text
stringlengths
0
61.5k
ರವಿಶಂಕರ್ ಪ್ರಸಾದ್ ಅವರು ಮಾಧ್ಯಮ ಸಮಿತಿಯನ್ನು, ಪ್ರಕಾಶ್ ಜಾವ್ಡೇಕರ್ ಅವರು ಪ್ರಗತಿಪರರ ಸಭೆ ಏರ್ಪಡಿಸುವ ತಂಡದ ನೇತೃತ್ವವಹಿಸಲಿದ್ದಾರೆ.
ಈ ವರ್ಷದ ಎಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವ ಶತಪ್ರಯತ್ನವನ್ನು ಬಿಜೆಪಿ ಆರಂಭಿಸಿದೆ.
'ಅಪೂರ್ವ'ದಲ್ಲಿ ಚಿರಯುವಕನಂತೆ ಕಂಗೊಳಿಸಲಿರುವ ರವಿಚಂದ್ರನ್ | 'Apoorva' character is 61, but i look younger says Actor Ravichandran - Kannada Filmibeat
'ಅಪೂರ್ವ'ದಲ್ಲಿ ಚಿರಯುವಕನಂತೆ ಕಂಗೊಳಿಸಲಿರುವ ರವಿಚಂದ್ರನ್
| Updated: Monday, May 23, 2016, 11:23 [IST]
'ಕನಸುಗಾರ' ರವಿಚಂದ್ರನ್ ಅವರ ಕನಸಿನ ಕೂಸು 'ಅಪೂರ್ವ' ಸಿನಿಮಾ ಸೆನ್ಸಾರ್ ಆಗಿ ಬಿಡುಗಡೆಗೆ ಸಜ್ಜಾಗಿ ನಿಂತಿದ್ದು, ಈ ವಾರ (ಶುಕ್ರವಾರ, ಮೇ 27) ಬೆಂಗಳೂರಿನ 'ಕಪಾಲಿ' ಚಿತ್ರಮಂದಿರ ಸೇರಿದಂತೆ ಇಡೀ ಕರ್ನಾಟಕದಾದ್ಯಂತ ಅದ್ದೂರಿಯಾಗಿ ತೆರೆ ಕಾಣುತ್ತಿದೆ.
ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟನೆಯ ವಿಷಯಕ್ಕೆ ಬಂದರೆ ಇನ್ನೂ ಚಿರಯುವಕನಂತೆ ಕಾಣುತ್ತಾರೆ. 61 ವರ್ಷದ ಮುದುಕ ಮತ್ತು 19 ವರ್ಷದ ಯುವತಿಯ ಕಥೆಯಾಧರಿತ 'ಅಪೂರ್ವ' ಚಿತ್ರವನ್ನು ಪೂರ್ತಿಗೊಳಿಸಲು ರವಿಚಂದ್ರನ್ ಅವರಿಗೆ ಬರೋಬ್ಬರಿ 30 ತಿಂಗಳು ಹಿಡಿಯಿತಂತೆ.[ಅಂತೂ-ಇಂತೂ ರವಿಮಾಮನಿಗೆ ಕೂಡಿಬಂತು 'ಅಪೂರ್ವ' ಘಳಿಗೆ]
ಅಂದಹಾಗೆ ತುಂಬಾ ದಿನಗಳ ನಂತರ 'ಅಪೂರ್ವ' ಸಿನಿಮಾ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಬಹಳ ಸಂತಸ ನೀಡಿದ ಸಿನಿಮಾ ಆಗಿದೆ. ಹಾಗೂ ಈ ಚಿತ್ರದಲ್ಲಿ ನಾನು 61 ವರ್ಷದವನಾದರೂ ಇನ್ನೂ ಸಣ್ಣ ಯುವಕನಂತೆ ಕಾಣಿಸುತ್ತೇನೆ ಎನ್ನುತ್ತಾರೆ ರವಿಮಾಮ.
'ಅಪೂರ್ವ' ಸಿನಿಮಾ ಅನುಭವದ ಮತ್ತು ಮುಗ್ದತೆಯ ಕಥೆ. ಇಲ್ಲಿ 61 ವರ್ಷದ ಪುರುಷ ಮತ್ತು 19 ವರ್ಷದ ಯುವತಿಯ ನಡುವಿನ ಪ್ರೇಮ ಕಥೆಯ ಸನ್ನಿವೇಶಗಳನ್ನು ಹೆಣೆಯಲಾಗಿದೆ'.[ಅಭಿಮಾನಿಗಳು ಕೇಳಿದ 2 ಪ್ರಶ್ನೆಗಳಿಗೆ ಕ್ರೇಜಿಸ್ಟಾರ್ ಕೊಟ್ಟ ಉತ್ತರ]
'ಇಲ್ಲಿ ಪುರುಷ, ಜೀವನವನ್ನು ಸಾಕಷ್ಟು ಕಂಡಿದ್ದಾನೆ, ಯುವತಿ ಆಗಷ್ಟೇ ಹೊರ ಜಗತ್ತಿಗೆ ಕಾಲಿಡುತ್ತಿದ್ದಾಳೆ, ಇವರಿಬ್ಬರು ಒಟ್ಟಿಗೆ ಹೊರ ಜಗತ್ತಿಗೆ ಕಾಲಿಟ್ಟು, ಸಮಾಜದ ಸಂಪರ್ಕಕ್ಕೆ ಬಂದಾಗ ಏನಾಗುತ್ತದೆ ಅನ್ನೋದೇ ಇಡೀ 'ಅಪೂರ್ವ' ಚಿತ್ರದ ಕಥೆ' ಮತ್ತು ಇಬ್ಬರ ನಡುವಿನ ಸಂಬಂಧವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಎಂದಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.[ಚಕಿತಗೊಳಿಸುವ ರವಿಚಂದ್ರನ್ 'ಅಪೂರ್ವ' ಸಂಗತಿಗಳು]
'ಇದು ಹೊಸ ಪ್ರಕಾರದ ಸಿನಿಮಾ ಎಂದಿರುವ ರವಿಚಂದ್ರನ್ ಅವರು, ಈ ಚಿತ್ರದಲ್ಲಿ ಡ್ಯುಯೆಟ್ ಹಾಡು ಮತ್ತು ಹಾಸ್ಯ ದೃಶ್ಯಗಳನ್ನು ನಿರೀಕ್ಷಿಸಬೇಡಿ' ಎಂಬ ಎಚ್ಚರಿಕೆಯನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ.
Read more about: ravichandran sudeep release sandalwood ರವಿಚಂದ್ರನ್ ಸುದೀಪ್ ಬಿಡುಗಡೆ ಸ್ಯಾಂಡಲ್ ವುಡ್
Kannada Actor Ravichandran's Kannada Movie 'Apoorva' which will release this week (May 27th, Friday). Actress Apoorva' in the lead role.
ಮಧ್ಯಾಹ್ನ ಮೂರು ಗಂಟೆ!! ಬಾಗ – ೨ | ಥಿಂಕ್ ರೈಟ್
ಮಧ್ಯಾಹ್ನ ಮೂರು ಗಂಟೆ!! ಬಾಗ – ೨
October 22, 2020 / ಥಿಂಕ್ ರೈಟ್
ಆಗಲೇ ಪವಿತ್ರ ಮತ್ತು ಮಗುವಿನ ಕೊಲೆ ನಡೆದು ಎರಡು ದಿನಗಳಾಗಿತ್ತು. ಎಸ್ಐ ಕ್ರಾಂತಿಯವರಿಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹಾಡು ಹಗಲಲ್ಲೇ ಕೊಲೆ ನಡೆದಿದ್ದರಿಂದ ಎಲ್ಲ ಪತ್ರಿಕೆಗಳಲ್ಲಿ ವರದಿಯಾಗಿ ಜನರು ಭಯಬೀತರಾಗಿದ್ದರು. ಊಹಾಪೋಹಗಳು ಒಬ್ಬರಿಂದ ಒಬ್ಬರಿಗೆ ಹರಡಿ, ಬೇರೆ ಬೇರೆ ರೀತಿಯ ಕಥೆಗಳು ಹುಟ್ಟಿಕೊಳ್ಳತೊಡಗಿದ್ದವು. ಎಸ್ಐ ಕ್ರಾಂತಿಯವರಿಗೆ ಅವರ ಮೇಲಿನ ಅಧಿಕಾರಿಗಳಿಂದ ಒತ್ತಡ ಜಾಸ್ತಿಯಾಗತೊಡಗಿತು. ಛಾಯಾಚಿತ್ರಗಳು, ಮರಣೋತ್ತರ ವರದಿ, ವಿಧಿ ವಿಜ್ಞಾನ ವರದಿ, ರಘುವಿನ ಹೇಳಿಕೆ, ಅಕ್ಕ ಪಕ್ಕದ ಮನೆಯವರ ಹೇಳಿಕೆ, ಮಾಹಿತಿದಾರರು ಕೊಟ್ಟ ಮಾಹಿತಿಗಳು ಹೀಗೆ ಎಲ್ಲವನ್ನು ಮೇಜಿನ ಜೋಡಿಸಿಕೊಂಡು ಕೂಲಂಕುಷವಾಗಿ ಪರಿಶೀಲನೆ ಮಾಡಲು ಶುರು ಮಾಡಿದರು. ಮನೆಯಲ್ಲಿ ಯಾವುದೇ ಕಳ್ಳತನ ಆಗಿಲ್ಲ, ಪವಿತ್ರಳ ಬಲಾತ್ಕಾರ ಆಗಿಲ್ಲ, ಮನೆಯಲ್ಲಿದ್ದ ಬೀರುಗಳು ಯಥಾ ಸ್ಥಿತಿಯಲ್ಲಿತ್ತು, ಅಡುಗೆ ಮನೆಯಲ್ಲಿ ಅಡುಗೆ ತಯಾರಾಗಿತ್ತು, ಸಿಕ್ಕಿರುವ ಸಾಕ್ಷಿಗಳು, ಹೇಳಿಕೆಗಳು ಯಾವುದೇ ಸುಳಿವು ನೀಡುತ್ತಿಲ್ಲ, ಯಾವುದೋ ಕೊಂಡಿ ಬಿಟ್ಟು ಹೋಗಿದೆ, ಅದು ಯಾವುದು ಅಂತ ಯೋಚನೆ ಮಾಡಲು ಶುರು ಮಾಡಿದರು. ಕೊಲೆಗೆ ಏನು ಉದ್ದೇಶ ಅಂತ ಗೊತ್ತಾಗದೆ ಕೊಲೆಗಾರನ್ನ ಹುಡುಕುವುದು ಕಷ್ಟ. ಸದ್ಯಕ್ಕೆ ಕೊಲೆಯ ಉದ್ದೇಶ ರಘುವಿಗೆ ಇರಬಹುದು ಅಂತ ಅನುಮಾನ ಬಿಟ್ಟರೆ, ಬೇರೆ ಯಾವುದೇ ಸುಳಿವು ಇಲ್ಲ, ಹಾಗಾದರೆ ಏನು ಉದ್ದೇಶ ಇರಬಹುದು ಕೊಲೆಗಾರನಿಗೆ? ಅಂತ ಎಸ್ಐ ಕ್ರಾಂತಿಯವರು ಯೋಚಿಸುತ್ತ ಕುಳಿತರು.
ಹೊರಗಡೆಯಿಂದ ಅವರ ಸಹಾಯಕ ಬಂದು " ರಘು ಬಂದಿದ್ದಾರೆ, ನಿಮ್ಮನು ಭೇಟಿ ಮಾಡಬೇಕಂತೆ, ತುಂಬ ಮುಖ್ಯವಾದ ವಿಷ್ಯ ಹೇಳಬೇಕಂತೆ" ಎಂದು ಹೇಳಿದ. ಎಸ್ಐ ಕ್ರಾಂತಿ " ಆಯಿತು, ಒಳಗೆ ಕಳುಹಿಸು " ಎಂದು ಹೇಳಿ ಮೇಜಿನ ಮೇಲೆ ಜೋಡಿಸಿದ್ದ ಎಲ್ಲ ವರದಿಗಳನ್ನು ಒಳಗಡೆ ಇಟ್ಟರು. ಒಳಗಡೆ ಬಂದ ರಘು " ಸರ್, ನಮ್ಮ ಮನೇಲಿ ಕಳ್ಳತನ ಕೂಡ ಆಗಿದೆ, ನಮ್ಮ ಬೀರುವಿನಲ್ಲಿ ಇಟ್ಟಿದ್ದ ನಂಬರ್ ಲಾಕಿಂಗ್ ಇರುವ ಒಂದು ಲಾಕರ ಇದೆ, ಅದರ ಕೋಡ್ ನನ್ನ ಬಿಟ್ಟು ಪವಿತ್ರಾಳಿಗೆ ಮಾತ್ರ ಗೊತ್ತು, ನಿನ್ನೆ ತನಕ ಅದನ್ನು ತೆಗೆದು ನೋಡಿರಲಿಲ್ಲ, ಯಾಕೆಂದರೆ ಅದನ್ನು ಒಡೆದು ತೆಗೆದಿದ್ದರೇ ಅವತ್ತೇ ನಮಗೆ ಕಳ್ಳತನ ಆಗಿದೆ ಅಂತ ಗೊತ್ತಾಗುತ್ತಿತ್ತು, ಇವತ್ತು ಬೆಳಿಗ್ಗೆ ಅದನ್ನು ತೆಗೆದು ನೋಡಿದರೆ, ಅದರಲ್ಲಿದ್ದ ಮೂರು ಲಕ್ಷ ದುಡ್ಡು ಹಾಗು ಸುಮಾರು ಐದು ಲಕ್ಷದ ಒಡವೆಗಳು ಕಾಣೆಯಾಗಿವೆ" ಅಂತ ಹೇಳಿದನು. ಎಸ್ಐ ಕ್ರಾಂತಿಯವರು " ಅವತ್ತು ಮನೆ ಪೂರ್ತಿ ನಾವು ಪರಿಶೀಲನೆ ಮಾಡಿದಾಗ ಈ ಲಾಕರ ಕಾಣಲಿಲ್ಲ, ಇವತ್ತು ಎಲ್ಲಿಂದ ಬಂತು ಈ ಲಾಕರ ಹಾಗಿದ್ರೆ " ಎಂದು ರಘುವಿಗೆ ಕೇಳಿದರು. ರಘು " ಸರ್, ಈ ಲಾಕರನ್ನು ನಮ್ಮ ಬೀರುವಿನ ಅಡಿಯಲ್ಲಿ ಯಾರಿಗೂ ಕಾಣದೆ ಇಡುವ ವ್ಯವಸ್ಥೆ ಮಾಡಿಕೊಂಡಿದ್ದೆವು, ಹಾಗಾಗಿ ನಿಮಗೆ ಕಾಣಿಸಿರಲಿಲ್ಲ" ಎಂದು ಹೇಳಿದನು. ಎಸ್ಐ ಕ್ರಾಂತಿಯವರಿಗೆ ಕೂಡಲೇ ಇದು ಇವರಿಗೆ ತುಂಬ ಗೊತ್ತಿರುವವರದೇ ಕೆಲಸ, ಬೇರೆಯವರಿಗೆ ಈ ಲಾಕರ ಸಿಕ್ಕರೂ, ಒಡೆದು ತೆಗೆಯಬೇಕು, ಆದರೆ ಕೋಡ್ ಸರಿಯಾಗಿ ಹಾಕಿ, ಲಾಕರ ಓಪನ್ ಮಾಡಿ ಎಲ್ಲ ಕದ್ದು ಹೋಗಿದ್ದಾರೆ ಅಂದರೆ ಅವರಿಗೆ ಕೋಡ್ ಸಹಿತ ಗೊತ್ತಿರಬೇಕಲ್ಲವೇ ? ಎಂದು ಅನಿಸಿತು. ಅವರು ರಘುವಿಗೆ " ಒಡವೆಗಳ ಮಾಹಿತಿ ಎಲ್ಲ ಬರೆದುಕೊಟ್ಟು ಹೋಗಿ" ಎಂದು ರಘುವನ್ನು ಕಳುಹಿಸಿದರು.
