text
stringlengths
0
61.5k
ಫಿಕ್ಸೆಡ್‌ನಿಂದ ಫ್ಲೋಟಿಂಗ್‌ ದರಕ್ಕೆ ಬದಲಾಗಿ
ಒಂದು ವೇಳೆ ನೀವು ಫಿಕ್ಸೆಡ್‌ ರೇಟ್‌ ಬಡ್ಡಿದರದಲ್ಲಿ ಗೃಹ ಸಾಲ ತೆಗೆದುಕೊಂಡಿದ್ರೆ, ನಿಮ್ಮ ಸಾಲದ ಅವಧಿಯುದ್ದಕ್ಕೂ ಅಧಿಕ ಬಡ್ಡಿ ಕಟ್ಟಬೇಕಾಗುತ್ತದೆ. ಫ್ಲೋಟಿಂಗ್‌ ಬಡ್ಡಿ ಹೊಂದಿದ್ರೆ, ಅದು ಆರ್ಥಿಕ ನೀತಿ ಹಾಗೂ ಪರಿಸ್ಥಿತಿಗಳಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಅಲ್ಲದೆ, ಫಿಕ್ಸೆಡ್‌ಗೆ ಹೋಲಿಸಿದ್ರೆ ಇದ್ರಲ್ಲಿ ಬಡ್ಡಿದರ ಕಡಿಮೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಬಡ್ಡಿ ದರ ಇಳಿಕೆ ಕಂಡಿರೋ ಕಾರಣ ಫಿಕ್ಸೆಡ್‌ನಿಂದ ಫ್ಲೋಟಿಂಗ್‌ ದರಕ್ಕೆ ಬದಲಾಯಿಸಿಕೊಳ್ಳೋದು ಉತ್ತಮ.
ಸಾಲದ ಸ್ವಲ್ಪ ಭಾಗ ಪಾವತಿಸಿ
ಸಾಲದ ಅರ್ಧ ಅಥವಾ ಅದಕ್ಕಿಂತಲೂ ಕಡಿಮೆ ಭಾಗವನ್ನು ಅವಧಿಗಿಂತ ಮುನ್ನ ಪಾವತಿಸೋದ್ರಿಂದ ಇಎಂಐ ಮೊತ್ತದಲ್ಲಿ ಕಡಿತವಾಗುತ್ತದೆ. ನಿಮ್ಮ ಸಾಲದ ಮೊತ್ತ ತಗ್ಗೋ ಕಾರಣ ಸಹಜವಾಗಿಯೇ ಇಎಂಐ ಕಡಿಮೆಯಾಗುತ್ತದೆ.
ಪ್ರಸಕ್ತ ಪಾವತಿಸುತ್ತಿರೋ ಇಎಂಐ ಮೊತ್ತ ನಿಮಗೆ ಹೆಚ್ಚೆಂದು ಅನಿಸುತ್ತಿದ್ರೆ ಅಥವಾ ಅದ್ರಿಂದಾಗಿ ಬೇರೆ ವೆಚ್ಚಗಳನ್ನು ಭರಿಸಲು ಸಾಧ್ಯವಾಗುತ್ತಿಲ್ಲವೆಂದಾದ್ರೆ ಸಾಲದ ಅವಧಿಯನ್ನು ವಿಸ್ತರಿಸುವಂತೆ ಬ್ಯಾಂಕ್‌ಗೆ ಮನವಿ ಮಾಡಿ. ಆದ್ರೆ ಇಲ್ಲಿ ನಿಮ್ಮ ವಯಸ್ಸು ಗಣನೆಗೆ ಬರುತ್ತದೆ. ಅಂದ್ರೆ 55 ನೇ ವಯಸ್ಸಿನಲ್ಲಿ ಸಾಲವನ್ನು 10 ವರ್ಷ ವಿಸ್ತರಿಸುವಂತೆ ಕೇಳಿದ್ರೆ, ಬ್ಯಾಂಕ್‌ಗಳು ಒಪ್ಪೋದಿಲ್ಲ. ಏಕೆಂದ್ರೆ 60 ನಿವೃತ್ತಿ ವಯಸ್ಸಾಗಿರೋ ಕಾರಣ ಅದಕ್ಕಿಂತ ಹೆಚ್ಚಿನ ಅವಧಿಗೆ ವಿಸ್ತರಿಸೋದಿಲ್ಲ.
ವಿಶೇಷ: Latest ವಿಶೇಷ News & Updates, Photos & Images, Videos | Vijaya Karnataka - Page 13
October,19,2019, 01:01:15
OnePlus 7T Pro: ಆಕರ್ಷಕ ವಿನ್ಯಾಸದ ಪ್ರೀಮಿಯಂ ಫೋನ್
Oct 12, 2019, 09.29 AM
ಪ್ರೀಮಿಯಂ ಸ್ಮಾರ್ಟ್‌ಫೋನ್ ಎಂದೇ ಖ್ಯಾತಿ ಗಳಿಸಿರುವ ಒನ್‌ಪ್ಲಸ್, ಹೊಸ 7T Pro ಮಾದರಿಯನ್ನು ಬಿಡುಗಡೆ ಮಾಡಿದೆ. ಒನ್‌ಪ್ಲಸ್ ಸರಣಿಯಲ್ಲಿ ಈವರೆಗಿನ ದುಬಾರಿ ಮತ್ತು ಗರಿಷ್ಠ ವೇಗದ ಫೋನ್ ಇದಾಗಿದೆ.
Great Indian Festival Sale: ಅಮೆಜಾನ್ ಫೆಸ್ಟಿವಲ್ ಸೇಲ್
Oct 12, 2019, 09.23 AM
ಅಮೆಜಾನ್‌ನಲ್ಲಿ ಹಬ್ಬದ ವಿಶೇಷ ಕೊಡುಗೆಯ ಮತ್ತೊಂದು ಸೇಲ್ ಬರುತ್ತಿದ್ದು, ಭಾನುವಾರ ಅ. 13ರಿಂದ ಆರಂಭವಾಗುತ್ತಿದೆ. ಸ್ಮಾರ್ಟ್‌ಫೋನ್ ಖರೀದಿಗೆ ವಿಶೇಷ ಕೊಡುಗೆ ಲಭ್ಯವಿದೆ.
Big Diwali Sale: ಫ್ಲಿಪ್‌ಕಾರ್ಟ್ ದೀಪಾವಳಿ ಆಫರ್ ಸೇಲ್
Oct 12, 2019, 09.21 AM
ದೇಶದ ಪ್ರಮುಖ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸ್ಪರ್ಧೆಗೆ ಬಿದ್ದವರಂತೆ ದೀಪಾವಳಿ ಆಫರ್ ಸೇಲ್ ನಡೆಸುತ್ತಿದ್ದು, ಗ್ರಾಹಕರಿಗೆ ಅನುಕೂಲವಾಗಲಿದೆ. ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್ ಕುರಿತು ವಿವರ ಇಲ್ಲಿದೆ.
ಸ್ನೇಹ ವಿಶೇಷ ಶಾಲೆಯಲ್ಲಿಹಣ್ಣು ವಿತರಣೆ
ಭಟ್ಕಳ: ತಾಲೂಕಿನ ಕೋಗ್ತಿಯಲ್ಲಿರುವ ಸ್ನೇಹ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ ಮಂಗಳೂರಿನ ಸನಾತನ ಸಂಸ್ಥೆಯ ಸಮಾಜ ಸಹಾಯಕ ಅಭಿಯಾನದ ಅಡಿಯಲ್ಲಿಹಣ್ಣು ಹಂಪಲು ಹಾಗೂ ತಂಪು ಪಾನೀಯವನ್ನು ವಿತರಿಸಲಾಯಿತು.
ದೀಪಾವಳಿಗೆ ಯಲಹಂಕದಿಂದ ಬೀದರ್‌ಗೆ ವಿಶೇಷ ರೈಲು
ಬೆಂಗಳೂರಿನ ಯಲಹಂಕದಿಂದ ಬೀದರ್‌ಗೆ ದೀಪಾವಳಿ ಹಬ್ಬಕ್ಕಾಗಿ ಬರುವ ಪ್ರಯಾಣಿಕರಿಗಾಗಿ ರೈಲ್ವೆ ಇಲಾಖೆಯು 'ಸುವಿಧಾ ಸ್ಪೇಷಲ್‌ ರೈಲು' ಓಡಿಸಲಿದೆ. ಹಬ್ಬದ ವೇಳೆ ಸ್ವ ಗ್ರಾಮಕ್ಕೆ ಬರಲು ಜನರಿಗೆ ಬಸ್ಸು ಹಾಗೂ ರೈಲಿನಲ್ಲಿಟಿಕೆಟ್‌ ಸಿಗದೇ ಖಾಸಗಿ ವಾಹನಗಳಿಗೆ 3000 ರೂ. ಗೂ ಅಧಿಕ ಹಣ ನೀಡಿ ಬರಬೇಕಿದೆ.
