text stringlengths 0 61.5k |
|---|
ಏನ್ ಕೆಲ್ಸ ಮಾಡಿದ್ದಾರೆ ಅಂತ ಬಿಜೆಪಿಗೆ ವೋಟ್ ಹಾಕ್ತೀರಾ? ಸಿದ್ದರಾಮಯ್ಯ | Siddaramaiah badami asked why you people voted bjp i do not understant - Kannada Oneindia |
6 min ago ಅನರ್ಹರನ್ನು ಸೋಲಿಸಲು ಬಿಜೆಪಿಯಲ್ಲೇ ಟೀಂ ರೆಡಿ: ಏನಿದು ಶಾಕಿಂಗ್ ಹೇಳಿಕೆ? |
| Published: Thursday, June 27, 2019, 13:25 [IST] |
ಬಾಗಲಕೋಟೆ, ಜೂನ್ 27: ಕೆಲಸ ನಾವು ಮಾಡುತ್ತೀವಿ, ಆದರೆ ನೀವು ಬಿಜೆಪಿಗೆ ವೋಟ್ ಹಾಕ್ತೀರಿ. ಏಕೆ ಎಂದು ಗೊತ್ತಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಯಲ್ಲಿ ಕಿಡಿಕಾರಿದರು. |
ಬಾದಾಮಿ ತಾಲ್ಲೂಕಿನ ಆಲೂರ ಎಸ್ಕೆ ಗ್ರಾಮದಲ್ಲಿನ ಗ್ರಾಮ ಪಂಚಾಯಿತಿ ಕಟ್ಟಡದ ಗುದ್ದಲಿಪೂಜೆ ಸಮಾರಂಭದ ವೇಳೆ ಗುರುವಾರ ಅವರು ಮಾತನಾಡಿದರು. |
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬುಧವಾರ ರಾಯಚೂರಿನಲ್ಲಿ ಪ್ರತಿಭಟನಾಕಾರರ ವಿರುದ್ಧ ಮೋದಿಗೆ ವೋಟ್ ಹಾಕಿ ಸಮಸ್ಯೆಗೆ ನನ್ನ ಬಳಿ ಪರಿಹಾರ ಕೇಳ್ತೀತಿ ಎಂದು ಕಿಡಿಕಾರಿದ್ದರು. ಈಗ ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತ ಹಾಕಿದ್ದಕ್ಕೆ ಬಾದಾಮಿ ಕ್ಷೇತ್ರದ ಜನರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. |
ಇದಕ್ಕೂ ಮೊದಲು ಬಾದಾಮಿಗೆ ತೆರಳುತ್ತಿದ್ದ ಸಿದ್ದರಾಮಯ್ಯ ಅವರ ಕಾರ್ಗೆ ಬೀರನೂರು ಕ್ರಾಸ್ ಬಳಿ ಗ್ರಾಮಸ್ಥರು ಮುತ್ತಿಗೆ ಹಾಕಿದರು. ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿಗೆ ಮುಗಿಬಿದ್ದರು. ಕಾರಿನಿಂದ ಕೆಳಗಿಳಿದ ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು. |
ಅಭಿವೃದ್ಧಿ ಮಾಡಿದವರಿಗೆ ವೋಟ್ ಹಾಕೊಲ್ಲ |
ನಾವು ಇಷ್ಟೆಲ್ಲಾ ಅಭಿವೃದ್ಧಿಗಳನ್ನು ಮಾಡಿದ್ದೇವೆ. ಅನೇಕ ಯೋಜನೆ, ಅನುದಾನಗಳನ್ನು ನೀಡಿದ್ದೇವೆ. ಆದರೆ, ಅಭಿವೃದ್ಧಿ ಮಾಡಿದವರಿಗೆ ನೀವು ವೋಟ್ ಹಾಕೊಲ್ಲ. ಏನೂ ಮಾಡದ ಬಿಜೆಪಿಯವರಿಗೆ ವೋಟ್ ಹಾಕ್ತೀರಿ. ನೀವೇಕೆ ಹೀಗೆ ಮಾಡ್ತೀರಿ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. |
ಯಾರು ನೀನು? ಬಿಜೆಪಿಯವ್ನಾ? |
ಸಿದ್ದರಾಮಯ್ಯ ಅವರ ಭಾಷಣ ವೇಳೆ ವ್ಯಕ್ತಿಯೊಬ್ಬರು ಮಾತನಾಡಲು ಮುಂದಾದರು. ಆಗ 'ಏಯ್ ಯಾರಪ್ಪ ನೀನು? ಬಿಜೆಪಿಯವ್ನಾ? ಸುಮ್ನೆ ಇರಪ್ಪ' ಎಂದು ರೇಗಿದರು. |
ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 9 ಸಾವಿರ ಲೀಡ್ ದೊರಕಿತ್ತು. ಇದು ಅವರಿಗೆ ಆಘಾತ ಉಂಟುಮಾಡಿದೆ. ಅವರೇನು ಕೆಲಸ ಮಾಡಿದ್ದಾರೆಂದು ಅವರಿಗೆ ವೋಟ್ ಹಾಕ್ತೀರಿ? ಎಂದು ಜನರನ್ನು ಪ್ರಶ್ನಿಸಿದರು. |
ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಲು ನಕಾರ |
ಇದಕ್ಕೂ ಮೊದಲು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೋದಿ ಅವರಿಗೆ ಮತ ಹಾಕುತ್ತೀರ ಎಂಬ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂದು ತಿಳಿದಿಲ್ಲ. ಗೊತ್ತಿಲ್ಲದೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ತಮ್ಮ ಹೇಳಿಕೆಗೆ ಅವರೇ ಕ್ಷಮೆಯಾಚಿಸಿದ್ದಾರೆ ಎಂದರು. |
ನಮಗೆ ದಿವ್ಯಜ್ಞಾನವಿಲ್ಲ |
ಮಧ್ಯಂತರ ಚುನಾವಣೆ ನಡೆಸುವುದು ಸೂಕ್ತ ಎಂಬ ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಅವರ ಹೇಳಿಕೆಗೆ ಟಾಂಗ್ ನೀಡಿದ ಅವರು, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಪ್ರಶ್ನೆಯೇ ಇಲ್ಲ. ಚುನಾವಣೆ ನಡೆಯಲಿದೆ ಎಂದು ಹೇಳುವವರಿಗೆ ದಿವ್ಯಜ್ಞಾನ ಇರಬಹುದು. ಆದರೆ, ನಮಗೆ ಆ ಜ್ಞಾನವಿಲ್ಲ ಎಂದು ಹೇಳಿದರು. |
ಮೈತ್ರಿ ಮಾಡಿಕೊಂಡಿದ್ದೇ ಕಾರಣವಲ್ಲ |
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣವಲ್ಲ. ಸೋಲಿಗೆ ಮೈತ್ರಿಯೂ ಒಂದು ಕಾರಣ ಎಂದು ಕಾಂಗ್ರೆಸ್ನ ಕೆಲವು ನಾಯಕರು ಹೇಳಿದ್ದಾರೆ. ನಿನ್ನೆ ನಡೆದ ಸಭೆಯಲ್ಲಿ ಸೋಲಿನ ಪರಾಮರ್ಶೆಯಾಗಿದೆ. ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸಬೇಕಾಗಿದೆ. ಹೀಗಾಗಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇವೆ ಎಂದು ತಿಳಿಸಿದರು. |
siddaramaiah bagalkot badami bjp congress ಸಿದ್ದರಾಮಯ್ಯ ಬಾಗಲಕೋಟೆ ಬಾದಾಮಿ ಬಿಜೆಪಿ ಕಾಂಗ್ರೆಸ್ |
Former CM Siddaramaiah in Badami said, 'our government did development with various projects but you people are voting for BJP, i don't understand why it is'. |
ದಿನಾಂಕ :29/07/2020 ರ ಅಪರಾಧ ಪ್ರಕರಣಗಳು | Chikkaballapura District Police |
ದಿನಾಂಕ :29/07/2020 ರ ಅಪರಾಧ ಪ್ರಕರಣಗಳು |
ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 177/2020 ಕಲಂ. 78(I),78(3) ಕೆ.ಪಿ ಆಕ್ಟ್:- |