ಅಷ್ಟೋತ್ತಿಗೆ ರಘುವಿನ ಕಾಲ್ ಡೀಟೇಲ್ಸ್ ಎಲ್ಲ ತೆಗೆದುಕೊಂಡು ಪೊಲೀಸ್ ಪೇದೆ ಒಳಗಡೆ ಬಂದ. ಆ ಕಾಲ್ ಡೀಟೇಲ್ಸ್ ಪ್ರಕಾರ ರಘು ಮಧ್ಯಾಹ್ನ ಅವನ ಪ್ರೇಯಸಿ ಮನೆಯಲ್ಲಿಯೇ ಇರುವುದನ್ನು ತೋರಿಸುತ್ತಿತ್ತು. ಎಸ್ಐ ಕ್ರಾಂತಿಯವರಿಗೆ ಆದರೂ ರಘುವಿನ ಮೇಲಿದ್ದ ಅನುಮಾನ ಇನ್ನು ಜಾಸ್ತಿ ಆಯಿತು, ಅವನ ಪ್ರೇಯಸಿ ಮನೆಯಲ್ಲಿಯೇ ಮೊಬೈಲ್ ಇಟ್ಟು ಬಂದು ಕೊಲೆ ಮಾಡಿ ಯಾಕೆ ವಾಪಸು ಹೋಗಿರಬಾರದು ಎಂದು ಅನಿಸಿತು. ಆದರೆ ಅವನೇ ಬಂದು ಕಳ್ಳತನ ಆಗಿದ್ದು ಹೇಳಿದ್ದು ಯಾಕೆ? ಅನ್ನುವ ಪ್ರಶ್ನೆಯು ಕಾಡತೊಡಗಿತು. ಎಸ್ಐ ಕ್ರಾಂತಿಯವರು ಅವರ ಸಹಾಯಕನನ್ನು ಕರೆದು ಪವಿತ್ರಳ ಕಾಲ್ ಡೀಟೇಲ್ಸ್ ಹಾಗು ಅವಳ ಬಗ್ಗೆ ಪೂರ್ಣ ಮಾಹಿತಿ ಕಲೆ ಹಾಕಲು ಹೇಳಿದರು. ಮತ್ತೆ ಸಿಕ್ಕ ಎಲ್ಲ ಮಾಹಿತಿಗಳನ್ನು ತಮ್ಮ ಮೇಜಿನ ಮೇಲೆ ಜೋಡಿಸಿಕೊಂಡು ನೋಡತೊಡಗಿದರು.
ಸಂಜೆಯ ವೇಳೆಗೆ ಎಸ್ಐ ಕ್ರಾಂತಿಯವರ ಸಹಾಯಕ ಬಂದು ಪವಿತ್ರಳ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದ. ಆ ಮಾಹಿತಿಯ ಪ್ರಕಾರ ಪವಿತ್ರಳ ತಂದೆ ತಾಯಿ ಇಬ್ಬರು ಅದೇ ಊರಿನಲ್ಲಿ ಪವಿತ್ರಳ ಅಣ್ಣನ ಜೊತೆಯಲ್ಲಿ ಇದ್ದರು. ಪವಿತ್ರಳ ಅಣ್ಣ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ರಘು ರಿಯಲ್ ಎಸ್ಟೇಟ್ ಬಿಸಿನೆಸ್ ಅಲ್ಲಿ ತುಂಬ ಹಣ ಮಾಡಿ ಒಳ್ಳೆ ಸ್ಥಿತಿವಂತನಾಗಿದ್ದರಿಂದ ಅವನಿಗೆ ಪವಿತ್ರಾಳನ್ನು ಮದುವೆ ಮಾಡಿ ಕೊಟ್ಟಿದ್ದರು. ಪವಿತ್ರಾಳಿಗೆ ಮಗು ಆಗುವವರೆಗೂ ಎಲ್ಲ ಸರಿ ಇತ್ತು, ಆದರೆ ರಘುವಿನ ಇನ್ನೊಂದು ಸಂಭಂದದ ಬಗ್ಗೆ ತಿಳಿದ ಮೇಲೆ ದಿನವೂ ಮನೆಯಲ್ಲಿ ಗಲಾಟೆ ನೆಡೆಯುತ್ತಿತ್ತು. ಪವಿತ್ರ ರಘುವಿಗೆ ಆ ಹೆಂಗಸನ್ನು ಬಿಟ್ಟು ಬಿಡಲು ದಿನವೂ ಅವನ ಜೊತೆ ಜಗಳ ಮಾಡುತ್ತಿದ್ದಳು. ಪವಿತ್ರ ಅಕ್ಕ ಪಕ್ಕದ ಜನರ ಜೊತೆ ಅಷ್ಟಾಗಿ ಬೆರೆಯುತ್ತಿರಲಿಲ್ಲ ಮತ್ತು ಹೇಳಿಕೊಳ್ಳುವಂತ ಸ್ನೇಹಿತೆಯರು ಯಾರು ಇಲ್ಲ ಅಂತ ಗೊತ್ತಾಗಿತ್ತು. ರಘುವಿನ ತಂಗಿ ಜೊತೆಗೆ ಮಾತ್ರ ತುಂಬ ಆಪ್ತಳಾಗಿದ್ದಳು ಎಂಬ ವಿಷಯ ತಿಳಿದು ಬಂದಿತ್ತು. ಒಂದು ವರುಷದ ಹಿಂದೆ ರಘುವಿನ ತಂಗಿ ಮದುವೆ ಆಗಿ ಹೋದ ಮೇಲೆ ಅವಳಿಗೆ ಯಾರು ಸ್ನೇಹಿತೆಯರು ಇರಲಿಲ್ಲ ಎಂಬ ಮಾಹಿತಿ ಸಿಕ್ಕಿತು.
ಎಸ್ಐ ಕ್ರಾಂತಿಯವರ ಅನುಮಾನದ ವೃತ್ತದೊಳಗೆ ರಘು, ಅನಾಮಿಕ ಗಂಡಸು ಮತ್ತು ಹೆಂಗಸು ಬಿಟ್ಟರೆ ಬೇರೆ ಯಾರು ಇರಲಿಲ್ಲ. ಪೇದೆ ಬಂದು ಅವರ ಮನೆ ಹಾಗು ಸುತ್ತಮುತ್ತ ಎಲ್ಲೂ ಸಿಸಿ ಕ್ಯಾಮೆರಾ ಇಲ್ಲ ಎಂದು ಹೇಳಿದ. ಎಸ್ಐ ಕ್ರಾಂತಿಯವರಿಗೆ ಆ ಅನಾಮಿಕ ಗಂಡಸು ಮತ್ತು ಹೆಂಗಸು ಯಾರು ಅಂತ ಕಂಡುಹಿಡಿಯುವುದಕ್ಕೆ ಇದ್ದ ಒಂದು ದಾರಿಯು ಇಲ್ಲದಾಯಿತು. ಎಸ್ಐ ಕ್ರಾಂತಿ ಅವರು ರಘು ಕೊಟ್ಟು ಹೋದ ಒಡವೆಗಳ ಮಾಹಿತಿ ಅನ್ನು ಎಲ್ಲ ಆಭರಣ ಮಾಡುವ ಅಂಗಡಿಗೆ ಕಳುಹಿಸಿ, ಯಾರಾದರೂ ಮಾರಲು ಬಂದರೆ ನಮಗೆ ತಿಳಿಸಲು ಹೇಳಿ, ಅಲ್ಲಿಂದ ನಮಗೆ ಏನಾದರೂ ಸುಳಿವು ಸಿಗುವ ಅವಕಾಶ ಜಾಸ್ತಿ ಇದೆ ಎಂದು ಅವರ ಸಹಾಯಕನಿಗೆ ಹೇಳಿದರು. ಸಹಾಯಕ ಹೋದ ಮೇಲೆ ಮತ್ತೆ ಎಲ್ಲ ಮಾಹಿತಿಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಕುಳಿತರು.
ಒಂದೊಂದೇ ಮಾಹಿತಿಯನ್ನು ಕೂಲಂಕುಷವಾಗಿ ನೋಡುತ್ತಾ ಇದ್ದಾಗ ಅವರಿಗೆ ಒಂದು ವಿಷ್ಯದ ಬಗ್ಗೆ ಗಮನ ಸೆಳೆಯಿತು. ಚಾಕು ಮೇಲೆ ಇದ್ದ ಬೆರಳಚ್ಚು ಹಾಗು ರಘುವಿನ ಔಟ್ ಹೌಸಿನ ಹೊರಗಡೆ ಬಾಗಿಲ ಬೀಗದ ಮೇಲಿನ ಬೆರಳಚ್ಚು ಒಂದೇ ಆಗಿತ್ತು. ಎಸ್ಐ ಕ್ರಾಂತಿ ಅವರಿಗೆ ಕೊಲೆಯ ರಹಸ್ಯ ಬಿಡಿಸಿದೆ ಅಂತ ಅನಿಸತೊಡಗಿತು. ಕೂಡಲೇ ತಮ್ಮ ಜೀಪಿನಲ್ಲಿ ಅವರ ಸಹಾಯಕರನ್ನು ಕರೆದುಕೊಂಡು ರಘುವಿನ ಮನೆ ಕಡೆ ಹೋದರು. ರಘು ಮನೆಯಲ್ಲಿಯೇ ಇದ್ದ. ಎಸ್ಐ ಕ್ರಾಂತಿಯವರು ರಘುವಿಗೆ ಔಟ್ ಹೌಸಿನ ಬಾಗಿಲು ತೆಗೆಯಲು ಹೇಳಿದರು. ಅವನು ಕೀ ತೆಗೆದುಕೊಂಡು ಅವರನ್ನು ಕರೆದುಕೊಂಡು ಔಟ್ ಹೌಸಿನ ಹತ್ತಿರ ಕರೆದುಕೊಂಡು ಹೋದನು. ಬೀಗ ತೆಗೆದು ಒಳಗಡೆ ಹೋಗಿ ಮನೆಯ ಮೂಲೆ ಮೂಲೆಯನ್ನು ಸರಿಯಾಗಿ ಗಮನ ಇಟ್ಟು ನೋಡಿದರು. ಅವರ ಮುಖದಲ್ಲಿ ಒಂದು ಸಣ್ಣ ಗೆಲುವಿನ ನಗು ಕಾಣಿಸಿತು.
ಠಾಣೆಗೆ ವಾಪಸು ಬರುವಷ್ಟರಲ್ಲಿ ಪವಿತ್ರಳ ಕಾಲ್ ಡೀಟೇಲ್ಸ್ ಬಂದಿತ್ತು. ಅವಳ ಕಾಲ್ ಡೀಟೇಲ್ಸ್ ತೆಗೆದು ಅವಳು ಯಾರು ಯಾರಿಗೆ ಫೋನ್ ಮಾಡುತ್ತಿದ್ದಳು, ಅವಳ ಫೋನ್ನಲ್ಲಿ ಇದ್ದ ಯಾವ ನಂಬರ್ ಕೊಲೆ ನಡೆದ ದಿವಸ ರಘುವಿನ ಮನೆಯ ಹತ್ತಿರ ಆಕ್ಟಿವ್ ಆಗಿತ್ತು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲು ಹೇಳಿದರು. ಎಸ್ಐ ಕ್ರಾಂತಿಯವರಿಗೆ ಕೊಲೆ ಹೇಗೆ ಮಾಡಿರಬಹುದು ಎಂಬುವುದರ ಬಗ್ಗೆ ಒಂದು ಅಂದಾಜು ಸಿಕ್ಕಿ ಹೋಗಿತ್ತು. ಅವರು ಕೂಡಲೇ ಅವರ ಸಹಾಯಕನಿಗೆ ಇಬ್ಬರ ಬೆರಳಚ್ಚು ಪಡೆಯಲು ಹೇಳಿದರು. ಇನ್ನು ರಘುವಿನ ಮನೆಯ ಹತ್ತಿರ ಆಕ್ಟಿವ್ ಆಗಿರುವ ಆ ಫೋನ್ ನಂಬರ್ ಡೀಟೇಲ್ಸ್ ಕೈಗೆ ಬಂದರೆ ಕೊಲೆಗಾರ ಸಿಕ್ಕಂತೆ ಎಂದು ಮನಸ್ಸಿನಲ್ಲೇ ಹೇಳಿಕೊಂಡರು.
