬೇಗ ಹೊಂದಿಕೊಂಡಳು. ತಂಗಿಯ ಮಗನಿಗೂ ಒಳ್ಳೆಯ ಕಂಪೆನಿಯಾಯಿತು ಎಂದು ಖುಷಿಪಟ್ಟಿದ್ದೆ. ಬಾಯಿ ಮತ್ತು ಮುನ್ನಿ ನಮ್ಮ ಕುಟುಂಬದವರಾಗಿಬಿಟ್ಟಿದ್ದರು. |
ಈಗ ಬಾಯಿ ಇಲ್ಲದೆ ಈ ಮನೆ ಬಿಕೋ ಎನ್ನುತ್ತಿದೆ. ಅಲ್ಲಿ ಮುನ್ನಿ ಭಯಗೊಂಡಿರಬಹುದು... ಕೂಡಲೇ ವಾಸ್ತವಕ್ಕೆ ಬಂದು ಮಾಡಿದೆ. ಈಗ ಸ್ವಿಚ್ ಆಫ್ ಆಗಿತ್ತು. ಅವಳ ಅಡ್ರೆಸ್ಸ್ ಎಲ್ಲೋ ಬರೆದುಕೊಂಡಿದ್ದ ನೆನಪಾಗಿ ಮತ್ತೆ ನನ್ನ ಕೋಣೆಯ ಬೀರುವಿನಲ್ಲೆಲ್ಲ ಹುಡುಕಾಡಿದೆ. ಹಳೆಯ ಡೈರಿ, ಓದುವ ಕಪಾಟು ಎಲ್ಲ ಕಡೆ ಹುಡುಕಾಡಿದೆ. ಎಲ್ಲೂ ಸಿಗಲಿಲ್ಲ. ಅವಳು ಇಲ್ಲೇ ಹತ್ತಿರದ ಎಫ್.ಎಸ್.ಆರ್ ಲೇಔಟಿನಲ್ಲಿರುವ ರಾಯಲ್ ಮಾಲಿನ ಅದ್ಯಾವುದೋ ಪುಟ್ಟ ಚರ್ಚಿನ ಪಕ್ಕದ ಪುಟ್ಟ ಜೋಪಡಿಯಂತಹ ಜನತಾ ಮನೆಯಲ್ಲಿ ಇರುವುದಾಗಿ ಹೇಳಿದ್ದು ನೆನಪಾಗಿ ಕೂಡಲೇ ಬಟ್ಟೆ ಬದಲಾಯಿಸಿ ನನ್ನದೆ ಕಾರಿನಲ್ಲಿ ಹೊರಟೆ. ದಾರಿಯಲ್ಲಿ ಯಾರೋ ''ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡಬೇಕು. ಅಕ್ರಮ ವಲಸಿಗರನ್ನು ಹೊರದಬ್ಬಬೇಕು'' ಎನ್ನುವ ಘೋಷಣೆ ಕೂಗುವುದು ಕೇಳಿಬರುತ್ತಿತ್ತು. ರೇಡಿಯೋ, ಪತ್ರಿಕೆ, ಟೀವಿಗಳಲ್ಲಿ ಎಲ್ಲವು ಇಂಥದ್ದೇ ಸುದ್ದಿ. ಅವರ ಮನೆ ಯಾವುದು? ಅವರ ದೇಶ ಯಾವುದು? ಅಲ್ಲಿಯೂ ಇಲ್ಲಿಯಂತದೆ ಗಾಳಿ, ನೀರು, ಬೆಳಕು, ಸೂರ್ಯ, ಚಂದ್ರ ಇರುತ್ತಾನಲ್ಲವೆ. ನಮಗೆ ನಾವೇ ಎಳೆದುಕೊಳ್ಳುತ್ತಿರುವ ಗಡಿಗಳು ತಂಗಿ ಹಾಕುತ್ತಿದ್ದ ರಂಗೋಲಿ ಗೆರೆಗಳಂತೆ ಕಂಡವು. ನಾನು ಕೆಲಸದ ಬಾಯಿಯನ್ನ ನೇಮಿಸಿಕೊಳ್ಳುವಾಗಿನ ಮಾನದಂಡ ಕಡಿಮೆ ಸಂಬಳವೇ ಆಗಿತ್ತಲ್ಲವೇ? ಎಲ್ಲ ಕಡೆಯೂ ಹೀಗೆ ನಡೆಯುತ್ತಿರಬಹುದು ಎನಿಸಿತು. ನಮಗೆ ಮುಟ್ಟುತ್ತಿದ್ದ ಸುದ್ದಿಗಳು ತಿರುಚಿ ಮರುಚಿಯಾಗಿರಲಿಕ್ಕೂ ಸಾಧ್ಯವಿತ್ತು. ಕೆಲವೊಮ್ಮೆ ನಿಜ ಎನ್ನಿಸುವಷ್ಟು ರೋಚಕವು ಆಗಿರುತ್ತಿತ್ತು. ಬಾಯಿ ಹೇಳಿದ ಜಾಗದಲ್ಲಿ ಅವಳು ಹೇಳಿದ ಮನೆಗಳಿದ್ದವಾದರೂ ಅವಳಿರಲಿಲ್ಲ. ಖಾಲಿ ಬಿದ್ದಿದ್ದವು. |
ಯಾವುದೋ ದುಃಖದಿಂದ ಡ್ರೈವು ಮಾಡಿಕೊಂಡು ಬರುವಾಗ ನಮ್ಮಂತಿಲ್ಲದವರು, ಬೇರೆ ಭಾಷೆ ಮಾತನಾಡುತ್ತಿರುವವರು ಸೆಕ್ಯೂರಿಟಿ ಗಾರ್ಡುಗಳಾಗಿ, ಮನೆ ಕೆಲಸದವರಾಗಿ, ಬೀದಿ ಬದಿಯ ವ್ಯಾಪಾರಿಗಳಾಗಿ ನಾವಿರುವ ನೆಲವೇ ನಮ್ಮ ತಾಯಿ ಎಂದು ಅವರ ಕಣ್ಣೋಟದಿಂದಲೆ ಹೇಳುತ್ತಿದ್ದಾರೆ ಎನಿಸಿತು. ತಂಗಿಯ ಫೋನು. ಈ ಬಾರಿ ಎರಡನೇ ರಿಂಗಿಗೆ ಎತ್ತಿದೆ. 'ಮುನ್ನಿ ಬಜಾರಕ್ಕೆ ತರಕಾರಿ ತರೋದಕ್ಕ ಹೋಗಿದ್ಲು. ಇನ್ನು ಬಂದಿಲ್ಲ. ಹೊರಗ ಬಾಳ ಗಲಾಟಿ ಅದ. ನಾನು ಬ್ಯಾಡ ಅಂತಂದ್ರು ನಮ್ಮೂರಾಗ ನಮಗ ಎಂತಾ ಭಯ ಅಂತ ಹೋದ್ಲು. ಯಾಕೋ ಭಯ ಆಗ್ಲಿಕತ್ತಾದ. ಈಗೇನ್ ಮಾಡುದು? ಹೊರಗ ಧಾಂಡಿಗರ ಹಾವಳಿ ಬೇರೆ...'' ಅವಳು ಮಾತನಾಡುತ್ತಲೇ ಇದ್ದಳು. ನನಗೇನು ಹೇಳಬೇಕೋ ತೋಚಲಿಲ್ಲ. ಫೋನ್ ಕಟ್ ಮಾಡಿದೆ. ಮನಸ್ಸು ಭಾರವಾಗಿತ್ತು. ಮನೆಗೆ ಬಂದು ಟೀವಿ ಹಾಕಿದೆ. ಯಾವುದೊ ಪ್ಯಾನೆಲ್ ನಡೀತಿತ್ತು. ಫ್ರಿಡ್ಜಿನೊಳಗಿನ ಜ್ಯೂಸು ತೆಗೆದುಕೊಂಡು ಬರುವಷ್ಟರಲ್ಲಿ ತಂಗಿ ಹೇಳಿದಂತೆ ಟೀವಿಯ ಪರದೆಯಲ್ಲಿ ಗೀಚುಗಳಿದ್ದವು. ಕ್ರಮೇಣ ಬಿರುಕು ಬಿಡಲಾರಂಭಿಸಿತು. ಚಾನೆಲ್ ಬದಲಾಯಿಸತ್ತ ಹೊರಟೆ. ಯಾವುದೋ ರಾಜಕಾರಣಿ ತಲೆಬುಡವಿಲ್ಲದ ಹೇಳಿಕೆ ನೀಡುತ್ತಿದ್ದ. ಅವನಿಗೆ ಕ್ರಮೇಣ ಕೊಂಬು, ಕೋರೆ ಹಲ್ಲು ಮೂಡಲಾರಂಭಿಸಿದವು. ಬಿರುಕು ಜಾಸ್ತಿಯಾಗಲು