text
stringlengths
0
61.5k
1. ಕಚ್ಚಾ ವಸ್ತು:
2.ಅಪ್ಲಿಕೇಶನ್:
ನೆಲದ ನಿರ್ಮಾಣದಂತಹ ಫಾರ್ಮ್‌ವರ್ಕ್ ಅನ್ನು ಬೆಂಬಲಿಸಲು ನಿರ್ಮಾಣದಲ್ಲಿ ಲಂಬವಾಗಿ ಬೆಂಬಲಿಸುವ ವ್ಯವಸ್ಥೆಗೆ ಸ್ಟೀಲ್ ಪ್ರಾಪ್ ಅನ್ನು ಅನ್ವಯಿಸಲಾಗುತ್ತದೆ.
3. ರಚನೆ:
ಸ್ಟೀಲ್ ಪ್ರಾಪ್ ಮುಖ್ಯವಾಗಿ ಬಾಟಮ್ ಪ್ಲೇಟ್, ಹೊರ ಟ್ಯೂಬ್, ಒಳಗಿನ ಟ್ಯೂಬ್, ಸ್ವಿವೆಲ್ ಕಾಯಿ, ಕೋಟರ್ ಪಿನ್, ಮೇಲಿನ ಪ್ಲೇಟ್ ಮತ್ತು ಮಡಿಸುವ ಟ್ರೈಪಾಡ್, ಹೆಡ್ ಜ್ಯಾಕ್‌ನ ಬಿಡಿಭಾಗಗಳಿಂದ ಕೂಡಿದೆ, ರಚನೆಯು ಸರಳ ಮತ್ತು ಮೃದುವಾಗಿರುತ್ತದೆ.
4. ಅನುಕೂಲಕರ:
ಸ್ಟೀಲ್ ಪ್ರಾಪ್ ರಚನೆಯ ಸರಳವಾಗಿದೆ, ಆದ್ದರಿಂದ ಜೋಡಿಸುವುದು ಮತ್ತು ಡಿಸ್ಅಸೆಂಬಲ್ ಮಾಡುವುದು ಸುಲಭ.
5. ಹೊಂದಾಣಿಕೆ:
ಹೊರಗಿನ ಟ್ಯೂಬ್ ಮತ್ತು ಒಳಗಿನ ಟ್ಯೂಬ್‌ನಿಂದಾಗಿ ಸ್ಟೀಲ್ ಪ್ರಾಪ್ ಹೊಂದಾಣಿಕೆ ಆಗಿದೆ, ಒಳಗಿನ ಟ್ಯೂಬ್ ಹೊರಗಿನ ಟ್ಯೂಬ್‌ನಲ್ಲಿ ವಿಸ್ತರಿಸಬಹುದು ಮತ್ತು ಕುಗ್ಗಬಹುದು, ಮತ್ತು ನಂತರ ಅದನ್ನು ಅಗತ್ಯವಿರುವ ಎತ್ತರಕ್ಕೆ ಸರಿಹೊಂದಿಸಬಹುದು.
6. ಆರ್ಥಿಕತೆ:
ಸ್ಟೀಲ್ ಪ್ರಾಪ್ ಅನ್ನು ಮತ್ತೆ ಬಳಸಬಹುದು, ಮತ್ತು ಒಮ್ಮೆ ನಿಷ್ಪ್ರಯೋಜಕವಾಗಿದ್ದರೆ, ವಸ್ತುಗಳನ್ನು ಸಹ ಮರುಪಡೆಯಬಹುದು.
7. ಪ್ರಾಯೋಗಿಕ ಬಳಕೆ:
ನಿರ್ಮಾಣಗಳ ವಿಭಿನ್ನ ಎತ್ತರಕ್ಕೆ ಅನುಗುಣವಾಗಿ ಸ್ಟೀಲ್ ಪ್ರಾಪ್ ಅನ್ನು ಅಗತ್ಯವಿರುವ ಎತ್ತರಕ್ಕೆ ಸರಿಹೊಂದಿಸಬಹುದು.
3. ನಿರ್ದಿಷ್ಟತೆ:
ಗಮನಿಸಿ: ಟ್ಯೂಬ್ ದಪ್ಪದ ಬಗ್ಗೆ, ನಾವು ಟ್ಯೂಬ್ ದಪ್ಪ 1.6 ಮಿಮೀ, 1.8 ಎಂಎಂ, 2.0 ಎಂಎಂ, 2.5 ಎಂಎಂ, 3.0 ಎಂಎಂ, 3.5 ಎಂಎಂ ನಂತಹ ಹಲವಾರು ರೀತಿಯ ಗಾತ್ರವನ್ನು ಉತ್ಪಾದಿಸುತ್ತೇವೆ ಅಥವಾ ನಾವು ಕಸ್ಟಮೈಸ್ ಮಾಡಿದಂತೆ ಉತ್ಪಾದಿಸಬಹುದು.
4. ವರ್ಗೀಕರಿಸಿ
1. ಕ್ರಾಸ್ ಹೆಡ್:
2.ಫೋಲ್ಡಿಂಗ್:
3.ಟ್ರಿಪಾಡ್:
ಟೆಲಿಸ್ಕೋಪಿಕ್ ಸ್ಟೀಲ್ ರಂಗಪರಿಕರಗಳನ್ನು ಲೆಕ್ಕವಿಲ್ಲದಷ್ಟು ನಿರ್ಮಾಣ ಯೋಜನೆಗಳಲ್ಲಿ ಹಂಚಿಕೊಳ್ಳಲು ಬಳಸಲಾಗುತ್ತದೆ, ಮತ್ತು ನಮ್ಮ ಗ್ರಾಹಕರು ಅದರ ದಕ್ಷತೆ ಮತ್ತು ಬಳಕೆಯ ಸುಲಭತೆಯಿಂದಾಗಿ ಅವುಗಳನ್ನು ಇನ್ನೂ ಬಯಸುತ್ತಾರೆ. ನಿರ್ಮಾಣ ಸ್ಥಳದಲ್ಲಿ ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯನ್ನು ಒದಗಿಸುತ್ತದೆ.
ಬಳಸಿದ ಕಚ್ಚಾ ವಸ್ತುಗಳ ಗುಣಮಟ್ಟ, ಉತ್ಪಾದನಾ ಪ್ರಕ್ರಿಯೆಗಳು ಮತ್ತು ನಮ್ಮ ಉತ್ಪನ್ನಗಳಿಗೆ ಅನ್ವಯಿಸುವ ಅಂತಿಮ ಚಿಕಿತ್ಸೆಯನ್ನು ನಾವು ಮತ್ತಷ್ಟು ಪರಿಗಣಿಸಿದರೆ, ಸೈಟ್‌ನಲ್ಲಿನ ಫಲಿತಾಂಶಗಳು
ಭರವಸೆ. UNE 180201 ರ ಮಾರ್ಗಸೂಚಿಗಳನ್ನು ಅನುಸರಿಸಿ ಈ ರಂಗಪರಿಕರಗಳನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ತಯಾರಿಸಲಾಗುತ್ತದೆ. ಈ ಡಾಕ್ಯುಮೆಂಟ್‌ನಲ್ಲಿ ತೋರಿಸಿರುವ ಎಲ್ಲಾ ಡೇಟಾವನ್ನು ಬೆಂಬಲಿಸುತ್ತದೆ
ನಮ್ಮ ಪರೀಕ್ಷಾ ಪ್ರಯೋಗಾಲಯದಲ್ಲಿ ಕಠಿಣ ಪರೀಕ್ಷೆಯನ್ನು ನಡೆಸಲಾಯಿತು. ಟೆಲಿಸ್ಕೋಪಿಕ್ ಸ್ಟೀಲ್ ಪ್ರಾಪ್ನ ಸರಿಯಾದ ಕಾರ್ಯ, ಬಳಕೆ ಮತ್ತು ನಿರ್ವಹಣೆ ಕುರಿತು ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಸಂಪರ್ಕಿಸಿ, ನಿಮ್ಮ ಪ್ರಶ್ನೆಗಳಿಗೆ ಹಾಜರಾಗಲು ನಾವು ಸಂತೋಷಪಡುತ್ತೇವೆ.