ಚಾಮುಂಡಿ, ಶ್ರೀಕಂಠೇಶ್ವರನ ದರ್ಶನ ಪಡೆದ ರಾಷ್ಟ್ರಪತಿ
ಮೈಸೂರು ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಶುಕ್ರವಾರ ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯ ಹಾಗೂ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಅನರ್ಹರ ಬಿಪಿಎಲ್‌ ಕಾರ್ಡ್‌ ಪತ್ತೆ ಆರಂಭ
ರ್ಹತೆ ಇಲ್ಲದಿದ್ದರೂ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬ ಪತ್ತೆ ಹಚ್ಚಲು ವಿಶೇಷ ಕಾರಾರ‍ಯಚರಣೆ ಶಿಕಾರಿಪುರ, ಶಿರಾಳಕೊಪ್ಪ ಪಟ್ಟಣದಲ್ಲಿಆರಂಭಿಸಲಾಗಿದ್ದು, ನಾಗರಿಕರು ಸಹಕಾರ ನೀಡಬೇಕೆಂದು ತಹಸೀಲ್ದಾರ್‌ ಕವಿರಾಜ್‌ ಮನವಿ ಮಾಡಿದ್ದಾರೆ.
ಗಾಂಧೀಜಿ ವಿಚಾರಧಾರೆ ಅಳವಡಿಸಿಕೊಳ್ಳಿ
ಬೆಳಗಾವಿ: ಜಾಗತಿಕ ಮಟ್ಟದಲ್ಲಿಗಾಂಧಿ ವಿಚಾರಧಾರೆಯ ಪ್ರಚಾರ ಮತ್ತು ಅಳವಡಿಸಿಕೊಳ್ಳುವ ...
ಬಾಲಕಿಗೆ ಲೈಂಗಿಕ ಕಿರುಕುಳ: ಇಬ್ಬರಿಗೆ ಜೈಲು
ವಿಜಿನಾಪುರ ನಿವಾಸಿ ಸತೀಶ್‌ ಕುಮಾರ್‌ಗೆ 2 ವರ್ಷ ಜೈಲು ಹಾಗೂ 500 ರೂ. ದಂಡ ಮತ್ತು ಜೇಸುದಾಸ್‌ಗೆ 2 ತಿಂಗಳು ಜೈಲು ಹಾಗೂ 5 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಆರ್‌.ಶಾರದಾ ತೀರ್ಪು ನೀಡಿದ್ದಾರೆ.
ಫರ್ನಿಚರ್‌ ಆ್ಯಂಡ್‌ ಹೋಂ ಡೆಕೋರ್‌ ಎಕ್ಸ್‌ಪೋಗೆ ಚಾಲನೆ
ಬೆಳಗಾವಿ: ಇಲ್ಲಿನ ಕಾಲೇಜು ರಸ್ತೆಯ ಮಹಾತ್ಮ ಗಾಂಧಿ ಭವನದಲ್ಲಿದೇಶ-ವಿದೇಶಗಳಲ್ಲಿ ...
ಕವಿವಿ ಅಂತರ್‌ ಕಾಲೇಜು ಕುಸ್ತಿ ಸ್ಪರ್ಧೆ 14ರಿಂದ
ದಾಂಡೇಲಿ : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ದೈಹಿಕ ಶಿಕ್ಷಣ ಮತ್ತು ಧಾರವಾಡದ ಕ.ವಿ.ವಿ. ಕ್ರೀಡಾ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿಅ.14 ಮತ್ತು 15ರಂದು ಕವಿವಿ ಅಂತರ್‌ ಕಾಲೇಜು ಪುರುಷ ಫ್ರೀ ಸ್ಟೆತ್ರೖಲ್‌, ಪುರುಷ ಗ್ರೀಕೋ ರೋಮನ್‌ ಹಾಗೂ ಮಹಿಳೆಯರ ಫ್ರೀಸ್ಟೆತ್ರೖಲ್‌ ಕುಸ್ತಿ (ಮಲ್ಲಯುದ್ಧ) ಸ್ಪರ್ಧೆ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆ ಪ್ರಕ್ರಿಯೆ ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿನಡೆಯಲಿದೆ.
ಇಡೀ ಬ್ರಹ್ಮಾಂಡಕ್ಕೆ ಬೆಳಕು ಕೊಡುವ ಸೂರ್ಯನನ್ನು ದೇವನೆಂದೇ ಆರಾಧನೆ ಮಾಡಲಾಗುತ್ತದೆ. ಸೂರ್ಯದೇವನಿಗೆ ಅರ್ಪಿತವಾಗಿರುವ ಕೆಲವೇ ಕೆಲವು ದೇಗುಲಗಳಲ್ಲಿಗುಜರಾತ್‌ನ ಮೊಧೇರಾ ಸೂರ್ಯ ದೇಗುಲವೂ ಒಂದು.
ಅಪ್ರಾಮಾಣಿಕ, ಅವಕಾಶವಾದಿ, ಆಷಾಡಭೂತಿ ಪ್ರಗತಿಪರರು : ಭಾಗ ೧ | ನಿಲುಮೆ
ಜನವರಿ 11, 2016
ಅಪ್ರಾಮಾಣಿಕ, ಅವಕಾಶವಾದಿ, ಆಷಾಡಭೂತಿ ಪ್ರಗತಿಪರರು : ಭಾಗ ೧
ಅಯ್ಯೋ! ನಮ್ಮ ರಾಜ ಹೀಗೇಕೆ ಬೆತ್ತಲಾಗಿದ್ದಾನೆ?
ಮನುಷ್ಯನ ಕ್ಷುದ್ರತನದ ಬಗ್ಗೆ ಮಾತಾಡುವುದು, ಬರೆಯುವುದು ನನಗೆ ಖುಶಿ ನೀಡದ ಸಂಗತಿ. ಆದರೆ ಒಬ್ಬ ಅಂಕಣಕಾರನಾಗಿ ವೈವಿಧ್ಯಮಯ ವಸ್ತುವಿಷಯಗಳಲ್ಲಿ ನಾನು ಕೈಯಾಡಿಸ- ಬೇಕಾಗುತ್ತದೆ. ಇದು ಅಗತ್ಯವಾಗುವುದು ಬರಹಗಳ ಸಮಕಾಲೀನತೆ, ಉಪಯುಕ್ತತೆ ಹಾಗೂ ಒಟ್ಟಾರೆ ನಿರಂತರ ಚಲನಶೀಲ ಬೌದ್ಧಿಕ ಬೆಳವಣಿಗೆಯ ಪ್ರಕ್ರಿಯೆಗೆ ಅವುಗಳ ಕೊಡುಗೆಯ ಕುರಿತಾದ ನಿರೀಕ್ಷೆಗಳಿಗನುಗುಣವಾಗಿ. ಈ 'ನಿರೀಕ್ಷೆ'ಗಳನ್ನು ಪರಿಗಣಿಸಿ ಇಂದು ನಾನು ವಿಶ್ಲೇಷಣೆಗೆತ್ತಿಕೊಳ್ಳುತ್ತಿರುವ ವಿಷಯ ಇಂಗ್ಲಿಷ್ನಲ್ಲಿ Political Correctiveness ಅಥವಾ "Political Correctitude" ಮತ್ತು ಇವೆರಡನ್ನೂ ಚಿಕ್ಕದಾಗಿಸಿ PC ಎಂದು ಕರೆಯಲಾಗುವ ಮನುಷ್ಯಸ್ವಭಾವ.ಇದು ಸಂಭಾಷಣೆಯಲ್ಲಿ ಹಾಗೂ ಬರವಣಿಗೆಯಲ್ಲಿ "politically correct" ಆಗಿ ಮಾತಾಡುವುದು, "ಜಾಣತನದ ಹೇಳಿಕೆ ನೀಡುವುದು" ಎಂದು ಬಳಕೆಯಾಗುತ್ತದೆ. ಇದು ಸೂಚಿಸುವ "ವಾಸ್ತವವನ್ನು, ನಿಜವನ್ನು ಮರೆಮಾಚುವುದು" ಎಂಬ ಅರ್ಥವಂತೂ ಈ ದಿನದ ವಾಸ್ತವವನ್ನು ಢಾಳಾಗಿ ಪ್ರತಿಬಿಂಬಿಸುತ್ತದೆ.