ಶುರುವಾಯಿತು. ಮತ್ಯಾವುದೋ ಚಾನೆಲ್ಲಿನಲ್ಲಿ ಜನ ದಂಡಿ ದಂಡಿಯಾಗಿ ಬೇರೆಲ್ಲಿಗೋ ಹೋಗುತ್ತಿದ್ದರು. ನಗರದ ವಾಯುಮಾಲಿನ್ಯದ ಟ್ರಾಫಿಕ್ನ ಹೊಗೆಯಂತೆ ಹೊಗೆಯೇಳಲು ಶುರುವಾಗಿ ಒಮ್ಮೆಲೇ ಟೀವಿ ಛಿದ್ರ ಛಿದ್ರವಾಗಿ ಚೂರಾಯಿತು. ಟೀವಿ ಪರದೆಯ ಗಾಜು ನೆಲದ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಒಳಗೆ ವಯರು ತುಂಬಿದ ಸರಕೀಟುಗಳು ಮನುಜನ ಕರುಳಿನಂತೆ ಕಂಡವು. ಭಯವಾಯಿತು. ಒಮ್ಮೆ ಸುತ್ತ ನೋಡಿದೆ. ಮನೆಯ ಎಲ್ಲವೂ 'ಈ ಮನೆ ನಿನ್ನದೊಬ್ಬನದೆ ಅಲ್ಲ' ಎಂದಂದಾಯಿತು. ಮತ್ತೆ ಬಾಯಿಗೆ ಫೋನ್ ಮಾಡಿದೆ ಸ್ವಿಚ್ ಆಫ್ ಇತ್ತು. ತಂಗಿಗೆ ಫೋನ್ ಮಾಡಿದೆ. ರಿಂಗಾಗುತ್ತಲೆ ಇತ್ತು. ಕೊನೆಯ ರಿಂಗಿಗೆ ಫೋನೆತ್ತಿದಳು. 'ಫೋನ್ ಎತ್ತಕೆ ಏನ್ ಧಾಡಿ ನಿನಿಗೆ? ಸಾಯುವಂತಹ ಅರ್ಜೆಂಟ್ ಇದ್ರೆ ಏನ್ ಮಾಡ್ತಿ ನೀನು?' ಭಯಮಿಶ್ರಿತ ಕೋಪದಿಂದ ಅಂದೆ. ದುಗುಡದ ಆ ಸಮಯದಲ್ಲೂ ತಂಗಿ ಕಿಸಕ್ ಎಂದು ನಕ್ಕಿದ್ದು ಕೇಳಿಸಿತು. |
ಕೃಷಿ ಮಸೂದೆಗೆ ವಿರೋಧ, ಮೇಲ್ಮನೆ ಕೋಲಾಹಲ: ಎಂಟು ಸಂಸದರು ಅಮಾನತು-ವೆಂಕಯ್ಯ ನಾಯ್ಡು | Udayavani – ಉದಯವಾಣಿ |
ಅಮಾನತುಗೊಂಡಿದ್ದ ಸಂಸದರು ಕಲಾಪದಿಂದ ಹೊರನಡೆಯಲು ವಿರೋಧ |
Team Udayavani, Sep 21, 2020, 12:11 PM IST |
ನವದೆಹಲಿ:ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಅಂಗೀಕಾರ ವೇಳೆ ಪ್ರತಿಪಕ್ಷ ಸದಸ್ಯರು ಉಪಸಭಾಪತಿಯತ್ತ ನಿಯಮಾವಳಿ ಪುಸ್ತಕ ತೂರಿ, ಕಾಗದ ಪತ್ರ ಹರಿದು ಎಸೆದು ಕೋಲಾಹಲ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಟಿಎಂಸಿ ಸದಸ್ಯ ಡೆರಿಕ್ ಒಬ್ರಿಯಾನ್ ಸೇರಿದಂತೆ 8 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತುಗೊಳಿಸಿದ್ದಾರೆ. |
ಕೃಷಿ ಮಸೂದೆ ವಿರೋಧಿಸಿದ್ದ ಸಂಸದ ಡೆರಿಕ್ ಒಬ್ರಿಯಾನ್, ಸಂಜಯ್ ಸಿಂಗ್, ರಾಜೀವ್ ಸಟಾವ್, ಕೆಕೆ ರಾಗೇಶ್, ಸೈಯದ್ ನಾಝಿ ಹುಸೈನ್, ಡೋಲಾ ಸೇನ್, ನಿಪುನ್ ಬೋರಾ ಮತ್ತು ಇಳಮಾರನ್ ಕರೀಂ ಸೇರಿದಂತೆ ಏಳು ಮಂದಿ ಸದಸ್ಯರನ್ನು ರಾಜ್ಯಸಭಾ ಅಧ್ಯಕ್ಷ ವಿ.ವೆಂಕಯ್ಯ ನಾಯ್ಡು ಅವರು ಸೋಮವಾರ (ಸೆಪ್ಟೆಂಬರ್ 21, 2020) ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. |
ಇದನ್ನೂ ಓದಿ: ಮತ್ತೆ ಜೀವಕಳೆ ಪಡೆದ ಚಾರ್ಮಾಡಿ ಜಲಪಾತಗಳು: ಅಲ್ಲಲ್ಲಿ ಗುಡ್ಡ ಕುಸಿತ |
ಒಬ್ರಿಯಾನ್, ಡೋಲಾ ಸೇನ್ ತೃಣಮೂಲ ಕಾಂಗ್ರೆಸ್ ಸದಸ್ಯರು, ಹುಸೈನ್, ಬೋರಾ ಮತ್ತು ಸಟಾವ್ ಕಾಂಗ್ರೆಸ್ ಪಕ್ಷದ ಸಂಸದರು, ಸಂಜಯ್ ಸಿಂಗ್ ಆಪ್ ಸಂಸದ, ರಾಗೇಶ್ ಮತ್ತು ಕರೀಂ ಸಿಪಿಐ(ಎಂ) ಪಕ್ಷದ ಸಂಸದರಾಗಿದ್ದಾರೆ ಎಂದು ವರದಿ ತಿಳಿಸಿದೆ. |
ಪುತ್ತೂರು 'ಲಕ್ಷ್ಮೀದೇವಿ' ಗೆ ನವರಾತ್ರಿ ಸಂಭ್ರಮ ಅಲಂಕಾರ ಪೂಜೆ ದೇವಿ ಕೃಪೆಗೆ ಪಾತ್ರವಾದ ಭಕ್ತರು | V4News |