ರಿಂಗ್ಲಾಕ್ ಸ್ಕ್ಯಾಫೋಲ್ಡಿಂಗ್ ಬ್ರಾಕೆಟ್, ಸ್ಕ್ಯಾಫೋಲ್ಡಿಂಗ್ ಹೊಂದಾಣಿಕೆ ಸ್ಕ್ರೂ ಜ್ಯಾಕ್, ಮೆಟಲ್ ಕಪ್ಲಾಕ್ ಸ್ಕ್ಯಾಫೋಲ್ಡಿಂಗ್, ಹೆವಿ ಡ್ಯೂಟಿ ರಿಂಗ್‌ಲಾಕ್ ಸ್ಕ್ಯಾಫೋಲ್ಡಿಂಗ್, ರಿಂಗ್ಲಾಕ್ ಸ್ಕ್ಯಾಫೋಲ್ಡಿಂಗ್ ಭಾಗಗಳು, ಕ್ವಿಕ್‌ಸ್ಟೇಜ್ ಸ್ಕ್ಯಾಫೋಲ್ಡಿಂಗ್ ಪರಿಕರಗಳು,
ಭಾರತ ಉಪಖಂಡದ ಆಧುನಿಕ ಚರಿತ್ರೆ – ವಿವಿಧ ಆಯಾಮಗಳು: ೭. ದ್ರಾವಿಡ ಮತ್ತು ಹಿಂದುಳಿದ ವರ್ಗಗಳ ಚಳವಳಿಗಳು (೪) – ಕಣಜ
ಭಾರತ ಉಪಖಂಡದ ಆಧುನಿಕ ಚರಿತ್ರೆ – ವಿವಿಧ ಆಯಾಮಗಳು: ೭. ದ್ರಾವಿಡ ಮತ್ತು ಹಿಂದುಳಿದ ವರ್ಗಗಳ ಚಳವಳಿಗಳು (೪)
Home/ಇತಿಹಾಸ, ಭಾರತದ ಇತಿಹಾಸ, ವಿಶ್ಲೇಷಣೆ ಮತ್ತು ಸಂಶೋಧನೆ, ಸಮಾಜ ಶಾಸ್ತ್ರ/ಭಾರತ ಉಪಖಂಡದ ಆಧುನಿಕ ಚರಿತ್ರೆ – ವಿವಿಧ ಆಯಾಮಗಳು: ೭. ದ್ರಾವಿಡ ಮತ್ತು ಹಿಂದುಳಿದ ವರ್ಗಗಳ ಚಳವಳಿಗಳು (೪)
ಸರ್ವಧರ್ಮ ಸಮ್ಮೇಳನ: ಸರ್ವಧರ್ಮ ಸಮಬಾಳ್ವೆಯ ಸಂದೇಶ
ಶ್ರೀ ನಾರಾಯಣ ಗುರು ತಮ್ಮಲ್ಲಿದ್ದ ವಿಶಾಲ ಧಾರ್ಮಿಕ, ಸಾಮಾಜಿಕ ದೃಷ್ಟಿಕೋನಕ್ಕೆ ಪೂರಕವಾಗುವಂತೆ ೧೯೨೪ರಲ್ಲಿ ಶಿವರಾತ್ರಿಯ ದಿನದಂದು ಆಳ್ವಾಯಿಯ ಅದ್ವೈತಾಶ್ರಮದಲ್ಲಿ ಎಲ್ಲ ಧರ್ಮಗಳನ್ನು ಒಂದೇ ವೇದಿಕೆಗೆ ತಂದು ಸಮ್ಮೇಳನವೊಂದನ್ನು ನಡೆಸಿದರು. ಆ ಸಮ್ಮೇಳನದ ಮುಖ್ಯ ಉದ್ದೇಶ ಜ್ಞಾನ ಪ್ರಸಾರ ಮಾತ್ರವಾಗಿತ್ತು. ಆದ್ದರಿಂದಲೇ ಗುರುಗಳು ಸಮ್ಮೇಳನಕ್ಕೆ ಮೊದಲೇ "ಜ್ಞಾನವನ್ನು ಪಡೆಯುವುದಕ್ಕೆ, ತಿಳಿಸುವುದಕ...
ಮದ್ರಾಸಿನಲ್ಲಿ ನ್ಯಾಯಾಧೀಶರಾಗಿದ್ದ ಟಿ. ಸದಾಶಿವ ಅಯ್ಯರ್‌ ಅವರು ಈ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆರ್ಯಸಮಾಜ, ಬ್ರಹ್ಮಸಮಾಜ, ಶ್ರೀಲಂಕಾದ ಬೌದ್ಧ ಸನ್ಯಾಸಿಗಳು ಹಾಗೂ ಇತರ ಹಲವು ಸಂಸ್ಥೆಗಳನ್ನು ಪ್ರತಿನಿಧಿಸುವ ಮುಖಂಡರು ಉಪಸ್ಥಿತರಿದ್ದ ಈ ಸಮ್ಮೇಳನವು ಅಪೂರ್ವವಾದ ರೀತಿಯಲ್ಲಿ ಯಶಸ್ವಿಯಾಯಿತು. "ಎಲ್ಲ ಧರ್ಮಗಳ ಅಂತಿಮ ಗುರಿ ಒಂದೇ, ಇದರಿಂದಾಗಿ ವಿವಿಧ ಧರ್ಮಗಳ ಅನುಯಾಯಿಗಳು ಪರಸ್ಪರ ಕಿತ್ತಾಡಿಕೊ...
ವೈಕಂ ಸತ್ಯಾಗ್ರಹ ಹಾಗೂ ಗಾಂಧಿಯೊಂದಿಗೆ ಭೇಟಿ
ನಾರಾಯಣ ಗುರು ತಮ್ಮದೇ ಆದ ದೇಗುಲಗಳ ಸ್ಥಾಪನೆ ಮಾತ್ರವಲ್ಲದೆ ಅಸ್ಪೃಶ್ಯರಿಗೂ, ಹಿಂದುಳಿದ ಜಾತಿ ವರ್ಗಗಳಿಗೂ ಪಾರಂಪರಿಕ ದೇಗುಲ ಪ್ರವೇಶದ ಹಕ್ಕಿಗಾಗಿಯೇ ಹೋರಾಟ ನಡೆಸಿದ್ದರು. ಇದರ ಅಂಗವಾಗಿಯೇ ೧೯೨೪ರಲ್ಲಿ ಪ್ರಸಿದ್ಧ ವೈಕಂ ಸತ್ಯಾಗ್ರಹ ನಡೆಯಿತು.
ಕೇರಳದ ವೈಕಂ ನಗರದ ಶಿವ ದೇವಾಲಯವು ಅತಿ ಪ್ರಖ್ಯಾತವಾದುದು. ಆಗಿನ ಕಾಲದಲ್ಲಿ ಆ ದೇಗುಲದ ಪ್ರಧಾನ ರಸ್ತೆಗಳಲ್ಲಿ ಅಸ್ಪೃಶ್ಯ ಜಾತಿಯವರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಈ ಸಾಮಾಜಿಕ ಅಸಮಾನತೆಯನ್ನು ಮಹಾತ್ಮ ಗಾಂಧಿಯವರ ಸತ್ಯಾಗ್ರಹ ಪದ್ಧತಿಯಲ್ಲಿ ವಿರೋಧಿಸಲು ತೀರ್ಮಾನಿಸಿ ನಾರಾಯಣ ಗುರುಗಳ ಶಿಷ್ಯರಾದ ಟಿ. ಕೆ. ಮಾಧವನ್‌, ಕೇಳಿಪ್ಪನ್‌ ಹಾಗೂ ಕೃಷ್ಣಸ್ವಾಮಿ ಮುಂತಾದ ಧುರೀಣರನ್ನು ಸೇರಿಕೊಂಡು ಗಾಂಧೀಜಿ...
ಸತ್ಯಾಗ್ರಹಕ್ಕೆ ಅಹ್ಮದಾಬಾದಿನಿಂದಲೇ ಬೆಂಬಲ ನೀಡುತ್ತಿದ್ದ ಮಹಾತ್ಮಾಗಾಂಧಿಯವರು ಅಂತಿಮ ಹಂತದಲ್ಲಿ ತಾವೇ ವೈಕಂಗೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರು ನಾರಾಯಣ ಗುರುಗಳನ್ನೂ ಸಂರ್ದಶಿಸಿದರು. ಗುರುಗಳು ಕೈಗೊಂಡ ಸಮಾಜಿಕ ಕ್ರಾಂತಿಯ ವಿಚಾರಗಳು ಗಾಂಧೀಜಿಯವರಿಗೆ ತಿಳಿದಿದ್ದವು. ಅವರ ಚಳವಳಿಯನ್ನು ಗಾಂಧೀಜಿಯವರು ಮೆಚ್ಚಿಕೊಂಡಿದ್ದರು. ಆದರೂ ಗಾಂಧೀಜಿಯವರ ಚಿಂತನೆಗೂ ನಾರಾಯಣ ಗುರುಗಳ ಸಿದ್ಧಾಂತದಲ್ಲಿ ...
ಈ ಘಟನೆಗೂ ಹಿಂದೆ, ೧೯೨೨ರಲ್ಲಿ ಕವಿ ರವೀಂದ್ರನಾಥ ಠಾಕೂರರು ದಕ್ಷಿಣ ಭಾರತ ಪ್ರವಾಸದಲ್ಲಿದ್ದಾಗ ವರ್ಕಳದ ಶಿವಗಿರಿಯಲ್ಲಿ ನಾರಾಯಣ ಗುರುಗಳನ್ನು ಸಂದರ್ಶಿಸಿದ್ದರು.
ಹೀಗೆ ಹತ್ತೊಂಬತ್ತನೆಯ ಶತಮಾನದಲ್ಲಿ ಸ್ವಾಮಿ ದಯಾನಂದ ಸರಸ್ವತಿ, ಈಶ್ವರ ಚಂದ್ರ ವಿದ್ಯಾಸಾಗರ, ವಿವೇಕಾನಂದರು ಉತ್ತರ ಭಾರತದಲ್ಲಿ ಧಾರ್ಮಿಕ ಸುಧಾರಣೆಗಳನ್ನು ಕೈಗೊಂಡರೆ, ದಕ್ಷಿಣ ಭಾರತದಲ್ಲಿ ಹಿಂದುಳಿದ ವರ್ಗದ ಆಧ್ಯಾತ್ಮ ನಾಯಕರಾದ ನಾರಾಯಣ ಗುರು ಕೆಳವರ್ಗ ಜಾತಿಗಳಲ್ಲಿ ಧಾರ್ಮಿಕ, ಸಾಮಾಜಿಕ ಕ್ರಾಂತಿಯನ್ನೇ ಪ್ರಾರಂಭಿಸಿದರು.
ಶೈಕ್ಷಣಿಕ ಅಭಿಯಾನ
ಶ್ರೀ ನಾರಾಯಣ ಗುರು ಅವರ ತತ್ವ ಸಿದ್ಧಾಂತಗಳು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗಿರದೆ ಹಿಂದುಳಿದ ವರ್ಗಗಳಲ್ಲಿ ಶಿಕ್ಷಣ ಮತ್ತು ಸಂಘಟನೆಗಳ ಮಹತ್ವವನ್ನು ಪ್ರತಿಪಾದಿಸಿದರು. "ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಶಾಲಿಗಳಾಗಿ" ಇದು ನಾರಾಯಣ ಸ್ವಾಮಿಯವರು ನೀಡಿದ ಅತಿ ಮಹತ್ವದ ಸಂದೇಶ. ಶ್ರೀ ನಾರಾಯಣ ಗುರು ಅಲೌಕಿಕ ಚಿಂತನೆಗೆ ಎಷ್ಟು ಮಹತ್ವ ನೀಡಿದ್ದರೊ ಅಷ್ಟೆ ಮಹತ್ವವನ್ನು ಲೌಕಿಕ ಚ...
ಗುರುಗಳು ಹಿಂದುಳಿದ ವರ್ಗಗಳು ಆಧುನಿಕ ಶಿಕ್ಷಣ ಪಡೆಯುವುದರ ಮೂಲಕ ಆಧುನೀಕರಣಗೊಳ್ಳಬೇಕೆಂದು ಪ್ರತಿಪಾದಿಸಿದರು. ಅನಕ್ಷರತೆಯೇ ಈ ಜನರನ್ನು ಶತಮಾನಗಳಿಂದ ಮೂರ್ಖರನ್ನಾಗಿಸಿದೆ ಎಂದು ಗುರುಗಳು ಪ್ರತಿಪಾದಿಸಿದರು. ಈ ಜನಾಂಗಗಳ ದಾಸ್ಯಕ್ಕೆ ಕೂಡಾ ಅನಕ್ಷರತೆಯೇ ಕಾರಣವೆಂದು ಅವರು ನಂಬಿದ್ದರು. ಹಾಗಾಗಿ ಆಧುನಿಕ ಶಿಕ್ಷಣದ ಮೂಲಕ ಈ ಜನರನ್ನು ಪ್ರಜ್ಞಾವಂತರನ್ನಾಗಿ ಮಾಡಬಹುದೆಂದು ಸ್ವಾಮೀಜಿಯವರು ವಾದಿಸಿದರು...
ಸ್ವತಃ ಸ್ವಾಮೀಜಿಯವರೇ ಕಾವ್ಯ, ತತ್ವಶಾಸ್ತ್ರ, ಧರ್ಮಗ್ರಂಥಗಳ ಅಧ್ಯಯನ ನಡೆಸಿದ್ದರು. ಶಿಕ್ಷಣದ ಮಹತ್ವವನ್ನು ಅರಿತ ಸ್ವಾಮೀಜಿ ಒಂದು ಶೈಕ್ಷಣಿಕ ನಿಧಿಯನ್ನು ಸ್ಥಾಪಿಸಿದರು. ಪ್ರತಿಯೊಂದು ಈಳವ ಕುಟುಂಬವು ವಿವಾಹ ಮುಂತಾದ ಸಂತೋಷ ಸಮಾರಂಭಗಳ ಸಂದರ್ಭದಲ್ಲಿ ಈ ನಿಧಿಗೆ ದೇಣಿಗೆ ನೀಡುವಂತೆ ಒತ್ತಾಯ ಮಾಡಿದರು.
ಪ್ರಾರಂಭದಲ್ಲಿ ತನ್ನ ಹುಟ್ಟೂರಲ್ಲೆ ಗುರುಗಳು ಒಂದು ಏಕೋಪಾಧ್ಯಾಯ ಶಾಲೆ ನಡೆಸತೊಡಗಿದರು. ಯುವಕ ನಾಣು ಆ ಬಳಿಕ ಊರಿನ ಜನರಿಗೆ ನಾರಾಯಣ ಆಶನ್‌ ಆದರು. ನಂತರದ ದಿನಗಳಲ್ಲಿ ನಾರಾಯಣ ಗುರು ಹಲವಾರು ವಸತಿ ಶಾಲೆಗಳನ್ನೂ, ಗುರುಕುಲಗಳನ್ನು, ಸೇವಾಶ್ರಮಗಳನ್ನೂ ಸ್ಥಾಪಿಸಿ ಕೇರಳ ಸಮಾಜದಲ್ಲಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಕ್ರಾಂತಿಯನ್ನೆ ಹುಟ್ಟುಹಾಕಿದರು. ಹಾಗೆಯೇ ಹಲವಾರು ಮಠಗಳನ್ನು ಸ್ಥಾಪಿಸುವ ಮೂಲಕ ಸು...
ಶ್ರೀನಾರಾಯಣ ಗುರುಗಳು ಸ್ಥಾಪಿಸಿದ ದೇವಾಲಯಗಳು ಶಿಕ್ಷಣ ಕೇಂದ್ರಗಳೂ ಆಗಿದ್ದವು. ಪ್ರತಿ ದೇವಾಲಯಗಳಲ್ಲಿ ಸುಸಜ್ಜಿತ ಗ್ರಂಥಾಲಯಗಳನ್ನೂ ಸ್ಥಾಪಿಸಿದರು. ಕೇವಲ ಧಾರ್ಮಿಕ ಗ್ರಂಥ ಮಾತ್ರವಲ್ಲದೆ ಆಧುನಿಕ ಕಾಲಕ್ಕೆ ತಕ್ಕಂತೆ ತಾಂತ್ರಿಕ ಶಾಲೆಗಳನ್ನೂ ದೇವಾಲಯಗಳು ಹೊಂದಿರಬೇಕೆಂದು ಇಚ್ಚೆಪಟ್ಟರು. ೧೯೧೨ರಲ್ಲಿ ವರ್ಕಳದಲ್ಲಿ ಸ್ಥಾಪಿಸಲಾದ ಶಾರದಾ ಮಠವು ನಿಜವಾಗಿಯೂ ಒಂದು ಶೈಕ್ಷಣಿಕ ಕೇಂದ್ರವೇ ಆಗಿತ್ತು. "ಇ...
ವೇದ ಉಪನಿಷತ್ತುಗಳು ಬೋಧಿಸುವ ಪಾಠ "ಕತ್ತಲೆಯಿಂದ ಬೆಳಕಿಗೆ" ಎನ್ನುವುದು. ಈ ತತ್ವವನ್ನಾಧರಿಸಿ ಕಾರಮುಕ್ಕು ದೇವಾಲಯದಲ್ಲಿ ಹಾಗೂ ಕಲವಂಕೋಡಂ ದೇವಾಲಯಗಳಲ್ಲಿಯೂ ಮೂರ್ತಿಯನ್ನು ಸ್ಥಾಪಿಸದೆ ಕೇವಲ ಜ್ಞಾನಾರ್ಜನೆಯೇ ಆ ಕೇಂದ್ರಗಳ ಉದ್ದೇಶವೆಂದು ಪ್ರತಿಪಾದಿಸಿದರು.
"ಯೋಗ್ಯ ಶಿಕ್ಷಣದಿಂದ ಸ್ವಾತಂತ್ರ್ಯ ಲಭಿಸುತ್ತದೆ ನಾವು ಬಂಧಮುಕ್ತರಾಗುತ್ತೇವೆ. ಸಂಘಟನೆ, ಸುವ್ಯವಸ್ಥೆಯಿಂದ ನಾವು ಶಕ್ತಿವಂತರಾಗುತ್ತೇವೆ" ಎನ್ನುವುದು ಸ್ವಾಮಿಯವರ ಅಭಿಮತ.
ಆರ್ಥಿಕ ಚಿಂತನೆಗಳು
ಶ್ರೀ ನಾರಾಯಣ ಗುರು ಹಿಂದುಳಿದ ಹಾಗೂ ಅಸ್ಪೃಶ್ಯರಿಗೆ ತಮ್ಮ ಪಾರಂಪರಿಕ ಕುಲಕಸುಬನ್ನು ತೊರೆದು ಆಧುನಿಕ ಶಿಕ್ಷಣ, ಆಧುನಿಕ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಕರೆ ನೀಡಿದರು. ಅದರಲ್ಲೂ ಮುಖ್ಯವಾಗಿ ತನ್ನ ಜಾತಿ ಬಾಂಧವರಾದ ಈಳವರು ಸಾಮಾಜಿಕವಾಗಿ ಕೀಳೆನಿಸಿಕೊಂಡಿರುವ ವೃತ್ತಿಗಳನ್ನು ಅನುಸರಿಸುವುದು ಸ್ವಾಮಿಯವರು ಒಪ್ಪಿಕೊಳ್ಳಲಿಲ್ಲ. ಈಳವರು ಸೇಂದಿ ಇಳಿಸುವ ಕಾಯಕದಲ್ಲಿ ತೊಡಗಿದ್ದರಿಂದ ಗುರುಗಳು ಈ ಕು...
"ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ" ಶ್ರೀ ನಾರಾಯಣ ಗುರು ನುಡಿದ ಇನ್ನೊಂದು ಪ್ರಮುಖ ಸಂದೇಶವೇ ಸಂಘಟನೆಯ ಸಂದೇಶ. ಶ್ರೀಗುರುಗಳು ಕೆಳಸ್ತರದ ಜನರಿಗೆ ಸಂಘಟಿತ ಹೋರಾಟ ನೀಡುವಂತೆ ಕರೆ ಕೊಟ್ಟರು. ಸಂಘಟನೆ, ಸುವ್ಯವಸ್ಥೆಯಿಂದ ನಾವು ಶಕ್ತಿವಂತರಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡೋಣ ಎನ್ನುವುದು ಅವರ ಸಂದೇಶವಾಗಿತ್ತು.
ಗುರುಗಳ ಸಂಘಟನೆಯ ಸಂದೇಶದಿಂದ ಪ್ರೇರಿತರಾದ ಅವರ ಶಿಷ್ಯರನೇಕರು ಸೇರಿ ಗುರುಗಳ ಆಶಯದಂತೆ "ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ"ವೆಂಬ ಸಂಸ್ಥೆಯನ್ನು ಪ್ರತಿಷ್ಠಾಪಿಸಿದರು. ಈ ಸಂಸ್ಥೆಯಲ್ಲಿ ನಾರಾಯಣ ಗುರುಗಳ ಶಿಷ್ಯರಾದ ಕುಮಾರನ್‌ ಆಶಾನ್‌, ಡಾ. ಪಲ್‌ಪು ಮುಂತಾದವರು ಸಕ್ರಿಯರಾಗಿದ್ದರು. ಮುಂದೆ ಈ ಶಿಷ್ಯರು ಯೋಗಂ ವತಿಯಿಂದ ಹಲವಾರು ಹೋರಾಟಗಳನ್ನು ನಡೆಸಿದರು. ಅದರಲ್ಲಿ ಮುಖ್ಯವಾಗಿ ಅವರು ನಾಗರಿಕ ಹ...
ನಂತರದ ದಿನಗಳಲ್ಲಿ ಯೋಗಂ ಕೇರಳದಲ್ಲಿ ಈ ಕೆಳಗಿನ ನಾಗರಿಕ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ನಡೆಸಿತು.
ಯೋಗಂ ಈಳವ ಸಮಾಜದ ಮಕ್ಕಳಿಗೆ ಸಾರ್ವಜನಿಕ ಶಾಲೆಗಳಲ್ಲಿ ಪ್ರವೇಶ ನೀಡುವಂತೆ ಒತ್ತಾಯಿಸಿ ಮನವಿಗಳನ್ನು ಸಲ್ಲಿಸಿತು. ಪ್ರಾರಂಭದಲ್ಲಿ ಈ ಒತ್ತಾಯಕ್ಕೆ ಸರ್ಕಾರ ಮಣಿಯಲಿಲ್ಲ. ಆದರೆ ಸುಬ್ಬಾ ಅಯ್ಯರ್‌ ದಿವಾನರಾಗಿದ್ದಾಗ ಸಾರ್ವಜನಿಕ ಶಾಲೆಗಳಿಗೆ ಪ್ರವೇಶ ನೀಡದಿದ್ದರೂ, ಈಳವರು ತಮ್ಮದೇ ಪ್ರತ್ಯೇಕ ಶಾಲೆಗಳನ್ನು ನಡೆಸಲು ಅನುಮತಿ ನೀಡಲಾಯಿತು. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಯೋಗಂ ಈಳವ ಹಾಗೂ ಇನ್ನಿತರ ಕ...
ಆಗಿನ ಸಂದರ್ಭದಲ್ಲಿ ಈಳವ ಹಾಗೂ ಇನ್ನಿತರ ದಲಿತ ವರ್ಗಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಅವಕಾಶ ದೊರೆಯುತ್ತಿರಲಿಲ್ಲ. ಈ ಸಂದರ್ಭದಲ್ಲಿ ಯೋಗಂ ಈ ಜನಸಮುದಾಯಕ್ಕೆ ಸರ್ಕಾರಿ ಹುದ್ದೆಗಳಲ್ಲಿ ಸ್ಥಾನ ನೀಡುವಂತೆ ಒತ್ತಾಯಿಸತೊಡಗಿತು.
ಹಿಂದುಳಿದ ವರ್ಗಗಳಿಗೆ ಹಾಗೂ ದಲಿತ ಸಮುದಾಯಗಳಿಗೆ ದೇವಾಲಯ ಪ್ರವೇಶ ನಿಷೇಧವಾಗಿತ್ತು. ಶ್ರೀನಾರಾಯಣ ಧರ್ಮ ಪರಿಪಾಲನಾ ಯೋಗಂ ದೇವಾಲಯ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಎಲ್ಲ ಜಾತಿಯ ಜನರಿಗೆ ಪ್ರವೇಶ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸಿತು.
ಯೋಗಂ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಸೌಲಭ್ಯಗಳಲ್ಲಿ, ಉದ್ಯೋಗದಲ್ಲಿ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಮೀಸಲಾತಿ ನೀಡುವಂತೆ ಒತ್ತಾಯ ತಂದಿತು.
ಯೋಗಂ ಶತಮಾನಗಳಿಂದ ಶೋಷಣೆಗೆ ಒಳಗಾದ ಜನಸಮುದಾಯಗಳ ಎಲ್ಲ ನಾಗರಿಕ ಹಾಗೂ ಮಾನವ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸಿತು.
ಹೀಗೆ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಚಳವಳಿಗೆ ಚಾಲನೆ ನೀಡಿ ಕೇರಳ ಸಮಾಜದಲ್ಲಿ ಗುರುಗಳು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳಿಗೆ ಧಾರ್ಮಿಕ ಸಂಸ್ಥೆಗಳಿಗೆ ಹಾಗೂ ಮಾನವೀಯ ಮೌಲ್ಯಗಳಿಗೆ ಒಂದು ವೇದಿಕೆಯನ್ನು ಒದಗಿಸಿದರು. ಆದರೆ ಯೋಗಂನ ರಾಜಕೀಯ ನಿಲುವುಗಳನ್ನು ಪ್ರತಿಭಟಿಸಿ ಸ್ವಾಮಿ ಯೋಗಂ ತ್ಯಜಿಸಿ ನಾರಾಯಣ ಧರ್ಮ ಸಂಘ ಟ್ರಸ್ಟ್‌ ಸ್ಥಾಪಿಸಿದರು.
ಕೇರಳದಲ್ಲಿ ಒಂದು ಮೌನಕ್ರಾಂತಿಯನ್ನು ಹುಟ್ಟುಹಾಕಿದ ಶ್ರೀ ನಾರಾಯಣ ಗುರು ಸೆಪ್ಟೆಂಬರ್ ೧೯೨೮ರಲ್ಲಿ ಮರಣ ಹೊಂದಿದರು. ಆದರೆ ಅವರ ಜೀವನ, ತತ್ವ ಮತ್ತು ಸಿದ್ಧಾಂತಗಳ ಮೂಲಕ ಅವರ ಅನುಯಾಯಿಗಳಿಗೆ ಒಂದು ಸ್ಪಷ್ಟವಾದ ಪ್ರಗತಿಯ ಮಾರ್ಗವನ್ನು ತೋರಿಸಿದ್ದರು. ಅವರು ನೀಡಿದ ಸಂದೇಶಗಳು ಕೇರಳದಲ್ಲಿ ಶೋಷಿತ ಸಮುದಾಯಗಳಲ್ಲಿ ಹೊಸ ಜಾಗೃತಿಯನ್ನು ಮೂಡಿಸಿತು.
ವಿದ್ಯೆ ಪಡೆಯುವುದೇ ಅಸಾಧ್ಯವೆನಿಸಿದ್ದ ಜಾತಿಯೊಂದರಲ್ಲಿ ಜನಿಸಿದ ಗುರುಗಳು ಉನ್ನತ ವ್ಯಾಸಂಗವನ್ನು ಮಾಡಿ, ಧಾರ್ಮಿಕ ಕೇಂದ್ರಗಳನ್ನೂ, ಪಾಠಶಾಲೆಗಳನ್ನೂ ಸ್ಥಾಪಿಸಿ ಕೇರಳದಲ್ಲಿ ಹಿಂದುಳಿದ ಜನತೆಗೆ ಒಂದು ಸಾಂಸ್ಥಿಕ ಭದ್ರತೆಯನ್ನು ಒದಗಿಸಿದರು. ಅಷ್ಟಲ್ಲದೆ, ಅವರು ಪ್ರಗತಿಪರ ವಿಚಾರಗಳಿಂದ ಒಂದು ಸಾಮಾಜಿಕ, ಸಾಂಸ್ಕೃತಿಕ ಕ್ರಾಂತಿಯನ್ನೇ ಪ್ರಾರಂಭಿಸಿದರು. ಶ್ರೀ ಗುರು ಅವರ ವಿಚಾರಧಾರೆಗಳು ಕೇರಳದಲ್ಲಿ...
೧೯೨೩ರಲ್ಲಿ ಡಾ. ಪಲ್ಪುರವರ ಪುತ್ರರಾದ ಶ್ರೀ ನಟರಾಜ ಗುರು ಸ್ವಾಮೀಜಿಯವರ ಹೆಸರಿನಲ್ಲಿ ಶ್ರೀ ನಾರಾಯಣ ಗುರುಕುಲ ಎನ್ನುವ ಸಂಘಟನೆಯನ್ನು ಸ್ಥಾಪಿಸಿದರು. ಸ್ವಾತಂತ್ರ್ಯಾನಂತರ ಯೋಗಂ, ಸಂಘ ಹಾಗೂ ಗುರುಕುಲಗಳು ತಮ್ಮದೇ ಹಾದಿಯಲ್ಲಿ ಸಕ್ರೀಯವಾದವು. ಈ ಮೂರು ಸಂಘಟನೆಗಳು ನಾರಾಯಣ ಗುರು ಅವರು ತತ್ವ ಸಿದ್ಧಾಂತಗಳನ್ನೂ ಇಪ್ಪತ್ತನೇ ಶತಮಾನದಲ್ಲಿ ಕೇರಳ ಸಮಾಜದಲ್ಲಿ ನೆಲೆಯೂರುವಂತೆ ಪ್ರಯತ್ನಿಸಿದವು.
ಬ್ರಾಹ್ಮಣೇತರ ಚಳವಳಿ
ಜಾತಿ ಪದ್ಧತಿಯು ಭಾರತೀಯ ಸಮಾಜದ ವೈಶಿಷ್ಟ್ಯತೆ. ಶತಮಾನಗಳಿಂದ ಧಾರ್ಮಿಕ ಚೌಕಟ್ಟಿನೊಳಗೆ ಈ ಪದ್ಧತಿಯು ಸಾಂಸ್ಥೀಕರಣಗೊಂಡು ಸಮಾಜದಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಪ್ರತಿಯೊಂದು ಜಾತಿಯೂ ಒಂದು ಸಾಮಾಜಿಕ ಘಟಕವಾಗಿದ್ದು, ಆಚಾರ ಸಂಪ್ರದಾಯಗಳಲ್ಲಿ ಇತರ ಜಾತಿಗಳಿಂದ ಭಿನ್ನವಾದ ಅಸ್ತಿತ್ವವನ್ನು ಹೊಂದಿರುತ್ತದೆ. ಅಲ್ಲದೇ ಈ ವ್ಯವಸ್ಥೆಯು ಶ್ರೇಣೀಕೃತಗೊಂಡಿದ್ದು ವೃತ್ತಿ ಆಧರಿತವಾಗಿದ್ದು, ಶುದ್ಧ-ಅಶುದ್ಧವ...
ಆದರೆ ಈ ಜಾತಿ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಶೋಷಣೆ, ದಬ್ಬಾಳಿಕೆಗಳಿಂದಾಗಿ ಆ ವ್ಯವಸ್ಥೆಯನ್ನು ಧಿಕ್ಕರಿಸುವ ಪ್ರಯತ್ನಗಳೂ ನಡೆದವು. ವಿವಿಧ ಸಾಮಾಜಿಕ, ಧಾರ್ಮಿಕ ಚಳವಳಿಗಗಳಾದ ಬೌದ್ಧ, ಜೈನ, ವೀರಶೈವ ಮುಂತಾದವು ಜಾತಿ ತಾರತಮ್ಯತೆಯನ್ನು ಅಲ್ಲಗಳೆದು ಏಕರೂಪದ ಸಾಮಾಜಿಕ ವ್ಯವಸ್ಥೆಯನ್ನು ಕಟ್ಟುವ ಪ್ರಯತ್ನದಲ್ಲಿ ತೊಡಗಿದವು. ಈ ಎಲ್ಲ ಚಳವಳಿಗಳು ಹಿಂದೂ ಧಾರ್ಮಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ಸಾಕಷ...
ಪಾರಂಪರಿಕವಾಗಿ ಬ್ರಾಹ್ಮಣ ವರ್ಗವು ಬೋಧಕರಾಗಿ, ಪುರೋಹಿತರಾಗಿ, ಜ್ಯೋತಿಷಿಗಳಾಗಿ, ಅರ್ಚಕರಾಗಿ ಸಮಾಜದ ಪ್ರಮುಖ ಸ್ಥಾನದಲ್ಲಿದ್ದ ಕಾರಣದಿಂದಾಗಿಯೂ, ಆಡಳಿತ ಹಾಗೂ ಸಚಿವಪದವಿಗಳನ್ನು ಹೊಂದಿದ್ದು ಅಧಿಕಾರ ನಿರ್ವಹಣೆ ಮಾಡಿದ ಕಾರಣದಿಂದಾಗಿಯೂ ವ್ಯವಸ್ಥೆಯ ಮೇಲೆ ಹಿಡಿತವನ್ನು ಸಾಧಿಸಿತ್ತು. ಈ ಬೌದ್ಧಿಕ ಹಿನ್ನೆಲೆ ಇದ್ದ ಕಾರಣ ಮುಸ್ಲಿಮ್‌ಆಡಳಿತದ ಸಮಯದಲ್ಲಿ ಅವರು ಅಧಿಕಾರ ವಂಚಿತರಾಗಲಿಲ್ಲ. ಅವರು ಪರ್ಷಿ...
ಬ್ರಿಟಿಷ್ ‌ಆಡಳಿತವೂ ಆಂಗ್ಲ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳನ್ನು ನಡೆಸಿತು. ೧೮೪೪ರಲ್ಲಿ ಲಾರ್ಡ್ ಹಾರ್ಡಿಂಜರು ಒಂದು ಆಜ್ಞೆ ಹೊರಡಿಸಿ ಆಧುನಿಕ ಆಂಗ್ಲ ಶಿಕ್ಷಣ ಪಡೆದ ಭಾರತೀಯರಿಗೆ ಉದ್ಯೋಗದಲ್ಲಿಯೂ ಹೆಚ್ಚಿನ ಅವಕಾಶ ನೀಡಿದರು. ಹಾಗೆಯೇ ಆಧುನಿಕ ಪಾಠಶಾಲೆಗಳನ್ನು ಪ್ರಾರಂಭಿಸಿ ಎಲ್ಲ ಜಾತಿ ಜನಾಂಗಗಳಿಗೂ ವಿದ್ಯಾಭ್ಯಾಸದ ಅವಕಾಶ ನೀಡಿದರು. ಭಾರತದ ಇತಿಹಾಸದಲ್ಲ...
ಮಹಾರಾಷ್ಟ್ರದಲ್ಲಿ ಬ್ರಾಹ್ಮಣೇತರ ಚಳವಳಿ
ಫುಲೆಯವರ ಪ್ರಭಾವ : ಮಹಾರಾಷ್ಟ್ರದಲ್ಲಿ ನಡೆದ ಬ್ರಾಹ್ಮಣೇತರ ಚಳವಳಿಯ ಬೇರುಗಳು ೧೯ನೇ ಶತಮಾನದಲ್ಲಿ ಪೂನಾದ ಪರಿಸರದಲ್ಲಿ ಮಹಾತ್ಮ ಜ್ಯೋತಿಭಾ ಫುಲೆಯವರ ನೇತೃತ್ವದಲ್ಲಿ ನಡೆದ ಹಿಂದುಳಿದ ವರ್ಗದ ಜಾಗೃತಿ ಹಾಗೂ ಸತ್ಯಶೋಧಕ ಸಮಾಜದ ಚಳವಳಿಯಲ್ಲಿ ಅಡಗಿದೆ. ಫುಲೆಯವರನ್ನು ಮಹಾರಾಷ್ಟ್ರದ ಬ್ರಾಹ್ಮಣೇತರ ಚಳವಳಿಯ ಹರಿಕಾರನೆಂದೇ ಗುರುತಿಸಲಾಗುತ್ತದೆ.
ಪೂನಾದಲ್ಲಿ ಹಿಂದುಳಿದ, ಕೃಷಿ ತೋಟಗಾರಿಕೆಯನ್ನು ಅವಲಂಬಿಸಿದ ಮಾಲಿ ಜನಾಂಗದಲ್ಲಿ ಜನಿಸಿದ ಫುಲೆಯವರು ಕ್ರಿಶ್ಚಿಯನ್‌ ಶಾಲೆಯಲ್ಲಿ ಶಿಕ್ಷಣ ಪಡೆದು ವೈಚಾರಿಕತೆಯನ್ನು ಬೆಳೆಸಿಕೊಂಡರು. ಜಾತಿ ಕಟ್ಟುಪಾಡುಗಳಿಂದ ಸ್ವತಃ ನೋವು ಅನುಭವಿಸಿದ ಫುಲೆಯವರು ಹಿಂದುಳಿದ ವರ್ಗಗಳಿಗೆ ಅಸ್ಪೃಶ್ಯರಿಗೆ ಹಾಗೂ ಮಹಿಳೆಯರಿಗೆ ಶಾಲೆಗಳನ್ನು ತೆರೆದು ಶೈಕ್ಷಣಿಕ ಕ್ರಾಂತಿಯನ್ನು ಪ್ರಾರಂಭಿಸಿದರು. ಸಾಮಾಜಿಕವಾಗಿ ಶೋಷಿತ ವರ...