ಔಟ್ ಹೌಸಿನ ಬಾಗಿಲ ಬೀಗದ ಮೇಲೆ ಇದ್ದ ಬೆರಳಚ್ಚು ಕೊಲೆಗಾರ ಹೇಗೆ ಕೊಲೆ ಮಾಡಿ ಒಳಗಡೆ ಚಿಲಕ ಹಾಕಿ ಹೊರಗಡೆ ಬಂದ ಎಂಬ ಸುಳಿವು ಕೊಟ್ಟಿತ್ತು.
ಮರುದಿನ ರಘುವಿಗೆ " ಕೊಲೆಗಾರರು ಸಿಕ್ಕಿದ್ದಾರೆ, ನೀವು ಪೊಲೀಸ್ ಠಾಣೆಗೆ ಬರಲು ಎಸ್ಐ ಕ್ರಾಂತಿಯವರು ಹೇಳಿ ಕಳಿಸಿದ್ದಾರೆ" ಅಂತ ಪೊಲೀಸ್ ಪೇದೆ ಬಂದು ಹೇಳಿದ. ಕೂಡಲೇ ರಘು ಪೊಲೀಸ್ ಠಾಣೆಗೆ ಹೋಗಿ ಅವರು ಯಾರು ಅಂತ ನೋಡಿ ತಲೆ ತಿರುಗಿದಂತಾಗಿ, ನಂಬಲು ಸಾಧ್ಯವಾಗದೆ ಅಲ್ಲೇ ಕುಸಿದು ಕುಳಿತ.
ಯಾರವರು ಮದ್ಯಾಹ್ನ ಮೂರು ಗಂಟೆಗೆ ಬಂದು ಕೊಲೆ ಮಾಡಿದ ಕೊಲೆಗಾರರು? ಹೇಗೆ ಕೊಲೆ ಮಾಡಿ, ಒಳಗಡೆಯಿಂದ ಚಿಲುಕ ಹಾಕಿ ಹೊರಗಡೆ ಹೋದರು? ಕೊಲೆ ಮಾಡಿದ ಉದ್ದೇಶವಾದರೂ ಏನು? ಎಸ್ಐ ಕ್ರಾಂತಿಯವರು ಹೇಗೆ ಕೊಲೆಗಾರರನ್ನು ಕಂಡು ಹಿಡಿದರು?
ಮುಕ್ತಾಯ – ಮುಂದಿನ ಭಾಗದಲ್ಲಿ
← ಮಧ್ಯಾಹ್ನ ಮೂರು ಗಂಟೆ!!
ಮಧ್ಯಾಹ್ನ ಮೂರು ಗಂಟೆ!! ಬಾಗ – ೩ →
4 thoughts on "ಮಧ್ಯಾಹ್ನ ಮೂರು ಗಂಟೆ!! ಬಾಗ – ೨"
ಬಹಳ ಕುತೂಹಲ ಮೂಡಿಸಿದೆ..
ನಿಮ್ಮ ಅನಿಸಿಕೆಗೆ ಧನ್ಯವಾದಗಳು… ನಾಳೆಯ ಬಾಗದಲ್ಲಿ ಮುಗಿಸುತ್ತಿದ್ದೇನೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಇದು ನನ್ನ ಮೊದಲ ಪ್ರಯತ್ನ.
'ವಿಜಯನಗರ'ದ ವೀರಪುತ್ರನಾಗೋದು ಯಾರು..? ನನಸಾಗುವುದೇ ಎಂ.ಕೃಷ್ಣಪ್ಪರ ಹ್ಯಾಟ್ರಿಕ್ ಕನಸು..? – EESANJE / ಈ ಸಂಜೆ
February 21, 2018 February 21, 2018 Sri Raghav #2018 Karnataka Assembly Election, Vijayanagara Constituency
ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರದಲ್ಲಿ ವಿಜಯನಗರ ಎಲ್ಲರ ಹುಬ್ಬೇರುವಂತೆ ಮಾಡಿರುವ ಮತ್ತು ಕುತೂಹಲ ಕೆರಳಿಸಿರುವ ಮತ ಕ್ಷೇತ್ರ. ಕಾಂಗ್ರೆಸ್‍ನ ಭದ್ರಕೋಟೆಯಾಗಿ ಸತತ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ ಅಭ್ಯರ್ಥಿಗಳೇ ಇಲ್ಲಿ ಜಯಗಳಿಸಿರುವುದು ಇತಿಹಾಸ. ಅದರಂತೆ 2008ರ ಕ್ಷೇತ್ರ ಪುನರ್‍ವಿಂಗಡಣೆಯಿಂದ ಬಿನ್ನಿಪೇಟೆ ಹೆಸರು ಮಾಯವಾಗಿ ವಿಜಯನಗರ ವಿಧಾನಸಭಾ ಕ್ಷೇತ್ರವಾಗಿ ಮಾರ್ಪಟ್ಟ ನಂತರ ಕಾಂಗ್ರೆಸ್‍ನ ಬಳಿಯಲ್ಲೇ ಇದೆ.
ನೇರ ಹಣಾಹಣಿ ನಿರೀಕ್ಷಿತ ಕ್ಷೇತ್ರದಲ್ಲಿ ಈ ಬಾರಿ ಹಲವು ವಿದ್ಯಮಾನಗಳು ಕುತೂಹಲಕ್ಕೆ ಕಾರಣವಾಗಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸುವ ಅಭ್ಯರ್ಥಿಗೆ ಸಚಿವ ಸ್ಥಾನ ಗ್ಯಾರಂಟಿ ಎಂಬ ನಂಬಿಕೆ ಕೂಡ ಇಲ್ಲಿನ ಮತದಾರರಲ್ಲಿದೆ. ಕಳೆದ 30 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿ 2000ನೆ ಸಾಲಿನಲ್ಲಿ ಪ್ರಥಮ ಬಾರಿಗೆ ವಿಧಾನಮಂಡಲ ಅಂಗಳ ಪ್ರವೇಶಿಸಿದ ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾಗಿ 2006ರವರೆಗೂ ಕಾರ್ಯ ನಿರ್ವಹಿಸಿದರು. 2004ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಕೊನೆ ಕ್ಷಣದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಎಂ.ಕೃಷ್ಣಪ್ಪ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿ ಕೇಂದ್ರ ಸಚಿವರಾದ ಅನಂತ್‍ಕುಮಾರ್ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು.ಚುನಾವಣೆಯಲ್ಲಿ ಪರಾಭವ ಗೊಂಡರೂ ಅವರ ಪ್ರಾಬಲ್ಯ ಎಲ್ಲರನ್ನು ಚಕಿತಗೊಳಿಸತ್ತಲ್ಲದೆ, 2008ರಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ್ದು, ದಾಖಲೆ ಮತಗಳ ಅಂತರದಿಂದ ವಿಧಾನಸಭೆ ಪ್ರವೇಶಿಸಿದ್ದರು.
ಈ ಭಾಗದಲ್ಲಿ ವಿ.ಸೋಮಣ್ಣ ಕೂಡ ಭಾರೀ ಪ್ರಭಾವಿತ ನಾಯಕರಾಗಿದ್ದು, ಇವರೂ ಕೂಡ ಸುಮಾರು 40 ವರ್ಷಗಳ ಸಕ್ರಿಯ ರಾಜಕಾರಣದಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದಾರೆ.ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ವಿ.ಸೋಮಣ್ಣ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡರು. ನಂತರ ಅವರ ಪ್ರಾಬಲ್ಯ ಕುಸಿಯಲಾರಂಭಿಸಿತು. ಆದರೂ ಮೇಲ್ಮನೆ ಸದಸ್ಯರಾಗಿ ಸಚಿವರೂ ಆಗಿದ್ದ ಸೋಮಣ್ಣ 2013ರ ನಡೆದ ಚುನಾವಣೆ ಯಲ್ಲಿ ವಿಜಯನಗರ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿದ್ದ ಸೋಮಣ್ಣ ಪುನಃ ಎಂ.ಕೃಷ್ಣಪ್ಪ ವಿರುದ್ಧ ಸೋಲು ಕಂಡಿದ್ದರು.
ಪ್ರಸ್ತುತ ವಿಜಯನಗರ ಪ್ರತಿಷ್ಠಿತ ಬಡಾವಣೆ ಯಾಗಿದ್ದು, ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಮತ್ತು ಇಲ್ಲಿ ಕುಡಿಯುವ ನೀರು ಹಾಗೂ ಸಂಚಾರ ದಟ್ಟಣೆ ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯ ಸಮಸ್ಯೆ ಕ್ಷೇತ್ರದಲ್ಲಿ ಕಾಣುವುದಿಲ್ಲ. ಹಸಿರು ಉದ್ಯಾನವನಗಳು, ಸುಂದರವಾದ ರಸ್ತೆಗಳು, ಕೆಲ ಕೊಳಗೇರಿ ಪ್ರದೇಶಗಳಲ್ಲೂ ಕೂಡ ಉತ್ತಮ ಸೌಲಭ್ಯಗಳ ಜೊತೆಗೆ ಈಗ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನ್, ಶುದ್ಧ ಕುಡಿಯುವ ನೀರು ಘಟಕಗಳು ಸಾಕಷ್ಟು ಪ್ರಯೋಜನಕಾರಿಯಾಗಿದೆ.ಇವೆಲ್ಲದರ ನಡುವೆ ಈಗ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಲು ಬಿಜೆಪಿ ತನ್ನದೇ ಆದ ತಂತ್ರಗಾರಿಕೆ ನಡೆಸಿದ್ದು, ಒಕ್ಕಲಿಗ ಸಮುದಾಯದ ಎಚ್. ರವೀಂದ್ರ , ಇಲ್ಲವೇ ಕುರುಬ ಸಮುದಾಯದಿಂದ ಎರಡು ಬಾರಿ ಪಾಲಿಕೆ ಸದಸ್ಯರಾಗಿರುವ ಡಾ.ರಾಜು ಅವರನ್ನು ಕಣಕ್ಕಿಳಿ ಸುವ ಕುರಿತಂತೆ ಚಿಂತನೆ ನಡೆದಿದೆ.ಇದರ ನಡುವೆ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಅಶ್ವತ ್ಥನಾರಾಯಣ, ಮಾಜಿ ಉಪಮೇಯರ್ ಲಕ್ಷ್ಮಿ ನಾರಾಯಣ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದು, ತಮ್ಮ ವರ್ಚಸ್ಸಿನಿಂದಲೇ ಬಿಜೆಪಿ ಹೈಕಮಾಂಡ್‍ವರೆಗೂ ಲಾಬಿ ನಡೆಸಿದ್ದಾರೆ. ಎಂ.ಕೃಷ್ಣಪ್ಪಗೆ ಪ್ರಬಲ ಪೈಪೋಟಿ ನೀಡಲು ಈಗಾಗಲೇ ಎಲ್ಲಾ ಸಮುದಾಯಗಳ ಸಭೆಗಳನ್ನು ನಡೆಸಿರುವ ಬಿಜೆಪಿ ದೊಡ್ಡ ಯೋಜನೆಯೊಂದನ್ನು ರೂಪಿಸಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದೆ.
ಪ್ರಮುಖವಾಗಿ ಈ ಬಾರಿ ಜೆಡಿಎಸ್ ಕೂಡ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಲಿದ್ದು, ಕಳೆದ ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ನಿರೀಕ್ಷಿತ ಪೈಪೋಟಿ ನೀಡದ ಜೆಡಿಎಸ್ ಈ ಬಾರಿ ಅಭ್ಯರ್ಥಿ ಯಾರೆಂಬುದನ್ನು ಇನ್ನೂ ಆಯ್ಕೆ ಮಾಡಿಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಎಸ್.ಕನ್ಯಾಕುಮಾರಿ ಜೆಡಿಎಸ್‍ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‍ನಿಂದ ಹೆಚ್ಚಿನ ಆಕಾಂಕ್ಷಿಗಳು ಸದ್ಯಕ್ಕೆ ಕಂಡುಬರುತ್ತಿಲ್ಲವಾದರೂ ಕೊನೆ ಕ್ಷಣದವರೆಗೂ ಕಾಯುವ ತಂತ್ರ ಅನುಸರಿಸಿದೆ. ಮಹತ್ವದ ಬೆಳವಣಿಗೆಯಲ್ಲಿ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎಚ್.ರವೀಂದ್ರ ಅವರನ್ನು ಸೆಳೆಯಲು ಪ್ರಯತ್ನ ನಡೆಯುತ್ತಿದ್ದು, ಇದು ಸಫಲವಾದರೆ ಮೂರೂ ಪಕ್ಷಗಳ ತ್ರಿಕೋಣ ಪೈಪೋಟಿ ನಡೆಯುವುದು ನಿಶ್ಚಿತವಾಗಿದೆ. ಆದರೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವದಂತಿಗಳು ಹರಿದಾಡುತ್ತಿದ್ದು, ಕೆಲವೇ ದಿನಗಳಲ್ಲಿ ಎಲ್ಲದಕ್ಕೂ ತೆರೆ ಬಿದ್ದು ಘಟಾನುಘಟಿಗಳು ಗೆಲುವಿಗಾಗಿ ತಮ್ಮ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಕ್ಷೇತ್ರದಲ್ಲಿ ಪುರುಷ 160151 ಮತ್ತು ಮಹಿಳೆ ಯರು 145099 ಇದ್ದು, ಒಟ್ಟು 305386 ಮತದಾರ ರಿದ್ದಾರೆ. ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವಾರ್ಡ್‍ಗಳಲ್ಲಿ ಆರು ಮಂದಿ ಬಿಜೆಪಿ ಸದಸ್ಯರಿದ್ದರೆ, ಇಬ್ಬರು ಕಾಂಗ್ರೆಸ್ ಸದಸ್ಯರಿದ್ದಾರೆ.