ಪುತ್ತೂರು; ಇತಿಹಾಸ ಪ್ರಸಿದ್ಧ ಶ್ರೀ ಲಕ್ಮೀದೇವಿ ಬೆಟ್ಟದಲ್ಲಿ 9 ದಿನಗಳ ಸಂಭ್ರಮದ ನವರಾತ್ರಿ ಉತ್ಸವವು ನಡೆಯಿತು. ಕಬಕ ಪುತ್ತೂರು ರೈಲ್ವೇ ನಿಲ್ದಾಣ ಬಳಿಯಲ್ಲಿರುವ ಶ್ರೀ ಲಕ್ಮೀದೇವಿ ಬೆಟ್ಟ ಜನತೆಯ ಭಕ್ತಿಯ ತಾಣ. ಇಲ್ಲಿ ಲಕ್ಷ್ಮೀ ದೇವಿ ನೆಲೆಗೊಂಡ ಕ್ಷೇತ್ರ. ನೂರಾರು ವರ್ಷಗಳಿಂದ ನಿರಂತರವಾಗಿ ಇಲ್ಲಿ ಪೂಜೆ ನಡೆಯುತ್ತಿದೆ. ಭಕ್ತರು ನೆನೆಸಿದ ಕಾರ್ಯಗಳು ನೆರವೇರುವ ಕಾರಣಿಕ ಸ್ಥಳ ಎಂಬ ಖ್ಯಾತಿ ಪಡೆದಿರುವ ಈ ಬೆಟ್ಟ ಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆಯಂತೆ. ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ಲಕ್ಷೀ ದೇವಿ ದೇವಸ್ಥಾನಕ್ಕೆ ಜಾತಿ ಧರ್ಮ ಮೀರಿದ ಭಕ್ತರಿದ್ದಾರೆ. ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಬಂದು ತಮ್ಮ ಕಷ್ಟಗಳನ್ನು ದೇವಿಯ ಮುಂದೆ ಇಟ್ಟು, ಸಮಸ್ಯೆ ಪರಿಹರಿಸಿಕೊಂಡು ಹೋಗುತ್ತಾರೆ. |
ಜನತೆಯ ನಂಬಿಕೆಯ ತಾಣವಾಗಿರುವ ಲಕ್ಷೀದೇವಿ ಬೆಟ್ಟ ಪ್ರಸ್ತುತ ಭಕ್ತ ಜನರಿಂದ ತುಂಬಿರುವ ಕ್ಷೇತ್ರವಾಗಿ ಮಾರ್ಪಟ್ಟಿದೆ. ಪ್ರತೀ ನವರಾತ್ರಿ ಉತ್ಸವವನ್ನೂ ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇವಿಯ ಸರ್ವಾಲಂಕಾರ ಪೂಜೆ ನವರಾತ್ರಿಯ ವಿಶೇಷ ಪೂಜೆಯಾಗಿದೆ. ಕುಂಕುಮ, ಬಳೆ ಹಾಗೂ ಹೂ ಪ್ರಸಾದ ರೂಪವಾಗಿ ಪಡೆದು ಭಕ್ತರು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಮನೆಗೆ ತಡೆಯಾಗಿ ಇಲ್ಲಿ ತೆಂಗಿನ ಕಾಯಿ ನೀಡುವ ಕ್ರಮವೂ ಇಲ್ಲಿದೆ. ಇದಲ್ಲದೆ ತುಲಾಭಾರ, ಗಣಹೋಮ,ದುರ್ಗಾಪೂಜೆ, ನವಗ್ರಹ ಶಾಂತಿಯಾಗ, ಪಾರ್ವತಿ ಸ್ವಯಂವರ ಪೂಜೆ, ವಾಹನ ಪೂಜೆ,ಸುದರ್ಶನ ಹೋಮ, ಸತ್ಯನಾರಾಯಣ ಪೂಜೆ ಚಂಡಿಕಾ ಯಾಗ, ಹೊಸಕ್ಕಿ ನೈವೇದ್ಯ, ದೇವಿ ದರ್ಶನ ಸೇರಿದಂತೆ ಸರ್ವಪೂಜಾ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಲಾಗುತ್ತಿದೆ. ಭಕ್ತರು ತೊಂದರೆ ಎಂದು ಬಂದಾಗ ಮಂತ್ರಿಸಿದ ನೂಲು ಕೊಡುವ ಕೆಲಸವೂ ಈ ಲಕ್ಷ್ಮೀ ದೇವಿ ಬೆಟ್ಟದಲ್ಲಿ ನಡೆಯುತ್ತಿದೆ. ವಿಶೇಷವಾಗಿ ಮಕ್ಕಳಾಗದ ದಂಪತಿಗಳು ಇಲ್ಲಿ ಸೇವೆ ಮಾಡಿದರೆ ಮಕ್ಕಳಾಗುವ ಭಾಗ್ಯವನ್ನೂ ಪಡೆಯುವ ಪ್ರತೀತಿ ಈ ದೇವಾಲಯಕ್ಕಿದೆ. |
ನವರಾತ್ರಿ ಉತ್ಸವದಲ್ಲಿ 9 ದಿನಗಳ ಕಾಲ ಇಲ್ಲಿ ನಿರಂತರವಾಗಿ ಸೇವಾಕಾರ್ಯಕ್ರಮಗಳು ನಡೆಯುತ್ತವೆ. ಇದರ ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. |
ನವರಾತ್ರಿಯ ಕೊನೆಯ ದಿನವಾದ ಶುಕ್ರವಾರ ದೇವಳದ ಧರ್ಮದರ್ಶಿ ಎನ್. ಐತ್ತಪ್ಪ ಸಫಲ್ಯ ನೇತೃತ್ವದಲ್ಲಿ ಬೆಳಿಗ್ಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಲವು ಕಾರ್ಯಕ್ರಮಗಳು ನಡೆದು ಮಧ್ಯಾಹ್ನ ಮಹಿಳೆಯರಿಂದ ಭಜನಾ ಕಾರ್ಯಕ್ರಮ, ಶ್ರೀ ದೇವಿಗೆ ಮಹಾಪೂಜೆ, ದೇವಿದರ್ಶನ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ದೇವಳದ ಕಾರ್ಯಕ್ರಮಕ್ಕೆ ಶ್ರೀ ಲಕ್ಷ್ಮೀ ದೇವಿ ಭಕ್ತ ವೃಂದದವರು ಸಹಕರಿಸಿದರು. |
ಸಾವಿರಾರು ವರ್ಷಗಳ ಇತಿಹಾಸ ಇರುವ ಈ ದೇವಿ ಬೆಟ್ಟ ದ ದೇವಳದಲ್ಲಿ ನಿತ್ಯ ಪೂಜೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿನ ದೇವಿಯ ಕೃಪೆಗೆ ಪಾತ್ರವಾಗಲು ಇಲ್ಲಿಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಎನ್ನುವ ಭೇದ ಭಾವ ಇಲ್ಲದೆ ಭಕ್ತಾಧಿಗಳು ಬರುತ್ತಾರೆ. ಅಷ್ಟಮಂಗಲ ಪ್ರಶ್ನೆಯಲ್ಲಿ ದೇವಳ ನಾದುರಸ್ಥಿಯಲ್ಲಿದ್ದು, ಇದನ್ನು ನವೀಕರಿಸುವ ಕೆಲಸ ನಡೆಸಬೇಕಾಗಿದೆ. |