ದಿ: 25-07-2020 ರಂದು ಮದ್ಯಾಹ್ನ 3:45 ಗಂಟೆಗೆ ಮಾನ್ಯ ಡಿವೈ.ಎಸ್.ಪಿ ಸಾಹೇಬರವರು ಆರೋಪಿ, ಮಹಜರ್ ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ಈ ದಿನ ದಿ: 25-07-2020 ರಂದು ನಾನು ಮತ್ತು ನನ್ನ ಕಛೇರಿಯ ಸಿಬ್ಬಂಧಿಯಾದ ಹೆಚ್.ಸಿ 205 ರಮೇಶ ಮತ್ತು ಪಿ.ಸಿ 286 ಗೌತಮ್ ರಾಜ್ ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆ.ಎ-40-ಜಿ-1555 ರಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಕಡೆ ಗಸ್ತಿನಲ್ಲಿ ಇದ್ದಾಗ, ಮದ್ಯಾಹ್ನ ಸುಮಾರು 2:00 ಗಂಟೆಯಲ್ಲಿ ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಉರ್ಧುಶಾಲೆ ಸಮೀಪದಲ್ಲಿ ಇದ್ದಾಗ, ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಅಲ್ಲಿಯೇ ಇದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು ನಾವು ಮತ್ತು ಪಂಚಾಯ್ತಿದಾರರು ಬಾಗೇಪಲ್ಲಿ ಪಟ್ಟಣದ ಉರ್ಧುಶಾಲೆ ಮುಂಭಾಗ, ಇರುವ ನಂಜಿರೆಡ್ಡಿ ಬಿನ್ ಲೇಟ್ ನಾರಾಯಣರೆಡ್ಡಿ, 35 ವರ್ಷ, ಒಕ್ಕಲಿಗರು, ಪಾನ್ ಬೀಡಾ ಅಂಗಡಿ ವಾಸ ಎಗವಬಂಡ್ಲಕೆರೆ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ ಅಂಗಡಿಯಲ್ಲಿ [ಪಾನ್ ಬೀಡಾ] ಸಾರ್ವಜನಿಕರಿಂದ ಹಣವನ್ನು ಪಡೆದು ನಿಷೇಧಿತ ಅಕ್ರಮ ಮಟ್ಕಾ ಜೂಜಾಟದ ಅಂಕಿಗಳನ್ನು ಬರೆಯುತ್ತಿದ್ದ, ಮೇಲ್ಕಂಡ ಆಸಾಮಿ ಮತ್ತು ಜೂಜಾಟಕ್ಕೆ ಬಳಸಿದ್ದ 1] ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ ಮಟ್ಕಾ ಅಂಕಿಗಳ ಚೀಟಿ 2] ಒಂದು ಬಾಲ್ ಪಾಯಿಂಟ್ ಪೆನ್ನು 3] ಮಟ್ಕಾ ಅಂಕಿಗಳನ್ನು ಬರೆದಿರುವುದರಿಂದ ಬಂದಂತಹ ಒಟ್ಟು 5250/- [ ಐದು ಸಾವಿರ ಇನ್ನೂರ ಐವತ್ತು ರೂಗಳು] ಗಳನ್ನು ಕೇಸಿನ ಮುಂದಿನ ಕ್ರಮಕ್ಕಾಗಿ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲುಗಳನ್ನು ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲುಗಳನ್ನು ಮತ್ತು ಆರೋಪಿತನನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ, ಎಂದು ನೀಡಿದ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ಉಲ್ಲೇಖ ಸಂಖ್ಯೆ: 447/2020 ರೀತ್ಯ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆರೋಪಿತನ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳುವ ಸಲುವಾಗಿ ಘನ ನ್ಯಾಯಾಲಯದ ಅನುಮತಿ ನೀಡಲು ಕೋರಿ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 28-07-2020 ರಂದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ. |
ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 73/2020 ಕಲಂ. 408,409,420,468,471 ಐ.ಪಿ.ಸಿ:- |
ದಿನಾಂಕ: 28/07/2020 ರಂದು ಶಿಡ್ಲಘಟ್ಟ ತಾಲ್ಲೂಕು, ಈ.ತಿಮ್ಮಸಂದ್ರ ಬ್ಯಾಂಕ್ ನ ಶಾಖಾಧಿಕಾರಿಯಾದ ಶ್ರೀ. ಬಿ. ಚಂದ್ರಶೇಖರ ಬಿನ್ ಬಿ.ರಾಮಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು 02/01/2020 ರಿಂದ ಈ.ತಿಮ್ಮಸಂದ್ರ ಕೆನರಾ ಬ್ಯಾಂಕಿನಲ್ಲಿ ಶಾಖಾಧಿಕಾರಿಯಾಗಿ ಕೆಲಸ ಮಾಡಿಕೊಂಡಿರುತ್ತೇನೆ. ಇದೇ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಾಖಾ ವ್ಯವಸ್ಥಾಪಕರಾದ ಶ್ರೀ. ಕೆ. ಶ್ರೀನಿವಾಸರೆಡ್ಡಿ ಬಿನ್ ವೆಂಕಟರೆಡ್ಡಿ, ಬಿ.ವಿ.ಆರ್ ಕಾಂಪ್ಲೆಕ್ಸ್, ದಿಬ್ಬೂರಹಳ್ಳಿ ಮುಖ್ಯ ರಸ್ತೆ ರವರು ಬ್ಯಾಂಕಿನಲ್ಲಿ ಓ.ಡಿ ಖಾತೆಗಳನ್ನು ಹೊಂದಿರುವ ವೆಂಕಿ ಮೊಬೈಲ್ಸ್ ರವರ ಖಾತೆ ನಂ 4441261000016 , ಮಧು ಎಲೆಕ್ಟ್ರಾನಿಕ್ಸ್ ಖಾತೆ ಸಂ. 4441261000003 ಮತ್ತು ಕೆ.ಎಂ. ವೆಂಕಟರೆಡ್ಡಿ ಓಡಿ.ಖಾತೆ ನಂ 4441261000020 ಈ ಮೂರೂ ಖಾತೆಗಳಲ್ಲಿನ ಗ್ರಾಹಕರ ಓ.ಡಿ .ಮಿತಿಯನ್ನು ಸದರೀ ಗ್ರಾಹಕರ ಗಮನಕ್ಕೆ ಬಾರದಂತೆ ಏರಿಕೆ ಮಾಡಿ ಸದರೀ ಗ್ರಾಹಕರ ಒಪ್ಪಿಗೆಯಿಲ್ಲದೇ ಅವರ ಓ.ಡಿ ಖಾತೆಗಳಿಂದ ದಿನಾಂಕ:17/10/2019 ರಿಂದ ದಿನಾಂಕ06/06/2020 ರವರೆಗೆ ಒಟ್ಟು 9,15,000/= ರೂಗಳನ್ನು ಅಕ್ರಮವಾಗಿ ಪಡೆದು ದುರುಪಯೋಗಪಡಿಸಿಕೊಂಡಿದ್ದು ಈ ಬಗ್ಗೆ ಗ್ರಾಹಕರು ಶಾಖೆಗೆ ದೂರನ್ನು ನೀಡಿದ್ದು ಸದರೀ ಖಾತೆಗಳನ್ನು ಪರಿಶೀಲನೆ ಮಾಡಿದಾಗ ಅಕ್ರಮಗಳು ಪತ್ತೆಯಾಗಿದ್ದು ಬ್ಯಾಂಕಿನ ಉನ್ನತಾಧಿಕಾರಿಗಳು ಕೆ. ಶ್ರೀನಿವಾಸರೆಡ್ಡಿರವರನ್ನು ದಿನಾಂಕ: 09/06/2020 ರಂದು ಸೇವೆಯಿಂದ ಅಮಾನತ್ತು ಮಾಡಿರುತ್ತಾರೆ. ಮೇಲ್ಕಂಡ ಖಾತೆದಾರರ ಖಾತೆಗಳಿಂದ ಅಕ್ರಮವಾಗಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಚೆಕ್ , ಡೆಬಿಟ್ ಸ್ಲಿಪ್ ಮತ್ತು ಮಿಸ್ಲೇನಿಯಸ್ ಟ್ರಾನ್ಸ್ ಫರ್ ಮೂಲಕ 9,15,000 /= ರೂಪಾಯಿಗಳ ಹಣ ಅವ್ಯವಹಾರ ಮಾಡಿದ್ದು ಶಾಖಾ ವ್ಯವಸ್ಥಾಪಕರಾದ ಕೆ.ಶ್ರೀನಿವಾಸರೆಡ್ಡಿ ಬಿನ್ ವೆಂಕಟರೆಡ್ಡಿ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ. |
ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 74/2020 ಕಲಂ. 279,337 ಐ.ಪಿ.ಸಿ:- |
ದಿನಾಂಕ 29/07/2020 ರಂದು ಬೆಳಿಗ್ಗೆ 9.00 ಗಂಟೆಗೆ ಪಿರ್ಯಧಿದಾರರಾದ ಶ್ರೀ ಬಿ.ಎಸ್ ನಾರಾಯಣಸ್ವಾಮಿ ಬಿನ್ ಸುಬ್ಬಣ್ಣ, 59 ವರ್ಷ, ವಕ್ಕಲಿಗರು, ಜಿರಾಯ್ತಿ, ಬಚ್ಚನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ತನ್ನ ತಂಗಿಯಾದ ಬೈರಮ್ಮರವರನ್ನು ಮುಮ್ಮನಹಳ್ಳಿ ಗ್ರಾಮದ ವಾಸಿ ಚೌಡರೆಡ್ಡಿರವರಿಗೆ ಕೊಟ್ಟು ಮದುವೆ ಮಾಡಿದ್ದು ಇವರಿಗೆ ಮೂರು ಜನ ಗಂಡು ಮಕ್ಕಳಿರುತ್ತಾರೆ. ಇವರ ಹಿರಿಯ ಮಗನಾದ ಮಹೇಶ. ಎಂ.