ಜಾತಿ ಲೆಕ್ಕಾಚಾರ : ಕುರುಬ – 50,000 / ಒಕ್ಕಲಿಗರು – 60,000 / ಲಿಂಗಾಯತ – 45,000 / ಜೈನರು – 15,000 / ಎಸ್ಸಿ/ಎಸ್ಟಿ – 49,000 / ಮುಸ್ಲಿಂ – 23,000 /
ಮುಖಪುಟಮೆಟ್ರೋ ಬಸ್
ಏಳು ವರ್ಷಗಳು ಮತ್ತು ನಾಲ್ಕು ಪ್ಲಾಟ್‌ಫಾರ್ಮ್‌ಗಳು, ಈಸ್ಟರ್ನ್ ಎಕ್ಸ್‌ಪ್ರೆಸ್, ಕ್ಯಾಪಿಟಲ್ ಎಕ್ಸ್‌ಪ್ರೆಸ್, ಫಾತಿಹ್ ಎಕ್ಸ್‌ಪ್ರೆಸ್, ಕುರ್ತಲಾನ್ ಎಕ್ಸ್‌ಪ್ರೆಸ್, ಎಲ್ಲಾ ಪರಿಚಿತ ರೈಲುಗಳು ಹೇದರ್‌ಪಾಸ ನಿಲ್ದಾಣದಿಂದ ಹಲವು ವರ್ಷಗಳಿಂದ ತೆರಳಿವೆ. ಈ ಸಾಂಪ್ರದಾಯಿಕ ರೈಲ್ವೆಗಳನ್ನು ನಿರ್ವಹಿಸಬಹುದು, ಅವು ಅನಾಟೋಲಿಯಾದ ರೈಲು ಮೂಲಕ [ಇನ್ನಷ್ಟು ...]
ಐಇಟಿಟಿ ಪ್ರಯಾಣಿಕರನ್ನು ಭೇಟಿ ಮಾಡುತ್ತದೆ ಮತ್ತು ಪರಿಹಾರಗಳನ್ನು ಉತ್ಪಾದಿಸುತ್ತದೆ
ಪ್ರಯಾಣಿಕರ ಅನುಭವಗಳು ಮತ್ತು ಬೇಡಿಕೆಗಳ ಬಗ್ಗೆ ತಿಳಿಯಲು ಐಇಟಿಟಿ ಆಯೋಜಿಸಿರುವ "ಪ್ರಯಾಣಿಕರ ಸಭೆಗಳು", ಅಧ್ಯಕ್ಷ ಎಕ್ರೆಮ್ ಅಮಾಮೋಲು ಅವರ ಸೂಚನೆಯೊಂದಿಗೆ ಹೆಚ್ಚಿನ ಸಂಖ್ಯೆಯ ಸಭೆಗಳನ್ನು ಮುಂದುವರಿಸಿದೆ. ಇಸ್ತಾಂಬುಲ್ ಮೆಟ್ರೋಪಾಲಿಟನ್ ಮುನ್ಸಿಪಾಲಿಟಿ (ಐಎಂಎಂ) ನ ಅಂಗಸಂಸ್ಥೆಗಳಲ್ಲಿ ಒಂದಾದ ಐಇಟಿಟಿ ಜನರಲ್ ಡೈರೆಕ್ಟರೇಟ್ [ಇನ್ನಷ್ಟು ...]
ಸಾಮರಸ್ಯದ ಕೊರತೆ: ಕಾಮಗಾರಿ ವಿಳಂಬ | Benkiya Bale
ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ನಡುವೆ ಇರುವ ಸಾಮರಸ್ಯದ ಕೊರತೆಯಿಂದ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳಲು ವಿಳಂಬವಾಗುತ್ತಿದೆ ಎಂದು ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಅಧ್ಯಕ್ಷೆ ಡಾ: ಶಾಲಿನಿ ರಜನೀಶ್ ಬೇಸರ ವ್ಯಕ್ತಪಡಿಸಿದರು.
ನಗರದ ಬಾರ್‍ಲೈನ್ ರಸ್ತೆಯಲ್ಲಿಂದು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಸಿಸಿ ರಸ್ತೆ, ಚರಂಡಿ ಹಾಗೂ ಪಾದಚಾರಿ ಮಾರ್ಗ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಅಧಿಕಾರಿಗಳಿಗೆ ಸೂಚನೆ ನೀಡುತ್ತಾ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಪಾಲಿಕೆಯಲ್ಲಿರುವ ನಗರದ ನಕ್ಷೆಯನ್ನು ಅವಲೋಕಿಸಿದ ನಂತರ ಕಾಮಗಾರಿಗಳನ್ನು ಯೋಜಿತ ರೀತಿಯಲ್ಲಿ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಿಸಿ ರಸ್ತೆಯೊಂದನ್ನು ಪರಿಶೀಲಿಸುತ್ತಾ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಕ್ರಮ ಸರಿಯಲ್ಲ. ಇದರಿಂದ ಯೋಜನೆಯ ಹಣ ಪೋಲಾಗುತ್ತದೆಯಲ್ಲದೆ ಕಾಮಗಾರಿಯನ್ನು ದೀರ್ಘ ಕಾಲ ಕೈಗೊಳ್ಳುವುದರಿಂದ ಜನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ ಎಂದು ತಿಳಿಸಿದರು.
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 82 ಸ್ಮಾರ್ಟ್ ರಸ್ತೆಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು, 4 ರಸ್ತೆಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಯಾವುದೇ ಕಾಮಗಾರಿ ಕೈಗೊಂಡಲ್ಲಿ ಏಜೆನ್ಸಿವಾರು ವೇಳಾ ಪಟ್ಟಿಯನ್ನು ಪ್ರತಿದಿನ ಶಾಸಕರ ಗಮನಕ್ಕೆ ತರಬೇಕು ಎಂದರು.
ಚಿಲುಮೆ ಸಮುದಾಯ ಭವನದ ಬಳಿ ಚರಂಡಿ ಕಾಮಗಾರಿ ಪರಿಶೀಲಿಸಿದ ಅವರು, ನಿಯಮಾವಳಿ ಪ್ರಕಾರ ನಿಗಧಿತ ಅಳತೆಯಲ್ಲಿಯೇ ಚರಂಡಿ, ಪಾದಚಾರಿ ಮಾರ್ಗ, ಸೈಕಲ್ ಟ್ರ್ಯಾಕ್ ಒಳಗೊಂಡ ರಸ್ತೆಯನ್ನು ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಸ್ಮಾರ್ಟ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಆಗಬಹುದಾದ ಸಾಧಕ-ಬಾಧಕಗಳ ಬಗ್ಗೆ ಸಂಬಂಧಿಸಿದ ವಾರ್ಡಿನ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿ ಚರ್ಚಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್, ಪಾಲಿಕೆ ಆಯುಕ್ತ ಭೂಬಾಲನ್, ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ, ಮುಖ್ಯ ಇಂಜಿನಿಯರ್ ಡಾ: ಶಾಂತರಾಜಣ್ಣ, ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕದಲ್ಲೂ ಕೇರಳ ಮಾದರಿ ಲಾಕ್‌ಡೌನ್‌ ವಿನಾಯ್ತಿ ಸಿಗುತ್ತಾ..? - ಬಸ್‌ಗಳು ಓಡಾಡ್ತಾವಾ..? - Every Minute News
Home News ಕರ್ನಾಟಕದಲ್ಲೂ ಕೇರಳ ಮಾದರಿ ಲಾಕ್‌ಡೌನ್‌ ವಿನಾಯ್ತಿ ಸಿಗುತ್ತಾ..? – ಬಸ್‌ಗಳು ಓಡಾಡ್ತಾವಾ..?
ಕರ್ನಾಟಕದಲ್ಲೂ ಕೇರಳ ಮಾದರಿ ಲಾಕ್‌ಡೌನ್‌ ವಿನಾಯ್ತಿ ಸಿಗುತ್ತಾ..? – ಬಸ್‌ಗಳು ಓಡಾಡ್ತಾವಾ..?
ಕರ್ನಾಟಕದಲ್ಲಿ ಕೇರಳ ಮಾದರಿಯಲ್ಲೇ ಲಾಕ್‌ಡೌನ್‌ನಿಂದ ವಿನಾಯ್ತಿ ಸಿಗುತ್ತಾ..? ಸದ್ಯ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕರ್ನಾಟಕದಲ್ಲಿ ವಿನಾಯ್ತಿ ಘೋಷಿಸಲಾಗಿದೆ. ಆದರೆ ಲಾಕ್‌ಡೌನ್‌ ವಿನಾಯ್ತಿ ವಿಷಯದಲ್ಲಿ ಕೇರಳ ಕರ್ನಾಟಕಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ.
ದೇಶದಲ್ಲಿ ಮೊದಲ ಕೊರೋನಾ ಪ್ರಕರಣ ವರದಿ ಆಗಿದ್ದು ಕೇರಳದಲ್ಲಿ. ಮೊದಲ ಬಾರಿಗೆ ಲಾಕ್‌ಡೌನ್‌ ಸೂತ್ರ ಅನುಸರಿಸಿದ್ದೇ ಕೇರಳ. ಈಗಲೂ ಲಾಕ್‌ಡೌನ್‌ ವಿನಾಯ್ತಿಯಲ್ಲೂ ತನ್ನದೇ ಮಾದರಿಯನ್ನು ಕೈಗೊಂಡಿದೆ. ಕೇಂದ್ರ ಮಾರ್ಗಸೂಚಿಯಂತೆ ವ್ಯಾಪ್ತಿಯಲ್ಲೇ ಕೆಲವೊಂದಿಷ್ಟು ರಿಲೀಫ್‌ ಘೋಷಿಸಿದೆ.
ಕೊರೋನಾ ಕೇಸ್‌ ಆಧರಿಸಿ ಕೇರಳದಲ್ಲಿ ಜಿಲ್ಲೆಗಳನ್ನು ಮೂರರ ಬದಲಾಗಿ ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ. 1) ಕೆಂಪು ವಲಯ 2) ಕಿತ್ತಳೆ (A) ವಲಯ 3) ಕಿತ್ತಳೆ (B) ವಲಯ 4) ಹಸಿರು ವಲಯ
ಕೆಂಪು ವಲಯ: ಕಾಸರಗೋಡು, ಕಣ್ಣೂರು, ಕೊಯಿಕ್ಕೋಡ್‌ ಮತ್ತು ಮಲಪ್ಪುರಂ. ಈ ನಾಲ್ಕು ಜಿಲ್ಲೆಗಳಲ್ಲಿ ಮೇ 3ರವರೆಗೆ ಲಾಕ್‌ಡೌನ್‌ ಬಿಗಿ ಆಗಿರಲಿದೆ. ಕೇವಲ ಅವಶ್ಯಕ ಸಾಮಗ್ರಿಗಳ ವಾಹನಗಳ ಓಡಾಟಕ್ಕಷ್ಟೇ ಅವಕಾಶ ಇರುತ್ತದೆ.
ಆರೆಂಜ್‌ A ವಲಯ : ಈ ವಲಯದಲ್ಲಿ ಬರುವ ಜಿಲ್ಲೆಗಳು ಪತನಂತಿಟ್ಟಂ, ಎರ್ನಾಕುಲಂ ಮತ್ತು ಕೊಲ್ಲಂ. ಏಪ್ರಿಲ್‌ ೨೪ರವರೆಗೆ ಲಾಕ್‌ಡೌನ್‌ ಈ ಜಿಲ್ಲೆಗಳಲ್ಲಿ ಮುಂದುವರಿಯಲಿದ್ದು, ಏಪ್ರಿಲ್‌ 24ರ ಲಾಕ್‌ಡೌನ್‌ನಿಂದ ಕೊಂಚ ವಿನಾಯ್ತಿಯನ್ನು ನೀಡಲಾಗುತ್ತದೆ.
ಆರೆಂಜ್‌ B ವಲಯ: ಅಲಪ್ಪುಜ, ತ್ರಿಶೂರ್‌, ಪಾಲಕ್ಕಾಡ್‌, ತಿರುವಂನತಪುರಂ ಮತ್ತು ವಯನಾಡ್‌. ಏಪ್ರಿಲ್‌ 20ರ ಬಳಿಕ ಈ ಜಿಲ್ಲೆಗಳಲ್ಲಿ ಲಾಕ್‌ಡೌನ್‌ನಿಂದ ಭಾಗಶಃ ವಿನಾಯ್ತಿ ಸಿಗಲಿದೆ.
ಹಸಿರು ವಲಯ: ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳು. ಏಪ್ರಿಲ್‌ 20ರ ಬಳಿಕ ಈ ಜಿಲ್ಲೆಗಳಲ್ಲಿ ಲಾಕ್‌ಡೌನ್‌ಗೆ ವಿನಾಯ್ತಿ ಸಿಗಲಿದೆ.