ಇದೀಗ ದೇವಳದ ಜೀರ್ಣೋದ್ಧಾರ ಕಾರ್ಯಕ್ರಮ ಚಿಂತನೆ ನಡೆಸಲಾಗಿದ್ದು, ಸುಮಾರು ರೂ. 4.50 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ನಡೆಯಲಿದೆ. ಗರ್ಭಗುಡಿ ನಿರ್ಮಾಣಕ್ಕೆ 1.90 ಕೋಟಿ ವೆಚ್ಚವಾಗಲಿದೆ. ಪ್ರಸ್ತುತ ಕುಂಕುಮದಲ್ಲಿರುವ ಮೂರ್ತಿ ಇನ್ನು ಮುಂದೆ ಶಿಲೆಯಲ್ಲಿ ನಿರ್ಮಾಣವಾಗಲಿದೆ. ಮಾರ್ಚ್ ಮೀನಾ ಸಂಕ್ರಮಣ ದೇವಿಯ ಮುಖಕ್ಕೆ ಸೂರ್ಯರಶ್ಮಿ ನೇರವಾಗಿ ಬೀಳುವ ಕೌತುಕ ವೀಕ್ಷಿಸಿ ಸಾವಿರಾರು ಭಕ್ತರು ಇಲ್ಲಿ ಪುನೀತರಾಗುತ್ತಾರೆ ಎಂದು ದೇವಳದ ಧರ್ಮದರ್ಶಿ ಎನ್.ಐತ್ತಪ್ಪ ಸಫಲ್ಯ ತಿಳಿಸಿದರು. |
Previous : ಬಡಮಕ್ಕಳ ವಿದ್ಯಾರ್ಜನೆಗಾಗಿ ಹುಲಿವೇಷ ಹಾಕಿ ಹೆಜ್ಜೆ ಹಾಕಿದ ಯುವಕರು ಅದಮಾರು ಓಂ ಪ್ರೇಂಡ್ಸ್ ಹಾಗೂ ಅಂಬೇಡ್ಕರ್ ಸೇವಾ ಸಮಿತಿಯ ದಿಟ್ಟ ಹೆಜ್ಜೆ |
ಸಿದ್ಧಾರ್ಥ... ಇದು ನ್ಯಾಯವೇ? | Prajavani |
ಸಿದ್ಧಾರ್ಥ... ಇದು ನ್ಯಾಯವೇ? |
ದೇವೇಗೌಡರು ರಾಜಕೀಯ ಜೀವನದಲ್ಲಿ ಹಲವಾರು ಬಾರಿ ಸೋತಿದ್ದಾರೆ. ಆದರೆ, ಸೋಲನ್ನು ಮೆಟ್ಟಿಲಾಗಿ ಮಾಡಿಕೊಂಡು ಈ ಇಳಿವಯಸ್ಸಿನಲ್ಲೂ ಜನರ ಸೇವೆ ಮಾಡಬೇಕೆಂಬ ತುಡಿತದಿಂದ ಉತ್ಸಾಹಿಯಾಗಿ ಬದುಕಿಲ್ಲವೇ? |
ಸಿದ್ದರಾಮಯ್ಯ ಅವರು ಐದು ವರ್ಷ ಉತ್ತಮ ಆಡಳಿತ ನೀಡಿ, ಸೋಲನ್ನು ಅನುಭವಿಸಿ, ಪುತ್ರನನ್ನು ಕಳೆದುಕೊಂಡರೂ ಜನರ ಸೇವೆ ಮಾಡಲು ಉತ್ಸಾಹಿಯಾಗಿ ಬದುಕಿಲ್ಲವೇ? ಎಚ್.ಡಿ.ಕುಮಾರಸ್ವಾಮಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ಮುಖ್ಯಮಂತ್ರಿಯಾಗಿದ್ದಾಗ ಶಾಸಕರ ಕಿರುಕುಳ ಸಹಿಸಿಕೊಂಡೂ ಜನಸೇವೆಗೆ ಉತ್ಸಾಹಿಯಾಗಿಲ್ಲವೇ? ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜೀವನದ ಏಳುಬೀಳನ್ನು ಲೆಕ್ಕಿಸದೆ ಛಲದಿಂದ ಮೇಲೆದ್ದು ಮುಖ್ಯಮಂತ್ರಿಯಾಗಿಲ್ಲವೇ? ಡಿ.ಕೆ.ಶಿವಕುಮಾರ್ ಅವರ ಮೇಲೆಯೂ ಐ.ಟಿ ದಾಳಿ ಆಗಿತ್ತು. ಆದರೂ ಬದುಕಿನಲ್ಲಿ ಉತ್ಸಾಹ ಉಳಿಸಿಕೊಂಡಿಲ್ಲವೇ? |
ಜೀವನದಲ್ಲಿ ಸೋಲು–ಗೆಲುವು ಪ್ರತಿಯೊಬ್ಬರಿಗೂ ಸಹಜ. ಈ ಸತ್ಯ ನಿಮಗೇಕೆ ಅರ್ಥವಾಗಲಿಲ್ಲ ಸಿದ್ಧಾರ್ಥ? ನಿಮ್ಮ ಕೈ ಹಿಡಿದ ಪತ್ನಿಯನ್ನು ನಡುನೀರಿನಲ್ಲಿ ಏಕೆ ಕೈಬಿಟ್ಟಿರಿ? ನಿಮ್ಮ ಮಕ್ಕಳನ್ನು, ನಿಮ್ಮ ಶ್ರಮದಿಂದಲೇ ಬದುಕು ಕಟ್ಟಿಕೊಂಡ ಸಾವಿರಾರು ಕುಟುಂಬಗಳನ್ನು ತಬ್ಬಲಿಗಳನ್ನಾಗಿ ಏಕೆ ಮಾಡಿದಿರಿ? ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣ ಅವರ ಕಣ್ಣಲ್ಲಿ ಏಕೆ ನೋವಿನ ಕಂಬನಿ ಹರಿಸಿದಿರಿ? ನಿಮಗಿದ್ದ ಸಾಮರ್ಥ್ಯ ನೋಡಿದರೆ, ಎಲ್ಲಾ ಆಸ್ತಿ ಹೋದರೂ ಮತ್ತೆ ಮೇಲೆದ್ದು ಬಂದು, ಈ ದೇಶಕ್ಕೆ ಹಾಗೂ ಯುವಜನರಿಗೆ ಮಾದರಿಯಾಗಬಹುದಿತ್ತು ಅಲ್ಲವೇ? ನೀವು ಮಾಡಿದ್ದು ನ್ಯಾಯವೇ? |
ನೀವು ಪ್ರತಿದಿನ 'ಬಿಯರ್' ಕುಡಿಯುತ್ತಿದ್ದೀರಾ? ಹಾಗಾದ್ರೇ ಇದನ್ನು ತಪ್ಪದೇ ಓದಿ – #1 Latest News Updates Portal – 24×7 | Kannada News Now |
ನೀವು ಪ್ರತಿದಿನ 'ಬಿಯರ್' ಕುಡಿಯುತ್ತಿದ್ದೀರಾ? ಹಾಗಾದ್ರೇ ಇದನ್ನು ತಪ್ಪದೇ ಓದಿ |
By KNN WEB TEAM Tuesday, January 19, 2021, 3:03 PM 412 |