ಸಿ ಬಿನ್ ಚೌಡರೆಡ್ಡಿ, 32 ವರ್ಷ ರವರು ಜಿರಾಯ್ತಿ ಮಾಡಿಕೊಂಡಿದ್ದು ಆತನ ಕುಟುಂಬದೊಂದಿಗೆ ಮುಮ್ಮನಹಳ್ಳಿ ಗ್ರಾಮದಲ್ಲಿಯೇ ವಾಸವಾಗಿರುತ್ತಾನೆ. ದಿನಾಂಕ: 28/07/2020 ರಂದು ತಾನು ದಿಬ್ಬೂರಹಳ್ಳಿ ವೃತ್ತದಲ್ಲಿದ್ದಾಗ ಮಹೇಶರವರಿಗೆ ದಿಬ್ಬೂರಹಳ್ಳಿ – ಕುದಪಕುಂಟೆ ಗ್ರಾಮಗಳ ಮಧ್ಯೆ ಇರುವ ಮೋರಿಯ ಬಳಿ ಅಫಘಾತವಾಗಿರುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದು ಕೂಡಲೇ ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ಕಾರು ಮತ್ತು ದ್ವಿಚಕ್ರವಾಹನಕ್ಕೆ ಅಫಘಾತವಾಗಿದ್ದು ಮಹೇಶನ ಬಲಕಾಲಿಗೆ ತೀವ್ರ ತರವಾದ ರಕ್ತಗಾಯ ಹಾಗು ಎಡಕಾಲಿನ ಬೆರಳಿಗೆ ರಕ್ತಗಾಯಗಳಾಗಿ ರಸ್ತೆಯಲ್ಲಿ ಬಿದ್ದು ಹೋಗಿದ್ದನು. ತಾನು ಈ ಬಗ್ಗೆ ಮಹೇಶರವರನ್ನು ವಿಚಾರ ಮಾಡಲಾಗಿ ತಾನು ಕೆಲಸದ ನಿಮಿತ್ತ ದಿಬ್ಬೂರಹಳ್ಳಿಗೆ ಬರಲು ತನ್ನ ಬಾಬತ್ತು KA-40-Y9360 ಸೂಪರ್ ಸ್ಪ್ಲೆಂಡರ್ ದ್ವಿಚಕ್ರ ವಾಹನದಲ್ಲಿ ನಮ್ಮ ಗ್ರಾಮದಿಂದ ಸುಮಾರು 9.40 ಗಂಟೆ ಸಮಯದಲ್ಲಿ ಕುದಪಕುಂಟೆ ಬಿಟ್ಟು ಬರುತ್ತಿದ್ದಾಗ ದಿಬ್ಬೂರಹಳ್ಳಿ ಕಡೆಯಿಂದ ಬಂದ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಗಾಯಪಡಿಸಿರುತ್ತಾನೆಂತ ತಿಳಿಸಿರುತ್ತಾನೆ. ಕಾರು ಮತ್ತು ದ್ವಿಚಕ್ರ ವಾಹನಗಳು ರಸ್ತೆಯ ಪಶ್ಚಿಮ ದಿಕ್ಕಿಗೆ ರಸ್ತೆಯ ಪಕ್ಕದ ಗಿಡಗಳಲ್ಲಿ ಬಿದ್ದಿದ್ದು ಎರಡೂ ಜಖಂಗೊಂಡಿರುತ್ತೆ. ಕಾರಿನ ನಂಬರ್ ನೋಡಲಾಗಿ KA-05-MZ-6547 ಆಗಿರುತ್ತೆ ಅಫಘಾತ ಪಡಿಸಿದ ಚಾಲಕನ ಹೆಸರು ವಿಳಾಸ ಗೊತ್ತಿರುವುದಿಲ್ಲ. ಗಾಯಗೊಂಡಿದ್ದ ಮಹೇಶರವರನ್ನು ತಾನು ಮತ್ತು ಚೌಡರೆಡ್ಡಿಹಳ್ಳಿ ಗ್ರಾಮದ ವಾಸಿ ಮುನಿರಾಜು ಬಿನ್ ಚಿಕ್ಕಸುಬ್ಬಾರೆಡ್ಡಿರವರು ಉಪಚರಿಸಿದ್ದು ನಂತರ ತಾನು ಮಹೇಶರವರನ್ನು 108 ಅಂಬ್ಯುಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡಿಸಿದ್ದು ನಂತರ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲುಪಡಿಸಿರುತ್ತೇವೆ. ಮಹೇಶರವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಬಂದು ಠಾಣೆಗೆ ದೂರನ್ನು ನೀಡುತ್ತಿದ್ದು ಮಹೇಶರವರಿಗೆ ಅಫಘಾತಪಡಿಸಿ ಗಾಯಗೊಳಿಸಿದ KA-05-MZ-6547 ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ. |
ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 101/2020 ಕಲಂ. 379 ಐ.ಪಿ.ಸಿ:- |
ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 102/2020 ಕಲಂ. 78(III) ಕೆ.ಪಿ ಆಕ್ಟ್:- |
ದಿನಾಂಕ: 28/07/2020 ರಂದು ನ್ಯಾಯಾಲಯದ ಪಿ.ಸಿ-318 ದೇವರಾಜ್ ರವರು ಹಾಜರುಪಡಿಸಿದ ನ್ಯಾಯಾಲಯದ ಅನುಮತಿಯ ಪತ್ರದ ಸಾರಾಂಶವೇನೆಂದರೆ, ದಿನಾಂಕ 22/07/2020 ರಂದು ಮದ್ಯಾಹ್ನ 1:15 ಗಂಟೆಯಲ್ಲಿ ಲಕ್ಷ್ಮೀನಾರಾಯಣ ಪಿ.ಸಿ-17 ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 22-07-2020 ರಂದು ಮದ್ಯಾಹ್ನ 12:00 ಗಂಟೆಯಲ್ಲಿ ನಗರದ ಎಂ.ಜಿ ವೃತ್ತದಲ್ಲಿ ಇರುವಾಗ ತನಗೆ ನಗರದ ಕೃಷ್ಣಭವನ್ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ತಾನು ಪಿ.ಎಸ್.ಐ ರವರಿಗೆ ಮಾಹಿತಿ ನೀಡಿ ಅನುಮತಿಯನ್ನು ಪಡೆದು ಎಂ.ಜಿ ವೃತ್ತದಲ್ಲಿದ್ದ ಪಿ.ಸಿ 17 ದೇವರಾಜ ರವರ ಜೊತೆ ಪಂಚಾಯ್ತಿದಾರರನ್ನು ಕರೆದುಕೊಂಡು ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿ ಕೃಷ್ಣ ಭವನ್ ರಸ್ತೆಯ ದುರ್ಗಾಫೋಟೊ ವರ್ಕ್ಸ್ ಮುಂಭಾಗ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಕೂಗಾಡುತ್ತಿರುವುದು ಕಂಡುಬಂದಿತು. ತಾನು ಮತ್ತು ಪಿ.ಸಿ 17 ರವರು ಪಂಚರ ಸಮ್ಮುಖದಲ್ಲಿ ಸುತ್ತುವರಿದು ಹಿಡಿದುಕೊಂಡು, ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ವಿಜಿ ಕುಮಾರ್ ಬಿನ್ ಲೇಟ್ ದುರ್ಗಪ್ಪ, 42 ವರ್ಷ, ಕೂಲಿ ಕೆಲಸ, ಪ್ರಶಾಂತ್ ನಗರ ಗೌರಿಬಿದನೂರು ನಗರ ಫೋ: 9741929288 ಎಂದು ತಿಳಿಸಿದ್ದು, ಅವನಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವನ ಬಳಿ ಯಾವುದೆ ಪರವಾನಗಿ ಇಲ್ಲವೆಂದು ತಿಳಿಸಿದನು ಆ ಸಮಯದಲ್ಲಿ ಆ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಒಂದು ಮಟ್ಕಾಚೀಟಿ ಬರೆಯುವ ಪುಸ್ತಕ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 1200/- ರೂಪಾಯಿಗಳು ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದನು ನಂತರ ಆರೋಪಿಯನ್ನು ವಶಕ್ಕೆ ಪಡೆದು ಪಂಚನಾಮೆ ಜರುಗಿಸಿ ಆರೋಪಿ ಹಾಗೂ ಮಾಲಿನೊಂದಿಗೆ ಮದ್ಯಾಹ್ನ 1:00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಕ್ರಮ ಕೈಗೊಳ್ಳುವುದಕ್ಕಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ದಾಖಲಿಸಿರುತ್ತೇನೆ.ನಂತರ ಈ ದಿನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೇನೆ. |
ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 50/2020 ಕಲಂ. 279,338 ಐ.ಪಿ.ಸಿ:- |
ದಿನಾಂಕ:27/07/2020 ರಂದು ಮದ್ಯಾಹ್ನ 14:00 ಗಂಟೆಗೆ ಪಿರ್ಯಾದಿದರರಾದ ಶ್ರೀಮತಿ ಚಂದ್ರಕಲಾ ಕೋಂ ಲೇಟ್ ನಾರಾಯಣಪ್ಪ, ಪ.ಜಾತಿ, ಜಂಗಮಾರನಹಳ್ಳಿ ಗ್ರಾಮ, ಕೇತೆನಹಳ್ಳಿ ಪೋಸ್ಟ್, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಗಂಡ ನಾರಾಯಣಪ್ಪ ರವರು ಈಗ್ಗೆ 14 ವರ್ಷಗಳ ಹಿಂದೆ ತಿರಿಕೊಂಡಿರುತ್ತಾರೆ. ತಾನು ಜೀವನಕ್ಕಾಗಿ ಹೋಟೆಲ್ನಲ್ಲಿ ಕ್ಲಿನ್ ಮಾಡುವ ಕೆಲಸ ಮಾಡಿಕೊಂಡಿರುತ್ತೇನೆ. ತನಗೆ ಇಬ್ಬರು ಗಂಡು ಮಕ್ಕಳಿದ್ದು ಮೊದಲನೇ ಮಗ ಪವನ್, 20 ವರ್ಷ, 2 ನೇ ಮಗ ರವಿಂದ್ರ, 17 ವರ್ಷ ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾರೆ. ದಿನಾಂಕ:24/07/2020 ರಂದು ಬೆಳಿಗ್ಗೆ 09:00 ಗಂಟೆಗೆ ಪವನ್ ಕುಮಾರ್ ರವರನ್ನು ಅವನ ಸ್ನೇಹಿತರಾದ ಗುರುಕಿರಣ್, ಸತೀಶ್ ಮತ್ತು ರಾಜೇಶ್ ಎಂಬುವರು ತಮ್ಮ ಮನೆಯ ಬಳಿಗೆ ಬಂದು 2 ದ್ವಿಚಕ್ರ ವಾಹನಗಳಲ್ಲಿ ಕರೆದುಕೊಂಡು ಹೋಗಿರುತ್ತಾರೆ. ಹೋಗುವ ಸಮಯದಲ್ಲಿ ಎಲ್ಲಿಗೆ ಹೋಗುತ್ತಿರುವಿರಿ ಎಂದು ತಾನು ಕೇಳಿದಕ್ಕೆ ಶಾರ್ಟ್ ಮೂವಿಯ ಚಿತ್ರಿಕರಣಕ್ಕೆಂದು, ಚಿತ್ರೀಕರಣ ಮುಗಿಸಿ ಮದ್ಯಾಹ್ನ ಮನೆಗೆ ವಾಪಸ್ಸು ಬರುತ್ತೇವೆಂದು ಹೇಳಿರುತ್ತಾರೆ. ಅದೇ ದಿನ ಸಂಜೆ 5:00 ಗಂಟೆ ಸಮಯದಲ್ಲಿ ಗುರುಕಿರಣ್ ಎಂಬುವನು ತನ್ನ ಮಗನ ಪೋನ್ನಿಂದ ಕರೆ ಮಾಡಿ ನಿಮ್ಮ ಮಗನಿಗೆ ಅಪಘಾತವಾಗಿದೆ ಕೂಡಲೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಬನ್ನಿ ಎಂದಾಗ ತನಗೆ ಗಾಭರಿಯಾಗಿ ಆಸ್ಪತ್ರೆಗೆ ಬಂದು ನೋಡಿದಾಗ ತೀವ್ರತರನಾದ ತಲೆಗೆ ಪೆಟ್ಟಾಗಿ ರಕ್ತಸಕ್ತವಾಗಿದ್ದನು ಹಾಗೂ ಮಾತನಾಡದ ಸ್ಥಿತಿಯಲ್ಲಿ ಇದ್ದನು. ಚಿಕಿತ್ಸೆ ನೀಡಿದ ವೈದ್ಯರು ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದರ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಯಲಹಂಕದ ಖಾಸಗಿ ಆಸ್ಪತ್ರೆಯಾದ ಅಪೂರ್ವ ಆಸ್ಪತ್ರೆಗೆ ದಾಖಲು ಮಾಡಿದ್ದು ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿದ್ದು ಇಂದಿಗೆ 2 ಬಾರಿ ಆಪರೇಷನ್ ವೈದ್ಯರು ಮಾಡಿರುತ್ತಾರೆ. ತಮ್ಮ ಜೊತೆಯಲ್ಲಿಯೇ ಇದ್ದ ತನ್ನ ಮಗನ ಸ್ನೇಹಿತರಾದ ಗುರುಕಿರಣ್ ಮತ್ತು ರಾಜೇಶ್ ರವರನ್ನು ಘಟನೆ ಹೇಗಾಯಿತು ಎಂದು ಪ್ರಶ್ನಿಸಿದಾಗ ನಂದಿ ಬೆಟ್ಟದ ಬಳಿ ಸಾರ್ಟ ಮೂವಿಯ ಚಿತ್ರಕರಣ ಮುಗಿಸಿಕೊಂಡು ಕುಡುವತಿ ಗ್ರಾಮಕ್ಕೆ ತೆರಳುವ ಸಲುವಾಗಿ ಕುಡುವತಿ ಗ್ರಾಮದ ಸ್ನೇಹಿತನಾದ ಪ್ರದೀಪ್ನನ್ನು ನೋಡಲು ಸತೀಶ್ ಮತ್ತು ಪವನ್ ರವರು KA-40 EA-0770 YAMAHA FZ. ದ್ವಿಚಕ್ರ ವಾಹನದಲ್ಲಿ ಮತ್ತೊಂದು ದ್ವಿಚಕ್ರವಾದ KA-40 U-1087 ಎಂಬ ನೊಂದಣಿ ಸಂಖ್ಯೆಯ ಡಿಸ್ಕವರಿ-125 ಎಂಬ ದ್ವಿಚಕ್ರ ವಾಹನದಲ್ಲಿ ಗುರುಕಿರಣ್ ಮತ್ತು ರಾಜೇಶ್ ರವರು ತೆರಳುತ್ತಿದ್ದು ನಾವು ಸ್ವಲ್ಪ ಬೇಗ ಡಿಸ್ಕವರಿ ವಾಹನವನ್ನು ಚಾಲಾಯಿಸಿಕೊಂಡು ಬಂದು ಕುಡುವತಿ ಗೇಟ್(ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಮುಖ್ಯ ರಸ್ತೆ) ಬಳಿ ರಸ್ತೆ ಬದಿಯಲ್ಲಿ KA-40 U-1087 ದ್ವಿಚಕ್ರ ವಾಹನದಲ್ಲಿ ನಿಲ್ಲಿಸಿಕೊಂಡು ಮತ್ತೊಂದು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸತೀಶ್ ಮತ್ತು ಹಿಂಭದಿಯಲ್ಲಿ ಕುಳಿತಿದ್ದ ಪವನ್ ರವರಿಗಾಗಿ ಕಾಯುತ್ತಿದ್ದಾಗ ಅತೀ ವೇಗವಾಗಿ ಈಚ ವಾಹನವನ್ನು ಚಾಲಾಯಿಸುತ್ತಿದ್ದ ಸತೀಶ್ ನಮ್ಮ ದ್ವಿಚಕ್ರ ವಾಹನಕ್ಕೆ ಮದ್ಯಾಹ್ನ 3:10 ಗಂಟೆಗೆ ಡಿಕ್ಕಿಯನ್ನು ಹೊಡೆದು ಗಾಯಗೊಂಡಿರುತ್ತಾರೆಂದು ತಿಳಿಸಿರುತ್ತಾರೆ. ಗಾಯಗೊಂಡಿದ್ದ ಪವನ್ ರವರಿಗೆ ಪ್ರಥಮ ಚಿಕಿತ್ಸೆಯನ್ನ ನೀಡಿ ಆಸ್ಪತ್ರೆಗೆ ಆ ಬೈಕಿನಲ್ಲಿಯೇ ಕರೆದುಕೊಂಡು ಬಂದಿದ್ದಾಗಿ ತಿಳಿಸಿರುತ್ತಾರೆ. ಆದ್ದರಿಂದ ತನ್ನ ಮಗನಿಗೆ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿ ಇಂದಿಗೆ 2 ಬಾರಿ ಆಪರೇಷನ್ ಮಾಡಿದ ಕಾರಣ ತಡವಾಗಿ ಈ ದೂರನ್ನು ನೀಡಿದ್ದು ದ್ವಿಚಕ್ರ ವಾಹನದ ಚಾಲಕನಾದ ಸತೀಶ್ ಮತ್ತು KA-40 EA-0770 YAMAHA FZ ದ್ವಿಚಕ್ರ ವಾಹನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ. |
ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 51/2020 ಕಲಂ. 279,337,304(A) ಐ.ಪಿ.ಸಿ:- |
ದಿನಾಂಕ:28/07/2020 ರಂದು ಸಂಜೆ 16:30 ಗಂಟೆಗೆ ಪಿರ್ಯಾದಿದರರಾದ ಬಿ.ಎಸ್ ಶಿವರಾಜ್ ಬಿನ್ ಸುಬ್ಬನಾರಾಯಣಪ್ಪ, 44 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ: ಬಂಡಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:28/07/2020 ರಂದು ತಾನು ಮತ್ತು ತನ್ನ 2 ನೇ ಮಗಳಾದ ವರ್ಷ, 18 ವರ್ಷ, ಪ್ಯಾರಾಮೆಡಿಕಲ್ ವಿದ್ಯಾರ್ಥಿ, ಇಬ್ಬರು ತನ್ನ ಬಾಬತ್ತು KA-40 EC-5985 ACTIVE ಸ್ಕೂಟರಿನಲ್ಲಿ ಹೊಲದ ಕಡೆಗೆ ಹೋಗಿ ಬದನೆ ಗಿಡಕ್ಕೆ ಕೀಟನಾಶಕವನ್ನು ಸಿಂಪಡಣೆ ಮಾಡಿ ಅದೇ ದ್ವಿಚಕ್ರ ವಾಹನದಲ್ಲಿ ಊಟಕ್ಕೆ ಮನೆಗೆ ತಿರ್ನಹಳ್ಳಿ-ಮುದ್ದೇನಹಳ್ಳಿ ರಸ್ತೆಯಲ್ಲಿ ಬರುತ್ತಿದ್ದಾಗ ಮದ್ಯಾಹ್ನ 2:30 ಗಂಟೆ ಸಮಯದಲ್ಲಿ ಬಂಡಹಳ್ಳಿ ಕ್ರಾಸ್ ಬಳಿ ತಿರ್ನಹಳ್ಳಿ ಕಡೆಯಿಂದ KA-43-9906 ಖಾಲಿ ಟಿಪ್ಪರ್ ವಾಹನವನ್ನು ಅದರ ಚಾಲಕ ಹಿಂಬದಿಯಿಂದ ಅತೀ ವೇಗ ಮತ್ತು ನಿರ್ಲಕ್ಷತೆಯಿಂದ ಓಡಿಸಿಕೊಂಡು ಬಂದು ತಮ್ಮ ಸ್ಕೂಟರಿಗೆ ಡಿಕ್ಕಿ ಹೊಡೆಸಿ ಅಪಘಾತಮಾಡಿದ ಪರಿಣಾಮ ತಾನು ಚರಂಡಿಗೆ ಜಿಗಿದಿದ್ದು ತನ್ನ ಮಗಳಾದ ವರ್ಷ ಬಿ.ಎಸ್ ಡಾಂಬರು ರಸ್ತೆಯ ಮೇಲೆ ಬಿದ್ದು ಎಡ ಭಾಗದ ಶರೀರ, ಬೆನ್ನು, ತಲೆಗೆ ರಕ್ತಗಾಯಗಳಾಗಿ, ಕಾಲುಗಳಿಗೆ ತರಚಿದ ಗಾಯಗಳಾಗಿ ಸೊಂಟ ಮತ್ತು ಹೊಟ್ಟೆಯ ಬಳಿ ತೀವ್ರ ಗಾಯಗಳಾಗಿದ್ದಾಗ ಅಲ್ಲಿಯೇ ಕುರಿಗಳನ್ನು ಮೇಯಿಸುತ್ತಿದ್ದ ಗೋಪಮ್ಮ, ವೆಂಕಟರವಣಪ್ಪ ರವರುಗಳು ಅಪಘಾತವನ್ನು ನೋಡಿ ಕಿರುಚಿಕೊಂಡಾಗ ತಮ್ಮೂರಿನ ಬಲಜಿಗರ ಮುನಿಯಪ್ಪ, ತನ್ನ ಅಣ್ಣ ಕೃಷ್ಣಾರೆಡ್ಡಿ ಓಡಿ ಬರುವಷ್ಟರಲ್ಲಿ ಟಿಪ್ಪರ್ ಚಾಲಕನು ರಸ್ತೆ ಮದ್ಯೆ ನಿಲ್ಲಿಸಿ ಟ್ಟಿಪ್ಪರ್ ಲಾರಿಯಿಂದ ದುಮುಕಿಕೊಂಡು ಹೊಲಗಳಲ್ಲಿ ಓಡಿ ಪರಾರಿಯಾದನು. ತನಗೆ ಮೂಗೇಟುಗಳಾಗಿರುತ್ತೆ. ತಾವೆಲ್ಲರು ತನ್ನ ಮಗಳನ್ನು ಉಪಚರಿಸಿದ್ದು ಜ್ಞಾನ ತಪ್ಪಿದ್ದು ತಕ್ಷಣ ಯಾವುದೋ ಆಟೋದಲ್ಲಿ ತಾನು ಮತ್ತು ತನ್ನ ಪತ್ನಿ ಶೋಭಾ ರವರು ಚಿಕ್ಕಬಳ್ಳಾಪುರದ ಅನನ್ಯ ಆಸ್ಪತ್ರೆಗೆ ಸಾಗಿಸಿ ತಂದಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದರು. ಈ ಅಪಘಾತಕ್ಕೆ KA-43-9906 ಟಿಪ್ಪರ್ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯು ಕಾರಣವಾಗಿದ್ದು ಆತನ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಲಿಲ್ಲ. ತನ್ನ ಮಗಳ ಸಾವಿಗೆ ಮೇಲ್ಕಂಡ ಟಿಪ್ಪರ್ ಚಾಲಕನೇ ಕಾರಣವಾಗಿದ್ದು ಮಗಳ ಹೆಣವು ಚಿಕ್ಕಬಳ್ಳಾಪುರದ ಅನನ್ಯ ಖಾಸಗಿ ಆಸ್ಪತ್ರೆಯಲ್ಲಿ ಇರುತ್ತದೆ. ತಾನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತೇನೆ. ಆದ್ದರಿಂದ ತಾವುಗಳು ತನ್ನ ಮಗಳ ಸಾವಿಗೆ ಕಾರಣನಾದ KA-43-9906 ಟಿಪ್ಪರ್ ಚಾಲಕನನ್ನು ಪತ್ತೆ ಮಾಡಿ ಆತನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ. |
ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 196/2020 ಕಲಂ. 143,147,148,323,324,506,149 ಐ.ಪಿ.ಸಿ:- |
ದಿನಾಂಕ:28.07.2020 ರಂದು ಸಂಜೆ 6.30 ಗಂಟೆಗೆ ಪಿರ್ಯಾದಿದಾರರಾದ ವೆಂಕಟೇಶಬಾಬು ಸಿ ಬಿನ್ ಚಿಕ್ಕಕಾಮರೆಡ್ಡಿ ಅಪ್ಪೇಗೌಡನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಮ್ಮ ಬಾಬತ್ತು ಶಿಡ್ಲಘಟ್ಟ ತಾಲ್ಲೂಕು ಕಸಬಾ ಹೋಬಳಿ ಚೌಡಸಂದ್ರ ಗ್ರಾಮದ ಸವರ್ೆ ನಂ ನಂಬರ್ 236 ನೇ ಮಾನ್ಯ ತಹಸೀಲ್ದಾರ್ ರವರ ಆದೇಶನ್ವಯ ಮಾನ್ಯ ಭೂಮಾಪಕರು ದಿನಾಂಕ:28.07.2020 ರಂದು ಸ್ಥಳಕ್ಕೆ ಅಳತೆಗೆ ಬಂದಿದ್ದರು ಅಳತೆ ಕಾರ್ಯ ಪೂರ್ಣಗೊಂಡ ನಂತರ ಅಂದರೆ ಸಮಯ ಸಮಾರು 12.45 ಗಂಟೆ ಸಮಯದಲ್ಲಿ ಅಪ್ಪೇಗೌಡನಹಳ್ಳಿ ಗ್ರಾಮದ ವಾಸಿಯಾದ ದೊಡ್ಡಕಾಮರೆಡ್ಡಿ ಬಿನ್ ಲೇಟ್ ಪಿಳ್ಳಪ್ಪ ಇವರ ಪತ್ನಿಯರಾದ ರತ್ನಮ್ಮ, ನಾಗರತ್ನಮ್ಮ ಮತ್ತು ಇವರ ಮಕ್ಕಳಾದ 1ನೇ ಮುನಿರಾಜು@ರಾಜಣ್ಣ, 2ನೇ ಪ್ರಭಾಕರ್, 3ನೇ ಚೇತನ್ ಕುಮಾರ್, ಇವರುಗಳು ಏಕಾಏಕಿ ಗುಂಪು ಕಟ್ಟಿಕೊಂಡು ಬಂದು ನನ್ನ ಮೇಲೆ ಗಲಾಟೆಗೆ ಬಂದು ಗಲಾಟೆ ಮಾಡಿ ಇವರುಗಳು ನನ್ನನ್ನು ಚೆನ್ನಾಗಿದ ಹೊಡೆದು ಗಾಯಪಡಿಸಿರುತ್ತಾರೆ. ಹಗೂ ಕಾಲುಗಳಿಂದ ಹೊಡೆದಿರುತ್ತಾರೆ. ಇವರುಗಳು ನನ್ನನ್ನು ಗುಂಪು ಕಟ್ಟಿಕೊಂಡು ಬಂದು ಹೊಡೆದಾಗ ನಾನು ನೆಲಕ್ಕೆ ಬಿದ್ದಿರುತ್ತೇನೆ ಹಾಗೂ ಪ್ರಭಾಕರ್ ರವರು ಕಲ್ಲು ತೆಗೆದುಕೊಂಡು ಹೊಡೆಯಲು ಬಂದಿರುತ್ತಾನೆ. ಹಾಗೂ ಸದರಿ ಕಲ್ಲಿಗೆ ನನ್ನ ಕೈಯನ್ನು ಅಡ್ಡ ಇಡಲಾಗಿ ನನ್ನ ಎಡ ಕೈ ಕೈನ ಬೆರಳುಗಳಿಗೆ ಗಾಯವಾಗಿ ರಕ್ತ ಬಂದಿರುತ್ತದೆ ಈ ಕೂಡಲೇ ಸ್ಥಳದಲ್ಲಿದ್ದ ನನ್ನ ತಂದೆಯವರು ಜಗಳನ್ನು ಬಿಡಿಸಲು ಬಂದರೆ ನನ್ನ ತಂದೆಯವರ ಮೇಲೆಯು ಸಹ ಹಲ್ಲೆ ಮಾಡಿರುತ್ತಾರೆ ಹಾಗೂ ಸದರಿ ನಿಮ್ಮನ್ನು ಸಾಯಿಸುತ್ತೇವೆ ಎಂದು ಪ್ರಾಣ ಬೆದರಿಕೆಯನ್ನು ಸಹಾ ಹಾಕಿರುತ್ತಾರೆ ಆದ ಕಾರಣ ಮುಂದಿನ ಕ್ರಮ ಕೈಗೊಳ್ಳಬೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ. |
ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 197/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ:- |
ದಿನಾಂಕ 28/07/2020 ರಂದು ರಾತ್ರಿ 8-30 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ದೊಡ್ಡ ಕಾಮ ರೆಡ್ಡಿ ಬಿನ್ ಪಿಳ್ಳಪ್ಪ, 62 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಅಪ್ಪೇಗೌಡನಹಳ್ಳಿ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ಇದೇ ಶಿಡ್ಲಘಟ್ಟ ತಾಲ್ಲೂಕು ಚೌಡಸಂದ್ರ ಗ್ರಾಮದ ಸರ್ವೇ ನಂಬರ್ 267 ರಲ್ಲಿ ಒಂದು ಎಕರೆ 33 ಗುಂಟೆ ಜಮೀನನ್ನು 1981-82 ರಲ್ಲಿ ಜಲ್ಲಪ್ಪ ಎಂಬುವರಿಂದ ಖರೀದಿ ಮಾಡಿದ್ದು, ಈ ಜಮೀನು ತನ್ನ ಮತ್ತು ತನ್ನ ತಮ್ಮನಾದ ಚಿಕ್ಕಕಾಮರೆಡ್ಡಿ ರವರ ಹೆಸರಿನಲ್ಲಿ ಜಂಟಿಯಾಗಿದ್ದು, ಅಂದಿನಿಂದಲೂ ಈ ಜಮೀನಿನಲ್ಲಿ ತಾನೇ ಸ್ವಾಧೀನ ಅನುಭೋಗದಲ್ಲಿದ್ದು ದ್ರಾಕ್ಷಿ ಬೆಳೆ ಬೆಳೆದುಕೊಂಡಿದ್ದು, ಚೌಡಸಂದ್ರ ಗ್ರಾಮದ ಸರ್ವೇ ನಂಬರ್ 268 ರಲ್ಲಿ ಒಟ್ಟು ಎರಡುವರೆ ಎಕರೆ ಜಮೀನಿನ ಬಗ್ಗೆ ತನ್ನ ತಮ್ಮ ಚಿಕ್ಕ ಕಾಮರೆಡ್ಡಿ ಹಾಗು ತನ್ನ ಗ್ರಾಮದ ಮುನಿಅಜ್ಜಪ್ಪ ರವರಿಗೂ ತಕರಾರು ಇದ್ದು ಮುನಿಅಜ್ಜಪ್ಪ ರವರು ಘನ ಎ.ಸಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿರುತ್ತಾರೆ. ಹೀಗಿರುವಾಗ ತನ್ನ ತಮ್ಮನಾದ ಚಿಕ್ಕಕಾಮರೆಡ್ಡಿ ರವರು ತನ್ನ ಅನುಭೋಗದ ಸರ್ವೇ ನಂಬರ್ 267 ರ ಜಮೀನು ಹಾಗು ಸರ್ವೇ ನಂಬರ್ 268 ರಲ್ಲಿನ ಜಮೀನುಗಳ ಬಗ್ಗೆ ತನ್ನ ಹೆಂಡತಿಯಾದ 1 ನೇ ಲೀಲಾವತಿ, 2 ನೇ ಸಂದ್ಯಾವತಿ ರವರ ಹೆಸರಿಗೆ ಸಾಗುವಳಿ ಚೀಟಿಯನ್ನು ಮಾಡಿಸಿಕೊಂಡು ಖಾತೆಗಾಗಿ ಅರ್ಜಿಯನ್ನು ಸಲ್ಲಿಸಿಕೊಂಡಿದ್ದು, ಈ ವಿವಾರ ತನಗೆ ತಿಳಿದು ದಿನಾಂಕ 17/12/2018 ರಂದು ಮತ್ತು ದಿನಾಂಕ 07/11/2019 ರಂದು ಮಾನ್ಯ ತಹಶೀಲ್ದಾರ್ ರವರಿಗೆ ತಕರಾರು ಅರ್ಜಿಯನ್ನು ಸಲ್ಲಿಸಿಕೊಂಡಿದ್ದು, ಈ ದಿನ ದಿನಾಂಕ 28/07/2020 ರಂದು ಮಾನ್ಯ ತಹಶೀಲ್ದಾರ್ ರವರು ಸ್ಥಳ ಪರಿಶೀಲನೆ ಮಾಡಿ ದಾಖಲಾತಿಗಳಂತೆ ಸರ್ವೇ ಯನ್ನು ಮಾಡಲು ಸೂಚಿಸಿದ ಮೇರೆಗೆ ಸರ್ವೇ ಅಧಿಕಾರಿಗಳು ಸರ್ವೇಯನ್ನು ಮಾಡುತ್ತಿದ್ದಾಗ ಮದ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ತನ್ನ ತಮ್ಮನಾದ ಚಿಕ್ಕಕಾಮರೆಡ್ಡಿ ಹಾಗು ಈತನ ಮಗನಾದ ವೆಂಕಟೇಶ್ ಬಾಬು ರವರು ತನ್ನ ಮೇಲೆ ಜಮೀನಿನ ವಿಚಾರದಲ್ಲಿ ಗಲಾಟೆ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಇಬ್ಬರು ಕೈಗಳಿಂದ ಮೈ ಮೇಲೆ ಹೊಡೆದು ತನ್ನ ತಮ್ಮ ಜಮೀನಿನಲ್ಲಿ ಬಿದ್ದಿದ್ದ ದೊಣ್ಣೆಯನ್ನು ತೆಗೆದುಕೊಂಡು ತನ್ನ ಮೈ ಮೇಲೆ ಹೊಡೆದು ನೋವುಂಟು ಮಾಡಿದಾಗ ಆತನ ತನ್ನ ಮಗ ಪ್ರಭಾಕರ್ ರವರು ಜಗಳ ಬಿಡಿಸಲು ಅಡ್ಡ ಬಂದಾಗ ವೆಂಕಟೇಶ್ ಬಾಬು ತನ್ನ ಮಗನಿಗೆ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ಇಬ್ಬರು ಸೇರಿ ತಮಗೆ ಪ್ರಾಣ ಬೆದರಿಕೆ ಹಾಕಿದ್ದು, ಆಗ ಅಲ್ಲಿಯೇ ಇದ್ದ ತಮ್ಮ ಗ್ರಾಮಸ್ಥರು ಅಡ್ಡ ಬಂದು ಜಗಳ ಬಿಡಿಸಿರುತ್ತಾರೆ. ನಂತರ ತನ್ನ ಮಗ ತನ್ನನ್ನು ಕರೆದುಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿರುತ್ತಾನೆ. ಆದ ಕಾರಣ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ಹೇಳಿಕೆ. |