ಲಾಕ್‌ಡೌನ್‌ ವಿನಾಯ್ತಿ ಘೋಷಿಸಿರುವ ಜಿಲ್ಲೆಗಳಲ್ಲಿ ಈ ಎಲ್ಲಾ ಸೇವೆಗಳು ಲಭ್ಯವಿರಲಿವೆ:
ವಾಹನಗಳ ಓಡಾಟ:
ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಸಸಂಖ್ಯೆಯೊಂದಿಗೆ ಕೊನೆಯಾಗುವ ವಾಹನಗಳ ಓಡಾಟಕ್ಕೆ ಅವಕಾಶ ಇರಲಿದೆ.
ಮಂಗಳವಾರ, ಗುರುವಾರ ಮತ್ತು ಶುಕ್ರವಾರ: ಸಮ ಸಂಖ್ಯೆಯೊಂದಿಗೆ ಕೊನೆ ಆಗುವ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗುತ್ತದೆ,
(ದೆಹಲಿಯಲ್ಲಿ ಜಾರಿ ಆದ ಸಮ-ಬೆಸ ಸೂತ್ರದಂತೆ – ಆ ನಿರ್ಬಂಧ ಅವಶ್ಯಕ ಸೇವೆಗಳ ಓಡಾಟಕ್ಕೆ ಅನ್ವಯಿಸಲ್ಲ)
ಬಸ್‌ಗಳ ಓಡಾಟ:
ವಿನಾಯ್ತಿ ಇರುವ ಜಿಲ್ಲೆಗಳಲ್ಲಿ 50 ರಿಂದ 60 ಕಿಲೋ ಮೀಟರ್‌ ವ್ಯಾಪ್ತಿಯೊಳಗೆ ಬಸ್‌ಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಪ್ರಯಾಣಿಕರು ಮಾಸ್ಕ್‌ ಧರಿಸುವುದು ಕಡ್ಡಾಯ. ಬಸ್‌ಗೆ ಹತ್ತುವ ಮೊದಲು ಕೈಗೆ ಸ್ಯಾನಿಟೈಸರ್‌ ಹಾಕಿಕೊಳ್ಳಬೇಕು. ಬಸ್‌ನಲ್ಲಿ ಪ್ರಯಾಣಿಕರು ನಿಂತುಕೊಂಡು ಹೋಗುವಂತಿಲ್ಲ. ಮೂರು ಸೀಟ್‌ಗಳ ನಡುವೆ ಮಧ್ಯದ ಸೀಟ್‌ನ್ನು ಖಾಲಿ ಬಿಡಬೇಕು. ಎರಡೂ ಸೀಟುಗಳ ಸಾಲಿನಲ್ಲಿ ಒಬ್ಬರಷ್ಟೇ ಕೂರಲು ಅವಕಾಶ.
- ವಿಜಯ ಕರ್ನಾಟಕ » ಸಂಪಾದಕೀಯ » ಇಂದಿನ ಅಂಕಣಗಳು » ಉತ್ತರ ಕೊರಿಯಾ ಬೆದರಿಕೆ ಹೊಸದಲ್ಲ ಆದರೆ...Jan 29, 2013, 03.42 AM ISTShareTweetShareTweetಫೋಟೋ ಶೇರ್ ಮಾಡಿಭದ್ರತಾ ಮಂಡಳಿ ಮತ್ತಷ್ಟು ಆರ್ಥಿಕ ನಿರ್ಬಂಧಗಳನ್ನು ಹೇರಲು ನಿರ್ಧರಿಸಿದರೆ ಬಹುಶಃ ಯುದ್ಧ ಅನಿವಾರ್ಯವಾಗಬಹುದು ಎನ್ನುವುದು ಉತ್ತರ ಕೊರಿಯಾದ ಬೆದರಿಕೆ. ಭದ್ರತಾ ಮಂಡಳಿಯಲ್ಲಿ ಈ ಸಂಬಂಧವಾದ ನಿರ್ಣಯ ಚರ್ಚೆಗೆ ಬಂದಾಗ ಅದನ್ನು ವಿರೋಧಿಸಬೇಕೆಂದು ದಕ್ಷಿಣ ಕೊರಿಯಾ ಅಧ್ಯಕ್ಷರಿಗೇ ಉತ್ತರ ಕೊರಿಯಾ ಒತ್ತಾಯಿಸಿದೆ. ನಿರ್ಣಯದ ಪರವಾಗಿಯೇನಾದರೂ ಮತ ಚಲಾಯಿಸಿದರೆ 'ಹುಟ್ಟಡಗಿಸುವುದಾಗಿ' ದಕ್ಷಿಣ ಕೊರಿಯಾಕ್ಕೆ ಉತ್ತರ ಕೊರಿಯಾದ ಮಿಲಿಟರಿ ಅಧಿಕಾರಿಗಳು ಬೆದರಿಕೆ ಹಾಕಿಸಿದ್ದಾರೆ. ಹಾಗೇನಾದರೂ ಮಾಡಿದಲ್ಲಿ ದೇಶ ಬೆಂಕಿಯ ಜ್ವಾಲೆಯಲ್ಲಿ ಹೊತ್ತಿ ಉರಿಯುವಂತೆ ಮಾಡುವುದಾಗಿ ಸವಾಲೆಸೆದಿದೆ. ಉತ್ತರ ಕೊರಿಯಾದ ಹಿರಿಯ ನಾಯಕ ಕಿಮ್ ಜಂಗ್ ಇಲ್ ನಿಧನದ ನಂತರ ಅಧಿಕಾರಕ್ಕೆ ಬಂದ ಹದಿಹರೆಯದ ಕಿಮ್ ಜಂಗ್ ಉನ್ ಅವರಿಂದ ಭಿನ್ನ ನೀತಿಗಳನ್ನು ನಿರೀಕ್ಷಿಸಲಾಗಿತ್ತು. ಎರಡೂ ಕೊರಿಯಾಗಳ ನಡುವಣ ಬಾಂಧವ್ಯ ಸುಧಾರಣೆ ಯಾಗುವುದು ಎಂದು ಊಹಿಸಲಾಗಿತ್ತು. ಆದರೆ ಉತ್ತರ ಕೊರಿಯಾದ ನೀತಿಗಳಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಹಿಂದಿನ ಮಿಲಿಟರಿ ಅಧಿಕಾರಿಗಳೇ ದೇಶದ ನೀತಿಗಳ ರೂಪಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವಂತೆ ಕಾಣುತ್ತಿದೆ. ಇದರಿಂದಾಗಿ ಮತ್ತೆ ಹಿಂದಿನ ಸಮಸ್ಯೆ ತಲೆದೋರಿದೆ. ಪರಮಾಣು ತಂತ್ರಜ್ಞಾನ ಅಭಿವೃದ್ಧಿ ನಿಲ್ಲಿಸಬೇಕೆಂಬ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ನೀಡಿದ ಸಲಹೆಯನ್ನು ಧಿಕ್ಕರಿಸಿರುವ ಉತ್ತರ ಕೊರಿಯಾ ಕಳೆದ ಡಿಸೆಂಬರ್ ತಿಂಗಳಲ್ಲಿ ಪ್ರಯೋಗಾರ್ಥರಾಕೆಟ್‌ಗಳನ್ನು ಹಾರಿಸಿತು . ಇದರಿಂದಾಗಿ ಅಮೆರಿಕದ ಮೇಲೆ ಬಾಂಬ್ ದಾಳಿ ಮಾಡಲು ಸಾಧ್ಯವಾಗಬಹುದಾದ ರಾಕೆಟ್ ಉತ್ತರ ಕೊರಿಯಾ ಬಳಿ ಇದ್ದಂತಾಯಿತು. ಅಷ್ಟೇ ಅಲ್ಲ ದಕ್ಷಿಣ ಕೊರಿಯಾ ಮತ್ತು ಜಪಾನ್ ದ್ವೀಪಗಳ ಮೇಲೆ ಸುಲಭವಾಗಿ ದಾಳಿ ನಡೆಸಬಹುದಾದ ಸಾಧ್ಯೆತೆಯೂ ಇದರಿಂದ ಸೃಷ್ಟಿಯಾಯಿತು. ಇಲ್ಲಿಂದ ಆರಂಭವಾದ ಮುಸುಕಿನ ಯುದ್ಧ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಇದೀಗ ಮೂರನೆ ಹಂತದ ರಾಕೆಟ್‌ಗಳನ್ನು ಗಗನಕ್ಕೆ ಚಿಮ್ಮುಸಿಲು ಉತ್ತರ ಕೊರಿಯಾ ಸಿದ್ಧವಾಗಿದ್ದು ದೊಡ್ಡ ವಿವಾದಕ್ಕೆ ಗುರಿಯಾಗಿದೆ. ಅಂತರಿಕ್ಷದಲ್ಲಿ ತನ್ನದೇ ಆದ ಸಂಪರ್ಕ ಉಪಗ್ರಹ ಹೊಂದುವ ಆಸೆಯಿಂದ ರಾಕೆಟ್ ತಂತ್ರಜ್ಞಾನ ಅಭಿವೃದ್ಧಿ ಮಾಡುತ್ತಿರುವುದಾಗಿ ಮತ್ತು ಪರಮಾಣು ತಂತ್ರಜ್ಞಾನವನ್ನು ವಿದ್ಯುತ್ ಉತ್ಪಾದನೆ ಬಳಸಿಕೊಳ್ಳಲಾಗುವುದು ಎಂಬ ತಮ್ಮ ಹಳೆಯ ಸ್ಪಷ್ಟನೆಗಳನ್ನೇ ಉತ್ತರ ಕೊರಿಯಾ ನಾಯಕರು ಪುನರುಚ್ಚರಿಸಿದ್ದಾರೆ. ಆದರೆ ಉತ್ತರ ಕೊರಿಯಾದ ಈ ಮಾತನ್ನು ನಂಬಲು ಯಾರೂ ತಯಾರಿಲ್ಲ. ಕ್ಷಿಪಣಿಗಳಲ್ಲಿ ಪರಮಾಣು ಬಾಂಬ್ ಅಳವಡಿಸಿ ಉಡಾಯಿಸಲು ರಾಕೆಟ್ಟುಗಳನ್ನು ನಿರ್ಮಿಸಲಾಗಿದೆ ಎಂಬುದು ಅಮೆರಿಕ ಅಷ್ಟೇ ಅಲ್ಲ , ಎಲ್ಲ ಅಂತರಾಷ್ಟ್ರೀಯ ಮಟ್ಟದ ಪರಮಾಣು ತಂತ್ರಜ್ಞಾನ ಪರೀಕ್ಷಕರ ಅನುಮಾನ. ಉತ್ತರ ಕೊರಿಯಾ ಇಂಥ ಬೆದರಿಕೆಗಳನ್ನು ಹಾಕುತ್ತಿರುವುದು ಮೊದಲೇನೂ ಅಲ್ಲ. 2006, 2009ರಲ್ಲಿ ಭೂಗತ ಪರಮಾಣು ಪ್ರಯೋಗಾರ್ಥ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಿದಾಗಲೂ ಇಂಥದೇ ಬೆದರಿಕೆಗಳನ್ನು ಹಾಕಿತ್ತು. ಆಗ ಅಂತರರಾಷ್ಟ್ರೀಯ ಸಮುದಾಯ ತತ್‌ಕ್ಷಣ ಉತ್ತರ ಕೊರಿಯಾ ನಾಯಕರ ಜೊತೆ ಮಾತುಕತೆಗೆ ಮುಂದಾದರು. ಮಾತುಕತೆಗಳನ್ನು ತನ್ನ ಕೆಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಬಳಸಿಕೊಂಡಿತು. ಆ ಹಿಂದೆಯೂ ಬರಗಾಲ ಬಂದಾಗ ಇಂಥದೇ ತಂತ್ರ ಬಳಸಿ ಉತ್ತರ ಕೊರಿಯಾ ದಕ್ಷಣ ಕೊರಿಯಾ ಮತ್ತಿತರ ದೇಶಗಳಿಂದ ಆಹಾರ ಸಾಮಗ್ರಿ ಪಡೆದಿತ್ತು. ಭದ್ರತಾ ಮಂಡಳಿ ಹಾಕಿರುವ ಆರ್ಥಿಕ ನಿರ್ಬಂಧಗಳಿಂದಾಗಿ ಉತ್ತರ ಕೊರಿಯಾ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದೆ. ದೇಶದಲ್ಲಿ ಮಳೆ ಬೆಳೆ ಸರಿಯಾಗಿ ಆಗಿಲ್ಲ. ಆಹಾರ ಅಭಾವ ಇದೆ. ಹೀಗಾಗಿ ಆರ್ಥಿಕ ನಿರ್ಬಂಧಗಳು ಸಡಿಲಗೊಳ್ಳುವುದು ಉತ್ತರಕೊರಿಯಾಕ್ಕೆ ಈಗ ಬೇಕಿದೆ. ಬಹುಶಃ ಮನಸ್ಸಿನಲ್ಲಿ ಈ ಬೇಡಿಕೆ ಈಡೇರಿಸಿಕೊಳ್ಳುವ ಉದ್ದೇಶ ಇಟ್ಟುಕೊಂಡು ಈ ರೀತಿಯ ಬೆದರಿಕೆಗಳನ್ನು ಹಾಕುತ್ತಿರಬಹುದು. ಪರಮಾಣು ತಂತ್ರಜ್ಞಾನ ಅಭಿವೃದ್ಧಿ ಕಾರ್ಯಕ್ರಮ ಕೈಬಿಡಬೇಕೆಂಬ ಒತ್ತಾಯ ಹಳೆಯದು. ಹಾಗೆ ಆ ಕಾರ್ಯಕ್ರಮ ಕೈಬಿಡುವುದಾದರೆ ದೇಶದಲ್ಲಿ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ನಿರ್ಮಿಸಿಕೊಡುವುದಾಗಿ ಯೂರೋಪ್ ಒಕ್ಕೂಟ ಭರವಸೆ ನೀಡಿತ್ತು. ಯೂರೋಪ್ ಒಕ್ಕೂಟ ಆ ಜವಾಬ್ದಾರಿಯನ್ನು ಹೊರಲು ಸಿದ್ಧವಿತ್ತು. ಆದರೆ ಅದಕ್ಕೆ ಉತ್ತರಕೊರಿಯಾ ಒಪ್ಪಲಿಲ್ಲ. ಪರಮಾಣು ಸ್ಥಾವರಗಳ ಪರಿಶೀಲನೆಗೆ ಅವಕಾಶ ಕಲ್ಪಿಸಬೇಕೆಂಬ ಅಮೆರಿಕದ ಸಲಹೆಯನ್ನು ಅದು ಒಪ್ಪಿತ್ತು ಕೂಡಾ. ಅಂತರರಾಷ್ಟೀಯ ಪರಮಾಣು ತಂತ್ರಜ್ಞಾನ ಪರೀಕ್ಷಕರು ಆ ದೇಶಕ್ಕೇ ಭೇಟಿ ನೀಡಿ ಸ್ಥಾವರಗಳನ್ನು ಪರಿಶೀಲಿಸಿದ್ದರು. ಆದರೆ ರಹಸ್ಯ ಸ್ಥಳಗಳಲ್ಲಿರುವ ಪರಮಾಣುಸ್ಥಾವರಗಳನ್ನು ಮುಚ್ಚಿಟ್ಟಿತು. ಉತ್ತರ ಕೊರಿಯಾ ಭದ್ರತಾ ಮಂಡಳಿಯ ಬೀಸುಕತ್ತಿಯಿಂದ ತಪ್ಪಿಸಿಕೊಂಡಿತು. ಆದರೆ ಎಲ್ಲವನ್ನು ಮುಚ್ಚಿಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಉತ್ತರ ಕೊರಿಯಾದ ಮೇಲೆ ಮತ್ತೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಿದೆ. ಒಂದು ಕಾಲದಲ್ಲಿ ಉತ್ತರ ಕೊರಿಯಾ ಪರಮಾಣು ತಂತ್ರಜ್ಞಾನ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿದ್ದ ದೇಶವಾಗಿತ್ತು. ಆದರೆ ನಂತರ ವರ್ಷಗಳಲ್ಲಿ ಆ ಒಪ್ಪಂದದಿಂದ ಉತ್ತರಕೊರಿಯಾ ಹೊರಬಂದು ಪರಮಾಣು ತಂತ್ರಜ್ಞಾನ ಅಭಿವೃದ್ಧಿ ಕಾರ್ಯಕ್ರಮ ಪ್ರಕಟಿಸಿತು. ಈ ಕಾರ್ಯಕ್ರಮ ಪುನರಾರಂಭದ ದಿನದಿಂದ ಉತ್ತರ ಕೊರಿಯಾ ವಿಶ್ವದಲ್ಲಿ ಆತಂಕದ ಕ್ಷಣಗಳನ್ನು ಸೃಷ್ಟಿಸುತ್ತಲೇ ಬಂದಿದೆ. ಈ ಸಂಘರ್ಷಕ್ಕೆ ಒಂದು ಇತಿಹಾಸವಿದೆ. ಮೊದಲು ಇದ್ದದ್ದು ಒಂದೇ ಕೊರಿಯಾ. ಎರಡನೆ ಮಹಾಯುದ್ಧದ ಅಂತ್ಯದಲ್ಲಿ ಕೊರಿಯಾ ವಿಭಜನೆಯಾಗುವಂಥ ಸ್ಥಿತಿ ಬಂತು. ತನ್ನ ವಶದಲ್ಲಿದ್ದ ಪ್ರದೇಶವನ್ನು ಅಮೆರಿಕ ಪಡೆದಂತೆ ಸೋವಿಯತ್ ಒಕ್ಕೂಟ ಕೂಡಾ ತನ್ನ ಹಿಡಿತದಲ್ಲದ್ದ ಕೊರಿಯಾವನ್ನು ತನ್ನಲ್ಲೇ ಇಟ್ಟುಕೊಂಡಿತು. ಅಮೆರಿಕ ಮತ್ತು ಸೋವಿಯತ್ ರಾಷ್ಟ್ರಗಳ ನಡುವಣ ಮುಸುಕಿನ ಯುದ್ಧ 1950ರಲ್ಲಿ ಸ್ಫೋಟಿಸಿತು. ಉತ್ತರ ಕೊರಿಯಾಕ್ಕೆ ಕಮ್ಯುನಿಸ್ಟ್ ಸೋವಿಯತ್ ಒಕ್ಕೂಟ ಬೆಂಬಲವಾಗಿ ನಿಂತರೆ, ದಕ್ಷಿಣ ಕೊರಿಯಾಕ್ಕೆ ಅಮೆರಿಕ ಬೆಂಬಲವಾಗಿ ನಿಂತಿತು. ಎರಡೂ ಕೊರಿಯಾಗಳ ನಡುವೆ ನಡೆದ ಯುದ್ಧದಲ್ಲಿ ಲಕ್ಷಾಂತರ ಜನರು ಸತ್ತರು. ಬಹುಶಃ ಆಧುನಿಕ ಜಗತ್ತು ಕಂಡ ಅತ್ಯಂತ ಹೀನ ಯುದ್ಧ ಇದೆಂದು ಇತಿಹಾಸಕಾರರು ಬಣ್ಣಿಸುತ್ತಾರೆ. ಮೂರು ವರ್ಷದಲ್ಲಿಯೇ ಕದನವಿರಾಮದೊಂದಿದೆ ಯುದ್ಧ ನಿಲ್ಲುತ್ತದೆ. ಆದರೆ ದ್ವೇಷ ಆರಲಿಲ್ಲ. ದಕ್ಷ್ಷಿಣ ಕೊರಿಯಾದ ಅಸ್ತಿತ್ವವನ್ನೆ ಉತ್ತರ ಕೊರಿಯಾ ಒಪ್ಪಲಿಲ್ಲ. ಹೀಗಾಗಿ ಅದನ್ನು ತನ್ನ ತೆಕ್ಕೆಗೆ ಹೇಗಾದರೂ ತೆಗೆದುಕೊಳ್ಳಬೇಕೆಂಬ ಪ್ರಯತ್ನಗಳು ನಡೆಯುತ್ತಲೇ ಇವೆ. ದೇಶದ ಗಡಿಯಲ್ಲಿ ಪ್ರತಿ ದೇಶದ ಕನಿಷ್ಠ ಒಂದು ಲಕ್ಷ ಸೈನಿಕರು ಯುದ್ಧ ಸನ್ನದ್ಧರಾಗಿ ನಿಂತಿದ್ದಾರೆ. ಎಲ್ಲ ಅತ್ಯಾಧುನಿಕ ಅಸ್ತ್ರಗಳು ಅಲ್ಲಿ ಸಂಗ್ರಹಿಸಿಡಲಾಗಿದೆ. ಬಹುಶಃ ಜಗತ್ತಿನಲ್ಲಿ ಇಷ್ಟೊಂದು ಯುದ್ದೋದ್ರಿಕ್ತ ಸ್ಥಿತಿಯಿರುವ ಮತ್ತೊಂದು ಸ್ಥಳ ಇರಲಾರದು. ಕಮ್ಯುನಿಸಂ ಪತನ ಮತ್ತು ಸೋವಿಯತ್ ಒಕ್ಕೂಟ ಒಡೆದ ನಂತರ ಉತ್ತರ ಕೊರಿಯಾ ಏಕಾಂಗಿಯಾಯಿತು. ಆದರೂ ಕಮ್ಯುನಿಸಂನ ಸರ್ವಾಧಿಕಾರಿ ಆಡಳಿತದಿಂದ ಉತ್ತರ ಕೊರಿಯಾ ಹೊರಬರಲು ಸಾಧ್ಯವಾಗಿಲ್ಲ. ಎರಡೂ ಕೊರಿಯಾಗಳ ಜನರನ್ನು ಒಂದು ಮಾಡುವ ಪ್ರಯತ್ನಗಳು ನಡೆದಿವೆಯಾದರೂ ಅವು ಯಶಸ್ವಿಯಾಗಿಲ್ಲ. ಕಮ್ಯುನಿಸ್ಟ್ ಚೀನಾದ ಜೊತೆ ಮಾತ್ರ ಉತ್ತರ ಕೊರಿಯಾದ ನಾಯಕರು ಉತ್ತಮ ಬಾಂಧವ್ಯ ಪಡೆದಿದ್ದಾರೆ. ಈಗ ಸಂಘರ್ಷದ ವಾತಾವರಣ ನಿರ್ಮಾಣವಾದಾಗಲೆಲ್ಲಾ ಚೀನಾದ ನೆರವನ್ನು ವಿಶ್ವ ಸಮುದಾಯ ಪಡೆಯುತ್ತ ಬಂದಿದೆ. ಪಸ್ತ್ತುತ ಪರಮಾಣು ಬಿಕ್ಕಟಿನಿಂದ ಹೊರಬರಲು ವಿಶ್ವ ಸಂಸ್ಥೆ ಚೀನಾದ ನೆರವನ್ನೇ ಪಡೆಯುತ್ತಿದೆ. ಉತ್ತರ ಕೊರಿಯಾ ಮಿಲಿಟರಿಯ ಭದ್ರ ಕೋಟೆಯಾಗಿದೆ. ಹೊರಪ್ರಪಂಚದ ಜೊತೆ ಜನರಿಗೆ ಅಷ್ಟೇನೂ ಉತ್ತಮ ಸಂಪರ್ಕ ಇಲ್ಲದಿರುವುದರಿಂದ ಬದಲಾವಣೆಗೆ ಅವರು ಸ್ಪಂದಿಸುತ್ತಿಲ್ಲ. ಉತ್ತರ ಕೊರಿಯಾ ಬಡವಾಗಿದೆ. ಅಲ್ಲಿ ಜನರ ಅಗತ್ಯ ವಸ್ತುಗಳಿಗೇ ಸಮಸ್ಯೆ. ಆದರೂ ಜನರು ಬಂದೂಕಿಗೆ ಹೆದರಿ ಸುಮ್ಮನಿರುವಂತಾಗಿದೆ. ಪರಮಾಣು ಬಾಂಬ್ ಅಶಕ್ತರ ಶಕ್ತಿಯ ಸಂಕೇತವಾಗಿರುವುದರಿಂದ ಇತರ ಅನೇಕ ದೇಶಗಳ ಸರ್ವಾಧಿಕಾರಿಗಳಂತೆ ಉತ್ತರ ಕೊರಿಯಾದ ಸರ್ವಾಧಿಕಾರಿಗರೂ ಅದನ್ನು ಏನಾದರೂ ಮಾಡಿ ನಿರ್ಮಿಸಬೇಕೆಂದು ಪ್ರಯತ್ನಿಸುತ್ತಲೇ ಇದ್ದಾರೆ. ಇದರಿಂದಾಗಿ ಉತ್ತರ ಕೊರಿಯಾ ಜೊತೆ ಉತ್ತಮ ಬಾಂಧವ್ಯ ಇಲ್ಲದ ದೇಶಗಳಿಗೆ ಭೀತಿ . ಅದರಲ್ಲಿಯೂ ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್‌ಗೆ ಇನ್ನಿಲ್ಲದ ಭೀತಿ. ಏನಾದರೂ ಮಾಡಿ ಪರಮಾಣು ಬಾಂಬ್ ನಿರ್ಮಿಸದಂತೆ ಮಾಡಬೇಕೆಂದು ಈ ದೇಶಗಳ ನಾಯಕರು ಪ್ರಯತ್ನಿಸುತ್ತಲೇ ಇದ್ದಾರೆ.