ಕೆಎನ್ಎನ್ಡಿಜಿಟಲ್ಡೆಸ್ಕ್: ಬಿಯರ್ ಅತ್ಯಂತ ಜನಪ್ರಿಯ ಆಯ್ಕೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಹೆಚ್ಚಿನ ವರು ವಿಶ್ರಾಂತಿ ಪಡೆಯಲು ಮತ್ತು ಒತ್ತಡವನ್ನು ಹತ್ತಿಕ್ಕಲು ದೀರ್ಘ ಮತ್ತು ಆಯಾಸದಿಂದ ಬಳಕೆಯಿಂದ ರಿಲ್ಯಾಕ್ಸ್ ಪಡೆದುಕೊಳ್ಳುವುದಕ್ಕಾಗಿ ಇದನ್ನು ಸೇವನೆ ಮಾಡುವುದನ್ನು ನಾವು ಕಾಣಬಹುದಾಗಿದೆ. ಕೇವಲ 5 ರಿಂದ 12 ಪ್ರತಿಶತ ಆಲ್ಕೋಹಾಲ್ ಇರುವುದರಿಂಧ ಆಲ್ಕೋಹಾಲ್ ಪಾನೀಯಗಳಿಗಿಂತ ಬಿಯರ್ ಕಡಿಮೆ ಹಾನಿಕಾರಕವೆಂದು ಪರಿಗಣಿಸಲ್ಪಟ್ಟಿದೆ. ಬಿಯರ್ ಕುಡಿಯುವುದರಿಂದ ಆಯಸ್ಸು ಹೆಚ್ಚುತ್ತದೆ, ನೋವು ಕಡಿಮೆಯಾಗುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಆದರೂ ಸಹ ನಾವು ಇದರಲ್ಲಿ ಸ್ವಲ್ಪ ಪ್ರಮಾಣದ ಆಲ್ಕೋಹಾಲ್ ಇದೆ ಮತ್ತು ಇದರ ಅತಿಯಾದ ಮತ್ತು ನಿಯಮಿತ ಸೇವನೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ನಾವು ಮರೆಯಬಾರದು.ಈ ಲೇಖನದಲ್ಲಿ ನಾವು ನಿಮಗೆ ಪ್ರತಿ ರಾತ್ರಿ ಬಿಯರ್ ಕುಡಿದರೆ ಏನಾಗುತ್ತದೆ ಎಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ. |
'ಶಿಕ್ಷಣ ಸಚಿವ'ರಿಂದ 'ಗ್ರಾಮೀಣ ಭಾಗದ ವಿದ್ಯಾರ್ಥಿ'ಗಳಿಗೆ ಮುಖ್ಯ ಮಾಹಿತಿ..! |
ಹೃದಯದ ಆರೋಗ್ಯಕ್ಕೆ ಬಿಯರ್ ಕುಡಿಯುವುದು ಉತ್ತಮ ಎಂದು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ, ಆದರೆ ನೀವು ಮಿತಿಮೀರಿದರೆ ಇದು ಬೇರೆ ದಾರಿಗೆ ಹೋಗಬಹುದು. ಅತಿಯಾದ ಮದ್ಯಪಾನವು ಹೃದಯದ ಸ್ನಾಯುವಿಗೆ ಹಾನಿ ಉಂಟುಮಾಡಬಹುದು, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಟೈಪ್ 2 ಮಧುಮೇಹ ಮತ್ತು ಹೃತ್ಕರ್ಣದ ಫೈಬ್ರಿಲೇಶನ್ ಅಪಾಯವನ್ನು ಹೆಚ್ಚಿಸುತ್ತದೆ. |
ಪುರುಷರು ದಿನಕ್ಕೆ ಎರಡು ಪೆಗ್ ಮತ್ತು ಮಹಿಳೆಯರಿಗೆ ಒಂದು ಪೆಗ್ ಮಿತವಾದ ಪಾನೀಯವೆಂದು ಪರಿಗಣಿಸಲಾಗಿದೆ. ಈ ಮಿತಿಯನ್ನು ಮೀರಿ ಹೋದರೆ ಹಾನಿಕಾರಕ ಪರಿಣಾಮಗಳು ಉಂಟಾಗಬಹುದು. ಆಲ್ಕೋಹಾಲ್ ಅಂಶ ಹೆಚ್ಚಿರುವ ಬಿಯರ್ ಕುಡಿಯುವುದರಿಂದ ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡದ ಕಾಯಿಲೆಗಳ ಅಪಾಯ ವನ್ನು ಉಂಟುಮಾಡಬಹುದು. ಏಕೆಂದರೆ ಬಿಯರ್ ಮೂತ್ರವರ್ಧಕವಾಗಿದ್ದು, ನಿಮ್ಮ ಮೂತ್ರಪಿಂಡಗಳಿಗೆ ಹೆಚ್ಚಿನ ಒತ್ತಡ ವನ್ನು ಹಾಕುತ್ತದೆ. ಇದು ನಿರ್ಜಲೀಕರಣಕ್ಕೂ ಕಾರಣವಾಗಬಹುದು ಮತ್ತು ದೇಹದ ಸಮತೋಲನವನ್ನು ಕೆಡಿಸಬಹುದು. ದೀರ್ಘಾವಧಿಯಲ್ಲಿ, ಇದು ನಿಮ್ಮ ಮೂತ್ರಪಿಂಡಗಳಿಗೆ ಹಾನಿಉಂಟು ಮಾಡಬಹುದು, ಇದರಿಂದ ಮೂತ್ರಪಿಂಡದ ಕಲ್ಲುಗಳು ಅಥವಾ ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು. |
ನಿಯಮಿತ ಬಿಯರ್ ಸೇವನೆಯು ಕೆಲವು ವಿಟಮಿನ್ ಗಳು ಮತ್ತು ಖನಿಜಗಳ ಬೇಡಿಕೆಯನ್ನು ಹೆಚ್ಚಿಸಬಹುದು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ, ಅದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಫಲನವಾಗುತ್ತದೆ. ಆಲ್ಕೋಹಾಲ್ ಚಯಾಪಚಯ ಕ್ರಿಯೆಗೆ ನಮ್ಮ ದೇಹಕ್ಕೆ ಕೆಲವು B ಜೀವಸತ್ವಗಳಂತಹ ಕೆಲವು ಹೆಚ್ಚುವರಿ ಪೋಷಕಾಂಶಗಳ ಅಗತ್ಯವಿದೆ. ನಾವು ದೈನಂದಿನ ಆಹಾರದಿಂದ ಸುಲಭವಾಗಿ ಪೋಷಕಾಂಶಗಳನ್ನು ಪಡೆಯಬಹುದು, ಆದರೆ ದೇಹವು ಅವನ್ನು ಹೀರಿಕೊಳ್ಳಲು ಹೆಚ್ಚು ಶ್ರಮಪಡಬೇಕಾಗುತ್ತದೆ. ದೀರ್ಘಾವಧಿಯಲ್ಲಿ ಇದು ವಿಟಮಿನ್ ಕೊರತೆಗೆ ಕಾರಣವಾಗಬಹುದು ಮತ್ತು ದೇಹದ ಆಂತರಿಕ ಕ್ರಿಯೆಗೆ ತೊಂದರೆಉಂಟುಮಾಡಬಹುದು. |