ಈ PCಯ ಮೂಲವನ್ನು ಶೋಧಿಸಹೊರಟರೆ ನಾವು ಸ್ಟ್ಯಾಲಿನ್ ಯುಗಕ್ಕೆ ಹೋಗಿ ನಿಲ್ಲುತ್ತೇವೆ.ಆತನ ಕಮ್ಯೂನಿಸ್ಟ್ ಸರಕಾರ ಏನೇ ಮಾಡಿದರೂ ಅದೆಲ್ಲವೂ ಸರಿಯೇ ಎಂದು ವಾದಿಸುವ ಪರಿಪಾಠ ಮೂವತ್ತರ ದಶಕದಲ್ಲಿ ಸೋವಿಯೆತ್ ಯೂನಿಯನ್ನಲ್ಲಿ ಕಾಣಿಸಿಕೊಂಡಿತು. ಇದು ಅವಾಸ್ತವಿಕ ವರ್ತನೆಯೇನೋ ನಿಜ, ಆದರೆ ಇದರ ಹಿಂದಿದ್ದ ಸದಾಶಯವನ್ನು ನಾವು ಗುರುತಿಸಲೇಬೇಕು.ಸ್ಟ್ಯಾಲಿನ್ನ ನೀತಿಗಳು ಆ ದಿನಕ್ಕೆ ತಪ್ಪಾಗಿ, ಕ್ರೂರವಾಗಿ ಕಂಡರೂ, ಭವಿಷ್ಯದಲ್ಲಿ ಒಟ್ಟಾರೆ ಸಮಾಜದ ಹಿತದೃಷ್ಟಿಯಿಂದ ಸರಿಯಾಗಿಯೇ ಇವೆ ಎಂಬ ಸದಾಶಯ ಅದಾಗಿತ್ತು. ಯುದ್ಧಕಾಲದಲ್ಲಿ ಅದು ಅಮೆರಿಕಾಗೂ ತಲುಪಿತು.ಜರ್ಮನ್ ಪೈಶಾಚಿಕ ಧಾಳಿಯ ವಿರುದ್ಧ ಮಹಾನ್ ದೇಶಾಭಿಮಾನಿ ಯುದ್ಧದಲ್ಲಿ ಧೀಮಂತವಾಗಿ ಸೆಣಸುತ್ತಿದ್ದ ಸೋವಿಯೆತ್ ಯೂನಿಯನ್, ಆ ಮೂಲಕ ಅಮೆರಿಕಾಗೆ ಸ್ಟ್ಯಾಲಿನ್ ನೀಡುತ್ತಿದ್ದ ಸಹಕಾರ ಅಮೆರಿಕನ್ ಬುದ್ಧಿಜೀವಿಗಳಿಗೆ, ಮಾಧ್ಯಮದ ಒಂದು ವರ್ಗಕ್ಕೆ ಪ್ರಿಯವಾದದ್ದು ಸಹಜವೇ. ಆದರೆ ಎಡಪಂಥೀಯ ಬುದ್ಧಿಜೀವಿಗಳು ಇದನ್ನು ಅತಿಯಾಗಿ ಉಪಯೋಗಿಸತೊಡಗಿ ಎಲ್ಲ ವಿಷಯದಲ್ಲೂ "politically correct" ಆಗಿ ಮಾತಾಡುವುದು ಅಂದರೆ ಜಾಣತನದ ಹೇಳಿಕೆ ನೀಡುವುದು ಅವರ ಅಭ್ಯಾಸವಾಗಿಹೋಯಿತು.ಇದು ಮುಖ್ಯವಾಹಿನಿ ಮಾಧ್ಯಮದಲ್ಲೂ ಪ್ರಧಾನವಾಗಿ ಕಾಣಿಸಿಕೊಳ್ಳಲು ಹೆಚ್ಚುಕಾಲ ಬೇಕಾಗಲಿಲ್ಲ. ಅಂದರೆ ವಾಸ್ತವಕ್ಕೆ ವಿರುದ್ಧವಾಗಿ ಮಾತಾಡುವುದು, ಅದೇ ಪರಮಸತ್ಯವೆಂದು ವಾದಿಸುವುದು ಬುದ್ಧಿಜೀವಿ ವರ್ಗದ ಜಾಯಮಾನವಾಗಿಹೋಯಿತು.ಅತಿಯಾದರೆ ಹಾಲೂ ಹಾಲಾಹಲವಾಗುತ್ತದಂತೆ. PC ವಿಷಯದಲ್ಲಿ ಆದದ್ದೂ ಅದೇ.
ಹೀಗೆ, ಮೂಲತಃ ಸದಾಶಯವನ್ನೇ ಸೂಚಿಸುತ್ತಿದ್ದ, ಒಳ್ಳೆಯ ಅರ್ಥವನ್ನೇ ಹೊಂದಿದ್ದ PC ಅತಿಯಾದ ದುರುಪಯೋಗದಿಂದಾಗಿ 1940ರ ದಶಕದಲ್ಲಿ ಅಮೆರಿಕಾದಲ್ಲಿ ಋಣಾತ್ಮಕ ಅರ್ಥವನ್ನು ಪಡೆದುಕೊಂಡಿತು. ಇದನ್ನು ಅಮೆರಿಕಾ 'ಅಧಿಕೃತ'ವಾಗಿ ಗುರುತಿಸಿದ ಪ್ರಕರಣವನ್ನು ನಿಮಗೆ ಪರಿಚಯಿಸುತ್ತೇನೆ. ಓದು, ಬರಹದಲ್ಲಿ ಮಡಿವಂತಿಕೆ ಬಯಸುವವರಿಗೆ ಸ್ವಲ್ಪ ಮುಜುಗರವಾಗಬಹುದು. ಸಹಿಸಿಕೊಳ್ಳಿ, ವಿಧಿಯಿಲ್ಲ. ದಿನಬೆಳಗಾದರೆ ಜಾಣತನದ ಹೇಳಿಕೆಗಳನ್ನು ಕೇಳಿಕೇಳಿ ಅಭ್ಯಾಸವಾಗಿರುವ ನಿಮಗೆ ಅದು ಕಷ್ಟವಾಗಲಾರದು.
ಇಲ್ಲಿ ನಾನು ಉದಾಹರಿಸಹೊರಟಿರುವುದು ನಾಲ್ಕು ಟೆಲಿಗ್ರಾಂಗಳು. ಸೆಪ್ಟೆಂಬರ್ 2, 1945ರಂದು ಜಪಾನ್ ಎರಡನೆಯ ಮಹಾಯುದ್ಧದಲ್ಲಿ ಸೋತು ಅಮೆರಿಕಾ ಜತೆ ಶರಣಾಗತಿಯ ಪತ್ರಕ್ಕೆ ಸಹಿ ಹಾಕಿತಷ್ಟೆ. ಅದರ ಮುನ್ನಾದಿನ ಟೋಕಿಯೋದಲ್ಲಿದ್ದ ಅಮೆರಿಕನ್ ಸೇನೆಯ ಮುಖ್ಯಸ್ಥ ಜನರಲ್ ಡಗ್ಲಾಸ್ ಮೆಕಾರ್ಥರ್ ಮತ್ತು ವಾಷಿಂಗ್ಟನ್ನಲ್ಲಿದ್ದ ಅಧ್ಯಕ್ಷ ಹ್ಯಾರಿ ಎಸ್ ಟ್ರೂಮನ್ ನಡುವೆ ರವಾನೆಯಾದ ಟೆಲಿಗ್ರಾಂಗಳಿವು. ಇವು ಹೇಗಿದ್ದವೋ ಹಾಗೇ ನಿಮ್ಮ ಮುಂದಿಡುತ್ತಿದ್ದೇನೆ. ನಾನು ಮಾಡಿರುವ ಏಕೈಕ ಬದಲಾವಣೆಯೆಂದರೆ ಅವುಗಳನ್ನು ಕನ್ನಡಕ್ಕೆ ಅನುವಾದಿಸಿರುವುದು.ಇವು ನಿಮ್ಮ ಮನರಂಜಿಸುವುದಷ್ಟೇ ಅಲ್ಲ, ಬುದ್ಧಿಜೀವಿ ವರ್ಗದಲ್ಲಿ ಕಾಣಿಸಿಕೊಂಡ ಆಷಾಡಭೂತಿತನವೆಂಬ ದುರಂತವನ್ನೂ ತೆರೆದಿಡುತ್ತವೆ.
ಟೆಲಿಗ್ರಾಂ 1
1800-ಸೆಪ್ಟೆಂಬರ್ 1, 1945
ಗೆ: ಅಧ್ಯಕ್ಷ ಹ್ಯಾರಿ ಎಸ್ ಟ್ರೂಮನ್
ಇಂದ: ಜನರಲ್ ಡಿ ಎ ಮೆಕಾರ್ಥರ್
ನಾಳೆ ನಾವು ಆ ಹಳದೀ ಹೊಟ್ಟೆಯ ಸೂಳೆಮಕ್ಕಳನ್ನು ಭೇಟಿಯಾಗಲಿದ್ದೇವೆ ಮತ್ತು ಶರಣಾಗತಿಯ ಕಾಗದಪತ್ರಗಳಿಗೆ ಸಹಿ ಹಾಕಲಿದ್ದೇವೆ, ಏನಾದರೂ ಕೊನೇ ಗಳಿಗೆಯ ಸೂಚನೆಗಳು!
ಟೆಲಿಗ್ರಾಂ 2
ವಾಷಿಂಗ್ಟನ್ ಡಿ ಸಿ
1300-ಸೆಪ್ಟೆಂಬರ್ 1, 1945
ಗೆ: ಡಿ ಎ ಮೆಕಾರ್ಥರ್
ಇಂದ: ಹೆಚ್ ಎಸ್ ಟ್ರೂಮನ್
ಅಭಿನಂದನೆಗಳು, ಸರಿಯಾಗಿ ಕರ್ತವ್ಯ ನಿಭಾಯಿಸಿದ್ದೀರಿ, ಆದರೆ ಶರಣಾಗತಿಯ ಷರತ್ತುಗಳನ್ನು ಪತ್ರಕರ್ತರೊಡನೆ ಚರ್ಚಿಸುವಾಗ ಜಪಾನೀಯರ ಬಗ್ಗೆ ನಿಮ್ಮಲ್ಲಿ ಎದ್ದುಕಾಣುವ ಅಸಹ್ಯ ಭಾವನೆಯನ್ನು ತಗ್ಗಿಸಬೇಕು, ಯಾಕೆಂದರೆ ನಿಮ್ಮ ಕೆಲವು ಮಾತುಗಳು ಮೂಲಭೂತವಾಗಿ not politically correct!