ರಾಜೀವ್ ಗಾಂಧೀ ವಿವಿ ಟಾಪರ್ಗಳಿಗೆಲ್ಲ ಚಿನ್ನದ ಪದಕ! · |
ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್ಜಿಯುಎಚ್ಎಸ್) ಇದೇ ಮೊದಲ ಬಾರಿಗೆ ಗರಿಷ್ಠ ಅಂಕ ಪಡೆದ ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಿದೆ. |
ಆರ್ಜಿಯುಎಚ್ಎಸ್ 21ನೇ ಘಟಿಕೋತ್ಸವ ಮಾ.26ರಂದು ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ವಿ.ಆರ್. ವಾಲಾ ವಹಿಸಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಕುಲಪತಿ ಡಾ.ಎಸ್. ಸಚ್ಚಿದಾನಂದ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. |
4.8 ಗ್ರಾಂ ಚಿನ್ನದ ಪದಕ: ಎಲ್ಲ ಹೆಚ್ಚು ಅಂಕ ಗಳಿಸಿದ ಎಲ್ಲ ವಿಭಾಗಗಳ 136 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಗುತ್ತಿದೆ. ಇಷ್ಟು ವರ್ಷ ದಾನಿಗಳು ನೀಡಿದ ಚಿನ್ನದ ಪದಕ ಮಾತ್ರ ನೀಡಲಾಗುತ್ತಿತ್ತು. ಈ ವರ್ಷದಿಂದ ವಿವಿಯೇ ಹೆಚ್ಚುವರಿ ಹಣ ವ್ಯಯ ಮಾಡಿ ಎಲ್ಲ ಪ್ರತಿಭಾವಂತ ವಿದ್ಯಾರ್ಥಿಗಳಿಗೂ 4.8 ಗ್ರಾಂ ಚಿನ್ನದ ಪದಕ ನೀಡಲಿದೆ. |
ಡಾ. ಕೆ.ಎಸ್. ನಾಗೇಶ್ಗೆ ಗೌಡಾ: ಮಂಗಳೂರಿನ ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪದವಿ ವಿದ್ಯಾರ್ಥಿ ಡಾ.ವಲ್ಲೀಶ್ ಶೆಣೈ 7 ಸ್ವರ್ಣ ಪದಕ ಪಡೆದು ವಿವಿಗೇ ಟಾಪರ್ ಆಗಿದ್ದಾರೆ. ಬೆಂಗಳೂರಿನ ಡಿ.ಎ. ಪಾಂಡು ಸ್ಮಾರಕ ಆರ್.ವಿ. ಡೆಂಟಲ್ |
ಕಾಲೇಜಿನ ಸ್ನಾತಕ ವಿದ್ಯಾರ್ಥಿ ಡಾ. ಜಿ. ಅಪರ್ಣಾ ಹಾಗೂ ಮಂಡ್ಯದ ಭಾರತಿ ಕಾಲೇಜ್ ಆಫ್ ಫಾರ್ಮಸಿಯ ಡಿ-ಫಾರ್ಮ ವಿದ್ಯಾರ್ಥಿನಿ ಡಾ. ಭಾತ್ಸಾ ಲಿಜಾ ಜಾನ್ಸನ್ ತಲಾ ಆರು ಸ್ವರ್ಣ ಪದಕ ಪಡೆದಿದ್ದಾರೆ ಎಂದು ಸಚ್ಚಿದಾನಂದ ಮಾಹಿತಿ ನೀಡಿದರು. ರಾಜೀವ್ ಗಾಂಧಿ ಪಬ್ಲಿಕ್ ಹೆಲ್ತ್ ಸಂಸ್ಥಾಪಕ ಕೆ.ಎಸ್. ನಾಗೇಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದರು. |
ಘಟಿಕೋತ್ಸವದಲ್ಲಿ 30,556 ಮಂದಿ ಪದವಿ ಪಡೆಯಲಿದ್ದಾರೆ. ಇವರಲ್ಲಿ 44 ಪಿಎಚ್.ಡಿ, 129 ಸೂಪರ್ ಸ್ಪೆಷಾಲಿಟಿ, 5,711 ಸ್ನಾತಕೋತ್ತರ, 175 ಫೆಲೋಶಿಪ್ ಕೋರ್ಸ್, 16 ಪ್ರಮಾಣಪತ್ರ ಕೋರ್ಸ್ ಹಾಗೂ 24,481 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು. |
ನೋವನ್ನು ಮೆಟ್ಟಿ ಚಿನ್ನ ಗೆದ್ದರು |
ಸರ್ಕಾರಿ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಡಾ. ಸುಪ್ರಿಯಾ 2 ಚಿನ್ನದ ಪದಕ ಪಡೆಯಲಿದ್ದಾರೆ. ಕಿಡ್ನಿ ಸಮಸ್ಯೆ ಅನುಭವಿಸುತ್ತಿದ್ದ ಇವರಿಗೆ, 'ಪರೀಕ್ಷೆ ಬರೆಯಬೇಡ' ಎಂದು ಹೆತ್ತವರು ಸಲಹೆ ನೀಡಿದ್ದರಂತೆ. |
ಕಾಲೇಜಿನಲ್ಲಿ ಟಾಪರ್ ಆಗಿದ್ದೆ. ವಿಶ್ವವಿದ್ಯಾಲಯದಲ್ಲೂ ಮೊದಲ ರ್ಯಾಂಕ್ ನಿರೀಕ್ಷಿಸಿರಲಿಲ್ಲ. ನಿಮ್ಹಾನ್ಸ್ನಲ್ಲಿ ನರ ವಿಜ್ಞಾನಶಾಸ್ತ್ರದ ಕೋರ್ಸ್ಗೆ ಸೇರಬಯಸಿದ್ದೇನೆ. ನಮ್ಮದು ಮಂಗಳೂರಿನ ಕಾವೂರು. ತಂದೆ ಬ್ಯಾಂಕ್ನ ನಿವೃತ್ತ ಅಧಿಕಾರಿ, ತಾಯಿ ಗೃಹಿಣಿ. ಕನ್ನಡ, ಸಂಸ್ಕೃತದಲ್ಲಿ ತಾಲೂಕಿಗೆ ಟಾಪಾರ್ ಆಗಿದ್ದೆ. |
| ಡಾ. ವಲ್ಲೀಶ್ ಶೆಣೈ 6 ಚಿನ್ನದ ಪದಕ ವಿಜೇತ ವಿದ್ಯಾರ್ಥಿ |
ನಾನು ಚೆನ್ನೈ ಮೂಲದವಳು. ಬಿಡಿಎಸ್ ಕೋರ್ಸ್ ಗಾಗಿ ಕರ್ನಾಟಕಕ್ಕೆ ಬಂದೆ. ಸ್ಥಳೀಯ ರೋಗಿಗಳೊಂದಿಗೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಲು ಸಹಕಾರಿಯಾಲಿದೆ ಎಂಬ ಉದ್ದೇಶದಿಂದ ಕನ್ನಡವನ್ನು ಕಲಿತಿದ್ದೇನೆ. ಮುಂದೆ ಎಂಡಿಎಸ್ ಮಾಡಬೇಕು ಎಂದುಕೊಂಡಿದ್ದೇನೆ. ಈ ಯಶಸ್ಸಿನ ಶ್ರೇಯಸ್ಸು ಕಾಲೇಜಿಗೆ, ಉಪನ್ಯಾಸಕರಿಗೆ ಹಾಗೂ ಪಾಲಕರಿಗೆ ಸಲ್ಲಬೇಕು. |
ಬಾಡಿಗೆ ತಾಯ್ತನ ವ್ಯಾಪಾರವಲ್ಲ - TheNewsism \n |
Home News ಬಾಡಿಗೆ ತಾಯ್ತನ ವ್ಯಾಪಾರವಲ್ಲ |
ಕರಡು ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ |
ನವದೆಹಲಿ: ಬಾಡಿಗೆ ತಾಯ್ತನ ಇನ್ನು ಮುಂದೆ ವ್ಯಾಪಾರವಲ್ಲ. ಬಾಡಿಗೆ ತಾಯಂದಿರ ಹಿತಾಸಕ್ತಿ ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಕಾನೂನಿನ ಕರಡನ್ನು ಬುಧವಾರ ಅಂಗೀಕರಿಸಿದೆ. ಈ ಮೂಲಕ ಬಾಡಿಗೆ ತಾಯ್ತನದ ವಾಣಿಜ್ಯೀಕರಣಕ್ಕೆ ಕಡಿವಾಣ ಹಾಕಿದೆ. |
ಸಂಪುಟ ಅಂಗೀಕರಿಸಿರುವ ನೂತನ ಕಾನೂನಿನ ಪ್ರಕಾರ, ಇನ್ನು ಮುಂದೆ ಬಾಡಿಗೆ ತಾಯ್ತನಕ್ಕೆ ಸಂಪೂರ್ಣ ಕಡಿವಾಣ ಬೀಳಲಿದೆ. ಒಂದು ವೇಳೆ ಬಂಜೆತನ ಕಾಡಿದರೆ ಮಾತ್ರ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಬಹುದು. ಇದಕ್ಕೂ ಕೆಲ ನಿಯಮಗಳನ್ನು ಅನುಸರಿಸಬೇಕಿದೆ. ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ದಂಪತಿ ತಮ್ಮ ಹತ್ತಿರದ ಸಂಬಂಧಿರಕನ್ನು ಮಾತ್ರ ಬಾಡಿಗೆ ತಾಯಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲದೆ ಮಗು ಪಡೆಯು ದಂಪತಿ ಆಕೆಯ ವೈದ್ಯಕೀಯ ಖರ್ಚು ವೆಚ್ಚ ಭರಿಸಬೇಕಾಗುತ್ತದೆ. |
ಆದರೆ ಕರಡು ಮಸೂದೆಯಲ್ಲಿ ದಂಪತಿ ಆಯ್ಕೆ ಮಾಡಿಕೊಳ್ಳಬಹುದಾದ ಹತ್ತಿರದ ಸಂಬಂಧಿಸಕರು ಯಾರು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಇದೇವೇಳೆ ಮಹಿಳೆಯ ಶೋಷಣೆ ತಡೆಯಲು, ವಿಶೇಷವಾಗಿ ಗ್ರಾಮೀಣ ಪ್ರದೇಶದ ಹಾಗೂ ಬುಡಕಟ್ಟು ಜನಾಂಗದ ಸ್ತ್ರೀಯರಿಗೆ ತೊಂದರೆಯಾಗುವುದನ್ನು ತಪ್ಪಿಸಲು ವಿದೇಶಿಗರು ನಮ್ಮ ದೇಶದಲ್ಲಿ ಬಾಡಿಗೆ ತಾಯಂದಿರಿಂದ ಮಗು ಪಡೆಯುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. |
ರಾಷ್ಟ್ರೀಯ ಬಾಡಿಗೆ ತಾಯ್ತನ ಮಂಡಳಿ |