ಏನು ತಿಂದೆ?ಜನಮುಖಿ ತಂತ್ರಲೋಕ: ಕಪ್ಪೆಗಳ ವಿನಾಶ ತಡೆಯುವುದರಲ್ಲೇ ನಮ್ಮ ಕ್ಷೇಮವಿದೆರಾಹುಲ್‌ಗಿಂತ ಸೋನಿಯಾಗೇ ಮನ್ನಣೆ: ಪವಾರ್ಕತ್ತಲಿನ ಜಿಜ್ಞಾಸೆಸಂಪಾದಕೀಯ: ಪರ್ಯಾಯ ಮಾರ್ಗವೇ ಸೂಕ್ತ ಇಂದಿನ ಅಂಕಣಗಳು ಮತ್ತಷ್ಟು
ಜನಮುಖಿ ತಂತ್ರಲೋಕ: ಕಪ್ಪೆಗಳ ವಿನಾಶ ತಡೆಯುವುದರಲ್ಲೇ ನಮ್ಮ ಕ್ಷೇಮವಿದೆರಾಹುಲ್‌ಗಿಂತ ಸೋನಿಯಾಗೇ ಮನ್ನಣೆ: ಪವಾರ್ವರ್ತಮಾನ: ನಮಗೆ ಬೇಕು ಶೋಷಣೆ ಮುಕ್ತ ಸಮತೆಯ ಭಾರತಜೀನ್ಸ್ ಟಾಕ್‌: ಗಂಡುಬೀರಿಯಲ್ಲ ನಾ ಹಿಂದಿನಂತೆ ಇಲ್ಲ, ರಾಜ ಮುದ್ದು ರಾಜ...ನೆಲದ ನಂಟು: ತಲ್ಲಣಿಸದಿರು ಕಂಡ್ಯ ತಾಳು ಮನವೇ !?ಸುದ್ದಿಗಳ ಮೇಲೊಂದು ನೋಟದೇಶ-ವಿದೇಶ ಕರ್ನಾಟಕ ನಿಮ್ಮ ಜಿಲ್ಲೆ ಕ್ರೀಡೆ-ಕ್ರಿಕೆಟ್ ಧರ್ಮ-ಜ್ಯೋತಿಷ್ಯ ಸಿನಿಮಾ ವಾಣಿಜ್ಯ ವಿಚಾರ ಮಂಟಪ ಫೋಟೋ ಗ್ಯಾಲರಿ ವಿಕ ಅಪ್ಲಿಕೇಶನ್ ಬಳಸಿ, ತಾಜಾ ಸುದ್ದಿ ಪಡೆಯುತ್ತಿರಿ!ನಮ್ಮ ಇತರ ಸೈಟ್‌ಗಳುTimes of India| Economic Times | iTimes| Marathi News | Bangla News | Gujarati News| Tamil News | Telugu News | Malayalam News | Business Insider| ZoomTv | Gizmodo | Lifehacker | BoxTV| Gaana | Shopping | IDiva | Astrology | Matrimonialಫೇಸ್‌ಬುಕ್‌ನಲ್ಲಿ ವಿಕ
ಗಣೇಶ ಉತ್ಸವಕ್ಕೆ ಅಡ್ಡಿ ಇಲ್ಲ: ವಿದ್ಯಾಸಾಗರ | Prajavani
ಗಣೇಶ ಉತ್ಸವಕ್ಕೆ ಅಡ್ಡಿ ಇಲ್ಲ: ವಿದ್ಯಾಸಾಗರ
Published: 05 ಸೆಪ್ಟೆಂಬರ್ 2013, 12:49 IST
Updated: 05 ಸೆಪ್ಟೆಂಬರ್ 2013, 12:52 IST
ಬಾಗಲಕೋಟೆ: `ಗಣೇಶ ಉತ್ಸವವನ್ನು ಸಂಭ್ರಮದಿಂದ ಆಚರಿಸುವುದಕ್ಕೆ ಯಾರದೂ ಅಡ್ಡಿಯಿಲ್ಲ, ಆದರೆ, ಆಚರಣೆ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಆಗದಂತೆ ಎಚ್ಚರವಹಿಸಬೇಕು, ಧ್ವನಿವರ್ಧಕವನ್ನು ನಿಯಮಿತವಾಗಿ ಹಾಗೂ ನಿಗದಿಪಡಿಸಿದ ಅವಧಿಯಲ್ಲಿ ಬಳಸಬೇಕು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಗಜಾನನ ಹಬ್ಬದ ಅಂಗವಾಗಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
`ಆಚರಣೆ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸಿದರೆ, ಅಹಿತಕರ ಘಟನೆಗಳು ನಡೆದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.
`ಅಬ್ಬರದ ಧ್ವನಿವರ್ಧಕ ಹಾಕಿಕೊಂಡು ಅಶ್ಲೀಲವಾಗಿ ನೃತ್ಯ ಮಾಡುವುದು, ರಸ್ತೆ ನಡುವೆ ಪೆಂಡಾಲ್ ಹಾಕುವುದಾಗಲಿ, ರಸ್ತೆ ಬಂದ್ ಮಾಡುವುದಕ್ಕೆ ಅವಕಾಶ ಇಲ್ಲ' ಎಂದರು.
ಜಿಲ್ಲಾಧಿಕಾರಿ ಮನೋಜ್ ಜೈನ್, ಗಣೇಶ ಉತ್ಸವವನ್ನು ಶಾಂತಿ, ಸೌಹಾರ್ದದಿಂದ ಆಚರಿಸುವಂತೆ ಗಣೇಶ ಉತ್ಸವ ಮಂಡಳಿಯ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ತಿಳಿಸಿದರು.
`ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆಗೆ ಅನುಕೂಲವಾಗಿಸಲು ಏಕಗವಾಕ್ಷಿಯಡಿ ಹೆಸ್ಕಾಂ, ನಗರಸಭೆ, ಪೊಲೀಸ್ ಇಲಾಖೆಯಿಂದ ಅನುಮತಿ ಒದಗಿಸಿಕೊಡಲಾಗುವುದು' ಎಂದರು.
`ಗಣೇಶನ ವಿಸರ್ಜನೆಗೆ ಮಹಾರುದ್ರಪ್ಪನ ಹಳ್ಳ ಮತ್ತು ಸಿಮೆಂಟ್ ಕ್ವಾರಿಯಲ್ಲಿ ಅವಕಾಶ ಮಾಡಿಕೊಡಲಾಗುವುದು. ಜೊತೆಗೆ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶನ ವಿಸರ್ಜನೆಗೆ ನಗರದ ವಿವಿಧೆಡೆ 14 ಬಾವಿಗಳನ್ನು ಗುರುತಿಸಲಾಗಿದೆ' ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ. ರುದ್ರಗೌಡ, ಉಪ ವಿಭಾಗಾಧಿಕಾರಿ ವಣಿಕ್ಯಾಳ, ತಹಶೀಲ್ದಾರ್ ಸಿ.ಎಚ್.ಪಾಟೀಲ, ಸಿಪಿಐ ಅನಿಲ ಭೂಮರೆಡ್ಡಿ, ನಗರಸಭೆ ಸದಸ್ಯ ರಾಜೇಂದ್ರ ಬಳೂಲಮಠ, ಗೀತಾ ಪತ್ತೇಪೂರ, ಗೋವಿಂದ ಬಳ್ಳಾರಿ, ಅಶೋಕ ಲಿಂಬಾವಳಿ, ನಾಗರಾಜ ಹದ್ಲಿ, ಶಿವಕುಮಾರ ಮೇಲ್ನಾಡ, ಸಂಜೀವ ವಾಡಕರ, ಎ.ಎ.ದಂಡಿಯಾ, ರಝಾಕ್ ಹಳ್ಳೂರ, ಬಸವರಾಜ ಯಂಕಂಚಿ, ಅಶೋಕ ಮುತ್ತಿನಮಠ ಸೇರಿದಂತೆ ವಿವಿಧ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಕೊರೊನಾ ವೈರಸಿನ ರುದ್ರನರ್ತನದ ಪ್ರಶ್ನೆ: ಬದುಕಿನಲ್ಲಿ ಯಾವುದು ಮುಖ್ಯ? | ಸಂಪದ
ಕೊರೊನಾ ವೈರಸಿನ ರುದ್ರನರ್ತನದ ಪ್ರಶ್ನೆ: ಬದುಕಿನಲ್ಲಿ ಯಾವುದು ಮುಖ್ಯ?
By addoor on Thu, 12/31/2020 - 21:55
ವಸುದೈವ ಕುಟುಂಬ ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎನ್ನುತ್ತಿದ್ದೆವು. ಈ ಮಾತಿನ ಸತ್ಯ ಏನೆಂದು ಅರ್ಥವಾಗಬೇಕಾದರೆ ಕೊರೊನಾ ವೈರಸ್ (ಕೋವಿಡ್ ೧೯) ಎಂಬ ಕಣ್ಣಿಗೆ ಕಾಣದ ಜೀವಿ ರುದ್ರನರ್ತನ ಮಾಡಬೇಕಾಯಿತು.
ಜನವರಿ ೨೦೨೦ರ ಆರಂಭದಲ್ಲೇ ಚೀನಾದ ವುಹಾನ್ ಪ್ರ್ಯಾಂತ್ಯದಲ್ಲಿ ಶುರುವಾದ ಅದರ ಆಕ್ರಮಣ ಇದೀಗ ಇಡೀ ಜಗತ್ತಿಗೆ ವ್ಯಾಪಿಸಿದೆ. ವರುಷದ ಕೊನೇ ದಿನ ಜಗತ್ತಿನಲ್ಲಿ ಸೋಂಕಿತರ ಸಂಖ್ಯೆ ೮.೩೩ ಕೋಟಿ, ಸಾವಿನ ಸಂಖ್ಯೆ ೧೮.೧೬ ಲಕ್ಷ ದಾಟಿದೆ!
ಈ ವೈರಸ್ ಮನುಷ್ಯ ನಿರ್ಮಿತ ಭೇದಭಾವಗಳನ್ನೆಲ್ಲ ತೊಡೆದು ಹಾಕಿದೆ: ಶ್ರೀಮಂತರು, ಬಡವರು; ಪ್ರಭಾವಿಗಳು, ಅಸಹಾಯಕರು; ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ, ಬೌದ್ಧ; ಭಾರತದವರು, ಚೀನದವರು, ಇಟೆಲಿಯವರು, ಇರಾನಿನವರು; ಕಪ್ಪು, ಕಂದು, ಬಿಳಿ ಮೈಬಣ್ಣದವರು; ಏಷ್ಯಾದವರು, ಆಫ್ರಿಕದವರು, ಅಮೆರಿಕದವರು, ಯುರೋಪಿನವರು - ಇಂತಹ ವ್ಯತ್ಯಾಸಗಳನ್ನು ಕಡೆಗಣಿಸಿ, ಅದು ಎಲ್ಲರನ್ನೂ ಬಗ್ಗು ಬಡಿಯುತ್ತಿದೆ.
ಬ್ರಿಟನಿನ ಪ್ರಧಾನಿಗೂ, ಆರೋಗ್ಯ ಮಂತ್ರಿಗೂ, ರಾಜಕುಮಾರನಿಗೂ ವೈರಸ್ ಸೋಂಕು ತಗಲಿದೆ. ಸ್ಪೇಯ್ನಿನ ರಾಜಕುಮಾರಿ ವೈರಸ್ ಧಾಳಿಗೆ ಬಲಿ. "ಜಗತ್ತಿನ ಬಲಿಷ್ಠ ದೇಶ"ವೆಂದು ಬೀಗುತ್ತಿದ್ದ ಯುಎಸ್‌ಎ ದೇಶದಲ್ಲಿ ವರ್ಷಾಂತ್ಯದಲ್ಲಿ ಸೋಂಕಿತರ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕ (ಎರಡು ಕೋಟಿ ದಾಟಿದೆ), ಅಲ್ಲಿ ವೈರಸಿಗೆ ಬಲಿಯಾದವರೂ ಅತ್ಯಧಿಕ (೩,೫೧,೧೨೭).
ಈ ಭೂಮಿಯನ್ನು ಅಭಿವೃದ್ಧಿ ಪಡಿಸಿದವರು ನಾವು ಎಂದು ಅಹಂಕಾರದಿಂದಿದ್ದ ಮನುಷ್ಯರಿಗೆ ತನ್ನ ತಾಕತ್ತೇನೆಂದು ಪ್ರಕೃತಿ ತೋರಿಸಿ ಕೊಟ್ಟಿದೆ - ನಿಮ್ಮೆಲ್ಲರನ್ನೂ ಕೆಲವೇ ಗಂಟೆಗಳಲ್ಲಿ ಹೊಸಕಿ ಹಾಕುವ ತಾಕತ್ತು ತನಗಿದೆ ಎಂದು ಸಾಬೀತು ಪಡಿಸಿದೆ.
ಹವಾಮಾನ ಬದಲಾವಣೆಯಿಂದ ಭೂಮಿ ತತ್ತರಿಸುತ್ತಿದೆ. "ಪರಿಸರ ಮಾಲಿನ್ಯ ಹೆಚ್ಚುತ್ತಿದೆ, ಅದು ಜೀವಕ್ಕೇ ಕುತ್ತು, ಅದನ್ನು ನಿಯಂತ್ರಿಸಿ" ಅಂದಾಗೆಲ್ಲ ಉಡಾಫೆ ಮಾಡಿದೆವು. ಅದರ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಾಧ್ಯವಿರಲಿಲ್ಲವೇ? ಈಗ ಕಾರ್ಖಾನೆಗಳು ಮುಚ್ಚಿ, ವಾಹನಗಳು ಚಲಿಸದೆ ನಿಂತು, ಜಗತ್ತಿನ ಮಹಾನಗರಗಳಲ್ಲಿ ವಾಯುಮಾಲಿನ್ಯ ಹೇಗೆ ಕಡಿಮೆಯಾಗಿದೆ, ಗಮನಿಸಿ. ಅಂದರೆ, ಅದು ಸಾಧ್ಯವಿತ್ತು; ಆದರೆ ಯಾರೂ ತಯಾರಿರಲಿಲ್ಲ.
ಯಾಕೆ ಹೀಗಾಯಿತು? ಯಾಕೆಂದರೆ, ಪ್ರಗತಿ ಬಗ್ಗೆ ನಮ್ಮ ಕಲ್ಪನೆಗಳೇ ಪ್ರಶ್ನಾರ್ಹ. ಈ ಜಗತ್ತನ್ನು ಆಳುತ್ತಿರೋದು, ಬೃಹತ್ ಕಂಪೆನಿಗಳು ಮತ್ತು ಪ್ರಭಾವಿ ರಾಜಕಾರಣಿಗಳು. ಬೃಹತ್ ಕಂಪೆನಿಗಳಿಗೆ ಲಾಭದ ಕೊಳ್ಳೆ ಮತ್ತು ಅವುಗಳ ಷೇರುಗಳ ಮೌಲ್ಯವೃದ್ಧಿಯೇ ಮುಖ್ಯ! ಪ್ರಭಾವಿ ರಾಜಕಾರಣಿಗಳಿಗಂತೂ ಮುಂದಿನ ಚುನಾವಣೆ ಗೆಲ್ಲುವುದೇ ಮುಖ್ಯ. ಅದರಿಂದಾಗಿ ಅವರ "ಮುಂದಾಲೋಚನೆ" ಮುಂದಿನ ನಾಲ್ಕೈದು ವರುಷಗಳ ವರೆಗೆ ಮಾತ್ರ!