ಟೆಲಿಗ್ರಾಂ 3
1640-ಸೆಪ್ಟೆಂಬರ್ 1, 1945
ಗೆ: ಅಧ್ಯಕ್ಷ ಹೆಚ್ ಎಸ್ ಟ್ರೂಮನ್
ಇಂದ: ಡಿ ಎ ಮೆಕಾರ್ಥರ್ ಮತ್ತು ಸಿ ಹೆಚ್ ನಿಮಿಟ್ಜ್
ಸರಿ ಸರ್, ಆದರೆ ಚೆಸ್ಟರ್ ಮತ್ತು ನನಗೆ ಒಂದು ಬಗೆಯ ಗೊಂದಲವಾಗಿದೆ, politically correct ಅಂದರೆ ಸ್ಪಷ್ಟವಾಗಿ ಏನು ಅರ್ಥ ಅಂತ?
ಟೆಲಿಗ್ರಾಂ 4
2120-ಸೆಪ್ಟೆಂಬರ್ 1, 1945
ಗೆ: ಡಿ ಎ ಮೆಕಾರ್ಥರ್/ಸಿ ಹೆಚ್ ನಿಮಿಟ್ಜ್
ಇತ್ತೀಚೆಗೆ ಹಾದಿ ತಪ್ಪಿದ, ಅತಾರ್ಕಿಕ ಅಲ್ಯಸಂಖ್ಯಾತ ಗುಂಪೊಂದು ಅಪ್ಪಿಕೊಂಡಿರುವ, ರೋಗಗ್ರಸ್ತ ಮುಖ್ಯವಾಹಿನಿ ಮಾಧ್ಯಮದಿಂದ ಪ್ರಚಾರಗೊಳ್ಳುತ್ತಿರುವ ಒಂದು ಸಿದ್ಧಾಂತ ಈ Political Correctness, ಇದು ಪ್ರತಿಪಾದಿಸುವುದೇನೆಂದರೆ ಮಲದ ತುಂಡೊಂದನ್ನು ಅದರ ಶುದ್ಧ ತುದಿಯಿಂದ ಹಿಡಿದೆತ್ತಬಹುದು ಎಂದು!
ಮುಂದಿನ ಮೂರು ದಶಕಗಳೊಳಗೆ PC ಉದಾತ್ತ ಸಮಾಜಮುಖಿ ಅರ್ಥವನ್ನು ಪುನಃ ಗಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಯಿತು. ಅದರ ಪ್ರಕಾರ ಯಾವುದೇ ಬಗೆಯಲ್ಲಿ ಅಲ್ಪಸಂಖ್ಯಾತರಾಗಿರುವವರಲ್ಲಿ, ಬಲಹೀನರಾಗಿರುವವರಲ್ಲಿ ಕೀಳರಿಮೆಯನ್ನುಂಟುಮಾಡಬಾರದು. ಲಿಂಗ, ವರ್ಣ, ಜನಾಂಗ, ದೈಹಿಕ ನ್ಯೂನತೆಗಳನ್ನೆತ್ತಿಕೊಂಡು ವ್ಯಕ್ತಿಯನ್ನು ಅಥವಾ ವ್ಯಕ್ತಿಗಳ ಸಮುದಾಯವನ್ನು ಋಣಾತ್ಮಕವಾಗಿ ಬಿಂಬಿಸಬಾರದು ಎನ್ನುವುದು ಎಲ್ಲರೂ ಒಪ್ಪತಕ್ಕ ನಿಲುವೇ. ಈ ಪ್ರಕಾರವಾಗಿಯೇ ಅಮೆರಿಕಾದಲ್ಲಿ ರೆಡ್ ಇಂಡಿಯನ್ನರನ್ನು "ಮೂಲ ಅಮೆರಿಕನ್ನರು" ಎಂದೂ, ಕೆನಡಾದಲ್ಲಿ "ಪ್ರಥಮ ರಾಷ್ಟ್ರ"ವೆಂದೂ ಕರೆಯಲಾಯಿತು. ಕಪ್ಪುಜನರ ವಿಷಯಕ್ಕೆ ಬಂದರೆ ಅಮೆರಿಕಾದಲ್ಲಿ ಆಲ್ಲಿಯವರೆಗೆ ಬಳಕೆಯಲ್ಲಿದ್ದ "ನೀಗ್ರೋ" ವಿಶೇಷಣವನ್ನು ತೊರೆದು ಆಫ್ರಿಕನ್-ಅಮೆರಿಕನ್ಸ್ ಎಂದು ಕರೆಯಲಾಯಿತು. ಬ್ರಿಟನ್ನಲ್ಲಿ ಇವರು ಆಫ್ರೋ-ಕೆರಿಬಿಯನ್ಸ್ ಎಂದು ಕರೆಯಲ್ಪಡತೊಡಗಿದರು. "ಹಳದೀ ಜನರು" ಅಥವಾ "ಹಳದೀ ಕೆಡುಕುಗಳು" ಎಂದು ಲೇವಡಿಗೊಳಗಾಗುತ್ತಿದ್ದ ಚೀನೀ, ಜಪಾನೀ, ಪಿಲಿಫೀನೀ ಮುಂತಾದ ಮಂಗೋಲಾಯ್ಡ್ ಜನರು "ಈಸ್ಟ್ ಏಶಿಯನ್ಸ್" ಎಂದು ಗೌರವಪೂರ್ಣ ಬಿರುದಾಂಕಿತರಾದರು. ಈ ಬದಲಾವಣೆಗೆ ಧಾರ್ಮಿಕ ತಾರತಮ್ಯಸೂಚಕಗಳೂ ಹೊರತಾಗಲಿಲ್ಲ. "ಕ್ರಿಸ್ಮಸ್ ರಜಾದಿನಗಳು" ಧರ್ಮನಿರಪೇಕ್ಷಗೊಂಡು "ಛಳಿಗಾಲದ ರಜಾದಿನ"ಗಳಾದವು. ದೈಹಿಕನ್ಯೂನತೆಗಳನ್ನೂ ಸಹಾ ವ್ಯಕ್ತಿವಿಶೇಷಣ ಪದಬಳಕೆಗಳಿಂದ ಹೊರಗಟ್ಟುವ ಕ್ರಮವಾಗಿ ಬುದ್ಧಿಮಾಂದ್ಯರನ್ನು Intellectually Impaired (ಬೌದ್ಧಿಕಾಶಕ್ತ), ದೃಷ್ಟಿಹೀನರನ್ನು visually impaired (ದೃಶ್ಯಾಶಕ್ತ), ಕಿವುಡರನ್ನು hearing impaired (ಶ್ರವಣಾಶಕ್ತ) ಎಂದು ಕರೆಯಲಾಯಿತು. ಲಿಂಗಸಮಾನತಾ ಆಂದೋಲನದ ಪರಿಣಾಮವಾಗಿ ವೃತ್ತಿಗಳಿಗೂ ಹಬ್ಬಿದ ಈ ಮರುನಾಮಕರಣ ಪ್ರಕ್ರಿಯೆ ನಟಿಸುವವರೆಲ್ಲರನ್ನೂ "Actor" (ನಟ)ರನ್ನಾಗಿಸಿತು. ಹಾಗೇ ಮುಂದುವರೆದು, ಬರೆಯುವವವರೆಲ್ಲರೂ Writer (ಲೇಖಕ), ಕವಿತೆ ರಚಿಸುವವರೆಲ್ಲರೂ "Poet" (ಕವಿ)ಯಾದರು. ಇದು ಹೀಗೇ ಮುಂದುವರೆದು ಇತರ ವೃತ್ತಿಗಳಲ್ಲೂ ಲಿಂಗಸೂಚಕ ವೃತ್ತಿವಿಷೇಷಣಗಳು ಹೊರದೂಡಲ್ಪಟ್ಟವು. ಇದೆಲ್ಲದರ ಉದ್ದೇಶ ನಮ್ಮ ದೈನಂದಿನ ಜೀವನದಲ್ಲಿ ನಮ್ಮ ನಡೆನುಡಿಗಳು ತಾರತಮ್ಯರಹಿತವಾಗಿರಬೇಕು ಎಂಬ ಮಾನವಪರ ಕಾಳಜಿ.