ಬಾಡಿಗೆ ತಾಯಂದಿರ ಪ್ರಕರಣಗಳ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಬಾಡಿಗೆ ತಾಯ್ತನ ಮಂಡಳಿ ಸ್ಥಾಪಿಸಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. |
ಕರಡು ಮಸೂದೆಯಲ್ಲಿ ಸಿಂಗಲ್ ಪೇರೆಂಟ್, ಅವಿವಾಹಿತರು, ಸಲಿಂಗಿಗಳಿಗೆ ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯುವುದಕ್ಕೆ ನಿರ್ಬಂಧ ವಿಧಿಸಲಾಘಿದೆ. ಬಾಡಿಗೆ ತಾಯಂದಿರ ಮೂಲಕ ಮಗು ಪಡೆಯಬೇಕಾದರೆ ಆ ದಂಪತಿಗಳು ವಿವಾಹವಾಗಿ ಕನಿಷ್ಠ 5 ವರ್ಷಗಳಾಗಿರಬೇಕು ಎಂಬ ನಿಯಮ ವಿಧಿಸಲಾಗಿದೆ. ಅಂಗೀಕಾರವಾಗಿರುವ ಕರಡು ಮಸೂದೆ ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿದೆ. |
ಬಿನ್ನಿ ಹಠಾತ್ ನಿರ್ಗಮನ: ಫ್ಲಿಪ್ ಕಾರ್ಟ್ ಉದ್ಯೋಗಿಗಳಲ್ಲಿ ಅಚ್ಚರಿ, ಆಘಾತ | flipkart employees shocked for eco Binny Bansal's resignation - Kannada Oneindia |
10 min ago ಆರೋಗ್ಯ ಸೇತು ಆಪ್ ಇಲ್ಲದಿದ್ದರೆ ಸೌಲಭ್ಯ ನಿರಾಕರಿಸುವಂತಿಲ್ಲ: ಹೈಕೋರ್ಟ್ ಸ್ಪಷ್ಟ ನಿರ್ದೇಶನ |
35 min ago ವಿವಾದಾತ್ಮಕ ಕಪಾಲಬೆಟ್ಟದಲ್ಲಿ ಕಾಮಗಾರಿ ನಡೆಸದಂತೆ ಹೈಕೋರ್ಟ್ ಸೂಚನೆ |
55 min ago ಸಂಜನಾ, ರಾಗಿಣಿಗೆ ಜಾಮೀನು ನೀಡದಿದ್ದರೆ ಸ್ಫೋಟ: ತುಮಕೂರಿಂದ ಬಂದ ಬೆದರಿಕೆ ಪತ್ರ |
| Updated: Wednesday, November 14, 2018, 16:16 [IST] |
ಬೆಂಗಳೂರು, ನವೆಂಬರ್ 14: ವೈಯಕ್ತಿಕ ದುರ್ನಡತೆ ಆರೋಪ ಬಂದ ಕಾರಣ ಸ್ಥಾನ ತ್ಯಜಿಸಿರುವ ಫ್ಲಿಪ್ ಕಾರ್ಟ್ನ ಸಹ ಸಂಸ್ಥಾಪಕ ಮತ್ತು ಸಮೂಹದ ಸಿಇಒ ಬಿನ್ನಿ ಬನ್ಸಲ್ ಅವರ ಹಠಾತ್ ನಿರ್ಧಾರ ಅಲ್ಲಿನ ಉದ್ಯೋಗಿಗಳಿಗೆ ಆಘಾತ ಉಂಟುಮಾಡಿದೆ. |
ತಮ್ಮ ಕಂಪೆನಿಯಲ್ಲಿ ಈ ರೀತಿಯ ಘಟನೆ ನಡೆದಿದೆ ಎನ್ನುವುದು ಅವರಿಗಿನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಅದರ ಉಳಿದ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲದೆ ಗೊಂದಲಕ್ಕೂ ಸಿಲುಕಿದ್ದಾರೆ. ಈ ನಡುವೆ ಅದರ ವ್ಯವಹಾರ ವಹಿವಾಟಿನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. |
ವೈಯಕ್ತಿಕ ದುರ್ನಡತೆ ಎಂಬ ಆರೋಪದ ಹೊರತಾಗಿ ಬೇರೆ ಏನು ನಡೆದಿದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಹೀಗಾಗಿ ಅಧಿಕೃತವಾಗಿ ಯಾವ ಮಾಹಿತಿ ಬರುತ್ತಿದೆಯೋ ಎಂಬುದನ್ನು ತಿಳಿದುಕೊಳ್ಳಲು ಉದ್ಯೋಗಿಗಳ ಪರಸ್ಪರ ಚರ್ಚೆ ನಡೆಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. |
'ಪ್ರತಿಯೊಬ್ಬರೂ ಅಚ್ಚರಿಗೆ ಒಳಗಾಗಿದ್ದಾರೆ. ಏಕೆಂದರೆ ಸಂಸ್ಥೆಯೊಳಗೆ ಈ ರೀತಿಯ ಯಾವುದೇ ಘಟನೆ ನಡೆದಿದೆ ಎಂಬುದರ ಸುಳಿವೂ ಇರಲಿಲ್ಲ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳು, ವಿವಾದಗಳು ಉಂಟಾದಾಗ ಆ ಬೆಳವಣಿಗೆಗಳ ಬಗ್ಗೆ ಕಂಪೆನಿಯ ಕಾರಿಡಾರ್ಗಳಲ್ಲಿ ಸುಳಿವು ಸಿಗುತ್ತಿದ್ದವು' ಎಂದು ಅದರ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ. |
ಮಾಧ್ಯಮದ ಜತೆ ಮಾತನಾಡಬೇಡಿ |
ಬಿನ್ನಿ ತಮಗೆ ಆಪ್ತರಾಗಿದ್ದ ಕೆಲವು ಉದ್ಯೋಗಿಗಳಿಂದ ಪ್ರತಿಜ್ಞೆ ಮಾಡಿಸಿಕೊಂಡಿದ್ದಾರೆ, ಇನ್ನು ಉಳಿದವರು ಪ್ರಕರಣದ ಬಗ್ಗೆ ಊಹಿಸುತ್ತಿದ್ದಾರೆ. |
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡದಂತೆ ಫ್ಲಿಪ್ ಕಾರ್ಟ್ ತನ್ನ ಉದ್ಯೋಗಿಗಳಿಗೆ ಸೂಚನೆ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ. |
ಹಿಂದೆಯೇ ನಿಗದಿಯಾಗಿತ್ತು |
ಆದರೆ, ಬಿನ್ನಿ ಅವರು ಹೊರ ನಡೆದಿರುವುದು ಯಾವುದೇ ಭಾರಿ ಬದಲಾವಣೆಗಳನ್ನು ತರುವುದಿಲ್ಲ ಎಂದೂ ಹೇಳಲಾಗಿದೆ. |
'ಇದು ಪೂರ್ವನಿಯೋಜಿತ. ಇದು ಮುಂದಿನ ವರ್ಷವೂ ನಡೆಯಬಹುದಿತ್ತು' ಎಂದು ಉದ್ಯೋಗಿಯೊಬ್ಬರು ತಿಳಿಸಿದ್ದಾರೆ. ಈ ಹಿಂದೆ ತಮ್ಮ ಉದ್ಯೋಗಿಗಳಿಗೆ ಇ ಮೇಲ್ ಸಂದೇಶ ರವಾನಿಸಿದ್ದ ಬಿನ್ನಿ, ಇನ್ನು ಕೆಲವು ಅವಧಿಯವರೆಗೆ ಮಾತ್ರ ಸಮೂಹದ ಸಿಇಒ ಹುದ್ದೆಯಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದರು. ಹಠಾತ್ತಾಗಿ ಅವರು ನಿರ್ಗಮಿಸಿರುವುದು ಉದ್ಯೋಗಿಗಳಲ್ಲಿ ಆಘಾತ ಮೂಡಿಸಿದೆ. |
ಕಾರ್ಯವೈಖರಿಯಲ್ಲಿ ಬದಲಾವಣೆ ಇಲ್ಲ |
'ನಮ್ಮ ಕಾರ್ಯ ನಿರ್ವಹಣಾ ವ್ಯವಸ್ಥೆಯಲ್ಲಿ ಮತ್ತು ಕಂಪೆನಿಯ ಯೋಜನೆಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಫ್ಲಿಪ್ ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಉದ್ಯೋಗಿಗಳಿಗೆ ಬರೆದ ಇ ಮೇಲ್ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. |
ಕಲ್ಯಾಣ್-ಸಮೀರ್ ಗೆ ಅಧಿಕಾರ |
ಬಿನ್ನಿ ಬನ್ಸಾಲ್ ಅವರಿಂದ ತೆರವಾದ ಸ್ಥಾನವನ್ನು ಕಲ್ಯಾಣ್ ಕೃಷ್ಣಮೂರ್ತಿ ಮತ್ತು ಸಮೀರ್ ನಿಗಂ ತುಂಬಲಿದ್ದಾರೆ. |
ಫ್ಲಿಪ್ ಕಾರ್ಟ್ ಸಿಇಒ ಆಗಿರುವ ಕಲ್ಯಾಣ್, ಅವರಿಗೆ ಮೈಂತ್ರಾ ಮತ್ತು ಜಬೊಂಗ್ ಮುಖ್ಯಸ್ಥರಾಗಿರುವ ಅನಂತ್ ನಾರಾಯಣನ್ ವರದಿ ಮಾಡಿಕೊಳ್ಳಲಿದ್ದಾರೆ. |
ಫ್ಲಿಪ್ ಕಾರ್ಟ್ ಜತೆಗೆ ಮೈಂತ್ರಾ ಮತ್ತು ಜಬೊಂಗ್ ಸಂಸ್ಥೆಗಳು ಸಹ ಒಂದುಗೂಡಲಿವೆ. ಆದರೆ, ಫ್ಲಿಪ್ ಕಾರ್ಟ್ ವ್ಯವಹಾರದ ಒಳಗೇ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸಲಿವೆ ಎಂದು ದಿ ವಾಲ್ಮಾರ್ಟ್-ಫ್ಲಿಪ್ ಕಾರ್ಟ್ ಸಮೂಹದ ಹೇಳಿಕೆ ತಿಳಿಸಿದೆ. |
ಕಲ್ಯಾಣ್ ಅವರು ಸಂಸ್ಥೆಯ ಎಲ್ಲ ವ್ಯವಹಾರಗಳ ವರದಿಗಳನ್ನು ಮಂಡಳಿಗೆ ನೇರವಾಗಿ ಒಪ್ಪಿಸಲಿದ್ದಾರೆ. ಫೋನ್ ಪೆ ಪೇಮೆಂಟ್ ಸೇವೆಯ ಸಿಇಒ ಆಗಿರುವ ಸಮೀರ್ ನಿಗಂ ಅವರೂ ಕೂಡ ಮಂಡಳಿಗೆ ನೇರವಾಗಿ ವರದಿ ಒಪ್ಪಿಸಲಿದ್ದಾರೆ. |
ದುರ್ನಡತೆ ಆರೋಪ |