ಆಲ್ಕೋಹಾಲ್ ಕುಡಿದ ಮೇಲೆ ನಿಮಗೆ ಒಳ್ಳೆಯ ರಾತ್ರಿಯ ನಿದ್ರೆಯು ಚೆನ್ನಾಗಿ ಬರೋದಿಲ್ಲ. ಕೆಲವು ಅಧ್ಯಯನಗಳ ಪ್ರಕಾರ ಬಿಯರ್ ಕುಡಿಯುವುದರಿಂದ ವ್ಯಕ್ತಿಯು ಬೇಗ ನಿದ್ರೆಗೆ ಜಾರಲು ಸಹಾಯ ಮಾಡಬಹುದು, ಆದರೆ ಅದು ಹೆಚ್ಚು ಕಾಲ ಉಳಿಯುವುದಿಲ್ಲ. ಇದರಿಂದ ಹಗಲು ಹೊತ್ತಿನಲ್ಲಿ ಜಡತ್ವ, ಏಕಾಗ್ರತೆ ಯ ಕೊರತೆ, ಆಯಾಸ ಉಂಟಾಗುತ್ತದೆ. ವಾಸ್ತವವಾಗಿ ಆಲ್ಕೋಹಾಲ್ ನಿಮ್ಮ ನಿದ್ರೆ ಮತ್ತು ಮನಸ್ಥಿತಿಎ ರಡನ್ನೂ ಅಸ್ತವ್ಯಸ್ತಮಾಡುತ್ತದೆ. ಅತಿಯಾದ ಮದ್ಯ ಸೇವನೆಯಿಂದಾಗಿ ಕೆಲವರು ರಾತ್ರಿ ವೇಳೆ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. |
ಸರ್ಕಾರದ ಧೋರಣೆಯನ್ನು ಖಂಡಿಸಿ ದಲಿತರ ಹಕ್ಕೋತ್ತಾಯಗಳಿಗೆ ಅಗ್ರಹಿಸಿ ದಸಂಸ ಅಂಬೇಡ್ಕರ್ ವಾದ ಪ್ರತಿಭಟನೆ - |
ಸರ್ಕಾರದ ಧೋರಣೆಯನ್ನು ಖಂಡಿಸಿ ದಲಿತರ ಹಕ್ಕೋತ್ತಾಯಗಳಿಗೆ ಅಗ್ರಹಿಸಿ ದಸಂಸ ಅಂಬೇಡ್ಕರ್ ವಾದ ಪ್ರತಿಭಟನೆ |
ಭೂಮಿ, ವಸತಿ, ವಿದ್ಯಾರ್ಥಿ ವೇತನ, ಹಾಸ್ಟೆಲ್ಗಳ ಮೂಲ ಸೌಲಭ್ಯ ಪಿ.ಐ.ಪಿ.ಎಲ್. ಕಾಯ್ದೆ ತಿದ್ದುಪಡಿ, ನಾಗಲೀಕ ಹಕ್ಕು ಜಾಲ ದಳಕ್ಕೆ ರಕ್ಷಣಾತ್ಯಕ ಅಧಿಕಾರಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಧರಣಿ ನಡೆಸಿದೆ. |
ಸಂವಿಧಾನದ ಆಶಯದಂತೆ, ತಳಸಮುದಾಯಗಳ ಏಳಿಗೆಗಾಗಿ ಶ್ರಮಿಸಬೇಕಾದ ಸರ್ಕಾರವು ಉಳ್ಳವರ ಮರ್ಜಿಗೆ ಬಿದ್ದಿದೆ. ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಆಶಯದಂತೆ ದಲಿತ/ದಮನಿತರು ಐಕ್ಯತೆಯ ಹೋರಾಟ ರೂಪಿಸಿ ಸಂವಿಧಾನ ಬದ್ಧ ಹಕ್ಕುಗಳನ್ನು ದಕ್ಕಿಸಿಕೊಳ್ಳಲು ಬಲಿಷ್ಟ ಚಳುವಳಿಯನ್ನು ಕಟ್ಟಬೇಕು ಎಂದು ಸಂಘಟನೆ ಕರೆ ನೀಡಿದೆ. |
ಪ್ರಸಕ್ತ ರಾಜ್ಯ ಸರ್ಕಾರದ ದುರಾಡಳಿತದಲ್ಲಿ ದಲಿತರ, ಬಡವರ, ಮಹಿಳೆಯರ ಸಮಸ್ಯೆಗಳನ್ನು ಕಡೆಗಣಿಸಲಾಗಿದೆ. ಸರ್ಕಾರದ ಈ ಧೋರಣೆಯನ್ನು ಖಂಡಿಸಿ ಹಕ್ಕೋತ್ತಾಯಗಳಿಗೆ ಅಗ್ರಹಿಸಿ ಇಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. |
ವಾಯುಸೇನೆಯ ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಗ್ರೂಪ್ ಕ್ಯಾಪ್ಟನ್ ಬಂಧನ | 'Honey-trapped' IAF officer arrested in New Delhi - Kannada Oneindia |
9 min ago ಹಾಸನ; ಹೋಟೆಲ್ನಲ್ಲಿದ್ದ ಯುವತಿ ನಿಗೂಢ ಸಾವು |
34 min ago 'ಕಾವೇರಿ' ಖಾಲಿ ಮಾಡಲು ಸಿದ್ಧರಾಮಯ್ಯಗೆ 4 ದಿನದ ಗಡುವು |
1 hr ago ಬ್ಯಾಂಕ್ ವಿಲೀನ ವಿರೋಧಿಸಿ, ಅಕ್ಟೋಬರ್ 22ರಂದು ಮುಷ್ಕರಕ್ಕೆ ಕರೆ |
Movies ಎಲಿಮಿನೇಷನ್ ಟ್ವಿಸ್ಟ್: ಶನಿವಾರ ಆಗಿಲ್ಲ, ಭಾನುವಾರ ಏನಾಗಬಹುದು? |
ವಾಯುಸೇನೆಯ ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಗ್ರೂಪ್ ಕ್ಯಾಪ್ಟನ್ ಬಂಧನ |
| Published: Friday, February 9, 2018, 10:30 [IST] |
ನವದೆಹಲಿ, ಫೆಬ್ರವರಿ 09: ಭಾರತೀಯ ವಾಯುಸೇನೆಗೆ ಸಂಬಂಧಿಸಿದ ಕೆಲವು ಗೌಪ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಅರುಣ್ ಮೆರ್ವಾ ಅವರನ್ನು ದೆಹಲಿ ವಿಶೇಷ ಪೊಲೀಸ್ ಪಡೆ ಬಂಧಿಸಿದೆ. |
ಪಾಕಿಸ್ತಾನದ ತನಿಖಾ ದಳ ಐಎಸ್ ಐ ಗೆ ಭಾರತೀಯ ವಾಯುಸೇನೆಯ ಗೌಪ್ಯ ಮಾಹಿತಿಗಳನ್ನು ಇವರು ರವಾನಿಸುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಫೆ.08 ರಂದು ಇವರನ್ನು ಬಂಧಿಸಲಾಗಿದೆ. |
ರಾಜಸ್ತಾನದಲ್ಲಿ ನಾಲ್ವರು ಪಾಕಿಸ್ತಾನಿ ISI ಏಜೆಂಟ್ ಬಂಧನ |
ಭಾರತೀಯ ವಾಯುಸೇನೆಯ ಹಿರಿಯ ಅಧಿಕಾರಿಯೊಬ್ಬರು ನೀಡಿದ ದೂರಿನನ್ವಯ 51 ವರ್ಷ ವಯಸ್ಸಿನ ಅರುಣ್ ಮೆರ್ವಾ ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. |