ಹೀಗೆ PCಯ ಬಳಕೆ ಸಮಾಜದ ಎಲ್ಲ ರಂಗಗಳಿಗೂ ಪ್ರವೇಶಿಸಿದರೂ ಅದು ಬಹುಸಂಖ್ಯಾತವಿರೋಧಿಯಾಗಲಿಲ್ಲ. ಟೀಕಾಕಾರರು "ಅತಿಯಾದ ಸಂವೇದನೆ" ಎಂದು ಮೂಗುಮುರಿದರೂ, ಇತರ ಧರ್ಮೀಯರನ್ನು ಸಂತೈಸುವ ಭರದಲ್ಲಿ PCಯಿಂದಾಗಿ ಪಶ್ಚಿಮದ ಪ್ರಮುಖ ಧರ್ಮವಾದ ಕ್ರಿಶ್ಚಿಯಾನಿಟಿ ಲೇವಡಿಗೊಳಗಾಗಲಿಲ್ಲ, ಕ್ರಿಶ್ಚಿಯನ್ ಸಂಕೇತಗಳು ಅವಮಾನಕ್ಕೊಳಗಾಗಲಿಲ್ಲ. ಸ್ತ್ರೀಸಮಾನತೆಯ ಪ್ರತಿಪಾದನೆಯಲ್ಲಿ ಪುರುಷ ಅವಮಾನಕ್ಕೊಳಗಾಗಲಿಲ್ಲ. ಆದರೆ ನಮ್ಮಲ್ಲಿ PC ತನ್ನೆಲ್ಲಾ ಋಣಾತ್ಮಕ ಮುಖಗಳೊಂದಿಗೆ ಎಲ್ಲ ಕ್ಷೇತ್ರಗಳಲ್ಲೂ ಧಾಂಗುಡಿ ಇಡತೊಡಗಿದೆ. ನನಗೆ ಅಚ್ಚರಿ, ಬೇಸರ ಮೂಡಿಸುವುದು ಹಾಗೂ ಒಂದು ಬೌದ್ಧಿಕ ದುರಂತದಂತೆ ಕಾಣುವುದು ಆರೇಳು ದಶಕಗಳ ಹಿಂದೆ ಅಮೆರಿಕಾದಲ್ಲಿ PC ಗಳಿಸಿಕೊಂಡಿದ್ದ ಋಣಾತ್ಮಕ ಸ್ವರೂಪದಿಂದಲೇ ನಮ್ಮಲ್ಲಿ ಈಗ ಪ್ರಚಲಿತವಾಗಿರುವುದು ಮತ್ತು ಅ ಮೂಲಕ "ಜಾಣತನದ ಹೇಳಿಕೆ" ಎಂಬ ಅಷ್ಟೇನೂ ಗೌರವವಿಲ್ಲದ ಹಣೆಪಟ್ಟಿ ಹಚ್ಚಿಸಿಕೊಂಡಿರುವುದು! ಈ ನಿಟ್ಟಿನಲ್ಲಿ, 1940ರ ದಶಕದ ಅಮೆರಿಕಾಗೆ ಇಂದಿನ ಭಾರತ, ನಮಗೆ ಮುಖ್ಯವಾಗಿ ಕರ್ನಾಟಕ, ಸಮಾನವಾಗಿ ನಿಂತಿರುವುದು ಭಯಹುಟ್ಟಿಸುತ್ತದೆ. Political Correctness ಅಂದರೆ ಆಷಾಡಭೂತಿತನ ಎಂದಾಗಿದೆ. ಹಿಂದೂಗಳನ್ನು ಕ್ರಿಶ್ಚಿಯಾನಿಟಿಗೆ ಮತಾಂತರಿಸಿದರೆ ತಪ್ಪಲ್ಲ, ಆದರೆ ಅವರನ್ನು ಮತ್ತೆ ಹಿಂದೂಧರ್ಮಕ್ಕೆ ತರುವುದು ತಪ್ಪು ಎಂದಾಗಿದೆ. ನಲವತ್ತೇಳರ ದುರಂತಕ್ಕೆ ಬ್ರಿಟಿಷರ ಮತ್ತು ಮುಸ್ಲಿಂ ಲೀಗ್ನ ಹುನ್ನಾರಗಳು ಮೂಲಭೂತವಾಗಿ ಕಾರಣವಾದದ್ದು, ಅದರಿಂದಾಗಿ ಕೋಮುವಾದವೆಂಬ ರಕ್ಕಸ ಜನ್ಮತಾಳಿದ್ದು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದರೂ ಎಲ್ಲಾ ಅನಾಹುತಗಳಿಗೆ ಹಿಂದೂಗಳನ್ನು ದೂಷಿಸಲಾಗುತ್ತಿದೆ. ಬಸವಣ್ಣನ ತತ್ವಗಳ ಪ್ರಚಾರ ಹಾಗೂ ಅನುಷ್ಟಾನಕ್ಕೆ ಮಹತ್ವ ಕೊಡುವ ಬದಲಾಗಿ ಅವನು ಮಾದಿಗನೋ ಅಥವಾ ಬ್ರಾಹ್ಮಣನೋ ಎಂದು ತಲೆಕೆಡಿಸಿಕೊಳ್ಳಲು ನಮ್ಮನ್ನು ಪ್ರೇರೇಪಿಸುವ ಪ್ರಯತ್ನಗಳು ಸಂಶೋಧನೆಯ ಹೆಸರಿನಲ್ಲಿ ನಡೆಯುತ್ತಿವೆ. ತಮ್ಮ ಪಾತ್ರಗಳಿಂದ ತಾವಾಡಿಸುವ ಮಾತುಗಳಿಗಾಗಿ ಈ ಕಾಲದ ಭೈರಪ್ಪನವರಿಂದ ಹಿಡಿದು ಏಳೆಂಟು ಶತಮಾನಗಳ ಹಿಂದೆಯೇ ಕಾಲವಾಗಿಹೋದ ಕುಮಾರವ್ಯಾಸನೂ, ಅದೆಂದೋ ಇದ್ದ ವಾಲ್ಮೀಕಿ, ವ್ಯಾಸರೂ ಭಾನುವಾರ ಬೆಳಿಗ್ಗೆ ನಾರಿಕೇಳದೊಂದಿಗೆ ವಿಮರ್ಶೆಯೆಂಬ ಮಿಕ್ಸಿಯಲ್ಲಿ ಅರೆಸಿಕೊಳ್ಳುತ್ತಿದ್ದಾರೆ. ಅಮರ್ತ್ಯ ಭಗವದ್ಗೀತೆಗೆ ಮರ್ತ್ಯರು ಬೆಂಕಿಹಚ್ಚಿ ಮೈಕಾಯಿಸಿಕೊಳ್ಳಹೊರಟಿದ್ದಾರೆ. ಹೀಗೆ ಮಾಡುವುದರ ಮೂಲಕ ನಮ್ಮ ಚಿಂತಕರು, ಏಳು ದಶಕಗಳ ಹಿಂದೆ ಅಧ್ಯಕ್ಷ ಟ್ರೂಮನ್ ಬಣ್ಣಿಸಿದಂತೆ, ಮಲವನ್ನು ಅದರ ಶುದ್ದ ತುದಿಯಿಂದ ಮೇಲೆತ್ತಿ ಹಿಡಿಯಬಹುದೆಂದು ಉಗ್ರವಾಗಿ ಪ್ರತಿಪಾದಿಸುತ್ತಿದಾರೆ, ಹಿಡಿದೆತ್ತಿಯೇ ಇದ್ದೇವೆಂದೂ, ತಮ್ಮ ಕೈ ಶುದ್ಧವಾಗಿಯೇ ಇದೆಯೆಂದು ನಮ್ಮನ್ನು ನಂಬಿಸಲು ಹವಣಿಸುತ್ತಿದ್ದಾರೆ. ಆದರೆ ಅವರ ನಂಬಿಕೆ ಸುಳ್ಳೆಂದೂ, ಅವರ ಕೈ ಹೊಲಸಾಗಿದೆಯೆಂದೂ ನಮಗೆಲ್ಲರಿಗೂ ಸ್ಪಷ್ಟವಾಗಿಯೇ ಕಾಣುತ್ತಿದೆ. ನೀವು ಭ್ರಮಾಲೋಕದಲ್ಲಿದ್ದೀರಿ, ವಾಸ್ತವಕ್ಕೆ ಹತ್ತಿರಾಗಿ ಎಂದು ಇವರಿಗೆ ಯಾರಾದರೂ ಹೇಳಬೇಕಾಗಿದೆ.