೧೮೭೩ರಲ್ಲಿ ಫುಲೆಯವರು ಎಲ್ಲ ಹಿಂದುಳಿದ ವರ್ಗಗಳು ಒಂದಾಗಿ ಹೋರಾಟ ನಡೆಸಲು ಅನುಕೂಲವಾಗುವಂತೆ 'ಸತ್ಯಶೋಧಕ ಸಮಾಜ'ವೆಂಬ ವೇದಿಕೆಯನ್ನು ಸ್ಥಾಪಿಸಿದರು. ಸರ್ಕಾರಿ ಹುದ್ದೆಗಳಲ್ಲಿ ಎಲ್ಲ ಜನವರ್ಗಗಳಿಗೂ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸತೊಡಗಿದರು. ಅಂಬೇಡ್ಕರ್‌ (೧೮೯೧-೧೯೫೬) ಸಹ ಈ ವೈಚಾರಿಕ ಹಿನ್ನೆಲೆಯಿಂದಲೇ ಬಂದು ದಲಿತ ಜನತೆಯ ನಾಯಕರಾಗಿ ಬೆಳೆದರು.
ಶ್ರೀ ಶಾಹು ಮಹಾರಾಜರು ಹಾಗೂ ಬ್ರಾಹ್ಮಣೇತರ ಚಳವಳಿ
ಪೂನಾದ ಪರಿಸರದಲ್ಲಿ ಪ್ರಾರಂಭಗೊಂಡ ಹಿಂದುಳಿದ ಜನವರ್ಗಗಳಲ್ಲಿ ಜಾಗೃತಿ ಮೂಡಿಸುವ ಪ್ರಕ್ರಿಯೆಯು ನಿಧಾನವಾಗಿ ಮರಾಠ ರಾಜ್ಯವಾದ ಕೊಲ್ಹಾಪುರದಲ್ಲಿಯೂ ಕಾಣಿಸಿಕೊಂಡಿತು. ಕೊಲ್ಹಾಪುರದ ಛತ್ರಪತಿ ಶಾಹು ಮಹಾರಾಜರು ೧೮೯೦ರಲ್ಲಿ ಜ್ಯೋತಿಭಾ ಫುಲೆಯವರು ಮರಣ ಹೊಂದಿದ ನಂತರ ಅವರು ಹುಟ್ಟುಹಾಕಿದ ಬ್ರಾಹ್ಮಣೇತರ ಚಳವಳಿ ಹಾಗೂ ಸತ್ಯಶೋಧಕ ಸಮಾಜದ ನೇತೃತ್ವ ವಹಿಸಿ ಮುನ್ನಡೆಸಿದರು.
ಶ್ರೀ ಶಾಹು ಮಹಾರಾಜರು ೧೮೯೪ರಲ್ಲಿ ಕೊಲ್ಹಾಪುರದ ಸಿಂಹಾಸನವೇರಿದರು. ಪ್ರಾರಂಭದಲ್ಲಿ ಅವರು ಸತ್ಯಶೋಧಕ ಸಮಾಜದ ಬೆಂಬಲಿಗರಾಗಿರಲಿಲ್ಲ. ಹಾಗಾಗಿ ಕೊಲ್ಹಾಪುರದಲ್ಲಿ ೧೯೧೩ರ ತನಕ ಸತ್ಯಶೋಧಕ ಸಮಾಜದ ಶಾಖೆ ಪ್ರಾರಂಭಗೊಳ್ಳಲಿಲ್ಲ. ಮಹಾರಾಜರು ಬ್ರಾಹ್ಮಣ ವರ್ಗದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಆದರೆ ಅರಮನೆಯ ಆಚರಣೆಗಳಲ್ಲಿ "ವದೋಕ್ತಿ ಅಥವಾ ಪುರಾಣೋಕ್ತಿ"ಯ ಯಾವುದನ್ನು ಪಾಲಿಸಬೇಕು ಎನ್ನುವ ವಿ...
ಪ್ರಥಮ ಹೆಜ್ಜೆಯಾಗಿ ಮಹಾರಾಜರು ಆಡಳಿತದಲಲಿ ಬ್ರಾಹ್ಮಣ ವರ್ಗದ ಪ್ರಭಾವವನ್ನು ಕಡಿಮೆಗೊಳಿಸುವ ಬಗ್ಗೆ ಕ್ರಮಗಳನ್ನು ಕೈಗೊಂಡರು. ಈ ದೃಷ್ಟಿಯಿಂದ ಆಡಳಿತದಲ್ಲಿ ಶೇ. ೫೦ ರಷ್ಟು ಸ್ಥಾನಗಳನ್ನು ಅರ್ಹತೆ ಹೊಂದಿರುವ ಬ್ರಾಹ್ಮಣತೇರ ಅಭ್ಯರ್ಥಿಗಳಿಗೆ ಮೀಸಲಿಡುವ ತೀರ್ಮಾನ ಕೈಗೊಂಡರು.
ಸತ್ಯಶೋಧಕ ಸಮಾಜ ಮತ್ತು ಶಾಹು ಮಹಾರಾಜರು
೧೯೧೩ರ ಜುಲೈ ತಿಂಗಳಲ್ಲಿ ಶಾಹು ಮಹಾರಾಜರು ಕೊಲ್ಹಾಪುರದಲ್ಲಿ ಸತ್ಯಶೋಧಕ ಸಮಾಜದ ಶಾಖೆಯನ್ನು ತೆರೆದರು. ಅಂದಿನಿಂದ ಅವರು ತನ್ನ ಪ್ರಭಾವ ಇರುವ ಎಲ್ಲ ಪ್ರದೇಶಗಳಿಗೂ ಸಮಾಜದ ಚಟುವಟಿಕೆಗಳನ್ನು ವಿಸ್ತರಿಸುವ ಕ್ರಮ ಕೈಗೊಂಡರು. ಆದಾಗಲೇ ಮುಂಬೈ ಪ್ರಾಂತ್ಯದಲ್ಲಿ ಪಾಶ್ಚಾತ್ಯ ಶಿಕ್ಷಣದ ಪ್ರಭಾವದಿಂದಾಗಿ ಶೋಷಿತ ಸಮಾಜದಲ್ಲಿ ಜನಜಾಗೃತಿ ಮೊಳಕೆಯೊಡೆದಿತ್ತು. ದಮನಕ್ಕೊಳಗಾದ ಸಮುದಾಯದಲ್ಲಿ ತಮ್ಮ ಹಕ್ಕುಗಳ ಅರಿ...
೧೯೧೩ರ ನಂತರ ಸಕ್ರಿಯರಾದ ಶಾಹು ಮಹಾರಾಜರು ದಕ್ಷಿಣ ಭಾರತದ ಹಲವಾರು ಸಂಸ್ಥಾನಗಳ ರಾಜರನ್ನೂ, ರಾಜಕೀಯ-ಸಾಮಾಜಿಕ ಮುಖಂಡರನ್ನೂ ಸಂಪರ್ಕಿಸಿ ಬ್ರಾಹ್ಮಣೇತರ ಚಳವಳಿಗೆ ಹೊಸ ಆಯಾಮವನ್ನೇ ನೀಡಿದರು. ಅವರು ಸಂಪರ್ಕಿಸಿದ ಪ್ರಮುಖರಲ್ಲಿ ಹಲವಾರು ಜಾಗೀರುದಾರೂ, ಐರೋಪ್ಯ ಅಧಿಕಾರಿಗಳೂ ಸೇರಿದ್ದರು. ಉದಾಹರಣೆಗೆ ಇಂದೋರ್‌, ಬಾವನಗರ, ದೀವಸ್‌, ಬಾರ್‌, ಮುಧೋಳ, ಸಾವಂತವಾಡಿಸ ಸಾಂಗ್ಲಿ, ಅಕಲ್‌ಕೋಟ್‌, ಪಾಲ್ತಾನ್‌...
ಫುಲೆಯವರು ಸತ್ಯಶೋಧಕ ಸಮಾಜ ಸ್ಥಾಪಿಸಿದ ಪರಿಸ್ಥಿತಿ ಹಾಗೂ ಮಹಾರಾಜರು ಬ್ರಾಹ್ಮಣೇತರ ಚಳವಳಿಯನ್ನು ಮುನ್ನಡೆಸಿದ ಪರಿಸ್ಥಿತಿಗಳು ಸ್ವಲ್ಪ ಭಿನ್ನವಾಗಿದ್ದವು. ಆದರೆ ಅವರಿಬ್ಬರ ಉದ್ದೇಶವು ಒಂದೇ ಆಗಿತ್ತು. ಫುಲೆಯವರು ಜಾತಿ ಪದ್ಧತಿಯ ವಿರುದ್ಧ, ಅಸ್ಪೃಶ್ಯತೆಯ ವಿರುದ್ಧ, ಹಿಂದುಳಿದ ಹಾಗೂ ಮಹಿಳಾ ಹಕ್ಕುಗಳ ಪರವಾಗಿ ಜನಜಾಗೃತಿಯನ್ನು ಹುಟ್ಟುಹಾಕಿದರು. ಈ ಜಾಗೃತಿಯ ಬುನಾದಿಯ ಮೇಲೆ ಶಾಹು ಮಹಾರಾಜರು ಬ್ರ...