ಅವರೆಲ್ಲರೂ ಈಗ ತತ್ತರಿಸಿದ್ದಾರೆ. ಯಾಕೆಂದರೆ, ವೈರಸಿನ ಧಾಳಿ ಇಲ್ಲಿ, ಈ ಕ್ಷಣದಲ್ಲಿ ನಮಗೆಲ್ಲರಿಗೂ ಮುಖಾಮುಖಿ. ಕಳೆದ ವರುಷ (೨೦೧೯) ಗ್ರೀನ್‌ಲ್ಯಾಂಡಿನಲ್ಲಿ ೬೦೦ ಬಿಲಿಯನ್ ಟನ್ ತೂಕದ ಮಂಜುಗಡ್ಡೆ ಕರಗಿದೆ. ಇದು ಹಿಂದಿನ ಹಲವು ವರುಷಗಳಿಗೆ ಹೋಲಿಸಿದಾಗ ಇಮ್ಮಡಿಗಿಂತ ಅಧಿಕ. ಇದರಿಂದಾಗಿ ಸಮುದ್ರದ ನೀರಿನ ಮಟ್ಟ ೨.೨ ಮಿಮೀ ಏರಿಕೆಯಾಗಿದೆ ಎಂದು ಪರಿಸರ ತಜ್ನರು ಎಚ್ಚರಿಸಿದರು. ಆಗ "ಅಷ್ಟೇ ತಾನೇ, ಅದೇನು ಹೆಚ್ಚಲ್ಲ ಬಿಡಿ" ಎಂದವರು ಹಲವರು! ವರುಷದಿಂದ ವರುಷಕ್ಕೆ ಬೇಸಗೆಯಲ್ಲಿ ಉಷ್ಣತೆ ಹೆಚ್ಚುತ್ತಿದೆ; ಇದರಿಂದಾಗಿ ಮಾನವ ಜನಾಂಗದವರೆಲ್ಲ ಬೆಂಕಿಬಾಣಲೆಯಲ್ಲಿನ ಕಪ್ಪೆಗಳಂತೆ ಬೆಂದು ಹೋಗಲಿದ್ದಾರೆ ಎಂದು ಪರಿಸರ ತಜ್ನರು ಎಚ್ಚರಿಸಿದರು. ಆಗಲೂ, "ಅದೇನು ಪರವಾಗಿಲ್ಲ ಬಿಡಿ. ಎಲ್ಲ ಕಡೆ ಏರ್- ಕಂಡಿಷನ್ ವ್ಯವಸ್ಥೆ ಮಾಡೋಣ" ಎಂದವರು ಅನೇಕರು. ಅಂದರೆ, ವಾತಾವರಣದಲ್ಲಿನ ವಿಪರೀತ ಬದಲಾವಣೆಗಳು ಏನೂ ಅಲ್ಲ ಎಂದು ನಾಟಕ ಮಾಡಿ, ಅನಂತರ ಆ ಬದಲಾವಣೆಗಳು ಆಗುತ್ತಲೇ ಇಲ್ಲ ಎಂದ ಯುಎಸ್‌ಎ ದೇಶದ ಅಧ್ಯಕ್ಷ ಟ್ರಂಪ್ ಏನೆಂದಿದ್ದರು? "ಯುಎಸ್‌ಎ ದೇಶದಲ್ಲಿ ಕೊರೊನಾ ವೈರಸಿನಿಂದಾಗಿ ಒಂದೂವರೆ - ಎರಡೂವರೆ ಲಕ್ಷ ಜನರು ಸಾಯಬಹುದು" ಎಂದಿದ್ದರು. ಸತ್ಯವನ್ನು ಒಪ್ಪಿಕೊಳ್ಳದಿದ್ದರೆ ಏನಾಗುತ್ತದೆ ಎಂಬುದನ್ನು ಪ್ರಕೃತಿ ತೋರಿಸಿ ಕೊಟ್ಟಿದೆ, ಅಲ್ಲವೇ?
ಶ್ರೀಮಂತರಿಗೆ ಕೊರೊನಾ ವೈರಸಿನ ಧಾಳಿಯಿಂದ ಏನೂ ಆಗಲಿಕ್ಕಿಲ್ಲ; ಅವರ ಸಂಪತ್ತು ಸ್ವಲ್ಪ ಕಡಿಮೆಯಾದೀತು, ಅಷ್ಟೇ. ಮಧ್ಯಮ ವರ್ಗದವರ ಆದಾಯ ಸ್ಪಲ್ಪ ಕಡಿಮೆಯಾದೀತು; ಅವರಿಗೆ ತಮ್ಮ ಸಾಲಗಳ ಕಂತು ಕಟ್ಟಲು ಕಷ್ಟವಾದೀತು. ಕೂಲಿಕಾರ್ಮಿಕರಿಗೆ ಮಾತ್ರ ಬದುಕುವುದೇ ಕಷ್ಟವಾದೀತು; ಯಾಕೆಂದರೆ ಅವರಿಗೆ ದಿನದಿನದ ಮಜೂರಿ ಸಿಕ್ಕುವುದಿಲ್ಲ; ಆಹಾರ ಸಿಕ್ಕುವುದೂ ದುಸ್ತರವಾದೀತು. ಢೆಲ್ಲಿಯಿಂದ ತಮ್ಮತಮ್ಮ ಊರುಗಳಿಗೆ ಮರಳಿ ಗುಳೇ ಹೊರಟ ಆರು ಲಕ್ಷ ಕೂಲಿಕಾರ್ಮಿಕರ ಪಾಡು ನಮ್ಮೆಲ್ಲರ ಕಣ್ಣು ತೆರೆಸಬೇಕು.
ಅಂತೂ, ಲಾಕ್‌ಡೌನ್ ಸಮಯದಲ್ಲಿ ಯಾರನ್ನೂ ಸಂಪರ್ಕಿಸಲು ಸಾಧ್ಯವಿರಲಿಲ್ಲ. ಅನಂತರವೂ ಬಹುಪಾಲು ಜನರು ಭಯದಿಂದ ಯಾರನ್ನೂ ಸಂಪರ್ಕಿಸುತ್ತಿಲ್ಲ. ಆದ್ದರಿಂದ ಇದು ಎಲ್ಲರೂ ತಮ್ಮ ಬದುಕನ್ನೊಮ್ಮೆ ಅವಲೋಕಿಸಬೇಕಾದ ಸಮಯ. ಬದುಕಿನ ಪರಮಗುರಿಗಳೆಂದು ಬಹುಪಾಲು ಜನರು ನಂಬಿದ್ದೆಲ್ಲವೂ ಬುಡಮೇಲಾಗಿದೆ. ಸ್ವಂತ ಮನೆ, ಸೈಟುಗಳು, ದೊಡ್ಡ ಕಾರುಗಳು, ಬಂಗಾರದ ಒಡವೆಗಳು, ಇಲೆಕ್ಟ್ರಾನಿಕ್ ಸಾಧನಗಳು, ಐಷಾರಾಮಿ ಉಡುಪುಗಳು, ಕಂಪೆನಿ ಷೇರುಗಳು - ಇಂಥವೆಲ್ಲ ಸಂಪತ್ತೆಂಬ ಭ್ರಾಂತಿಗಳೆಲ್ಲವೂ ತಲೆಕೆಳಗಾಗಿವೆ.
ಹಾಗಾದರೆ, ಜೀವಿಸಲು ಹಣ ಬೇಡವೇ? ಎಂಬ ಪ್ರಶ್ನೆ ಹಲವರದು. ಹಣ ಬೇಕು. ಆದರೆ ಹಣ ಯಾಕೆ ಬೇಕು ಎಂದು ಈಗಲಾದರೂ ಯೋಚಿಸಬೇಕು. ಆಹಾರ, ಉಡುಪು, ವಸತಿಗಾಗಿ ಹಣ ಬೇಕು; ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ವೆಚ್ಚಗಳಿಗಾಗಿ ಹಣ ಬೇಕು; ವೃದ್ಧಾಪ್ಯದ ದಿನಗಳ ಖರ್ಚಿಗಾಗಿಯೂ ಹಣ ಬೇಕು. ಅಂದರೆ, ದಿನನಿತ್ಯದ ಜೀವನವೆಚ್ಚ, ಆರೋಗ್ಯ ರಕ್ಷಣೆ, ಮಕ್ಕಳ ಜವಾಬ್ದಾರಿ ನಿರ್ವಹಣೆ ಮತ್ತು ಭವಿಷ್ಯದ ಭದ್ರತೆಗಾಗಿ ಹಣ ಅಗತ್ಯ. ಇವೆಲ್ಲವನ್ನು ಪೂರೈಸುವಷ್ಟು ಹಣ (ಸಂಪತ್ತು) ಕೂಡಿ ಹಾಕಿದ ನಂತರವೂ ಹಣ ಗಳಿಕೆಯ ಜಂಜಡದಲ್ಲೇ ಮುಳುಗಿ, ಗುಡ್ಡೆ ಹಾಕಿಕೊಳ್ಳುವ ಹಣ ಏತಕ್ಕೆ? (ನಿವೃತ್ತರಾಗಿ, ಪಿಂಚಣಿ ಪಡೆಯುವ ಸಾವಿರಾರು ಜನರು ಇನ್ನೊಂದು ಉದ್ಯೋಗಕ್ಕಾಗಿ ಹಪಹಪಿಸುವುದನ್ನು ಕಂಡಿದ್ದೀರಾ?)
ನೆನಪಿರಲಿ, ಹಾಗೆ ಗುಡ್ಡೆ ಹಾಕಿಕೊಂಡ ಹಣ ಯಾವ ಉಪಯೋಗಕ್ಕೂ ಬಾರದೆ ಹೋದೀತು. ಯಾಕೆಂದರೆ, ಬದುಕಿನಲ್ಲಿ ಮೂಲಭೂತ ಅಗತ್ಯಗಳು ಮತ್ತು ಭದ್ರತೆ - ಇವನ್ನು ಸಾಧಿಸಿದ ನಂತರವಾದರೂ, ಇವೆಲ್ಲಕ್ಕಿಂತ ಮಿಗಿಲಾದದ್ದರ ಬಗ್ಗೆ ಗಮನ ಹರಿಸಬೇಕು - ಅದುವೇ ನೆಮ್ಮದಿ.
ಇದೀಗ, ನಮ್ಮನಮ್ಮ ಬದುಕಿನ ನೆಮ್ಮದಿಗಾಗಿ ಹೆಜ್ಜೆಯಿಡಬೇಕಾದ ಹೊತ್ತು ಬಂದಿದೆ. ನಮಗೆ ಅತ್ಯಂತ ಖುಷಿ ಕೊಡುವ ಚಟುವಟಿಕೆಗಳಲ್ಲಿ ಆಗಾಗ / ದಿನದಿನವೂ ತೊಡಗಿಕೊಳ್ಳುವ ಸಮಯ ಬಂದಿದೆ: ಒಳ್ಳೆಯ ಪುಸ್ತಕಗಳ ಓದು; ಮುದ ನೀಡುವ ಸಂಗೀತ ಕೇಳುವುದು; ಸಂಗೀತ ಸಾಧನಗಳ ನುಡಿಸುವಿಕೆ; ಚಿಂತನೆಗೆ ಹಚ್ಚುವ ಉಪನ್ಯಾಸ ಹಾಗೂ ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದು/ ನೋಡುವುದು; ಸಮುದಾಯದ ಚಟುವಟಿಕೆಗಳಲ್ಲಿ ಭಾಗವಹಿಸುವುದು; ಕೈತೋಟ ಮತ್ತು ಚಾವಣಿ ಕೃಷಿಕೆಲಸಗಳಲ್ಲಿ ತೊಡಗುವುದು; ನಮ್ಮ ಕೌಶಲ್ಯಗಳನ್ನು (ಹೊಲಿಗೆ, ರಂಗೋಲಿ, ತಿನಿಸು ತಯಾರಿ, ಅಡುಗೆ ಇತ್ಯಾದಿ) ಅಗತ್ಯವಿದ್ದವರಿಗೆ ಕಲಿಸುವುದು; ನಾಟಕ, ಏಕಪಾತ್ರಾಭಿನಯ, ತಾಳಮದ್ದಲೆ, ಯಕ್ಷಗಾನ, ಭಜನೆ, ಚಿತ್ರಕಲೆ, ನೃತ್ಯ ಇಂತಹ ಕಲೆಗಳಲ್ಲಿ ಸಾಧನೆ; ಯೋಗ, ಪ್ರಾಣಾಯಾಮ, ಧ್ಯಾನ ಇತ್ಯಾದಿ.
ಈಗಲಾದರೂ ಒಪ್ಪಿಕೊಳ್ಳೋಣ: ನಮಗೆ ಸಿಕ್ಕಿರುವುದು ಇದೊಂದೇ ಬದುಕು. ಈ ಬದುಕಿನ ಅವಧಿ ಸೀಮಿತ. ಆದ್ದರಿಂದ, ಕೊರೊನಾ ವೈರಸಿನಂತಹ ಮಹಾಮಾರಿ ಮನೆಯ ಕದ ತಟ್ಟಿದ ವರುಷ ೨೦೨೦ರ ಮುಕ್ತಾಯದ ದಿನ, ಹೊಸ ವರುಷದ ಹೊಸ್ತಿಲಲ್ಲಿ ನಿಂತಿರುವಾಗ, ಬದುಕಿನಲ್ಲಿ ಎಲ್ಲದಕ್ಕಿಂತ ಮುಖ್ಯವಾದ ನೆಮ್ಮದಿಗಾಗಿ ದಿನದಿನವೂ ಸಮಯ ಮೀಸಲಿಡುವ ಸಂಕಲ್ಪ ಮಾಡೋಣ. ಈಗಲೂ ಆ ಸಂಕಲ್ಪ ಮಾಡದಿದ್ದರೆ ಇನ್ಯಾವಾಗ ಮಾಡುವುದು?