ಹೊಸಹೊಸ ಬಗೆಯ ಉಡುಪುಗಳನ್ನು ತೊಡುವ ತೆವಲಿದ್ದ ರಾಜನೊಬ್ಬ ಅದ್ಭುತವಾದ ಹೊಸ ಉಡುಪು ತೊಟ್ಟಿದ್ದೇನೆಂದು ಮೆರೆಯುತ್ತಾ ಮೆರವಣಿಗೆ ಹೋಗುತ್ತಿದ್ದಾಗ ಅವನ 'ಹೊಸ ಉಡುಪನ್ನು' ಇಷ್ಟಪಟ್ಟು ಮನರಂಜಿಸಿಕೊಳ್ಳುತ್ತಲೋ, ಅಥವಾ ಇಷ್ಟವಾಗದೇ, ಅದನ್ನು ಹೇಳಲಾಗದೇ ಹೆದರಿ ಬಾಯಿ ಮುಚ್ಚಿಕೊಂಡೋ, ಇಲ್ಲದ ಉಸಾಬರಿ ನಮಗ್ಯಾಕೆ ಅಂತಲೋ, ಅಥವಾ ರಾಜನ ಹೊಸ ಉಡುಪಿನಿಂದ ನಮಗೇನಾದರೂ ಲಾಭವಾಗುತ್ತದೋ ಎಂದು ಲೆಕ್ಕಾಚಾರದಲ್ಲಿ ತೊಡಗಿಯೋ ಎಲ್ಲರೂ ಸುಮ್ಮನಿದ್ದಾಗ ಮುಗ್ಧ ಮಗುವೊಂದು "ಅಯ್ಯೋ! ನಮ್ಮ ರಾಜ ಹೀಗೇಕೆ ಬೆತ್ತಲಾಗಿದ್ದಾನೆ?" ಎಂದು ಉದ್ಗರಿಸಿ ರಾಜನದನ್ನೂ ಸೇರಿಸಿ ಎಲ್ಲರ ಕಣ್ಣು ತೆರೆಸಿದ ಕಥೆಯಿದೆ. ನನಗೀಗ ಆ ಕಥೆ ಗಾಢವಾಗಿ ನೆನಪಾಗುತ್ತಿದೆ. ಆ ಮಗು ಹುಟ್ಟಿಬರಬೇಕು ಅನಿಸುತ್ತಿದೆ. ಅಥವಾ ನಾನೇ ಆ ಮಗುವಾದರೆ ಹೇಗೆ?
ಅಪ್ರಾಮಾಣಿಕ, ಅವಕಾಶವಾದಿ, ಆಷಾಡಭೂತಿ ಪ್ರಗತಿಪರರು, ಬುದ್ಧಿಜೀವಿಗಳು
← ಫ್ರೀ ಬೇಸಿಕ್ಸ್ ಅಸಲಿತನ
ಭಾರತೀಯ ಆಹಾರ ಶೈಲಿಗಳ ಕುರಿತು ಒಂದು ವೈಜ್ಞಾನಿಕ ಚಿತ್ರಣ →
ಜನ 11 2016
Sir, Anyway, enjoy the losing game!!
ramprasad gk
As long as hindus are divided on caste line ,nothing will do.
ವಿಷಯ-ವಿಭಾಗ ವಿಭಾಗವನ್ನು ಆರಿಸಿ ಅನುಭವ ಮಂಟಪ (98) ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ (6) ದೀನ್ ದಯಾಳ್ ಉಪಾಧ್ಯಾಯರ ಸರಣಿ (3) ನಾಡು-ನುಡಿ: ಮರುಚಿಂತನೆ (48) ರಾಜೀವ್ ಮಲ್ಹೋತ್ರ (2) ವಚನ ಸಾರ (3) ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ (24) ವಿವೇಕಾನಂದರ ವಿಚಾರಗಳು (7) ಕಗ್ಗದ ಸಗ್ಗ (22) ಕವನಗಳು (50) ತುಳು-ಬ್ಯಾರಿ (21) ತುಳು (11) ಬ್ಯಾರಿ (9) ನಿಲುಮೆ ಪ್ರಕಾಶನ (34) ನಿಲುಮೆ ಪ್ರಬಂಧ (18) ನಮ್ಮೂರ ಹಬ್ಬ (18) ಲೇಖನಗಳು (2,277) ಅಣ್ಣಾ ಹಜಾರೆ (3) ಇತಿಹಾಸ (262) ಉದ್ಯೋಗ ಮಾಹಿತಿ (15) ಕಥೆ (84) ಕನ್ನಡ (37) ಕರ್ನಾಟಕ (52) ಕರ್ನಾಟಕ,ಕನ್ನಡ (316) ಕಾವೇರಿ (6) ಕ್ರೀಡೆ (18) ಡಿ.ಕೆ ರವಿ (8) ತಂತ್ರಾಂಶ / ಸಾಫ್ಟ್ ವೇರ್ (17) ಧರ್ಮ (243) ನಾಟಕಗಳು (2) ಪರಿಸರ (54) ಪುಸ್ತಕ ಪರಿಚಯ (96) ಪ್ರಚಲಿತ (846) ಪ್ರವಾಸ (19) ಭಾರತ (586) ಭ್ರಷ್ಟಾಚಾರ ನಿರ್ಮೂಲನೆ (14) ಭ್ರಷ್ಟಾಚಾರ ನಿರ್ಮೂಲನೆ (7) ಮನೋರಂಜನೆ (87) ಟಿಂಗ್-ಟಾಂಗ್ (2) ಸುಳ್ಸುದ್ದಿ (30) ಸ್ಯಾಂಡಲ್ ವುಡ್ (26) ಮರೆತು ಮರೆಯಾದ ವೀರರು (76) ಮಾಹಿತಿ ಹಕ್ಕು (7) ರಾಜಕೀಯ (478) ವಿಜ್ಞಾನ (87) ಶಿಕ್ಷಣ (34) ಸಂಸ್ಕೃತಿ (429) ಆಳ್ವಾಸ್ ನುಡಿಸಿರಿ (6) ಸಾಹಿತ್ಯ (59) ವಾಣಿಜ್ಯ (9) ತೆರಿಗೆ,ಹಣಕಾಸು,ಹೂಡಿಕೆ (5) ಷೇರು (4)
ಖಜಾನೆ ತಿಂಗಳನ್ನು ಆರಿಸಿ ಜೂನ್ 2019 (1) ಏಪ್ರಿಲ್ 2019 (3) ಮಾರ್ಚ್ 2019 (9) ಫೆಬ್ರವರಿ 2019 (7) ಜನವರಿ 2019 (11) ಡಿಸೆಂಬರ್ 2018 (6) ನವೆಂಬರ್ 2018 (6) ಅಕ್ಟೋಬರ್ 2018 (11) ಸೆಪ್ಟೆಂಬರ್ 2018 (6) ಆಗಷ್ಟ್ 2018 (6) ಜುಲೈ 2018 (9) ಜೂನ್ 2018 (6) ಮೇ 2018 (12) ಏಪ್ರಿಲ್ 2018 (5) ಮಾರ್ಚ್ 2018 (6) ಫೆಬ್ರವರಿ 2018 (11) ಜನವರಿ 2018 (9) ಡಿಸೆಂಬರ್ 2017 (9) ನವೆಂಬರ್ 2017 (12) ಅಕ್ಟೋಬರ್ 2017 (14) ಸೆಪ್ಟೆಂಬರ್ 2017 (18) ಆಗಷ್ಟ್ 2017 (22) ಜುಲೈ 2017 (20) ಜೂನ್ 2017 (15) ಮೇ 2017 (19) ಏಪ್ರಿಲ್ 2017 (17) ಮಾರ್ಚ್ 2017 (20) ಫೆಬ್ರವರಿ 2017 (34) ಜನವರಿ 2017 (21) ಡಿಸೆಂಬರ್ 2016 (26) ನವೆಂಬರ್ 2016 (32) ಅಕ್ಟೋಬರ್ 2016 (27) ಸೆಪ್ಟೆಂಬರ್ 2016 (47) ಆಗಷ್ಟ್ 2016 (37) ಜುಲೈ 2016 (23) ಜೂನ್ 2016 (24) ಮೇ 2016 (24) ಏಪ್ರಿಲ್ 2016 (34) ಮಾರ್ಚ್ 2016 (26) ಫೆಬ್ರವರಿ 2016 (20) ಜನವರಿ 2016 (27) ಡಿಸೆಂಬರ್ 2015 (21) ನವೆಂಬರ್ 2015 (21) ಅಕ್ಟೋಬರ್ 2015 (31) ಸೆಪ್ಟೆಂಬರ್ 2015 (20) ಆಗಷ್ಟ್ 2015 (39) ಜುಲೈ 2015 (26) ಜೂನ್ 2015 (21) ಮೇ 2015 (23) ಏಪ್ರಿಲ್ 2015 (28) ಮಾರ್ಚ್ 2015 (29) ಫೆಬ್ರವರಿ 2015 (22) ಜನವರಿ 2015 (15) ಡಿಸೆಂಬರ್ 2014 (14) ನವೆಂಬರ್ 2014 (16) ಅಕ್ಟೋಬರ್ 2014 (15) ಸೆಪ್ಟೆಂಬರ್ 2014 (9) ಆಗಷ್ಟ್ 2014 (14) ಜುಲೈ 2014 (17) ಜೂನ್ 2014 (22) ಮೇ 2014 (20) ಏಪ್ರಿಲ್ 2014 (24) ಮಾರ್ಚ್ 2014 (28) ಫೆಬ್ರವರಿ 2014 (25) ಜನವರಿ 2014 (22) ಡಿಸೆಂಬರ್ 2013 (25) ನವೆಂಬರ್ 2013 (21) ಅಕ್ಟೋಬರ್ 2013 (34) ಸೆಪ್ಟೆಂಬರ್ 2013 (17) ಆಗಷ್ಟ್ 2013 (16) ಜುಲೈ 2013 (20) ಜೂನ್ 2013 (15) ಮೇ 2013 (19) ಏಪ್ರಿಲ್ 2013 (19) ಮಾರ್ಚ್ 2013 (18) ಫೆಬ್ರವರಿ 2013 (14) ಜನವರಿ 2013 (14) ಡಿಸೆಂಬರ್ 2012 (9) ನವೆಂಬರ್ 2012 (23) ಅಕ್ಟೋಬರ್ 2012 (28) ಸೆಪ್ಟೆಂಬರ್ 2012 (23) ಆಗಷ್ಟ್ 2012 (21) ಜುಲೈ 2012 (26) ಜೂನ್ 2012 (22) ಮೇ 2012 (29) ಏಪ್ರಿಲ್ 2012 (37) ಮಾರ್ಚ್ 2012 (68) ಫೆಬ್ರವರಿ 2012 (69) ಜನವರಿ 2012 (40) ಡಿಸೆಂಬರ್ 2011 (44) ನವೆಂಬರ್ 2011 (42) ಅಕ್ಟೋಬರ್ 2011 (33) ಸೆಪ್ಟೆಂಬರ್ 2011 (28) ಆಗಷ್ಟ್ 2011 (36) ಜುಲೈ 2011 (36) ಜೂನ್ 2011 (61) ಮೇ 2011 (51) ಏಪ್ರಿಲ್ 2011 (50) ಮಾರ್ಚ್ 2011 (45) ಫೆಬ್ರವರಿ 2011 (49) ಜನವರಿ 2011 (29) ಡಿಸೆಂಬರ್ 2010 (22) ನವೆಂಬರ್ 2010 (17) ಅಕ್ಟೋಬರ್ 2010 (44)