ಸತ್ಯಶೋಧಕ ಸಮಾಜವು ಸಾಂಸ್ಕೃತಿಕ ಹೋರಾಟಗಳನ್ನೇ ಪ್ರಧಾನವಾಗಿರಿಸಿಕೊಂಡಿದ್ದರೆ, ಶಾಹು ಮಹಾರಾಜರು ಮುನ್ನಡೆಸಿದ ಬ್ರಾಹ್ಮಣೇತರ ಚಳವಳಿಯು ಆಡಳಿತದಲ್ಲಿ ಅವಕಾಶ ಪಡೆಯುವುದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿತು. ಆ ಸಮಯದಲ್ಲಿ ವಸಾಹತು ಆಡಳಿತವೂ ಹಲವಾರು ಸಾಂವಿಧಾನಿಕ ಸುಧಾರಣೆಗಳನ್ನು ತಂದು ಬ್ರಾಹ್ಮಣೇತರರಿಗೆ ಆಡಳಿತದಲ್ಲಿ ಅವಕಾಶ ನೀಡತೊಡಗಿತು. ಈ ಬೆಳವಣಿಗೆಗಳು ಬ್ರಾಹ್ಮಣೇತರ ಚಳವಳಿಗೆ ಪೂರಕವಾಯಿತು...
ಮಹಾರಾಷ್ಟ್ರದ ಬ್ರಾಹ್ಮಣೇತರ ಚಳವಳಿಯಲ್ಲಿ ಶಾಹು ಮಹಾರಾಜರಿಗೆ ನೆರವಾದವರು ಅವರ ಬ್ರಾಹ್ಮಣೇತರ ಸಂಗಾತಿಗಳಾದ ಭಾಸ್ಕರರಾವ್‌ ಜಾಧವ್ ಹಾಗೂ ಅಣ್ಣಾ ಬಾಬಾಜಿ ಲತ್ಥೆಯವರು. ಮರಾಠಾ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಸೌಲಭ್ಯಕ್ಕಾಗಿ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳ ಸ್ಥಾಪನೆಗಾಗಿ ಈ ನಾಯಕರು ಮಹಾರಾಜರೊಂದಿಗೆ ದುಡಿದರು. ಇದೇ ಸಮಯದಲ್ಲಿ ಬ್ರಾಹ್ಮಣೇತರ ತತ್ವಸಿದ್ಧಾಂತಗಳ ಪ್ರತಿಪಾದನೆಗಾಗಿ 'ಜ...
ಮದ್ರಾಸು ಪ್ರಾಂತ್ಯದ ಪ್ರಭಾವ
ಈ ಬೆಳವಣಿಗೆಗೆ ಸರಿಯಾಗಿ ಮದ್ರಾಸು ಪ್ರಾಂತ್ಯದಲ್ಲಿಯೂ ೧೯೧೭ರಲ್ಲಿ ಬ್ರಾಹ್ಮಣೇತರ ಪಕ್ಷವಾದ 'ಜಸ್ಟೀಸ್‌ ಪಕ್ಷ'ದ ಸ್ಥಾಪನೆಯಾಯಿತು. ಇದರಿಂದ ಉತ್ತೇಜನಗೊಂಡ ಲತ್ಥೆ ಹಾಗೂ ಇತರ ಸಂಗಾತಿಗಳು ಮಹಾರಾಷ್ಟ್ರದಲ್ಲಿಯೂ ೧೯೨೦ರಲ್ಲಿ 'ಬ್ರಾಹ್ಮಣೇತರ ಅಸೋಸಿಯೇಷನ್‌' ಸ್ಥಾಪಿಸಿ, ಬ್ರಾಹ್ಮಣೇತರ ರಾಜಕೀಯ ಹಕ್ಕುಗಳನ್ನು ಪ್ರತಿಪಾದಿಸತೊಡಗಿದರು. ಈ ಸಂಘಟನೆಯು ಮುಂಬಯಿಯ ಶಾಸನ ಸಭೆಯಲ್ಲಿ ಬ್ರಾಹ್ಮಣೇತರರಿಗೆ ಪ್ರಾತ...
ಫುಲೆ ಹಾಗೂ ಶಾಹು ಮಹಾರಾಜರು : ಒಂದು ಹೋಲಿಕೆ
ಫುಲೆಯವರ ವಿಚಾರಗಳು ಶಾಹು ಮಹಾರಾಜರು ಮುನ್ನಡೆಸಿದ ಬ್ರಾಹ್ಮಣೇತರ ಚಳವಳಿಯ ಮೇಲೆ ಗಾಢ ಪ್ರಭಾವ ಬೀರಿದ್ದರೂ, ಅವರಿಬ್ಬರ ನಿಲುವಿನಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸಗಳೂ ಇವೆ. ಫುಲೆಯವರು ವೈದಿಕ ಮೌಲ್ಯಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದರೆ, ಶಾಹು ಮಹಾರಾಜರು ಆರ್ಯಸಮಾಜದ ಪ್ರಭಾವಕ್ಕೊಳಗಾಗಿದ್ದು ವೈದಿಕ ಆಚರಣೆಗಳನ್ನು ಒಪ್ಪಿಕೊಂಡಿದ್ದರು. ವಿಶೇಷವೆಂದರೆ ಬ್ರಾಹ್ಮಣ ಪೌರೋಹಿತ್ಯಕ್ಕೆ ಬದಲಾಗಿ 'ಮರಾ...
ವಿಠಲರಾವ್‌ ಶಿಂಧೆ (೧೮೭೫–೧೯೪೪)
ಶಿಂಧೆಯವರನ್ನು ಬ್ರಾಹ್ಮಣೇತರ ಚಳವಳಿಯ ನಾಯಕರೆಂದು ಪರಿಗಣಿಸುವುದು ಸಂಪೂರ್ಣವಾಗಿ ಸಮಂಜಸವಲ್ಲವಾದರೂ, ಅವರು ಫುಲೆಯವರ ಸಿದ್ಧಾಂತವನ್ನು ಒಪ್ಪಿಕೊಂಡು ಮುನ್ನಡೆಸಿದ ಅಂಶವನ್ನು ಕಡೆಗಣಿಸುವಂತಿಲ್ಲ. ಕೊಲ್ಹಾಪುರದ ಮರಾಠಾ ಕೃಷಿಕ ಕುಟುಂಬದಲ್ಲಿ ಜನಿಸಿದ ಶಿಂಧೆಯವರು ಪೂನಾದ ಫರ್ಗ್ಯೂಸನ್‌ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಓದುತ್ತಿದ್ದರು. ಆ ಸಂದರ್ಭದಲ್ಲ...
ಇಂಗ್ಲೆಂಡಿನಿಂದ ಹಿಂದಿರುಗಿದ ನಂತರ 'ಸಮಾಜ'ದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಶಿಂಧೆಯವರು ಆ ಸಂಘಟನೆಯಲ್ಲಿರುವ ಮೇಲ್ಜಾತಿಗಳ ಪ್ರಾಬಲ್ಯವನ್ನು ಮನಗಂಡು ಅಸ್ಪೃಶ್ಯರ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ನೀಡಲು ತೊಡಗಿದರು. ೧೯೦೬ರಲ್ಲಿ ತನ್ನ ಸಂಗಡಿಗರೊಂದಿಗೆ ಸೇರಿ "ಡಿಪ್ರೆಸ್ಡ್‌ ಕ್ಲಾಸ್‌ ಮಿಷನ್‌ ಸೊಸೈಟಿ"ಯನ್ನು ಸ್ಥಾಪಿಸಿದರು. ೧೯೦೮ರಲ್ಲಿ ಶಿಂಧೆಯವರು ಅಸ್ಪೃಶ್ಯತೆಯ ಇತಿಹಾಸದ ಬಗೆಗೆ "ಬಹಿಷ್ಕ...
ಶಿಂಧೆಯವರು ಶಾಹು ಮಹಾರಾಜರು ಸ್ಥಾಪಿಸಿದ ಸತ್ಯಶೋಧಕ ಸಮಾಜದ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರೂ ಸಮಾಜದ ಇತರ ನಾಯಕರಾದ ಜಾಧವ್‌, ಲತ್ಥೆ ಮುಂತಾದವರೊಂದಿಗೆ ಸಾಕಷ್ಟು ಭಿನ್ನಾಭಿಪ್ರಾಯಗಳನ್ನೂ ಹೊಂದಿದ್ದರು. ಭಾರತದ ರಾಷ್ಟ್ರೀಯ ಚಳವಳಿಯಲ್ಲಿಯೂ ತನ್ನನ್ನು ಗುರುತಿಸಿಕೊಂಡಿದ್ದ ಶಿಂಧೆಯವರು ಬ್ರಾಹ್ಮಣೇತರ ಪಕ್ಷವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲಿಲ್ಲ. ಆದರೂ ಶಿಂಧೆಯವರು ಪ್ರಕಟಿಸಿದ ತಾತ್ವ...