ಬಿನ್ನಿ ಬನ್ಸಲ್ ವಿರುದ್ಧ ವೈಯಕ್ತಿಕ ದುರ್ನಡತೆ ಆರೋಪದ ಮೇಲೆ ಫ್ಲಿಪ್ ಕಾರ್ಟ್ ಹಾಗೂ ವಾಲ್ ಮಾರ್ಟ್ ನಿಂದ ಸ್ವತಂತ್ರ ತನಿಖೆಯೊಂದು ನಡೆದಿತ್ತು. ಆ ನಂತರ ತಮ್ಮ ಹುದ್ದೆ ತ್ಯಜಿಸುವ ನಿರ್ಧಾರಕ್ಕೆ ಅವರು ಬಂದಿದ್ದರು. |
ದೂರುದಾರರು ಆರೋಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ. ಆದರೆ ತೀರ್ಪು ಕೈಗೊಳ್ಳುವ ವೇಳೆಯಲ್ಲಿ ಇತರ ಲೋಪಗಳು ಕಂಡುಬಂದಿವೆ. ಮುಖ್ಯವಾಗಿ ಪಾರದರ್ಶಕತೆ ಹಾಗೂ ಆ ಸನ್ನಿವೇಶಕ್ಕೆ ಬಿನ್ನಿ ಪ್ರತಿಕ್ರಿಯೆ ನೀಡಿದ ರೀತಿ ಬಗ್ಗೆ ಲೋಪಗಳು ಕಂಡುಬಂದಿವೆ. ಆದ್ದರಿಂದ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದೇವೆ ಎಂದು ವಾಲ್ ಮಾರ್ಟ್ ಹೇಳಿಕೆಯಲ್ಲಿ ತಿಳಿಸಲಾಗಿದೆ. |
new delhi flipkart business india walmart finance news ನವದೆಹಲಿ ಭಾರತ ಫ್ಲಿಪ್ ಕಾರ್ಟ್ ವಾಣಿಜ್ಯ ವಾಲ್ ಮಾರ್ಟ್ |
ನಕಲಿ ಕಟ್ಟಡ ಕಾರ್ಮಿಕರ ವಿರುದ್ದ ಕ್ರಮಕೈಗೊಳ್ಳಿ | udayavani |
07:10 PM Jul 24, 2021 | Team Udayavani | |
ಕೋಲಾರ: ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಹಲವರು ಹೆಸರುನೋಂದಾಯಿಸಿ ಇಲಾಖೆ ಸೌಲಭ್ಯದುರುಪಯೋಗಪಡಿಸಿಕೊಳ್ಳುವವಂಚಕರ ವಿರುದ್ಧ ಕಠಿಣ ಕ್ರಮ ಕೈಕೂಳ್ಳಬೇಕೆಂದು ಶಾಸಕ ಕೆ.ಶ್ರೀನಿವಾಸಗೌಡಕಾರ್ಮಿಕ ಅಧಿಕಾರಿಗಳಿಗೆ ಸೂಚನೆ ನೀಡಿದರು. |
ನಗರದ ವಿನಯ್ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ, ರಾಜ್ಯಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಹಮ್ಮಿಕೊಂಡಿದ್ದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆಹಾರಧಾನ್ಯದ ಕಿಟ್ ವಿತರಣೆ ಮಾಡಿ ಮಾತನಾಡಿದರು. ಕೋಲಾರ,ನರಸಾ±ುರ , Ê ೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರಕಲ್ಯಾಣಕಾಗಿ ಕ R ೇಂದ್ರವನ್ನುಮಂಜೂರುಮಾಡಬೇಕಂದೆ ುಸಚಿವÃಲ್ಲಿ ಮನವಿ ಮಾಡಿದ್ದು, ಅತಿ ಶೀಘ್ರದಲ್ಲಿ 2 ಕೋಟಿ ರೂ.ನಲ್ಲಿಪ್ರಾರಂಭಿಸಲಾಗುವುದು ಎಂದು ಹೇಳಿದರು. |
ಇ.ಎಸ್.ಐ ಆಸ್ಪತ್ರೆ ನಿರ್ಮಿಸಲು ಜಿಲ್ಲಾvಳಿತ ಜಮೀನುನಿಗದಿಪಡಿಸಿದ್ದು, ಆಸ್ಪತ್ರೆ ಕಟ್ಟಡ ನಿರ್ಮಾಣ ಮತ್ತು ವೈದ್ಯಕೀಯಸೌಲಭ್ಯ ಮಂಜೂರು ಮಾಡಲು ಕೇಂದ್ರ ಮತ್ತು ರಾಜ್ಯ ಕಾರ್ಮಿಕಸಚಿವರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.ಕಟಡ r ಕಾರ್ಮಿಕರಿಗೆ ಗುಂಪು ವಸತಿ ಯೋಜನೆಯಡಿ ಮನೆನಿರ್ಮಿÓಲು ಸ್ಥಳ ಗುÃುತಿಸಿ ದ್ದು, ಸರ್ಕಾರದಿಂದ ಮಂಜೂರಾತಿಬಂದ ನಂತರ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಅರ್ಹರುಇಲಾಖೆಯಲ್ಲಿ ನೋಂದಣಿ ಮಾಡಿಸಲು ಸಲಹೆ ನೀಡಿದರು. |
ಕರ್ನಾಟಕ ಪ್ರದೇಶ ಅಸಂಘಟಿತಕಾರ್ಮಿಕ ಪರಿಷತ್ ಅಧ್ಯಕ್ಷರೂಹಾಗೂ ದಿ.ಕೋಲಾರ ಜಿಲ್ಲಾ ಕಟ್ಟಡ ಕಾರ್ಮಿಕರ ಕಲ್ಯಾಣಸೊಸೈಟಿಯ ಅಧ್ಯಕ್ಷ ಕೆ.ವಿ.ಸುರೇಶ್ಕುಮಾರ್ ಪ್ರಾಸ್ತಾವಿಕವಾಗಿಮಾತನಾಡಿದರು.ಟಿಎಪಿಸಿಎಂಎಸ್ ಅಧ್ಯಕ್ಷ ನಾಗನಾಳ ಸೋಮಣ್ಣ, ಕಾರ್ಮಿಕ ನಿರೀಕ್ಷಕಿ ರಾಜೇಶ್ವರಿ,ಪ್ರಕಾಶ,ದಿ.ಕೋಲಾರಜಿಲ್ಲಾ ಕಟ್ಟಡ ಕಾರ್ಮಿಕರ ಕಲ್ಯಾಣ ಸೊಸೈಟಿಯ ಅಧ್ಯಕ್ಷ ಕೋಡಿಕಣ್ಣೂರು ನಾಗರಾಜ್, ಪ್ರಧಾನಕಾರ್ಯದರ್ಶಿ ಹೊಗರಿ ಮಂಜುನಾಥ್, ಖಜಾಂಚಿ ಷೇಖ್ಬಾಬಉಪಸ್ಥಿತರಿದ್ದರು. |
ದೀಪಾವಳಿ ಹಬ್ಬಕ್ಕೆ ರಿಲಾಯನ್ಸ್ ಡಿಜಿಟಲ್ನಲ್ಲಿ ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್ ಕೊಡುಗೆ! | This diwali celebration get bigger with reliance digital festival of electronics ckm |
ದೀಪಾವಳಿ ಹಬ್ಬಕ್ಕೆ ರಿಲಾಯನ್ಸ್ ಡಿಜಿಟಲ್ನಲ್ಲಿ ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್ ಕೊಡುಗೆ! |
Bengaluru, First Published 12, Nov 2020, 10:57 PM |
ಡಿಜಿಟಲ್ ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್ ಕೊಡುಗೆ ಘೋಷಿಸಿದ ರಿಲಾಯನ್ಸ್ |
ಬಿಗ್ ಆಫರ್ 2020 ನವೆಂಬರ್ 16 ರ ವರೆಗೆ ಚಾಲ್ತಿಯಲ್ಲಿರಲಿದೆ |
10% ಕ್ಯಾಶ್ಬ್ಯಾಕ್, ಇಎಂಐನಲ್ಲಿ ರೂ. 4500/- ವರೆಗೆ ರಿಯಾಯಿತಿ, 1000/- ಮೌಲ್ಯದ ವೋಚರ್ ಗಿಫ್ಟ್ |
ಬೆಂಗಳೂರು(ನ.12) ಈ ವರ್ಷದ ರಿಲಾಯನ್ಸ್ ಡಿಜಿಟಲ್ ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್ ಇನ್ನಷ್ಟು ದೊಡ್ಡದಾಗಿದೆ ಮತ್ತು ಉತ್ತಮ ಆಫರ್ಗಳೂ ಇವೆ. ವಿವಿಧ ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳ ಬಗ್ಗೆ ಅದ್ಭುತ ಡೀಲ್ಗಳನ್ನು ಗ್ರಾಹಕರು ಪಡೆಯಬಹುದು. ಎಚ್ಡಿಎಫ್ಸಿ ಬ್ಯಾಂಕ್ ಡೆಬಿಟ್ ಕಾರ್ಡ್ಗಳು, ಕ್ರೆಡಿಟ್ ಕಾರ್ಡ್ಗಳು ಮತ್ತು ಈಸಿ ಇಎಂಐ ಮೂಲಕ 10% ಕ್ಯಾಶ್ಬ್ಯಾಕ್ ಕೂಡ ಲಭ್ಯವಿದೆ. ಸಿಟಿಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಡೆಬಿಟ್ ಕಾರ್ಡ್ಗಳು, ಕ್ರೆಡಿಟ್ ಕಾರ್ಡ್ಗಳು ಮತ್ತು ಇಎಂಐನಲ್ಲಿ ರೂ. 4500/- ವರೆಗೆ ರಿಯಾಯಿತಿಯನ್ನೂ ಪಡೆಯಬಹುದು. ಅಮೆರಿಕನ್ ಎಕ್ಸ್ಪ್ರೆಸ್ ಗ್ರಾಹಕರು ಅಮೆರಿಕನ್ ಎಕ್ಸ್ಪ್ರೆಸ್ ಕಾರ್ಡ್ಗಳ ಮೇಲೆ ರೂ. 2000/- ಫ್ಲಾಟ್ ಡಿಸ್ಕೌಂಟ್* ಪಡೆಯಬಹುದು. ರಿಲಾಯನ್ಸ್ ಡಿಜಿಟಲ್ನಿಂದ ಹಬ್ಬದ ಕೊಡುಗೆಯಾಗಿ, ರೂ. 1000/- ಮೌಲ್ಯದ ವೋಚರ್ಗಳನ್ನು ಗ್ರಾಹಕರು ಪಡೆಯುತ್ತಾರೆ. ಸೇಲ್ ಪ್ರಸ್ತುತ ಚಾಲ್ತಿಯಲ್ಲಿದೆ ಮತ್ತು 2020 ನವೆಂಬರ್ 16 ರ ವರೆಗೆ ಚಾಲ್ತಿಯಲ್ಲಿರಲಿದೆ. |
ರಿಲಯನ್ಸ್ ಡಿಜಿಟಲ್ನಲ್ಲಿ ಭರ್ಜರಿ ಆಫರ್; Apple ಐಪ್ಯಾಡ್, ವಾಚ್ ಪ್ರಿ ಬುಕಿಂಗ್ |
Subsets and Splits
No community queries yet
The top public SQL queries from the community will appear here once available.