ತಮ್ಮ ಸ್ಮಾರ್ಟ್ ಫೋನ್ ನಲ್ಲಿ ವಾಯುಸೇನೆಯ ಗುಪ್ತ ಮಾಹಿತಿಗಳ ಫೋಟೋ ತೆಗೆದು ವಾಟ್ಸ್ ಆಪ್ ಮೂಲಕ ಐಎಸ್ ಐ ಏಜೆಂಟ್ ಒಬ್ಬರಿಗೆ ರವಾನಿಸುತ್ತಿದ್ದರು. |
ಮಾಹಿತಿಯ ಪ್ರಕಾರ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ತಾವು ಈಗಾಗಲೇ ಐಎಸ್ ಐ ಏಜೆಂಟ್ ಜೊತೆ ಹಲವು ಪ್ರಮುಖಮಾಹಿತಿಗಳನ್ನು ಹಂಚಿಕೊಂಡಿರುವುದಾಗಿ ಹೇಳಿದ್ದಾರೆ. |
new delhi air force isi pakistan indian army ನವದೆಹಲಿ ಭಾರತೀಯ ಸೇನೆ ವಾಯುಸೇನೆ ಪಾಕಿಸ್ತಾನ ಐಎಸ್ ಐ |
Delhi Police Special Cell on Feb 8th arrested Group Captain Arun Marwah for allegedly leaking classified Indian Air Force (IAF) information to Pakistan's intelligence agency, Inter-Services Intelligence (ISI). |
ಸಂಸತ್ತಿನಲ್ಲಿ ಧಾರ್ಮಿಕ ಘೋಷಣೆಗಳನ್ನು ಕೂಗಲು ಅನುಮತಿಸುವುದಿಲ್ಲ: ಸ್ಪೀಕರ್ ಓಂ ಬಿರ್ಲಾ | Vartha Bharati- ವಾರ್ತಾ ಭಾರತಿ |
ವಾರ್ತಾ ಭಾರತಿ Jun 20, 2019, 1:58 PM IST |
ಹೊಸದಿಲ್ಲಿ, ಜೂ.20: ಮಂಗಳವಾರ ಕೆಲವು ವಿಪಕ್ಷ ಸಂಸದರು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಧಾರ್ಮಿಕ ಘೋಷಣೆಗಳನ್ನು ಕೂಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಸಭೆಯ ನೂತನ ಸ್ಪೀಕರ್ ಓಂ ಬಿರ್ಲಾ ತಾವು ಇಂತಹ ಘಟನೆಗಳನ್ನು ಮರುಕಳಿಸಲು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. |
ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಓಂ ಬಿರ್ಲಾ, "ಘೋಷಣೆಗಳನ್ನು ಕೂಗಲು ಹಾಗೂ ಪೋಸ್ಟರುಗಳನ್ನು ಪ್ರ್ರದರ್ಶಿಸಲು ಸಂಸತ್ತು ಸರಿಯಾದ ಸ್ಥಳವಲ್ಲ. ಅಂತಹ ಕಾರ್ಯಗಳನ್ನು ರಸ್ತೆಯಲ್ಲಿ ಮಾಡಬಹುದು. ಆದರೆ ಸಂಸತ್ತಿನಲ್ಲಿ ಅವರಿಗೆ ಹೇಳಬೇಕಾಗಿದ್ದನ್ನು ಹೇಳಬಹುದು. ಆರೋಪಗಳನ್ನು ಹೊರಿಸಬಹುದು ಯಾ ಸರಕಾರವನ್ನು ಟೀಕಿಸಬಹುದು, ಆದರೆ ಈ ರೀತಿ ಮಾಡಲು ಅವಕಾಶವಿಲ್ಲ'' ಎಂದು 17ನೇ ಲೋಕಸಭೆಯ ಸ್ಪೀಕರ್ ಆಗಿ ಸರ್ವಾನುಮತದಿಂದ ಆಯ್ಕೆಯಾದ ಓಂ ಬಿರ್ಲಾ ಹೇಳಿದ್ದಾರೆ. |
ಇಂತಹ ಘಟನೆಗಳು ಮರುಕಳಿಸದು ಎಂದು ಭರವಸೆ ನೀಡಬಲ್ಲಿರಾ ಎಂಬ ಪ್ರಶ್ನೆಗೆ ಅವರು ನಕಾರಾತ್ಮಕವಾಗಿ ಉತ್ತರಿಸಿದರು. "ಹೀಗೆ ಮತ್ತೊಮ್ಮೆ ನಡೆಯಬಹುದೇ ಎಂದು ಗೊತ್ತಿಲ್ಲ. ಆದರೆ ನಿಯಮದ ಪ್ರಕಾರ ಸಂಸತ್ತನ್ನು ನಡೆಸಲು ಪ್ರಯತ್ನಿಸುತ್ತೇವೆ, ಸಂಸತ್ತು ಪ್ರಜಾಪ್ರಭುತ್ವದ ದೇವಾಲಯವಿದ್ದಂತೆ, ಈ ಸ್ಥಳದ ಗೌರವವನ್ನು ಎಲ್ಲಾ ಪಕ್ಷಗಳೂ ಕಾಪಾಡಬೇಕು'' ಎಂದು ಹೇಳಿದರು. |
ದಿ ಇತರೆ ಜಪಾನ್ ಆರೋಗ್ಯ ಕಂಪನಿ |
ಕೋಬ್ ವಿಶ್ವವಿದ್ಯಾಲಯದ ಸಂಶೋಧನಾ ತಂಡವು ಮೈಕ್ರೊವೇವ್ ಮ್ಯಾಮೊಗ್ರಫಿ ಸ್ಕ್ರೀನಿಂಗ್ ತಂತ್ರವನ್ನು ಅಭಿವೃದ್ಧಿಪಡಿಸಿದೆ, ಅದು ಪ್ರಸ್ತುತ ಲಭ್ಯವಿರುವ ಸಾಧನಗಳಿಗಿಂತ ಕಡಿಮೆ ನೋವು, ಸುರಕ್ಷಿತ ಮತ್ತು ನಿಖರವಾಗಿದೆ. |
ತಂತ್ರಜ್ಞಾನವು ಎದೆಯಲ್ಲಿನ ಸಣ್ಣ ಗೆಡ್ಡೆಗಳನ್ನು ಸಹ ಪತ್ತೆ ಮಾಡುತ್ತದೆ. ಮುಂದಿನ ಹಣಕಾಸು ವರ್ಷದಲ್ಲಿ ಹಲವಾರು ನೂರು ವ್ಯಕ್ತಿಗಳನ್ನು ಒಳಗೊಂಡ ಕ್ಲಿನಿಕಲ್ ಪ್ರಯೋಗಗಳ ನಂತರ ವೈದ್ಯಕೀಯ ಸಾಧನವಾಗಿ ಇದರ ಬಳಕೆಯನ್ನು ಅನುಮೋದಿಸುವ ಅರ್ಜಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಪ್ರಸ್ತುತ ಯೋಜನೆಗಳಿಗೆ 2021 ಪತನದಿಂದ ತಂತ್ರಜ್ಞಾನದ ವ್ಯಾಪಾರೀಕರಣದ ಅಗತ್ಯವಿರುತ್ತದೆ. |