By kanaja|2015-06-07T06:30:45+05:30June 7, 2015|ಇತಿಹಾಸ, ಭಾರತದ ಇತಿಹಾಸ, ವಿಶ್ಲೇಷಣೆ ಮತ್ತು ಸಂಶೋಧನೆ, ಸಮಾಜ ಶಾಸ್ತ್ರ|0 Comments
ಖೋಟಾನೋಟು ಮುದ್ರಣ, ಚಲಾವಣೆ ದಂಧೆ ಬೆಳಕಿಗೆ: ಮೂವರ ಬಂಧನ - Times of Deenabandhu
by Times fo Deenabandhu December 26, 2020
ಬೆಂಗಳೂರು: ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಖೋಟಾನೋಟು ಮುದ್ರಣ ಮತ್ತು ಚಲಾವಣೆಯ ದಂಧೆ ಬೆಳಕಿಗೆ ಬಂದಿದ್ದು ಈ ಸಂಬಂಧ ನಗರದ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ದಂಧೆಯಲ್ಲಿ ತೊಡಗಿದ್ದ ಮೂವರನ್ನ ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಖೋಟಾನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಬೃಹತ್ ಜಾಲವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜಮಾಲ್, ಇಮ್ರಾನ್, ಮುಬಾರಕ್ ಬಂಧಿತರು ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಪಾದರಾಯನಪುರದ ಅರಾಫತ್ ನಗರದ ನಿವಾಸಿಗಳು ಎನ್ನಲಾಗಿದೆ.
ಲಾಕ್ ಡೌನ್ ವೇಳೆಯೇ ಖೋಟಾನೋಟುಗಳನ್ನು ಮುದ್ರಣ ಆರಂಭಿಸಿದ್ದ ಆರೋಪಿಗಳು, ಬಳಿಕ ಚಲಾವಣೆ ಆರಂಭಿಸಿದ್ದರು. ಜಮಾಲ್ ಆಟೋ ಚಾಲಕರೊಬ್ಬರಿಗೆ 100 ರೂ. ಖೋಟಾನೋಟು ನೀಡಿದ್ದ. ಖೋಟಾನೋಟು ನೋಡಿ ಅನುಮಾನಗೊಂಡ ಆಟೋ ಚಾಲಕ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಕರೆತಂದು ಮಾಹಿತಿ ನೀಡಿದ್ದರು.
ಆಟೋಚಾಲಕನ ಮಾಹಿತಿ ಆಧರಿಸಿ ಜಮಾಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಖೋಟಾನೋಟು ಮುದ್ರಣ ಮಾಡಿ ಚಲಾವಣೆ ಮಾಡುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಬಳಿಕ ಜಮಾಲ್ ನೀಡಿದ ಮಾಹಿತಿ ಮೇರೆಗೆ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ದಾಳಿ ನಡೆಸಿ ಇಮ್ರಾನ್, ಮುಬಾರಕ್ ನನ್ನ ಬಂಧಿಸಿದ್ದಾರೆ. ಪ್ರಿಂಟರ್ ಮೂಲಕ 100 ರೂ ಮುಖಬೆಲೆಯ ಖೋಟಾನೋಟು ಮುದ್ರಿಸುತ್ತಿದ್ದು, ಸುಮಾರು 20 ಶೀಟ್ ಗಳನ್ನು ಪೊಲೀಶರು ವಶಕ...
ಅಪಾಯಕಾರಿ ಚಟುವಟಿಕೆ ತಡೆಯಲು ಒಂದು ಲಕ್ಷ ಆಪ್ ಅಳಿಸಿದ ಟ್ವಿಟರ್..! | Twitter removes more than one lakh apps to counter malicious activity - Kannada Gizbot
| Published: Friday, July 27, 2018, 20:30 [IST]
ಟ್ವೀಟರ್ ದಿನದಿಂದ ದಿನಕ್ಕೆ ಸಾಕಷ್ಟು ಜನಪ್ರಿಯಗೊಂಡಿದೆ. ಜನಪ್ರೀಯತೆ ಇದ್ದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರಲೇಬೇಕಲ್ಲವೇ? ಹಾಗೆಯೇ ಟ್ವೀಟರ್ ನಲ್ಲೂ ಕೂಡ ಉತ್ತಮ ಉದ್ದೇಶದಿಂದ ಹಂಚಲಾಗಿರುವ ಮಾಹಿತಿ ಮತ್ತು ಕೆಟ್ಟ ಉದ್ದೇಶದಿಂದ ಹಂಚಲಾಗಿರುವ ವಿಚಾರಗಳು ಎರಡೂ ಕೂಡ ಇವೆ.
ಟ್ವೀಟರ್ ಮಾತ್ರವಲ್ಲ, ಇತ್ತೀಚೆಗೆ ಎಲ್ಲಾ ಸಾಮಾಜಿಕ ಜಾಲತಾಣಗಳೂ ಕೂಡ ಸುಳ್ಳು ಸುದ್ದಿಗಳು, ಅಹಿತಕರ ಚಟುವಟಿಕೆಗಳು ಇತ್ಯಾದಿ ತಮ್ಮ ಹೆಸರಿಗೆ ಕಳಂಕ ತರುವ ಕೆಲಸಗಳಿಗೆ ಕಡಿವಾಣ ಹಾಕಲು ಮುಂದಾಗುತ್ತಿದೆ. ಅದಕ್ಕೆ ಟ್ವೀಟರ್ ಕೂಡ ಹೊರತಾಗಿಲ್ಲ.
ತನ್ನ ಭದ್ರತೆಯ ನಿಟ್ಟಿನಲ್ಲಿ ಟ್ವೀಟರ್ ಸುಮಾರು 1,43000 ಆಪ್ ಗಳನ್ನು ಟ್ವೀಟರ್ ನಿಂದ ತೆಗೆದುಹಾಕಿದೆಯಂತೆ. ದುರುದ್ದೇಶಪೂರಿತ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಫ್ರಿಲ್ ನಿಂದ ಈ ಕಾರ್ಯವನ್ನು ಆರಂಭಿಸಿದ್ದು, ಸ್ವಯಂಚಾಲಿತ ಅಕೌಂಟ್ ಗಳಿಂದ ಇಷ್ಟೊಂದು ದೊಡ್ಡ ಮೊತ್ತದ ಅನಗತ್ಯ ಆಪ್ ಗಳನ್ನು ತೆಗೆದು ಹಾಕಲಾಗಿದೆ ಎಂದು ಟ್ವೀಟರ್ ಪ್ರಕಟಪಡಿಸಿದೆ.
ಸ್ಯಾನ್ ಫ್ರ್ಯಾನ್ಸಿಸ್ಕೋ ಮೂಲದ ಸಾಮಾಜಿಕ ಜಾಲತಾಣವಾಗಿರುವ ಟ್ವೀಟರ್ ಹೇಳುವಂತೆ ತನ್ನ ಎಪಿಐ(ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್)ಗೆ ಡೆವಲಪರ್ ಗಳು ಸ್ವಯಂಚಾಲಿತವಾಗಿ ಟ್ವೀಟರ್ ಪೋಸ್ಟ್ ಗಳನ್ನು ಮಾಡುವುದನ್ನು ಇನ್ನು ಮುಂದೆ ಬಿಗಿಗೊಳಿಸಿ, ಫೇಕ್ ಅಪ್ಲಿಕೇಷನ್ ಗಳನ್ನು ತಡೆಯಲಾಗುವುದು ಎಂದು ತಿಳಿಸಿದೆ.
ಟ್ವೀಟರ್ ನ್ನು ಉತ್ತಮ ಸ್ಥಾನಕ್ಕೆ ಏರಿಸಬಲ್ಲ ಯಾವುದೇ ಫ್ಲಾಟ್ ಫಾರ್ಮ್ ಗೆ ನಾವು ಬೆಂಬಲ ನೀಡುತ್ತೇವೆ. ಅಂತಹ ವಸ್ತುಗಳನ್ನು ಅಭಿವೃದ್ಧಿ ಪಡಿಸುವ ಡೆವಲಪರ್ ಗಳಿಗೆ ಸ್ವಾಗತವಿದೆ ಎಂಬ ಹೇಳಿಕೆಯನ್ನು ಟ್ವೀಟರ್ ನ ಹಿರಿಯ ಉತ್ಪನ್ನ ನಿರ್ವಹಣೆ ನಿರ್ದೇಶಕ ರಾಬ್ ಜಾನ್ಸನ್ ತಿಳಿಸಿದ್ದಾರೆ.
ಟ್ವೀಟರ್ ನಲ್ಲಿ ಸಾರ್ವಜನಿಕರು ಎದುರಿಸುವ ಸ್ಪ್ಯಾಮ್ ಮತ್ತು ದುರುದ್ದೇಶಪೂರಿತ ಯಾವುದೇ ಚಟುವಟಿಕೆ ಮತ್ತು ಗೌಪ್ಯತೆಯ ಕೆಲವು ವಿಚಾರಗಳನ್ನು ನಿರ್ವಹಿಸುವುದು ಒಂದು ಸವಾಲಾಗಿದ್ದು, ಅದನ್ನು ನಿರ್ವಹಿಸುವ ನಿಟ್ಟಿನಲ್ಲಿ ಮತ್ತು ಟ್ವೀಟರ್ ಖಾತೆಗಳ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಖಂಡಿತ ಟ್ವೀಟರ್ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಅಂದರೆ ಸಾಮಾಜಿಕ ಜಾಲ ತಾಣಗಳಲ್ಲಿ ಇತ್ತೀಚೆಗೆ ಅಧಿಕಗ...