ಲಾರಿ ಚಾಲಕರಿಂದ ಮೊಬೈಲ್ ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ | themangaloremirror.in
Home ಪ್ರಮುಖ ಸುದ್ದಿಗಳು ಲಾರಿ ಚಾಲಕರಿಂದ ಮೊಬೈಲ್ ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ
ಲಾರಿ ಚಾಲಕರಿಂದ ಮೊಬೈಲ್ ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ
ಮಂಗಳೂರು ಜನವರಿ 13: ಪಣಂಬೂರು ಮತ್ತು ಸುರತ್ಕಲ್ ಪರಿಸರದಲ್ಲಿ ನಿಲ್ಲಿಸಿದ್ದ ಲಾರಿಗಳ ಚಾಲಕ/ನಿರ್ವಾಹಕರಿಗೆ ಚೂರಿಯಿಂದ ಇರಿದು ಬೆದರಿಸಿ ಮೊಬೈಲ್ ಗಳನ್ನು ದರೋಢೆ ಮಾಡುತ್ತಿದ್ದ ಮತ್ತು ಕುಳಾಯಿಯ ರಾ.ಹೆ. 66 ಬದಿಯಲ್ಲಿ ನಿಲ್ಲಿಸಿದ್ದ ಜನರೇಟರ್ ಗಳಿಂದ (ಡಿ.ಜೆ. ) ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದ ತಂಡ ವನ್ನು ದಸ್ತಿಗಿರಿ ಮಾಡುವಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳ ಮತ್ತು ಪಣಂಬೂರು ಪೊಲೀಸರು ಯಶಸ್ವಿಯಾಗಿರುತ್ತಾರೆ. ಬಂಧಿತರು ಮಂಗಳೂರು ನಿವಾಸಿಗಳಾದ ಅಬ್ದುಲ್ ಅಮೀರ್ , ಅಬ್ದುಲ್ ಬಿಲಾಲ್ , ತನ್ವೀರ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಇತ್ತೀಚೆಗೆ ವಿಜಯಪುರ ಜಿಲ್ಲೆಯ ನಿವಾಸಿ 56 ವರ್ಷ ಪ್ರಾಯದ ಶಂಶುದ್ದೀನ್ ಅಶಾಂಫಿರ್ ಮುಜಾವರ್ ರವರು ಪಣಂಬೂರು ನಂದನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ತನ್ನ ಲಾರಿಯನ್ನು ನಿಲ್ಲಿಸಿ ಮಲಗಿದ್ದ ಸಂಧರ್ಭ ಮೂರು ಆರೋಪಿಗಳು ಚಾಕುತೋರಿಸಿ ಹೆದರಿ ಅವರಲ್ಲಿ ಇರುವ ಮೊಬೈಲ್ ಮತ್ತು ಹಣವನ್ನು ನೀಡುವಂತೆ ಬೆದರಿಸಿದ್ದು ಮೊಬೈಲ್ ಕೊಡಲು ನಿರಾಕರಿಸಿದ್ದಕ್ಕೆ ಚಾಲಕರ ಹಣೆಗೆ ಚಾಕುವಿನಿಂದ ತಿವಿದು ಗಾಯಗೊಳಿಸಿ ಮೊಬೈಲ್ ನ್ನು ಕಿತ್ತು ಪರಾರಿಯಾಗಿದ್ದರು. ಘಟನೆ ಕುರಿತಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜ.11 : ಕಡಬದಲ್ಲಿ ಗಣರಾಜ್ಯೋತ್ಸವ ಪೂರ್ವಭಾವಿ ಸಭೆ | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506
ಜ.11 : ಕಡಬದಲ್ಲಿ ಗಣರಾಜ್ಯೋತ್ಸವ ಪೂರ್ವಭಾವಿ ಸಭೆ
ಕಡಬ: ಜ.26 ರಂದು ಗಣರಾಜ್ಯೋತ್ಸವ ಆಚರಣೆಯನ್ನು ಎಲ್ಲಾ ಇಲಾಖೆ, ಸಂಘ ಸಂಸ್ಥೆ ಶಾಲಾ ಕಾಲೇಜುಗಳ ನೇತೃತ್ವದಲ್ಲಿ ಆಚರಿಸುವ ಬಗ್ಗೆ ಸಮಾಲೋಚನಾ ಸಭೆಯನ್ನು ಜ.11 ರಂದು ಕಡಬ ತಹಶೀಲ್ದಾರ್ ಕಚೇರಿಯಲ್ಲಿ ಕರೆಯಲಾಗಿದೆ ಎಂದು ತಹಶೀಲ್ದಾರರಾದ ಬಿ.ಲಿಂಗಯ್ಯ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಸರಕಾರಿ ಕಾರ‍್ಯಕ್ರಮಗಳನ್ನು ವಿಶೇಷ ರೀತಿಯಲ್ಲಿ ಆಚರಿಸುವ ಸಲುವಾಗಿ ಈಗಾಗಲೇ ಪ್ರತಿಯೊಂದು ಕಾರ‍್ಯಕ್ರಮಗಳನ್ನು ಎಲ್ಲರ ಕೂಡುವಿಕೆಯಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಈ ಬಾರಿ ಜ.26ರ ಗಣರಾಜ್ಯೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸುವಂತೆ ತೀರ್ಮಾನಿಸಲಾಗಿದ್ದು ಎಲ್ಲರು ಸಹಕರಿಸಬೇಕೆಂದು ತಿಳಿಸಿದ ತಹಶೀಲ್ದಾರರು ಪೂರ್ವಭಾವಿ ಸಭೆಯಲ್ಲಿ ಕಡಬ ಮೆಸ್ಕಾಂ ಇಲಾಖಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು, ಪಶು ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿಗಳು, ಆರಕ್ಷಕ ಉಪನಿರೀಕ್ಷಕರು, ದೂರವಾಣಿ ಸಂಪರ್ಕ ಜ್ಯೂನಿಯರ್ ಇಂಜಿನಿಯರ್, ಸಹಾಯಕ ಕೃಷಿ ಅಧಿಕಾರಿ, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಡಬ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು, ಏಮ್ಸ್ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು, ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯ ಸಂಚಾಲಕರು, ಪ್ರಾಂಶುಪಾಲರು, ಮುಖ್ಯಗುರುಗಳು, ಸೈಂಟ್ ಆನ್ಸ್ ಶಾಲಾ ಮುಖ್ಯಗುರುಗಳು, ಸರಸ್ವತಿ ವಿದ್ಯಾಲಯದ ಸಂಚಾಲಕರು, ಅಧ್ಯಕ್ಷರು, ಪದಾಧಿಕಾರಿಗಳು, ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಸಂಚಾಲಕರು, ಮುಖ್ಯೋಪಧ್ಯಾಯರು, ಮಾದರಿ ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯರು, ಸಹಕಾರಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಕಾರ‍್ಯನಿರ್ವಹಣಾಧಿಕಾರಿ, ಅಧ್ಯಕ್ಷರು, ಪದಾಧಿಕಾರಿಗಳು ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಜೇಸಿಸ್ ಕಡಬ, ಆಟೋ ಚಾಲಕ ಮಾಲಕರ ಸಂಘ, ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳು ಭಾಗವಹಿಸುವಂತೆ ತಿಳಿಸಿರುತ್ತಾರೆ.