ಸರ್ಕಾರದ ಅಂಕಿಅಂಶಗಳ ಪ್ರಕಾರ, ಜಪಾನ್ನಲ್ಲಿ ಪ್ರತಿವರ್ಷ ಸುಮಾರು 14.000 ಮಹಿಳೆಯರು ಸ್ತನ ಕ್ಯಾನ್ಸರ್ನಿಂದ ಸಾಯುತ್ತಾರೆ. |
ಸ್ತನ ಕ್ಯಾನ್ಸರ್ ಅನ್ನು ಪತ್ತೆಹಚ್ಚುವ ಎರಡು ಪ್ರಮುಖ ವಿಧಾನಗಳು ಮ್ಯಾಮೊಗ್ರಾಮ್ ಮತ್ತು ಅಲ್ಟ್ರಾಸೌಂಡ್ ಪರೀಕ್ಷೆಗಳು. ಆದರೆ ಮ್ಯಾಮೊಗ್ರಾಮ್ಗಳು ವಿಕಿರಣವನ್ನು ಬಿಡುಗಡೆ ಮಾಡುವ ಎಕ್ಸರೆಗಳನ್ನು ಒಳಗೊಂಡಿರುತ್ತವೆ. ತಂತ್ರವು ತುಂಬಾ ನೋವಿನಿಂದ ಕೂಡಿದೆ ಏಕೆಂದರೆ ಕಾರ್ಯವಿಧಾನದ ಸಮಯದಲ್ಲಿ ಎದೆಯನ್ನು ಲೋಹದ ಫಲಕಗಳ ನಡುವೆ ಸ್ಯಾಂಡ್ವಿಚ್ ಮಾಡಲಾಗುತ್ತದೆ. |
ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಯಾವುದೇ ನೋವು ಅಥವಾ ವಿಕಿರಣವಿಲ್ಲದಿದ್ದರೂ, ಪ್ರತಿ ರೋಗಿಯ ದೈಹಿಕ ಗುಣಲಕ್ಷಣಗಳನ್ನು ಅವಲಂಬಿಸಿ ಫಲಿತಾಂಶಗಳ ನಿಖರತೆಯಲ್ಲಿ ವ್ಯತ್ಯಾಸಗಳಿವೆ. |
ಸಂಶೋಧನಾ ತಂಡದ ಭಾಗವಾಗಿರುವ ಕೋಬ್ ವಿಶ್ವವಿದ್ಯಾಲಯದ ರಾಸಾಯನಿಕ ಭೌತಶಾಸ್ತ್ರ ಮತ್ತು ಮಂದಗೊಳಿಸಿದ ವಸ್ತುವಿನ ಪ್ರಾಧ್ಯಾಪಕ ಕೆಂಜಿರೊ ಕಿಮುರಾ ಅವರ ಪ್ರಕಾರ, ಹೊರಸೂಸಲ್ಪಟ್ಟ ಮೈಕ್ರೊವೇವ್ ತುಂಬಾ ದುರ್ಬಲವಾಗಿದೆ ಮತ್ತು ಸೆಲ್ ಫೋನ್ಗಳಲ್ಲಿ ಬಳಸುವ ಶಕ್ತಿಯ ಒಂದು ಸಾವಿರ. ಮೈಕ್ರೊವೇವ್ ಅನ್ನು ಹೊರಸೂಸುವ ಆಂಟೆನಾವನ್ನು ಸ್ತನದ ಮೇಲ್ಮೈ ಮೇಲೆ ಚಲಿಸಲಾಗುತ್ತದೆ. |
ಎಕ್ಸರೆ ಮ್ಯಾಮೊಗ್ರಾಮ್ಗಳು ಗೆಡ್ಡೆಗಳು ಕಾಣೆಯಾಗಿರಬಹುದು, ವಿಶೇಷವಾಗಿ ದಟ್ಟವಾದ ಸ್ತನ ಅಂಗಾಂಶವನ್ನು ಹೊಂದಿರುವ ಯುವತಿಯರಲ್ಲಿ. ಗೆಡ್ಡೆಗಳಂತೆ ಅಂಗಾಂಶವು ಮ್ಯಾಮೊಗ್ರಾಮ್ನಲ್ಲಿನ ಚಿತ್ರಗಳ ಮೇಲೆ ಬಿಳಿ ಪ್ರದೇಶಗಳಾಗಿ ಗೋಚರಿಸುತ್ತದೆ. |
ಮತ್ತೊಂದೆಡೆ, ಮೈಕ್ರೊವೇವ್ ಮ್ಯಾಮೊಗ್ರಫಿ ಗೆಡ್ಡೆಯ ಹೆಚ್ಚು ನಿಖರವಾದ 3D ಚಿತ್ರವನ್ನು ಉತ್ಪಾದಿಸುತ್ತದೆ. ಎಕ್ಸರೆ ಮ್ಯಾಮೊಗ್ರಾಮ್ ಮತ್ತು ಅಲ್ಟ್ರಾಸೌಂಡ್ ಪರೀಕ್ಷೆಗಳಿಗೆ ಒಳಗಾದ 300 ಸ್ತನ ಕ್ಯಾನ್ಸರ್ ರೋಗಿಗಳ ಮೇಲೆ ಹೊಸ ಮೈಕ್ರೊವೇವ್ ತಂತ್ರಜ್ಞಾನವನ್ನು ಬಳಸುವ ಪರೀಕ್ಷೆಗಳನ್ನು ನಡೆಸಲಾಯಿತು. ಎಲ್ಲಾ ರೋಗಿಗಳಲ್ಲಿ ಗೆಡ್ಡೆಗಳು ಪತ್ತೆಯಾಗಿವೆ. |
ಏಪ್ರಿಲ್ನಲ್ಲಿ, ಸರ್ಕಾರವು ಮೈಕ್ರೊವೇವ್ ಮ್ಯಾಮೊಗ್ರಫಿ ತಂತ್ರಜ್ಞಾನವನ್ನು ಕ್ಷಿಪ್ರ ಸ್ಕ್ರೀನಿಂಗ್ ಕಾರ್ಯಕ್ರಮದಡಿಯಲ್ಲಿ ಆರಂಭಿಕ ಅನುಮೋದನೆಗೆ ಒಳಪಡಿಸಿತು. |
ಮೈಕ್ರೊವೇವ್ ತಂತ್ರಜ್ಞಾನದ ಒಂದು ಅನಾನುಕೂಲವೆಂದರೆ ಇದನ್ನು ಸ್ತನ ಕ್ಯಾನ್ಸರ್ ಪತ್ತೆ ಮಾಡಲು ಮಾತ್ರ ಬಳಸಬಹುದು. ಮೈಕ್ರೊವೇವ್ ಕೊಬ್ಬಿನ ಅಂಗಾಂಶಗಳ ಮೂಲಕ ಹಾದುಹೋಗಬಹುದು, ಇದು ಸ್ತನಗಳ ಮುಖ್ಯ ಅಂಶವಾಗಿದೆ, ಆದರೆ ಸ್ನಾಯು ಅಲ್ಲ. |
"ಒಳಗೆ, ಒಂದು ಗೆಡ್ಡೆಯು ಮೈಕ್ರೊವೇವ್ ಅನ್ನು ಕನ್ನಡಿಯಂತೆ ಪ್ರತಿಬಿಂಬಿಸುತ್ತದೆ" ಎಂದು ಕಿಮುರಾ ವಿವರಿಸಿದರು. "ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅನ್ನು ಕಂಡುಹಿಡಿಯಲು ಇದು ಸೂಕ್ತ ವಿಧಾನವಾಗಿದೆ." |
Subsets and Splits
No community queries yet
The top public SQL queries from the community will appear here once available.