ಅಪಘಾತವೆಂದು ಬಿಂಬಿಸಿ ಕೊಡಗು ಬಿಜೆಪಿ ಮುಖಂಡನ ಕೊಲೆಗೈದ ಆರೋಪಿಗಳು ಅಂದರ್ – Public TV
ಅಪಘಾತವೆಂದು ಬಿಂಬಿಸಿ ಕೊಡಗು ಬಿಜೆಪಿ ಮುಖಂಡನ ಕೊಲೆಗೈದ ಆರೋಪಿಗಳು ಅಂದರ್
ಮಡಿಕೇರಿ: ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಬಿಂಬಿಸಲ್ಪಟ್ಟಿದ್ದ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ(47) ಅವರ ಕೊಲೆ ಪ್ರಕರಣವನ್ನು ಕೊಡಗು ಪೊಲೀಸರು ಬೇಧಿಸಿದ್ದಾರೆ.
ಬಾಲಚಂದ್ರ ಅವರ ಚಿಕ್ಕಪ್ಪ ರಾಜಾರಾಮ ಕಳಗಿ ಸಲ್ಲಿಸಿದ ಸಂಶಯಾಸ್ಪದ ಬಗ್ಗೆ ದೂರು ಪರಿಗಣಿಸಿ ತನಿಖೆ ನಡೆಸಿದ ಮಡಿಕೇರಿ ಗ್ರಾಮಾಂತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಸಂಪತ್ ಕುಮಾರ್(34), ಹರಿಪ್ರಸಾದ್(36), ಜಯನ್(34) ಬಂಧಿತ ಆರೋಪಿಗಳು. ಬಂಧಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಅವರಲ್ಲಿ ಸಂಪತ್ ವೈನ್ ಶಾಪ್ ತೆರೆಯಲು ಅನುಮತಿ ಕೇಳಿದ್ದಾನೆ. ಕಳಗಿ ಅವರು ವೈನ್ ಶಾಪ್ ತೆರೆಯಲು ಅನುಮತಿ ನೀಡಿರಲಿಲ್ಲ. ರಿಕ್ರಿಯೇಶನ್ ಕ್ಲಬ್ ಮಾಡುವುದಕ್ಕೂ ಕಳಗಿ ವಿರೋಧ ವ್ಯಕ್ತಪಡಿಸಿದ್ದರು. ಅನುಮತಿ ನೀಡದ್ದಕ್ಕೆ ಅಸಮಾಧಾನಗೊಂಡಿದ್ದ ಸಂಪತ್ ಕೊಲೆ ಮಾಡಲು ಪ್ಲಾನ್ ಮಾಡಿದ್ದ.
ಬಲವಾದ ಶಂಕೆ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ಜಯನನ್ನು ಶುಕ್ರವಾರ ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ಈ ವಿಚಾರಣೆ ವೇಳೆ ಜಯ ಸತ್ಯವನ್ನು ಹೇಳಿದ್ದು, ವೈನ್, ಮರಳು ಮಾಫಿಯಾ, ರಿಕ್ರಿಯೇಶನ್ ಕ್ಲಬ್ ಮಾಡಲು ಬಿಡದಕ್ಕೆ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈತ ತಿಳಿಸಿದ ಮಾಹಿತಿ ಆಧಾರದ ಹಿನ್ನೆಲೆಯಲ್ಲಿ ಉಳಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಹರಿಪ್ರಸಾದನ ಸ್ವಿಫ್ಟ್ ಕಾರು ಮತ್ತು ಅಪಘಾತದ ಲಾರಿ ವಶಕ್ಕೆ ಪಡೆಯಲಾಗಿದೆ.
Related Topics:accidentBJP leadercardeathmadikeriPublic TVಅಪಘಾತಕಾರುಪಬ್ಲಿಕ್ ಟಿವಿಬಿಜೆಪಿ ಮುಖಂಡಮಡಿಕೇರಿಸಾವು
ನಿಮಗೆ 'ಅಲಿ'ಯಲ್ಲಿ ನಂಬಿಕೆಯಾದರೆ ನಮಗೆ 'ಬಜರಂಗ ಬಲಿ'ಯಲ್ಲಿ ನಂಬಿಕೆ: ಯೋಗಿ | lok sabha elections 2019 Uttar Pradesh CM Yogi adityanath they have faith in Ali we have Bajrang Bali - Kannada Oneindia
ನಿಮಗೆ 'ಅಲಿ'ಯಲ್ಲಿ ನಂಬಿಕೆಯಾದರೆ ನಮಗೆ 'ಬಜರಂಗ ಬಲಿ'ಯಲ್ಲಿ ನಂಬಿಕೆ: ಯೋಗಿ
| Published: Wednesday, April 10, 2019, 12:34 [IST]
ಮೀರತ್, ಏಪ್ರಿಲ್ 10: ಮುಸ್ಲಿಮರ ಮತದ ಕುರಿತಂತೆ ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿಕೆಗೆ ಪ್ರತಿ ಹೇಳಿಕೆ ನೀಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ವಿರೋಧಪಕ್ಷಗಳು 'ಅಲಿ'ಯಲ್ಲಿ ನಂಬಿಕೆ ಹೊಂದಿದ್ದರೆ, ಬಿಜೆಪಿಗೆ 'ಬಜರಂಗ ಬಲಿ'ಯಲ್ಲಿ ನಂಬಿಕೆ ಇದೆ ಎಂದಿದ್ದಾರೆ.
ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ದೇಶದಾದ್ಯಂತ ಹಸಿರು ವೈರನ್ ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮೀರತ್‌ನಲ್ಲಿ ಮಂಗಳವಾರ ಚುನಾವಣಾ ಪ್ರಚಾರ ನಡೆಸಿದ ಅವರು, ವಿರೋಧಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
'ಶಹರಾನ್ಪುರ ಸಭೆಯಲ್ಲಿ ಮಾಯಾವತಿ ಅವರು ಹೇಳಿದ್ದನ್ನು ನೀವು ಕೇಳಿರಬೇಕು. 'ನಾವು (ಮಹಾಮೈತ್ರಿಕೂಟ) ಮುಸ್ಲಿಮರ ಮತಗಳನ್ನು ಪಡೆದುಕೊಂಡರೆ ಬೇರೆಯವರ ಬೆಂಬಲ ಅಗತ್ಯವೇ ಇರುವುದಿಲ್ಲ' ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು. ನಾನೂ ಹೇಳಲು ಬಯಸುತ್ತೇನೆ, ಕಾಂಗ್ರೆಸ್, ಎಸ್‌ಪಿ ಮತ್ತು ಬಿಎಸ್‌ಪಿ 'ಅಲಿ'ಯಲ್ಲಿ ನಂಬಿಕೆ ಹೊಂದಿದ್ದರೆ ನಾವು 'ಬಜರಂಗ ಬಲಿ'ಯಲ್ಲಿ ನಂಬಿಕೆ ಹೊಂದಿದ್ದೇವೆ' ಎಂದು ಯೋಗಿ ಹೇಳಿದ್ದಾರೆ.
ಮುಸ್ಲಿಂ ಲೀಗ್ ಎಂಬ ವೈರಸ್‌ ಸೋಂಕಿಗೆ ತುತ್ತಾದ ಕಾಂಗ್ರೆಸ್: ಯೋಗಿ ಟೀಕೆ
ಬಜರಂಗ ಬಲಿಯ ಅನುಯಾಯಿಗಳು ತಮ್ಮನ್ನು ಎಂದಿಗೂ ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಈ ಪಕ್ಷಗಳು ಒಪ್ಪಿಕೊಂಡಿವೆ. ಹೀಗಾಗಿಯೇ ಅವರು 'ಅಲಿ ಅಲಿ' ಎಂದು ವೇದಿಕೆ ಮೇಲಿಂದಲೇ ಕೂಗುತ್ತಾರೆ. ಜತೆಗೆ ದೇಶದಾದ್ಯಂತ ಹಸಿರು ವೈರಸ್ ಹರಡಲು ಬಯಸಿದ್ದಾರೆ. ಆದರೆ, ಈ ವೈರಸ್‌ನಿಂದ ಪಶ್ಚಿಮ ಉತ್ತರ ಪ್ರದೇಶ ತೊಂದರೆಗೆ ಒಳಗಾಗಬಾರದು ಎಂದಿದ್ದಾರೆ.
ಟಿಕೆಟ್ ಗಾಗಿ ನೋಟು, ಇದು ಮಾಯಾವತಿ ಸಿದ್ಧಾಂತ: ಮನೇಕಾ ಗಾಂಧಿ
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಿಂದ ಕೇರಳಕ್ಕೆ ಹಾರಿದ್ದಾರೆ. ಅಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರ ಬಳಿ ಕಾಂಗ್ರೆಸ್ ಬಾವುಟಗಳಿರಲಿಲ್ಲ. ಆದರೆ, ದೇಶದ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್‌ನ ಹಸಿರು ಬಾವುಟಗಳು ಹಾರುತ್ತಿದ್ದವು ಎಂದು ಹೇಳಿದ್ದಾರೆ.
lok sabha elections 2019 uttar pradesh yogi adityanath ಲೋಕಸಭೆ ಚುನಾವಣೆ 2019 ಉತ್ತರಪ್ರದೇಶ ಯೋಗಿ ಆದಿತ್ಯನಾಥ್